‘ಯಕ್ಷ ಸ್ತ್ರೀ’ ಇದು ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳು, ಸ್ತ್ರೀ ಪಾತ್ರಧಾರಿಗಳು, ಮಹಿಳಾ ಯಕ್ಷಗಾನ ಈ ವಿಚಾರಗಳ ಬಗೆಗಿನ ಸಂಶೋಧನಾ ಕೃತಿಯಾಗಿ ಪ್ರಕಟವಾಗಿತ್ತು. ಲೇಖಕಿ, ಪ್ರಾಧ್ಯಾಪಿಕೆ ಡಾ. ನಾಗವೇಣಿ ಎನ್. ಅವರ ಕೊಡುಗೆ ಇದು.
ಈ ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 2012ರಲ್ಲಿ. ಪ್ರಕಾಶಕರು ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ. ಪ್ರಧಾನ ಸಂಪಾದಕರು ಡಾ. ಕೆ. ಚಿನ್ನಪ್ಪ ಗೌಡ ಅವರು. ಮೊದಲಾಗಿ ಮಂಗಳೂರು ವಿ.ವಿ. ಕುಲಪತಿ ಪ್ರೊ| ಟಿ.ಸಿ. ಶಿವಶಂಕರಮೂರ್ತಿ ಅವರು ಬರೆದ ‘ಯಕ್ಷ ವಾಙ್ಮಯಕ್ಕೆ ಅಪೂರ್ವ ಕೊಡುಗೆ’ ಎಂಬ ಲೇಖನವನ್ನು ನೀಡಲಾಗಿದೆ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಬಳಿಕ ಪ್ರೊ| ಕೆ. ಚಿನ್ನಪ್ಪ ಗೌಡ ಅವರು ‘ಚಂದಭಾಮೆಯಿಂದ ಸತ್ಯನಾಪುರದ ಸಿರಿಯ ವರೆಗೆ’ ಎಂಬ ಶೀರ್ಷಿಕೆಯಡಿ ಬರೆದ ಲೇಖನವಿದೆ. ಬಳಿಕ ‘ಮಾರ್ಗದರ್ಶಕರ ಮಾತು’ ಎಂಬ ಶೀರ್ಷಿಕೆಯಡಿ ಡಾ. ಸಬಿಹಾ, ಡಾ. ಕೇಶವ ಶರ್ಮಾ, ಡಾ. ಮಹೇಶ್ವರಿ. ಯು. ಅವರುಗಳ ಲೇಖನಗಳನ್ನು ನೀಡಲಾಗಿದೆ. ಅಲ್ಲದೆ ಪ್ರೊ| ತಾಳ್ತಜೆ ವಸಂತಕುಮಾರ ಮತ್ತು ಪ್ರೊ| ಎಂ.ಎಲ್.ಸಾಮಗ ಅವರ ಅನಿಸಿಕೆಗಳನ್ನೂ ನೀಡಲಾಗಿದೆ. ‘ಕೃತಜ್ಞತೆ’ ಎಂಬ ಶೀರ್ಷಿಕೆಯಡಿ ಲೇಖಕಿ ಸಂಶೋಧಕಿ ಡಾ. ನಾಗವೇಣಿ ಎನ್. ಅವರು ತಮ್ಮ ಮನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ.
ಈ ಕೃತಿಯಲ್ಲಿ ಒಟ್ಟು ಒಂಬತ್ತು ಅಧ್ಯಾಯಗಳಿವೆ. ಅಧ್ಯಾಯ ಒಂದರಲ್ಲಿ ಪ್ರಸ್ತಾವನೆ, ಅಧ್ಯಯನದ ಉದ್ದೇಶ, ಸ್ವರೂಪ, ವ್ಯಾಪ್ತಿ, ಈ ವರೆಗಿನ ಅಧ್ಯಯನ ಸಮೀಕ್ಷೆ ಎಂಬ ವಿಚಾರಗಳಿವೆ. ಅಧ್ಯಾಯ ಎರಡರಲ್ಲಿ ‘ಪೂರ್ವರಂಗದ ಸ್ತ್ರೀ ವೇಷಗಳು’, ಅಧ್ಯಾಯ ಮೂರರಲ್ಲಿ ‘ಸ್ತ್ರೀ ವೇಷಗಳು’, ಅಧ್ಯಾಯ ನಾಲ್ಕರಡಿ ‘ಸ್ತ್ರೀವೇಷ ಮತ್ತು ವೇಷಧಾರಿ’, ‘ಚೌಕಿಯ ಒಳಗೆ ಮತ್ತು ಹೊರಗೆ’, ಅಧ್ಯಾಯ ಐದರಲ್ಲಿ ‘ಸ್ತ್ರೀ ಪಾತ್ರಗಳು’,
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಅಧ್ಯಾಯ ಆರರಲ್ಲಿ ‘ಹೆಣ್ಣು ಬಣ್ಣ’, ಅಧ್ಯಾಯ ಏಳರಲ್ಲಿ ‘ಸ್ತ್ರೀ ಪಾತ್ರಧಾರಿಗಳ ಇತಿಹಾಸ ಮತ್ತು ಕೊಡುಗೆ’, ಅಧ್ಯಾಯ ಎಂಟರಲ್ಲಿ ‘ಮಹಿಳಾ ಯಕ್ಷಗಾನ’ ಈ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಅಧ್ಯಾಯ ಒಂಭತ್ತು ‘ಉಪಸಂಹಾರ ಎಂಬ ವಿಭಾಗವು.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ