Friday, March 13, 2026
Home Blog Page 323

ಮೇಳಗಳ ಇಂದಿನ (16.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (16.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹಳ್ಳಿಹೊಳೆ ದೋಣಿಕಡವು – ಮಹಾಕಲಿ ಮಗಧೇಂದ್ರ 

ಕಟೀಲು ಒಂದನೇ ಮೇಳ == ವಸಂತಿ ನಿವಾಸ, ಪಿತ ಮೊಗರುಗುತ್ತು, ಕಂದಾವರ ಗುರುಪುರ 

ಕಟೀಲು ಎರಡನೇ ಮೇಳ == ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ 

ಕಟೀಲು ಮೂರನೇ ಮೇಳ== ಮುಕ್ಕಾಲ್ದಿಮನೆ ಎಕ್ಕಾರು 

ಕಟೀಲು ನಾಲ್ಕನೇ ಮೇಳ  == ಹೊಸಂಗಡಿ ಮನೆ, ಹೇರಾಡಿ ಗ್ರಾಮ, ಬಾರ್ಕೂರು ಬ್ರಹ್ಮಾವರ 

ಕಟೀಲು ಐದನೇ ಮೇಳ ==  ನಡಿಬೀಡು, ಹೊಸಮನೆ ಕೆಂಜಾರು ಬಜಪೆ  

ಕಟೀಲು ಆರನೇ ಮೇಳ == ಬಾಕಿಮಾರುಗುತ್ತು ಸೂರಿಂಜೆ 

ಮಂದಾರ್ತಿ ಒಂದನೇ ಮೇಳ  == ಶ್ರೀ ದುರ್ಗಾನಿಲಯ, ಕೊಡ್ಲಬೈಲು ಶಿರಿಯಾರ  – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಶ್ರೀ ದುರ್ಗಾನಿಲಯ, ಕೊಡ್ಲಬೈಲು ಶಿರಿಯಾರ  – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಸೌಡ, ಶಂಕರನಾರಾಯಣ 

ಮಂದಾರ್ತಿ ನಾಲ್ಕನೇ ಮೇಳ   == ಅರೆಕಲ್ಲುಮನೆ ಕೀರ್ತಿನಗರ ಆಲುಂಜೆ ಆರೂರು 

ಮಂದಾರ್ತಿ ಐದನೇ ಮೇಳ  == ಕೆರೆಕಟ್ಟು ಹೌಸ್ ಬಸ್ರೂರು  

ಶ್ರೀ ಹನುಮಗಿರಿ ಮೇಳ  == ಮಂಚಿ ನೂಜಿಬೈಲು ಶಾಲಾ ಕ್ರೀಡಾಂಗಣ – ಶ್ರೀ ದೇವಿ ಮಹಾತ್ಮೆ  (ಸಂಜೆ 5 ರಿಂದ)

ಶ್ರೀ ಸಾಲಿಗ್ರಾಮ ಮೇಳ == ತೆಕ್ಕಟ್ಟೆ ಕರಿಕಲ್ ಕಟ್ಟೆ ಚಿತ್ತಾರಿ ಶ್ರೀ ಬ್ರಹ್ಮಲಿಂಗೇಶ್ವರ ಉತ್ಸವ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಸಂತಾನ ಗೋಪಾಲಕೃಷ್ಣ ದೇವಸ್ಥಾನ ಕೂಡು, ಹಾಲ್ಕುತ್ತೂರು (ಕೊಪ್ಪ ತಾಲೂಕು) – ಧರ್ಮಾಂಗದ ದಿಗ್ವಿಜಯ, ಸತ್ಯಹರಿಶ್ಚಂದ್ರ, ರತ್ನಾವತಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಐರ್ ಬೈಲು, ಹೊಂಬಾಡಿಮನೆ ಉಳ್ಳೂರು – 74

ಶ್ರೀ ಮಾರಣಕಟ್ಟೆ ಮೇಳ ‘ಬಿ == ಅಲ್ಸಾಡಿ ಬೈರಿಮನೆ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಆಲಂದೂರು ತೋಟದಮನೆ ಶಿರೂರು ಬೈಂದೂರು 

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಹಾಡಿಮನೆ ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ – (ಶ್ರೀ ಗೋಳಿಗರಡಿ ಮೇಳದೊಂದಿಗೆ ಕೂಡಾಟ) ಚತುರ್ಜನ್ಮ ಮೋಕ್ಷ 

ಕಮಲಶಿಲೆ ಮೇಳ ‘ಬಿ‘ ==  ಉಳುಕೊಪ್ಪ 

ಶ್ರೀ ಅಮೃತೇಶ್ವರೀ ಮೇಳ == ಕದ್ರಿಕಟ್ಟು 

ಶ್ರೀ ಸೌಕೂರು ಮೇಳ == ಗುಲ್ವಾಡಿ ಮಾಲತಿ ಅಮ್ಮ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == 62ನೇ ತೋಕೂರು MSEZ ಕಾಲನಿ ಹಾಲ್ ಹತ್ತಿರ – ಶ್ರೀ ನಾಗದೇವತೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಬೈಂದೂರು ಮಯ್ಯಾಡಿ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ – ರಾಮಾಂಜನೇಯ, ರೇಣುಕಾ ಮಹಾತ್ಮೆ (ರಾತ್ರಿ 8.30ರಿಂದ)

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಾಡಿಮನೆ ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ – (ಕಮಲಶಿಲೆ ಮೇಳದೊಂದಿಗೆ ಕೂಡಾಟ) ಚತುರ್ಜನ್ಮ ಮೋಕ್ಷ 

ಶ್ರೀ ಹಿರಿಯಡಕ ಮೇಳ == ವೇಣೂರು ಬಾಹುಬಲಿ ಸಭಾಭವನದ ಬಳಿ – ಪವಿತ್ರ ಫಲ್ಗುಣಿ  

ಶ್ರೀ ಶನೀಶ್ವರ ಮೇಳ == ಕೊಡುರು ಬುಡ್ಕನ್ ಮಲ್ಲಿ 

ಶ್ರೀ ಸಿಗಂದೂರು ಮೇಳ == ನಾಡಾ ಗುಡ್ಡೆಯಂಗಡಿ ತೆಂಕಬೈಲು 

ಶ್ರೀ ನೀಲಾವರ ಮೇಳ  == ಎರೆಕೋಣ್ ಪೇಟೆ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಮೇಳಿಗೆ

ಶ್ರೀ ಮೇಗರವಳ್ಳಿ ಮೇಳ == ಕೊಕ್ಕರ್ಣೆ ಶಾಸ್ತಾವು ಯಕ್ಷಮಿತ್ರರು – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ದಬ್ಬೆಕಟ್ಟೆ – ದಿವ್ಯ ಸನ್ನಿಧಿ (ರಾತ್ರಿ 8.30ರಿಂದ)

ಶ್ರೀ ಹಾಲಾಡಿ ಮೇಳ == ಬ್ರಹ್ಮಾವರ – ನೂತನ ಪ್ರಸಂಗ (ರಾತ್ರಿ 7.30ರಿಂದ)

ಶ್ರೀ ಬಪ್ಪನಾಡು ಮೇಳ == ಚೇತರ್ಕಾಡಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ (ರಾತ್ರಿ 7ರಿಂದ)

ಶ್ರೀ ಸಸಿಹಿತ್ಲು ಭಗವತೀ ಮೇಳ == ನಾವೂರ ಮೈಂದಾಳ (ಬಂಟ್ವಾಳ) ಶ್ರೀ ಮಹಾದೇವಿ ಭಜನಾ ಮಂದಿರದ ವಠಾರ – ಕೋರ್ದಬ್ಬು ಬಾರಗ 

ಶ್ರೀ ದೇಂತಡ್ಕ ಮೇಳ == ಶ್ರೀ ಹಾಯಿಗುಳಿ ಬೊಬ್ಬರ್ಯ ಸಹಪರಿವಾರ ದೈವಸ್ಥಾನ ವಠಾರ ಅರಾಲ್ ಗುಡ್ಡೆ ಹಳಅಳಿವೆ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಬಡಗು ತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕ ಅವರ ಸಂಕ್ಷಿಪ್ತ ಪರಿಚಯ (Biography of M. A. Naik)

ಹೆಸರು:  ಎಂ. ಎ. ನಾಯ್ಕ (ಮಂದಾರ್ತಿ ಅಣ್ಣು ನಾಯ್ಕ)
ಜನನ ಸ್ಥಳ: ಮಂದಾರ್ತಿ 
ತಂದೆ ತಾಯಿ: ಶ್ರೀ ಕರಿಯ ಮರಕಾಲ, ಶ್ರೀಮತಿ ಬುಡ್ದು 

ರಂಗಪ್ರವೇಶ: 1964
ಅನುಭವ: 40 ವರ್ಷಕ್ಕೂ ಮೇಲ್ಪಟ್ಟು (ಅಮೃತೇಶ್ವರಿ ಮೇಳದಲ್ಲಿ 16 ವರ್ಷ, ಮಂದಾರ್ತಿ ಮೇಳದಲ್ಲಿ 15 ವರ್ಷ, ಮೂಲ್ಕಿ ಮೇಳ, ಶಿರಸಿ ಮೇಳವೇ ಮೊದಲಾದ ಮೇಳಗಳಲ್ಲಿ)

ವಿದೇಶ ಪ್ರವಾಸ: ಎರಡು ಬಾರಿ ಸ್ವಿಟ್ಜರ್ಲೆಂಡ್ ಹಾಗೂ ಹಾಂಕಾಂಗ್, ಜರ್ಮನಿ, ಪೋಲೆಂಡ್ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. 
ಜನಮೆಚ್ಚುಗೆ ಗಳಿಸಿದ ಪಾತ್ರಗಳು: ಸೀತೆ, ಮಂಡೋದರಿ, ಚಂದ್ರಮತಿ, ಸಾವಿತ್ರಿ, ದಮಯಂತಿ ಮೊದಲಾದ ಸೌಮ್ಯ ಸ್ತ್ರೀ ಪಾತ್ರಗಳು ಮತ್ತು ರುಚಿಮತಿ, ರುಕ್ಮಿಣಿ, ದಾಕ್ಷಾಯಣಿ, ದ್ರೌಪದಿ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಕೋಟ ವೈಕುಂಠ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಬಿ.ವಿ. ಆಚಾರ್ಯ ಪ್ರಶಸ್ತಿ, ಅರಾಟೆ ಮಂಜುನಾಥ ಸಂಸ್ಮರಣಾ ಪ್ರಶಸ್ತಿ ಮೊದಲಾದ ಹಲವಾರು ಪ್ರಶಸ್ತಿ ಸನ್ಮಾನಗಳು 

ಮೇಳಗಳ ಇಂದಿನ (15.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (15.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಗ್ವಾಡಿ ಹೊಳೇಕೆರೆ ಸಪರಿವಾರ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ == ಚೆನ್ನಮ್ಮ ಸದನ, ಪಂಜ ಬಾಕಿಮಾರುಗುತ್ತು ವಯಾ ಪಕ್ಷಿಕೆರೆ ಹಳೆಯಂಗಡಿ 

ಕಟೀಲು ಎರಡನೇ ಮೇಳ == ನೀಲಕಂಠ ಉಮಾಮಹೇಶ್ವರಿ ದೇವಸ್ಥಾನ ವಠಾರ ದೈವಂಗಳ ಗುಡ್ಡೆ 

ಕಟೀಲು ಮೂರನೇ ಮೇಳ== ಸುಳ್ಯ 

ಕಟೀಲು ನಾಲ್ಕನೇ ಮೇಳ  == ಮಟ್ಟಿಮನೆ, ನಗರ, ಹೊಸನಗರ ಶಿವಮೊಗ್ಗ 

ಕಟೀಲು ಐದನೇ ಮೇಳ ==  ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಬಳಿ, ಅರಳ, ಬಂಟ್ವಾಳ 

ಕಟೀಲು ಆರನೇ ಮೇಳ == ‘ಮೊಗಪಾಡಿ ಪಂಜ ವಯಾ ಪಕ್ಷಿಕೆರೆ ಹಳೆಯಂಗಡಿ  

ಮಂದಾರ್ತಿ ಒಂದನೇ ಮೇಳ  == ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಸೋಮನಾಥ ನಿಲಯ ಕಾರ್ಕಡ ಸಾಲಿಗ್ರಾಮ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಮಂದಾರ್ತಿ ಕಲ್ಯಾಣ ಮಂದಿರ 

ಮಂದಾರ್ತಿ ನಾಲ್ಕನೇ ಮೇಳ   == ಕಾವ್ರಾಡಿ 

ಮಂದಾರ್ತಿ ಐದನೇ ಮೇಳ  == ದೇವಿಕೃಪಾ ನಿಲಯ ನಾಯಕವಾಡಿ ಗುಜ್ಜಾಡಿ  

ಶ್ರೀ ಹನುಮಗಿರಿ ಮೇಳ  == ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ – ಶುಕ್ರನಂದನೆ (ರಾತ್ರಿ 9 ರಿಂದ)

ಶ್ರೀ ಸಾಲಿಗ್ರಾಮ ಮೇಳ == ಶಿರೂರು ಮೂರುಕೈ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಶ್ರೀ ಕಾವೇರಿಕೃಪಾ ಕೊಡಪಾಡಿ ಗುಜ್ಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಬ್ರಹ್ಮಶ್ರೀ’ ನಾರ್ಕಾಳಿ ಗುಡಿಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಾಗೂರು    

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಕಲ್ಯಾಣೋತ್ಸವ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಚೋನಮನೆ ಆಜ್ರಿ 

ಕಮಲಶಿಲೆ ಮೇಳ ‘ಬಿ‘ ==  ಕೋಣೆಮನೆ ಕೊಡ್ಲಾಡಿ  

ಶ್ರೀ ಅಮೃತೇಶ್ವರೀ ಮೇಳ == ಪಾರಂಪಳ್ಳಿ 

ಶ್ರೀ ಸೌಕೂರು ಮೇಳ == ಹೂವಿನಕೆರೆ – ಮೇಘ ಮಯೂರಿ 

ಶ್ರೀ ಬೆಂಕಿನಾಥೇಶ್ವರ ಮೇಳ  == ಫರಂಗಿಪೇಟೆ ಸೇವಾಂಜಲಿ (ರಿ) –   ಸತ್ಯೊದ ಸ್ವಾಮಿ ಕೊರಗಜ್ಜ (ಸಂಜೆ 6.30)

ಶ್ರೀ ಮಡಾಮಕ್ಕಿ ಮೇಳ == ಕೊಂಡಳ್ಳಿ (ಬೈಲೂರು) – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತೀರ್ಥಹಳ್ಳಿ ಆರಗ ಗುಡ್ಡೆಕೊಪ್ಪ – ನಾಗಮಂಡಲ 

ಶ್ರೀ ಹಿರಿಯಡಕ ಮೇಳ == ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಉಪ್ಪಿನಕುದ್ರು ಶ್ರೀ ವಿನಾಯಕ ದೇವಸ್ಥಾನ 

ಶ್ರೀ ಸಿಗಂದೂರು ಮೇಳ ==  ನಾಯ್ಕನಕಟ್ಟೆ ಮೊಗೇರಿ 

ಶ್ರೀ ನೀಲಾವರ ಮೇಳ  == ಪಾವನ ಕಾಂಪ್ಲೆಕ್ಸ್ ಬಳಿ, ಚಿತ್ತೂರು ಆಲೂರು ಕ್ರಾಸ್ – ದೈವ ಮಂಟಪ 

 ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಶಂಕಾಪುರ 

ಶ್ರೀ ಮೇಗರವಳ್ಳಿ ಮೇಳ == ಬೆಳ್ವೆ, ಬೂಮ್ಮಳ ಗಣೇಶ್ ಕ್ಯಾಶ್ಯೂಸ್ ಗೇರುಬೀಜ ಕಾರ್ಖಾನೆ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬೊಬ್ಬರ್ಯ ದೇವಸ್ಥಾನ – ಭಸ್ಮಾಸುರ ಮೋಹಿನಿ 

ಶ್ರೀ ಹಾಲಾಡಿ ಮೇಳ == ಸಿದ್ದಾಪುರ ಪೇಟೆ – ನೂತನ ಪ್ರಸಂಗ (ಕಾಲಮಿತಿ)

ಶ್ರೀ ಬೋಳಂಬಳ್ಳಿ ಮೇಳ== ಕೋಟ್ನಕಟ್ಟೆ ಹಿರಿಯಡ್ಕ – ಪದ್ಮಾವತಿ, ಮೀನಾಕ್ಷಿ 

ಶ್ರೀ ಬಪ್ಪನಾಡು ಮೇಳ == ಪ್ರಗತಿ ಫ್ರೆಂಡ್ಸ್ ದೊಡ್ಡತೋಟ – ಬಂಗಾರ್ ಬಾಲೆ (ರಾತ್ರಿ 7) 

ಮೇಳಗಳ ಇಂದಿನ (14.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (14.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಾಸ್ತಾನ ಅಣಲಾಡಿ ಮಠದ ಆವರಣ – ರಾಮ ರಾಮಾ ಶ್ರೀರಾಮ 

ಕಟೀಲು ಒಂದನೇ ಮೇಳ == ಸಿರಿಗುಂಡದಪಾಡಿ ಮೂಡುಪಡುಕೋಡಿ ವಯಾ ವಾಮದಪದವು 

ಕಟೀಲು ಎರಡನೇ ಮೇಳ == ‘ಓಂಕಾರ’ MSEZ ಕಾಲನಿ ರೋಡ್, ಕೋಡಿಕೆರೆ ಕುಳಾಯಿ 

ಕಟೀಲು ಮೂರನೇ ಮೇಳ== ಪಾರೆಂಕಿ ವಯಾ ಮಡಂತ್ಯಾರು ಬೆಳ್ತಂಗಡಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಆದಿಶಕ್ತಿ ಸುಬ್ರಹ್ಮಣ್ಯ ದುರ್ಗಾಪರಮೇಶ್ವರಿ ದೇವಸ್ಥಾನ ಕನ್ನಂಗಿ ತೀರ್ಥಹಳ್ಳಿ 

ಕಟೀಲು ಐದನೇ ಮೇಳ ==  ದೇವಿಕೃಪಾ, ಎರ್ನೋಡಿ ಉಜಿರೆ ಬೆಳ್ತಂಗಡಿ 

ಕಟೀಲು ಆರನೇ ಮೇಳ == ‘ಮೂಲ್ಕಿ ಕೊಳಚಿಕಂಬ್ಳ 

ಮಂದಾರ್ತಿ ಒಂದನೇ ಮೇಳ  == ರಶ್ಮಿ’, ದಾಸಬೆಟ್ಟು ಹಾವಂಜೆ 

ಮಂದಾರ್ತಿ ಎರಡನೇ ಮೇಳ   == ಹಳ್ಳಿ ನಡುಮನೆ ಹೆನ್ನಿ ಕೊಕ್ಕರ್ಣೆ  

ಮಂದಾರ್ತಿ ಮೂರನೇ ಮೇಳ  == ತಗ್ಗಿನಬೈಲು ಗುಂಡ್ಮಿ ಸಾಸ್ತಾನ  

ಮಂದಾರ್ತಿ ನಾಲ್ಕನೇ ಮೇಳ   == ಬೇಳೂರು ಮನೆ ಮಣೂರು ಪಡುಕೆರೆ 

ಮಂದಾರ್ತಿ ಐದನೇ ಮೇಳ  == ಹೆನಬೇರು ಕೆರೆಜೆಡ್ಡು ಪಡುವರಿ ಬೈಂದೂರು 

ಶ್ರೀ ಹನುಮಗಿರಿ ಮೇಳ  == ಕಾರ್ಯಸಿದ್ಧಿ ಶ್ರೀ ವೀರಾಂಜನೇಯ ಕ್ಷೇತ್ರ ರತ್ನಗಿರಿ ಮಡಂತ್ಯಾರು – ಶ್ರೀ ದೇವಿ ಮಹಾತ್ಮೆ (ರಾತ್ರಿ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ತೊಟ್ಟಂ ಬೀಚ್ ರಸ್ತೆ ‘ಅಮ್ಮ’ ಮನೆಯ ಆವರಣ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಉಳ್ಳೂರುಮನೆ ಹಡವು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೈಲ್ಕೆರೆ ಜಪ್ತಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮದ್ಲಿಕಂಬ ಹೊಸೂರು   

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ನಡುಬೆಟ್ಟು ಮಣೂರು  

ಕಮಲಶಿಲೆ ಮೇಳ ‘ಬಿ‘ ==  ಮಾರ್ಡಿ ಕೊಡ್ಲಾಡಿ   

ಶ್ರೀ ಅಮೃತೇಶ್ವರೀ ಮೇಳ == ಹಾಡಿಕೆರೆ ಕೋಟ ಗ್ರಾಮಸ್ಥರು 

ಶ್ರೀ ಸೌಕೂರು ಮೇಳ == ಕೌಂಜೂರು ಕೆಳಾಂಗಡಿ ಮನೆ ಶ್ರೀ ದುರ್ಗಾ ನಿಲಯ – ಸಂಪೂರ್ಣ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಗೋಳಿತೊಟ್ಟು –   ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಬೇಳಿಂಜೆ ಪೋಸ್ಟ್ ಆಫಿಸ್ ಬಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮರವಂತೆ ನಡುಬೆಟ್ಟು ಶ್ರೀ ಬೈಲುಸ್ವಾಮಿ ಸೇವಾ ಸಮಿತಿ, ಸಾಧನಾ ಮಾರ್ಗ – ಶ್ರೀ ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಹಿರಿಯಡ್ಕ 

ಶ್ರೀ ಸಿಗಂದೂರು ಮೇಳ ==  ಸೌಡ ಅಮ್ಮನವರ ದೇವಸ್ಥಾನದ ವಠಾರ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಅರಸಾಳು

ಶ್ರೀ ಮೇಗರವಳ್ಳಿ ಮೇಳ == ಕಿಗ್ಗ  

ಶ್ರೀ ಹಾಲಾಡಿ ಮೇಳ == ಬೆಳ್ಳಿಗದ್ದೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಕುದ್ರಿಪದವು – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  == ಸಿದ್ದಕಟ್ಟೆ ಸಂಗಬೆಟ್ಟು – ವಜ್ರ ಕೋಗಿಲೆ 

ಮೇಳಗಳ ಇಂದಿನ (13.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುಕ್ಕಾ ಶ್ರೀ ಸತ್ಯಧರ್ಮ ದೇವೀ ದೇವಸ್ಥಾನದ ಆವರಣ – ಶ್ರೀ ಶಿವಪಂಚಾಕ್ಷರೀ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಡಂದಲೆ ಶ್ರೀ ನಾಗಬ್ರಹ್ಮಸ್ಥಾನದ ಬಳಿ 

ಕಟೀಲು ಎರಡನೇ ಮೇಳ == ಸುಂಕದಕಟ್ಟೆ ಬಜಪೆ 

ಕಟೀಲು ಮೂರನೇ ಮೇಳ== ರಾಮನಗರ, ಕಪಿತಾನಿಯೊ, ಮರೋಳಿ, ನಾಗುರಿ 

ಕಟೀಲು ನಾಲ್ಕನೇ ಮೇಳ  == ಚೌಕ, ಕರುಣಾಪುರ, ಮೇಗರವಳ್ಳಿ ತೀರ್ಥಹಳ್ಳಿ 

ಕಟೀಲು ಐದನೇ ಮೇಳ ==  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಲ್ಲಬೆಟ್ಟು, ನಯನಾಡು, ಬಂಟ್ವಾಳ 

ಕಟೀಲು ಆರನೇ ಮೇಳ == ‘ವಸುಮತಿ’ ಶಿವದುರ್ಗ ಕಾಂಪೌಂಡ್, ಉಲ್ಲಂಜೆ, ಮಜಿಲ 

ಮಂದಾರ್ತಿ ಒಂದನೇ ಮೇಳ  == ನೀರ್ಕೊಡ್ಲು ಮನೆ, ಹನೆಹಳ್ಳಿ ಬಾರ್ಕೂರು 

ಮಂದಾರ್ತಿ ಎರಡನೇ ಮೇಳ   == ಹುಂಚನಿ ಗೋಳಿಹೊಳೆ ಬೈಂದೂರು 

ಮಂದಾರ್ತಿ ಮೂರನೇ ಮೇಳ  == ನಟರಾಜ ನಿಲಯ ಜನತಾ ಕಾಲನಿ ವಕ್ವಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಮಾತೃಕೃಪಾ ನಾವುಂದ – ಕೂಡಾಟ 

ಮಂದಾರ್ತಿ ಐದನೇ ಮೇಳ  == ಮಾತೃಕೃಪಾ ನಾವುಂದ – ಕೂಡಾಟ  

ಶ್ರೀ ಹನುಮಗಿರಿ ಮೇಳ  == ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರ  – ಶುಕ್ರನಂದನೆ (ರಾತ್ರಿ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಆವರ್ಸಾ ಬೀದಿಬೀರ ದೇವಸ್ಥಾನ (ಉ.ಕ) – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಹರಿಷೆ – ಕಾಳಿದಾಸ, ಚಂದ್ರಹಾಸ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ‘ಪದ್ಮಾವತಿ ಸಹಪಾರಿವಾರ ದೇವಸ್ಥಾನ ಬೊಬ್ಬರ್ಯನಹಿತ್ಲು ನಾವುಂದ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೆಟ್ಸಂಕಾ ಆಜ್ರಿ – ಕಮಲಶಿಲೆ ಮೇಳದೊಂದಿಗೆ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕಟ್ ಮೇಲ್ಮನೆ ಹೆಮ್ಮಾಡಿ  

ಶ್ರೀ ಪಾವಂಜೆ ಮೇಳ  ==   ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಅಭಿಮನ್ಯು, ಗದಾಯುದ್ಧ, ರಕ್ತರಾತ್ರಿ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಮೆಟ್ಸಂಕಾ ಆಜ್ರಿ – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಕಮಲಶಿಲೆ ಮೇಳ ‘ಬಿ‘ ==  ಕಮಲಶಿಲೆ  

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಅರಮೇಶ್ವರ ದೇವಸ್ಥಾನ ಕೋಟತಟ್ಟು ಪಡುಕೆರೆ  

ಶ್ರೀ ಸೌಕೂರು ಮೇಳ == ಕೆಂಚನೂರು ಮಾವಿನಕೆರೆ ಆರ್ಮ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಳವಾರು MSEZ ಕಾಲನಿ – ಶ್ರೀ ದೇವಿ ಅಗ್ನಿ ಕಲ್ಲುರ್ಟಿ  

ಶ್ರೀ ಮಡಾಮಕ್ಕಿ ಮೇಳ == ಕಾರ್ಕಡ ತೆಂಕು ಹೋಳಿ ಸುಬ್ರಹ್ಮಣ್ಯ ನಿಲಯ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶಿರೂರು ಮುದ್ದುಮನೆ ಶ್ರೀ ಅಬ್ಬಕ್ಕ ಶ್ರೀ ಧಾರಕೇಶ್ವರಿ/ ಶ್ರೀ ಬ್ರಹ್ಮಬೈದರ್ಕಳ ಗರಡಿ ನಾಯರಬೆಟ್ಟು – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಬೆಪ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಶಂಕರನಾರಾಯಣ ಕಾಲೇಜು ಎದುರು 

ಶ್ರೀ ಸಿಗಂದೂರು ಮೇಳ ==  ಮಾವಿನಕೊಡ್ಲು ಅಂಗಡಿ ವಠಾರ 

ಶ್ರೀ ನೀಲಾವರ ಮೇಳ  == ಹೊಸಾಳ ನಾಗರಮಠ ಕ್ರಾಸ್ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಅರಳಸುರುಳಿ 

ಶ್ರೀ ಮೇಗರವಳ್ಳಿ ಮೇಳ == ನಿಡ್ ಗಲ್ ಯಕ್ಷಾಭಿಮಾನಿಗಳು – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ಬೀಯಾಳಿ ಅಶ್ವಥ್ ಕಟ್ಟೆ – ದಿವ್ಯ ಸನ್ನಿಧಿ 

ಶ್ರೀ ಹಾಲಾಡಿ ಮೇಳ == ಏಳಿಗೆ ಕಿರಾತೋಡಿ – ಶರಸೇತು, ನಾಗಶ್ರೀ

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ವಿಶ್ವರೂಪ ಅನಂತಪದ್ಮನಾಭ ದೇವಸ್ಥಾನ ಮುತ್ತೂರು ಹಿರಿಯಡ್ಕ – ನಾಗ ಸುನೇತ್ರೆ 

ಶ್ರೀ ಬಪ್ಪನಾಡು ಮೇಳ == ರಿವರ್ ಲ್ಯಾಂಡ್ ಫ್ರೆಂಡ್ಸ್ ಮೂಡುಕುದ್ರು ಕಲ್ಯಾಣಪುರ – ನಾಗಾನಂದಿನಿ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ದೊಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರ  (ಕಡಬ ತಾಲೂಕು) – ಶ್ರೀ ಭಗವತೀ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  == ಕಾಟಿಪಳ್ಳ ಕೃಷ್ಣಾಪುರ 6th ಬ್ಲಾಕ್ ಚಕ್ರವರ್ತಿ ಮೈದಾನ – ಸರ್ಪ ಸಂಬಂಧ (ಕಾಲಮಿತಿ)

ಶ್ರೀ ದೇಂತಡ್ಕ ಮೇಳ == ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಲಾಯ್ಲ – ಕಪಿಲ ಕಾತ್ಯಾಯಿನಿ (ಕಾಲಮಿತಿ ರಾತ್ರಿ 7.30 ರಿಂದ) 

ವಸಂತಿ ಆರ್. ಭಟ್ ಇವರಿಗೆ ‘ನಿಡಂಬೂರು ಶ್ರೀ’ ಪ್ರಶಸ್ತಿ ಪ್ರದಾನ

ನಿಡಂಬೂರು ಮಾಗಣೆಯ ಶ್ರೇಷ್ಠ ಸಾಧಕರಿಗೆ ನೀಡುವ ‘ನಿಡಂಬೂರು ಶ್ರೀ’ ಪ್ರಶಸ್ತಿಯನ್ನು ಈ ಬಾರಿ ಕಿದಿಯೂರಿನ ಖ್ಯಾತ ವಯಲಿನ್ ವಾದಕಿ  ವಿದ್ವಾನ್ ವಸಂತಿ ರಾಮ ಭಟ್ ಇವರಿಗೆ ಏಪ್ರಿಲ್ ಹನ್ನೊಂದರಂದು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆದ ಮಧೂರು ಮಾಧುರ್ಯ ಸಮಾರಂಭದ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ವಸಂತಿ ರಾಮ ಭಟ್ ನೂರಾರು ವಿದ್ಯಾರ್ಥಿಗಳಿಗೆ ಬಹಳ ಪ್ರೀತಿಯಿಂದ ವಯಲಿನ್ ವಿದ್ಯೆಯನ್ನು  ಕಲಿಸಿ ಅವರನ್ನು ಕಲಾವಿದರನ್ನಾಗಿಸಿ ಸಮಾಜಕ್ಕೆ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಸ್ವತಃ ಶ್ರೇಷ್ಠ ವಯಲಿನ್ ವಾದಕಿಯಾಗಿರುವ ವಸಂತಿ ಭಟ್ರು ನಮ್ಮ ನಿಡಂಬೂರು ಮಾಗಣೆ ಹೆಮ್ಮೆಪಡುವ ಸಾಧಕಿ. ಈ ಬಾರಿಯ ನಿಡಂಬೂರು ಶ್ರೀ ಪ್ರಶಸ್ತಿಯನ್ನು ಇವರಿಗೆ ನೀಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂಬುದಾಗಿ ಪ್ರಶಸ್ತಿಯ ಸ್ಥಾಪಕರಾದ ಡಾಕ್ಟರ್ ನಿಡಂಬೂರು ಬೀಡು ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಿ ನುಡಿದರು.

ಈ ಸಂದರ್ಭದಲ್ಲಿ ಡಾಕ್ಟರ್ ಅರ್ಜುನ್ ಬಲ್ಲಾಳ್, ಡಾಕ್ಟರ್ ಶ್ರುತಿ ಅರ್ಜುನ್ ಬಲ್ಲಾಳ್, ವಿದ್ವಾನ್ ಮದ್ವೇಶ ಭಟ್ ಹಾಗೂ  ಶ್ರೀಮತಿ ಜ್ಯೋತಿ ಸತೀಶ್ ಭಟ್ ಉಪಸ್ಥಿತರಿದ್ದರು. ಕಳೆದ ಬಾರಿ ಈ ಪ್ರಶಸ್ತಿಯನ್ನು ಅಂಬಲಪಾಡಿಯ ಹಿರಿಯ ಸಮಾಜಸೇವಕರಾದ ವಿಶು ಶೆಟ್ಟಿ ಅವರಿಗೆ ನೀಡಲಾಗಿತ್ತು.

ಮನ ಮುಟ್ಟಿದ ಹಿಮ್ಮೇಳ ಕಲಾವಿದರ “ಕರ್ಣ ಭೇದನ”

ಮನ ಮುಟ್ಟಿದ “ಕರ್ಣ ಭೇದನ” ಕಣ್ಣಿಗೆ ಕಟ್ಟುವ ಹಾಗೂ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಪ್ರಸ್ತುತ ಗೊಂಡಿದ್ದು ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಾದ ದೇವರಾಜ ಕರಬರ ಸಂಯೋಜನೆಯಲ್ಲಿ ಡಾ. ರಾಧಾಕೃಷ್ಣ ಉರಾಳರ ನಿರ್ದೇಕಶಕತ್ವದ ಕಲಾಕದಂಬ ಆರ್ಟ್ ಸೆಂಟರ್ ನಿನ್ನೆ (ದಿನಾಂಕ 10-04-2021) ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಯ 4 ನೇ ವಿಭಾಗದ ಕಲಾಗುಡಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ “ಗುಡಿ ನಡೆ” ಶೀರ್ಷಿಕೆಯ ವಿಶಿಷ್ಟ ಪರಿಕಲ್ಪನೆಯ ಶ್ರೀ ದೇವಿದಾಸ ವಿರಚಿತ ‘ಕರ್ಣ ಭೇದನ’ ತಾಳಮದ್ದಲೆಯಲ್ಲಿ.

ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರಾದ ರವೀಂದ್ರ ಜಿ ಭಟ್ ಯಕ್ಷಗಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಶಿವರಾಮ ಕಾರಂತರ ಕಾಲದಿಂದಲೂ ನಡೆಯುತ್ತಿದೆ. ಇದಕ್ಕೆ ಹಲಾವಾರು ವಿರೋಧಗಳು ವ್ಯಕ್ತವಾದರೂ ಯಕ್ಷಗಾನ ಚೌಕಟ್ಟಿನಲ್ಲಿ ಅದನ್ನು ಅಳವಡಿಸಿದರೆ ತಪ್ಪಿಲ್ಲ . ಅಲ್ಲದೇ ನಮ್ಮ ನಾಡಿನ ಹಲವಾರು ಕವಿಗಳ ಕವಿತೆಗಳನ್ನೂ ಕೂಡ ಯಕ್ಷಗಾನ ಸಂಗೀತಕ್ಕೆ ಅಳವಡಿಸುವ ಪ್ರಯತ್ನವೂ ಆಗಲಿ ಎಂದು ಹಾರೈಸಿದರು.

ಮತ್ತೊಬ್ಬ ಅತಿಥಿ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಮುಖ್ಯಸ್ಥರೂ ಗೋಪಾಲ ಕೃಷ್ಣ ಅಡಿಗರ ಸಹೋದರರು ಆದ ಜಯರಾಮ ಅಡಿಗರು ಮಾತನಾಡಿ ಕವಿ ಗೋಪಾಲ ಕೃಷ್ಣ ಅಡಿಗರು ಯಕ್ಷಗಾನದ ಸೊಗಡಿನ ಛಾಯೆಯ ಹಲವಾರು ಕವನಗಳನ್ನು ರಚಿಸಿದರು. ಆ ಮೂಲಕ ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸಿದರು. ಹಾಗಾಗಿ ಯಕ್ಷಗಾನದ ಮೂಲಕ ಸಮಾಜದ ಜಾಗೃತಿ ಕೂಡ ಸಾಧ್ಯ ಎಂದು ಅಭಿಪ್ರಾಯಪಟ್ಟದಲ್ಲದೆ ಕಲಾಕದಂಬ ಆರ್ಟ್ ಸೆಂಟರ್ ನ ಈ ಒಂದು ವಿಶಿಷ್ಟ ಪ್ರಯತ್ನ ಯಶಸ್ವೀಯಾಗಲಿ ಎಂದು ಹಾರೈಸಿದರು.

ಮತ್ತೊಬ್ಬ ಅತಿಥಿ ಹಿರಿಯ ಕಲಾವಿದರಾದ ಶ್ರೀ ಸೂರ್ಯನಾರಾಯಣರವರು ರಂಗಭೂಮಿಗೂ ಯಕ್ಷಗಾನಕ್ಕೂ ವಿಶಿಷ್ಟ ನಂಟಿದೆ, ಪ್ರಾಕಾರಗಳು ಬೇರೆಯಾದರು ಜನರ ಮನಮುಟ್ಟುವಲ್ಲಿ ಒಂದು ಯಶಸ್ವೀ ಕಲಾಮಾಧ್ಯಮ ಎಂದರಲ್ಲದೇ ಈ ಬಡಾವಣೆಯಲ್ಲಿ ಕಲಾಕದಂಬ ಆರ್ಟ್ ಸೆಂಟರ್ ಸಾಂಸ್ಕೃತಿಕ ಲೋಕವನ್ನು ತೆರೆಯುವಲ್ಲಿ ಯಶಸ್ವೀಯಾಗಲಿ ಈ ಗುಡಿ ನಡೆ ಪ್ರತಿ ಮನೆ ಮನಗಳನ್ನು ಬೆಳಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಯಕ್ಷಗಾನ ಕಲಾವಿದರಾದ ವಿದ್ವಾನೆ ಎ.ಪಿ.ಪಾಟಕ್ ಹಾಗು ಈ ಕಾರ್ಯಕ್ರಮದ ಸಂಯೋಜಕರಾದ ದೇವರಾಜ ಕರಬರು ಉಪಸ್ಥಿತರಿದ್ದರು.


ಕೃಷ್ಣನಾಗಿ ಹಾಗೂ ಮದ್ದಲೆಯ ವಾದಕರಾಗಿ ಡಾ.ಪ್ರದೀಪ್ ಸಾಮಗ ತಮ್ಮ ತಂದೆಯವರಾದ ಯಕ್ಷಗಾನದ ಪ್ರಸಿದ್ದ ಕಲಾವಿದರಾದ ದಿವಂಗತ ವಾಸುದೇವ ಸಾಮಗರ ನೆನಪಿಸುವ ರೀತಿಯಲ್ಲಿ ತಮ್ಮ ಮಾತಿನ ಮೂಲಕ ಮೋಡಿ ಮಾಡಿದರು ಅಲ್ಲದೇ ತಮ್ಮ ಮಾತಿನೊಂದಿಗೆ ಮದ್ದಲೆಯ ನಿನಾದವನ್ನು ಹರಿಸಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಮೆರೆದರು.

ಕರ್ಣನ ಅಸಹಾಯಕತೆ ಆತನ ಮಿತ್ರತ್ವದ ಮಹತ್ವವನ್ನು ವ್ಯಕ್ತಪಡಿಸಿದವರು ಪತ್ರಕರ್ತರು ಹಾಗೂ ಯಕ್ಷಗಾನ ಕಲಾವಿದರೂ ಆದ ಅಂಬರೀಷ್ ಭಟ್. ತಮ್ಮ ಸುಲಲಿತ ತೂಕಭರಿತ ಮಾತುಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಿದಲ್ಲದೆ ಪ್ರೇಕ್ಷಕರ ಕಣ್ಣಂಚಿನಲ್ಲಿ ಕಣ್ಣೀರು ಜಿನುಗುವಂತೆ ಮಾಡಿದ್ದು ಕರ್ಣನು ಜನಮಾನಸದಲ್ಲಿ ಎಷ್ಟು ಪ್ರಭಾವ ಬೀರಿದ್ದಾನೆಂಬುದು ಸಾಕ್ಷೀಕರಿಸಿತು.

ಸೂರ್ಯ ಪಾತ್ರಧಾರಿಯಾಗಿ ವಿದ್ವಾನ್ ಎ.ಪಿ.ಪಾಠಕ್ ಚಂಡೆಯನ್ನು ನುಡಿಸುತ್ತಲೇ ಆ ಪಾತ್ರದಲ್ಲಿ ತಮ್ಮನ್ನು ಲೀನವಾಗಿಸಿಕೊಂಡು ಯಕ್ಷಗಾನ ರಂಗದ ಎಲ್ಲಾ ವಿಭಾಗಗಳಲ್ಲಿಯೂ ಸೈ ಎಂಬುದನ್ನು ಎತ್ತಿ ತೋರಿಸಿದರು. ಭಾಗವತಿಕೆಯಲ್ಲಿ ಹಾಗೂ ಕುಂತಿ ಪಾತ್ರಧಾರಿಯಾಗಿ ಸುಬ್ರಾಯ ಹೆಬ್ಬಾರ್ ತಮ್ಮ ಗಾಯನ ಹಾಗೂ ತಾಯಿಯ ಮಮತೆಯ ಮಾತುಗಳಿಂದ ನೆರೆದ ಪ್ರೇಕ್ಷಕರ ಮನಸೂರೆಗೊಂಡರು. ಈ ಎಲ್ಲಾ ಕಲಾವಿದರು ತಮ್ಮ ಪಾತ್ರದೊಂದಿಗೆ ಹಿಮ್ಮೇಳದ ವಾದ್ಯ ಪರಿಕರಗಳನ್ನು ನುಡಿಸಿಕೊಂಡು ಈ ಒಂದು ಹೊಸ ಪ್ರಯೋಗದ ಯಶಸ್ಸಿಗೆ ಕಾರಣೀಭೂತರಾದರು

ಕಾರ್ಯಕ್ರಮದ ನಿರೂಪಣೆಯನ್ನು ಮುರಳೀಧರ ನಾವಡ ನಿರ್ವಹಿಸಿದರು, ನೇಪಥ್ಯದಲ್ಲಿ ವಿಶ್ವನಾಥ ಉರಾಳ, ಅದಿತಿ ಉರಾಳ, ಮಧುಮಿತ, ಜಿ.ಟಿ.ಗೌಡ, ಸುಹಾಸ್, ರಜತ್, ಮಮತ ಉರಾಳ ಸಹಕರಿಸಿದರು.

‘ರೇಡಿಯೋ ಸಾರಂಗ್’ ಸಮುದಾಯ ಬಾನುಲಿಯಲ್ಲಿ ನೆಲ-ಜಲ ಜಾಗೃತಿಯ ಯಕ್ಷಗಾನ ‘ಭೂ – ಜಲ ಸಂರಕ್ಷಣ’

ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಶ್ರಯದಲ್ಲಿ ‘ಶುದ್ಧಜಲ ಸ್ವಚ್ಛ ನೆಲ; ಆರೋಗ್ಯವಾಗಿರಲಿ ಜೀವಸಂಕುಲ’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ಇದೀಗ ಯಕ್ಷಗಾನ ಮಾಧ್ಯಮವನ್ನೂ ಪ್ರಯೋಗಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ. ನಗರದ ಸಂತ ಅಲೋಶಿಯಸ್ ಕಾಲೇಜಿನ ಸಮುದಾಯ ಬಾನುಲಿ ‘ರೇಡಿಯೋ ಸಾರಂಗ್’ 107.8 ಎಫ್.ಎಂ. ಸಿದ್ಧಪಡಿಸಿರುವ ‘ಭೂ – ಜಲ ಸಂರಕ್ಷಣ’ ಎಂಬ ಯಕ್ಷಗಾನ ಕಾರ್ಯಕ್ರಮ ಸರಕಾರದ ಆಶಯಗಳನ್ನು ಸಂದೇಶ ರೂಪದಲ್ಲಿ ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ.     

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಗಾನ ಅರ್ಥದಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾ ಸಂಯೋಜನೆಗೆ ಯುವ ಪ್ರಸಂಗಕರ್ತ, ಪ್ರಾಧ್ಯಾಪಕ ಡಾ. ದಿನಕರ ಎಸ್.ಪಚ್ಚನಾಡಿ ಪ್ರಸಂಗ ರಚನೆ ಮಾಡಿದ್ದಾರೆ. ಯಕ್ಷಗಾನದ ವಿವಿಧ ಪಾತ್ರಗಳ ಮೂಲಕ ನೀರಿನ ಮಿತ ಬಳಕೆ, ಮಾಲಿನ್ಯ ತಡೆಗಟ್ಟುವಿಕೆ, ಜಲ ಮರು ಪೂರಣ, ಮಳೆ ನೀರಿನ ಸಂಗ್ರಹ, ಅಂತರ್ಜಲ ವೃದ್ಧಿ , ಸ್ವಚ್ಛತಾ ಕಾರ್ಯ, ತ್ಯಾಜ್ಯ ವಿಲೇವಾರಿ , ಸಂಸ್ಕರಣೆ,ಪರಿಸರ ರಕ್ಷಣೆ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ‘ನೆಲ-ಜಲ ಸಂರಕ್ಷಣ’ ಎಬ ಈ ಪ್ರಸಂಗದಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರು ಭಾಗವಹಿಸಿದ್ದಾರೆ.


ಪಾತ್ರ ಸಂವಾದ : ಪರಿಸರ ರಕ್ಷಕ ನಂದನ, ಭಕ್ಷಕ ದುರ್ಮದ, ಜಲದೇವ ವರುಣ ಮತ್ತು ನೆಲದವ್ವ ಭೂದೇವಿಯ ಭೂಮಿಕೆಗಳಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಡಾ. ದಿನಕರ ಎಸ್.ಪಚ್ಚನಾಡಿ ಪಾತ್ರ ಸಂವಾದ ನಡೆಸಿ ಯಕ್ಷಗಾನದ ಚೌಕಟ್ಟಿನೊಳಗೆ ‘ಶುದ್ಧ ಜಲ – ಸ್ವಚ್ಛ ನೆಲ’ ಜಾಗೃತಿ ಸಂದೇಶ ನೀಡಿದ್ದಾರೆ. ಭಾಗವತ ಮತ್ತು ಸಂಗೀತ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್ ಅವರ ಹಾಡುಗಾರಿಕೆಗೆ ರೋಹಿತ್ ಉಚ್ಚಿಲ್ ಮತ್ತು ಮಯೂರ ನಾಯಗ ಚೆಂಡೆ – ಮದ್ದಳೆಗಳಲ್ಲಿ ಹಿಮ್ಮೇಳ ಒದಗಿಸಿದ್ದಾರೆ.

ಸಾರಂಗ್ ತಂಡದ ಅಭಿ಼ಷೇಕ್ ಶೆಟ್ಟಿ, ಎಡ್ವರ್ಡ್ ಲೋಬೋ, ಸೈಫುಲ್ಲಾ, ಬಿಂದಿಯಾ ಕುಲಾಲ್, ಶ್ವೇತಾ ನಿರ್ಮಾಣದಲ್ಲಿ ಸಹಕರಿಸಿದ್ದಾರೆ.   ‌‌‌‌  ‘ರೇಡಿಯೋ ಸಾರಂಗ್ 107.8 FM  ಹಾಗೂ ಯೂಟ್ಯೂಬ್ ಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದೆಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಮುದಾಯ ಬಾನುಲಿ ನಿರ್ದೇಶಕ ಫಾ.ಮೆಲ್ವಿನ್ ಪಿಂಟೊ ತಿಳಿಸಿದ್ದಾರೆ.

ಮೇಳಗಳ ಇಂದಿನ (12.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (12.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಾವೂರು ತೋಡ್ಲಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ಕ್ಷೇತ್ರ ಕಟೀಲು ‘ಮಹಾಲಕ್ಷ್ಮಿ ಸದನ’

ಕಟೀಲು ಎರಡನೇ ಮೇಳ == ಕೆಯ್ಯರಬೈಲು ಮರಕಡ, ಮರವೂರು ಸೇತುವೆ ಬಳಿ 

ಕಟೀಲು ಮೂರನೇ ಮೇಳ== ‘ಶ್ರೀ ಕಲ್ಯಾಣಿ’ ತಡಂಬೈಲು ಸುರತ್ಕಲ್ 

ಕಟೀಲು ನಾಲ್ಕನೇ ಮೇಳ  == ‘ಆಸರೆ’ ಚೋನಾಲಿ, ಜನ್ಸಾಲೆ ಸಿದ್ಧಾಪುರ 

ಕಟೀಲು ಐದನೇ ಮೇಳ ==  ಕುಡುಪಾಲ್ ಹೌಸ್, ಪೆರಿಂಜೆ ವಯಾ ವೇಣೂರು 

ಕಟೀಲು ಆರನೇ ಮೇಳ == ಬಜಾಲು, ಕರ್ಮಾರ್ ಶ್ರೀ ಮಹಾದೇವಿ ಭಜನಾ ಮಂದಿರದ ಬಳಿ 

ಮಂದಾರ್ತಿ ಒಂದನೇ ಮೇಳ  == ಆದಿಶಕ್ತಿ ದೇವಿನಿಲಯ ಜಡ್ಡಿನಮನೆ, ಪಡಿಮಂಡು ಶಿರಿಯಾರ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಬಡಾಕಾವಡಿ, ಕಾವಡಿ 

ಮಂದಾರ್ತಿ ಮೂರನೇ ಮೇಳ  == ಆದಿಶಕ್ತಿ ದೇವಿನಿಲಯ ಜಡ್ಡಿನಮನೆ, ಪಡಿಮಂಡು ಶಿರಿಯಾರ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಹೊಸ್ಮನೆ ಹೆಮ್ಮಣ್ಣು ರಟ್ಟಾಡಿ 

ಮಂದಾರ್ತಿ ಐದನೇ ಮೇಳ  == ಹಾಡಿಮನೆ ಮೆಟ್ಟಿನಹೊಳೆ ಕಾಲ್ತೋಡು 

ಶ್ರೀ ಹನುಮಗಿರಿ ಮೇಳ  == ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶುಕ್ರನಂದನ (ರಾತ್ರಿ 6ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ‘ಗಂಧರ್ವ’ ತೋಟದಮನೆ ತ್ರಾಸಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಗಂಧರ್ವ’ ತೋಟದಮನೆ ತ್ರಾಸಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕಾಜಿಹಿತ್ಲು ಬಿಜೂರು 

ಶ್ರೀ ಪಾವಂಜೆ ಮೇಳ  ==   ಅಂಬ್ಲಮುಗೇರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಸುಳುಗೋಡು 

ಕಮಲಶಿಲೆ ಮೇಳ ‘ಬಿ‘ ==  ದೇಲಟ್ಟು ಬೆಳೂರು 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಬೊಬ್ಬರ್ಯ ಚಿಕ್ಕಮ್ಮ ದೇವಸ್ಥಾನ ಅಡಾರುಮನೆ ಅಚ್ಲಾಡಿ 

ಶ್ರೀ ಸೌಕೂರು ಮೇಳ == ನೆಲ್ಲಿಕಟ್ಟೆ ಬಲಾಡಿ ಫ್ರೆಂಡ್ಸ್ – ಪುಷ್ಪ ಚಂದನ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಸನ್ಯಾಸಿಬಲ್ಲೆ ಕಂಚುಗೋಡು – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಪಾಂಡೇಶ್ವರ ಶ್ರೀ ರಕ್ತೇಶ್ವರಿ ನತ್ತು ನಾಗಾದಿ ಪರಿವಾರ ದೇವಸ್ಥಾನ (ಸಾಸ್ತಾನ) – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕೊರಂಗ್ರಪಾಡಿ ಭೀಮನಗರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಅತ್ತೂರು ಭಾರತ್ ಬೀಡಿ ಕಾಂಪೌಂಡ್ – ಪವಿತ್ರ ಫಲ್ಗುಣಿ 

ಶ್ರೀ ಸಿಗಂದೂರು ಮೇಳ ==  ಮೊಳಹಳ್ಳಿ ಉಲ್ಕೆಲ್ ಕೆರೆ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ 

ಶ್ರೀ ನೀಲಾವರ ಮೇಳ  == ಕೂಡ್ಲಿ ಶ್ರೀ ದುರ್ಗಾಂಬಾ ಗದ್ದುಗೆ ಅಮ್ಮನವರ ದೇವಸ್ಥಾನ ರಂಗನೆಕೆರೆ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕಟ್ಟಿಹಕ್ಲು 

ಶ್ರೀ ಮೇಗರವಳ್ಳಿ ಮೇಳ == ಕಿಗ್ಗ ಕೋಗಿನ ಬೈಲ್, ಮಾಸ್ತಿ ಕೊಟ್ಟಿಗೆ – ಕಾಳಿದಾಸ, ಮಧುರ ಮನಸ್ವಿ 

ಶ್ರೀ ಹಾಲಾಡಿ ಮೇಳ == ಹೆರಟೆ ಶಾಲಾ ಮೈದಾನ – ನಾಗಶ್ರೀ, ಕನಕಾಂಗಿ 

ಶ್ರೀ ಬಪ್ಪನಾಡು ಮೇಳ == ಶಿವಗಿರಿ ಕಾಂಪ್ಲೆಕ್ಸ್ ಸಂಪಿಗೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ತಳಕಲ ಮೇಳ == ಮುರನಗರ – ಶಾಂಭವಿ ವಿಲಾಸ 

ಶ್ರೀ ಸುಂಕದಕಟ್ಟೆ ಮೇಳ  == ನ್ಯೂಯಿದಗೋಳಿ ಕರಿಮಣೇಲು – ಸರ್ಪ ಸಂಬಂಧ