ಕೋವಿಡ್-19, ರಿಂದಾಗಿ ಕಲಾವಿದರ ಸಂಕಷ್ಟವನ್ನರಿತು ಕರ್ನಾಟಕ ಘನ ಸರಕಾರ ಆರ್ಥಿಕ ನೆರವನ್ನು ಘೋಷಿಸಿದ್ದು ಸಮಸ್ತ ಯಕ್ಷಗಾನ ಕಲಾವಿದರ ಪರವಾಗಿ ಸರಕಾರವನ್ನು ಅಭಿನಂದಿಸುತ್ತಿದ್ದೇವೆ.
ಯಕ್ಷಗಾನ ಕರಾವಳಿ ಕರ್ನಾಟಕದ ಒಂದು ಅಪೂರ್ವ ಕಲಾ ಪ್ರಕಾರ. ವಿಶ್ವದಾದ್ಯಂತ ಕಲಾವಿವಿಮರ್ಶಕರು ಇದರ ಶ್ರೇಷ್ಠತೆಗೆ ಬೆರಗಾಗಿ ತಲೆಬಾಗಿರುತ್ತಾರೆ. ಇಂತಹ ಕಲೆಯನ್ನು ಉಳಿಸಿ ಬೆಳೆಸಿದವರು ಕಲಾವಿದರು. ಹೆಚ್ಚಿನ ಕಲಾವಿದರು 15ರ ಹರೆಯದಲ್ಲಿ ಮೇಳವನ್ನು ಸೇರಿ ಬಾಲಗೋಪಾಲದಿಂದ ಯಕ್ಷ ಶಿಕ್ಷಣವನ್ನು ಮೇಳದಲ್ಲಿ ಪಡೆಯುತ್ತಾ ಬೆಳೆದವರು. ಸರಕಾರದ ಈಗಿನ ನಿಬಂಧನೆ ಪ್ರಕಾರ ಕೋವಿಡ್-19 ನೆರವು ಪಡೆಯಲು 35 ವರ್ಷ ಕನಿಷ್ಠ ವಯಸ್ಸಾಗಿರಬೇಕಾಗಿದೆ. ಇದರಿಂದ 10 ರಿಂದ 20 ವರ್ಷ ಸೇವೆಗೈದ 40 ವೃತ್ತಿ ಮೇಳಗಳ ಸುಮಾರು 200 ಕಲಾವಿದರು ನೆರವಿನಿಂದ ವಂಚಿತರಾಗುತ್ತಾರೆ. ಇವರೆಲ್ಲಾ ನಿರಂತರ 6-7 ತಿಂಗಳು ರಾತ್ರಿಯಿಡೀ ವೇಷಮಾಡಿ ಕಲಾಸೇವೆ ಗೈದ ಪ್ರತಿಭಾನ್ವಿತ ಯುವ ಕಲಾವಿದರು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಇವರಲ್ಲಿ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರ ಮೂಲಕ ವಿನಂತಿ.
ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ತಾವು ಈ ಸಹಾಯ ಪಡೆಯುವಲ್ಲಿರುವ ನಿಬಂಧನೆಯನ್ನು 35 ವರ್ಷದಿಂದ 25 ವರ್ಷಕ್ಕೆ ಇಳಿಸಿ ಪ್ರತಿಭಾವಂತ ಯುವ ಕಲಾವಿದರಿಗೂ (ಕನಿಷ್ಟ ಕರಾವಳಿ ಕರ್ನಾಟಕದ ವೃತ್ತಿ ಮೇಳದಲ್ಲಿ ಕಲಾಸೇವೆಗೈಯುತ್ತಿರುವ ಯಕ್ಷಗಾನ ಕಲಾವಿದರಿಗೆ) ಇದರ ಪ್ರಯೋಜನ ಸಿಗುವಂತೆ ಸಮಸ್ತ ಕಲಾಭಿಮಾನಿಗಳ ಪರವಾಗಿ ನಾವು ವಿನಂತಿಸಿಕೊಳ್ಳುತ್ತಿದ್ದೇವೆ.
ಈಗಾಗಲೇ ಈ ಮನವಿಯನ್ನು ಮಾನ್ಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಇವರಲ್ಲಿ ನೀಡಲಾಗಿದೆ ಎಂಬುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES