Friday, September 20, 2024
Homeಪುಸ್ತಕ ಮಳಿಗೆ'ಪಾತಾಳ ಪ್ರಶಸ್ತಿ'ಗೆ ದಶಕದ ಹೊಳಪು - ಉಪಾಯನ 

‘ಪಾತಾಳ ಪ್ರಶಸ್ತಿ’ಗೆ ದಶಕದ ಹೊಳಪು – ಉಪಾಯನ 

ಎಡನೀರು ಶ್ರೀ ಮಠದ ಅಭಿಮಾನಿಗಳೂ ಶಿಷ್ಯರೂ ಆಗಿರುವ ಯಕ್ಷಗಾನದ ಹಿರಿಯ ಖ್ಯಾತ ಸ್ತ್ರೀಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು ತನ್ನ ಕಲಾಸೇವೆಯ ನೆನಪಿಗಾಗಿ, ಎಡನೀರಿನಲ್ಲಿ ‘ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ’ವನ್ನು ರೂಪಿಸಿ ವರ್ಷಂಪ್ರತಿ ಹಿರಿಯ ಕಲಾವಿದರನ್ನು ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದಿರುವ ವಿಚಾರ.

ಪಾತಾಳ ಪ್ರಶಸ್ತಿಯ ದಶಮಾನೋತ್ಸವದ ಸಂದರ್ಭದಲ್ಲಿ ಉಪಾಯನ ಎಂಬ ಹೊತ್ತಗೆಯು ಪ್ರಕಟವಾಗಿತ್ತು. 2014ರಲ್ಲಿ ಪ್ರಕಟವಾದ ಈ ಪುಸ್ತಕದ ಪ್ರಕಾಶಕರು  ‘ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ’ ಎಡನೀರು. ಸಂಪಾದಕರು ಶ್ರೀ ನಾ. ಕಾರಂತ ಪೆರಾಜೆ. ಮೊದಲಿಗೆ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಅನುಗ್ರಹ ಸಂದೇಶವನ್ನು ನೀಡಲಾಗಿದೆ. 

‘ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ’ದ ಅಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ‘ಶುಭ ಒಸಗೆ’ ಎಂಬ ತಮ್ಮ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಸಂಪಾದಕ ಶ್ರೀ ನಾ. ಕಾರಂತ ಅವರು ‘ಹತ್ತರ ಹಸಿತ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ಬಳಿಕ ಡಾ. ಬಿ. ಎನ್. ಮಹಾಲಿಂಗ ಭಟ್ ಅವರು ಬರೆದ  ‘ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ-ದಶಕದ ಹಾದಿ’ ಎಂಬ ಲೇಖನವನ್ನು ನೀಡಲಾಗಿದೆ.

‘ಉಪಾಯನ’ ಎಂಬ ಈ ಪುಸ್ತಕದಲ್ಲಿ 2005ರಿಂದ ತೊಡಗಿ 2014ರ ವರೆಗೆ ಪಾತಾಳ ಪ್ರಶಸ್ತಿಯನ್ನು ಪಡೆದ ಹಿರಿಯ, ಖ್ಯಾತ ಕಲಾವಿದರ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಪಾತಾಳ ಪ್ರಶಸ್ತಿಗೆ ಭಾಜನರಾದ ಕಲಾವಿದರು ಕಟೀಲು ಪುರುಷೋತ್ತಮ ಭಟ್, ಕಡಬ ಸಾಂತಪ್ಪ, ಪೆರುವಡಿ ನಾರಾಯಣ ಭಟ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕುಡಾನ ಗೋಪಾಲಕೃಷ್ಣ ಭಟ್, ಮಾರ್ಗೋಳಿ ಗೋವಿಂದ ಸೇರಿಗಾರ್, ಎಂ,ಕೆ.ರಮೇಶ ಆಚಾರ್ಯ, ಕೊಕ್ಕಡ ಈಶ್ವರ ಭಟ್, ವಿಠಲ ಮಾಸ್ತರ್ ಮತ್ತು ಭಾಸ್ಕರ ಜೋಶಿ ಶಿರಳಗಿ.

ಬಳಿಕ ‘ಯಕ್ಷ ಶಾಂತಲೆಯ ಅಂತರಂಗ’ ಮತ್ತು ‘ಅಂತರ್ಮುಖಿ ಪಾತಾಳ’ ಎಂಬ ಬರಹಗಳನ್ನು ನೀಡಲಾಗಿದೆ. ಬರೆದವರು ಶ್ರೀ ನಾ.ಕಾರಂತ ಪೆರಾಜೆ ಮತ್ತು ಶ್ರೀ ಮುಳಿಯ ಶಂಕರ ಭಟ್ ಅವರುಗಳು. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments