Sunday, August 2, 2026
Home Blog Page 80

ತನ್ನ ಬಂಧನದ ನಕಲಿ ವಿಡಿಯೋ ಸೃಷ್ಟಿಸಿದ್ದಕ್ಕಾಗಿ ಉರ್ಫಿ ಜಾವೇದ್ ಮತ್ತು ಇತರರ ವಿರುದ್ಧ ಕೇಸ್


ವೈರಲ್ ವೀಡಿಯೊದಲ್ಲಿ, ಕೆಲವು ಮಹಿಳೆಯರು ಪೋಲೀಸ್ ವೇಷಭೂಷಣದಲ್ಲಿ ಉರ್ಫಿ ಜಾವೇದ್ ನನ್ನು ಕೆಫೆಯಿಂದ ಕಸ್ಟಡಿಗೆ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತದೆ.

Uorfi ಅವರಿಗೆ ಕಾರಣವನ್ನು ಕೇಳಿದಾಗ, ಮಹಿಳಾ ‘ಪೊಲೀಸ್’ ಹೇಳುತ್ತಾಳೆ, “ಇತ್ನೆ ಚೋಟೆ ಚೋಟೆ ಕಪ್ಡೆ ಕೌನ್ ಪೆಹೆಂಕೆ ಘುಮ್ತಾ ಹೈ?”


ಸಾಮಾಜಿಕ ಮಾಧ್ಯಮದ ಪ್ರಭಾವಿ ಉರ್ಫಿ ಜಾವೇದ್ ಮತ್ತು ಇತರ ನಾಲ್ವರ ವಿರುದ್ಧ ಮುಂಬೈ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ, ಆಕೆಯನ್ನು ಬಂಧಿಸಲಾಗಿದೆ ಎಂದು ತೋರಿಸುವ ನಕಲಿ ವೀಡಿಯೊವನ್ನು ರಚಿಸಿ ಮತ್ತು ಹಂಚಿಕೊಂಡಿದ್ದಾರೆ ಎಂಬ ಕಾರಣದಿಂದ ಉರ್ಫಿ ವಿರುದ್ಧ ಕೇಸ್ ದಾಖಲಾಗಿದೆ.

ವೈರಲ್ ವೀಡಿಯೊದಲ್ಲಿ, ಕೆಲವು ಮಹಿಳೆಯರು ಪೋಲೀಸ್ ವೇಷಭೂಷಣದಲ್ಲಿ ಉರ್ಫಿ ಜಾವೇದ್ ನನ್ನು ಕೆಫೆಯಿಂದ ಕಸ್ಟಡಿಗೆ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತದೆ. Uorfi ಅವರಿಗೆ ಕಾರಣವನ್ನು ಕೇಳಿದಾಗ, ಮಹಿಳಾ ‘ಪೊಲೀಸ್’ ಹೇಳುತ್ತಾಳೆ, “ಇತ್ನೆ ಚೋಟೆ ಚೋಟೆ ಕಪ್ಡೆ ಕೌನ್ ಪೆಹೆಂಕೆ ಘುಮ್ತಾ ಹೈ (ಅಂತಹ ಸಣ್ಣ ಉಡುಗೆಯನ್ನು ಧರಿಸಿ ತಿರುಗಾಡುವವರು ಯಾರು)?”


ವಿಡಿಯೋ ವೈರಲ್ ಆದ ನಂತರ, ಯಾವುದೇ ಬಂಧನವಾಗಿಲ್ಲ ಎಂದು ಮುಂಬೈ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕೃಷ್ಣಕಾಂತ್ ಉಪಾಧ್ಯಾಯ ಹೇಳಿದ್ದಾರೆ.

ನಂತರ ದಿನದಲ್ಲಿ, ಓಶಿವಾರ ಪೊಲೀಸರು ಉರ್ಫಿ ಮತ್ತು ವೀಡಿಯೊದಲ್ಲಿ ಕಂಡುಬರುವ ಇತರ ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 171, 419, 500 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜಾವೇದ್ ಕಾನೂನು ತೊಂದರೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 2022 ರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರ ಮತ್ತು ಅಶ್ಲೀಲ ಕೃತ್ಯಗಳಿಗಾಗಿ ಆಕೆಯ ವಿರುದ್ಧ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಹನಿ ಟ್ರ್ಯಾಪಿಂಗ್ ಪ್ರಕರಣ: ಯೂಟ್ಯೂಬರ್ ನ ಹಣ ಮತ್ತು ಕಾರನ್ನು ದರೋಡೆ ಮಾಡಿದ ದುಷ್ಕರ್ಮಿಗಳ ಬಂಧನ

ಹನಿ ಟ್ರ್ಯಾಪಿಂಗ್ ಪ್ರಕರಣ: ಯೂಟ್ಯೂಬರ್ ನ ಹಣ ಮತ್ತು ಕಾರನ್ನು ದರೋಡೆ ಮಾಡಿದ ದುಷ್ಕರ್ಮಿಗಳ ಬಂಧನ


ಕೂತಟ್ಟುಕುಲಂ: ಯೂಟ್ಯೂಬರ್‌ಗೆ ಹನಿಟ್ರ್ಯಾಪ್ ಮಾಡಿ ಹಣ ಮತ್ತು ಕಾರನ್ನು ಕದ್ದ ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಇಡುಕ್ಕಿ ವಟ್ಟಪಾರ ಮೂಲದ ಪಿ.ಎಸ್.ಅಭಿಲಾಷ್ (28), ಕೊಲ್ಲಂ ಕೈತೋಡೆ ನಿಲಮೇಲ್‌ನ ಅಲ್ ಅಮೀನ್ (23), ಇಡುಕ್ಕಿಯ ಸಂತನ್‌ಪಾರ ಮೂಲದ ಪಿ.ಅತೀರಾ (28), ಇಡುಕ್ಕಿಯ ವಳಾರದ ಕೆ.ಕೆ.ಅಕ್ಷಯ (21) ಎಂಬ ಆರೋಪಿಗಳನ್ನು ತ್ರಿಪ್ಪುನಿತುರಾದಲ್ಲಿನ ಅಪಾರ್ಟ್‌ಮೆಂಟ್‌ನಿಂದ ಕೂತಟ್ಟುಕುಲಂ ಪೊಲೀಸರು ಬಂಧಿಸಿದ್ದಾರೆ.

ಕುಟುಂಬ ಸಲಹೆಗಾರರೂ ಆಗಿರುವ ಮಂಚೇರಿಯ ಯೂಟ್ಯೂಬರ್ ವಂಚನೆಗೆ ಬಲಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ತನಗೆ ಕೌನ್ಸೆಲಿಂಗ್ ಬೇಕು ಎಂದು ಹೇಳಿ ಮಧ್ಯವಯಸ್ಕನನ್ನು ಕೂತಟ್ಟುಕುಲಂನಲ್ಲಿರುವ ಬಾಡಿಗೆ ಕೋಣೆಗೆ ಕರೆದಿದ್ದಳು ಅಕ್ಷಯ.

ಅಲ್ಲಿ ಅಕ್ಷಯ ಕೊಟ್ಟ ಜ್ಯೂಸ್ ಕುಡಿದು ನಿದ್ದೆಗೆ ಜಾರಿದ್ದು, ಎದ್ದು ಬರುವಷ್ಟರಲ್ಲಿ ವಂಚನೆ ಗ್ಯಾಂಗ್ ನ ನಾಲ್ವರು ಸೇರಿ ಆಥಿರಾ ಜೊತೆ ಬೆತ್ತಲೆಯಾಗಿ ನಿಲ್ಲುವಂತೆ ಮಾಡಿ ಫೋಟೋ, ವಿಡಿಯೋ ತೆಗೆದಿದ್ದಾರೆ. ನಂತರ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು.

ಯೂಟ್ಯೂಬರ್ ತನ್ನ ಖಾತೆಯಲ್ಲಿದ್ದ 14000 ರೂಪಾಯಿಯನ್ನು ಗೂಗಲ್ ಪೇ ಮೂಲಕ ವರ್ಗಾಯಿಸುವಂತೆ ಮಾಡಲಾಗಿತ್ತು. ಆರೋಪಿಯ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಅವರ ಕಾರನ್ನು ಸಹ ಖರೀದಿಸಲಾಗಿದೆ.

ಯೂಟ್ಯೂಬರ್ ಅವರು ಕೂತಟ್ಟುಕುಲಂ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ನಿವಾಸವನ್ನು ಮೊಬೈಲ್ ಟವರ್ ಲೊಕೇಶನ್ ಮತ್ತು ವಾಹನದ ಜಿಪಿಎಸ್ ಲೊಕೇಶನ್ ಮೂಲಕ ಪತ್ತೆಹಚ್ಚಲಾಗಿದೆ.

ಲೈಂಗಿಕ ಸಂಬಂಧ ಬಯಲು ಮಾಡುವುದಾಗಿ ಬೆದರಿಸಿ ಯುವಕನಿಂದ 15 ಲಕ್ಷ ಸುಲಿಗೆಗೆ ಯತ್ನಿಸಿದ ಮಹಿಳೆ, ಸ್ನೇಹಿತನ ಬಂಧನ

ಲೈಂಗಿಕ ಸಂಬಂಧ ಬಯಲು ಮಾಡುವುದಾಗಿ ಬೆದರಿಸಿ ಯುವಕನಿಂದ 15 ಲಕ್ಷ ಸುಲಿಗೆಗೆ ಯತ್ನಿಸಿದ ಮಹಿಳೆ, ಸ್ನೇಹಿತನ ಬಂಧನ


ತಿರೂರು: ಮಹಿಳೆ ಗರ್ಭಿಣಿಯಾದ ನಂತರ ಗರ್ಭಪಾತಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಯುವಕನಿಗೆ ಬೆದರಿಸಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಲಾಗಿದೆ.

ವಯನಾಡು ಮೂಲದ, ಕೊಟ್ಟಕ್ಕಲ್ ನಿವಾಸಿ ಮುಬಾಶಿರಾ ಜುಮೈಲಾ (24) ಮತ್ತು ಆಕೆಯ ಸ್ನೇಹಿತ ಅರ್ಷದ್ ಬಾಬು (30) ಅವರನ್ನು ತಿರುರಂಗಡಿ ಪೊಲೀಸರು ಬಂಧಿಸಿದ್ದಾರೆ. ಪೆರುವಲ್ಲೂರ್ ಕರುವಾಂಕಲ್ ನಡುಕ್ಕರ ನಿವಾಸಿ 27 ವರ್ಷದ ಯುವಕನ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.

ಪೆರುವಳ್ಳೂರಿನ ಯುವಕ ಕೋಝಿಕ್ಕೋಡ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದರು. ಮುಬಾಶಿರಾ ಅವರ ಕಂಪನಿಯಲ್ಲಿ ಮೊದಲು ಕೆಲಸ ಮಾಡುತ್ತಿದ್ದರು. ಇದೇ ವೇಳೆ ಯುವಕನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಮುಬಾಶಿರಾ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮಗುವಿಗೆ ಗರ್ಭಪಾತ ಮಾಡಿಸಿದ್ದಾರೆ.

ಮುಬಾಶಿರಾ ನಿರಂತರವಾಗಿ ಯುವಕರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದು, ಯಾರಿಗೂ ಏನನ್ನೂ ಹೇಳದಂತೆ 15 ಲಕ್ಷ ರೂ ಕೊಡಬೇಕೆಂದು ಹೇಳಿದ್ದಾಳೆ. . ಇದರೊಂದಿಗೆ ಯುವಕ ಕೋಲಪ್ಪುರಂನ ಹೋಟೆಲ್‌ನಲ್ಲಿ ಮಹಿಳೆಗೆ 50 ಸಾವಿರ ರೂ. ನೀಡಿದ್ದನು. ಮಹಿಳೆ ಹಣಕ್ಕಾಗಿ ಬೆದರಿಕೆಯನ್ನು ಮುಂದುವರಿಸಿದ್ದಾಳೆ. ನಂತರ ಯುವಕನು ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ದೂರಿನೊಂದಿಗೆ ಸಂಪರ್ಕಿಸಿದನು.


ಬಾಕಿ ಹಣ ನೀಡುವುದಾಗಿ ಹೇಳಿ ಆರೋಪಿಗಳನ್ನು ಕರೆಸಿ ಬಂಧಿಸಲಾಯಿತು.

ಮದುವೆಯಾದ ಮೂರನೇ ದಿನದಲ್ಲಿ ನವದಂಪತಿ ಬರ್ಬರವಾಗಿ ಹತ್ಯೆ

ಮದುವೆಯಾದ ಮೂರನೇ ದಿನದಲ್ಲಿ ನವದಂಪತಿ ಬರ್ಬರವಾಗಿ ಹತ್ಯೆಗೀಡಾಗಿರುವುದು ಪತ್ತೆಯಾಗಿದೆ.


ಚೆನ್ನೈ: ಮದುವೆಯಾದ ಮೂರನೇ ದಿನವೇ ನವದಂಪತಿಯನ್ನು ಕಡಿದು ಕೊಲೆ ಮಾಡಲಾಗಿದೆ. ತಮಿಳುನಾಡಿನ ತೂತುಕುಡಿಯಲ್ಲಿ ಈ ಘಟನೆ ನಡೆದಿದೆ. ಮಾರಿ ಸೆಲ್ವಂ (23) ಮತ್ತು ಕಾರ್ತಿಕಾ (21) ಬರ್ಬರವಾಗಿ ಕೊಲೆಯಾದವರು.

ಹುಡುಗಿಯ ಮನೆಯವರ ವಿರೋಧದ ನಡುವೆಯೂ ಮದುವೆ ಮಾಡಿದ್ದು ಕೊಲೆಗೆ ಕಾರಣ ಎಂದು ವರದಿಯಾಗಿದೆ.


ನಿನ್ನೆ ರಾತ್ರಿ ಈ ಕೊಲೆ ನಡೆದಿದೆ. ಒಂದು ಗುಂಪು ದಂಪತಿಯ ಮನೆಗೆ ತಲುಪಿ ನಂತರ ಅವರನ್ನು ಕೊಂದಿತು. ಮೂರು ಬೈಕ್‌ಗಳಲ್ಲಿ ಬಂದಿದ್ದ ಆರು ಮಂದಿಯ ತಂಡ ಕೊಲೆಯ ಹಿಂದೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ನೇಮಿಸಲಾಗಿದೆ ಎಂದು ತೂತುಕುಡಿ ಎಸ್ಪಿ ತಿಳಿಸಿದ್ದಾರೆ. ಇಬ್ಬರೂ ಒಂದೇ ಜಾತಿಗೆ ಸೇರಿದವರಾಗಿದ್ದು, ಮಾರಿ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಕಾರ್ತಿಕಾ ಅವರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಪೊಲೀಸ್ ರಕ್ಷಣೆ ಕೋರಿ ಅಕ್ಟೋಬರ್ 30 ರಂದು ಮಾರಿ ಮತ್ತು ಕಾರ್ತಿಕಾ ಕೋವಿಲ್ಪಟ್ಟಿ ಠಾಣೆಗೆ ಬಂದಿದ್ದರು. ನಂತರ ಆ ಪ್ರದೇಶದ ದೇವಸ್ಥಾನವೊಂದರಲ್ಲಿ ಇಬ್ಬರೂ ವಿವಾಹವಾದರು.

ಕೊಲೆಯ ಹಿಂದೆ ಆಕೆಯ ಚಿಕ್ಕಪ್ಪ ಸೇರಿದಂತೆ ಆಕೆಯ ಸಂಬಂಧಿಕರು ಇದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಾರಿ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ನಾಳೆ ರಾಮಾಯಣ – ಋಷಿದರ್ಶನ ಕಾರ್ಯಕ್ರಮ

ನಾಳೆ ರಾಮಾಯಣ – ಋಷಿದರ್ಶನ ಕಾರ್ಯಕ್ರಮ


ಪುತ್ತೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಸಮಿತಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಅಂಗವಾಗಿ ರಾಮಾಯಣ – ಋಷಿದರ್ಶನ ಕಾರ್ಯಕ್ರಮ ನವೆಂಬರ್ 4ರಂದು ಅಪರಾಹ್ನ 1.30ರಿಂದ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.

ಶಾಲಾ ಆಡಳಿತ ಮಂಡಳಿ ಸಮಿತಿಯ ಅಧ್ಯಕ್ಷ ರಮೇಶ್ಚಂದ್ರ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಪ್ರವಚನ ನೀಡಲಿದ್ದಾರೆ.

ಪುತ್ತೂರಿನ ದ್ವಾರಕಾ ಕನ್‌ಸ್ಟ್ರಕ್ಷನ್ ಪ್ರವರ್ತಕ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಅಭ್ಯಾಗತರಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಶಿರಸಿಯ ಯಕ್ಷಶಾಲ್ಮಲಾ ಸಂಸ್ಥೆ ಆಯ್ಕೆ

.
ಉಡುಪಿ : ಯಕ್ಷಗಾನ ಹಾಗೂ ತಾಳಮದ್ದಲೆಯ ಪಾರಂಪರಿಕ ಸೊಬಗಿನ ಉಳಿವು ಬೆಳವಣ ಗೆಗಾಗಿ ಕಳೆದ 25 ವರ್ಷಗಳಿಂದ ಶ್ರಮಿಸುತ್ತಿರುವ ಶಿರಸಿಯ ಯಕ್ಷಶಾಲ್ಮಲ ಸಂಸ್ಥೆಯು, ಯಕ್ಷಗಾನ ಕಲಾರಂಗ ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ ‘ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ಗೆ ಆಯ್ಕೆಗೊಂಡಿದೆ.

ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಗೌರವಾಧ್ಯಕ್ಷತೆಯಲ್ಲಿ ಮಠದ ಆಶ್ರಯದಲ್ಲಿ ಯಕ್ಷಗಾನದ ಏಳ್ಗೆಗಾಗಿ ನಿರಂತರ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗೆ ಹೊಸ್ತೋಟ ಮಂಜುನಾಥ ಭಾಗವತ ಮತ್ತು ಪ್ರೊ. ಎಂ. ಎ. ಹೆಗಡೆಯವರ ಮಾರ್ಗದರ್ಶನವು ಪ್ರಾಪ್ತಿಯಾಗಿತ್ತು.

50,000/- ರೂಪಾಯಿ ನಗದು ಪುರಸ್ಕಾರಗಳನ್ನೊಳಗೊಂಡ ಪ್ರಶಸ್ತಿಯನ್ನು ನವೆಂಬರ್ 18, 2023 ಶನಿವಾರದಂದು ಶ್ರೀಕ್ಷೇತ್ರ ಕಟೀಲಿನಲ್ಲಿ ನಡೆಯುವ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯಸಾನಿಧ್ಯದಲ್ಲಿ ಪ್ರದಾನಮಾಡಲಾಗುವುದೆಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.

ಎಡನೀರು ಮಠದಲ್ಲಿ ದೇರಾಜೆಯವರ ಎರಡು ಕೃತಿಗಳ ಅನಾವರಣ

ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಮಹೋನ್ನತ ಕಲಾವಿದ ಮತ್ತು ಸಾಹಿತಿ ದೇರಾಜೆ ಸೀತಾರಾಮಯ್ಯ ಅವರ ಎರಡು ಮಹತ್ವದ ಕೃತಿಗಳ ಅನಾವರಣ ಶ್ರೀ ಎಡನೀರು ಮಠದಲ್ಲಿ ದಿನಾಂಕ 14-11-2023ರಂದು ಮಂಗಳವಾರ ಅಪರಾಹ್ನ 2 ಘಂಟೆಗೆ ನಡೆಯಲಿದೆ.

ವಿವರಗಳಿಗೆ ಚಿತ್ರ ನೋಡಿ.

ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ನಿಧನ

ಒಂದು ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರು ಇಂದು (31.10.2023) ನಿಧನರಾಗಿದ್ದಾರೆ.


ಬಾಲ್ಯದಲ್ಲಿ ಶಾಲಾ ವಿದ್ಯಾಭ್ಯಾಸದೊಂದಿಗೆ ಸಂಸ್ಕೃತ ಪಾಠವನ್ನು ಕಲಿತಿದ್ದರು. ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜಗಳೊಂದಿಗೆ ಒಡನಾಟ ಲಭ್ಯವಾಯಿತು. ದೇರಾಜೆ ಸೀತಾರಾಮಯ್ಯರಿಂದ ಪ್ರಭಾವಿತರಾದರು.

ಪೆರುವಡಿ ನಾರಾಯಣ ಭಟ್ಟರ ಯಕ್ಷಗಾನದ ಮಾತು ಕೇವಲ ಅರ್ಥವಾಗದೆ ‘ವಾಗರ್ಥ’ ವೆನಿಸಿಕೊಳ್ಳುತ್ತಿತ್ತು. ಹಾಸ್ಯಪಾತ್ರದಲ್ಲಿ ಅವರಂತೆ ಭಾಷೆಯನ್ನು ಸೊಗಸಾಗಿ ಬಳಸಿದವರಿಲ್ಲ. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೆ ಹೆಸರಾಗಿದ್ದರು.

ಅವರು ಯಜಮಾನ ನಾರಾಯಣ ಭಟ್ಟರೂ ಹೌದು! ತಮ್ಮ ಸೋದರ ಬಂಧುಗಳೊAದಿಗೆ ಒಂದು ದಶಕಕ್ಕಿಂತಲೂ ಅಧಿಕ ಕಾಲ ಮುಲ್ಕಿ ಮೇಳವನ್ನು ನಡೆಸಿದ್ದರು. ಕಾರವಾರದವರೆಗೆ ತೆಂಕುತಿಟ್ಟಿನ ದಿಗ್ವಿಜಯ ನಡೆಸಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು, ಕಿರಿಯ ಬಲಿಪ ನಾರಾಯಣ ಭಾಗವತರನ್ನು ಮುಲ್ಕಿ ಮೇಳಕ್ಕೆ ಸೇರಿಸಿದ್ದರು.

ಕಡತೋಕಾ ಮಂಜುನಾಥ ಭಾಗವತರನ್ನು ಮೊದಲ ಬಾರಿಗೆ ತೆಂಕುತಿಟ್ಟಿಗೆ ಪರಿಚಯಿಸಿದ ಕೀರ್ತಿ ಅವರದಾಗಿತ್ತು. ಪುತ್ತೂರು ನಾರಾಯಣ ಹೆಗಡೆ, ಎಂಪೆಕಟ್ಟೆ ರಾಮಯ್ಯ ರೈಯಂಥವರು ಮುಲ್ಕಿ ಮೇಳದಿಂದ ತಮ್ಮ ಯಶಸ್ವಿ ವೃತ್ತಿಬದುಕನ್ನು ಆರಂಭಿಸಿದ್ದರು. ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಜರಗಿದ, ಹಾರಾಡಿ ರಾಮ ಗಾಣಿಗ, ಕೊಕ್ಕರ್ಣೆ ನರಸಿಂಹ ಕಮ್ತಿ, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ್ಯ ರೈ, ಕಡಂದೇಲು ಪುರುಷೋತ್ತಮ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್ ಮೊದಲಾದವರ ಕೂಡುವಿಕೆಯಲ್ಲಿ ಜರಗಿದ ತೆಂಕು-ಬಡಗಿನ ಪ್ರತ್ಯೇಕ ಸ್ಪರ್ಧಾತ್ಮಕ ಪ್ರದರ್ಶನಗಳಲ್ಲಿ ಪೆರುವಡಿಯವರ ನಾರದನ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬಡಗಿನ ಸಾಲಿಗ್ರಾಮ ಮೇಳದಲ್ಲಿ ಗುಂಡ್ಮಿ ಕಾಳಿಂಗ ನಾವಡ, ಚಿಟ್ಟಾಣ ರಾಮಚಂದ್ರ ಹೆಗಡೆ ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದರು. ಸುರತ್ಕಲ್ ಮೇಳದ ‘ಪಾಪಣ್ಣ ವಿಜಯ’ದ ಪಾಪಣ್ಣನ ಪಾತ್ರದಲ್ಲಿ ಇವರನ್ನು ಮೀರಿಸಿದವರು ಇವತ್ತಿನವರೆಗೂ ಇಲ್ಲ. ಬಾಹುಕನ ಪಾತ್ರಕ್ಕೆ ಹೊಸ ಭಾವನಾತ್ಮಕ ಆಯಾಮವನ್ನು ಕೊಟ್ಟಿದ್ದರು.

ಸದಾ ಅಧ್ಯಯನಶೀಲರಾಗಿ ಇತ್ತೀಚೆಗಿನವರೆಗೂ ‘ನಳದಮಯಂತಿ’ ಕಥನದ ಬೇರೆ ಬೇರೆ ಪಾಠಾಂತರಗಳನ್ನು ಓದುತ್ತ ಪಾತ್ರವನ್ನು ಬಾಹುಕನನ್ನು ಹೇಗೆ ಹೊಸರೀತಿಯಲ್ಲಿ ಮಾಡಬಹುದೆಂದು ಯೋಚನೆ ಮಾಡುತ್ತಿದ್ದರು. ಕದ್ರಿ ಮೇಳದಲ್ಲಿ ‘ಗೆಜ್ಜೆದ ಪೂಜೆ’ ಪ್ರಸಂಗದ ಬೇಚನ ಪಾತ್ರಚಿತ್ರಣ ಇವತ್ತಿಗೂ ಸ್ಮರಣೀಯ.

ಬಪ್ಪನಾಡು ಮೇಳದಲ್ಲಿ ರಾಮದಾಸ ಸಾಮಗರ ಕೈಲಾಸ ಶಾಸ್ತ್ರಿ ಪಾತ್ರಕ್ಕೆ ಮಾಣಿಯಾಗಿ ಜನಪ್ರಿಯರಾಗಿದ್ದರು. ಪೆರುವಡಿ ನಾರಾಯಣ ಭಟ್ಟರ ಆತ್ಮಕಥನವನ್ನು ನಾ. ಕಾರಂತ ಪೆರಾಜೆಯವರು ನಿರೂಪಿಸಿದ್ದು ಅದು ಪ್ರಕಟವಾಗಿದೆ.


ಪೆರುವಡಿ ನಾರಾಯಣ ಭಟ್ಟರು ಉಡುಪಿ ಯಕ್ಷಗಾನ ಕಲಾರಂಗದ ಆಹ್ವಾನದ ಮೇರೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ‘ಯಕ್ಷಗಾನ ಕಲಾರಂಗ’ ಪ್ರಶಸ್ತಿಗೆ ಭಾಜನರಾಗಿದ್ದರು. ಎರಡು ವರ್ಷಗಳ ಹಿಂದೆ ಮಾಸಪೂರ್ತಿ ಆಯೋಜನೆಗೊಂಡ ‘ಕೋಳ್ಯೂರು ವೈಭವ’ ಸಮಾರೋಪದ ಉದ್ಘಾಟಕರಾಗಿ ಭಾಗವಹಿಸಿ ಅರ್ಥಪೂರ್ಣವಾಗಿ ಮಾತನಾಡಿದ್ದರು.

ಪೆರುವಡಿ ನಾರಾಯಣ ಭಟ್ಟರ ನಿಧನದೊಂದಿಗೆ ಯಕ್ಷಗಾನದಲ್ಲಿ ‘ಹಾಸ್ಯರಸ’ದ ಘನತೆಯ ಅಭಿವ್ಯಕ್ತಿಯ ಮಾದರಿಯೊಂದು ಮರೆಗೆ ಸರಿದಂತಾಗಿದೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಕಲಾ ಸಾಹಿತ್ಯ ಸಾಧಕ ಯು. ಬಿ. ಗೋವಿಂದಯ್ಯ



ಕಲಾರಾಧನೆ ಮತ್ತು ಕಲೋಪಾಸನೆ ಎಂಬೆರಡು ಪದಗಳು ಕೂಡ ಸಮಾನಾರ್ಥಕವಾಗಿ ಬಳಕೆಯಲ್ಲಿರುವುದನ್ನು ನಾವು ಸರ್ವೇ ಸಾಮಾನ್ಯವಾಗಿ ಕಾಣುತ್ತೇವೆ .ಒಂದು ಕಲಾ ಪ್ರಕಾರದಲ್ಲಿ ವ್ಯಸ್ತನಾದ ಸಾಧಕನೋರ್ವ ಸಾಹಿತ್ಯದ ಮತ್ತೊಂದು ಮಗ್ಗುಲಲ್ಲಿ ಸಹ ತನ್ನ ಛಾಪು ಬೀರಿದರೆ ಅದೊಂದು ಅಸಾಧಾರಣ ಸಂಗತಿಯಾಗುತ್ತದೆ.

ಕಲಾವಿದನಾಗಿ ಸಾಹಿತ್ಯಕ ಒಲವುಗಳನ್ನು, ಜೊತೆಗೆ ಆಡಳಿತಾತ್ಮಕ ನೆಲೆಯಲ್ಲಿ ತನ್ನ ವಿಶಿಷ್ಟತೆಯನ್ನು ತೋರಿದ ಮಹನೀಯರ ಬಗ್ಗೆ ಬೆಳಕು ಚೆಲ್ಲುವ ಒಂದು ಪ್ರಯತ್ನವಿದು.


ಯು ಬಿ ಗೋವಿಂದಯ್ಯ ಅಥವಾ ಯು ಬಿ ಗೋವಿಂದ ಭಟ್ಟ ಓರ್ವ ಅಪ್ರತಿಮ ಕಲಾವಿದ, ಸಂಘಟಕ. ಇವರು ಜನಿಸಿದ್ದು ಕಾಸರಗೋಡು ಜಿಲ್ಲೆಯ ದೇಲಂಪಾಡಿ ಯಲ್ಲಿ. ದಿನಾಂಕ 29.07 1928ರಂದು. ಅಜ್ಜನವರಾದ ಲಕ್ಷ್ಮೀನಾರಾಯಣ ಕಾಟೂರಾಯ ಅವರ ಮನೆಯಲ್ಲಿ. ಇವರ ತಂದೆ ಉಬರಡ್ಕ ಭೀಮಯ್ಯ, ತಾಯಿ ವೆಂಕಟಲಕ್ಷ್ಮಿ. ಇವರು ಪ್ರಾಥಮಿಕ ಶಿಕ್ಷಣವನ್ನು ಉಬರಡ್ಕ ಮತ್ತು ದೇಲಂಪಾಡಿಗಳಲ್ಲಿ ಪಡೆದರು.

ಯಕ್ಷಗಾನ ಕಲೆಯ ಕುರಿತು ಇವರಿಗೆ ಅತೀವವಾದ ಅಭಿಮಾನವಿತ್ತು .ಯಕ್ಷಗಾನ ಆಚಾರ್ಯ ಪುರುಷರಾದ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಶಿಷ್ಯರಾಗಿ ಬೆಳಕಿಗೆ ಬರುತ್ತಾರೆ. 15ರ ಎಳೆ ಹರೆಯದಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ. ಶ್ರೀಯುತರು ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥ ಧಾರಿಯಾಗಿ ಯಕ್ಷಗಾನ ನಾಟಕಗಳಲ್ಲಿ ವೇಷಧಾರಿಯಾಗಿ ನೆಗಳ್ತೆಯನ್ನು ಪಡೆದವರು . ತಾಳಮದ್ದಳೆಯಲ್ಲಿ ಖ್ಯಾತನಾಮ ಕಲಾವಿದರಾದ ಕೀರಿಕ್ಕಾಡುಮಾಸ್ಟರ್ ವಿಷ್ಣು ಭಟ್ ,ದೇರಾಜೆ ಸೀತಾರಾಮಯ್ಯ ,ಶೇಣಿ ಗೋಪಾಲಕೃಷ್ಣ ಭಟ್, ಕೊಳಂಬೆ ಪುಟ್ಟಣ್ಣಗೌಡ ಗೋಪಣ್ಣ ಪುಣಿಚತ್ತಾಯ, ಕೋಟೆ ಕುಂಜ ನಾರಾಯಣಶೆಟ್ಟಿ ಮುಂತಾದ ಅಗ್ರಮಾನ್ಯ ಕಲಾವಿದರೊಂದಿಗೆ ಕಾಣಿಸಿಕೊಂಡವರು,

ಪ್ರಭುದ್ಧ ಅರ್ಥ ದಾರಿಯಾಗಿ ಪಾತ್ರ ಗೌರವಕ್ಕೆ ಇಂಬು ನೀಡಿದವರು. ಶ್ರೀಯುತರ ಅರ್ಥಗಾರಿಕೆ ಶ್ರೋತೃಗಳ ಅಭಿಮಾನಕ್ಕೆ ಪಾತ್ರವಾದದ್ದು ಮಾತ್ರವಲ್ಲ ಪಾತ್ರೋಚಿತವಾದ ವಾದ ವಿವಾದಗಳ ಸಂದರ್ಭದಲ್ಲಿ ಓರ್ವ ಅಪ್ರತಿಮ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.ಶ್ರೀಯುತರ ಕಾರ್ಯ ವ್ಯಾಪ್ತಿ ವಿಸ್ತೃತವಾಗಿದೆ.

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿಯಾಗಿ 1945ನೇ ಇಸವಿಯಿಂದ 1973ರ ತನಕ ಕಾರ್ಯ ನಿರ್ವಹಿಸಿದ್ದಾರೆ. ಯಕ್ಷಗಾನ ಅರ್ಥಧಾರಿಯಾಗಿ ಮಾತ್ರವಲ್ಲ ,ಸಾಹಿತ್ಯಕ ನೆಲೆಯಲ್ಲೂ ಕೂಡ ಇವರ ಕೊಡುಗೆ ಗಣನೀಯವಾಗಿದೆ ಎಂಬುದು ಇಲ್ಲಿ ಗಮನಿಸತಕ್ಕ ಅಂಶ. ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನ ಪ್ರಸಂಗ ಮತ್ತಿತರ ಸಾಹಿತ್ಯ ಪ್ರಕಾರಗಳು ಮುಖ್ಯವಾಗುತ್ತವೆ.

‘ಪರಿಮಳಾ ಪರಿಣಯ’ ಎಂಬುದು ಇವರ ಲೇಖನಿಯಿಂದ ಹೊರಹೊಮ್ಮಿದ ಐತಿಹಾಸಿಕ ಯಕ್ಷಗಾನ ಪ್ರಸಂಗ . ಮರುತಾಶ್ವಮೇಧ ಪ್ರಕಟಿತ ಯಕ್ಷಗಾನ ಪ್ರಸಂಗ ಯಕ್ಷಗಾನ ರಾತ್ರಿ ಶಾಲೆ (ಯಕ್ಷಗಾನ ಸಾಮಾಜಿಕ ಪ್ರಸಂಗ) ಪ್ರಕಟಿತ. ಬನಾರಿ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕುರಿತಾಗಿ 24 ಕಂದಪದ್ಯಗಳ ರಚನೆ ಒಂದು ವಿಶಿಷ್ಟ ಸಾಹಿತ್ಯ ಕೈಂಕರ್ಯ. ಇದರೊಂದಿಗೆ ವಿಶಿಷ್ಟ ಪ್ರಯತ್ನವಾಗಿ ವಾರ್ಧಿಕ ಮತ್ತು ಭಾಮಿನಿ ಷಟ್ಪದಿಯಲ್ಲಿ ಭಗವದ್ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ.

ಗೋವಿಂದಯ್ಯನವರ ಸಾಹಿತ್ಯಕ ಕೊಡುಗೆಗಳನ್ನು ಈ ಕೆಳಗಿನಂತೆ ಕಾಣುವುದು ವಿಹಿತ. ನವ ಯುಗ—ಕವನ ಸಂಗ್ರಹ, ಆನಂದವೆಲ್ಲಿ ವಿನೋದಾತ್ಮಕ ನಾಟಕ, ಸುಗಮದ ಹಾದಿಯಲ್ಲಿ ಹಾಸ್ಯ ಕಥೆ, ಮಾನಿನಿ ರತ್ನ ಶೋಬಾನೆ ಹಾಡುಗಳು, ಪರಮಾತ್ಮ ಭಜನಾ ಗೀತೆಗಳು, ಪಯಣವೆತ್ತ ಭಾವಗೀತೆಗಳು, ವಿನೋದ ವಿಹಾರ ಲೇಖನ ಮಾಲೆಗಳು, ಬೇಕೇ ?ಆಧ್ಯಾತ್ಮಿಕ ಶಾರ್ದೂಲ ವಿಕ್ರೀಡಿತ ವೃತ್ತದೊಳಗೆ

ಶ್ರೀಯುತರು ದೇಲಂಪಾಡಿ ಸಹಕಾರಿ ಸಂಸ್ಥೆಯನ್ನು ಹುಟ್ಟು ಹಾಕಿದವರು. ಕಾಸರಗೋಡು ಕರ್ನಾಟಕ ಏಕೀಕರಣ ಸಮಿತಿಯಲ್ಲಿ ಮುತುವರ್ಜಿ ವಹಿಸಿ ಶ್ರಮಪಟ್ಟು ಭಾಗವಹಿಸಿದವರು. ಆ ಸಮಿತಿಯ ಉನ್ನತ ಪದಾಧಿಕಾರಿಗಳೊಂದಿಗೆ ಇವರು ಒಬ್ಬರಾಗಿ ಗುರುತಿಸಿಕೊಂಡಿದ್ದರು ಎಂಬುದು ಅಭಿಮಾನದ ಸಂಗತಿ. ಈ ಬಗ್ಗೆ ಹಲವು ಪ್ರತಿಭಟನಾ ಸಭೆಗಳನ್ನು ಸಂಘಟಿಸಿದ ಹಿರಿಮೆ ಇವರದ್ದಾಗಿದೆ.

ಶ್ರೀಯುತರು ಶ್ರೀನಿಲಯ, ಸಾಹಿತ್ಯ ನಿಲಯ ಪ್ರಕಾಶನಾಲಯವನ್ನು ಸ್ಥಾಪಿಸಿ ಆ ಮೂಲಕ ಹಲವಾರು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದವರು.


ಯಕ್ಷಗಾನ ಮತ್ತು ಸಾಹಿತ್ಯ ಎಂಬ ಸಶಕ್ತ ಮಾಧ್ಯಮವನ್ನು ಅತ್ಯಂತ ಆಪ್ತವಾಗಿ ಕಂಡುಂಡು ಸಾಧನಾ ಪಥದಲ್ಲಿ ಮುನ್ನಡೆದ ಶ್ರೀಯುತರು ತನ್ನ ಅಲ್ಪಾವಧಿಯ ಜೀವನ ಪಯಣದಲ್ಲಿ ಸಮಾಜಮುಖಿಯಾದ ಕಾರ್ಯ ಶೈಲಿಯನ್ನು ರೂಢಿಸಿಕೊಂಡಿದ್ದರು.ಆಮೂಲಕ ಸಾರಸ್ವತ ಲೋಕಕ್ಕೆವಿಶಿಷ್ಟ ಕೊಡುಗೆಯನ್ನು ನೀಡಿದ ಪ್ರತಿಭಾನ್ವಿತರಾಗಿ ಸಾಧಕರಿಗೆ ಸ್ಪೂರ್ತಿದಾಯಕ ರಾಗಿದ್ದಾರೆ.

ಇದೇ ತಿಂಗಳ 28 ನೇ ತಾರೀಖಿನಂದು ಬನಾರಿಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದಲ್ಲಿ ಶ್ರೀಯುತರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ.ಶ್ರೀಯುತರ ಸಂಸ್ಮರಣೆಯನ್ನು ಪ್ರಸಿದ್ದ ವೈದ್ಯ ಸಾಹಿತಿಗಳೂ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ರಮಾನಂದ ಬನಾರಿಯವರು ನೆರವೇರಿಸಿ ಕೊಡಲಿದ್ದಾರೆ .ಸಾಹಿತಿ, ಯಕ್ಷಗಾನ ಅರ್ಥ ಧಾರಿ ಶ್ರೀ ವೆಂಕಟರಾಮ್ ಭಟ್ ಸುಳ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಗೋವಿಂದಯ್ಯನವರ ಬಂಧುಗಳು ನಿಕಟವರ್ತಿಗಳು ಕಾರ್ಯಕ್ರಮದಲ್ಲಿ ಪಾಲು ಪಡೆಯಲಿದ್ದಾರೆ.ನಂತರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ನುರಿತ ಕಲಾವಿದರ ಕೂಡುವಿಕೆಯಿಂದ ನಡೆಯಲಿದೆ.

ಲೇಖಕ

ಲೇಖಕ: ನಾರಾಯಣ ತೋರಣಗಂಡಿ ಸಪ್ತಸ್ವರ ಪೈಲೂರು. ಕುಕ್ಕು ಜಡ್ಕ.

ಪ್ರೊ. ಎಂ. ಎಲ್. ಸಾಮಗರಿಗೆ ಚಿಟ್ಟಾಣಿ ಪ್ರಶಸ್ತಿ ಹಾಗೂ ಶ್ರೀಮತಿ ಬಿ. ಕೆ. ಸುಮತಿ ರಾವ್ ಅವರಿಗೆ ಟಿ. ವಿ. ರಾವ್ ಪ್ರಶಸ್ತಿ


ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ ಸಂದರ್ಭದಲ್ಲಿ ಪದ್ಮಶ್ರೀ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ.ವಿ. ರಾವ್ ಪ್ರಶಸ್ತಿಯನ್ನು ನೀಡುತ್ತಿದ್ದು

ಈ ವರ್ಷದ ಚಿಟ್ಟಾಣಿ ಪ್ರಶಸ್ತಿಗೆ ಹಿರಿಯ ಹವ್ಯಾಸಿ ಕಲಾವಿದ ಪ್ರೊ. ಎಂ. ಎಲ್. ಸಾಮಗ ಮತ್ತು ಟಿ.ವಿ. ರಾವ್ ಪ್ರಶಸ್ತಿಗೆ ಹವ್ಯಾಸಿ ಕಲಾವಿದೆ ಶ್ರೀಮತಿ ಬಿ. ಕೆ. ಸುಮತಿ ರಾವ್ ಆಯ್ಕೆಯಾಗಿದ್ದಾರೆ.

ನವಂಬರ್ 5ರಿಂದ ನವಂಬರ್ 11ರ ವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಪ್ತಾಹ ನಡೆಯಲಿದ್ದು,

ನವಂಬರ್ 11ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಮ್. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.