ದಿನಾಂಕ 5-12-2021 ರಂದು ಶಿರಸಿಯಲ್ಲಿ ನಡೆದ ಶ್ರೀ ಯಕ್ಷಗಾನ ಕಲಾಮೇಳ ಇದರ ಈ ವರ್ಷದ ಮೊದಲ ಯಕಗಾನ ಪ್ರದರ್ಶನ “ಮಾಳವಿಕಾ ಪರಿಣಯ” ಪ್ರಸಂಗ ಪುಸ್ತಕ ಬಿಡುಗಡೆಯನ್ನು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಂ.ಕೆ. ರಮೇಶ್ ಆಚಾರ್ಯ ತೀರ್ಥಹಳ್ಳಿ ಇವರ ಸನ್ಮಾನ ಕಾರ್ಯಕ್ರಮವನ್ನು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಇವರು ನೆರವೇರಿಸಿದರು.
