ಮೈಸೂರು ತಾ. ಕೆ. ಹೆಮ್ಮನಹಳ್ಳಿ, ಭೋಗಾದಿ ರಸ್ತೆಯಲ್ಲಿ , 10ನೇ ಕಿಮೀಗೆ ಬರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರೆ ಪ್ರಯುಕ್ತ ಸೀಗಳ್ಳಿ ಗ್ರಾಮದವರು 11-3-2021 ಗುರುವಾರ ಶ್ರೀ ರಾಮ ಪಟ್ಟಾಭೀಷೇಕ ನಾಟಕ ಪ್ರದರ್ಶಿಸುವರು. ಮೈಸೂರು ಪೇಟೆಯಿಂದ ಭೋಗಾದಿ ರಸ್ತೆಯಲ್ಲಿ ಕೇವಲ 10 ಕಮೀ ದೂರ.
ಇದೇ ವೇದಿಕೆಯಲ್ಲಿ ನಾಟಕ ಆರಂಭವಾಗುವ ಮೊದಲು, ರಾತ್ರಿ 7 ರಿಂದ 9 ರವರೆಗೆ ‘ಕರಿಬಂಟನ ಕಥೆ’ ಎಂಬ ಪ್ರಸಂಗವನ್ನು ಕೆ.ಆರ್.ನಗರದ ಅಂಕನಳ್ಳಿಯ ಕಲಾವಿದರು ಮೂಡಲಪಾಯ ಯಕ್ಷಗಾನ ರೂಪದಲ್ಲಿ ಪ್ರದರ್ಶಿಸುವರು. ಪ್ರವೇಶ ಉಚಿತ.

