Saturday, July 6, 2024
Homeಯಕ್ಷಗಾನಮುರಲಿ ಕಡೆಕಾರ್ ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಪುನರಾಯ್ಕೆ

ಮುರಲಿ ಕಡೆಕಾರ್ ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಪುನರಾಯ್ಕೆ


ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 62ನೇ ವಾರ್ಷಿಕ ಮಹಾಸಭೆ ಮುರಲಿ ಕಡೆಕಾರ್ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ 27, 2020ರಂದು ಜರಗಿತು. ಪ್ರಕಾಶ್ ಹೆಬ್ಬಾರ್ ಗತಸಭೆ ವರದಿ ಮಂಡಿಸಿದರು. ಕೆ.ಜೆ. ಕೃಷ್ಣ ವಾರ್ಷಿಕ ವರದಿ ಮಂಡಿಸಿದರು. ಎ. ನಟರಾಜ ಉಪಾಧ್ಯರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿ.ಎ ಗಣೇಶ್ ಹೆಬ್ಬಾರ್ ಅವರನ್ನು ಲೆಕ್ಕಪರಿಶೋಧಕರಾಗಿ ನಿಯುಕ್ತಿಗೊಳಿಸಲಾಯಿತು. 2020-21ನೇ ಸಾಲಿಗೆ ಈ ಕೆಳಗಿನ ಆಡಳಿತ ಮಂಡಳಿಯನ್ನು ಆರಿಸಲಾಯಿತು.
ಅಧ್ಯಕ್ಷ : ಮುರಲಿ ಕಡೆಕಾರ್, ಉಪಾಧ್ಯಕ್ಷ : ಕೆ. ಅಜಿತ್ ಕುಮಾರ್, ಕಾರ್ಯದರ್ಶಿ : ಕೆ.ಜೆ ಕೃಷ್ಣ, ಜತೆಕಾರ್ಯದರ್ಶಿ : ಪ್ರಕಾಶ್ ಹೆಬ್ಬಾರ್, ಕೋಶಾಧಿಕಾರಿ : ಎ. ನಟರಾಜ ಉಪಾಧ್ಯ, ಸದಸ್ಯರು : ಕೆ.ಜೆ ಗಣೇಶ್, ಡಾ. ಗಣಪತಿ ಭಟ್, ಪ್ರವೀಣ್ ಉಪಾಧ್ಯ, ನಾರಾಯಣ ಎಂ. ಹೆಗಡೆ, ಮಂಜುನಾಥ ತೆಂಕಿಲ್ಲಾಯ, ಜಯ.ಕೆ, ಮಾಧವ ಕೆ., ರಮೇಶ ಸಾಲಿಯಾನ್, ಕೆ.ಜೆ ಸುಧೀಂದ್ರ, ವಸಂತ ಪಾಲನ್
ಸಲಹಾ ಸಮಿತಿ : ಎಸ್.ವಿ ಭಟ್, ಶ್ರೀರಮಣ ಆಚಾರ್ಯ, ವಿಜಯ್ ಕುಮಾರ್, ವಿಠಲ ಗಾಣಿಗ, ವಿದ್ಯಾಪ್ರಸಾದ್, ಜಗದೀಶ, ಅರವಿಂದ ಆಚಾರ್ಯ, ಪ್ರಶಾಂತ್ ಕೆ.ಎಸ್, ಸುನೀಲ್, ನಚಿಕೇತ
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮುರಲಿ ಕಡೆಕಾರ್ ಮಾತನಾಡಿ ಸಂಸ್ಥೆಯ ನೂತನ ಕಟ್ಟಡ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂದೆ ಅದರಲ್ಲಿ ನಿರಂತರ ಕಲಾ ಚಟುವಟಿಕೆಗಳನ್ನು ನಡೆಸುವ ಹೊಣೆಗಾರಿಕೆ ನಮ್ಮೆಲ್ಲರಿಗಿದೆ ಎಂದು ನುಡಿದರು. ಕಾರ್ಯದರ್ಶಿ ಕೆ.ಜೆ ಕೃಷ್ಣ ಧನ್ಯವಾದ ಸಮರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments