ಇಂದು, ಮಾರ್ಚ್ 1, ಸೋಮವಾರ, ಸಂಜೆ 6.30ಕ್ಕೆ ಪುತ್ತೂರಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪುತ್ತೂರಿನ ಪರ್ಲಡ್ಕದ ಖ್ಯಾತ ವೈದ್ಯ ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ಹನುಮಗಿರಿ ಮೇಳದವರು ‘ಶುಕ್ರನಂದನೆ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.
ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಕಳೆದ 17 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.
ಈ ವರ್ಷದ ಕಾರ್ಯಕ್ರಮ ಫೆಬ್ರವರಿ 27ರಿಂದ ಆರಂಭವಾಗಿದ್ದು , ಇಂದು ಮಾರ್ಚ್ 1 ಕೊನೆಯ ದಿನವಾಗಿದೆ.
