ಕಟೀಲು ಮೇಳದ ಖ್ಯಾತ ಮದ್ದಳೆಗಾರರಾದ ಶ್ರೀ ಮುರಾರಿ ಕಡಂಬಳಿತ್ತಾಯರ ವಿವಾಹ ಸಮಾರಂಭ ಇತ್ತೀಚಿಗೆ ನಡೆಯಿತು. ಅವರ ಮದುವೆಯ ದಿನ ಸಹಜವಾಗಿಯೇ ಯಕ್ಷಗಾನ ಕಲಾವಿದರಲ್ಲಿ ಹಲವರು ಆಗಮಿಸಿದ್ದರು. ಇಷ್ಟು ಜನ ಕಲಾವಿದರೆಲ್ಲಾ ಒಂದೆಡೆಯಲ್ಲಿ ಸೇರಿದರೆ ಮತ್ತೆ ಕೇಳುವುದೇನು? ಕೂಡಲೇ ಅಲ್ಲಿ ದಿಢೀರ್ ಗಾನವೈಭವದ ರಸಪಾಕದ ಔತಣ ಸಿದ್ಧವಾಯಿತು. ಈ ಗಾನವೈಭವದ ವೀಡಿಯೋ ಚಿತ್ರೀಕರಣ ಮಾಡಿದ ಮಧುಸೂದನ ಅಲೆವೂರಾಯರು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿಯೇ ಬಿಟ್ಟರು. ಅಲೆವೂರಾಯರ ಈ ವಿಡಿಯೋದ ಲಿಂಕ್ ಕೆಳಗೆ ಕೊಡಲಾಗಿದೆ. ನೋಡಿ ಆನಂದಿಸಿ.
