ಯಕ್ಷ ಶಾಲ್ಮಲಾ (ರಿ) ಆಯೋಜಿಸುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದ ಏಳು ದಿನಗಳ ತಾಳಮದ್ದಳೆ ಕಾರ್ಯಕ್ರಮವಾದ “ಶ್ರೀ ರಾಮಾನುಭವ” ಎಂಬ ಸರಣಿ ತಾಳಮದ್ದಳೆ ಸಪ್ತಾಹ ಮುಂಡಿಗೇಸರ ಎಂಬಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಈ ತಾಳಮದ್ದಳೆ ಸಪ್ತಾಹದಲ್ಲಿ ಪ್ರದರ್ಶನ ಮತ್ತು ದಾಖಲೀಕರಣ ಎರಡನ್ನೂ ಮಾಡಲಾಗುತ್ತಿದೆ. ದಿನಾಂಕ ಡಿಸೆಂಬರ್ 6ರಿಂದ ಡಿಸೆಂಬರ್ 12ರ ವರೆಗೆ ಈ ಕಾರ್ಯಕ್ರಮವು ಪ್ರತಿದಿನ ಸಂಜೆ 4-30ರಿಂದ ನಡೆಯಲಿದೆ. ಕಾರ್ಯಕ್ರಮವು ಸರಕಾರದ ಕೋವಿಡ್19ರ ನೀತಿ ನಿಯಮಾವಳಿಗಳನ್ನನುಸರಿಸಿ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಏಳೂ ದಿನಗಳ ತಾಳಮದ್ದಳೆ ಪ್ರಸಂಗಗಳಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈಯವರು ಪ್ರತಿದಿನವೂ ಶ್ರೀರಾಮನ ಪಾತ್ರವನ್ನು ವಹಿಸುತ್ತಿರುವುದು ಈ ಸಪ್ತಾಹದ ವಿಶೇಷತೆಯಾಗಿದೆ.
