Sunday, October 6, 2024
Homeಯಕ್ಷಗಾನಯಕ್ಷಪದ – 3

ಯಕ್ಷಪದ – 3

ಇದೊಂದು ಪದಬಂಧ. ಯಕ್ಷಗಾನದ ಜ್ಞಾನವನ್ನು ವೃದ್ಧಿಸಲು ಸಹಕಾರಿ. ಅದಕ್ಕಾಗಿ ಈ ಸಣ್ಣ ಪ್ರಯತ್ನ. ಈ ಪದಬಂಧವನ್ನು ತುಂಬಿಸಿ ಅಥವಾ ಸರಿಯಾದ ಉತ್ತರವನ್ನು ಶಬ್ದಗಳ ರೂಪದಲ್ಲಿ ಬರೆದು ನಮ್ಮ ವಾಟ್ಸಾಪ್ ಸಂಖ್ಯೆಗೆ ಎರಡು ದಿನಗಳೊಳಗೆ ಕಳುಹಿಸಿ. ಸರಿಯಾದ ಉತ್ತರವನ್ನು ಬರೆದ ಎಲ್ಲರ ಹೆಸರುಗಳನ್ನೂ ನಮ್ಮ ಮುಂದಿನ ಪದಬಂಧ ಲೇಖನದಲ್ಲಿ ಪ್ರಕಟಿಸಲಾಗುವುದು. ನಮ್ಮ ವಾಟ್ಸಾಪ್ ಸಂಖ್ಯೆ 9535618305

ಯಕ್ಷಪದ – 2 ರ ಸರಿ ಉತ್ತರ ನೀಡಿದವರು:

1. ಶ್ರೀ ಶಾಮ ಪ್ರಸಾದ್ ಪಟ್ಟಾಜೆ, ತುಮಕೂರು 

2. ಶ್ರೀಮತಿ ಜ್ಯೋತಿ ಕೆ. ಭಟ್, ಅರಂಬೂರು, ಸುಳ್ಯ 

3. ಶ್ರೀಮತಿ ಜ್ಯೋತಿ ಎನ್. ಜಿ. ಹೊಸಹಿತ್ಲು 

4. ಶ್ರೀನಿವಾಸ ಭಟ್ ಕುಂಞಿಹಿತ್ತಿಲು, ಬೆಳ್ಳಾರೆ 

5. ಸುಬ್ರಹ್ಮಣ್ಯ ಪ್ರಸಾದ ಪುತ್ರೋಟಿ, ಬೆಂಗಳೂರು 

6. ಕೇಶವ ಪ್ರಶಾಂತ ಬರೆಕೆರೆ, ಕಾವು 

7. ನಾರಾಯಣ ಬಿಲ್ಲಾರಮೂಲೆ 

ಯಕ್ಷಪದ – 3

ಎಡದಿಂದ ಬಲಕ್ಕೆ: 1. ಖ್ಯಾತ ತಾಳಮದ್ದಳೆ ಅರ್ಥಧಾರಿ ವೆಂಕಪ್ಪ ಶೆಟ್ಟರ ಬಿರುದು. (4)

3. ಬಡಗಿನ ಯಕ್ಷಗಾನ ಪ್ರಿಯರ ಕಣ್ಮಣಿ. ಅವರ ಬದುಕು ಅಕಾಲ ಅಂತ್ಯವನ್ನು ಕಂಡಿದ್ದು ಕಣ್ಣಿನಲ್ಲಿ ನೀರು ತಂದಿದೆ. (4)

5. ಯಕ್ಷಗಾನದಲ್ಲಿ ತರುಣಿಯ ತುಂಬಿದೆದೆಯನ್ನು ಇದಕ್ಕೆ ಹೋಲಿಸುತ್ತಾರೆ. ರಾವಣನ ತಮ್ಮನ ಹೆಸರಿನ ಪೂರ್ವಾರ್ಧವೂ ಹೌದು. (2)

6. ಬಕಾಸುರನನ್ನು ಕೊಲ್ಲಲು ಭೀಮನು ಇದರಲ್ಲಿ ಪ್ರಯಾಣಿಸಿದನು. (2)

7. ಬಾಲ ಪ್ರಹ್ಲಾದನ ಮುಖವನ್ನು ಕಂಡಾಗ ಕಯಾದುವಿಗೆ ಉಂಟಾಗುತ್ತಿದ್ದ ಸಂತೋಷ (ಬಲದಿಂದ ಎಡಕ್ಕೆ) – (3)

10. __________ ಋಷಿಮಂಡಲದ ಮಧ್ಯದಿ, ಮೆರೆವ ಯಜ್ನೇಶ್ವರನ ಪ್ರಭೆಯಲಿ (3)

11. ಈ ಎರಡೂ ಪಂಗಡದವರು ಸೇರಿ ಸಮುದ್ರವನ್ನು ಮಥಿಸಿದರು. (5)

14. ವಿದ್ಯಾ ದದಾತಿ ________ (ಬಲದಿಂದ ಎಡಕ್ಕೆ) (3)

15. ಮೇಳವೊಂದರ ಹೆಸರು. ದೇವಿಯ ಇನ್ನೊಂದು ಹೆಸರಾದರೂ ಭಗವಂತನಂತೆ ಕಾಣಿಸುತ್ತಿದೆ. (4)

17. ಬಣ್ಣದ ವೇಷಗಳಲ್ಲಿ ಇದೂ ಒಂದು ವಿಧ. ಕೇರಳದ ಗಾಳಿಯಂತೆ ಕಾಣಿಸುತ್ತಿದೆ (ಬಲದಿಂದ ಎಡಕ್ಕೆ) (2)

19. ಇವನ ಕಾರಣದಿಂದ ಕೃಷ್ಣಾರ್ಜುನರು ಪರಸ್ಪರ ಯುದ್ಧ ಮಾಡುವಂತಾಯಿತು. (2)

21. ಉಡುಪಿಯ ಈ ಸಂಸ್ಥೆ ಯಕ್ಷಗಾನಕ್ಕೋಸ್ಕರ ಬಹಳಷ್ಟು ಕೆಲಸಗಳನ್ನು ಮಾಡುತ್ತಿದೆ. (8)


 ಮೇಲಿನಿಂದ ಕೆಳಕ್ಕೆ: 1.  ನಮ್ಮ ರಾಜ್ಯದ ಯಕ್ಷಗಾನ ಮೇಳ (4)

2. ವಿಷ್ಣುವಿನ ವಾಸಸ್ಥಳಕ್ಕೆ ಭೂಮಿಯನ್ನು ಜೋಡಿಸಿದರೆ ಹೀಗೆ ಹೇಳಬಹುದು. ದ್ವಾರಕೆಗೂ ಹೀಗೆ ಕರೆಯಬಹುದೇ? (4)

3. ಯಕ್ಷಗಾನ ಮೇಳಗಳ ಯಜಮಾನಿಕೆಯನ್ನು ಕೈಗೊಂಡ ಪ್ರಸಿದ್ಧ ಮನೆತನ. (3)

4. ಇದನ್ನು ಭಾಗವತರು ಹೆಚ್ಚು ಮಾಡಿದರೆ ವೇಷಧಾರಿಗಳಿಗೆ ಅಭಿನಯಿಸಲು ಕಷ್ಟವಾಗುತ್ತದೆ ಎಂಬ ವಾದವಿದೆ. – ಕೆಳಗಿನಿಂದ ಮೇಲಕ್ಕೆ (4)

7. ವಿಕಾರ ರೂಪದಲ್ಲಿದ್ದರೂ “ತನ್ನ ಪತಿಯೇ ಈತ” ಎಂದು ಬಾಹುಕನನ್ನು ಗುರುತು ಹಿಡಿದವಳು! (4)

8. ಕೃಷ್ಣನು ಸಂಬಂಧಿ ಎಂದು ನೋಡಲಿಲ್ಲ. ತನ್ನ ________ ನನ್ನೇ ಕೊಂದನು. (2)

9. ರಾಕ್ಷಸರಿಗೆ ತಪಸ್ಸು ಮಾಡುವುದಕ್ಕೆ ಪ್ರಶಾಂತವಾದ ಈ ಪ್ರದೇಶವೇ ಆಗಬೇಕು. (2)

11. _________ ಕೈಯ ಕಪ್ಪವ ಕೊಂಬಗೆ (5)

12. ಹರಿ ಕಳುಹಿಸಿದ ಓಲೆಯನ್ನು ಕೊಂಡುಹೋಗಿ ಕಾಮ್ಯಕಾವನಕ್ಕೆ ತಲುಪಿಸಿದ್ದು ಈತನೇ (3)

13. ಯಕ್ಷಗಾನದ ಹೊಸ ಪ್ರಯೋಗ. ಇದರಲ್ಲಿ ಹಿಮ್ಮೇಳಕ್ಕೆ ಮಾತ್ರ ಅವಕಾಶ – ಕೆಳಗಿನಿಂದ ಮೇಲಕ್ಕೆ (5)

16. “ಬ್ರಹ್ಮದೇವನನ್ನು ಮೆಚ್ಚಿಸಿ ಬೇಕುಬೇಕಾದ ______ಗಳನ್ನು ಪಡೆದೆ” (2)

18. ಬಡಗು ತಿಟ್ಟಿನ ದಂತಕತೆಯಾದ ಭಾಗವತ. ಅಕಾಲ ಮೃತ್ಯುವಶರಾದವರು. ಇವರ ಹೆಸರು ಸರ್ಪವೊಂದನ್ನು ನೆನಪಿಸುತ್ತಿದೆ. (3)

20. ಯಕ್ಷಗಾನ ಮೇಳದ ತಿರುಗಾಟ ನಡೆಸಿದ ಹಿಮ್ಮೇಳದ ಪತಿ ಪತ್ನಿ ಜೋಡಿಯಲ್ಲಿ ಪತ್ನಿಯಾದ ಈಕೆ ತನ್ನ ಸುಶ್ರಾವ್ಯ ಕಂಠಕ್ಕೆ ಪ್ರಸಿದ್ಧರು. (2)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments