Friday, August 28, 2026
Home Blog Page 380

ಗೋಡೆ ಚಿತ್ತಾರ – ಗೋಡೆ ನಾರಾಯಣ ಹೆಗಡೆ ಬದುಕು, ಬಣ್ಣದ ಕಥನ 

‘ಗೋಡೆ ಚಿತ್ತಾರ’ ಎಂಬ ಕೃತಿಯು ಬಡಗು ತಿಟ್ಟು ಯಕ್ಷಗಾನದ ಖ್ಯಾತ ಹಿರಿಯ ಕಲಾವಿದರಾದ ಶ್ರೀ ಗೋಡೆ ನಾರಾಯಣ ಹೆಗಡೆ ಅವರ ಬದುಕು, ಬಣ್ಣದ ಕಥನವಾಗಿ ಪ್ರಕಟವಾಗಿತ್ತು. ಇದು ಪ್ರಕಟವಾಗಿ ಓದುಗರ ಕೈ ಸೇರಿದ್ದು 2015ರಲ್ಲಿ. ಸಂಪಾದಕರು ಶ್ರೀ ಎಂ.ಕೆ ಭಾಸ್ಕರ ರಾವ್ ಅವರು. ಪ್ರಕಾಶಕರು ಪ್ರಮಾ ಪ್ರಕಾಶನ.

ಇದು ದ್ವಿತೀಯ ಮುದ್ರಣ. 2011ರಲ್ಲಿ ಮೊದಲು ಮುದ್ರಣವಾಗಿ ಪ್ರಕಟವಾಗಿತ್ತು. ಇದು ಪರಿಷ್ಕೃತ ಎರಡನೆಯ ಮುದ್ರಣ. ಶ್ರೀ ಜಿ. ಮೃತ್ಯುಂಜಯ ಅವರು ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಸಂಪಾದಕ ಶ್ರೀ ಎಂ.ಕೆ ಭಾಸ್ಕರ ರಾವ್ ಅವರು ‘ನಾಲ್ಕು ಮಾತು’ ಎಂಬ ಬರಹದಡಿ ತಮ್ಮ ಅನಿಸಿಕೆಗಳನ್ನು ತಿಳಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಅಲ್ಲದೆ ಕೃತಜ್ಞತೆ ಮತ್ತು ಎರಡನೆಯ ಮುದ್ರಣಕ್ಕೆ ಎರಡು ಮಾತು ಎಂಬ ಬರಹಗಳನ್ನೂ ನೀಡಿರುತ್ತಾರೆ. ಇದು ಒಟ್ಟು ನೂರಾ ಎಪ್ಪತ್ತೆರಡು ಪುಟಗಳಿಂದ ಕೂಡಿದೆ. ಶ್ರೀ ಗೋಡೆ ನಾರಾಯಣ ಹೆಗಡೆಯವರ ಬಗೆಗೆ ಮೊದಲೊಂದು ಲೇಖನವನ್ನು ಬರೆಯಲು ಅವಕಾಶವಾಗಿತ್ತು. ಅವರ ಕುರಿತಾದ ಪುಸ್ತಕ ಪರಿಚಯವನ್ನು ಮಾಡುವರೆ ಅವಕಾಶವಾದುದಕ್ಕೆ ಸಂತೋಷಪಡುತ್ತೇನೆ.

ಜಾಹೀರಾತು

ಈ ಪುಸ್ತಕದಲ್ಲಿ, ಕೌರವ ಕೌರವ, ಬಯಸಿ ಬಂದ ಭಾಗ್ಯವಲ್ಲ, ಬ್ರಹ್ಮ ಬ್ರಹ್ಮ ಬ್ರಹ್ಮ , ಅಕ್ರೂರನಿಗೂ ಅಸ್ತಿತ್ವ, ಮಲೆನಾಡಿನ ಮಾಲೆಯಿಂದ, ಉತ್ತರ ಕಾಣದ ಪ್ರಶ್ನೆ, ಋತುಪರ್ಣನಿಗೆ ಹೊಸ ಆಯಾಮ, ಲಕ್ಷ್ಯ-ಅಲಕ್ಷ್ಯ, ಮೂರು ತಾಸಿನ ಆಟಕ್ಕೆ ಶ್ರೀಕಾರ, ಯಕ್ಷಗಾನ-ನಾಟಕ-ತಾಳಮದ್ದಳೆ, ಬಡ ಎತ್ತಿನ ಮೇಲೆ ಬೆಟ್ಟ, ಕೈಗೆ ಬಂದಿದ್ದರೂ ದಕ್ಕಲಿಲ್ಲ, ಇಡಗುಂಜಿ ಮೇಳಕ್ಕೆ ಕರೆಯು, ಹೀಗೊಂದು ಕಹಿ ಅಧ್ಯಾಯ, ಕೆರೆಮನೆ ದೂತ-ಅಮೃತೇಶ್ವರೀ ಹತ್ತಿರ, ಸನ್ಮಾನ-ಅನುಮಾನ-ಅವಮಾನ, ಆರಂಭದ ನೋವು-ಕೊನೆಯ ಸಂತೃಪ್ತಿ, ಗಣ್ಯರ ದೃಷ್ಟಿ-ಗೋಡೆ ಪಾತ್ರ ಸೃಷ್ಟಿ, ಮರೆಯಲಾಗದ ಪ್ರಸಂಗಗಳು, ಸಂದ ಪ್ರಶಸ್ತಿಗಳು, ಗೋಡೆ ಚಿತ್ತಾರದ ಮೊದಲ ಮುದ್ರಣದ ಅನಾವರಣ, ಗೋಡೆ ಚಿತ್ತಾರ-ಒಂದಿಷ್ಟು ಅನಿಸಿಕೆ, ಚಿತ್ರಸಂಪುಟ ಎಂಬ ವಿಚಾರಗಳಡಿ ಮಾಹಿತಿಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಭುರ್ಜ್ ಖಲೀಫಾದಲ್ಲಿ ಧನಶ್ರೀ ವರ್ಮಾ ಡಾನ್ಸ್ 

ಸಾಮಾಜಿಕ ತಾಲತಾಣದಲ್ಲಿ ಈಗೀಗ ಬಹಳಷ್ಟು  ಮಾಡುತ್ತಿರುವ ಹೆಸರು ಧನಶ್ರೀ ವರ್ಮಾ ಅವರದು. ಭಾರತದ ಖ್ಯಾತ ಕ್ರಿಕೆಟರ್ ಯಜುವೇಂದ್ರ ಚಾಹಲ್ ಅವರ ಭಾವೀ ಪತ್ನಿ ಧನಶ್ರೀ ತನ್ನ ನೃತ್ಯಗಳಿಗೆ ಹೆಸರುವಾಸಿ. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನಶ್ರೀ ನೃತ್ಯ ಕಲಾವಿದೆಯೂ ಹೌದು.

ತನ್ನ ಬಹಳಷ್ಟು ನೃತ್ಯಗಳ ವೀಡಿಯೋಗಳನ್ನು ಯೂಟ್ಯೂಬ್ ಇನ್ಸ್ಟಾ ಗ್ರಾಂ ಗಳಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಐಪಿಎಲ್ ಕ್ರಿಕೆಟ್ ಪಂದ್ಯಗಳು ದುಬೈಯಲ್ಲಿ ನಡೆಯುತ್ತಾ ಇದೆ. ಹಾಗಾಗಿ ಯಜುವೇಂದ್ರ ಚಾಹಲ್ ಐಪಿಎಲ್ ಕ್ರಿಕೆಟ್ ಆಡುತ್ತಾ ಇದ್ದಾರೆ. ಜೊತೆಗೆ ಧನಶ್ರೀ ವರ್ಮಾ ಕೂಡಾ ಇದ್ದಾರೆ.

ಧನಶ್ರೀ ದುಬೈಯ ವಿಶ್ವ ವಿಖ್ಯಾತ ಭುರ್ಜ್ ಖಲೀಫಾ ಕಟ್ಟಡದ ಮೇಲೆ ಮಾಡಿದ  ಡಾನ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಾ ಇದೆ. 

ಜಬ್ಬಾರ್ ಸಮೋ – ಹುಡುಕಿ ತೆಗೆದ ಹನಿ ಹನಿಗಳು (Jabbar Samo)

ಯಾವುದೇ ಒಂದು ವಿಷಯದ ಬಗ್ಗೆ ಬರೆಯುವಾಗ ಅಥವಾ ಮಾತನಾಡುವಾಗ ಆ ವಿಚಾರದ ಬಗ್ಗೆ ಗೊತ್ತಿಲ್ಲವೆಂದೋ ಅಥವಾ ಬೇಕಾದಷ್ಟು ಮಾಹಿತಿ ಇಲ್ಲವೆಂದೋ ಆ ವಿಚಾರವನ್ನು ಅಲ್ಲಿಗೆ ಬಿಟ್ಟು ಬಿಡುತ್ತೇವೆ. ಅದರ ಬಗ್ಗೆ ತಿಳಿದಿರುವ ವಿಚಾರಗಳನ್ನು ಮರೆತುಬಿಡುತ್ತೇವೆ. ವ್ಯಕ್ತಿಯೇ ಇರಲಿ ಅಥವಾ ವಸ್ತುವೇ ಇರಲಿ ಪೂರ್ಣವಾಗಿ ಅರಿತಿರುವುದು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಆದುದರಿಂದ ಮಾನವನ ದುರ್ಬಲತೆಯ ಒಂದು ಅಂಗವೆಂಬಂತೆ ನಾವು ತಿಳಿದಿರುವ ವಿಚಾರಗಳಿಗಿಂತ ತಿಳಿಯದಿರುವ ಸಂಗತಿಗಳಿಗೇ ಹೆಚ್ಚು ಚಿಂತಿಸುತ್ತೇವೆ. ತಿಳಿಯಲು ಪ್ರಯತ್ನವನ್ನು ಮಾಡದೇ ಇರುವುದೂ ನಮ್ಮ ಅಜ್ಞಾನಕ್ಕೆ ಮೂಲವೇ ಆಗಿರುವುದರಿಂದ ಜ್ಞಾನದ ಹಂಬಲಕ್ಕಾಗಿ ವಿವಿಧ ಮೂಲಗಳನ್ನು ಎಡತಾಕುವುದು ತಪ್ಪು ಎಂದು ಭಾವಿಸಬಾರದು.  

ಕಲಾವಿದರಾಗಿ, ಪಾಂಡಿತ್ಯಪೂರ್ಣ ಅರ್ಥಧಾರಿಯಾಗಿ ನನಗೆ ಜಬ್ಬಾರ್ ಸಮೋ ಗೊತ್ತು. ಅವರ ನಿರರ್ಗಳ ಮಾತುಗಾರಿಕೆ, ಅರ್ಥ ಹೇಳಲು ಕುಳಿತರೆ ಪುರಾಣ ಪಾತ್ರಗಳ ಆಳಕ್ಕೆ ಇಳಿದು ತಾನೂ ಪಾತ್ರವೇ ಆಗಿಬಿಡುವ ಅವರ ಜ್ಞಾನದ ಆಳವೂ ಎಷ್ಟಿದೆಯೆಂದು ಗೊತ್ತಿದೆ. ಆದರೆ ತಾಳಮದ್ದಳೆ ರಂಗದಿಂದ ಹೊರಗೆ ಒಬ್ಬ ವ್ಯಕ್ತಿಯಾಗಿ ಜಬ್ಬಾರ್ ಸಮೋ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ ತಿಳಿಯುವ ಪ್ರಯತ್ನ ಮಾಡಿದರೆ ಅದರಲ್ಲಿ ಆಶ್ಚರ್ಯಪಡುವ ವಿಚಾರಗಳೇನೂ ಇರಲಾರದು ಎಂದು ಭಾವಿಸುತ್ತೇನೆ. ಆದುದರಿಂದ ಅವರ ಬಗ್ಗೆ ಹುಡುಕಿ ತೆಗೆದ ಹನಿ ಹನಿಗಳನ್ನು ಈಗ ಒಟ್ಟು ಮಾಡುವ ಸಣ್ಣ ಪ್ರಯತ್ನ ಮಾಡುವೆ.  

ಸಾಂಸ್ಕೃತಿಕ ರಂಗವು ನಾಟ್ಯವಾಡುವ ನವಿಲಿನಂತೆ ತನ್ನ ಇರವನ್ನು ಪ್ರದರ್ಶಿಸುತ್ತಿದ್ದ ಹಾಗೂ ಕಲಾ ಶ್ರೀಮಂತಿಕೆಯಿಂದ ಕೂಡಿದ ಸಂಪಾಜೆ ಎಂಬ ಊರಿನ ಜೊತೆಗೆ ಅದೆಷ್ಟೋ ಕಲಾವಿದರ, ಕಲಾಭಿಮಾನಿಗಳ ಮತ್ತು ಕಲಾಪೋಷಕರ ಹೆಸರು ಥಳಕು ಹಾಕಿಕೊಂಡಿದೆ. ಸಂಪಾಜೆಯ ಮಣ್ಣಿನ ಕಣ ಕಣದಲ್ಲೂ ಕಲೆಯ ವಾಸನೆಯಿರುವುದರಿಂದ, ಪ್ರತಿಯೊಬ್ಬರ ರಕ್ತದಲ್ಲಿಯೂ ಯಕ್ಷಗಾನವೆಂಬ ಪ್ಲಾಸ್ಮಾ ಇರುವುದರಿಂದ, ಉಸಿರಾಡುವ ಬಿಸಿಯುಸಿರಲ್ಲಿಯೂ ಯಕ್ಷಗಾನದ ಲಯ ವಿನ್ಯಾಸಗಳಿರುವುದರಿಂದ ಜಬ್ಬಾರ್ ಸಮೋ ಎಂಬ ಹುಡುಗ ಈ ರೀತಿ ನೋಡಿದವರು ಮೂಗಿಗೆ ಬೆರಳಿಟ್ಟು ನೋಡುವ ಪರಿಯಲ್ಲಿ ಬೆಳೆದು ನಿಂತದ್ದರಲ್ಲಿ ಈಗೀಗ ಅಚ್ಚರಿಯೇನೂ ಕಾಣಿಸುವುದಿಲ್ಲ. 

ಕಲ್ಲುಗುಂಡಿಯ ರಾಮಕೃಷ್ಣ ಭಜನಾ ಮಂದಿರದಲ್ಲಿ ಮೊಳೆತು, ಚಿಗುರಿ, ಬೆಳೆದ ಕಲೆಯ ತರು, ಕುಸುಮಗಳು  ಈಗ ಕರುನಾಡಿನ ಎಲ್ಲೆಡೆಯಲ್ಲಿ ರುಚಿಯಾದ ಫಲಗಳನ್ನು ಕೊಡುತ್ತಿವೆ. ಅಂತಹಾ ಪ್ರತಿಭೆಗಳೆಲ್ಲಾ ತಮ್ಮ ಹೆಸರಿನ ಜೊತೆಗೆ ಸಂಪಾಜೆ ಎಂಬ ಆ ಪುಣ್ಯ ಭೂಮಿಯ ನಾಮಧೇಯವನ್ನು ಜೋಡಿಸಿ ಇರಿಸಿಕೊಂಡದ್ದು ಮನಸ್ಸಿನಲ್ಲಿ, ತನುವಿನಲ್ಲಿ ಪುಳಕಗಳ ಅಲೆಯನ್ನೆಬ್ಬಿಸುತ್ತದೆ. ತಾವು ಎಲ್ಲಿಯೇ ಹೋದರೂ, ಜೀವನದ ಪ್ರವಾಹದ ಅಲೆಯಲ್ಲಿ ಜೊತೆ ಜೊತೆಗೆ ಈಜಿ ಯಾವುದೇ ದಡವನ್ನು ಸೇರಿದ್ದರೂ ಹುಟ್ಟಿದ ಭೂಮಿಯ ಜೊತೆ ತನ್ನನ್ನು ಗುರುತಿಸಿಕೊಳ್ಳಲು ಇಷ್ಟಪಡುವ “ಜನನಿ ಜನ್ಮಭೂಮಿಶ್ಚ..” ಎಂಬ ಮನಸುಗಳು ತುಂಬಾ ಇಷ್ಟವಾಗುತ್ತವೆ. ಆದುದರಿಂದ ಜಬ್ಬಾರ್ ಎಂಬ ಸಂಪಾಜೆಯ ಕುಡಿ ಕೂಡಾ ತನ್ನ ಊರನ್ನು ಮರೆಯಲಿಲ್ಲ. ತನಗೆ ಸಾಂಸ್ಕೃತಿಕ ರುಚಿಯನ್ನು ಹತ್ತಿಸಿದ, ಮನಸ್ಸಿನ ನಾಲಗೆಗೆ ಕಲೆಯ ಸವಿಯನ್ನು ಉಣಿಸಿದ ಊರಿಗೆ ಸದಾ ಕೃತಜ್ಞನಾಗಿರುತ್ತಾ ‘ಜಬ್ಬಾರ್ ಸಮೋ ಸಂಪಾಜೆ’ ಎಂದೇ ಪ್ರಸಿದ್ಧನಾದ. 

ಹಾಗೆ ನೋಡಿದರೆ ಶ್ರೀ ಜಬ್ಬಾರ್ ಸಮೋ ಅವರ ಕಲಾ ಪ್ರೌಢಿಮೆಗೆ ಸಾಕ್ಷಿಯಾದದ್ದು ಕೂಡಾ ಕಲ್ಲುಗುಂಡಿಯ ರಾಮಕೃಷ್ಣ ಭಜನಾ ಮಂದಿರವೇ. ಅಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಆಟ ಕೂಟಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದ ಜಬ್ಬಾರರು ಮುಂದೊಂದು ದಿನ ಯಾರೂ ನಿರೀಕ್ಷಿಸದೆ ಇದ್ದ ಎತ್ತರಕ್ಕೆ ಬೆಳೆದರು. ಜಬ್ಬಾರ್ ಎಷ್ಟೋ ಎತ್ತರಕ್ಕೆ ಬೆಳೆದರು. ಎಷ್ಟು ಎತ್ತರಕ್ಕೆ ಎಂದರೆ ಅವರ ಅರ್ಥಗಾರಿಕೆಯನ್ನು ಕೇಳಲೆಂದೇ ದೂರದೂರಿಂದ ಕಾರಿನಲ್ಲಿ ಬರುವ ಆಸಕ್ತಿಯುಳ್ಳ ಜನರ ಪ್ರಭಾವಲಯವನ್ನು ನಿರ್ಮಿಸುವಷ್ಟು. ಜಬ್ಬಾರ್ ಸಮೋ ಅವರ ಅರ್ಥಗಾರಿಕೆಯ ಶೈಲಿ ಮತ್ತು ಪಾಂಡಿತ್ಯ ಇಂದು ಜನಜನಿತವಾಗಿದೆ. ಯಾವುದೇ ಪಾತ್ರಗಳನ್ನೂ ಅವರು ನಿರ್ವಹಿಸುವ ರೀತಿ, ಕನ್ನಡ ಭಾಷೆಯ ಮೇಲೆ ಅವರಿಗಿರುವ ಪ್ರಭುತ್ವ, ಶಬ್ದ ಪ್ರಯೋಗಗಳಲ್ಲಿ ತೋರುವ ವೈವಿಧ್ಯತೆ ಇದೆಲ್ಲಾ ಅವರಲ್ಲಿ ಇರುವ ಮತ್ತು ನಾನು ಅರ್ಥ ಮಾಡಿಕೊಂಡ ವಿಶೇಷತೆಗಳು. ಪುರಾಣ ಪಾತ್ರಗಳ ಜೊತೆ ಸರ್ಕಸ್ ಮಾಡುವ, ಪಾತ್ರಸ್ವಭಾವ ಮತ್ತು ಪುರಾಣ ಕಥೆಗಳನ್ನು ಅರೆದು ಕುಡಿದು ಕರಗತ ಮಾಡಿಕೊಂಡ ಶ್ರೀ ಜಬ್ಬಾರ್ ಸಮೋ ಅವರು ಇಂದು ತಾಳಮದ್ದಳೆ ಲೋಕ ಕಂಡ ಓರ್ವ ಸಮರ್ಥ, ಜನಪ್ರಿಯ ಪ್ರಬುದ್ಧ ಅರ್ಥಧಾರಿ. ಅರ್ಥಧಾರಿಯಾಗಿ ಅವರು ಹೇಗೆ ಎಂಬುದನ್ನು ಅವರ ರಂಗದ ನಿರ್ವಹಣೆಯನ್ನು ಆಸ್ವಾದಿಸಿದ ಎಲ್ಲರಿಗೂ ಅರ್ಥವಾಗಿರಬಹುದಾದ ವಿಚಾರ.

ಆದರೆ ರಂಗದ ಹೊರಗೆಯೂ ಜಬ್ಬಾರ್ ಸಮೋ ಅವರನ್ನು ಇಷ್ಟಪಡುವ ಅಸಂಖ್ಯಾತ ಮನಸುಗಳಿವೆ. ಜಬ್ಬಾರ್ ಬಹಳ ಬೇಗ ಆತ್ಮೀಯರಾಗಿಬಿಡುವ ಸ್ವಭಾವದವರು ಎಂದು ನಾನು ಕೇಳಿ ಬಲ್ಲೆ. ಹಾಗೆಂದು ನಾನು ಅವರಲ್ಲಿ ಅಷ್ಟಾಗಿ ಮಾತನಾಡಿದವನೇ ಅಲ್ಲ. ಫೋನ್ ನಲ್ಲಿ ಒಮ್ಮೆ ಮಾತನಾಡಿದ್ದೆ. ನಿಮ್ಮದೊಂದು ಸಂದರ್ಶನ ಮಾಡಬೇಕಿತ್ತು ಎಂದು ಹೇಳಿದ್ದೆ. ಅವರು ನಯವಾಗಿ ತಿರಸ್ಕರಿಸಿದ್ದರು. ಅದಕ್ಕೆ ಅವರದೇ ಆದ ಕಾರಣಗಳು ಇರಬಹುದು.  ಜಬ್ಬಾರ್ ಅವರು ಜನಪ್ರಿಯತೆಯನ್ನು ಪಡೆದ ಕಲಾವಿದರಾಗಿದ್ದರೂ ಅಷ್ಟೇ ಸರಳ ಮತ್ತು ವಿನಯವಂತ ವ್ಯಕ್ತಿಯಾಗಿದ್ದರು. ಭಾಗವತರಾದ ಸುಬ್ರಾಯ ಸಂಪಾಜೆ ಅವರು ತನ್ನ ಫೇಸ್ಬುಕ್ ಖಾತೆನಲ್ಲಿ ಜಬ್ಬಾರ್ ಅವರ ಒಂದು ಮಾನವೀಯತೆಗೆ ಉದಾಹರಣೆಯಾಗಿ ನಡೆದ ಘಟನೆಯೊಂದನ್ನು ಬರೆದಿದ್ದರು. ಅದನ್ನು ಓದಿದ ನನಗೆ ಕಣ್ಣು ಹನಿಗೂಡಿದ್ದು ನಿಜ. ಜಬ್ಬಾರ್ ಅವರಲ್ಲಿ ಒಮ್ಮೆ ಫೋನ್ ಮುಖಾಂತರ ಮಾತನಾಡಿದ್ದು ಬಿಟ್ಟರೆ ನನಗೆ ಅವರಲ್ಲಿ ಮಾತನಾಡಿದ್ದು ನೆನಪಿಲ್ಲ.

ಅವರು ನಮ್ಮ ಮನೆಗೆ ಬಂದಿದ್ದಾಗಲೂ ಅವರ ಜೊತೆ ಮಾತನಾಡಿದ ಹಾಗೆ ಅನಿಸುತ್ತಾ ಇಲ್ಲ. ಆದರೆ ಅವರೊಮ್ಮೆ ನಮ್ಮ ಮನೆಗೆ ಬಂದಿದ್ದ ನೆನಪು ಈಗಲೂ ಹಸಿರಾಗಿದೆ. ತಾಳಮದ್ದಲೆಯೊಂದನ್ನು ಮುಗಿಸಿ ತಡರಾತ್ರಿ ಹಿಂತಿರುಗಿ ಹೋಗುವ ದಾರಿಯಾಗಿ ಮಾಡಾವಿನಲ್ಲಿರುವ ನಮ್ಮ ಮನೆಗೆ ಭೇಟಿ ಕೊಟ್ಟಿದ್ದರು. ತಂಡದಲ್ಲಿ ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಜಬ್ಬಾರ್ ಸಮೋ ಮತ್ತಿತರರು ಇದ್ದರು. ಕೊನೆಯ ಕ್ಷಣದಲ್ಲಿ ಅವರು ಬರುವ ಸುದ್ದಿ ತಿಳಿದಿತ್ತು. ಅವರಿಗೆ ರಾತ್ರಿಯ ಊಟ ಆಗಿಲ್ಲ ಎಂದು ಅರಿತ ನಾವು ಅವರು ಹೇಳದಿದ್ದರೂ ಅದರ ತಯಾರಿಯಲ್ಲಿ ತೊಡಗಿದೆವು. ದಿಢೀರ್ ತಯಾರಿ. ಮನೆಯಲ್ಲಿ ಅಮ್ಮ ಬಿಟ್ಟರೆ ನಾವು ಗಂಡು ಮಕ್ಕಳು ಮಾತ್ರ. ಆಗ ನಮಗ್ಯಾರಿಗೂ ಮದುವೆ ಆಗಿರಲಿಲ್ಲ. ಅಮ್ಮನಿಗೂ ಸ್ವಲ್ಪ ವಯಸ್ಸಾಗಿತ್ತು. ಬೆಳ್ತಿಗೆ ಅನ್ನ, ಕುಚ್ಚಿಲಕ್ಕಿ ಗಂಜಿ, ಸಾರು, ಪಲ್ಯ, ಮಜ್ಜಿಗೆ, ಉಪ್ಪಿನಕಾಯಿ ಅಷ್ಟೇ. ಊಟ ಮಾಡುತ್ತಿರುವಾಗ ಎಲ್ಲರಿಗೂ ಹಸಿವೆಯಾಗಿದ್ದ ಹಾಗೆ ಕಂಡಿತ್ತು. ಆದರೆ ‘ನಮಗೆ ತೊದರೆ ಕೊಟ್ಟೆವೋ’ ಎಂಬ ಭಾವ ಅವರ ಮುಖದಲ್ಲಿತ್ತು. ಬಹುಶಃ ಮಾಡಿದ ಅಡುಗೆಯ ಪ್ರಮಾಣದಲ್ಲಿ ಕಡಿಮೆಯಾಗಿರಬಹುದೇನೋ ಎಂಬ ಸಂಶಯ ಜಬ್ಬಾರ್ ಸಮೋ ಅವರಿಗೆ ಆಗಿತ್ತೋ ಏನೋ. ಅವರು ಎರಡೆರಡು ಬಾರಿ ಕೇವಲ ಗಂಜಿಯನ್ನಷ್ಟೇ ಹಾಕಿಸಿಕೊಂಡರು. ನಮಗೆಲ್ಲಾ ಏನೂ ತೊಂದರೆಯಾಗಿಲ್ಲ ಎಂದು ನಾವು ಸ್ಪಷ್ಟಪಡಿಸಿದ ನಂತರವೇ ಅವರೆಲ್ಲಾ ನೆಮ್ಮದಿಯಾಗಿ ಊಟ ಮಾಡಿದ ಹಾಗೆ ಕಂಡಿತು. ಉಜಿರೆ ಅಶೋಕ ಭಟ್ಟರು ಯಾವಾಗಲಾದರೂ ಕಾಣಲು ಸಿಕ್ಕಿದಾಗ ಈ ಘಟನೆಯನ್ನು ನೆನಪಿಸಿಕೊಂಡು ಮುಗುಳು ನಗುತ್ತಾರೆ. ಹೀಗೆ ಅಂದು ಜಬ್ಬಾರ್ ಸಮೋ ಅವರಿಗೆ ಗಂಜಿ ಬಡಿಸಿದ ನೆನಪು ಬಿಟ್ಟರೆ ಮತ್ತೆ ಅವರೊಡನೆ ಮುಕ್ತವಾಗಿ ಮಾತನಾಡುವ ಅವಕಾಶ ಸಿಕ್ಕಿಲ್ಲ. ಆದರೆ ಆ ದಿನ ಜಬ್ಬಾರ್ ಸಮೋ ಅವರ ಸರಳ ವರ್ತನೆ, ಮನೆಯವರಂತೆಯೇ ಅವರು ನಡೆದುಕೊಂಡ ರೀತಿ ಮತ್ತು ಅವರ ಮುಗ್ಧ ಮನಸ್ಸು ಮರೆಯಲಾಗುವುದಿಲ್ಲ. 

ಲೇಖನ: ಮನಮೋಹನ್ ವಿ.ಎಸ್.

ರಸ ರಾಮಾಯಣ – ರಾಮಾಯಣ ರಸಪ್ರಶ್ನೆಗಳು (ಶ್ರೀ ಸುಬ್ರಾಯ ಸಂಪಾಜೆ) Subraya Sampaje

‘ರಸ ರಾಮಾಯಣ’ ಎಂಬ ಈ ಕೃತಿಯ ಲೇಖಕರು ಶ್ರೀ ಸುಬ್ರಾಯ ಸಂಪಾಜೆ ಅವರು. ಶ್ರೀಯುತರು ಪ್ರಸ್ತುತ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ವಿ.ವಿ.ಯ ಸ್ನಾತಕೋತ್ತರ ಪಧವೀಧರರಾಗಿ ಕೆಲವು ವರ್ಷಗಳ ಕಾಲ ಉಡುಪಿ ಎಂ.ಜಿ.ಎಂ ಕಾಲೇಜು ಮತ್ತು ಕೋಟ ವಿವೇಕ ಕಾಲೇಜಿನಲ್ಲಿ ಉಪಾನ್ಯಾಸಕರಾಗಿಯೂ ಸೇವೆ ಸಲ್ಲಿಸಿದವರು. ಶ್ರೀಯುತರು ಯಕ್ಷಗಾನದ ಶ್ರೇಷ್ಠ ಭಾಗವತರಾಗಿಯೂ ಕಲಾಭಿಮಾನಿಗಳಿಗೆ ಪರಿಚಿತರು.

ಇದು ದ್ವಿತೀಯ ಮುದ್ರಣ (2018 ಆಗಸ್ಟ್). ಮೊದಲ ಮುದ್ರಣ 2018 ಮಾರ್ಚ್ ತಿಂಗಳಿನಲ್ಲಿ. ಮೊದಲ ಮುದ್ರಣದ ಪುಸ್ತಕಗಳೆಲ್ಲಾ ಓದುಗರ ಕೈ ಸೇರಿ ಕೇವಲ ಐದು ತಿಂಗಳಿನಲ್ಲಿ ಮರುಮುದ್ರಣಗೊಂಡಿತ್ತು. ‘ಪುರಾಣಯಾನ’ ಎಂಬುದು ಶ್ರೀ ಸುಬ್ರಾಯ ಸಂಪಾಜೆ ಅವರ ಮೊದಲ ಕೃತಿ. ‘ರಸ ರಾಮಾಯಣ’ ಎಂಬ ಈ ಕೃತಿಯ ಪ್ರಕಾಶಕರು ವಿಟ್ಲದ ಸಧಭಿರುಚಿ ಪ್ರಕಾಶನದ ಶಾಂತಾ ಎಸ್.ಎನ್. ಭಟ್ಟ ಅವರು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ವಿದ್ವಾಂಸರೂ ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ ಆಗಿರುವ ವಿದ್ವಾನ್ ಕೆರೇಕೈ ಉಮಕಾಂತ ಭಟ್ಟ ಅವರು.

ಲೇಖಕ ಶ್ರೀ ಸುಬ್ರಾಯ ಸಂಪಾಜೆ ಅವರು ‘ಅರಿಕೆ’ ಎಂಬ ತಮ್ಮ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯ ಬರಹದಲ್ಲಿ ಶಾಂತಾ ಎಸ್. ಎನ್. ಭಟ್ಟ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಲೇಖಕ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಲೇಖನವನ್ನು ನೀಡಲಾಗಿದೆ. ಈ ಕೃತಿಯಲ್ಲಿ ಶ್ರೀ ಸುಬ್ರಾಯ ಸಂಪಾಜೆ ಅವರು ರಾಮಾಯಣದ ಏಳು ಕಾಂಡಗಳಿಗೆ ಸಂಬಂಧಿಸಿ ಸಾವಿರದ ಮುನ್ನೂರ ಎಪ್ಪತ್ತೇಳು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿರುತ್ತಾರೆ. ಉತ್ತಮ ಮಾಹಿತಿಗಳನ್ನೊಳಗೊಂಡ ಸಂಗ್ರಹ ಯೋಗ್ಯವಾದ ಕೃತಿಯಿದು. ಶ್ರೀ ಸುಬ್ರಾಯ ಸಂಪಾಜೆ ಅವರಿಗೆ ಅಭಿನಂದನೆಗಳು. ಸಾಹಿತ್ಯ ಸೇವೆ ಮತ್ತು ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂಬ ಶುಭ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

ನಿತ್ಯ ಭವಿಷ್ಯ ದಿನಾಂಕ: ಫೆಬ್ರವರಿ ೨೮

ತುಲಾ ರಾಶಿ – ನವೆಂಬರ್ 2020

ಜಾಹೀರಾತು 
ತುಲಾ ರಾಶಿ

ತುಲಾ ರಾಶಿಯವರಿಗೆ ಈ ಮಾಸ ಕುಟುಂಬದಲ್ಲಿ ಹಾಗೂ ಬಂಧುವರ್ಗದಲ್ಲಿ ಗೌರವ ಮನ್ನಣೆಗಳು ದೊರೆಯಬಹುದು. ಈ ತಿಂಗಳಿನಲ್ಲಿ ಕಷ್ಟ, ಪರಿಶ್ರಮದ ಜೀವನ ನಡೆಸಬೇಕಾದ ಪರಿಸ್ಥಿತಿಯ ಸನ್ನಿವೇಶವಿದೆ. ಸಂಪಾದನೆಯ ಹಣಕ್ಕೆ ಖರ್ಚಿನ ಮೂಲಗಳು ತನ್ನಿಂತಾನೇ ಹುಟ್ಟಿಕೊಳ್ಳುತ್ತವೆ. ಆದ ಕಾರಣ ಉಳಿತಾಯ ಮಾಡಬೇಕಾದರೆ ಬಹಳಷ್ಟು ಕಷ್ಟಪಡಬೇಕಾಗುತ್ತದೆ. ಸಾಲ ಮಾಡುವ ಸಂದರ್ಭವನ್ನು ನಿವಾರಿಸಿದರೆ ಉತ್ತಮ. ಸಾಲ ಕೊಡುವುದು ಮತ್ತು ತೆಗೆದುಕೊಳ್ಳುವುದಕ್ಕೆ ಈ ಕಾಲ ಉತ್ತಮವಲ್ಲ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ. ನೆಮ್ಮದಿ ತಂದುಕೊಳ್ಳುವುದು ನಿಮ್ಮ ಕೈಯಲ್ಲಿಯೇ ಇದೆ. ಆತ್ಮ ಸಂತೋಷ ಮತ್ತು ನೆಮ್ಮದಿಯಿಂದಿರಲು ಪ್ರಯತ್ನಿಸಿ. ಕೆಲವರಿಗೆ ಸಂತಾನ ಭಾಗ್ಯದ ಯೋಗವೂ ಇದೆ. ಕೃಷಿಕರಿಗೆ ಕೃಷಿ ಮೂಲಗಳಿಂದ ಹೆಚ್ಚಿನ ಲಾಭಗಳು ದೊರಕಬಹುದು. ಶ್ರಮಪಟ್ಟರೆ ಕೆಲವರಿಗೆ ಕೃಷಿ ಭೂಮಿ ಖರೀದಿಸುವ ಯೋಗವೂ ಇದೆ. ಪ್ರಣಯ ಜೀವನ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಸತತ ಸಾಧನೆಯಿಂದ ವಿದ್ಯೆಯಲ್ಲಿ ಯಶಸ್ಸು ಸಾಧಿಸಬಹುದು. 

ಕನ್ಯಾ ರಾಶಿ – ನವೆಂಬರ್ 2020

ಕನ್ಯಾ ರಾಶಿ – ನವೆಂಬರ್ 2020

ಈ ರಾಶಿಯ ಕೆಲವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಲಾಭ ಉಂಟಾಗಬಹುದಾದ ಸಾಧ್ಯತೆಯಿದೆ. ಇನ್ನು ಕೆಲವರಿಗೆ ಸ್ತ್ರೀ ಮೂಲದಿಂದ ಸಂಪತ್ತು ಹರಿದುಬರುವ ಸೂಚನೆಗಳು ಕಂಡು ಬರುತ್ತವೆ. ಸ್ವಂತ, ಭೂಮಿ, ಮನೆಗಳಿಗೆ ಪ್ರಯತ್ನಿಸಲು ಇದು ಸಕಾಲ. ಅಧಿಕಾರಿಗಳಿಗೆ ಕಾರ್ಯಕ್ಷೇತ್ರದಲ್ಲಿ ಸುಧಾರಣೆ ಕಂಡುಬರುತ್ತದೆ, ನ್ಯಾಯ ಮಾರ್ಗದಲ್ಲಿ ಮಾತ್ರ ಹಣ ಸಂಪಾದನೆ ಮಾಡಿ. ಇಲ್ಲದಿದ್ದರೆ ತೊಂದರೆಗಳಿಗೆ ಸಿಲುಕುವಿರಿ.

ನಿಮ್ಮ ಮುಂಗೋಪ, ದುಡುಕುಗಳನ್ನು ಬಿಡದಿದ್ದರೆ ವಿವಾಹ ಜೀವನದಲ್ಲಿ ಅಶಾಂತಿ ಉಂಟಾಗುವ ಸಂಭವವಿದೆ. ಯಾವುದೇ ಕಾರ್ಯಕ್ಕೆ ಇಳಿಯುವ ಮುನ್ನ ಸಾಕಷ್ಟು ಯೋಚಿಸಿ, ಪರಿಶ್ರಮದಿಂದ ಮಾಡಿದರೆ ಯಶಸ್ಸು ನಿಮ್ಮದಾಗಬಹುದು. ಮನೆಯಲ್ಲಿ ಅಥವಾ ಕುಟುಂಬದಲ್ಲಿ ಉಂಟಾಗುವ ಸಣ್ಣ ಸಣ್ಣ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ.

ಕನ್ಯಾ ರಾಶಿ

ಮಕ್ಕಳ ಬಗ್ಗೆ ಕಾಳಜಿ, ಗಮನ ಕೊಡಿ. ವಿದ್ಯಾರ್ಥಿಗಳು ಮನೆಯಲ್ಲಿದ್ದರೂ ಅವರ ಕಲಿಯುವಿಕೆಯ ಬಗ್ಗೆ ಹೆಚ್ಚಿನ ಗಮನ ಕೊಡಿ. ಉದ್ಯೋಗದಲ್ಲಿ ಪ್ರಗತಿಯನ್ನು ಕಂಡರೂ ಬ್ಯಾಂಕ್ ಹಾಗೂ ಕೋರ್ಟ್ ವ್ಯವಹಾರಗಳಲ್ಲಿ ಕಷ್ಟ ಎದುರಾಗಬಹುದು. ಅಪರಿಚಿತರೊಡನೆ ಸ್ನೇಹವನ್ನು ಮಾಡುವುದರ ಮೊದಲು ಅವರ ಬಗ್ಗೆ ಮೊದಲು ತಿಳಿಯಲು ಯತ್ನಿಸಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು. 

ಮಹನೀಯರ ಮಹಾ ನುಡಿ-ಭಾಗ 4 (ಯಕ್ಷಗಾನದಲ್ಲಿ ಹಾಡುಗಾರಿಕೆ – ಶೇಣಿ ಗೋಪಾಲಕೃಷ್ಣ ಭಟ್)

ಯಕ್ಷಗಾನದಲ್ಲಿ ಹಾಡುಗಾರಿಕೆ – ಶ್ರೀ ಶೇಣಿ ಗೋಪಾಲಕೃಷ್ಣ ಭಟ್. (ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘ, ಮಧೂರು ಈ ಸಂಸ್ಥೆಯ ರಜತ ಮಹೋತ್ಸವ ಸ್ಮರಣ ಸಂಚಿಕೆ ‘ಸುಧಾ ಕಲಶ’ ಪುಸ್ತಕದಲ್ಲಿ)

“ಶಾಸ್ತ್ರೀಯವಾದ ರಾಗ, ತಾಳ ಬದ್ಧತೆಯುಳ್ಳ ಹಾಡುಗಳನ್ನೇ ಆದರೂ, ದೇಶ ಕಾಲಗಳ ಮರ್ಯಾದೆಯನ್ನು ಗಮನಿಸಿ ಹಾಡುವುದೇ ಪಾಂಡಿತ್ಯಕ್ಕೆ ಭೂಷಣ. ಔಚಿತ ಭೋಧವಿಲ್ಲದಿದ್ದರೆ ವೃಥಾ ಶ್ರಮವೂ ಅಭಾಸವೂ ಆಗದಿರದು. ಮುಖ್ಯವಾಗಿ ಯಕ್ಷಗಾನದ ಹಿಮ್ಮೇಳಗಳಾದ ಚೆಂಡೆ ಮದ್ದಳೆಗಳಿರುವುದು ಕುಣಿಕೆಯ ನಿರ್ದೇಶನಕ್ಕಾಗಿ. ನಾಟ್ಯದ ಸ್ವಂತಿಕೆಗೆ ಈ ವಾದನವು ಪೂರಕವಾಗಿದೆಯೆಂಬ ಸತ್ಯವನ್ನು ಕಡೆಗಣಿಸಬಾರದು. ತಾಳ ವಾದ್ಯಗಳ ನಿರ್ದಿಷ್ಟ ಸೊಲ್ಲುಗಳ ಬದಲಾವಣೆಯಾದರೆ, ಶೈಲಿಯೂ ವಿರೂಪಗೊಳ್ಳುವುದೆಂಬ ನೆನಪು ವಾದ್ಯದವರಿಗೆ ಇರುವಷ್ಟು ಕಾಲ ಬೆರಕೆಯ ಭಯ ದೂರವಾಗಿಯೂ ಉಳಿಯುವುದು. ಈ ಮರ್ಮವನ್ನರಿಯದ ಭಾಗವತನು ಸಂಗೀತ ಸಾಮ್ರಾಟ ಪದವೀಧರನಾದರೂ ಯಕ್ಷಗಾನಕ್ಕೆ ಹಾಡುಗಾರನಾಗಲಾರ. ರಾಗ ಪ್ರಧಾನವಲ್ಲದ, ತಾಳ ಪ್ರಧಾನಗೇಯ ಪ್ರಬಂಧಗಳನ್ನು ಹಾಡುವ ಚಾಕಚಕ್ಯತೆಯೇ ಇಲ್ಲಿ ಎದ್ದು ಕಾಣಬೇಕಾದ ಪ್ರಧಾನ ಗುಣವಾಗಿರಬೇಕು. ಈ ಪದ್ಧತಿಯೂ ಶಾಸ್ತ್ರೀಯ ಸಂಗೀತವೆಂದೇ ಅಂಗೀಕೃತವಾಗಿದೆ.

ಜಾಹೀರಾತು

ಒಂದೇ ಹಾಡಿನಲ್ಲಿ ಶೋಕ, ಕ್ರೋಧ, ಹಾಸ್ಯಾದಿಗಳನ್ನು ಬಿಂಬಿಸುವ ನುಡಿಗಟ್ಟುಗಳಿರಬಹುದಾದ ಸಂದರ್ಭಗಳಲ್ಲಿ ಹಾಡುಗಾರನು ಈ ಸಂಚಾರೀ ಭಾವಗಳಿಗೆ ತಾನೇ ಸ್ಪಂದಿಸಿ, ರಾಗಮಾಲಿಕೆಯನ್ನೋ, ತಾಳಮಾಲಿಕೆಯನ್ನೋ ಮಾಡಿದರೆ ತನ್ನ ಅಜ್ಞಾನವನ್ನು ತಾನೇ ಉದ್ಘಾಟಿಸಿಕೊಂಡಂತಾಯಿತು. ಭಾಗವತಿಕೆಯು ಸೂತ್ರಧಾರಿಕೆಯಲ್ಲದೆ, ಪಾತ್ರ ನಿರ್ವಹಣೆಯಲ್ಲವಲ್ಲ? ರಸಭಾವ ಪ್ರಕಟಣೆ ಸೂತ್ರಧಾರಿಯ ಹೊಣೆಯಾದ್ದರಿಂದ ಸ್ಫೂರ್ತಿ ನೀಡುವ ಹಿನ್ನಲೆಯನ್ನೊದಗಿಸುವ ಕರ್ತವ್ಯ ಹಿಮ್ಮೇಳಕ್ಕಿದ್ದರೆ ಸಾಕು. ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಇರುವ ಈ ಸಾಂಪ್ರದಾಯಿಕ ಅಚ್ಚುಕಟ್ಟುತನವೇ ಯಕ್ಷಗಾನದ ತನ್ನತನ. ಸಂಗೀತ ಶಾಸ್ತ್ರದಲ್ಲಿ ಗುರುತಿಸಲ್ಪಟ್ಟ ಜನ್ಯ ಜನಕ ರಾಗಗಳ ಪಾಠವಿದ್ದು, ಯಕ್ಷಗಾನ ರಚನೆಗಳಲ್ಲಿ ನಮೂದಿಸಿರುವ ರಾಗಗಳನ್ನು ಶುದ್ಧವಾಗಿ ಬಳಸುವ ಅಗತ್ಯದೊಂದಿಗೆ ಇತಿಮಿತಿಯನ್ನರಿತು, ಸಾಹಿತ್ಯವನ್ನು ಸ್ಪಷ್ಟ ಉಚ್ಚಾರದೊಂದಿಗೆ ನಾದತರಂಗವನ್ನು ಸೃಷ್ಟಿಸಿ, ಬಯಲು ರಂಗಮಂಟಪವನ್ನು ಇಂದ್ರಲೋಕವೋ, ಚಂದ್ರಲೋಕವೋ ಆಗಿಸುವ ಭಾಗವತಿಕೆಯೇ ಯಕ್ಷಗಾನದ ಉಳಿವಿಗೆ ಅಗತ್ಯವೆನಿಸುತ್ತದೆ. ಈ ರೀತಿಯ ಲಕ್ಷ್ಯ, ಲಕ್ಷಣಗಳು ಜಾನಪದವೆಂಬ ಹಿಮ್ಮೇಳ ಮುಮ್ಮೇಳಗಳಲ್ಲಿ ಹುಡುಕಿದರೂ ದೊರಕಲಾರವು”.

ಸಿಂಹ ರಾಶಿ – ನವೆಂಬರ್ 2020

ಸಿಂಹ ರಾಶಿ – ನವೆಂಬರ್ 2020

ಸಿಂಹ ರಾಶಿಯವರಿಗೆ ನವೆಂಬರ್ ತಿಂಗಳು ಸಾಕಷ್ಟು ಉತ್ತಮ ಫಲಗಳನ್ನು ಪಡೆಯುವ ಅವಕಾಶಗಳಿವೆ. ಹಾಗಿದ್ದೂ ಅಂತಹ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುವ ಜಾಣ್ಮೆ ನಿಮ್ಮಲ್ಲಿರಬೇಕು. ಈ ತಿಂಗಳಲ್ಲಿ ಭೂಮಿ, ಮನೆ, ಆಸ್ತಿ ಮಾಡಿಕೊಳ್ಳುವ ಯೋಗಗಳಿವೆ. ಕೆಲವರಿಗೆ ಮಾಡಿದ ಸತ್ಕಾರ್ಯಗಳಿಗೆ, ಕಠಿಣ ಶ್ರಮಕ್ಕೆ ಪ್ರತಿಫಲ ದೊರಕಬಹುದು. ಸಾರ್ವಜನಿಕ ವಲಯದಲ್ಲಿ ಗೌರವವೂ ದೊರಕಬಹುದು. ಆದರೆ ನಿಮ್ಮ ಆತುರ, ಗಡಿಬಿಡಿಯ ಸ್ವಭಾವಗಳಿಂದಾಗಿ ಮನೆಯಲ್ಲಿ ಶಾಂತಿಯಿಂದ ಇರಲು ಅಸಾಧ್ಯವಾಗಬಹುದು.

ಕೆಲವರಿಗೆ ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಉಂಟಾಗಬಹುದು. ಸಾಕಷ್ಟು ಸಂಪಾದನೆಯಿದ್ದರೂ ಅದರ ಸದ್ವಿನಿಯೋಗ ಮಾಡದಿದ್ದರೆ ಅಥವಾ ಬೇಡವಾದ ಖರ್ಚುಗಳನ್ನು ಮಾಡಿದರೆ ಹಣ ಉಳಿಯುವುದು ಕಷ್ಟ. ಹಣದ ವಿಚಾರದಲ್ಲಿ ಬಹಳಷ್ಟು ಜಾಗ್ರತೆ ಅವಶ್ಯ. ಸಾಲ ಕೊಟ್ಟ ದುಡ್ಡಿನ ವಸೂಲಾತಿ ಕಷ್ಟವಾಗಬಹುದು.

ಸಿಂಹ ರಾಶಿ

ಮನೆಯಲ್ಲಿ ಮಂಗಲಕಾರ್ಯಗಳು ನಡೆಯಬಹುದು. ಸ್ತ್ರೀ ಮೂಲದಿಂದ ಧನಲಾಭ ಉಂಟಾಗಬಹುದು. ಮನೆಯವರ ಆರೋಗ್ಯದಲ್ಲಿ ಹೆಚ್ಚುಕಡಿಮೆ ಉಂಟಾಗಬಹುದು. ನೀವು ಮನೆಯವರೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ ಮತ್ತು ಕುಟುಂಬ ಸದಸ್ಯರೊಂದಿಗೆ ಹೊಂದಾಣಿಕೆಯಿಂದಿರುವುದರಿಂದ ನಿಮಗೆ ಸಾಕಷ್ಟು ಪ್ರಯೋಜನಗಳು ಉಂಟಾಗಲಿದೆ. 

ಕರ್ಕಾಟಕ ರಾಶಿ – ನವೆಂಬರ್ 2020

ಕರ್ಕಾಟಕ ರಾಶಿ  ನವೆಂಬರ್ 2020

ಈ ರಾಶಿಯವರಿಗೆ ಈ ತಿಂಗಳು ಸ್ವಲ್ಪ ಅನುಕೂಲವಾಗಿರುತ್ತದೆ. ಆರ್ಥಿಕವಾಗಿ ನಿಮ್ಮ ಸ್ಥಿತಿ ಉತ್ತಮವಾಗಿದ್ದರೂ ಅದನ್ನು ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಮನಸಿನಲ್ಲಿ ಹೊಸ ಹೊಸ ಯೋಚನೆಗಳು ಬರುತ್ತವೆ.

ಕರ್ಕಾಟಕ

ಆರ್ಥಿಕ ಅನುಕೂಲವು ನಿಮ್ಮನ್ನು ಹೊಸ ವ್ಯವಹಾರಕ್ಕೆ ಇಳಿಯುವಂತೆ ಪ್ರೇರೇಪಿಸಬಹುದು. ಆದರೆ ಯಾವುದೇ ಹೊಸತನ್ನು ಆರಂಭಿಸುವ ಮೊದಲು ನಿಮಗದು ಸಾಧಕವಾಗುವಂತೆ ಪ್ರಯತ್ನಿಸಿ. ಅರೋಗ್ಯ ಸಮಸ್ಯೆ ಅಷ್ಟಾಗಿ ಕಾಡದಿದ್ದರೂ ನರದ ಸಂಬಂಧೀ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಿ. ಒಂದು ರೀತಿಯ ಆಲಸ್ಯ ನಿಮ್ಮನ್ನು ಕಾಡುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಹೆಚ್ಚಿನ ಪ್ರಯತ್ನ ಪಡುವುದರಿಂದ ಯಶಸ್ಸು ಸಿಗಲು ಸಾಧ್ಯ.

ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುವ ಕಾರಣ ಹೂಡಿಕೆ ಮಾಡುವತ್ತ ನಿಮ್ಮ ಮನಸ್ಸು ವಾಲಬಹುದಾದರೂ ಸರಿಯಾದ ಲಾಭದಾಯಕ ಸಂಸ್ಥೆಯಲ್ಲಿ ಹೂಡಿಕೆ ಮಾಡಿ. ಮಕ್ಕಳ ಕಡೆ ಗಮನ ಅಗತ್ಯ. ಕೈಯಲ್ಲಿ ಹಣವಿದೆ ಎಂದು ಕೇಳಿದ್ದನ್ನೆಲ್ಲ ಕೊಡಿಸೋಕೆ ಹೋಗಬೇಡಿ. ಈ ತಿಂಗಳು ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. 

ಮಿಥುನ ರಾಶಿ – ನವೆಂಬರ್ 2020

ಮಿಥುನ ರಾಶಿ – ನವೆಂಬರ್ 2020

ಮಿಥುನ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಹಣಕಾಸಿನ ತೊಂದರೆ ಎದುರಾಗುವ ಸಾಧ್ಯತೆಯಿದೆ. ನಿಮ್ಮ ಖರ್ಚು ವೆಚ್ಚಗಳನ್ನು ನೀವು ನಿಯಂತ್ರಣದಲ್ಲಿಡದಿದ್ದರೆ ಸ್ವಲ್ಪ ಮಟ್ಟಿಗೆ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ವ್ಯಾಪಾರವ ವ್ಯವಹಾರಗಳು ಸಾಮಾನ್ಯ ಗತಿಯಲ್ಲಿ ಸಾಗುತ್ತಿರುವುದಾದರೂ ಆದಾಯಕ್ಕಿಂತ ಖರ್ಚು ವೆಚ್ಚಗಳೇ ಹೆಚ್ಚಾಗುತ್ತವೆ.  

ಮಿಥುನ ರಾಶಿ

ವಿದ್ಯಾಭ್ಯಾಸ, ಇಂಟರ್ವ್ಯೂ ಗಳಲ್ಲಿ ಯಶಸ್ಸು ಉಂಟಾಗುತ್ತದೆ. ಮನೆಯ ಅಥವಾ ಕುಟುಂಬದ ಸದಸ್ಯರ ನಡುವೆ ಸಮಸ್ಯೆಗಳು ತಲೆದೋರುವ ಸಾಧ್ಯತೆಯಿದ್ದು ತಾಳ್ಮೆ ವಹಿಸುವುದು ಉತ್ತಮ.

ಜಾಹೀರಾತು

ಯಾವುದೇ ವಿವಾದಗಳಿದ್ದರೂ ಸದಸ್ಯರೆಲ್ಲರೂ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುವುದು ಉತ್ತಮ. ಈ ರಾಶಿಯ ವಿವಾಹಿತರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಅರೋಗ್ಯ ವಿಷಯದಲ್ಲಿ ಹೇಳುವುದಾದರೆ ಮೂಳೆಗಳಿಗೆ ಸಂಬಂಧಪಟ್ಟ ತೊಂದರೆಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸುವುದು ಉತ್ತಮ.