ಬೆಂಗಳೂರಿನ ರೋಟರಿ ಕ್ಲಬ್ ನವರು ಆಯೋಜಿಸಿದ್ದ ೨೦೨೦-೨೧ ರ ಸಾಲಿನ ಗುರುದಕ್ಷಿಣೆ ಪ್ರಶಸ್ತಿಯನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯ ಕಲಾಗುಡಿಯಲ್ಲಿ ಈ ಒಂದು ಪ್ರಶಸ್ತಿಗೆ ಭಾಜನರಾದ ಯಕ್ಷಗಾನ, ರಂಗಭೂಮಿ,ಹಿರಿ ಹಾಗೂ ಕಿರುತೆರೆ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರಿಗೆ ಪ್ರದಾನ ಮಾಡಲಾಯಿತು. ರೋಟರಿ ಕ್ಲಬ್ ನ ಸದಸ್ಯ್ರರಾದ ಶಂಕರನಾರಾಯಣರವರು ಈ ಒಂದು ಪ್ರಶಸ್ತಿಯನ್ನು ಡಾ.ರಾಧಾಕೃಷ್ಣ ಉರಾಳರಿಗೆ ಪ್ರದಾನ ಮಾಡಿದರು. ಕಲಾಕದಂಬ ಆರ್ಟ್ ಸೆಂಟರ್ ಎಂಬ ಸಂಸ್ಥೆಯ ಮೂಲಕ ಡಾ.ರಾಧಾಕೃಷ್ಣ ಉರಾಳರವರು ಯಕ್ಷಗಾನ ಹೆಜ್ಜೆಗಳ ಕಲಿಸುವ ಹಾಗೂ ರಂಗಭೂಮಿ ಚಟುವಟಿಕಗಳನ್ನು ಕಲಿಸುವ ಗುರುವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು ಹಲವಾರು ಮಂದಿ ಶಿಷ್ಯ್ರರಿಗೆ ಮಾರ್ಗದರ್ಶಕರಾಗಿ ನಮ್ಮ ಪರಂಪರೆಯ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪಯತ್ನ ಮಾಡುತ್ತಿದ್ದಾರೆ.ಅಲ್ಲದೆ ವಿದೇಶದಲ್ಲು ತಮ್ಮ ಈ ಕಲೆಯ ಪ್ರಸರಣವನ್ನು ಮಾಡಿದ ಕೀರ್ತಿ ಇವರಿಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
Recent Comments
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on