Wednesday, March 11, 2026
Home Blog Page 41

ತೆಂಕಣ ಶೈಲಿಯ ಹವ್ಯಕ ಯಕ್ಷಗಾನ ಕಲಾವಿದರು

ಶೀರ್ಷಿಕೆಯು ಸೂಚಿಸುವಂತೆ ತೆಂಕುತಿಟ್ಟು ಯಕ್ಷಗಾನದ ಕೀರ್ತಿಶೇಷ ಹವ್ಯಕ ಕಲಾವಿದರುಗಳ ಸಮಗ್ರ ಪರಿಚಯವು ಈ ಕೃತಿಯಲ್ಲಿದೆ. ಇದೊಂದು ಅಪೂರ್ವ ಸಂಗ್ರಹವು. ಇಷ್ಟು ಮಂದಿ ಕಲಾವಿದರ ವಿವರಗಳನ್ನು ಸಂಗ್ರಹಿಸುವುದು ಸುಲಭದ ಕಾರ್ಯವಲ್ಲ. ಇದೊಂದು ಮಹತ್ಸಾಧನೆಯೇ ಹೌದು. ನೋಡುವ ಕಣ್ಣುಗಳಿದ್ದರೆ ಸಾಧನೆಯು ಖಂಡಿತಾ ಕಾಣಿಸುತ್ತದೆ. ಮುಂದೆ ಮಾಹಿತಿ ಸಂಗ್ರಹ ಮಾಡುವವರಿಗೆ ಇದೊಂದು ಉಪಯೋಗೀ ಕೃತಿಯಾಗಿ ಪರಿಣಮಿಸುತ್ತದೆ. 

ಈ ಕೃತಿಯ ಲೇಖಕರು ಡಾ| ಶ್ರೀ ಉಪ್ಪಂಗಳ ಶಂಕರನಾರಾಯಣ ಭಟ್ಟರು. ಶ್ರೀಯುತರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರು. ಅಲ್ಲದೆ ಕೇರಳ ರಾಜ್ಯ ಕಾಲೇಜು ಮಟ್ಟದ ವಿದ್ಯಾಸಂಸ್ಥೆಗಳ ಉಪನಿರ್ದೇಶಕರಾಗಿಯೂ ನಿವೃತ್ತರು. ಸಾಹಿತ್ಯ ಕ್ಷೇತ್ರದಲ್ಲಿ ಇವರು ಅಪೂರ್ವ ಸಾಧಕರು. ಇವರು ರಚಿಸಿದ ಗ್ರಂಥಗಳು ಅನೇಕ.

ಕನ್ನಡ ಸಾಹಿತ್ಯ ಮತ್ತು ವ್ಯಾಕರಣದಲ್ಲಿ ಶ್ರೀಯುತರು ಘನ ವಿದ್ವಾಂಸರಾಗಿ ಓದುಗರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪರಿಚಿತರು. ಅನೇಕರು ಈ ವಿಚಾರದಲ್ಲಿ ಉಪ್ಪಂಗಳ ಶಂಕರನಾರಾಯಣ ಭಟ್ಟರ ಸಲಹೆಯನ್ನು ಪಡೆಯುತ್ತಾರೆ. ಇವರ ನಿರ್ದೇಶನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದವರೂ ಇದ್ದಾರೆ. ಈ ಅಪೂರ್ವ ಪುಸ್ತಕವನ್ನು ಬರೆದು ಸಮಾಜಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ. 

‘ತೆಂಕಣ ಶೈಲಿಯ ಹವ್ಯಕ ಯಕ್ಷಗಾನ ಕಲಾವಿದರು’ ಎಂಬ ಈ ಕೃತಿಯ ಪ್ರಕಾಶಕರು ಶ್ರೀರಾಮ ಪ್ರಕಾಶನ ಮಂಡ್ಯ. ಇದು 2019ರಲ್ಲಿ ಓದುಗರ ಕೈಸೇರಿತ್ತು. ನಾನ್ನೂರ ಎಂಟು ಪುಟಗಳ ಈ ಕೃತಿಯ ಬೆಲೆ ರೂಪಾಯಿ ನಾನ್ನೂರ ಐವತ್ತು ಮಾತ್ರ. ಈ ಕೃತಿಯಲ್ಲಿ ಮೊದಲಿಗೆ ಮಧೂರು ಶ್ರೀ ಮಹಾಗಣಪತಿ, ಕಣಿಪುರ ಶ್ರೀ ಗೋಪಾಲಕೃಷ್ಣ, ಕುಂಬಳೆ ಮೇಳದ ಮರದ ಗಣಪತಿ, ಕೂಡ್ಲು ಮೇಳದ ಶ್ರೀ ಗೋಪಾಲಕೃಷ್ಣ ದೇವರ ಚಿತ್ರಪಟಗಳಿವೆ. ಪ್ರೊ. ಎಂ.ಎ ಹೆಗಡೆ ಅವರು ಬರೆದ ‘ಉಪ್ಪಂಗಳರ ಮನೆಯಂಗಳದಲ್ಲಿ’ ಎಂಬ ಲೇಖನವಿದೆ. ಶ್ರೀ ಎಂ. ಸಿ ಅಚ್ಯುತಾನಂದ ಅವರ ‘ಪ್ರಕಾಶಕರ ಮಾತು’ ಎಂಬ ಬರಹವಿದೆ.

ಲೇಖಕರು ‘ವಕ್ತವ್ಯ’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಅಧ್ಯಾಯ ಒಂದರಲ್ಲಿ ದಶಾವತಾರ ಮೇಳಗಳ ವಿವರಗಳಿವೆ. ಅಧ್ಯಾಯ ಎರಡರಲ್ಲಿ ಹವ್ಯಕ ಹಿಮ್ಮೇಳ ಕಲಾವಿದರ ಪರಿಚಯವಿದೆ. ಅಧ್ಯಾಯ ಮೂರರಲ್ಲಿ ಮುಮ್ಮೇಳ ಕಲಾವಿದರ ವಿವರಗಳಿವೆ. ಇದರಲ್ಲಿ ಬಣ್ಣ, ಸ್ತ್ರೀ, ಪುಂಡು, ಪೀಠಿಕೆ, ಇದಿರು ವೇಷ, ಹಾಸ್ಯಗಾರರು ಎಂದು ಬೇರೆಬೇರೆಯಾಗಿ ಕಲಾವಿದರ ವಿವರಗಳಿವೆ.

ಅಧ್ಯಾಯ ನಾಲ್ಕರಲ್ಲಿ ತಾಳಮದ್ದಳೆ ಅರ್ಥಧಾರಿಗಳ ಮತ್ತು ಅಧ್ಯಾಯ ಐದರಲ್ಲಿ ಪ್ರಸಂಗಕರ್ತರ, ಲಿಪಿಕಾರರ ವಿವರಗಳಿವೆ. ಅಧ್ಯಾಯ ಆರರಲ್ಲಿ ಯಕ್ಷಗಾನ ಸಂಘ ಸಂಸ್ಥೆಗಳ ಪರಿಚಯವನ್ನು ನೀಡಿರುತ್ತಾರೆ. ಈ ಕೃತಿ ಬೇಕಾದವರು ಪ್ರಕಾಶಕರನ್ನು ಸಂಪರ್ಕಿಸಬಹುದು. 

ವಿಳಾಸ: ಶ್ರೀರಾಮ ಪ್ರಕಾಶನ, # 893/D, 3rd Cross, Eastern extension, Near Cheluvayya Park, Neharunagara, Mandya – 574401 Mobile: 9448930173

ಲೇಖಕರ (ಉಪ್ಪಂಗಳ ಶಂಕರನಾರಾಯಣ ಭಟ್ಟ) ಮೊಬೈಲ್ ಸಂಖ್ಯೆ : 9447469561

ಬರಹ : ರವಿಶಂಕರ್ ವಳಕ್ಕುಂಜ 

ಸ್ವಾತಂತ್ರ್ಯ ಯೋಧರ ಬಲಿದಾನದ ಸ್ಮರಣೆ ಸ್ವಾತಂತ್ರ ದಿನಾಚರಣೆಗೆ ಸಾರ್ಥಕ್ಯ

ದೇಶದ ಸ್ವಾತಂತ್ರ್ಯ ಹಾಗೂ ಸುರಕ್ಷತೆಗೆ ಹೋರಾಡಿದ, ಹೋರಾಡುತ್ತಿರುವ ವೀರ ಯೋಧರ ತ್ಯಾಗ ಬಲಿದಾನಗಳನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಭಾರತೀಯ ಸೈನ್ಯದ ನಿವೃತ್ತ ಸೇನಾನಿ ಶ್ರೀ ಉದಯಶಂಕರ್ ಮಾಣಿ ಹೇಳಿದರು.

ಅವರು ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಕ್ರೀಡಾಂಗಣದಲ್ಲಿ ಜರಗಿದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ನಾವು ಹಕ್ಕುಗಳ ಕುರಿತು ಮಾತನಾಡುವಾಗ ಕರ್ತವ್ಯಗಳನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸ್ವಾತಂತ್ರ್ಯ ಯೋಧರ ಬಲಿದಾನದ ಸ್ಮರಣೆ ಸ್ವಾತಂತ್ರ ದಿನಾಚರಣೆಗೆ ಸಾರ್ಥಕ್ಯ ನೀಡುತ್ತದೆ ಎಂದು ಅವರು ಹೇಳಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾರ್ಥಿ ನಾಯಕ ಆಕಾಶ್ ಪ್ರಭು ಸ್ವಾಗತಿಸಿ, ನರೇಂದ್ರ ಪದವಿಪೂರ್ವ ಕಾಲೇಜಿನ ಆಶಿಕಾ ರಾವ್ ವಂದಿಸಿದರು. ವಿವೇಕಾನಂದ ಬಿ ಎಡ್ ಕಾಲೇಜಿನ ಅನನ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಬಿಎಡ್ ಕಾಲೇಜ್, ನರೇಂದ್ರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ನಾಲ್ಕೂ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು.

ಬಳಿಕ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ ಇವರು ಸ್ವಾತಂತ್ರ್ಯೋತ್ಸವದ ವಿಶೇಷ ಉಪನ್ಯಾಸ ನೀಡಿದರು

ಆ ಬಳಿಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಜನರನ್ನು ಜಾಗೃತಿಗೊಳಿಸುವ ಉದ್ದೇಶವಿಟ್ಟುಕೊಂಡು ತೆಂಕಿಲ ಪರಿಸರದ ನಾಲ್ಕೂ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮಾನವ ಸರಪಳಿ ರಚಿಸಲಾಯಿತು.

ನಡೆದು ಬಂದ ದಾರಿ (ಜೀವನ ಕಥನ)

‘ನಡೆದು ಬಂದ ದಾರಿ’ ಇದು ಡಾ| ಉಪ್ಪಂಗಳ ಶ್ರೀ ಶಂಕರನಾರಾಯಣ ಭಟ್ಟರ ಜೀವನ ಕಥೆಯನ್ನು ತಿಳಿಸುವ ಕೃತಿ. ಶ್ರೀಯುತರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರು.

ಕೇರಳ ರಾಜ್ಯದ ಕಾಲೇಜು ಮಟ್ಟದ ವಿದ್ಯಾಸಂಸ್ಥೆಗಳ ಉಪನಿರ್ದೇಶಕರಾಗಿಯೂ ನಿವೃತ್ತರು. ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿಯೂ ಕಲಾ ಸೇವೆಯನ್ನು ಮಾಡಿರುವವರು. ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಮಂಡಳಿಯಲ್ಲಿ ಇವರು ಸಕ್ರಿಯರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆ ಪ್ರಶಂಸನೀಯವಾದುದು. ಅನೇಕ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುತ್ತಾರೆ.  ‘ನಡೆದು ಬಂದ ದಾರಿ’ ಎಂಬ ಪುಸ್ತಕವು 2022ರಲ್ಲಿ ಪ್ರಕಟವಾಗಿತ್ತು. ಈ ಕೃತಿಯ ಪ್ರಕಾಶಕರು ಮಂಗಳೂರಿನ ಆಕೃತಿ ಆಶ್ರಯ ಪಬ್ಲಿಕೇಷನ್ಸ್. ಇದು ನೂರಾ ಹದಿನಾರು ಪುಟಗಳ ಪುಸ್ತಕ. ಬೆಲೆ ರೂಪಾಯಿ ನೂರಾ ಇಪ್ಪತ್ತೈದು ಮಾತ್ರ.

ಪ್ರಕಾಶಕರಾದ ಶ್ರೀ ಕಲ್ಲೂರ ನಾಗೇಶ ಅವರು ‘ದಾರಿ ಮಾಡಿ ಕೊಟ್ಟವರು’ ಎಂಬ ಶೀರ್ಷಿಕೆಯಡಿ ಲೇಖನ ಬರೆದಿರುತ್ತಾರೆ. ‘ಓದುವ ಮೊದಲು’ ಎಂಬ ಬರಹದಡಿ ಲೇಖಕರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.

ಪುಸ್ತಕದ ಕೊನೆಯ ಭಾಗದಲ್ಲಿ ಲೇಖಕರ ಬದುಕಿನ, ಒಡನಾಡಿಗಳ, ಹಿರಿಯರ ಕಪ್ಪು ಬಿಳುಪಿನ ಚಿತ್ರಗಳನ್ನು ನೀಡಿರುತ್ತಾರೆ. 

ಬರಹ: ರವಿಶಂಕರ್ ವಳಕ್ಕುಂಜ 

ಕರ್ಕಿ ಪಿ. ವಿ. ಹಾಸ್ಯಗಾರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ – 2023ರ ಪ್ರಶಸ್ತಿಗೆ ದಿ. ಕರ್ಕಿ ಪಾಂಡುರಂಗ ಭಂಡಾರಿ ಮನೆತನ ಮತ್ತು 2024ರ ಪ್ರಶಸ್ತಿಗೆ ಕೆ. ಗೋವಿಂದ ಭಟ್

ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಮತ್ತು ಉತ್ತರ ಕನ್ನಡ ಸಭಾಹಿತ ಮಟ್ಟಿನ ಸಮರ್ಥ ಪ್ರತಿನಿಧಿ ದಿ. ಪಿ. ವಿ. ಹಾಸ್ಯಗಾರ, ಕರ್ಕಿ ಇವರ ನೆನಪಿನಲ್ಲಿ ಕೊಡಮಾಡುವ 2023ರ ಪ್ರಶಸ್ತಿಗೆ ದಿ. ಕರ್ಕಿ ಪಾಂಡುರಂಗ ಭಂಡಾರಿ ಮನೆತನವನ್ನು ಆಯ್ಕೆ ಮಾಡಲಾಗಿದೆ. 

2024ರ ಪ್ರಶಸ್ತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಸೂರಿಕುಮೇರಿ ಕೆ. ಗೋವಿಂದ ಭಟ್ಟರು ಭಾಜನರಾಗಿದ್ದಾರೆ. ಪ್ರತಿ ಪ್ರಶಸ್ತಿಯು 50,001 ರೂಪಾಯಿ, ಸ್ಮರಣಿಕೆ ಮತ್ತು ಇತರ ಸುವಸ್ತುಗಳನ್ನು ಒಳಗೊಂಡಿದೆ.

ಇದೇ ಸೆಪ್ಟೆಂಬರ್ 1 ರವಿವಾರದಂದು ಅಪರಾಹ್ನ 4.00 ಗಂಟೆಗೆ ಕರ್ಕಿಯ (ಹೊನ್ನಾವರ) ಹವ್ಯಕ ಸಭಾಭವನದಲ್ಲಿ ನಡೆಯಲಿರುವ ಪಿ. ವಿ. ಹಾಸ್ಯಗಾರರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಗಳು ನಡೆಯಲಿವೆ.

ಪ್ರತಿವರ್ಷದಂತೆ ಯಕ್ಷಗಾನ ಸಂಶೋಧನಾ ಕೇಂದ್ರ, ಕುಮಟಾ, ಕಡತೋಕ ಕೃಷ್ಣ ಭಾಗವತ, ಪಿ. ವಿ. ಹಾಸ್ಯಗಾರ ಸಂಸ್ಮರಣಾ ವೇದಿಕೆ, ಹೆಬ್ಳೇಕೆರಿ (ಕಡತೋಕ) , ಯಕ್ಷರಂಗ ಪತ್ರಿಕಾ ಬಳಗ, ಹಳದೀಪುರ, ಸಿರಿಕಲಾ ಮೇಳ, ಬೆಂಗಳೂರು, ಶ್ರೀ ಗಜಾನನ ಭಟ್ಟ, ಕಡತೋಕ (ಅಮೆರಿಕ) ಮತ್ತು ಕರ್ಕಿ ಹಾಸ್ಯಗಾರ ಕುಟುಂಬದವರ ಸಹಕಾರದೊಂದಿಗೆ ನಡೆಯಲಿರುವ ಸಮಾರಂಭವನ್ನು ಪಿ ವಿ. ಹಾಸ್ಯಗಾರರ ಯಕ್ಷಶಿಷ್ಯ ಬಳಗದವರು ಈ ವರ್ಷವೂ ಹಮ್ಮಿಕೊಂಡಿದ್ದಾರೆ. 

ನಿವೃತ್ತ ಪ್ರಾಚಾರ್ಯ ಮತ್ತು ಹಿರಿಯ ವಿದ್ವಾಂಸ ಪ್ರೊ. ಎಸ್. ಶಂಭು ಭಟ್ಟ, ಕಡತೋಕ ಅಧ್ಯಕ್ಷತೆ ವಹಿಸಿಲಿದ್ದಾರೆ. ನಾಡಿನ ಪ್ರಖ್ಯಾತ ವಿಜ್ಞಾನಿ ಮತ್ತು ಶಿಕ್ಷಣ ತಜ್ಞ ಡಾ. ಸುರೇಂದ್ರ ಕುಲಕರ್ಣಿ (ಬೆಂಗಳೂರು) ಸಮಾರಂಭದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಾ. ಜಿ. ಎಲ್. ಹೆಗಡೆ, ಕುಮಟಾ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.  ಶ್ರೀ ಕಡತೋಕ ಗೋಪಾಲಕೃಷ್ಣ ಭಾಗವತ (ಯಕ್ಷರಂಗ) ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಿದ್ದಾರೆ.

ಹಲವು ತಲೆಮಾರುಗಳ ಕರ್ಕಿ ಭಂಡಾರಿ ಕುಟುಂಬದ ಕಲಾವಿದರು ಕರ್ಕಿ ಮೇಳದಲ್ಲಿ ಕಲಾಸೇವೆ ಸಲ್ಲಿಸಿರುವುದು ಇಲ್ಲಿ ಸ್ಮರಣೀಯ. ಯಕ್ಷಗಾನ, ಚರ್ಮವಾದ್ಯ ತಯಾರಿಕೆ, ಮಣ್ಣಿನ ಮೂರ್ತಿಗಳ ತಯಾರಿಕೆ, ಪಂಚವಾದ್ಯ ವಾದನ ಹೀಗೆ ಬಹುಮುಖ ಕಲೆಗಳು ಭಂಡಾರಿ ಮನೆತನದಲ್ಲಿ ವಂಶಪಾರಂಪರ್ಯವಾಗಿ ಹರಿದುಬಂದಿವೆ. 

ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರು ಯಕ್ಷಗಾನದ ಇತಿಹಾಸದಲ್ಲಿ ಅತಿಹೆಚ್ಚು ವೃತ್ತಿಮೇಳಗಳ ಪ್ರದರ್ಶಗಳಲ್ಲಿ ಪಾಲ್ಗೊಂಡ ಕಲಾವಿದ ಎಂಬ ನೆಗಳ್ತೆಗೆ ಪಾತ್ರರಾಗಿದ್ದಾರೆ. ಏಳು ದಶಕಗಳ ಯಕ್ಷಗಾನದ ಅನುಭವ ಇರುವ ಭಟ್ಟರು ಅನೇಕ ಶಿಷ್ಯರಿಗೆ ಗುರುವಾಗಿ, ಪ್ರಸಂಗಕರ್ತರಾಗಿ “ದಶಾವತಾರಿ” ಎಂಬ ಗುರುತಿಸಲ್ಪಟ್ಟಿದ್ದಾರೆ.

ಸಭಾಕಾರ್ಯಕ್ರಮದ ನಂತರ ಖ್ಯಾತ ಯಕ್ಷಗಾನ ಕಲಾವಿದರಿಂದ ರುಕ್ಮಾಂಗದ ಚರಿತ್ರೆ ಆಖ್ಯಾನ ಪ್ರದರ್ಶನಗೊಳ್ಳಲಿದೆ ಎಂದು ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಿದೆ.

ಅನಿಶ್ಚಿತತೆಯಲ್ಲಿ ಶೇಖ್ ಹಸೀನಾ ಭವಿಷ್ಯ – ಆಶ್ರಯ ನೀಡುವ ಬಗ್ಗೆ ಮೀನಮೇಷ ಎಣಿಸುತ್ತಿರುವ ಬ್ರಿಟನ್

ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸದ್ಯ ದೆಹಲಿಯ ಬಳಿ ಸುರಕ್ಷಿತ ಮನೆಯಲ್ಲಿ ಉಳಿದುಕೊಂಡಿರುವುದರಿಂದ ಅವರ ಭವಿಷ್ಯದ ಮೇಲೆ ಅನಿಶ್ಚಿತತೆ ಆವರಿಸಿದೆ.
ಇಂಗ್ಲೆಂಡ್ ಆಕೆಗೆ ಆಶ್ರಯ ನೀಡುವ ಸಾಧ್ಯತೆ ಇಲ್ಲ ಹೇಳಲಾಗುತ್ತದೆ.

ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ತನ್ನ ದೇಶದಿಂದ ಪಲಾಯನ ಮಾಡಿದ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಇನ್ನೂ ದೆಹಲಿ ಬಳಿ ಸುರಕ್ಷಿತ ಮನೆಯಲ್ಲಿದ್ದಾರೆ. ಮೂಲಗಳ ಪ್ರಕಾರ, ಹಸೀನಾ ಅವರು ಎಲ್ಲಿ ಆಶ್ರಯ ಪಡೆಯುತ್ತಾರೆ ಎಂಬ ಅನಿಶ್ಚಿತತೆಯಿಂದಾಗಿ ಮುಂದಿನ 48 ಗಂಟೆಗಳ ಕಾಲ ಭಾರತದಲ್ಲಿಯೇ ಇರುತ್ತಾರೆ.

ವಿವಾದಾತ್ಮಕ ಕೋಟಾ ವ್ಯವಸ್ಥೆಗೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ವ್ಯಾಪಕ ಗಲಭೆಗಳ ನಂತರ ಶೇಖ್ ಹಸೀನಾ ಸೋಮವಾರ ಸಂಜೆ ದೆಹಲಿ ಬಳಿಯ ಹಿಂಡನ್ ವಾಯುನೆಲೆಗೆ ಬಂದಿಳಿದರು. ಆಕೆಯ ಸಹೋದರಿ ಶೇಖ್ ರೆಹಾನಾ ಬ್ರಿಟಿಷ್ ಪ್ರಜೆಯಾಗಿರುವುದರಿಂದ ಆಕೆ ಯುಕೆಯಲ್ಲಿ ಆಶ್ರಯ ಪಡೆಯಬಹುದೆಂದು ಊಹಿಸಲಾಗಿದೆ.

ಆದಾಗ್ಯೂ, ಬ್ರಿಟಿಷ್ ಸರ್ಕಾರದ ಮೂಲಗಳು ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಲಾಗುವುದಿಲ್ಲ ಎಂದು ಸೂಚಿಸಿವೆ, “ನಮ್ಮ ವಲಸೆ ನಿಯಮಗಳಲ್ಲಿ ಯಾರಿಗಾದರೂ ಆಶ್ರಯ ಅಥವಾ ತಾತ್ಕಾಲಿಕ ಆಶ್ರಯ ಪಡೆಯಲು ಇಂಗ್ಲೆಂಡ್ ಗೆ ಪ್ರಯಾಣಿಸಲು ಅನುಮತಿಸಲು ಯಾವುದೇ ಅವಕಾಶವಿಲ್ಲ” ಎಂದು ಉಲ್ಲೇಖಿಸಿದೆ.

ಅಲ್ಲದೆ, ಬ್ರಿಟನ್ ಸರ್ಕಾರವು “ಅಂತರರಾಷ್ಟ್ರೀಯ ರಕ್ಷಣೆಯ ಅಗತ್ಯವಿರುವವರು ತಾವು ತಲುಪುವ ಮೊದಲ ಸುರಕ್ಷಿತ ದೇಶದಲ್ಲಿ ಆಶ್ರಯ ಪಡೆಯಬೇಕು – ಇದು ಸುರಕ್ಷತೆಯ ವೇಗವಾದ ಮಾರ್ಗವಾಗಿದೆ” ಎಂದು ಹೇಳುತ್ತಿದೆ


1975 ರಲ್ಲಿ, ಶೇಖ್ ಹಸೀನಾ ತನ್ನ ತಂದೆ ಶೇಖ್ ಮುಜಿಬುರ್ ರೆಹಮಾನ್ ಸೇರಿದಂತೆ ತನ್ನ ಕುಟುಂಬದ ಹತ್ಯಾಕಾಂಡದ ನಂತರ ತನ್ನ ಪತಿ, ಮಕ್ಕಳು ಮತ್ತು ಸಹೋದರಿಯೊಂದಿಗೆ ಆರು ವರ್ಷಗಳ ಕಾಲ ಭಾರತದ ರಾಜಧಾನಿ ದೆಹಲಿಯ ಪಂಡರ ರಸ್ತೆಯಲ್ಲಿ ವಾಸಿಸುತ್ತಿದ್ದಳು.

ಇಂಗ್ಲೆಂಡ್ ಔಪಚಾರಿಕವಾಗಿ ಆಕೆಯ ಆಶ್ರಯವನ್ನು ನಿರಾಕರಿಸಿದರೆ ಭಾರತವು ಶೇಖ್ ಹಸೀನಾಗೆ ಆಶ್ರಯ ನೀಡಲು ಹಿಂಜರಿಯಬಹುದು. ಎಂದು ಊಹಿಸಲಾಗುತ್ತಿದೆ.

ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ

ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ

ಪುತ್ತೂರು: ಬಪ್ಪಳಿಗೆ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ನಿಯತಿ ಭಟ್ ಇವರು ಆಗಸ್ಟ್ 2ರಂದು ಕುಂದಾಪುರ ಸರಸ್ವತಿ ವಿದ್ಯಾ ಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಜುಲೈ 30 ರಂದು ಕಡಬದ, ಪಂಜ ಸರಸ್ವತಿ ವಿದ್ಯಾಮಂದಿರದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ರಿಧಮಿಕ್ ಯೋಗಾಸನ 17 ವಯೋಮಿತಿ ಒಳಗಿನ( ಕಿಶೋರ ವರ್ಗ)ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು.

ಇವರು ಪ್ರವೀಣ ದೊಡ್ಡಮಾಣಿ ಹಾಗೂ ಚಿತ್ಕಲಾ ಗೌರಿ ದಂಪತಿ ಪುತ್ರಿಯಾಗಿದ್ದಾರೆ.

ವೀಡಿಯೋ – ನೀರಜ್ ಚೋಪ್ರಾ ಅವರ 89.34 ಮೀ ಎಸೆತ! – ಪ್ಯಾರಿಸ್ ಒಲಿಂಪಿಕ್ಸ್ 2024 ರ ಜಾವೆಲಿನ್ ನೇರ ಫೈನಲ್‌ಗೆ ನೀರಜ್ ಲಗ್ಗೆ

ವೀಡಿಯೋ – ನೀರಜ್ ಚೋಪ್ರಾ ಅವರ ಮಾನ್‌ಸ್ಟರ್ 89.34 ಮೀ ಎಸೆತವು ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ 2024 ರ ಜಾವೆಲಿನ್ ಫೈನಲ್‌ಗೆ ತಲುಪಿಸಿತು.

ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಅವರು ಮಂಗಳವಾರ ನಡೆದ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲಿ 89.34 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದ ಎಸೆತದೊಂದಿಗೆ ಒಲಿಂಪಿಕ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ಫೈನಲ್‌ಗೆ ಪ್ರವೇಶಿಸಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿನ ಅವರ ಪ್ರದರ್ಶನದಂತೆಯೇ, 26 ವರ್ಷ ವಯಸ್ಸಿನ ನೀರಜ್ ತಮ್ಮ ಆರಂಭಿಕ ಎಸೆತದಲ್ಲಿ 84 ಮೀಟರ್‌ಗಳ ಸ್ವಯಂಚಾಲಿತ ಅರ್ಹತಾ ಮಾರ್ಕ್ ಅನ್ನು ದಾಟಿ ಬಿ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಪಡೆದರು.

ಅವರ ವೃತ್ತಿಜೀವನದ ಎರಡನೇ ಅತ್ಯುತ್ತಮವಾದ ಪ್ರಚಂಡ ಪ್ರಯತ್ನವೂ ಸಹ ಒಂದನೆಯ ಎಸೆತವನ್ನು ಮೀರಿಸಿದ ಸಾಧನೆ ಮಾಡಿತು. ಅವರ ವೈಯಕ್ತಿಕ ಶ್ರೇಷ್ಠತೆಯು 2022 ರಲ್ಲಿ 89.94 ಮೀ ಆಗಿದೆ.

‘ನಾಗಸಿರಿ’ – ಯಕ್ಷಗಾನ ಪ್ರದರ್ಶನ

ಮೂಡಬಿದಿರೆಯ ಕನ್ನಡ ಭವನದಲ್ಲಿ ದಿನಾಂಕ 03.08.2024ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಮತ್ತು ಅತಿಥಿ ಕಲಾವಿದರಿಂದ ‘ನಾಗಸಿರಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ತಾಲೀಮಿಗಾಗಿ ಅಲಯಾ ಫರ್ನಿಚರ್ವಾಲಾ ಅವರ ‘ಬಾಲ್ ಟು ಬಾಲ್ ಜಂಪಿಂಗ್’ – ಚೆಂಡಿನಿಂದ ಚೆಂಡಿಗೆ ಹಾರುವ ಯುವತಿಯ ಬ್ಯಾಲೆನ್ಸ್ ವೀಡಿಯೋ ನೋಡಿ



ಅಲಯಾ ಫರ್ನಿಚರ್‌ವಾಲಾ ಎಂಬ ನಟಿ ಒಬ್ಬ ಹಾರ್ಡ್‌ಕೋರ್ ಫಿಟ್‌ನೆಸ್ ಆಸಕ್ತಿ ಇರುವಾಕೆ. ತನ್ನ ದೈಹಿಕ ತರಬೇತಿಯಲ್ಲಿ ಹೊಸತನವನ್ನು ಹುಡುಕುವ ಉತ್ಸಾಹಿ. ತನ್ನ ಇತ್ತೀಚಿನ ತಾಲೀಮಿನಲ್ಲಿ ಅದನ್ನೇ ಮಾಡಿದರು. ನಟಿ ಪ್ರಯಾಸಕರವಾದ ಬಾಲ್-ಟು-ಬಾಲ್ ಜಂಪಿಂಗ್ ವ್ಯಾಯಾಮವನ್ನು ಮಾಡಲು ಯಶಸ್ವಿಯಾದರು.

ಜಿಮ್ ಬಾಲ್-ಸಂಬಂಧಿತ ವರ್ಕ್‌ಔಟ್‌ಗಳನ್ನು ನಿರ್ವಹಿಸುವಲ್ಲಿ ನಿಪುಣರಾಗಿದ್ದಾರೆ ಮತ್ತು ಅವರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ವೀಡಿಯೋದಲ್ಲಿ, ಅಲಯಾ ಮೊದಲ ವ್ಯಾಯಾಮದ ಚೆಂಡಿನ ಮೇಲೆ ಜಿಗಿಯುವುದನ್ನು ಕಾಣಬಹುದು.

ಉತ್ತಮ ಸಮತೋಲನಕ್ಕಾಗಿ ಅವಳು ತನ್ನ ಕೈಗಳನ್ನು ಮಡಚಿದಳು ಮತ್ತು ನಂತರ ಮುಂದಿನ ಚೆಂಡಿಗೆ ಹಾರಿದಳು. ಅವಳು ಕೆಲವು ಸೆಕೆಂಡುಗಳ ಕಾಲ ಆ ಚೆಂಡಿನ ಮೇಲೆ ನಿಂತಿರುವುದನ್ನು ಕಾಣಬಹುದು.

ತನ್ನ ಸಮತೋಲನವನ್ನು ಕಳೆದುಕೊಳ್ಳದೆ ನಿಂತಿರುವ ಭಂಗಿಯನ್ನು ವೀಡಿಯೋ ದಲ್ಲಿ ನೋಡಬಹುದು.

ಈ ತಾಲೀಮು ಸ್ಥಿರತೆ, ಸ್ನಾಯುವಿನ ಶಕ್ತಿ ಮತ್ತು ಸಮತೋಲನವನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ.