ಗಾನ ಸೌರಭ ಯಕ್ಷಗಾನ ಶಾಲೆಯ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಕಾಲ ಬಣ್ಣಗಾರಿಕೆ, ವೇಷಭೂಷಣ ಧರಿಸುವ ಕಾರ್ಯಗಾರವನ್ನು ಗುರುಗಳಾದ ಬೇಗಾರ್ ಶಿವಕುಮಾರ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೊಗದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆದಿತ್ಯ ಹಲ್ಕೋಡು, ರವಿ ಐತು ಮನೆ, ಸುಧರ್ಶನ್ ಶೆಟ್ಟಿಗಾರ್, ವಿಕ್ರಂ ಶೆಟ್ಟಿ, ಸಾಯಿರಾಮ್, ಕಾವ್ಯ, ಸೌರಭ ಕುಮಾರ್ ಬೇಗಾರ್ ಭಾಗವಹಿಸಿದ್ದರು. ಶಿಬಿರಾರ್ಥಿಗಳಾಗಿ ಸುಮಾರು 30 ಜನ ವಿದ್ಯಾರ್ಥಿಗಳು ಪಾಲ್ಗೊಂಡು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಸಮಾರೋಪ ಸಮಾರಂಬವು 28-03-2021 (ಬಾನುವಾರ) ಬಿ.ಬಿ.ಎಂ.ಪಿ. ಡಿ. ನಂಜರಸಪ್ಪ ಸಾರ್ವಜನಿಕ ಬಹು ಉಪಯೋಗಿ ಕಟ್ಟಡ, ವೈಯಾಲಿ ಕಾವಲ್, ನಾಗರಬಾವಿಯಲ್ಲಿ ನೆರವೇರಿತು.
ಅತಿಥಿಗಳಾಗಿ ಕೆ. ನಾಗೇಶ್ – ಅಂಚೆ ಹಿರಿಯ ಅಧಿಕಾರಿ, ಶ್ರೀಮತಿ. ರೇಷ್ಮ ಸಂತೋಷ ಕುಮಾರ್ ಶೆಟ್ಟಿ- ಐ.ಬಿ.ಎಮ್. ಫ್ರೊಗ್ರಾಂ ಮ್ಯಾನೇಜರ್, ಶ್ರೀ ರಾಜ ಶೇಖರ – ಭಾವಸಾಗರ ಸಂಸ್ಥೆ, ಶ್ರೀ ರಾಮಚಂದ್ರ– ಅಭಿಯಂತರರು, ಶ್ರೀ ಶಿವಾನಂದ ಕಾಮತ್ – ಕಲಾಪೋಷಕರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮತ್ತು ಕಲಾಶಾಲೆಗೆ ಶುಭಹಾರೈಸಿದರು. ಯಕ್ಷಗಾನ ಶಾಲೆಯ ಗುರು ಬೇಗಾರ್ ಶಿವಕುಮಾರ್ ಅತಿಥಿಗಳಿಗೂ – ವಿದ್ಯಾರ್ಥಿಗಳಿಗೂ ಧನ್ಯವಾದ ಹಾಗೂ ಶುಭಾಶಯ ತಿಳಿಸಿದರು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ