ನಿನ್ನೆ ರಾತ್ರಿ ಭಗವಂತನಲ್ಲಿ ಐಕ್ಯಗೊಂಡ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳ ಸಮಾಜಮುಖಿ ಕಾರ್ಯಗಳನ್ನು ಎಷ್ಟು ಸ್ಮರಿಸಿದರೂ ಅದು ಕಡಿಮೆಯೇ.
ಕಲೆಗೆ ಅವರ ಪ್ರೋತ್ಸಾಹ. ಶ್ರೀ ಮಠದಲ್ಲಿ ಸದಾಕಾಲವೂ ನಡೆಯುತ್ತಿದ್ದ ಸಂಗೀತ, ನೃತ್ಯ, ಯಕ್ಷಗಾನವೇ ಮೊದಲಾದ ಕಲಾಗೋಷ್ಠಿಗಳು, ಇವುಗಳೆಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿ ಸದಾಕಾಲವೂ ನೆನಪಿನಲ್ಲುಳಿಯುತ್ತವೆ.
ಯಕ್ಷಗಾನಕ್ಕೆ ಅವರ ನಿರಂತರ ಪ್ರೋತ್ಸಾಹವಿತ್ತು. ಸದಾ ಮನಸ್ಸಿನಲ್ಲಿ ಯಕ್ಷಗಾನ ಕಲೆಯ ಏಳಿಗೆಗಾಗಿಯೇ ಯೋಚಿಸುತ್ತಿದ್ದ ಸ್ವಾಮೀಜಿಗಳು ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು.
ಶ್ರೀ ದೇವರ ಸನ್ನಿಧಿಯಲ್ಲಿ ಸೇವಾ ಪ್ರಯುಕ್ತ ಅವರ ಒಂದು ಹಾಡುಗಾರಿಕೆಯ ಯು ಟ್ಯೂಬ್ ವೀಡಿಯೋ ಇಲ್ಲಿದೆ. ವೀಡಿಯೋ ಚಿತ್ರೀಕರಿಸಿ ಯು ಟ್ಯೂಬ್ ಗೆ ಅಪ್ಲೋಡ್ ಮಾಡಿದವರು ಉಮಾ ಆರ್.ಕೆ ಭಟ್ ಚಿತ್ರಮೂಲ