Friday, September 20, 2024
Homeಪುಸ್ತಕ ಮಳಿಗೆಕೀರಿಕ್ಕಾಡು ವಿಷ್ಣು ಭಟ್ಟ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ

ಕೀರಿಕ್ಕಾಡು ವಿಷ್ಣು ಭಟ್ಟ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ

ಶೀರ್ಷಿಕೆಯೇ ಸೂಚಿಸುವಂತೆ ಈ ಪುಸ್ತಕವು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ರಚಿಸಿದ ಪ್ರಸಂಗಗಳ ಸಂಪುಟ. ಶ್ರೀಯುತರು ಬರೆದ ಪ್ರಸಂಗಗಳಲ್ಲಿ ಐದನ್ನು ಆಯ್ದು ಈ ಹೊತ್ತಗೆಯಲ್ಲಿ ಮುದ್ರಿಸಲಾಗಿದೆ. ಪ್ರಸ್ತುತ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಕುಂಬ್ಡಾಜೆ ಗ್ರಾಮದ ಕೀರಿಕ್ಕಾಡು ಎಂಬ ಹಳ್ಳಿಯಲ್ಲಿ ಜನನ. ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ವಿದ್ಯಾದಾನ. ಬಳಿಕ ದೇಲಂಪಾಡಿ ಸಮೀಪದ ಗುಡ್ಡಡ್ಕದಲ್ಲಿ ವಾಸ. ಕಲಾವಿದರಾಗಿ,ಲೇಖಕರಾಗಿ, ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾದುದು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಸ್ಥಾಪಕರಾಗಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ನಿರಂತರ ಯಕ್ಷಗಾನ ಚಟುವಟಿಕೆಗಳನ್ನು ನಡೆಸಿದ ಮಹಾನುಭಾವರಿವರು. ಶ್ರೀಯುತರ ಬಗೆಗೆ ಹಿಂದೊಂದು ಲೇಖನವನ್ನು ಬರೆದಿದ್ದೆ. ಅವರು ರಚಿಸಿದ ಅನೇಕ ಪ್ರಸಂಗಗಳಲ್ಲಿ ವೇಷಗಳನ್ನು ಮಾಡುವ ಅವಕಾಶಗಳೂ ಸಿಕ್ಕಿತ್ತು. ಅದನ್ನು ಭಾಗ್ಯವೆಂದು ಭಾವಿಸುತ್ತೇನೆ.  

‘ಕೀರಿಕ್ಕಾಡು ವಿಷ್ಣು ಭಟ್ಟ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ’ ಎಂಬ ಈ ಸಂಪುಟವು ೧೯೯೮ನೇ ಇಸವಿ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಕಟಗೊಂಡಿತ್ತು. ಇದರ ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ (ರಿ) ಮುಂಬೈ ಎಂಬ ಸಂಸ್ಥೆ. ಅನೇಕ ಯಕ್ಷಗಾನ ಪ್ರಸಂಗಗಳ ಸಂಪುಟಗಳನ್ನು ಪ್ರಕಾಶಿಸಿದ ಹಿರಿಮೆ ಈ ಸಂಸ್ಥೆಗಿದೆ. ಮುಂಬಯಿಯ ಯಕ್ಷಗಾನ ಕಲಾ ಸಂಘಟಕ ಶ್ರೀ ಎಚ್.ಬಿ.ಎಲ್. ರಾವ್ ಅವರು ಇದರ ಸಂಪಾದಕರು. ಮುನ್ನುಡಿಯನ್ನು ಬರೆದವರು ಕಾಸರಗೋಡಿನ ಶ್ರೇಷ್ಠ ಸಾಹಿತಿ ಶ್ರೀ ವೆಂಕಟರಾಜ ಪುಣಿಚಿತ್ತಾಯರು. ತಮ್ಮ ಮುನ್ನುಡಿ ಬರಹದಲ್ಲಿ ಶ್ರೀಯುತರು ಕೀರಿಕ್ಕಾಡು ಮಾಸ್ತರರ ಬಗೆಗೆ, ಅವರ ಪ್ರಸಂಗ ರಚನಾ ಕೌಶಲದ ಬಗೆಗೆ ತಮ್ಮ ಅನಿಸಿಕೆಗಳ ನ್ನು ವ್ಯಕ್ತಪಡಿಸಿದ್ದಾರೆ. ಅರಿಕೆ ಎಂಬ ಶೀರ್ಷಿಕೆಯಡಿ ಕೀರಿಕ್ಕಾಡು ಮಾಸ್ತರರ ಪುತ್ರರಾದ ಡಾ. ರಮಾನಂದ ಬನಾರಿ ಅವರು ತಮ್ಮ ಮನದಾಳದ ಮಾತುಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಪುಸ್ತಕದ ಹೊರ ಆವರಣದ ಪುಟದಲ್ಲಿ ಶ್ರೀ  ವೆಂಕಟರಾಜ ಪುಣಿಚಿತ್ತಾಯರ ಮುನ್ನುಡಿ ಬರಹದ ಮುಖ್ಯ ಅಂಶಗಳನ್ನು ನೀಡಲಾಗಿದೆ. ಈ ಸಂಪುಟದಲ್ಲಿ ಜರಾಸಂಧ ಪರಾಭವ, ಭ್ರಮರಕುಂತಳೆ ಕಲ್ಯಾಣ, ಮೃಗಾವತೀ ಪರಿಣಯ, ಸುಲೋಚನಾ ಸ್ವಯಂವರ, ವೀರ ಅಭಿಮನ್ಯು ಎಂಬ ಐದು ಪ್ರಸಂಗಗಳಿವೆ. ಪ್ರತಿಯೊಂದು ಪ್ರಸಂಗದಲ್ಲಿ ಬರುವ ಪಾತ್ರಗಳನ್ನೂ ನಮೂದಿಸಿರುತ್ತಾರೆ. ಈ ಪ್ರಸಂಗ ಸಂಪುಟವು ಕಲಾಕ್ಷೇತ್ರಕ್ಕೊಂದು ಉತ್ತಮ ಕೊಡುಗೆ. 

ಲೇಖನ: ರವಿಶಂಕರ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments