ಅಮೇರಿಕಾದ ಯಕ್ಷಗಾನ ಕಲಾವೃಂದದ ಸದಸ್ಯರು ಚಕ್ರಮೈದಾನ ಕೃಷ್ಣ ಪೂಜಾರಿ, ಬಾಲಕೃಷ್ಣ ನಾಯಕ್, ಶಂಭಯ್ಯ ಕಂಜರ್ಪಣೆ ಹಾಗೂ ಕಲ್ಲಗುಡ್ಡೆ ಲಕ್ಷ್ಮಣ ಈ ನಾಲ್ವರು ಕಲಾವಿದರಿಗೆ ತಲಾ 25,000/- ರೂಪಾಯಿ ಆರ್ಥಿಕ ನೆರವು ನೀಡಿರುತ್ತಾರೆ.
ಕರೋನದ ಸಂಕಷ್ಟದ ಕಾಲದಲ್ಲಿ ಯಕ್ಷಗಾನ ವೃತ್ತಿ ಕಲಾವಿದರ ಕಷ್ಟವನ್ನರಿತು ದೊಡ್ಡಮೊತ್ತದ ನೆರವು ನೀಡಿದ, ಅಮೇರಿಕಾದಲ್ಲಿದ್ದು ನಾಡಿನ ಕಲೆಯ ಉಳಿವು ಬೆಳವಣಿಗೆಗೆ ಸದಾ ಚಿಂತಿಸುತ್ತಾ, ಕ್ರಿಯಾಶೀಲರಾಗಿರುವ ಕಲಾವೃಂದದ ಮಿತ್ರರನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದಿಸಿದರು.