Friday, September 20, 2024
Homeಪುಸ್ತಕ ಮಳಿಗೆಪಾರ್ತಿಸುಬ್ಬನ ಯಕ್ಷಗಾನಗಳು (ಸಂಪಾದಕರು - ಕುಕ್ಕಿಲ ಕೃಷ್ಣ ಭಟ್ )

ಪಾರ್ತಿಸುಬ್ಬನ ಯಕ್ಷಗಾನಗಳು (ಸಂಪಾದಕರು – ಕುಕ್ಕಿಲ ಕೃಷ್ಣ ಭಟ್ )

‘ಪಾರ್ತಿಸುಬ್ಬನ ಯಕ್ಷಗಾನಗಳು’ ಈ ಕೃತಿಯು ಯಕ್ಷಗಾನದ ಜನಕ ಪಾರ್ತಿಸುಬ್ಬ ಅವರು ಬರೆದ ಪ್ರಸಂಗಗಳ ಒಂದು ಸಂಪುಟ. ಈ ಪುಸ್ತಕದ ಸಂಪಾದಕರು ಕುಕ್ಕಿಲ ಕೃಷ್ಣ ಭಟ್. ಕುಕ್ಕಿಲ ಕೃಷ್ಣ ಭಟ್ಟರ ಜೀವಿತಾವಧಿ 1911 – 1988. ಇದು ಮೂರನೆಯ ಮುದ್ರಣ. ಪ್ರಕಾಶಕರು ಡಾ. ಕೀಲಾರು ಗೋಪಾಲಕೃಷ್ಣಯ್ಯ (ರಿ ) ಸಂಪಾಜೆ. 1975ರಲ್ಲಿ ಮೊದಲ ಮುದ್ರಣವು ನಡೆದು 2009ರಲ್ಲಿ ಮರು ಮುದ್ರಿತವಾಗಿತ್ತು. ಆಗ ಈ ಪುಸ್ತಕವು ಹೊರಬರಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು ನೆರವನ್ನು ನೀಡಿತ್ತು. ಶ್ರೀ ಹಾ.ಮಾ. ನಾಯಕ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದವರು. ವಿಭಾಗ ಸಂಪಾದಕರಾಗಿದ್ದ ಜೀ. ಶಂ. ಪರಮಶಿವಯ್ಯ ಅವರ ಲೇಖನವೂ ಇದೆ. ‘ಪೀಠಿಕೆ’ ಶೀರ್ಷಿಕೆಯಡಿ ಸಂಪಾದಕರಾದ ಕುಕ್ಕಿಲ ಕೃಷ್ಣ ಭಟ್ಟರು ಪಾರ್ತಿಸುಬ್ಬ ಮತ್ತು ಪಾರ್ತಿಸುಬ್ಬನು ರಚಿಸಿದ ಪ್ರಸಂಗಗಳ ಬಗೆಗೆ ವಿವರಣೆಯನ್ನು ನೀಡಿರುತ್ತಾರೆ. ಈ ಕೃತಿಯಲ್ಲಿ ಪುತ್ರಕಾಮೇಷ್ಟಿ-ಸೀತಾಕಲ್ಯಾಣ, ಪಟ್ಟಾಭಿಷೇಕ-ಪಂಚವಟಿ,ಪಂಚವಟಿ-ವಾಲಿಸಂಹಾರ, ಉಂಗುರ ಸಂಧಿ, ಸೇತುಬಂಧನ, ಅಂಗದಸಂಧಾನ, ಕುಂಭಕರ್ಣಾದಿ ಕಾಳಗ, ಕುಶಲವರ ಕಾಳಗ, ಕೃಷ್ಣ ಚರಿತೆ, ಐರಾವತ ಎಂಬ ಪ್ರಸಂಗಗಳಿವೆ. ಕಥಾಸಾರಾಂಶವನ್ನೂ ಪ್ರಸಂಗದಲ್ಲಿ ಬರುವ ಪಾತ್ರಗಳನ್ನೂ ನಮೂದಿಸಿದ್ದು ತುಂಬಾ ಅನುಕೂಲವಾಗಿದೆ. ಸಭಾಲಕ್ಷಣವನ್ನು ಸವಿವರವಾಗಿ ನೀಡಲಾಗಿದೆ. ಬಳಿಕ ಅನುಬಂಧ ವಿಭಾಗದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಕುಕ್ಕಿಲ ನಾರಾಯಣ ಭಟ್ಟ ಮತ್ತು ಮುಳಿಯ ತಿಮ್ಮಪ್ಪಯ್ಯನವರ ಲೇಖನಗಳಿವೆ. ಬಳಿಕ ‘ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಎರಡು ಮಾತುಗಳು’  ಎಂಬ ಲೇಖನವಿದೆ. ಅಲ್ಲದೆ  ‘ಮರುಮುದ್ರಣದ ಪೂರ್ವರಂಗ’ ಎಂಬ ಶೀರ್ಷಿಕೆಯಡಿ ಶ್ರೀ ಜಿ. ಎನ್. ಅನಂತವರ್ಧನ ಮತ್ತು ಶ್ರೀ ಧನಂಜಯ್ ಇವರುಗಳ ಲೇಖನವಿದೆ. ಈ ಪುಸ್ತಕದ ಹೊರ  ಆವರಣದಲ್ಲಿ ಶ್ರೀ ಕುಕ್ಕಿಲ ಕೃಷ್ಣ ಭಟ್ಟರ ಜೀವನ ವಿವರವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments