Saturday, October 5, 2024
Homeಯಕ್ಷಗಾನಡಾ. ರಾಜೇಂದ್ರ ಕೆದ್ಲಾಯ ಅಂಬಲಪಾಡಿ ಯಕ್ಷಗಾನ ಮಂಡಳಿಗೆ ಭೇಟಿ

ಡಾ. ರಾಜೇಂದ್ರ ಕೆದ್ಲಾಯ ಅಂಬಲಪಾಡಿ ಯಕ್ಷಗಾನ ಮಂಡಳಿಗೆ ಭೇಟಿ

ಅಂಬಲಪಾಡಿ ಯಕ್ಷಗಾನ ಮಂಡಳಿಯಲ್ಲಿ ಎರಡು ದಶಕಗಳ ಕಾಲ ವೇಷಧಾರಿಯಾಗಿ ಸೇವೆಗೈದು ಪ್ರಕೃತ ಅಮೇರಿಕದಲ್ಲಿ ನೆಲೆಸಿರುವ ಡಾ. ಎಚ್. ರಾಜೇಂದ್ರ ಕೆದ್ಲಾಯ ಇಂದು ಮಂಡಳಿಯ ನೂತನ ಕಟ್ಟಡಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನರಸಿಂಹ ತುಂಗರ ನಿರ್ದೇಶನದಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕೆದಿಲಾಯರು ಯಕ್ಷಗಾನ ಪರಿಪೂರ್ಣ ಕಲೆಯಾಗಿ ಜಾಗತಿಕ ಮನ್ನಣೆ ಗಳಿಸಿದ್ದು,ಹೇಗೆ ತನಗೆ ಯಕ್ಷಗಾನದಿಂದಾಗಿ ಅಮೇರಿಕದಲ್ಲಿ ಗೌರವ ದೊರೆಯುತ್ತಿದೆ ಎಂಬುದನ್ನು ವಿವರಿಸಿ,ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್,ಕಾರ್ಯದರ್ಶಿ ಮುರಲಿ ಕಡೆಕಾರ್,ನಿವೃತ್ತ ಪ್ರಾಚಾರ್ಯರಾದ ಶ್ರೀಮತಿ ತಾರಾ ದೇವಿ, ಅಂಬಲಪಾಡಿ ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್, ಕೋಶಾಧಿಕಾರಿ ಎ.ನಟರಾಜ ಉಪಾಧ್ಯ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments