ಹರೆಯ ಜಾರಿದಂತೆ ಮಾನವನ ದೇಹದ ಶಕ್ತಿ ಕ್ಷೀಣವಾಗುತ್ತಾ ಬರುತ್ತದೆ. ಶಕ್ತಿ ಕಡಿಮೆಯಾದಾಗ ಮಾಡುವ ಕೆಲಸಗಳಿಗೂ ವಿರಾಮ ನೀಡಬೇಕಾಗುತ್ತದೆ.
ಕೆಲಸಗಳಿಲ್ಲದಾಗ ಸಮಯ ಕಳೆಯಲು ಏನು ಮಾಡುವುದು? ಮಾಡಲು ಕೆಲಸವಿಲ್ಲದೇ ಸಮಯ ಕಳೆಯುವುದು ದುಸ್ತರವೆನಿಸಿ ಮಾನಸಿಕ ಚಿಂತೆ ಆರಂಭವಾಗಬಹುದು. ಆದುದರಿಂದಲೇ ವಯಸ್ಸಾದವರಲ್ಲಿ ಖಿನ್ನತೆ ತುಂಬಾ ಸಾಮಾನ್ಯವಾಗಿದೆ.
ವಯಸ್ಸಾದವರಲ್ಲಿ ಖಿನ್ನತೆಯು ವಿಲಕ್ಷಣ ರೀತಿಯಲ್ಲಿ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಅವರು ನೋವು , ಕಿರಿಕಿರಿ, ನೆನಪಿನ ಶಕ್ತಿ ಕ್ಷೀಣಿಸುವಿಕೆ ಕೆಲಸ ಮತ್ತು ಆಲೋಚನೆಯಲ್ಲಿ ನಿಧಾನತೆಯನ್ನು ಹೊಂದಿರಬಹುದು.
ಹಾಗಾದರೆ ಈ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸುವುದು ಹೇಗೆ? ಮತ್ತು ಅವುಗಳನ್ನು ವೈದ್ಯರಿಗೆ ತಿಳಿಸುವುದು ಅಗತ್ಯವೇ? ಈ ಸ್ಥಿತಿಗೆ ಚಿಕಿತ್ಸೆ ಲಭ್ಯವೇ? ಎಂಬೆಲ್ಲಾ ಮಾಹಿತಿಗಳಿಗೆ ಈ ವೀಡಿಯೋ ನೋಡಿ.
ಈ ಎಲ್ಲ ವಿಚಾರಗಳ ಬಗ್ಗೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ರೋಗಗಳ ತಜ್ಞರಾದ ಡಾ. ಸ್ನೇಹಾ ವಿ.ಜಿ ಈ ವೀಡಿಯೋದಲ್ಲಿ ವಿವರಿಸಿದ್ದಾರೆ. ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಮುಖ್ಯ ಪ್ರಬಂಧಕರಾದ ವಿ.ಎಸ್. ವೆಂಕಟಕೃಷ್ಣ ಈ ವೀಡಿಯೋದಲ್ಲಿ ಲವಲವಿಕೆಯಿಂದ ಅಭಿನಯಿಸಿದ್ದಾರೆ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ