Wednesday, March 11, 2026
Home Blog Page 351

ಭಜನಾ ಸಂಕೀರ್ತನೆಯಲ್ಲಿ ಕ್ರಾಂತಿಯ ಅಲೆಯನ್ನೇ ಎಬ್ಬಿಸಿದ ‘ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್’

ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್(ರಿ) ಎಂಬುದು ಆಸ್ತಿಕ ಬಾಂಧವರೆಲ್ಲರಿಗೂ ಪರಿಚಿತವಾದ ಹೆಸರು. ದೇವರ ಭಜನೆ ಹಾಡುಗಳ ಗಾಯನ ಪ್ರಪಂಚದಲ್ಲಿ ಈ ಟ್ರಸ್ಟ್ ಕ್ರಾಂತಿಯನ್ನೇ ಎಬ್ಬಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. 

ಕಾಟುಕುಕ್ಕೆ ಎಂದ ಕೂಡಲೇ ನಮಗೆ ನೆನಪಾಗುವುದು ಅಪ್ರತಿಮ ಗಾಯಕ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಹೆಸರು. ಅವರ ಹಾಡುಗಳನ್ನು ಕೇಳದ ಕನ್ನಡಿಗ ಸಂಗೀತ ಪ್ರೇಮಿಗಳಿರಲಿಕ್ಕಿಲ್ಲ. ಅಂತಹ ಗಾಯಕರೊಬ್ಬರು ತಮ್ಮ ಭಜನಾ ಸಂಕೀರ್ತನೆಗಳಿಗೂ ನಾಡಿನಾದ್ಯಂತ ಹೆಸರನ್ನು ಗಳಿಸಿದ್ದಾರೆ.  

ಮಧ್ವಾಧೀಶ ಶ್ರೀ ವಿಠಲ ದಾಸ ನಾಮಾಂಕಿತ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದೊಂದಿಗೆ ಇಂದು ಹಲವಾರು ಭಜನಾ ಸಂಘಗಳು ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಕೊಡುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್ ನ ತಂಡಗಳ ಭಜನಾ  ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.  ‘ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್’ ನ  ಸುಮಾರು 130ಕ್ಕೂ ಹೆಚ್ಚು ಭಜನಾ ತಂಡಗಳು ಭಜನಾ ಗಾಯನದ ಪ್ರಸ್ತುತಿಯನ್ನು ಮಾಡುತ್ತಿವೆ. 

ಇತ್ತೀಚೆಗೆ ಅಂದರೆ  ಜ.14ರಿಂದ ಜ.17ರ ತನಕ ಸಿದ್ಧಾಪುರ ಬಾನ್ಕುಳಿಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಗೋವುಗಳ ವಿಹಂಗಮ ತಾಣ ಗೋಸ್ವರ್ಗದಲ್ಲಿ ನಡೆದ ‘ಗೋದಿನ’ ಮತ್ತು ‘ಆಲೆಮನೆ ಹಬ್ಬ’ದ ಸಂದರ್ಭದಲ್ಲಿ ಕಾಟುಕುಕ್ಕೆ ಭಜನಾ ಚ್ಯಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಗೋಸಂಕೀರ್ತನ ಕಾರ್ಯಕ್ರಮ ವಿಶಿಷ್ಟವಾಗಿ ಜರಗಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಮೇಳಗಳ ಇಂದಿನ (31.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (31.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೂರಾಡಿ ಬಾಟ್ ಮಕ್ಕಿ ವಾಸವಿ ನಿಲಯದ ಮುಂಭಾಗ – ಕನಕಾಂಗಿ ಕಲ್ಯಾಣ, ಅಗ್ರಪೂಜೆ 
ಕಟೀಲು ಒಂದನೇ ಮೇಳದುರ್ಗಾ ಕಾಂಪ್ಲೆಕ್ಸ್, ಪೊಲೀಸ್ ಸ್ಟೇಷನ್ ಬಳಿ, ಬಜಪೆ 
ಕಟೀಲು ಎರಡನೇ ಮೇಳ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಬಳಿ, ಕಲ್ಯಾ, ಕಾರ್ಕಳ 
ಕಟೀಲು ಮೂರನೇ ಮೇಳಬಡಗಬೆಳ್ಳೂರು, ಬಂಟ್ವಾಳ 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಐದನೇ ಮೇಳ ಕೊಲ್ಯ, ಸಜಿಪ ಬಂಟ್ವಾಳ 
ಕಟೀಲು ಆರನೇ ಮೇಳಪಡುಬೊಂಡಂತಿಲ ವಯಾ ನೀರುಮಾರ್ಗ, ಮಂಗಳೂರು 

ಮಂದಾರ್ತಿ ಒಂದನೇ ಮೇಳ ಕಡೆಕಾರ್, ಉಡುಪಿ 
ಮಂದಾರ್ತಿ ಎರಡನೇ ಮೇಳ ಹೆದ್ದನಬೇರು, 74ನೇ ಉಳ್ಳೂರು 
ಮಂದಾರ್ತಿ ಮೂರನೇ ಮೇಳ ನಾಲೂರು 
ಮಂದಾರ್ತಿ ನಾಲ್ಕನೇ ಮೇಳ ತತ್ತರಮಕ್ಕಿ, ಮುಂಡಾಡಿ, ಕಾಡೂರು – ಕಮಲಶಿಲೆ ಮೇಳದೊಂದಿಗೆ ಕೂಡಾಟ 
ಮಂದಾರ್ತಿ ಐದನೇ ಮೇಳ ದೊಡ್ಡಜೆಡ್ಡು ಹೆನ್ನಾಬೈಲು, ಹೊಸಂಗಡಿ 
ಶ್ರೀ ಹನುಮಗಿರಿ ಮೇಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಹಳ್ಳೆಪಳ್ಳಿ, ಮಾಳ – ಶುಕ್ರನಂದನೆ 
ಶ್ರೀ ಸಾಲಿಗ್ರಾಮ ಮೇಳತೆಕ್ಕಟ್ಟೆ ಮಲ್ಯಾಡಿ ಶ್ರೀ ನಂದಿಕೇಶ್ವರ ಸಪರಿವಾರ ದೇವಸ್ಥಾನ – ಬಯಲಾಟ – ನೂತನ ಪ್ರಸಂಗ 
ಶ್ರೀ ಪೆರ್ಡೂರು ಮೇಳಶ್ರೀ ಪಟ್ಟಾಭಿರಾಮ ಭಜನಾ ಮಂಡಳಿ, ಮಟ್ಟುಕಟಪಾಡಿ – ಬಯಲಾಟ – ಅಹಂ ಬ್ರಹ್ಮಾಸ್ಮಿ

ಶ್ರೀ ಸುಂಕದಕಟ್ಟೆ ಮೇಳ ನೆಲ್ಲಿಕಾರು ಶಾಲಾ ವಠಾರ – ಕೋಟಿ ಚೆನ್ನಯ್ಯ 
ಶ್ರೀ ದೇಂತಡ್ಕ ಮೇಳಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಜಾತ್ರೆ ಪ್ರಯುಕ್ತ – ಬ್ರಹ್ಮ ಬೈದೆರ್ 
ಶ್ರೀ ಮಾರಣಕಟ್ಟೆ ಮೇಳ ‘ಎ’ನಾಡ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಉಪ್ಪುಂದ 
ಶ್ರೀ ಪಾವಂಜೆ ಮೇಳ ಪೆರ್ಮಂಕಿ ಹೊಸಮನೆ – ಶ್ರೀ ದೇವಿ ಮಹಾತ್ಮೆ  
ಶ್ರೀ ಹಟ್ಟಿಯಂಗಡಿ ಮೇಳಕುತ್ಪಾಡಿ ರಾಮಕೃಷ್ಣ ಭಜನಾ ಮಂದಿರ – ಕಲ್ಯಾಣ ಕುಂಕುಮ 
ಕಮಲಶಿಲೆ ಮೇಳ ‘ಎ’ಕಾಡೂರು – ಮಂದಾರ್ತಿ ಮೇಳದೊಂದಿಗೆ ಕೂಡಾಟ 
ಕಮಲಶಿಲೆ ಮೇಳ ‘ಬಿ’ಕಂಬದಕೋಣಿ

ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರ ಬಪ್ಪನಾಡು – ಪಾರ್ವತಿ ಸ್ವಯಂವರ 
ಶ್ರೀ ಸಸಿಹಿತ್ಲು ಭಗವತೀ ಮೇಳ ಹಳೆಯಂಗಡಿ ಮಾತಾ ರೆಸಿಡೆನ್ಸಿ ಮುಂಭಾಗ – ರಂಗಸ್ಥಳ 
ಶ್ರೀ ಅಮೃತೇಶ್ವರೀ ಮೇಳಹಳೇ ಹುಣ್ಸೇಹಾಡಿ, ಬೇಳೂರು 
ಶ್ರೀ ಬೋಳಂಬಳ್ಳಿ ಮೇಳ ಶಂಕರನಾರಾಯಣ ಮೂಕಾಂಬಿಕಾ ಹೋಟೆಲ್ ಬಳಿ 
ಶ್ರೀ ಸೌಕೂರು ಮೇಳಕೋಣಿ ಬೊಬ್ಬರ್ಯ ದೇವಸ್ಥಾನ – ಕಾಮಿತಾರ್ಥ ಪ್ರದಾಯಿನಿ
ಶ್ರೀ ಹಾಲಾಡಿ ಮೇಳಭದ್ರಮಹಾಂಕಾಳಿ ದೇವಸ್ಥಾನ ಹಾರ್ಯಾಡಿ, ಹೆಸ್ಕುತ್ತೂರು – ಚೆಲುವೆ ಚಿತ್ರಾವತಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಕೊಕ್ಕರ್ಣೆ ಚೆಗ್ರಿಬೆಟ್ಟು ರಾಜು ಪೂಜಾರಿ ಮನೆ ವಠಾರ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳತಲ್ಲೂರು ಕೂಡ್ಲು ಗುಡ್ಡೆಯಂಗಡಿ ಬೊಬ್ಬರ್ಯ ದೇವಸ್ಥಾನ ವಠಾರ  – ಶ್ರೀ ದೇವಿ ಮಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬೈಂದೂರು ಶಿರೂರು ಕಡ್ಕೆ ಶ್ರೀ ಧೀರೇಶ್ವರ ದೇವಸ್ಥಾನದ ವಠಾರ – ನೂತನ ಪ್ರಸಂಗ  
ಶ್ರೀ ಹಿರಿಯಡಕ ಮೇಳಹಾವಂಜೆ – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಹರಳಿಮನೆ ಹೆಂಗವಳ್ಳಿ 
ಶ್ರೀ ಸಿಗಂದೂರು ಮೇಳಭಟ್ಕಳ ಹೆಬ್ಳೆ, ಭಟ್ಗಾಣಿ, ಹೊಣ್ಗಾಣಿ ಜಟ್ಟಿಗೇಶ್ವರ ದೇವಸ್ಥಾನ ಹೊನ್ನಗದ್ದೆ
ಶ್ರೀ ನೀಲಾವರ ಮೇಳ ಕುಂಜಾನುಗುಡ್ಡೆ ನಾಗಬನ ವಠಾರ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ  
ಶ್ರೀ ಮೇಗರವಳ್ಳಿ ಮೇಳ ಕೆಂದಳ ಬೈಲ್ ರೈಸ್ ಮಿಲ್ ಬಳಿ – ಕುಶಲವ, ಚಿತ್ರಾಕ್ಷಿ ಕಲ್ಯಾಣ 

ಕುಂದಾಪುರದಲ್ಲಿ ಇಂದು(30.01.2021) ‘ಶ್ರೀರಾಮ ನಿರ್ಯಾಣ’ ತಾಳಮದ್ದಳೆ ಲೈವ್ 

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ, ಕಲಾಕ್ಷೇತ್ರ ಕುಂದಾಪುರ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಲಾಮಂದಿರ, ಬೋರ್ಡ್ ಹೈಸ್ಕೂಲ್, ಕುಂದಾಪುರದಲ್ಲಿ  ನಡೆಯುತ್ತಿರುವ ಈ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಇಂದು 30.01.2021 ಶನಿವಾರ 5 ಘಂಟೆಗೆ  ‘ ಶ್ರೀರಾಮ ನಿರ್ಯಾಣ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯ ನೇರಪ್ರಸಾರ ಕಲಾಕ್ಷೇತ್ರ ಕುಂದಾಪುರದ ಫೇಸ್ಬುಕ್ ಮತ್ತು ಯೂ ಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ನೇರಪ್ರಸಾರದ ಲಿಂಕ್ ಕೆಳಗಡೆ ಇದೆ. 

ಮೇಳಗಳ ಇಂದಿನ (30.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (30.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೊಕ್ಕರ್ಣೆ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 
ಕಟೀಲು ಒಂದನೇ ಮೇಳಕಟೀಲು ಕ್ಷೇತ್ರದ ರಥಬೀದಿ 
ಕಟೀಲು ಎರಡನೇ ಮೇಳ ವೈಕುಂಠ ಭವನ. ಕೆನರಾ ಹೈಸ್ಕೂಲ್ ಮೈನ್ ಬಳಿ, ಡೊಂಗರಕೇರಿ, ಮಂಗಳೂರು 
ಕಟೀಲು ಮೂರನೇ ಮೇಳಕೈಕಂಬ 
ಕಟೀಲು ನಾಲ್ಕನೇ ಮೇಳ ಬೊಳ್ಳೊಳ್ಳಿಮಾರುಗುತ್ತು, ಶಾಂತಿನಗರ, ಕಾವೂರು 
ಕಟೀಲು ಐದನೇ ಮೇಳ ಚೈತನ್ಯ, ಕುತ್ಯಾಳ ಹೌಸ್, ಪಡುವನ್ನೂರು,ಈಶ್ವರಮಂಗಲ 
ಕಟೀಲು ಆರನೇ ಮೇಳಮಲ್ಲಿಕಟ್ಟೆ ಕದ್ರಿ ಮಾರ್ಕೆಟ್ ಬಳಿ 
ಮಂದಾರ್ತಿ ಒಂದನೇ ಮೇಳ ಹೋರ್ ಗುಂಡಿ, ಕಕ್ಕುಂಜೆ 
ಮಂದಾರ್ತಿ ಎರಡನೇ ಮೇಳ ನೆಲ್ಲಿಕಟ್ಟೆ, ಕಾವ್ರಾಡಿ 
ಮಂದಾರ್ತಿ ಮೂರನೇ ಮೇಳ ಉಳುವಳ್ಳಿ ಘಂಡಘಟ್ಟ, ಶೃಂಗೇರಿ 
ಮಂದಾರ್ತಿ ನಾಲ್ಕನೇ ಮೇಳ ಆಶೀರ್ವಾದ ನಿಲಯ, ಕೋಡಿ ಕನ್ಯಾನ 
ಮಂದಾರ್ತಿ ಐದನೇ ಮೇಳ ಸುಳುಗೋಡು, ಯಡೂರು  
ಶ್ರೀ ಹನುಮಗಿರಿ ಮೇಳ ಬೆಳ್ವೆ ಗಜಾನನ ಕ್ಯಾಶ್ಯೂಸ್ ಇಂಡಸ್ಟ್ರೀಸ್ ಮುಂಭಾಗದಲ್ಲಿ – ಶ್ರೀ ರಾಮ ಕಾರುಣ್ಯ 
ಶ್ರೀ ಸಾಲಿಗ್ರಾಮ ಮೇಳಸಂಜೆ 5 ಘಂಟೆಗೆ ಕುಮಟಾ ಗ್ರಾಮ ವಕ್ಕಲಿಗರ ಸಭಾಭವನ – ಶಶಿಪ್ರಭಾ, ವೀರಮಣಿ ಹಾಗೂ ರಾತ್ರಿ 10 ಘಂಟೆಗೆ ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನ – ದಕ್ಷ ಯಜ್ಞ, ದ್ರೌಪದಿ ಪ್ರತಾಪ 
ಶ್ರೀ ಪೆರ್ಡೂರು ಮೇಳಕದ್ರಿ ರಾಜಾಂಗಣ – ಕಂಸ, ಕಂಸ, ಕಂಸ
ಶ್ರೀ ಮಾರಣಕಟ್ಟೆ ಮೇಳ ‘ಎ’ಕಂಚಿಕಾನ್, ಬಿಜೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ನಾವುಂದ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಸಾಸ್ತಾನ 
ಶ್ರೀ ಪಾವಂಜೆ ಮೇಳ ಬಾಳಿಕೆ ಕೋರ್ದಬ್ಬು ದೈವಸ್ಥಾನ ವಠಾರ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಮಾಣೈ ಬೆಳ್ಕಲ್ಗುಡ್ಡೆ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’ಹೆಂಗವಳ್ಳಿ
ಕಮಲಶಿಲೆ ಮೇಳ ‘ಬಿ’ಶಂಕರನಾರಾಯಣ 
ಶ್ರೀ ಬಪ್ಪನಾಡು ಮೇಳಸುಬ್ರಹ್ಮಣ್ಯನಗರ ಶಾಲಾ ಮೈದಾನ, ಉಡುಪಿ ಪುತ್ತೂರು – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ಮರಕಡ ಬಸ್ ನಿಲ್ದಾಣದ ಬಳಿ – ನಾಗ ತಂಬಿಲ
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ಸಿದ್ದಾಪುರ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಮುಕ್ಕೋಡು – ಸೌಕೂರು ದುರ್ಗಾಪರಮೇಶ್ವರೀ ಮಹಾತ್ಮೆ 
ಶ್ರೀ ಹಾಲಾಡಿ ಮೇಳಯಳಂತೂರು, ಅಬ್ಬಿಮನೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 
ಶ್ರೀ ಬೆಂಕಿನಾಥೇಶ್ವರ ಮೇಳ  ಬಜಾಲ್, ಕುಡ್ತಡ್ಕ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಕಾಸನಮಕ್ಕಿ – ಶ್ರೀ ದೇವಿ ಮಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕಟಪಾಡಿ ಸುಭಾಸ್ ನಗರ ಕುರ್ಕಾಲ್ ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರ – ಪ್ರಚಂಡ ಪಂಜುರ್ಲಿ 
ಶ್ರೀ ಹಿರಿಯಡಕ ಮೇಳತೋಡಾರು ಪಡು ಪೇರಳಕಟ್ಟೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 
ಶ್ರೀ ಶನೀಶ್ವರ ಮೇಳ ಮಾರ್ಡಿ ಶಾಲಾ ವಠಾರ  
ಶ್ರೀ ಸಿಗಂದೂರು ಮೇಳದೇವಲ್ಕುಂದ ಅಮೃತ ಕಾಂಪ್ಲೆಕ್ಸ್ ವಠಾರ 
ಶ್ರೀ ನೀಲಾವರ ಮೇಳ ಶ್ರೀ ನಾಗ ಜಟ್ಟಿಗೇಶ್ವರ ದೈವಸ್ಥಾನ, ಉಪ್ಪುಂದ, ಅರೆಹಾಡಿ 
ಶ್ರೀ ಮೇಗರವಳ್ಳಿ ಮೇಳ ನಾಲೂರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ – ಪೌರಾಣಿಕ ಪ್ರಸಂಗ 

ಅನಿವಾರ್ಯ ಸಂದರ್ಭಗಳಲ್ಲಿ ಯಾವುದೇ ಪಾತ್ರ ನಿರ್ವಹಿಸಬಲ್ಲ ಆಪದ್ಬಾಂಧವ – ಎಚ್. ಉಮಾಮಹೇಶ್ವರ ಶರ್ಮ

ಯಕ್ಷಗಾನವು ಒಂದು ಸಮಷ್ಠಿ ಕಲೆ. ಶ್ರೇಷ್ಠ ಕಲಾಪ್ರಕಾರ. ಕಲಿಯುತ್ತಾ ಬೆಳೆದು ಒಂದೊಂದು ವಿಭಾಗದಲ್ಲಿ ಮಿಂಚಿ, ಹೆಸರುವಾಸಿಯಾದ ಕಲಾವಿದರು ಅನೇಕರು. ಆದರೂ ತನಗೆ ಕೊಟ್ಟ ಯಾವ ಪಾತ್ರಗಳನ್ನೂ ನಿರ್ವಹಿಸಬಲ್ಲ ಕಲಾವಿದರುಗಳೂ ಇದ್ದಾರೆ. ಅನಿವಾರ್ಯವಾದರೆ ತಾನು ಯಾವಾಗಲೂ ನಿರ್ವಹಿಸುವ ಪಾತ್ರಗಳ ಹೊರತಾಗಿ, ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರದರ್ಶನಕ್ಕೆ ತೊಂದರೆಯಾಗದಂತೆ ಸಹಕರಿಸುವ ಕಲಾವಿದರೂ ಇದ್ದಾರೆ. ಇದು ಒಂದು ಕಲೆ. ಸಾಧನೆ.

ಪ್ರತಿಯೊಂದು ಮೇಳದಲ್ಲೂ ಒಬ್ಬರೋ ಇಬ್ಬರೋ ಇಂತಹ ಸಾಮರ್ಥ್ಯ ಉಳ್ಳ ಕಲಾವಿದರಿದ್ದರೆ ಒಳ್ಳೆಯದು. ಪ್ರದರ್ಶನಕ್ಕೆ ಕೊರತೆಯಾಗದು. ಅವರನ್ನು ಗುರುತಿಸಬೇಕಾದುದು ನಮ್ಮ ಕರ್ತವ್ಯ ಅಷ್ಟೆ. ಯಾಕೆಂದರೆ ಎಲ್ಲರೂ ಆ ಸಾಹಸಕ್ಕೆ ಮನ ಮಾಡಲಾರರು. ಸ್ಥಾನ ಖಚಿತತೆ ಎಂಬುದು ನಷ್ಟವಾಗುವ ಭಯ ಇದ್ದೇ ಇರುತ್ತದೆ. ಸಾಧಕ ಬಾಧಕಗಳೆರಡೂ ಇವೆ. ಅದರಿಂದ ಉಂಟಾಗುವ ಪರಿಣಾಮಗಳೇನು? ಎಂಬುದನ್ನು ವೃತ್ತಿಕಲಾವಿದನಾಗಿ ನಾನು ತಿಳಿಯಬಲ್ಲೆ.

ಆದರೂ ಇಂತಹ ಕಲಾವಿದರು ಮೇಳಕ್ಕೆ ಅನಿವಾರ್ಯ. ‘ಆಪತ್ಬಾಂಧವ’ ಎನಿಸಿ ಮೆರೆಯುತ್ತಾರೆ. ಇಂತಹ ಕಲಾವಿದರು ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರಲ್ಲೊಬ್ಬರು ಎಚ್. ಉಮಾಮಹೇಶ್ವರ ಶರ್ಮ ಬಳ್ಳಮಂಜ. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಶ್ರೀ ಎಚ್. ಉಮಾಮಹೇಶ್ವರ ಶರ್ಮ ಮೇಳದಲ್ಲಿ ಕಲಾವಿದರಿಗೆಲ್ಲಾ ಪ್ರೀತಿಯ ‘ಉಮಣ್ಣ’. ಇವರ ಮೂಲಮನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬೇಕಲ. ಖ್ಯಾತ ಪ್ರವಾಸೀ ಕೇಂದ್ರ ಬೇಕಲಕೋಟೆಯ ಸಮೀಪದ ಹಾರ್ನಾಡು.

‘ಉಮಣ್ಣ’ ಕಾಸರಗೋಡು ಜಿಲ್ಲೆ ಬೆಳ್ಳೂರು ಪಂಚಾಯತ್ ನಾಟೆಕಲ್ಲು ಸಮೀಪದ ಕೋಳಿಕಾಲುಮೂಲೆ ಎಂಬಲ್ಲಿ ಶ್ರೀ ಎಚ್. ಗಣಪತಿ ಭಟ್ ಮತ್ತು ಲಕ್ಷ್ಮೀ ಅಮ್ಮ ದಂಪತಿಗಳಿಗೆ ಮಗನಾಗಿ 2-4-1968ರಂದು ಜನಿಸಿದರು. ಗಣಪತಿ ಭಟ್ ದಂಪತಿಗಳ ಮೂವರು ಮಕ್ಕಳಲ್ಲಿ (ಎರಡು ಹೆಣ್ಣು ಮತ್ತು ಒಂದು ಗಂಡು) ಇವರು ಕಿರಿಯವರು. ಬೆಳ್ಳೂರು ಸರಕಾರೀ ಹೈಸ್ಕೂಲಿನಲ್ಲಿ 9ನೇ ತರಗತಿ ವರೇಗೆ ಓದಿದರು.

ತಾನು ಯಕ್ಷಗಾನ ಕಲಾವಿದನಾಗಬೇಕೆಂದು ನಿರ್ಧರಿಸಿ ನಾಟ್ಯಾಭ್ಯಾಸಕ್ಕೆಂದು 1984ರಲ್ಲಿ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಶ್ರೀ ಕೆ. ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. 1985ನೇ ಇಸವಿ. ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಬಾಲ ಗೋಪಾಲರಾಗಿ ರಂಗಪ್ರವೇಶ. ‘ಪೂರ್ವರಂಗ’ದಲ್ಲಿ ಬರುವ ಎಲ್ಲಾ ವೇಷಗಳನ್ನು ಮಾಡಿ ಪ್ರಸಂಗದಲ್ಲೂ ತನಗೆ ಬಂದ ಪಾತ್ರಗಳನ್ನು ಮಾಡುತ್ತಿದ್ದರು. ಕೇಂದ್ರದಲ್ಲಿ ಕಲಿಯುತ್ತಿರುವಾಗ ಬಾಯಾರು ರಮೇಶ ಭಟ್, ಬಾಬು ಗೌಡ ಚಾರ್ಮಾಡಿ, ನಾರಾಯಣ ಸುವರ್ಣ, ಕಲ್ಲಗುಡ್ಡೆ ಲಕ್ಷ್ಮಣ, ದಾಮೋದರ ಪಾಟಾಳಿ ಮೊದಲಾದವರು ಇವರ ಸಹಪಾಠಿಗಳಾಗಿದ್ದರು.

ಸುಂಕದಕಟ್ಟೆ ಮೇಳದಲ್ಲಿ 7 ವರುಷಗಳ ತಿರುಗಾಟ. ಅಲ್ಲಿ ಭಾಗವತ ಪುತ್ತಿಗೆ ತಿಮ್ಮಪ್ಪ ರೈ, ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ತ್ರಿವಿಕ್ರಮ ಶೆಣೈ, ಕಟೀಲು ಶ್ರೀನಿವಾಸ ರಾವ್, ಬೇತ ಕುಂಞ ಕುಲಾಲ್, ವಾಟೆಪಡ್ಪು ವಿಷ್ಣುಶರ್ಮ, ಹಳುವಳ್ಳಿ ಗಣೇಶ ಭಟ್, ಚಿದಂಬರ ಬಾಬು ಮೊದಲಾದವರು ಸಹಕಲಾವಿದರಾಗಿದ್ದರು. ಹೀಗೆ ಶ್ರೇಷ್ಠ ಕಲಾವಿದರ ಒಡನಾಟದಿಂದ ನಿರಂತರ ಕಲಿಕೆಯಿಂದ ಉಮಾಮಹೇಶ್ವರ ಶರ್ಮ ಕಲಾವಿದನಾಗಿ ಬೆಳೆಯತೊಡಗಿದರು.
                         

1992ರಿಂದ ಕಟೀಲು ಮೇಳದಲ್ಲಿ ವ್ಯವಸಾಯ. ನಿರಂತರ 25 ವರುಷಗಳಿಗೂ ಮಿಕ್ಕಿ ಕಟೀಲು 4ನೇ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಬಹುಷಃ ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಹೆಚ್ಚಿನ ಎಲ್ಲಾ ವೇಷಗಳನ್ನೂ ನಿರ್ವಹಿಸಿರಬಹುದು. ಬ್ರಹ್ಮ, ವಿಷ್ಣು, ಮಧುಕೈಟಭ, ವಿದ್ಯುನ್ಮಾಲಿ, ಮಹಿಷಾಸುರ, ಸುಗ್ರೀವ, ಶ್ರೀದೇವಿ, ರಕ್ತಬೀಜ, ದೇವೇಂದ್ರ ಪಾತ್ರಗಳಲ್ಲಿ ಕಾಣಿಸಿಕೊಂಡದ್ದನ್ನು ಮೇಳದ ಸಹಕಲಾವಿದನಾಗಿ ನಾನು ನೋಡಿದ್ದೇನೆ. ಇವರು ಅನೇಕ ಸ್ತ್ರೀವೇಷಗಳಲ್ಲಿ ಅಭಿನಯಿಸಿದ್ದನ್ನು ಕಂಡಿದ್ದೇನೆ. ಬಣ್ಣದ, ನಾಟಕೀಯ ಕಿರೀಟ, ಪುಂಡುವೇಷಗಳ ನಿರ್ವಹಣೆಯನ್ನು ನೋಡಿದ್ದೇನೆ. ಗಿರಿಜಾ ಕಲ್ಯಾಣದ ತಾರಕನನ್ನು, ದೇವೇಂದ್ರನನ್ನೂ, ಮನ್ಮಥನನ್ನೂ ಹೀಗೆ ಎಲ್ಲಾ ಪ್ರಸಂಗಗಳಲ್ಲಿ ಯಾವ ಪಾತ್ರವನ್ನು ನೀಡಿದರೂ ಮಾಡಬಲ್ಲರು!

ಇಂತಹ ಕಲಾವಿದರು ಅಪರೂಪ. ಆದರೂ ಯಕ್ಷಗಾನಕ್ಕೆ ಅನಿವಾರ್ಯ. ಯಕ್ಷಗಾನ ವೇಷಭೂಷಣ ತಯಾರಿಕೆಯ ಜ್ಞಾನವೂ ಇವರಿಗಿದೆ. ಗಡ್ಡಮೀಸೆಗಳನ್ನು ಆಯಾ ವೇಷಕ್ಕೆ ತಕ್ಕಂತೆ ಸಿದ್ಧಗೊಳಿಸುತ್ತಾರೆ. ಇವರು ತಯಾರಿಸಿದ ಗಡ್ಡಮೀಸೆಗಳಿಗೆ ಉತ್ತಮ ಬೇಡಿಕೆಯಿದೆ. ಮೊದಲು ಎಂಪೆಕಟ್ಟೆ ರಾಮಯ್ಯ ರೈ, ಕಡಬ ಸಾಂತಪ್ಪನವರು ಈ ವಿಚಾರದಲ್ಲಿ ಪಳಗಿದ್ದರು. ಪ್ರಸ್ತುತ ವಸಂತ ಗೌಡರು, ವೇಣೂರು ಸದಾಶಿವ ಕುಲಾಲ್, ಸತೀಶ ನೈನಾಡು ಮೊದಲಾದವರೂ ಗಡ್ಡಮೀಸೆಗಳನ್ನು ತಯಾರಿಸುವ ವಿಚಾರ ನಮಗೆ ತಿಳಿದಿದೆ.

ಶ್ರೀ ಎಚ್. ಉಮಾಮಹೇಶ್ವರ ಶರ್ಮ ಅವರು ಕಳೆದ ಎರಡು ವರ್ಷಗಳಿಂದ, ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ ಸಂಚಾಲಕತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.), ನಿಡ್ಲೆ ಈ ಸಂಸ್ಥೆಯ ಸದಸ್ಯರಾಗಿ ಹೊರರಾಜ್ಯದ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದಾರೆ. ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ಇವರು ತೃಪ್ತರು. ತಂದೆ-ತಾಯಿಯರು, ಮಡದಿ, ಮಕ್ಕಳೊಂದಿಗೆ ಪ್ರಸ್ತುತ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಬಳ್ಳಮಂಜದಲ್ಲಿ ವಾಸಿಸುತ್ತಿದ್ದಾರೆ. ಉಮಾಮಹೇಶ್ವರರ ಪತ್ನಿ ಶ್ರೀಮತಿ ಮಂಜುಳಾ ಶರ್ಮ ಗೃಹಿಣಿ. ಪುತ್ರಿ ಮನಸ್ವೀ ಶರ್ಮ ಹಾಗೂ ಒಬ್ಬ ಪುತ್ರ ಮನನ್. ಇವರ ತಂದೆ ಗಣಪತಿ ಭಟ್ಟರು ಉತ್ತಮ ಪಾಕತಜ್ಞ (ಅಡುಗೆ ಪ್ರವೀಣ). ಉಮಾಮಹೇಶ್ವರರಿಗೂ ಈ ಕಲೆ ಸಿದ್ಧಿಸಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಬೆಂಗಳೂರಿನಲ್ಲಿ ಶ್ರೀಮತಿ ರೋಹಿಣಿ ಉದಯ್ ನೇತೃತ್ವದ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ತಂಡದಿಂದ ನೃತ್ಯ ಪ್ರದರ್ಶನ 

ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು  ಬೆಂಗಳೂರಿನಲ್ಲಿ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ತಂಡದಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು.  ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ಗುರುಗಳಾದ ಶ್ರೀಮತಿ ರೋಹಿಣಿ ಉದಯ್ ಅವರು ಈ ನೃತ್ಯ ತಂಡದ ನೇತೃತ್ವ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬೆಂಗಳೂರಿನಲ್ಲಿ ಆ ದಿನ ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. 

ಕುಂದಾಪುರದಲ್ಲಿ ಇಂದು(29.01.2021) ‘ಸುಧನ್ವ ಮೋಕ್ಷ’ ತಾಳಮದ್ದಳೆ ಲೈವ್ 

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ, ಕಲಾಕ್ಷೇತ್ರ ಕುಂದಾಪುರ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಲಾಮಂದಿರ, ಬೋರ್ಡ್ ಹೈಸ್ಕೂಲ್, ಕುಂದಾಪುರದಲ್ಲಿ  ನಡೆಯುತ್ತಿರುವ ಈ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಇಂದು 29.01.2021 ಶುಕ್ರವಾರ 5 ಘಂಟೆಗೆ  ‘ಸುಧನ್ವ ಮೋಕ್ಷ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯ ನೇರಪ್ರಸಾರ ಕಲಾಕ್ಷೇತ್ರ ಕುಂದಾಪುರದ ಫೇಸ್ಬುಕ್ ಮತ್ತು ಯೂ ಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ನೇರಪ್ರಸಾರದ ಲಿಂಕ್ ಕೆಳಗಡೆ ಇದೆ. 

31.01.2021ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣದ ಸಮಾಲೋಚನಾ ಸಭೆ ಮತ್ತು ‘ಶಲ್ಯ ಸಾರಥ್ಯ’ ತಾಳಮದ್ದಳೆ 

31.01.2021ರ ಆದಿತ್ಯವಾರ ಬೆಳಗ್ಗೆ ೧೦ ಘಂಟೆಗೆ ಸರಿಯಾಗಿ ಮೂಡಬಿದಿರೆಯ ಸಮಾಜ ಮಂದಿರದಲ್ಲಿ  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣದ ಸಮಾಲೋಚನಾ ಸಭೆ ಮತ್ತು ‘ಶಲ್ಯ ಸಾರಥ್ಯ’ ತಾಳಮದ್ದಳೆ ನಡೆಯಲಿದೆ. ಯಕ್ಷಗಾನ ಮತ್ತು ಇನ್ನಿತರ ಕಲಾ ಪ್ರಾಕಾರಗಳ ನಿರಂತರ ಅಧ್ಯಯನದ ಸದುದ್ದೇಶಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಈ ಬೃಹತ್  ಸಾಂಸ್ಕೃತಿಕ ಭವನಕ್ಕೆ ಎಲ್ಲಾ ಪ್ರದೇಶಗಳ ಸಹಭಾಗಿತ್ವವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಸಮಾಲೋಚನಾ ಸಭೆ ನಡೆಯುತ್ತಿದೆ.

ಈ ಸಮಾಲೋಚನಾ ಸಭೆಯಲ್ಲಿ ಶ್ರೀ ಹರಿಕೃಷ್ಣ ಪುನರೂರು, ಡಾ. ಎಂ. ಮೋಹನ ಆಳ್ವ, ಶ್ರೀ ಶ್ರೀಪತಿ ಭಟ್, ಶ್ರೀ ಅಭಯಚಂದ್ರ ಜೈನ್, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಎಂ. ಶಾಂತಾರಾಮ ಕುಡ್ವ, ಶ್ರೀ ಸುಬ್ರಹ್ಮಣ್ಯ ಭಟ್, ಶ್ರೀ ಪ್ರೇಮನಾಥ ಮಾರ್ಲ, ಪ್ರೊ| ಸದಾಶಿವ ಶೆಟ್ಟಿಗಾರ್, ಶ್ರೀ ಸದಾಶಿವ ರಾವ್ ಮೊದಲಾದ ಗಣ್ಯರು ಭಾಗವಹಿಸಲಿರುವರು. ಸಮಾಲೋಚನಾ ಸಭೆಯ ನಂತರ ಪ್ರಸಿದ್ಧ ಕಲಾವಿದರಿಂದ ‘ಶಲ್ಯ ಸಾರಥ್ಯ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. 

ಇಂದು (30.01.2021) ಕಾವೂರು ಶಾಂತಿನಗರದಲ್ಲಿ ಕಟೀಲು ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಆಟ

ಇಂದು, 30.01.2021ರ ಶನಿವಾರ, ರಾತ್ರಿ 9.30 ಘಂಟೆಗೆ ಸರಿಯಾಗಿ ಕಾವೂರು ಶಾಂತಿನಗರದ ಹಳೇ ಪೊಲೀಸ್ ಠಾಣೆಯ ಹಿಂಭಾಗದಲ್ಲಿ  ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಈ ಕಾರ್ಯಕ್ರಮ ನಮ್ಮ ಕುಡ್ಲ ಚಾನೆಲಿನಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಪ್ರದರ್ಶನದ ಸೇವಾಕರ್ತರು ಶ್ರೀಮತಿ ಶಾಂಭವಿ ಮತ್ತು ಶ್ರೀ ರಘುರಾಮ ಶೆಟ್ಟಿ ಮತ್ತು ಮಕ್ಕಳು. 

ಮೇಳಗಳ ಇಂದಿನ (29.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (29.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ – ನರಕಾಸುರ ಮೋಕ್ಷ, ಮೈಂದ ದ್ವಿವಿದ 
ಕಟೀಲು ಒಂದನೇ ಮೇಳಶ್ರೀ ದೇವಿಪ್ರಸಾದ್, ದಡಸ್, ಅಸೈಗೋಳಿ 
ಕಟೀಲು ಎರಡನೇ ಮೇಳ ಕೋಡಿಕಲ್, ಮಂಗಳೂರು 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ನಾಲ್ಕನೇ ಮೇಳ ಇಳಿಯೂರು, ಮಣುನಾಲ್ಕೂರು, ಬಂಟ್ವಾಳ 
ಕಟೀಲು ಐದನೇ ಮೇಳ ಕೊಳಗೆ ಹೌಸ್, ಕೊಲ್ಲಮೊಗ್ರು, ಸುಳ್ಯ 
ಕಟೀಲು ಆರನೇ ಮೇಳ7ನೇ ಬ್ಲಾಕ್, ಕೃಷ್ಣಾಪುರ, ಕಾಟಿಪಳ್ಳ ವಯಾ ಸುರತ್ಕಲ್ 

ಮಂದಾರ್ತಿ ಒಂದನೇ ಮೇಳ ಹಿಲ್ಕೊಮಮನೆ, ಜಪ್ತಿ 
ಮಂದಾರ್ತಿ ಎರಡನೇ ಮೇಳ ಮರೂರು. ಕ್ಯಾದಿಗೆಕೊಡ್ಲು, ಹೆಂಗವಳ್ಳಿ, ಬೆಳ್ವೆ 
ಮಂದಾರ್ತಿ ಮೂರನೇ ಮೇಳ ದಿಂಡ, ಕರುಣಾಪುರ 
ಮಂದಾರ್ತಿ ನಾಲ್ಕನೇ ಮೇಳ ಕಾರ್ತಿಬೆಟ್ಟು, ಅಲ್ತಾರು, ಯಡ್ತಾಡಿ 
ಮಂದಾರ್ತಿ ಐದನೇ ಮೇಳ ಕುಡುವಳ್ಳಿ, ಮಾಳೂರು 
ಶ್ರೀ ಹನುಮಗಿರಿ ಮೇಳ ಹೋಟೆಲ್ ರಂಗೋಲಿಯ ಹೊರಾಂಗಣ, ಬಿ.ಸಿ. ರೋಡ್ – ಶ್ರೀಕೃಷ್ಣ ತುಲಾಭಾರ, ಶೂರ್ಪನಖ ವಿವಾಹ, ಅಹಿರಾವಣ ಮಹಿರಾವಣ 
ಶ್ರೀ ಸಾಲಿಗ್ರಾಮ ಮೇಳಕಾಪು ಹೊಸ ಮಾರಿಗುಡಿ ಬಳಿ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಕಂಬಳಮನೆ, ಶಿರ್ಲಾಲು – ಶೂದ್ರ ತಪಸ್ವಿನಿ 
ಶ್ರೀ ಸುಂಕದಕಟ್ಟೆ ಮೇಳ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ – ನೂತನ ಪ್ರಸಂಗ 

ಶ್ರೀ ಮಾರಣಕಟ್ಟೆ ಮೇಳ ‘ಎ’ಕಾನ್ಕಿ, ಹೊಸಿಮನೆ ಜಡ್ಕಲ್ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಸಸಿಹಿತ್ಲು, ಹಟ್ಟಿಯಂಗಡಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಬಾಲಕೃಷ್ಣ ಭಜನಾ ಮಂದಿರದ ಹತ್ತಿರ, ಶಾಸ್ತ್ರಿನಗರ, ಕುಚ್ಚೂರು ಹೆಬ್ರಿ 
ಶ್ರೀ ಪಾವಂಜೆ ಮೇಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ದೇವರಬಲ್ಲೆ, ಮರೋಡಿ, ನಾರಾವಿ – ಶ್ವೇತಕುಮಾರ ಚರಿತ್ರೆ, ಭಕ್ತ ಮಾರ್ಕಂಡೇಯ 
ಶ್ರೀ ಹಟ್ಟಿಯಂಗಡಿ ಮೇಳಕೊರವಡಿ, ಹೊಳೆಕಟ್ಟು
ಕಮಲಶಿಲೆ ಮೇಳ ‘ಎ’ಶ್ರೀ ನಂದಿಕೇಶ್ವರ ದೇವಸ್ಥಾನ ಕೆಂಚನೂರು 
ಕಮಲಶಿಲೆ ಮೇಳ ‘ಬಿ’ಸುಳುಗೋಡು ಹಳ್ಳಿಹೊಳೆ – ಹಾಲಾಡಿ ಮೇಳದೊಂದಿಗೆ ಕೂಡಾಟ 

ಶ್ರೀ ಬಪ್ಪನಾಡು ಮೇಳಸುಬ್ರಹ್ಮಣ್ಯನಗರ ಶಾಲಾ ಮೈದಾನ, ಉಡುಪಿ ಪುತ್ತೂರು – ಬಂಗಾರ್ ಬಾಲೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ವಿನಾಯಕ ದೇವಸ್ಥಾನ, ಶ್ರೀ ಕ್ಷೇತ್ರ ಆನೆಗುಡ್ಡೆ, ಕುಂಭಾಶಿ
ಶ್ರೀ ಬೋಳಂಬಳ್ಳಿ ಮೇಳ ಬಾಳೆಕೊಡ್ಲು – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳವಕ್ವಾಡಿ ಹೆಗ್ಗರಬೈಲ್, ಅವತಾರ ಚಿಕ್ಕು ದೇವಸ್ಥಾನ – ಪುಷ್ಪ ಚಂದನ 
ಶ್ರೀ ಹಾಲಾಡಿ ಮೇಳಸುಳುಗೋಡು ಹಳ್ಳಿಹೊಳೆ – ಕಮಲಶಿಲೆ ಮೇಳದೊಂದಿಗೆ ಕೂಡಾಟ 
ಶ್ರೀ ಬೆಂಕಿನಾಥೇಶ್ವರ ಮೇಳ  ಕೋಡಿಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಬೆಪ್ಡೆ ಶಾಲಾ ವಠಾರ – ರಾಜವಂಶ ಗುಳಿಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೊಕ್ಕರ್ಣೆ, ಗುಡ್ಡೆಯಂಗಡಿ – ನೂತನ ಪ್ರಸಂಗ
ಶ್ರೀ ಹಿರಿಯಡಕ ಮೇಳಮೇಕಾರು ಕಂಜರ್ಲಗುಡ್ಡೆ – ಮಾಯೊದ ಅಜ್ಜೆ   
ಶ್ರೀ ಶನೀಶ್ವರ ಮೇಳ ಜಡ್ಕಲ್ ಹಣಬಿನ ಗದ್ದೆ ವಠಾರ 
ಶ್ರೀ ಸಿಗಂದೂರು ಮೇಳಶಿರೂರು (ಬೈಂದೂರು) ಹಣಬರಕೇರಿ ಮಂಜುನಾಥ ನಿಲಯ
ಶ್ರೀ ನೀಲಾವರ ಮೇಳ ಶ್ರೀ ಲಕ್ಷ್ಮೀ ವೆಂಕಟರಮಣ ಕ್ಷೇತ್ರಪಾಲ ಜಟ್ಟಿಗರಾಯ ದೇವಸ್ಥಾನ, ನಂದನವನ
ಶ್ರೀ ಮೇಗರವಳ್ಳಿ ಮೇಳ ಆಗುಂಬೆ ಗೋಪಾಲಕೃಷ್ಣ ದೇವಸ್ಥಾನ