63 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯು ನಿರ್ಮಿಸುತ್ತಿರುವ ನೂತನ ರಂಗಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೆಂದ್ರ ಹೆಗ್ಗೆಡೆಯವರು ಪ್ರಸಾದ ರೂಪವಾಗಿ 5 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿ ಹರಸಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕರಾದ ಶ್ರೀ ಬಿ. ಗಣೇಶ್ರವರು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಅವರಿಗೆ ಡಿ.ಡಿ.ಯನ್ನು ದಿನಾಂಕ 06-01-2021ರಂದು ಹಸ್ತಾಂತರಿಸಿದರು.
- ಶ್ರೀಕೃಷ್ಣ ಪಾರಿಜಾತ, ವಸ್ತ್ರಾಪಹಾರ, ದುಶ್ಶಾಸನ ವಧೆ
- ‘ಯಕ್ಷಗಾನ ಪ್ರಸಂಗಗಳಲ್ಲಿ ನಾರದ’ – ನಾರದನ ಅಂತರಂಗವನ್ನು ಬಗೆದು ನೋಡಿದ ಹಾಸ್ಯಗಾರನ ಅತ್ಯಪೂರ್ವ ಹೊತ್ತಗೆ
- ನಾಳೆ ದಿನಾಂಕ 27.06.2024 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ
- 10 ತಿಂಗಳ ನಂತರ ಫರಿದಾಬಾದ್ನಲ್ಲಿ ಕೊಳೆತ ಸ್ಥಿತಿಯಲ್ಲಿ 17 ವರ್ಷದ ಯುವತಿಯ ಶವ ಪತ್ತೆ – ಯುವತಿಯ ತಂದೆ ಪೊಲೀಸರಿಗೆ ಇಮೇಲ್ ನಲ್ಲಿ ದೂರು ಕಳುಹಿಸಿದ ನಂತರ ಮನೆಯೊಳಗೆ ಹೂಳಲಾಗಿದ್ದ ಶವ ಪತ್ತೆ – ತಾಯಿಯ ಬಂಧನ
- ಹಿಂದಿನಿಂದ ಬೈಕ್ ಗುದ್ದಿ ವಿದ್ಯಾರ್ಥಿನಿಯ ದುರಂತ ಅಂತ್ಯ
ಈ ಸಮಯದಲ್ಲಿ ಗ್ರಾಮಾಭಿವೃದ್ಧಿಯೋಜನೆಯ ಅಂಬಲಪಾಡಿ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಆಚಾರ್, ಮೇಲ್ವಿಚಾರಕರಾದ ಜಯಕರ್, ಸಹಾಯಕಿ ಗೀತಾ ಪಾಲನ್, ಪಂಚಾಯತ್ ಸದಸ್ಯರಾದ ಹರೀಶ ಪಾಲನ್, ಯುವಕ ಮಂಡಲದ ಗೌರವ ಅಧ್ಯಕ್ಷ ಕೀರ್ತಿ ಶೆಟ್ಟಿ, ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ನಾರಾಯಣ ಎಮ್. ಹೆಗಡೆ, ಕೆ. ಜೆ. ಗಣೇಶ, ಕೆ. ಅಜಿತ್ಕುಮಾರ್, ನಟರಾಜ ಉಪಾಧ್ಯ, ಪ್ರವೀಣ ಉಪಾಧ್ಯ, ಜಯ ಕೆ., ಪ್ರಣಿತ್ ಉಪಸ್ಥಿತರಿದ್ದರು. ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ಜೆ. ಕೃಷ್ಣ ಧನ್ಯವಾದ ಸಮರ್ಪಿಸಿದರು.