Friday, September 20, 2024
Homeಯಕ್ಷಗಾನಶ್ರೀ ರಾಮ ಪಟ್ಟಾಭಿಷೇಕ - ಯಕ್ಷ ಕಲಾ ಅಕಾಡೆಮಿಯಲ್ಲಿ ತಾಳಮದ್ದಳೆ

ಶ್ರೀ ರಾಮ ಪಟ್ಟಾಭಿಷೇಕ – ಯಕ್ಷ ಕಲಾ ಅಕಾಡೆಮಿಯಲ್ಲಿ ತಾಳಮದ್ದಳೆ

ಗಣರಾಜ್ಯೋತ್ಸವ‌ದ ಪ್ರಯುಕ್ತ, ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯು ವಿಶೇಷ ಕಾರ್ಯಕ್ರಮ‌ವನ್ನು ಹಮ್ಮಿಕೊಂಡಿದೆ. 72ನೇ ಗಣರಾಜ್ಯೋತ್ಸವ‌ದ ಪ್ರಯುಕ್ತ ಜನವರಿ 26ರಂದು ಯಕ್ಷ ಕಲಾ ಅಕಾಡೆಮಿಯ ಆವರಣದಲ್ಲಿ ” ಶ್ರೀ ರಾಮ ಪಟ್ಟಾಭಿಷೇಕ ” ಎಂಬ ಪೌರಾಣಿಕ ಪ್ರಸಂಗದ ತಾಳಮದ್ದಳೆಯನ್ನು ಸಂಸ್ಥೆಯ ಕಲಾವಿದರು ನಡೆಸಿಕೊಡಲಿದ್ದಾರೆ.

ಭಾಗವತಿಕೆ‌ಯಲ್ಲಿ, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಗುರು ಕೋಟ ಕೃಷ್ಣ ಮೂರ್ತಿ ತುಂಗ, ಹಾಗೂ ಕುಮಾರಿ ಚಿತ್ಕಲಾ ಕೆ. ತುಂಗ, ಮದ್ದಳೆಯ‌ಲ್ಲಿ ಚಿನ್ಮಯ್ ಅಂಬರಗೊಡ್ಲು, ರಾಘು ಶರ್ಮಾ, ಮುಮ್ಮೇಳದಲ್ಲಿ, ರವಿ ಮಡೋಡಿ, ಮನೋಜ್ ಭಟ್, ಆದಿತ್ಯ ಉಡುಪ, ಶಶಾಂಕ್ ಕಾಶಿ, ಪ್ರದೀಪ ಮಧ್ಯಸ್ಥ,ಆದಿತ್ಯ ಹೊಳ್ಳ, ಸುಹಾಸ ಕರಬ, ಸದಾಶಿವ ತುಂಗ, ಶ್ರೀ ನಿಧಿ ಎಂ.ಎಸ್., ವಾಸುದೇವ, ಶ್ರೀಮತಿ ಅರ್ಚನಾ, ಶ್ರೀ‌ಮತಿ ಚೇತನಾರವರು ಭಾಗವಹಿಸಲಿದ್ದಾರೆ ಎಂದು ಯಕ್ಷ ಕಲಾ ಅಕಾಡೆಮಿಯ ಕಾರ್ಯದರ್ಶಿ ಕೆ.ಅನಸೂಯಾರವರು ತಿಳಿಸಿದ್ದಾರೆ. ಸರಕಾರದ ಕೋವಿಡ್ ನಿಯಮಗಳನ್ನು ಅನುಸರಿಸಿ ಕಾರ್ಯ‌ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments