Friday, September 20, 2024
Homeಯಕ್ಷಗಾನಗೋಡೆ ನಾರಾಯಣ ಹೆಗಡೆ ಇವರ ‘ಸಾಕ್ಷ್ಯಚಿತ್ರ ಬಿಡುಗಡೆ’, ‘ವಿಚಾರಸಂಕಿರಣ’ ‘ಪ್ರಾತ್ಯಕ್ಷಿಕೆ’ ಹಾಗೂ ‘ಯಕ್ಷಗಾನ ಕಾರ್ಯಕ್ರಮ’ - 12-12-2020ರಂದು...

ಗೋಡೆ ನಾರಾಯಣ ಹೆಗಡೆ ಇವರ ‘ಸಾಕ್ಷ್ಯಚಿತ್ರ ಬಿಡುಗಡೆ’, ‘ವಿಚಾರಸಂಕಿರಣ’ ‘ಪ್ರಾತ್ಯಕ್ಷಿಕೆ’ ಹಾಗೂ ‘ಯಕ್ಷಗಾನ ಕಾರ್ಯಕ್ರಮ’ – 12-12-2020ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಕಾರ್ಯಕ್ರಮ ವೈವಿಧ್ಯ  

ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಿನಾಂಕ 12 ಡಿಸೆಂಬರ್ 2020ರಂದು ಗೋಡೆ ನಾರಾಯಣ ಹೆಗಡೆ ಇವರ ‘ಸಾಕ್ಷ್ಯಚಿತ್ರ ಬಿಡುಗಡೆ’, ‘ವಿಚಾರಸಂಕಿರಣ’, ‘ಪ್ರಾತ್ಯಕ್ಷಿಕೆ’ ಹಾಗೂ ‘ಯಕ್ಷಗಾನ ಕಾರ್ಯಕ್ರಮ’ವನ್ನು ಶ್ರೀ ಶಾರದಾಂಬ ದೇವಸ್ಥಾನ, ನಾಯ್ಕನಕೆರೆ, ಯಲ್ಲಾಪುರ  ಇಲ್ಲಿ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮವು ಡಿಸೆಂಬರ್ 12 ಶನಿವಾರದಂದು ಬೆಳಿಗ್ಗೆ 10 ಘಂಟೆಗೆ ಆರಂಭವಾಗಲಿದೆ. ಸಚಿವರಾದ ಶ್ರೀ ಶಿವರಾಮ ಹೆಬ್ಬಾರರಿಂದ ಬೆಳಿಗ್ಗೆ 10 ಘಂಟೆಗೆ ಉದ್ಘಾಟನೆ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ. 

ಈ ಕಾರ್ಯಕ್ರಮದ ನಂತರ ಶ್ರೀ ಗೋಡೆ ನಾರಾಯಣ ಹೆಗಡೆಯವರ ಬಗ್ಗೆ ವಿಚಾರ ಸಂಕಿರಣ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಇದರ ನಂತರದ ಕಾರ್ಯಕ್ರಮವಾಗಿ ‘ಮಹಿಳಾ ಹಿಮ್ಮೇಳ’ದ  ಬಗ್ಗೆ ತೆಂಕು ಬಡಗಿನ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಕೊನೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.  

ಜಾಹೀರಾತು 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments