Friday, August 28, 2026
Home Blog Page 379

ಲವ್ ಜಿಹಾದ್ – ಹರಿಯಾನಾದಲ್ಲಿ ಮತ್ತೊಂದು ಕೃತ್ಯ

ಯಾಕೋ ಈ ಲವ್ ಜಿಹಾದ್ ಪ್ರಕರಣಗಳು ಕೊನೆಗೊಳ್ಳುತ್ತಿರುವ ಹಾಗೆ ಕಾಣಿಸುತ್ತಿಲ್ಲ ಇದೀಗ ಹರ್ಯಾಣದಿಂದ ಮತ್ತೊಂದು ಪ್ರಕರಣ ವರಿದಿಯಾಗುತ್ತಾ ಇದೆ. ತನ್ನ ಪದವಿ ಪರೀಕ್ಷೆ ಬರೆದು ಮುಗಿಸಿ ಹೊರ ಬರುತ್ತಿದ್ದ 21 ವರ್ಷದ ಯುವತಿಯೊಬ್ಬಳ ಮೇಲೆ ಗುಂಡಿನ ದಾಳಿ ನಡೆಸಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇದೊಂದು ಮತಾಂತರ ಯತ್ನದ ಹತಾಶ ಕೃತ್ಯ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. 

ಹರಿಯಾಣಾದ ಫರೀದಾಬಾದ್ ನಲ್ಲಿ ಕೊನೆಯ ವರ್ಷದ ಬಿ.ಕಾಮ್ ವಿದ್ಯಾರ್ಥಿನಿ ಪರೀಕ್ಷೆ ಬರೆದು ಕಾಲೇಜಿನಿಂದ ಹೊರಗೆ ಬಂದು ಮನೆಯತ್ತ ತೆರಳುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ದುರುಳರು ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಲು ಪ್ರಯತ್ನಿಸುತ್ತಾರೆ. ಅಪಹರಣ ಯತ್ನ ವಿಫಲವಾದಾಗ ಆರೋಪಿಗಳು ಗುಂಡು ಹಾರಿಸಿದ್ದ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಜಾಹೀರಾತು 

ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಾ ಇದೆ. ಈ ಸಂಬಂಧ ತೌಸೀಫ್ ಎನ್ನುವವನನ್ನು ಬಂಧಿಸಲಾಗಿದೆ.  

“ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಮತಾಂತರವಾಗುವಂತೆ ಮೂರು ವರ್ಷದಿಂದ ಯುವತಿಗೆ ಬಲವಂತ ಮಾಡುತ್ತಿದ್ದ.  ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವುದಕ್ಕೆ  ನಿರಾಕರಿಸಿದ್ದಕ್ಕೆ ಆರೋಪಿ ಅಪಹರಿಸಲು ಯತ್ನಿಸಿದಾಗ  ಯುವತಿ ತಪ್ಪಿಸಿಕೊಂಡಾಗ  ಗುಂಡು ಹಾರಿಸಿ ಕೊಲೆ ನಡೆಸಿದ್ದಾರೆ” ಎಂದು ಯುವತಿಯ ತಂದೆ ಹೇಳಿದ್ದಾರೆ. ಹಾಗೂ ತಾನು 2018ರಲ್ಲೇ ಆರೋಪಿಯ ವಿರುದ್ಧ ದೂರು ನೀಡಿದ್ದೆ ಎಂದೂ ಯುವತಿಯ ತಂದೆ ಹೇಳಿದ್ದಾರೆ.

 

ಕಲೆ ಬೆಳಗಿಸುವ ಕಲಾಪೋಷಕರು – ಮುಳಿಯ ಶ್ಯಾಮ ಭಟ್

ಯಾವುದೇ ಒಂದು ಕಲಾಪ್ರಕಾರವಿರಲಿ, ಅದು ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ ಅಥವಾ ಇನ್ನುಳಿದ ಯಾವುದೇ ಪ್ರಸಿದ್ಧ ಕಲಾಪ್ರಾಕಾರಗಳೇ ಆಗಿರಲಿ. ಕಲೆಯನ್ನು ಉಳಿಸಿ ಬೆಳೆಸುವ ಹತ್ತು ಹಲವು ಕೈಗಳು ಇರಲೇ ಬೇಕು. ಕಲಾವಿದನಿಂದ ಮಾತ್ರ ಕಲೆ ಉಳಿಯಲಾರದು. ಪ್ರೇಕ್ಷಕನಿಂದ ಮಾತ್ರವೂ ಕೂಡಾ ಅಲ್ಲ.

ಆ ಕಲೆಗೆ ಪ್ರೋತ್ಸಾಹಿಸುವ ಪ್ರೇಕ್ಷಕ, ಸಂಘಟಕರಲ್ಲದೆ ಕಲಾಪೋಷಕರ ಪಾತ್ರವೂ ಕಲೆಯ ಉಳಿವಿನಲ್ಲಿ, ಬೆಳವಣಿಗೆಯಲ್ಲಿ ಮಹತ್ತರವಾದುದು. ನಮ್ಮ ನಡುವೆ ಅಂತಹ ಕಲಾಪೋಷಕರು ಹಲವಾರು ಮಂದಿ ಇದ್ದಾರೆ. ಅಂತಹಾ ಮಹನೀಯರ ಅಗ್ರಗಣ್ಯರ ಸಾಲಿನಲ್ಲಿ ಶ್ರೀ ಮುಳಿಯ ಶ್ಯಾಮ ಭಟ್ ಅವರೂ ಒಬ್ಬರು. ಸರಾಫ್ ಮುಳಿಯ ಶ್ಯಾಮ ಭಟ್ ಅವರ ಹೆಸರು ಊರ ಪರವೂರ ಕಲಾಭಿಮಾನಿಗಳಿಗೆ ಮತ್ತು ಕಲಾವಿದರಿಗೆ ಚಿರಪರಿಚಿತ. ಮಾತ್ರವಲ್ಲದೆ ಸ್ವರ್ಣೋದ್ಯಮಿಯಾಗಿ ಸಾಕಷ್ಟು ಹೆಸರನ್ನು ಮಾಡಿದವರು. ಅವರು ಉದ್ಯಮಿಯಾಗಿ ಯಶಸ್ಸನ್ನು ಗಳಿಸುವುದರ ಜೊತೆಗೆ ತಾನು ಸಂಪಾದಿಸಿದ ಮೊತ್ತದಲ್ಲಿ ಒಂದಂಶವನ್ನು ದಾನ ಧರ್ಮಾದಿಗಳಿಗೆ ವಿನಿಯೋಗಿಸಿದವರು. ಕಲೆ, ಸಂಸ್ಕೃತಿ, ವಿದ್ಯಾಭ್ಯಾಸ ಮೊದಲಾದ ಕ್ಷೇತ್ರಗಳಿಗೆ ಸಹಾಯಹಸ್ತ ನೀಡಿದವರು.

ಶ್ರೀ ಮುಳಿಯ ಶ್ಯಾಮ ಭಟ್

ಮುಳಿಯ ಶ್ಯಾಮ ಭಟ್ಟರು ಉದ್ಯಮಿಯಾಗಿ ಹೇಗೆ ಅಥವಾ ಅವರ ಉದ್ಯಮ, ವ್ಯವಹಾರಗಳ ಬಗ್ಗೆ ಹೇಳುವುದು ಇಲ್ಲಿ ನನ್ನ ಉದ್ದೇಶವಲ್ಲ. ಆ ಬಗ್ಗೆ ಇನ್ನೊಮ್ಮೆ ಇನ್ನೊಂದು ಮಾಧ್ಯಮದಲ್ಲಿ ಬರೆಯುವೆ.  ಹೌದು. ಮುಳಿಯ ಶ್ಯಾಮ ಭಟ್ಟರು ಸಂಗೀತಾದಿ ರಂಗ ಕಲೆಗಳಲ್ಲಿ ಅತೀವ ಆಸಕ್ತಿ ಉಳ್ಳವರು. ತಾನು ಸ್ವತಃ ಸಾಹಿತಿಯಾಗಿ ಹಲವಾರು ಲೇಖನಗಳನ್ನೂ ಬರೆದವರು. ಹೆಚ್ಚಿನೆಲ್ಲಾ ಕಲಾ ಪ್ರದರ್ಶನಗಳಲ್ಲಿ ಮೊದಲ ಸಾಲಿನ ಪ್ರೇಕ್ಷಕರು. ಪುತ್ತೂರಿನ ಕಲಾ ಸಂಬಂಧಿತ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಅಧ್ಯಕ್ಷರಾಗಿಯೋ ಅಥವಾ ಮುಖ್ಯ ಅತಿಥಿಗಳಾಗಿಯೋ ಇವರಿಗೊಂದು ಸ್ಥಾನ ಇದ್ದೇ ಇರುತ್ತದೆ. ಅದರಲ್ಲಿಯೂ ಯಕ್ಷಗಾನವೆಂದರೆ ಇವರಿಗೆ ಬಲು ಪ್ರೀತಿ. ಎಷ್ಟೋ ಯಕ್ಷಗಾನದ ಪ್ರದರ್ಶನಗಳಿಗೆ ಇವರ ಸಹಾಯಹಸ್ತ ಇರುತ್ತಿತ್ತು. ಎಷ್ಟೋ ಬಾರಿ ಆಟ ಆಡಿಸುವ ಸಂಘಟಕರು ಮತ್ತು ಕಲಾವಿದರು ಇವರಿಂದ ಅಥವಾ ಇವರ ವ್ಯವಹಾರ ಸಂಸ್ಥೆಯಿಂದ ಸಹಾಯವನ್ನು ಪಡೆದ ಪ್ರಸಂಗಗಳಿವೆ.

ಜಾಹೀರಾತು

ಪುತ್ತೂರಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳ ಸಪ್ತಾಹಗಳಲ್ಲಿ ಆಟ ಆಡಿಸುವ ಮಹನೀಯರಲ್ಲಿ ಶ್ಯಾಮ ಭಟ್ ಅವರೂ ಒಬ್ಬರು. ಹೆಚ್ಚಿನ ಸಪ್ತಾಹಗಳಲ್ಲಿ ಒಂದು ದಿನದ ಸೇವಾಕರ್ತರಾಗಿ ಮುಳಿಯ ಶ್ಯಾಮ ಭಟ್ಟರ ಹೆಸರಿರುತ್ತಿತ್ತು.  ಹಲವಾರು ಬಾರಿ ಸಂಘಟಕರು ಯಕ್ಷಗಾನದ ಪ್ರದರ್ಶನ ನಿಗದಿಪಡಿಸಿದ ನಂತರ ಇವರಿಂದ ಅಥವಾ ಇವರ ಉದ್ಯಮ ಸಂಸ್ಥೆಯಿಂದ ಉದಾರವಾದ ಸಹಾಯಧನವನ್ನು ಪಡೆಯಲು ಸಂಪರ್ಕಿಸಿದಾಗ ಶ್ರೀಯುತರು ಸಂತೋಷದಿಂದಲೇ ಪ್ರೋತ್ಸಾಹಿಸಿದ್ದಾರೆ. ಹೀಗೆ ಒಂದು ಕಲೆ ಉಳಿಯಬೇಕಾದರೆ ಅದಕ್ಕೆ ಪ್ರೋತ್ಸಾಹಿಸುವ ಹಲವಾರು ಕೈಗಳು ಬೇಕಾಗುತ್ತದೆ. ಅಂತಹಾ ಕಲಾಪೋಷಕ ಮಹನೀಯರಿಂದ ಇಂದು ಯಕ್ಷಗಾನ ಶ್ರೀಮಂತವಾಗಿದೆ. ಶ್ರೀ ಮುಳಿಯ ಶ್ಯಾಮ ಭಟ್ಟರಂತಹಾ ಹಲವಾರು ಕಲಾಪೋಷಕರು ಕೂಡಾ ಕಲೆಯ ಒಂದು ಅಂಗವಾಗಿ ಈ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 

ಹತ್ರಾಸ್ ರೇಪ್ ಕೇಸ್ : ವಿಚಾರಣೆ ಬೇರೆಡೆ ವರ್ಗಾವಣೆಗೆ ಸುಪ್ರೀಂ ಕೋರ್ಟ್ ನಕಾರ 

ದೇಶದ ಉತ್ತರ ಪ್ರದೇಶದ ಹತ್ರಾಸ್ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯ  ಕುರಿತಾದ ಕೇಸಿನ ವಿಚಾರಣೆಯ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಇಂದು ಅಸಮ್ಮತಿ ಸೂಚಿಸಿದೆ.

ಈ ಕೇಸಿನ ಕುರಿತಂತೆ ಸಿಬಿಐ ವಿಚಾರಣೆ ಮತ್ತು ಇತರ ಎಲ್ಲಾ ವಿಷಯಗಳ ಬಗ್ಗೆಯೂ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಲಿದೆ ಎಂದು ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹತ್ರಾಸ್ ಕೇಸಿನ ವಿಚಾರಣೆಯನ್ನು ಉತ್ತರ ಪ್ರದೇಶ ಹೈಕೋರ್ಟ್ ಹೊರತಾಗಿ ಬೇರೆ ಯಾವುದಾದರೂ ಹೈಕೋರ್ಟಿನಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ  ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

ಸಿಬಿಐ ಕೂಡ ಅಲಹಾಬಾದ್ ಹೈಕೋರ್ಟಿಗೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಹೇಳಿದೆ. ತನಿಖೆಯು ಪ್ರಗತಿಯಲ್ಲಿರುವ ಈ ಹಂತದಲ್ಲಿ ವಿಚಾರಣೆಯನ್ನು ಬೇರೆಡೆಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಿಬಿಐ ಮೊದಲು ವಿಚಾರಣೆ ಪೂರ್ತಿಗೊಳಿಸಲಿ. ಆಮೇಲೆ ಅಗತ್ಯವಿದ್ದರೆ ಮಾತ್ರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

‘ತುಳು ಯಕ್ಷಗಾನ ಪುರ್ಸಂಗ ಬ್ರಹ್ಮೆ’ – ಕೆ. ಅನಂತರಾಮ ಬಂಗಾಡಿ

ಶೀಷಿಕೆಯೇ ಸೂಚಿಸುವಂತೆ ಈ ಕೃತಿಯು ವಿದ್ವಾಂಸ, ಲೇಖಕ, ಅನೇಕ ತುಳು ಪ್ರಸಂಗಗಳನ್ನು ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಶ್ರೀ ಕೆ. ಅನಂತರಾಮ ಬಂಗಾಡಿ ಇವರ ಕುರಿತಾಗಿ ಪ್ರಕಟವಾಗಿತ್ತು. ಈ ಪುಸ್ತಕವು ಓದುಗರ ಕೈ ಸೇರಿದ್ದು 2019ರಲ್ಲಿ. ಪ್ರಕಾಶಕರು ಸಂದೇಶ ಪ್ರಕಾಶನ, ಬಂಗಾಡಿ.

ಶ್ರೀ ಕೆ. ಅನಂತರಾಮ ಬಂಗಾಡಿ ಅವರು ಸುಮಾರು 27 ಕನ್ನಡ ಪ್ರಸಂಗಗಳನ್ನೂ ಬರೆದಿರುತ್ತಾರೆ. ಇವರು ಬರೆದ ತುಳು ಪ್ರಸಂಗಗಳು ಸುಮಾರು ಅರುವತ್ತೈದು. ಇವುಗಳಲ್ಲಿ ಒಟ್ಟು ಇಪ್ಪತ್ತೆರಡು ಪ್ರಸಂಗಗಳು ಪ್ರಕಟವಾಗಿವೆ. ಸಂಗ್ರಹ ಲೇಖನ – ಶ್ರೀ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಅವರು ಮಾಹಿತಿಗಳನ್ನು ಸಂಗ್ರಹಿಸಿ ಈ ಕೃತಿಯು ಪ್ರಕಟವಾಗಲು ಶ್ರಮಿಸಿರುತ್ತಾರೆ.

ಖ್ಯಾತ ಸಾಹಿತಿ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ‘ಸುರುತ ಪೂವೆರಿ ನುಡಿಕಟ್ಟ್’ ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಶ್ರೀ ವಿಜಯ ಕುಮಾರ್ ಭಂಡಾರಿ, ಹೆಬ್ಬಾರಬೈಲು ಅವರು ‘ಬರೆಯಿನಾಯನ ರಡ್ಡ್ ಪಾತೆರ’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವು ‘ಉದಿಪು’ ಮತ್ತು ‘ಮದಿಪು’ ಎಂಬ ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಜಾಹೀರಾತು

ಎಲ್ಲಾ ವಿಚಾರಗಳನ್ನು ತುಳು ಭಾಷೆಯಲ್ಲಿ ನೀಡಲಾಗಿದ್ದು ಕೊನೆಯಲ್ಲಿ ಶ್ರೀ ಅನಂತರಾಮ ಬಂಗಾಡಿ ಅವರು ಪಡೆದ ಗೌರವ ಪ್ರಶಸ್ತಿ,ಸನ್ಮಾನಗಳು, ಅವರು ಬರೆದ ಯಕ್ಷಗಾನ ತುಳು ಪ್ರಸಂಗಗಳು, ಕನ್ನಡ ಪ್ರಸಂಗಗಳು, ಪ್ರಕಟಿತ ಪ್ರಸಂಗಗಳು, ಅವರು ಬರೆದ ಪ್ರಸಂಗಗಳನ್ನು ಪ್ರದರ್ಶಿಸಿದ ಮೇಳಗಳು, ಪೌರಾಣಿಕ ಪ್ರಸಂಗದ ಧ್ವನಿಸುರುಳಿಗಳು, ಹಾಸ್ಯ ಧ್ವನಿಸುರುಳಿ, ತುಳು ಸಾಮಾಜಿಕ ಮತ್ತು ಐತಿಹಾಸಿಕ ನಾಟಕಗಳು, ತುಳು ಭಕ್ತಿಗೀತೆಗಳು, ಇವರ ಸಂಪಾದಕತ್ವದ ಸ್ಮರಣ ಸಂಚಿಕೆಗಳು, ಪ್ರಕಟಿತ ಇತಿಹಾಸ ಪುಸ್ತಕಗಳು ಮೊದಲಾದ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ  

ಎಂದರೋ ಮಹಾನುಭಾವುಲು – ಪದ್ಮವಿಭೂಷಣ ಡಾ| ಎಂ. ಬಾಲಮುರಳಿಕೃಷ್ಣ (Padmavibhooshan Dr. Mangalampalli Balamuralikrishna)

0

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಎಲ್ಲರೂ ಬಹಳಷ್ಟು ಇಷ್ಟಪಡುವ ಹೆಸರು ಪದ್ಮವಿಭೂಷಣ ಡಾ| ಎಂ. ಬಾಲಮುರಳಿಕೃಷ್ಣ. ಸಾಟಿಯಿಲ್ಲದ ಶಾರೀರ ಮತ್ತು ಕೇಳಿದರೆ ಮತ್ತೆ ಮತ್ತೆ ಅದನ್ನೇ ಕೇಳುತ್ತಾ ದಿನದ ಸಮಯವೆಲ್ಲಾ ಅವರ ಸಂಗೀತ ಕೇಳುತ್ತಾ ಮೈಮರೆಯುತ್ತೇವೆ. ಇದು ಎಲ್ಲಾ ಸಂಗೀತ ಪ್ರೇಮಿಗಳ ಅನುಭವ ಆಗಿರಬಹುದೆಂದುಕೊಳ್ಳುತ್ತೇನೆ.

ಅವರ ಸಂಗೀತ ಕಛೇರಿಯ ಮಾಸ್ಟರ್ ಪೀಸ್ ‘ಎಂದರೋ ಮಹಾನುಭಾವುಲು…’  ಒಂದು ವೀಡಿಯೋ ಇಲ್ಲಿದೆ. ರಚನೆ: ಶ್ರೀ ತ್ಯಾಗರಾಜರ ಪಂಚರತ್ನ ಕೃತಿ. ತಾಳ; ಆದಿ ತಾಳ, ರಾಗ:ಶ್ರೀ ರಾಗಂ 

ಸರ್ಪಂಗಳ ಪ್ರಶಸ್ತಿ ಮತ್ತು ಪುರಸ್ಕಾರ – ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಬೆಳಾಲು ಸಂಜೀವ ಪೂಜಾರಿ 

ಉಡುಪಿಯ ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆಯುವ, ಯಕ್ಷಗಾನ ಕಲಾರಂಗದ ಸಂಯೋಜನೆಯ, ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರತಿಷ್ಠಾನ ಆಯೋಜಿಸುತ್ತಿರುವ ಈ ಬಾರಿಯ  ‘ಸರ್ಪಂಗಳ ಯಕ್ಷೋತ್ಸವ’ವು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ದಿನಾಂಕ 27.10.2020ರ ಮಂಗಳವಾರ ಸಂಜೆ ಘಂಟೆ 7ರಿಂದ ರಾತ್ರಿ ಘಂಟೆ 10ರ ವರೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ 2020 ನೇ ಸಾಲಿನ ಪ್ರತಿಷ್ಠಿತ ಸರ್ಪಂಗಳ ಪ್ರಶಸ್ತಿ ಮತ್ತು ಸರ್ಪಂಗಳ ಪುರಸ್ಕಾರವನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ

ಈ ಬಾರಿಯ ಪ್ರತಿಷ್ಠಿತ ‘ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ ಪುರಸ್ಕೃತರಾಗುವವರು ಖ್ಯಾತ ಮದ್ದಳೆಗಾರರಾದ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ.

ಬೆಳಾಲು ಸಂಜೀವ ಪೂಜಾರಿ

ಹಾಗೂ ಸರ್ಪಂಗಳ ಪುರಸ್ಕಾರಕ್ಕೆ ಪಾತ್ರರಾಗುವವರು ಧರ್ಮಸ್ಥಳ ಮೇಳದ ನೇಪಥ್ಯ ಕಲಾವಿದರಾದ ಬೆಳಾಲು ಸಂಜೀವ ಪೂಜಾರಿ. ಸರ್ಪಂಗಳ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಸಭಾ ಕಾರ್ಯಕ್ರಮದ ಅನಂತರ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಕಾಯಕಲ್ಪ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

 ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರದ ನಿಯಮಗಳಿಗನುಸಾರವಾಗಿ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ನಿಗದಿತ ಸಂಖ್ಯೆಯ ಪ್ರೇಕ್ಷಕರಿಗೆ ಮಾತ್ರ ಪ್ರವೇಶ. ಆದರೆ ಈ ಎಲ್ಲಾ ಕಾರ್ಯಕ್ರಮಗಳ ನೇರ  ಪ್ರಸಾರ ಯೂಟ್ಯೂಬ್ ಮತ್ತು ಫೇಸ್ ಬುಕ್ ತಾಣದಲ್ಲಿ ಲಭ್ಯ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. 

ಕುತ್ಯಾಳ ಸಂಪದ – ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ

‘ಕುತ್ಯಾಳ ಸಂಪದ ಎಂಬ ಈ ಕೃತಿಯು ಯಕ್ಷಗಾನ ಸಂಗೀತ, ಚಿತ್ರಕಲೆಗಳಿಗೆ ಅನುಪಮವಾದ ಕೊಡುಗೆಗಳನ್ನು ನೀಡಿದ ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥವಾಗಿ ಓದುಗರ ಕೈ ಸೇರಿದೆ. ಇದು ಪ್ರಕಟವಾದುದು 1997ರಲ್ಲಿ.  ಪ್ರಕಾಶಕರು, ಶ್ರೀ ಗೋಪಾಲಕೃಷ್ಣ ಪ್ರಕಾಶನ, ಕೂಡ್ಲು, ಕಾಸರಗೋಡು. ಸಂಪಾದಕರು ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ. ಇದು ನೂರಾ ಐವತ್ತಮೂರು ಪುಟಗಳಿಂದ ಕೂಡಿದೆ. ಶೃಂಗೇರಿ ಜಗದ್ಗುರುಗಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ವೀರೇಂದ್ರ ಹೆಗಡೆಯವರ ಅನುಗ್ರಹ ಸಂದೇಶಗಳನ್ನು ನೀಡಲಾಗಿದೆ. ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಮತ್ತು ಶ್ರೀ ಕೆ. ನಾರಾಯಣ ಶ್ಯಾನುಭಾಗರ ಶುಭ ಸಂದೇಶಗಳನ್ನೂ ನೀಡಿರುತ್ತಾರೆ.

‘ಕುತ್ಯಾಳ ಸಂಪದ’ ಎಂಬ ಈ ಆಕರ ಗ್ರಂಥಕ್ಕೆ ಮುನ್ನುಡಿಯನ್ನು ಬರೆದವರು ಶ್ರೀ ವೆಂಕಟರಾಜ ಪುಣಿಂಚತ್ತಾಯರು. ‘ಪ್ರಕಾಶನದ ಪರವಾಗಿ’ ಎಂಬ ಬರಹವನ್ನು ನೀಡಲಾಗಿದೆ. ಸಂಪಾದಕ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಅವರು ‘ಎರಡು ಮಾತು’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಈ ಆಕರ ಗ್ರಂಥವು ಮೂರು ವಿಭಾಗಗಳಿಂದ ಕೂಡಿದೆ. ಭಾಗ ಒಂದು-ಸಂಶೋಧನೆ. ಇಲ್ಲಿ ಕೂಡ್ಲು ಶ್ಯಾನುಭಾಗ ಮನೆತನದ ಇತಿಹಾಸವನ್ನು ನೀಡಲಾಗಿದೆ. ಭಾಗ ಎರಡು-ಸಂಪಾದನೆ. ಇಲ್ಲಿ ಮಿಂಚಿ ಮರೆಯಾದ ವೈವಿಧ್ಯಮಯ ಪ್ರತಿಭೆಗಳು, ಅವಿಸ್ಮರಣೀಯ ಘಟನೆಗಳು, ಧರ್ಮ-ಕಲೆ-ಸಂಸ್ಕೃತಿಗಳ ಬಗೆಗೆ ಮಾಹಿತಿಗಳನ್ನು ನೀಡಿದ್ದಾರೆ. ಭಾಗ ಮೂರು-ಸಂಸ್ಮರಣೆ. ಈ ವಿಭಾಗದಲ್ಲಿ ಕಲಾವಿದ ಶ್ರೀ ಗೋಪಾಲಕೃಷ್ಣ ಶ್ಯಾನುಭಾಗರ ಜೀವನ ಸಾಧನೆಗಳ ವಿವರಗಳಿವೆ. ಇಲ್ಲಿ ಒಟ್ಟು ಹನ್ನೊಂದು ಲೇಖನಗಳಿದ್ದು ಬರೆದವರು ಎಂ.ವಿ. ಬಳ್ಳುಳ್ಳಾಯ, ದೇಶಮಂಗಲ ಕೃಷ್ಣ ಕಾರಂತ, ಮಧೂರು ಗಣಪತಿ ರಾವ್, ಕೆ. ಎನ್. ಕೊಳ್ಕೆಬೈಲು, ಎಂ.ವ್ಯಾಸ, ಕೆ.ಸುಕುಮಾರನ್, ಕಲ್ಮಾಡಿ ಸದಾಶಿವ ಆಚಾರ್ಯ, ಎಚ್. ವಿಷ್ಣು ಭಟ್, ಎ. ಮಹಾಲಿಂಗ ಭಟ್, ಕೆ.ಪಿ.ತಿಮ್ಮಪ್ಪ ಶೆಟ್ಟಿ, ಮತ್ತು ವಿಠಲದಾಸ್ ಕೆ. ಅವರುಗಳು.

ವಿಭಾಗ ಎರಡರಲ್ಲಿ ಶ್ರೀ ಕಯ್ಯಾರ ಕಿಂಞಣ್ಣ ರೈ, ಸಿರಿಬಾಗಿಲು ವೆಂಕಪ್ಪಯ್ಯ, ಕೆ. ಗೋಪಾಲಕೃಷ್ಣ ಶ್ಯಾನುಭಾಗ, ಕೊರಕ್ಕೋಡು ಈಶ್ವರ ಭಾಗವತ, ಪಟ್ಟಾಜೆ ವೆಂಕಟ್ರಮಣ ಭಟ್ಟ, ಶಾನ್ ಕಾಸರಗೋಡು, ಮಾಯಾ ಕೇಶವ ಶ್ಯಾನುಭಾಗ್, ಬಿ. ಬಾಲಕೃಷ್ಣ ಅಗ್ಗಿತ್ತಾಯ, ಚಂದ್ರಗಿರಿ ಅಂಬು, ಬಣ್ಣದ ಮಹಾಲಿಂಗ, ಕೂಡ್ಲು ಶಂಭು ಬಲ್ಯಾಯ, ಅಶೋಕ ಭಟ್ ಉಜಿರೆ, ಸುಬ್ರಾಯ ಅನಂತಪುರ, ಭಗವಾನ್ ದಾಸ್ ಕೂಡ್ಲು, ಗಂಗೆ ಬಾಬು ನಾಯ್ಕ್, ಯುಮುನಾ ಮೆರ್ಟ, ಪುರುಷೋತ್ತಮ ಪೈಕ, ವಿಜಯಲಕ್ಷ್ಮೀ ಶ್ಯಾನುಭಾಗ್, ರೇಖಾ ಮಂಜುನಾಥ್, ಕೂಡ್ಲು ಬಾಬು ಭಂಡಾರಿ, ಕಿರಣ ರವೀಂದ್ರನಾಥ್, ಡಿ. ಕೃಷ್ಣ ಕಾರಂತ, ಪೂಕರೆ ಮೋಹನ ನಾಯ್ಕ್, ಉಪ್ಪಳ ಕೃಷ್ಣ ಮಾಸ್ತರ್, ಕಸ್ತೂರಿ ಕೃಷ್ಣ ರಾವ್ ಇವರುಗಳ ಲೇಖನಗಳನ್ನು ನೀಡಲಾಗಿದೆ. ಮೊದಲ ಭಾಗ ಸಂಶೋಧನೆಯಲ್ಲಿ ಕೂಡ್ಲು ಮೇಳ, ಮೇಳದ ಪ್ರದರ್ಶನಗಳು, ಮೇಳದಲ್ಲಿ  ತಿರುಗಾಟ, ಕಲಾವಿದರುಗಳು ಮೊದಲಾದ ವಿಚಾರಗಳ ಬಗೆಗೆ ಮಾಹಿತಿಗಳನ್ನೂ ನೀಡಿರುತ್ತಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಹಾಸ್ಯಗಾರನ ಅಂತರಂಗ – ಪೆರುವಡಿ ನಾರಾಯಣ ಭಟ್ಟರ ಆತ್ಮಕಥನ 

‘ಹಾಸ್ಯಗಾರನ ಅಂತರಂಗ’ ಎಂಬ ಕೃತಿಯು ಖ್ಯಾತ ಹಾಸ್ಯಗಾರರಾದ ಶ್ರೀ ಪೆರುವಡಿ ನಾರಾಯಣ ಭಟ್ಟರ ಆತ್ಮಕಥನವಾಗಿ ಪ್ರಕಟಗೊಂಡು ಓದುಗರ ಕೈ ಸೇರಿದೆ. 2002ರಲ್ಲಿ ಇದು ಪ್ರಕಟವಾಗಿತ್ತು. ಪೆರುವಡಿ ಹಾಸ್ಯಗಾರರು ಸಂಘಟಕರಾಗಿಯೂ ಕಲಾಸೇವೆಯನ್ನು ಮಾಡಿದವರು. ಅನೇಕ ವರ್ಷಗಳ ಕಾಲ ಮುಲ್ಕಿ ಮೇಳವನ್ನು ನಡೆಸಿದ್ದರು.

ಹಿರಿಯ ಹಾಸ್ಯಗಾರರ ಬಗೆಗೆ ಹೀಗೊಂದು ಆತ್ಮಕಥನವು ಪ್ರಕಟಗೊಂಡದ್ದು ಸಂತೋಷದ ವಿಚಾರವು. ಈ ಕೃತಿಯ ನಿರೂಪಕರು ಶ್ರೀ ನಾ. ಕಾರಂತ ಪೆರಾಜೆ. ಪ್ರಕಾಶಕರು- ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು. ‘ನಿರೂಪಕನ ಅಂತರಂಗ’ ಎಂಬ ಬರಹದಲ್ಲಿ ಶ್ರೀ ನಾ. ಕಾರಂತರು ತಮ್ಮ ಮನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿರುತ್ತಾರೆ.

‘ಹಾಸ್ಯಗಾರನ ಅಂತರಂಗ’ ಎಂಬ ಈ ಆತ್ಮಕಥನವು, ಹಿಂದೆ, ಧರ್ಮಸ್ಥಳ ಮೇಳದವನಾದೆ, ಹಾಸನದಲ್ಲಿ ಹಾಸ್ಯದ ನಂಟು ನಂಟಿತು, ಕಿರೀಟ ಪತನ-ಅವಸಾನದ ಆಹ್ವಾನ-ನಂಬಿಕೆ-ನಿರ್ದೇಶನ, ಧರ್ಮಸ್ಥಳ ಮೇಳಕ್ಕೆ ವಿದಾಯ, ಮೂಲ್ಕಿ ಮೇಳದ ದಿಗ್ವಿಜಯ, ಋಣಾನುಬಂಧ, ಜೋಡಾಟ-ಮೇಲಾಟ, ವಿವಿಧ ಮೇಳಗಳಲ್ಲಿ ತಿರುಗಾಟ, ಮುಂದೆ…? ಎಂಬ ಹತ್ತು ವಿಭಾಗಗಳಿಂದ ಕೂಡಿದ್ದು ಶ್ರೀ ನಾ. ಕಾರಂತರು ಸುಂದರವಾಗಿ, ಸರಳವಾಗಿ ಓದುಗರಿಗೆ ಮನಮುಟ್ಟುವಂತೆ ನಿರೂಪಿಸಿದ್ದಾರೆ.

ಬಳಿಕ ರಾಜಹಾಸ್ಯ, ಬಡಗಿನವರಿಗೆ ತೆಂಕಿನ ಹಾಸ್ಯದ ರುಚಿ ಹಿಡಿಸಿದ ಹಾಸ್ಯಗಾರ, ಹಾಸ್ಯ ಸಂಶೋಧಕ, ಪಾಪಣ್ಣ ಭಟ್ಟರು, ಗುರು ಸಮಾನ ಹಿರಿಯ ಒಡನಾಡಿ, ವೈಚಾರಿಕ ಹಾಸ್ಯಗಾರ, ಆತ್ಮೀಯ ಸ್ನೇಹಿತ, ಸಹಜ ಹಾಸ್ಯ ಕೃತಕವಲ್ಲ, ಪ್ರಾಮಾಣಿಕ ಹಾಸ್ಯಗಾರ, ಸರ್ವಾಂಗೀಣ ಕಲಾವಿದ, ಒಡನಾಟದ ನೆನಪು, ಚಿಂತನಶೀಲ ವಿದೂಷಕ, ರಂಗತಂತ್ರಜ್ಞ ಭಾಗವತ, ಮೇಳದ ತಂತ್ರಜ್ಞ ಹಾಸ್ಯಗಾರ ಎಂಬ ಹದಿನಾಲ್ಕು ಲೇಖನಗಳಿವೆ. ಲೇಖನಗಳನ್ನು ಬರೆದವರು ಕ್ರಮವಾಗಿ ಎಚ್. ಸುಬ್ಬಣ್ಣ ಭಟ್, ಎಚ್. ಶ್ರೀಧರ ಹಂದೆ, ಪಾತಾಳ ವೆಂಕಟ್ರಮಣ ಭಟ್, ಎಚ್. ಜನಾರ್ದನ ಹಂದೆ, ಮಧೂರು ಗಣಪತಿ ರಾವ್, ಕೆ. ಗೋವಿಂದ ಭಟ್, ಕೊಳಗಿ ಅನಂತ ಹೆಗಡೆ, ಕಡತೋಕಾ ಮಂಜುನಾಥ ಭಾಗವತ, ಹಿರಿಯಡಕ ಗೋಪಾಲ ರಾವ್, ವರದರಾಯ ಪೈ, ಎಂ.ಕೆ ರಮೇಶಾಚಾರ್ಯ, ಅರುವ ನಾರಾಯಣ ಶೆಟ್ಟಿ, ಮತ್ತು ಶೇಣಿ ಗೋಪಾಲಕೃಷ್ಣ ಭಟ್ಟರು. ಅಲ್ಲದೆ ಹನ್ನೊಂದು ಬಣ್ಣದ ಛಾಯಾಚಿತ್ರಗಳನ್ನೂ ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಕೊರೋನಾ – ಲಕ್ಷಕ್ಕಿಂತ ಹೆಚ್ಚು ಸೋಂಕು ಇರುವ ದೇಶಗಳು ಯಾವುದು ಗೊತ್ತೇ?

ವಿಶ್ವದಾದ್ಯಂತ ಇಂದು ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 4 ಕೋಟಿಯ 33 ಲಕ್ಷಕ್ಕೂ ಮೀರಿ ಮುನ್ನುಗ್ಗುತ್ತಾ ಇದೆ. ಅದರಲ್ಲಿ ಯಾವ್ಯಾವ ದೇಶದಲ್ಲಿ ಎಷ್ಟು ಸೋಂಕಿತರಿದ್ದಾರೆ?

ಅದರಲ್ಲೂ ಒಂದು ಲಕ್ಷಕ್ಕಿಂತ ಹೆಚ್ಚಿನ ಸೋಂಕಿತರಿರುವ ದೇಶಗಳು ಯಾವುವು? ಒಂದು ಲಕ್ಷಕ್ಕಿಂತ ಹೆಚ್ಚಿನ ಸೋಂಕಿತರಿರುವ ದೇಶಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ. 

ದೇಶಸಕ್ರಿಯಮರಣಗುಣಮುಖಒಟ್ಟು ಪ್ರಕರಣ
USA (America)288617123051057724988889179
India65602611903071339947909050
Brazil40105015716348359155394128
Russia3493052605011385221513877
France993424347611103221138507
Spain925244347521503761110372
Argentina166874288968948191090589
Colambia70280301549154511015885
Mexico15188188924650355891160
Peru4693034149807636888715
UK82812444896780873800
South Africa5073018968646170715868
Iran8122632616455054568896
Italy22224137338266203525782
Chile986713944478252502063
Iraq5973510623381349451707
Germany11049910138317000437637
Bangaladesh779055803315107398815
Indonesia6264913299313764389712
Philippines350156977328036370028
Turkey376129799314390361801
Soudi Arabia82495296331330344875
Ukraine1955996391141508343498
Pakistan106686736310491327895
Belgium2871341081023087321031
Israel144402397293109309946
Netharlands28420870460291254
Czechia158515220197381258097
Poland1366314438112619253688
Canada247299946181429216104
Roamania535166391149741209648
Morocco309853301163195197481
Ecuador732312553141759161635
Nepal45572847111670158089
Bolivia235508645108658140853
Qatar2841230128099131170
Panama213362633105231129200
UAE5715477118931125123
Dominican196532223102651124527
Kuwait8118746112771121635
Portugal47493231668877118686
Oman12480117499278112932
Swedan10466159330110594
Kazhakistan31281796105618110542
Egypt1438619998903106540
Guatemala6926364494217104787
Switzerland45770208355800103653
Costa Rica39769128262037103088
World Total 1028387011590823190084543343797

ಕೆ. ಗೋವಿಂದ ಭಟ್ ಅವರೊಂದಿಗೆ  ಮಾತುಕತೆ – ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ  58ನೇ  ಕಾರ್ಯಕ್ರಮದಲ್ಲಿ ಇಂದು ಅಂದರೆ  ಅಕ್ಟೋಬರ್ 25ರಂದು ಆದಿತ್ಯವಾರ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಸೂರಿಕುಮೇರಿ ಗೋವಿಂದ ಭಟ್  ಅವರೊಂದಿಗೆ ಮಾತುಕತೆ ನಡೆಯಲಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.

2020ನೇ ಅಕ್ಟೋಬರ್ ೨೫ ಆದಿತ್ಯವಾರ ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ.  ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. ಲಿಂಕ್ ಕೆಳಗಡೆ ಇದೆ.