ಶ್ರದ್ಧಾಂಜಲಿ ಗೀತೆ ದಿ| ಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ
ಪುಂಡು ವೇಷದಿ ಪ್ರಮುಖ | ಪಂಡಿತನೆ ಕೋಲ್ಮಿಂಚು | ಗಂಡುಗಲಿ ಘನರಂಗ ರಾಜನಾಗಿ || ಚೆಂಡಿನಂತೆಸೆದ ಸಿರಿ | ಮಂಡಲದ ಸಿಡಿಲ ಮರಿ | ಕೊಂಡಿ ಕಳಚಿತು ಯಕ್ಷ ಭಂಡಾರದಿಂದ || ೧ ||
ಹರಿಯ ಪದದೊಳಗೈಕ್ಯ | ನಿರತ ಪೆಸರಾದಿತ್ಯ | ವರ ಕಿರಣದಂತೆ ಸು | ಸ್ಥಿರವು ಜನಮನದಿ || ಪರಮ ಮಂಗಲಮೂರ್ತಿ | ಕರುಣಮಯ ಸತ್ಕೀರ್ತಿ | ಕರುಣಿಸಲಿ ಸದ್ಗತಿಯ ಮುನಿಪುರದ ಕೃಷ್ಣ || ೨ ||
ಓಂ ಶಾಂತಿ

ವಿಶ್ವವಿನೋದ ಬನಾರಿ, ‘ಬನಸಿರಿ’