ಯಕ್ಷಗಾನ ಮತ್ತೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸರಕಾರದಿಂದ ಕೆಲವೊಂದು ನೀತಿ ಸಂಹಿತೆ, ನಿಯಮಾವಳಿಗಳ ಷರತ್ತು ಬದ್ಧ ಅನುಮತಿಯೂ ದೊರಕಿದೆ. ಆದರೆ ಕೆಲವೊಂದು ಮೂಲಗಳ ಪ್ರಕಾರ 60 ವರ್ಷ ಮೇಲ್ಪಟ್ಟ ಕಲಾವಿದರಿಗೆ ಈ ಬಾರಿ ತಿರುಗಾಟ ನಡೆಸಲು ಕೆಲವೊಂದು ತೊಡಕುಗಳಿವೆ ಎಂದು ಹೇಳಲಾಗುತ್ತಿತ್ತು.
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
ನೀತಿ ನಿಯಮಾವಳಿಗಳ ಹೊರತಾಗಿಯೂ ಕೆಲವು ಹಿರಿಯ ಕಲಾವಿದರು ತಿರುಗಾಟಕ್ಕೆ ಸ್ವಯಂ ನಿರ್ಬಂಧ ವಿಧಿಸಿಕೊಂಡ ಬಗ್ಗೆ ಮಾಹಿತಿಗಳು ಬರುತ್ತಿವೆ. ಅದರಲ್ಲೂ ಒಂದು ಕಾಲದಲ್ಲಿ ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ವಿಜೃಂಬಿಸುತ್ತಿದ್ದ ಹಾಡುಗಾರಿಕೆಯ ತ್ರಿಮೂರ್ತಿಗಳೆಂದೇ ಪ್ರಸಿದ್ಧರಾಗಿದ್ದ ಭಾಗವತರುಗಳಾದ ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ ಮತ್ತು ಪುತ್ತಿಗೆ ರಘುರಾಮ ಹೊಳ್ಳರು ಈ ಬಾರಿಯ ತಿರುಗಾಟಕ್ಕೆ ಲಭ್ಯರಾಗುವುದು ಸಂಶಯ ಎಂದೇ ಭಾವಿಸಲಾಗಿದೆ.

ಎಡನೀರು ಮೇಳವು ತನ್ನ ತಿರುಗಾಟವನ್ನು ಕಳೆದ ವರ್ಷವೇ ಕೆಲವೊಂದು ಕಾರಣಗಳಿಂದ ನಿಲ್ಲಿಸಿತ್ತು. ಈ ಕಾರಣದಿಂದ ದಿನೇಶ ಅಮ್ಮಣ್ಣಾಯರು ಮೇಳದ ಖಾಯಂ ಭಾಗವತರಾಗಿ ಮತ್ತೆ ಕಾಣಿಸಿಕೊಳ್ಳುವುದು ಅಸಂಭವ. ಅದೂ ಅಲ್ಲದೆ ಕೃಷಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡ ಅಮ್ಮಣ್ಣಾಯರು ಒಂದೆರಡು ವರ್ಷಗಳ ಮೊದಲೇ ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯುವ ಸೂಚನೆಯನ್ನು ನೀಡಿದ್ದರು.
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
ಪದ್ಯಾಣ ಗಣಪತಿ ಭಟ್ಟರೂ ವಯಸ್ಸಿನ ಕಾರಣದಿಂದ ಈ ಬಾರಿಯ ತಿರುಗಾಟದಿಂದ ಹಿಂದೆ ಉಳಿಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳ ಬೇಡಿಕೆಯ ಮೇರೆಗೆ ಕೆಲವೊಂದು ಪ್ರದರ್ಶನಗಳಲ್ಲಿ ಮೇಳದ ಭಾಗವತರಾಗಿ ಕಾಣಿಸಿಕೊಂಡರೂ ಪ್ರತಿಯೊಂದು ಪ್ರದರ್ಶನಗಳಲ್ಲಿ ಅವರ ಲಭ್ಯತೆ ಇರಲಾರದು.

ಪುತ್ತಿಗೆ ರಘುರಾಮ ಹೊಳ್ಳರಿಗೂ ಅದೇ ವಯಸ್ಸಿನ ತೊಡಕು. ಆದರೆ ಅವರಿಗೆ ತಿರುಗಾಟಕ್ಕೆ ವಿದಾಯ ಹೇಳಲು ಬೇರೇನೂ ಅನಾನುಕೂಲತೆಗಳಿಲ್ಲ ಎಂದು ತೋರುತ್ತದೆ. ಆದರೂ ಅವರು ಮೇಳದ ತಿರುಗಾಟಕ್ಕೆ ಈಗಾಗಲೇ ವಿದಾಯ ಹೇಳಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅದು ಅಧಿಕೃತ ಸುದ್ದಿಯೋ ಅಥವಾ ಅನಧಿಕೃತವೋ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಏನೇ ಆದರೂ ಒಂದು ಕಾಲದಲ್ಲಿ ಈ ತ್ರಿಮೂರ್ತಿಗಳು ಯಕ್ಷಗಾನ ಪ್ರಿಯರಲ್ಲಿ ಯಕ್ಷಗಾನದ ಕಿಚ್ಚು ಹಬ್ಬಿಸಿದ್ದಂತೂ ಸುಳ್ಳಲ್ಲ. ನಿಜವಾಗಿ ಆ ಕಾಲದಲ್ಲಿ ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಮಂದಿಯನ್ನು ತಮ್ಮ ಗಾನ ಸುಧೆಯಿಂದ ಸನ್ಮೋಹಗೊಳಿಸಿ ಯಕ್ಷಗಾನದತ್ತ ಮತ್ತೆ ಕೊರಳು ತಿರುಗಿಸುವಂತೆ ಮಾಡಿದುದರಲ್ಲಿ ಈ ಮೂವರ ಕೊಡುಗೆ ಬಹಳಷ್ಟಿದೆ. ಆದ್ದರಿಂದ ಈ ಮೂವರು ಭಾಗವತರ ನಿವೃತ್ತಿಯು ಯಕ್ಷಗಾನದ ಹಲವಾರು ಹಿರಿಯ ಪ್ರೇಕ್ಷಕರನ್ನು ಮತ್ತೆ ಪ್ರದರ್ಶನಗಳಿಂದ ವಿಮುಖರಾಗುವಂತೆ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.