Sunday, August 30, 2026
Home Blog Page 344

ಅತಿಯಾದ ಭಾವನಾತ್ಮಕ ವಿಚಾರಗಳು – ನಿಭಾಯಿಸುವುದು ಹೇಗೆ? – ಮಾನಸಿಕ ತಜ್ಞೆ ಡಾ. ಸ್ನೇಹಾ 

ಮನುಷ್ಯ ಅಂದಮೇಲೆ ಅಲ್ಲಿ ಭಾವನಾತ್ಮಕ ಯೋಚನೆ ಮತ್ತು ಸಂಬಂಧಗಳು ಇರಲೇಬೇಕು. ಮಾನವನಿಗೆ ಮಾತ್ರವಲ್ಲ,ಪ್ರಪಂಚದ ಜೀವಿಗಳೆಲ್ಲವೂ ಒಂದು ರೀತಿಯ ಭಾವನಾ ಪ್ರಪಂಚದ ವರ್ತುಲದೊಳಗೆ ಸುತ್ತು ಹಾಕುತ್ತಿರುತ್ತವೆ.

ಅದು ಮನಸ್ಸಿನ ವಿಚಾರ. ಮನಸ್ಸು ಭಾವನಾತ್ಮಕವಾಗಿ ಯೋಚಿಸಿತೊಡಗಿದರೆ ಅಥವಾ ಅತಿಯಾದ ಭಾವುಕತನ ಎಂಬುದು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ?

ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ಅವರು ಈ ವಿಡಿಯೋದಲ್ಲಿ Emotions ಮತ್ತು ಅತಿಯಾದ ಭಾವನಾತ್ಮಕ ವಿಚಾರಗಳನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ತಿಳಿಯಲು ಕೆಳಗಿನ ವಿಡಿಯೋ ನೋಡಿ 

ಮೇಳಗಳ ಇಂದಿನ (26.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (26.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಅರಗ ಬ್ರಹ್ಮದೇವರಗದ್ದೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ = ಶ್ರೀಧಾಮ, ಮಾಣಿಲ ವಯಾ ಪೆರುವಾಯಿ ಬಂಟ್ವಾಳ   

ಕಟೀಲು ಎರಡನೇ ಮೇಳ ==   ಕಂಬಳಪದವು ಪಜೀರು ವಯಾ ಕೊಣಾಜೆ ಮಂಗಳೂರು 

ಕಟೀಲು ಮೂರನೇ ಮೇಳ=  ‘ಶ್ರೀ ದೇವಿ ಅನುಗ್ರಹ’ ದೇರೆಬೈಲು-ಕೊಂಚಾಡಿ ಶ್ರೀ ನಾಗಸನ್ನಿಧಿ ದೇವಸ್ಥಾನ ರಸ್ತೆ 

ಕಟೀಲು ನಾಲ್ಕನೇ ಮೇಳ  == ಕೇಪು ಜಡ್ಡುಮನೆ, ಎಣ್ಣೆಹೊಳೆ ಕಾರ್ಕಳ 

ಕಟೀಲು ಐದನೇ ಮೇಳ == ಪಲ್ಲಮಜಲು, ಮೊಡಂಕಾಪು ವಯಾ ಬಿ.ಸಿ. ರೋಡ್ , ಬಂಟ್ವಾಳ 

ಕಟೀಲು ಆರನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ, ಹೊಳ್ಳರಬೈಲು, ಅಮ್ಟಾಡಿ, ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  ==  ರುದ್ರಾಕ್ಷಿಬೈಲು, ಭಂಡಿಗಡಿ, ಕೊಪ್ಪ 

ಮಂದಾರ್ತಿ ಎರಡನೇ ಮೇಳ   ==   ಓದೂರು, ಸೋಮೇಶ್ವರ, ಹೆಬ್ರಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  ==   ಬಡಾಹೋಳಿ, ಕಾರ್ಕಡ, ಸಾಲಿಗ್ರಾಮ 

ಮಂದಾರ್ತಿ ನಾಲ್ಕನೇ ಮೇಳ   ==  ವಾಸುದೇವ ಕೃಪಾ, ಗುಬ್ಬುಕೋಣು, ಕನ್ಯಾನ, ತಲ್ಲೂರು 

ಮಂದಾರ್ತಿ    ಐದನೇ ಮೇಳ  ==  ಓದೂರು, ಸೋಮೇಶ್ವರ, ಹೆಬ್ರಿ – ಕೂಡಾಟ 

ಶ್ರೀ ಹನುಮಗಿರಿ ಮೇಳ  ==  ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊಣಾಲು – ಶ್ರೀಕೃಷ್ಣ ವಿವಾಹ, ಶಾಂಭವಿ ವಿಜಯ  (ರಾತ್ರಿ10ರಿಂದ)

ಶ್ರೀ ಸಾಲಿಗ್ರಾಮ ಮೇಳ == ಮೂಲ್ಕಿ ಶಿಮಂತೂರು ಆದಿ ಜನಾರ್ದನ ದೇವಸ್ಥಾನ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಪೆರ್ಡೂರು ಮೇಳ == ಕುಂದಬಾರಂಬಾಡಿ – ಅಹಂ ಬ್ರಹ್ಮಾಸ್ಮಿ 

ಶ್ರೀ ಸುಂಕದಕಟ್ಟೆ ಮೇಳ  ==  ಮೂಡಬಿದ್ರೆ ಸಂಜೀವ ಶೆಟ್ಟಿ ಸಭಾಭವನ, ಒಂಟೆಕಟ್ಟೆ – ದಕ್ಷಾಧ್ವರ, ಶಾಂಭವಿ ವಿಜಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಜಾಡಿಮನೆ ಹೊಸಕಳಿ ಹೆಮ್ಮಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ನಾರ್ಕಳಿ ಗುಜ್ಜಾಡಿಮನೆ  

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಹಟ್ಟಿಯಂಗಡಿ ಕ್ರಾಸ್ ಕನ್ಯಾನ 

ಶ್ರೀ ಪಾವಂಜೆ ಮೇಳ  ==  ಕಂಗಣಬೆಟ್ಟು ವಾಸುಕಿ ನಾಗಬ್ರಹ್ಮ ಅಬ್ಬಗದಾರಗ ಸಿರಿಗಳು ಅಣ್ಣಪ್ಪ ಪಂಜುರ್ಲಿ ದೇವಸ್ಥಾನ ಟ್ರಸ್ಟ್ ಉಡುಪಿ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಶ್ರೀ ರಾಘವೇಂದ್ರ ಭಕ್ತವೃಂದ ಇಡಗುಂಜಿ – ಪ್ರಮೀಳಾರ್ಜುನ (ರಾತ್ರಿ 9.30ಕ್ಕೆ) ದಿವ್ಯ ಸನ್ನಿಧಿ (ರಾತ್ರಿ10.30ಕ್ಕೆ)

ಕಮಲಶಿಲೆ ಮೇಳ ‘ಎ‘ = ಜನ್ಸಾಲೆ 

ಕಮಲಶಿಲೆ ಮೇಳ ‘ಬಿ‘ == ಶ್ರೀ ಚಂಡಿಕಾಂಬಾ ದೇವಸ್ಥಾನ ಬಾಳೆಬರೆ, ಹುಲಿಕಲ್ 

ಶ್ರೀ ಬಪ್ಪನಾಡು ಮೇಳ == ಸಾಯಿ ಫ್ರೆಂಡ್ಸ್ ಬಂಟ್ವಾಳ, ಕೊಯಿಲ ಪರಾರಿಬೈಲ್ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಾರ್ಯ ವಿಷ್ಣುಮೂರ್ತಿ ದೇವಸ್ಥಾನದ ವಠಾರ – ರಂಗಸ್ಥಳ (ಸಂಜೆ 9ರಿಂದ)

ಶ್ರೀ ಅಮೃತೇಶ್ವರೀ ಮೇಳ == ಹೊಳೆಬದಿಮನೆ, ಮೂಡುಗಿಳಿಯಾರು

ಶ್ರೀ ಬೋಳಂಬಳ್ಳಿ ಮೇಳ== ಆಚಾರ್ಬೆಟ್ಟು  ಹಟ್ಟಿಕುದ್ರು – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ == ರಟ್ಟಾಡಿ ಹೊರಳಿಜೆಡ್ಡು – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಮಂಕಿ ದೇವಕಾನ ದುರ್ಗಾಪರಮೇಶ್ವರಿ ದೇವಸ್ಥಾನ – ಸುದರ್ಶನ, ಮಾರುತಿ ಪ್ರತಾಪ 

ಶ್ರೀ ಬೆಂಕಿನಾಥೇಶ್ವರ ಮೇಳ  == ವಡೆಯರ ಹೋಬಳಿ (ಕುಂದಾಪುರ) – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ನಾವುಂದ ಮಸ್ಕಿ ಕಾವೇರಿ ಮನೆ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಗೋಳಿಯಂಗಡಿ ಹೊಯಿಗೆ ಬೆಳಾರ್ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಜಂಗೊಟ್ಟು (ಈದು ಹೊಸ್ಮಾರು) – ಪವಿತ್ರ ಫಲ್ಗುಣಿ  

ಶ್ರೀ ಶನೀಶ್ವರ ಮೇಳ == ಹಂಡ ಬ್ರಹ್ಮಾವರ 

ಶ್ರೀ ಸಿಗಂದೂರು ಮೇಳ == ಪದ್ಮನಗದ್ದೆ ಚೌಡೇಶ್ವರಿ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಕೋಟ ಅಮೃತೇಶ್ವರಿ ದೇವಸ್ಥಾನದ ಬಳಿ

ಶ್ರೀ ಮಂಗಳಾದೇವಿ ಮೇಳ == ಎಡಪದವು ಕೋರಟ್ಟು ದೇವಸ್ಥಾನದ ಬಳಿ – ಬೂಡುದ ಭಂಡಾರ (ತುಳು)

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕೋಣಂದೂರು ಉಡ್ಕಿರೆ 

ಶ್ರೀ ಮೇಗರವಳ್ಳಿ ಮೇಳ == ಮಂಕಿಕೋಟ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಚಂದ್ರಾವಳಿ, ಕಾರ್ತವೀರ್ಯ, ವೀರ ಅಭಿಮನ್ಯು 

ಅಪ್ಸರಾ – ಕಾಂಬೋಡಿಯದ ಆಕರ್ಷಣೀಯ ನೃತ್ಯಶೈಲಿ; ಮನಸೆಳೆಯುವ ವೀಡಿಯೊ ನೋಡಿ

  ಇತಿಹಾಸ ಮತ್ತು ಸಂಪ್ರದಾಯದಲ್ಲಿ ಮುಳುಗಿರುವ ದೇಶ ಕಾಂಬೋಡಿಯ. ಇಲ್ಲಿಯ ರಾಣೀವಾಸದ ಆಶ್ರಯದಲ್ಲಿ ಕಾಂಬೋಡಿಯಾದ ಸಾಂಪ್ರದಾಯಿಕವಾದ ಅಪ್ಸರಾ ಎಂಬ ನೃತ್ಯಶೈಲಿಗೆ ಪುನಶ್ಚೇತನವನ್ನು ನೀಡಲಾಯಿತು.

ಅಪ್ಸರಾ ಎಂದರೆ  ವಾಸ್ತವವಾಗಿ ಹಿಂದೂ ಮತ್ತು ಬೌದ್ಧ ಪುರಾಣಗಳಲ್ಲಿ ಕಂಡುಬರುವ ಸ್ತ್ರೀ ಚೇತನ ಅಥವಾ ಅಪ್ಸರೆ. ದೇವಲೋಕದ ಸ್ತ್ರೀ. ಸುಂದರವಾಗಿ ಆಕರ್ಷಣೀಯವಾಗಿ ಕಾಣುವ ಸ್ತ್ರೀಯರನ್ನು ಕೂಡಾ ಅಪ್ಸರಾ ಎಂದು ಕರೆಯುತ್ತಾರೆ. ಇಲ್ಲಿಯೂ ಕೂಡಾ ಸುಂದರವಾದ ಸ್ತ್ರೀಯರು ಬಿಗಿಯಾದ ಆಕರ್ಷಕ ಉಡುಪುಗಳನ್ನು ಧರಿಸಿ ಈ ನೃತ್ಯ ಮಾಡುತ್ತಾರೆ. 

ಕಾಂಬೋಡಿಯಾದ ಆಂಗ್ಕೋರಿಯನ್ ದೇವಾಲಯಗಳ (ಕ್ರಿ.ಶ. 8 ರಿಂದ 13 ನೇ ಶತಮಾನಗಳು) ಕಲ್ಲಿನ ಶಿಲ್ಪ ಮತ್ತು ಕೆತ್ತನೆಗಳಲ್ಲಿ  ಅಪ್ಸರಾ ನೃತ್ಯಶೈಲಿಯೂ ಎದ್ದು ಕಾಣುತ್ತದೆ.  ಅಪ್ಸರ ನೃತ್ಯ ಶೈಲಿಯು ಭಾರತೀಯ ನೃತ್ಯ ಸಂಯೋಜನೆಯೊಂದಿಗೆ, ನೃತ್ಯ ಮಾಡುವ ಅಥವಾ ನೃತ್ಯ ಮಾಡಲು ಸಿದ್ಧವಾಗಿರುವ ಖಮೇರ್ ಸ್ತ್ರೀ ವ್ಯಕ್ತಿಗಳನ್ನು ಅಪ್ಸರಾ ಎಂದು ಪರಿಗಣಿಸಲಾಗುತ್ತದೆ. 

ಈ ಮನಸೆಳೆಯುವ ವೀಡಿಯೊ ನೋಡಿ 
 

ಅಪ್ಸರಾ ನೃತ್ಯ ಎಂದರೇನು? ಆತ್ಮಗಳು ಮನುಷ್ಯರನ್ನು ತಮ್ಮ ಸೌಂದರ್ಯದೊಂದಿಗೆ ಸೆಳೆಯಲು ಉದ್ದೇಶಿಸಿರುವುದರಿಂದ, ನೃತ್ಯದ ಚಲನೆಗಳು ಈ ಕಲ್ಪನೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಪ್ರೇಕ್ಷಕರನ್ನು ಸಂಮೋಹನಗೊಳಿಸುವ ನಿಧಾನಗತಿಯ, ಮೋಡಿಮಾಡುವ ಚಲನೆಗಳನ್ನು ಒಳಗೊಂಡಿವೆ.  

ನೃತ್ಯದ ಮುಖ್ಯ ಲಕ್ಷಣಗಳು ಕೈ ಸನ್ನೆಗಳು, ಮತ್ತು 1,500 ಕ್ಕೂ ಹೆಚ್ಚು ಅಸ್ತಿತ್ವದಲ್ಲಿವೆ. ಬೆರಳುಗಳ ಪ್ರತಿಯೊಂದು ಚಲನೆಯು ತನ್ನದೇ ಆದ ವಿಶಿಷ್ಟ ಅರ್ಥವನ್ನು ಹೊಂದಿದೆ. ಹೆಬ್ಬೆರಳು ಮತ್ತು ತೋರುಬೆರಳನ್ನು ಒಟ್ಟಿಗೆ ಒತ್ತುವ ಮೂಲಕ ಮತ್ತು ಉಳಿದ ಬೆರಳುಗಳನ್ನು ಹೊರಗೆ ಹಾಕುವ ಮೂಲಕ ವ್ಯಾಖ್ಯಾನಿಸಲಾದ ಕೈ ಸ್ಥಾನ – ಸಂಕೋಚ, ನಗೆ, ಪ್ರೀತಿ ಮತ್ತು ದುಃಖ ಸೇರಿದಂತೆ ಹಲವು ವಿಭಿನ್ನ ಅರ್ಥಗಳನ್ನು ಹೊಂದಿದೆ.

ಸೊಗಸಾದ ರೇಷ್ಮೆ ಬಟ್ಟೆ, ಬೆರಗುಗೊಳಿಸುತ್ತದೆ ರತ್ನಖಚಿತ ಶಿರಸ್ತ್ರಾಣಗಳು ಮತ್ತು ಅಮೂಲ್ಯವಾದ ಹಾರಗಳು, ಕಿವಿಯೋಲೆಗಳು, ಕಡಗಗಳು ಮತ್ತು ಕಣಕಾಲುಗಳನ್ನು ಒಳಗೊಂಡಿರುವ ಅಪ್‌ಸರಾಗಳನ್ನು ಅವರ ವಿಸ್ತಾರವಾದ ಉಡುಪಿನಿಂದ ಗುರುತಿಸಲಾಗಿದೆ.  

ಆಧುನಿಕ ದಿನದ ಅಪ್ಸರಾ 1975-1979ರ ಮಾರಕ ಖಮೇರ್ ರೂಜ್ ಆಳ್ವಿಕೆಯಲ್ಲಿ, ದೇಶದ 90 ಪ್ರತಿಶತ ಕಲಾವಿದರು ಕೊಲ್ಲಲ್ಪಟ್ಟರು. ಈ ಹತ್ಯಾಕಾಂಡದಲ್ಲಿ ಅಪ್ಸರಾ ನರ್ತಕರು ಸೇರಿದ್ದರು, ಮತ್ತು ಕಲಾ ಪ್ರಕಾರವನ್ನು ಪೋಲ್ ಪಾಟ್ ನೇತೃತ್ವದ ಆಡಳಿತವು ಬಹುತೇಕ ಅಳಿಸಿಹಾಕಿತು. ಅದೃಷ್ಟವಶಾತ್, ಕೆಲವು ನರ್ತಕರು ಬದುಕುಳಿದರು ಮತ್ತು ತಮ್ಮ ಜ್ಞಾನವನ್ನು ಯುವ ಪೀಳಿಗೆಗೆ ತಲುಪಿಸಲು ಸಾಧ್ಯವಾಯಿತು.

ಮನವಳಿಕೆ ಗುತ್ತುವಿನಲ್ಲಿ ಯಕ್ಷಾರಾಧನೆ ಮತ್ತು ಸಾಧಕರಿಗೆ ಸನ್ಮಾನ ಯಕ್ಷಗಾನದ ಮೂಲಕ ಧರ್ಮಪ್ರಜ್ಞೆ ಮೂಡಿಸುವ ಕಾರ್ಯವಾಗಲಿ – ಒಡಿಯೂರು ಶ್ರೀ

‘ದೈವ ದೇವರುಗಳನ್ನು ಶ್ರದ್ಧಾ ಭಕ್ತಿಯಿಂದ ಆರಾಧನೆ ಮಾಡಿದರೆ ಆ ದೈವ ಶಕ್ತಿಗಳು ಮನುಷ್ಯನನ್ನು ಕೈಹಿಡಿದು ಮುನ್ನಡೆಸುತ್ತವೆ. ಮನವಳಿಕೆ ಗುತ್ತಿನಲ್ಲಿ ದೈವದೇವರ ಆರಾಧನೆಯಿಂದ ಆ ಮನೆತನದವರಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಧಾರ್ಮಿಕ ಪ್ರಜ್ಞೆ ಸದಾ ಇದೆ.

ಇದರೊಂದಿಗೆ ಯಕ್ಷಗಾನ ಸೇವೆಯನ್ನೂ ನಡೆಸುತ್ತಿರುವುದು ಸ್ತುತ್ಯರ್ಹ.ಯಕ್ಷಗಾನ ನವರಸಪ್ರಧಾನ ಕಲೆ. ಮನುಷ್ಯನಿಗೆ ಯಕ್ಷಗಾನದಿಂದ ನೈಪುಣ್ಯತೆ, ಕೌಶಲ್ಯತೆ ಬರುವುದರ ಜೊತೆಗೆ ಅದು ಧಾರ್ಮಿಕ ಪ್ರಜ್ಞೆಯನ್ನೂ ಮೂಡಿಸುತ್ತದೆ’ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಪೆರಾಬೆ ಗ್ರಾಮದ ಮನವಳಿಕೆ ಗುತ್ತುವಿನಲ್ಲಿ ಬೆಂಗಳೂರು ಉದ್ಯಮಿ ಹೇಮಂತ್‍ ರೈ ಮನವಳಿಕೆ ಗುತ್ತು ಅವರು ಏರ್ಪಡಿಸಿದ ಯಕ್ಷಾರಾಧನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು. ‘ಯಕ್ಷಗಾನದ ಮೂಲಕ ಧರ್ಮಪ್ರಜ್ಞೆ ಮೂಡಿಸುವ ಕಾರ್ಯವಾಗಲಿ’ ಎಂದು ತಿಳಿಸಿ ‘ಸುಸಂಸ್ಕೃತ ಮನೆತನದಿಂದ ಒಳ್ಳೆಯ ಕೆಲಸ ಕಾರ್ಯಗಳು ನಡೆಯಲು ಸಾಧ್ಯ’ ಎಂದವರು ನುಡಿದರು.

ಮಕ್ಕಳಿಂದ ಸಂಸ್ಕಾರ ಉಳಿಯಬೇಕು : ಐಕಳ ಹರೀಶ್ ಶೆಟ್ಟಿ
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಾಗತಿಕ ಬಂಟ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮಾತನಾಡಿ ‘ಸಮಾಜದಲ್ಲಿ ಸತ್ಕಾರ್ಯಗಳು ನಡೆಯಬೇಕಾದರೆ ಮಕ್ಕಳಿಂದ ಸಂಸ್ಕಾರ ಉಳಿಯಬೇಕು. ಬಂಟ ಸಮಾಜವು ಎಲ್ಲಾ ಸಮಾಜದವರನ್ನು ಪ್ರೀತಿ ಮಾಡುವ ಸಮುದಾಯವಾಗಿದ್ದು ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಕೀರ್ತಿಗೆ ಪಾತ್ರವಾಗಿದೆ. ಜಾಗತಿಕ ಬಂಟ ಸಂಘಗಳ ಒಕ್ಕೂಟದಿಂದ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರಿಗೆ 120 ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿರುವುದಲ್ಲದೆ ಅರ್ಹ ಫಲಾನುಭವಿಗಳಿಗೆ ವಿವಿಧ ಬಗೆಯಲ್ಲಿ ಆರ್ಥಿಕ ನೆರವುವನ್ನೂ ನೀಡಲಾಗಿದೆ ಎಂದು ತಿಳಿಸಿ ‘ಹೇಮಂತ್ ರೈ ಮನವಳಿಕೆ ಗುತ್ತು ರಂತಹ ಸಾಮಾಜಿಕ ಕಳಕಳಿಯುಳ್ಳವರು ಹುಟ್ಟಿದರೆ ಆ ಕುಟುಂಬವೇ ಸಾರ್ಥಕ’ ಎಂದು ನುಡಿದರು.

ಯಕ್ಷಧ್ರುವ ಪಟ್ಲ ಪೌಂಡೇಷನ್‍ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ. ‘ಹೇಮಂತ್ ರೈ ಮನವಳಿಕೆ ಗುತ್ತು ಅವರು ಯಕ್ಷಧ್ರುವಪಟ್ಲ ಪೌಂಡೇಷನ್‍ನ ಚೆನ್ನೈ ಘಟಕದ ಸ್ಥಾಪನೆಗೆ ಮೂಲ ಪ್ರೇರಕರಾಗಿದ್ದು ಆ ಮೂಲಕ ಟ್ರಸ್ಟ್‍ಗೆ ಮನವಳಿಕೆ ಗುತ್ತಿನ ಋಣವಿದೆ ಎಂದು ತಿಳಿಸಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ಇನ್ನಷ್ಟು ಧರ್ಮಕಾರ್ಯ ಮಾಡಲು ಭಗವಂತ ಅನುಗ್ರಹಿಸಲಿ’ ಎಂದು ಶುಭ ಹಾರೈಸಿದರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹೇಮಂತ್ ರೈ ಮನವಳಿಕೆ ಗುತ್ತು ಅವರು ‘ದುರ್ಗಾದೇವಿ ರೌದ್ರಾವತಾರದಲ್ಲಿ ಧೂಮ್ರಾಕ್ಷನನನ್ನು ವಧೆ ಮಾಡಿದ ದಿವ್ಯಶಕ್ತಿಯಾಗಿ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳು ನೆಲೆನಿಂತ ಜಾಗವೇ ಮನವಳಿಕೆ ಗುತ್ತು ಆಗಿದೆ. ಈ ಮನೆತನದಲ್ಲಿ ಹಿರಿಯರಾದ ಕರಿಯಪ್ಪ ರೈ, ಉಮೇಶ್ ರೈ ಮನವಳಿಕೆ ಹಾಗೂ ಇನ್ನಿತರರು ರಾಜಕೀಯ, ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಮುಂದಿನ ದಿವಸಗಳಲ್ಲಿ ಇನ್ನಷ್ಟೂ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದರು.

ಯುವಸಾಧಕರಿಗೆ ಸನ್ಮಾನ :
ಸಮಾರಂಭದಲ್ಲಿ ಮನವಳಿಕೆ ಗುತ್ತಿನವರಾದ ವೈದ್ಯಕೀಯ ಸಾಧಕ ಮನವಳಿಕೆ ಡಾ. ಅಭಿಷೇಕ್ ಶೆಟ್ಟಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ  ಮನವಳಿಕೆ ಅಭಿಷೇಕ್ ಎನ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಭಿಷೇಕ್ ಎನ್. ಶೆಟ್ಟಿ ಪರವಾಗಿ ತಂದೆ ಜಗನ್ನಾಥ್ ಶೆಟ್ಟಿ ಮತ್ತು ತಾಯಿ ತುಳಸಿ ಶೆಟ್ಟಿಯವರು ಸನ್ಮಾನ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಅಭಿನಂದಿಸಲಾಯಿತು. ನಿತ್ಯಾನಂದ ಶೆಟ್ಟಿ ಮನವಳಿಕೆ, ಸುಭಾಷ್ ರೈ ಮನವಳಿಕೆ ಮತ್ತು ಮನವಳಿಕೆ ಗುತ್ತು ಲಕ್ಷ್ಮೀನಾರಾಯಣ ರೈ ಹರೇಕಳ ಅವರು ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಮತ್ತು ಬರೋಡದ ಉದ್ಯಮಿ ಶಶಿಧರ ಶೆಟ್ಟಿ, ಬರೋಡ ಶುಭಹಾರೈಸಿದರು.

ಪುತ್ತೂರು ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೊಡಗು ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ ಮಡಿಕೇರಿಯ ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಮತ್ತು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಹೇಶ್ ಮೋಟಾರ್ಸ್‍ನ ಮಾಲಕರಾದ ಎ.ಕೆ. ಜಯರಾಮ ಶೇಖ, ಮನವಳಿಕೆ ಗುತ್ತಿನ ಯಜಮಾನ ರಮಾನಾಥ ರೈ ಮತ್ತು ವಿಠಲ ರೈ ಮನವಳಿಕೆ ಗುತ್ತು ಉಪಸ್ಥಿತರಿದ್ದರು.

ದಯಾನಂದ ರೈ ಮನವಳಿಕೆ ಗುತ್ತು ಸ್ವಾಗತಿಸಿ, ಪ್ರಶಾಂತ್ ರೈ ಮನವಳಿಕೆ ಗುತ್ತು ಧನ್ಯವಾದ ಸಮರ್ಪಿಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಅಪೂರ್ವ ಜೆ. ಶೆಟ್ಟಿ ಪ್ರಾರ್ಥಿಸಿದರು, ಮನವಳಿಕೆ ಗುತ್ತಿನ ಗೋಪಾಲಕೃಷ್ಣ ರೈ, ರಾಧಾಕೃಷ್ಣ ರೈ, ವಿಜಯಕುಮಾರ್ ರೈ, ರಾಧಾಕೃಷ್ಣ ರೈ ದೆಹಲಿ, ಸುಧಾಕರ ರೈ, ಪ್ರದೀಪ್ ರೈ ಸಹಕರಿಸಿದರು.

ಸಭೆಯ ಬಳಿಕ ಜ್ಞಾನ ಶಕ್ತಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.

ಮೇಳಗಳ ಇಂದಿನ (25.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (25.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಟೆಂಕಬೈಲು ನೇರಳೆಮನೆ ಶ್ರೀ ಅಮೃತಲಿಂಗೇಶ್ವರ ದೇವಸ್ಥಾನದ ವಠಾರ – ಕಂಸ ವಿವಾಹ, ಕರ್ಣಾರ್ಜುನ 

ಕಟೀಲು ಒಂದನೇ ಮೇಳ = ಒಡ್ಡಿದಕಳ ಬಜಪೆ ಮಂಗಳೂರು  

ಕಟೀಲು ಎರಡನೇ ಮೇಳ ==   ಗೋಂಜ ಮನೆ, ಚೆನೈತ್ತೋಡಿ ವಯಾ ವಾಮದಪದವು, ಬಂಟ್ವಾಳ 

ಕಟೀಲು ಮೂರನೇ ಮೇಳ= ಚಿವನಿಧಿ ನಿಲಯ, ಅಗ್ರಹಾರ ಚಾಂತಾರು ಬ್ರಹ್ಮಾವರ ಉಡುಪಿ 

ಕಟೀಲು ನಾಲ್ಕನೇ ಮೇಳ  == ಕಂದಾವರ ಕುಂಜಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರ ವಯಾ ಬಸ್ರೂರು  

ಕಟೀಲು ಐದನೇ ಮೇಳ == ‘ಅನ್ನಪೂರ್ಣ’, ಕೆನರಾ ಬ್ಯಾಂಕ್ ಎದುರು, ಮೇನ್ ರೋಡ್ ಕುಳಾಯಿ 

ಕಟೀಲು ಆರನೇ ಮೇಳ == ಸವಣಾಲು, ಶ್ರೀ ದುರ್ಗಾ ಕಾಳಿಕಾಂಬಾ ದೇವಸ್ಥಾನ ಕಾಳಿಬೆಟ್ಟು 

ಮಂದಾರ್ತಿ ಒಂದನೇ ಮೇಳ  ==  ಕೆಸವೆ ಕೊಪ್ಪ 

ಮಂದಾರ್ತಿ ಎರಡನೇ ಮೇಳ   ==   ಗುಂಡಿಗೋಳಿ, ಬೈಲುಮನೆ, ಬಸ್ರೂರು   

ಮಂದಾರ್ತಿ ಮೂರನೇ ಮೇಳ  ==   ಗುಡ್ಡಿಮನೆ, ಕರಿಕಲ್ ಕಟ್ಟೆ ಜಪ್ತಿ 

ಮಂದಾರ್ತಿ ನಾಲ್ಕನೇ ಮೇಳ   ==  ಮೂಡುಗೋಪಾಡಿ ಕೋಟೇಶ್ವರ 

ಮಂದಾರ್ತಿ    ಐದನೇ ಮೇಳ  ==  ಶ್ರೀ ಮುದ್ದುಸ್ವಾಮಿ ದೇವಸ್ಥಾನ ಮುದ್ದುಮನೆ 

ಶ್ರೀ ಹನುಮಗಿರಿ ಮೇಳ  ==  ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರ – ಶುಕ್ರನಂದನೆ (ಸಂಜೆ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಮಂಕಿ ಜಾತ್ರೆ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಸುಂಕದಕಟ್ಟೆ ಮೇಳ  ==  ಅಂಮುಂಜೆ ಕಲಾಯಿ – ವಜ್ರ ಕೋಗಿಲೆ 

ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ಎಡಮಲೆ (ನರಿಕೊಂಬು) – ಸಿರಿ ಚಂದನ (ಸಂಜೆ 6ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಭಟ್ರಮಕ್ಕಿ ಹೊಂಬಾಡಿ ಹುಣಸೆಮಕ್ಕಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಸೌಪರ್ಣಿಕಾ ನಿಲಯ ಉದ್ರಿಮನೆ ಮೊವಾಡಿ ತ್ರಾಸಿ  

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಮೂಡಬೈಲ್, ಅಮಾಸೆಬೈಲ್   

ಶ್ರೀ ಪಾವಂಜೆ ಮೇಳ  ==  ಪಾರಂಪಳ್ಳಿ ಪಡುಕೆರೆ, ಸಾಲಿಗ್ರಾಮ – ಮಹಾಕಲಿ ಮಗಧೇಂದ್ರ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಶ್ರೀ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನ, ದೊಂಬೆ ಶಿರೂರು – ದಿವ್ಯ ಸನ್ನಿಧಿ 

ಕಮಲಶಿಲೆ ಮೇಳ ‘ಎ‘ = ಕೆರೆಕಟ್ಟೆ  

ಕಮಲಶಿಲೆ ಮೇಳ ‘ಬಿ‘ == ಶ್ರೀ ಸಿದ್ಧಿವಿನಾಯಕ ಸನ್ನಿಧಿ, ಬೊರಗಲ್ , ಕೆ.ಬಿ.ಸರ್ಕಲ್ 

ಶ್ರೀ ಬಪ್ಪನಾಡು ಮೇಳ == ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು, ಪುಣಚ್ಚತ್ತಾರು ಕಡಬ  – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಿಮಂತೂರು ಆದಿ ಜನಾರ್ದನ ದೇವಸ್ಥಾನದ ವಠಾರ – ರಂಗಸ್ಥಳ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ == ಬೆಟ್ಲಕ್ಕಿ ಚಿತ್ರಪಾಡಿ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ದೊಡ್ಡೋಣಿ ರಸ್ತೆ ಕೋಟೇಶ್ವರ  

ಶ್ರೀ ಸೌಕೂರು ಮೇಳ == ಸೌಕೂರು ದೇವಸ್ಥಾನದ ವಠಾರ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಕುಂದಾಪುರ ರೈಲ್ವೆ ಸ್ಟೇಷನ್ ಹತ್ತಿರ – ಕಂಸ ವಧೆ, ಅಬ್ಬರದ ಬೊಬ್ಬರ್ಯ (ಕಾಲಮಿತಿ) (8.30ರಿಂದ)

ಶ್ರೀ ಬೆಂಕಿನಾಥೇಶ್ವರ ಮೇಳ  == ಬಿಜಾಡಿ ಬೊಬ್ಬರ್ಯ ದೇವಸ್ಥಾನ, ಹೊದ್ರೋಳಿ, ಬೀಜಾಡಿ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಕನ್ಯಾನ ಶಾಲಾ ವಠಾರ – ದೇವಿ ಶ್ರೀದೇವಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನಡೂರು ಗುಡ್ಡೆಯಂಗಡಿ – ಧರ್ಮದೈವ ಜುಮಾದಿ 

ಶ್ರೀ ಹಿರಿಯಡಕ ಮೇಳ == ತೋಡಾರು ಮಡಂಜಿರಬೈಲು – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಕರ್ಕಿ ಗುಡ್ಡೆ ಶ್ರೀ ಕೃಷ್ಣ ಮಿತ್ರ ಬಳಗ  

ಶ್ರೀ ಸಿಗಂದೂರು ಮೇಳ == ತಾರ್ಸಿ ಸಿದ್ಧಾಪುರ ಶ್ರೀ ಕಾಳಿಕಾ ದೇವಸ್ಥಾನದ ವಠಾರ 

ಶ್ರೀ ನೀಲಾವರ ಮೇಳ  == ಯಡ್ತಾಡಿ ಸೊಸೈಟಿಯ ಬಳಿ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==   ಸೋಮವಾರಸಂತೆ ತೀರ್ಥಹಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಬೈಂದೂರು ಶ್ರೀ ಶನೇಶ್ವರ ದೇವಸ್ಥಾನ – ಮಧುರ ಮನಸ್ವಿ 

ಭಾರತ-ಇಂಗ್ಲೆಂಡ್ ಮೂರನೇ (ಹಗಲು ರಾತ್ರಿ) ಟೆಸ್ಟ್: ಅಹಮದಾಬಾದ್‌ನ ಕ್ರಿಕೆಟ್ ಕ್ರೀಡಾಂಗಣಕ್ಕೆ ‘ನರೇಂದ್ರ ಮೋದಿ ‘ ಹೆಸರು

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಧ್ಯಕ್ಷ ಕೋವಿಂದ್ ಅವರು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವನ್ನು ಇಂದು ಬುಧವಾರ ಉದ್ಘಾಟಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ.

1,10,000 ಆಸನಗಳ ವ್ಯವಸ್ಥೆಯನ್ನು ಹೊಂದಿದ ಈ ನರೇಂದ್ರ ಮೋದಿ ಕ್ರೀಡಾಂಗಣವನ್ನು ಅಧ್ಯಕ್ಷ ಕೋವಿಂದ್, ಗೃಹ ಸಚಿವ ಶಾ, ಕ್ರೀಡಾ ಸಚಿವ ಕಿರೆನ್ ರಿಜಿಜು, ಗುಜರಾತ್ ಗವರ್ನರ್ ಆಚಾರ್ಯ ದೇವರಾತ್ ಅವರು ಭಾರತ-ಇಂಗ್ಲೆಂಡ್ 3ನೇ ಟೆಸ್ಟ್ (ಗುಲಾಬಿ ಬಣ್ಣದ ಚೆಂಡಿನ ಟೆಸ್ಟ್) ಪಂದ್ಯಕ್ಕಿಂತ ಮೊದಲು ಉದ್ಘಾಟಿಸಿದರು.

ಇದು  ಹಗಲು-ರಾತ್ರಿ ಟೆಸ್ಟ್ ಪಂದ್ಯ.  ಬುಧವಾರ ಕ್ರೀಡಾಂಗಣವನ್ನು ಅನಾವರಣಗೊಳಿಸಿದ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದನ್ನು ಭಾರತದ ಕ್ರೀಡಾ ರಾಜಧಾನಿಯನ್ನಾಗಿ ಮಾಡುವ ಸರ್ಕಾರದ ಯೋಜನೆಯನ್ನು ಬಹಿರಂಗಪಡಿಸಿದರು ಮತ್ತು ರಾಜ್ಯದಲ್ಲಿ ಕ್ರೀಡೆಗಳಿಗೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. 

ನರೇಂದ್ರ ಮೋದಿ ಕ್ರೀಡಾಂಗಣದ ಸಾಧಕಗಳನ್ನು ಪಟ್ಟಿ ಮಾಡಿದ ಅಮಿತ್ ಷಾ, ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಒಂದು ಸುವರ್ಣ ದಿನ ಎಂದು ಹೇಳಿದರು.  ಕ್ರೀಡಾಂಗಣವನ್ನು ರಚಿಸುವಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಗುಜರಾತ್ ಕ್ರಿಕೆಟ್ ಸಂಘ (ಜಿಸಿಎ) ಅವರನ್ನು ಶ್ಲಾಘಿಸಿದರು. 

ಮೊಟೇರಾ ಕ್ರೀಡಾಂಗಣ ಮತ್ತು ದೊಡ್ಡ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾ ಸಂಕೀರ್ಣ ಯಾವುದೇ ದೊಡ್ಡ ಕ್ರೀಡಾಕೂಟವನ್ನು ನಡೆಸಲು ಸಮರ್ಥವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.  ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಗ್ರ್ಯಾಂಡ್ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದು ನವೀಕರಣದ ನಂತರ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸುತ್ತದೆ. ಹಗಲು / ರಾತ್ರಿ ಟೆಸ್ಟ್‌ನ ಅಭಿಮಾನಿಗಳಿಂದ ಕ್ರೀಡಾಂಗಣದ 50% ತುಂಬಲು ಬಿಸಿಸಿಐ ಅವಕಾಶ ನೀಡಿದೆ. ಮೊಟೆರಾದಲ್ಲಿ ನಡೆದ 3 ನೇ ಟೆಸ್ಟ್‌ನ ಟಿಕೆಟ್‌ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
 

ಕೋವಿಡ್ -19 ನಿರ್ಬಂಧದಿಂದಾಗಿ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಮೊಟೆರಾ ಕ್ರೀಡಾಂಗಣದಲ್ಲಿಯೇ ನಡೆಯಲಿದೆ. ಇದಲ್ಲದೆ, ಸಂಪೂರ್ಣ 5 ಪಂದ್ಯಗಳ ಟಿ 20 ಸರಣಿಯು ಅಹಮದಾಬಾದ್‌ನಲ್ಲಿಯೂ ನಡೆಯಲಿದೆ.  

ಇಂದು ಸಂಪಾಜೆ ಯಕ್ಷೋತ್ಸವ – ಬ್ರಹ್ಮೈಕ್ಯ ಎಡನೀರು ಶ್ರೀಗಳ ಪುಣ್ಯಸ್ಮೃತಿ, ಪ್ರಶಸ್ತಿ ಪ್ರದಾನ, ಯಕ್ಷಗಾನೋತ್ಸವ 

ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಆಯೋಜಿಸುತ್ತಿರುವ ಅಭೂತಪೂರ್ವ ಕಾರ್ಯಕ್ರಮವಾದ ಸಂಪಾಜೆ ಯಕ್ಷೋತ್ಸವವು ಈ ಬಾರಿ ಇದೇ ಬರುವ ಮಾರ್ಚ್ 6, 2021, ಶನಿವಾರದಂದು ಸಂಜೆ 4 ಘಂಟೆಗೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಆರಂಭವಾಗಲಿದೆ.

ಉದ್ಘಾಟನಾ ಕಾರ್ಯಕ್ರಮ ಸಂಜೆ 4 ಘಂಟೆಯಿಂದ 5 ಘಂಟೆಯ ವರೆಗೆ ನಡೆಯಲಿದೆ. ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಶ್ರೀ ಎಸ್. ಅಂಗಾರ ಅವರು ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಉದ್ಘಾಟಿಸಲಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀ ಯು.ಶಿವಶಂಕರ ಭಟ್ಟರಿಗೆ ವೈದಿಕ ಪ್ರಶಸ್ತಿ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಸನ್ಮಾನ, ಶ್ರೀ ರಾಜೇಶ್ ರೈ ಕಲ್ಲಂಗಳ ಇವರಿಗೆ ಕಲಾಪೋಷಕ ಪ್ರಶಸ್ತಿ, ಭಾಗವತತ್ರಯರಾದ ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ದಿನೇಶ ಅಮ್ಮಣ್ಣಾಯ ಇವರಿಗೆ ಕೇಶವಾನಂದ ಭಾರತೀ ಶಿಷ್ಯ ಭಾಗವತ ಪ್ರಶಸ್ತಿ ನೀಡಲಾಗುವುದು.

ಮೊದಲ ಯಕ್ಷಗಾನ ಪ್ರಸಂಗದ ಪ್ರದರ್ಶನ ಮುಗಿದ ನಂತರ ರಾತ್ರಿ 7 ಘಂಟೆಯಿಂದ ರಾತ್ರಿ 8 ಘಂಟೆಯ ವರೆಗೆ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಕಾರ್ಯಕ್ರಮ ನಡೆಯಲಿದೆ.  ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶ್ರೀ  ಕೇಶವಾನಂದ ಭಾರತೀ ನ್ಯಾಯ ಪ್ರಶಸ್ತಿಯನ್ನು ಶ್ರೀ ತುಷಾರ್ ಮೆಹ್ತಾ ಅವರಿಗೂ,  ಶ್ರೀ  ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿಯನ್ನು ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರಿಗೂ,  ಶ್ರೀ  ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿಯನ್ನು ಶ್ರೀ ವಿದ್ಯಾಭೂಷಣ ಅವರಿಗೆ ಮತ್ತು  ಶ್ರೀ  ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿಯನ್ನು ಡಾ. ರೇಣುಕಾ ಪ್ರಸಾದ್ ಕೆ.ವಿ ಅವರಿಗೆ  ನೀಡಲಾಗುವುದು. 

ಕಾರ್ಯಕ್ರಮದ ಅನಂತರ ಯಕ್ಷಗಾನ ಪ್ರದರ್ಶನ ಮುಂದುವರಿಯಲಿದೆ ಎಂದು  ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ. 

ಯಕ್ಷಗಾನಕ್ಕೊಂದು ಪಿ ಎಚ್ ಡಿ ಮಹಾಪ್ರಬಂಧ ಬರೆದ ಸಿಬಂತಿ ಪದ್ಮನಾಭ 

ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ, ಕಲಾವಿದ, ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಕೆ.ವಿ. ಅವರು ಬರೆದ ಮಹಾ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯವು ಪಿ ಎಚ್ ಡಿ ಪದವಿ ನೀಡಿದೆ.

ಸಿಬಂತಿ ಪದ್ಮನಾಭ ಅವರು ಬರೆದ ಫೋಕ್ ಥೀಯೇಟರ್ ಫಾರ್ ಡೆವಲಪ್ಮೆಂಟ್ ಕಮ್ಮ್ಯೂನಿಕೇಷನ್ : ಎ ಸ್ಟಡಿ ಆಫ್ ಯಕ್ಷಗಾನ   (‘Folk theatre for development communication: A study of Yakshgana) ಎಂಬ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯ ಈ ಪದವಿ ನೀಡಿದೆ.

ಸ್ವತಃ ಯಕ್ಷಗಾನ ಕಲಾವಿದರೂ ಆದ ಸಿಬಂತಿ ಪದ್ಮನಾಭ ಪಿ ಎಚ್ ಡಿ ಅಧ್ಯಯನಕ್ಕಾಗಿ ಯಕ್ಷಗಾನವನ್ನೇ ಆರಿಸಿಕೊಂಡಿದ್ದರು. ಅವರು ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ| ಸತೀಶ್ ಕುಮಾರ್ ಅಂಡಿಂಜೆ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಿದ್ದರು.

ಸಿಬಂತಿ ಪದ್ಮನಾಭ ಅವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಿಬಂತಿ ವೆಂಕಟ್ರಮಣ ಭಟ್ ಮತ್ತು ಪರಮೇಶ್ವರಿ ದಂಪತಿಯ ಪುತ್ರ. ಸಿಬಂತಿ ಪದ್ಮನಾಭ ಅವರ ಪತ್ನಿ ಶ್ರೀಮತಿ ಆರತಿ ಪಟ್ರಮೆ ಕೂಡಾ ಕಾಲೇಜು ಉಪನ್ಯಾಸಕಿ ಮಾತ್ರವಲ್ಲದೆ ಪ್ರತಿಭಾನ್ವಿತ ಯಕ್ಷಗಾನ ಕಲಾವಿದೆ.

ತುಮಕೂರಿನಲ್ಲಿದ್ದುಕೊಂಡು ಪತಿ-ಪತ್ನಿಯರು ಯಕ್ಷಗಾನ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಇಬ್ಬರೂ ಯಕ್ಷಗಾನ ಕಲಾವಿದರಾಗಿದ್ದುದು ಮಾತ್ರವಲ್ಲದೆ ತುಮಕೂರಿನಲ್ಲಿ ಹಲವಾರು ಯಕ್ಷಗಾನ ಆಟ ಕೂಟಗಳನ್ನು ಸಂಘಟಿಸಿದ್ದರು. 

ಯಕ್ಷಗಾನ ಕಲಾವಿದರನ್ನು ಪರಿಚಯಿಸುವ ಸರಣಿ ಕಾರ್ಯಕ್ರಮ ‘ಮಾತಿನ ಮಂಟಪ’ದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ಆರತಿ ಪಟ್ರಮೆಯವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯೆ.

ಮೇಳಗಳ ಇಂದಿನ (24.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (24.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ದೇವಂಗಿ ಅಂದಗೆರೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ = ಕೋಡಿಯಾಲ್ಕರ್ ಮುಚ್ಚೂರು ಕಾನ 

ಕಟೀಲು ಎರಡನೇ ಮೇಳ ==   ಕಟೀಲು ಕ್ಷೇತ್ರ (1)

ಕಟೀಲು ಮೂರನೇ ಮೇಳ= ಬಾಳಿಗ ಕಂಪೌಂಡ್ ಕುಕ್ಕುಂದೂರು, ಕಾರ್ಕಳ 

ಕಟೀಲು ನಾಲ್ಕನೇ ಮೇಳ  == ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿ ಉಡುಪಿ 

ಕಟೀಲು ಐದನೇ ಮೇಳ == ನೆಲ್ಲಿತೀರ್ಥ ಹೌಸ್, ನೀರುಡೆ, ಬಡಗ ಎಕ್ಕಾರು 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ (2) 

ಮಂದಾರ್ತಿ ಒಂದನೇ ಮೇಳ  ==  ದಾಸನಕೊಡಿಗೆ ನಾಲೂರು 

ಮಂದಾರ್ತಿ ಎರಡನೇ ಮೇಳ   ==   ಶಾಂತಾದುರ್ಗಾ ನಿಲಯ ಗೊಲ್ಲರಬೆಟ್ಟು ಕೋಟೇಶ್ವರ  

ಮಂದಾರ್ತಿ ಮೂರನೇ ಮೇಳ  ==   ಹೊರ್ಲಾಳಿ ಕೊಕ್ಕರ್ಣೆ 

ಮಂದಾರ್ತಿ ನಾಲ್ಕನೇ ಮೇಳ   ==  ಹೆಗ್ಡೆರಮನೆ ಆಜ್ರಿ 

ಮಂದಾರ್ತಿ    ಐದನೇ ಮೇಳ  ==  ಮಣಿಕಂಠ ನಿಲಯ ಕೋಟೆ ರೋಡು ಕಲ್ಯಾಣಪುರ 

ಶ್ರೀ ಹನುಮಗಿರಿ ಮೇಳ  ==  ಲಕ್ಷ್ಮಿ ಕ್ಯಾಶ್ಯೂಸ್ ಐರ್ ಬೈಲು ಸಿದ್ಧಾಪುರ – ಶ್ರೀ ದೇವಿ ಮಹಾತ್ಮೆ (ಸಂಜೆ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬಸ್ತಿ ಕಾಯ್ಕಿಣಿ ಮುರ್ಡೇಶ್ವರ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಸುಂಕದಕಟ್ಟೆ ಮೇಳ  ==  ಪಂಜಿಕಲ್ಲು – ವಜ್ರ ಕೋಗಿಲೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೊವಾಡಿಮನೆ, ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಸಳ್ಳೆಬಚ್ಚಲುಮನೆ ಸೆಳ್ಕೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಆಲೂರು ಕೊಪ್ಪಾಟೆ  

ಶ್ರೀ ಪಾವಂಜೆ ಮೇಳ  ==  ನಾಡಾಜೆ ಮಳಲಿ – ಶ್ವೇತ ವರಾಹ, ಜಟಾಯು ಮೋಕ್ಷ, ಶ್ರೀನಿವಾಸ ಕಲ್ಯಾಣ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಪಡುವರಿ ಪಂಚಲಿಂಗೇಶ್ವರ ದೇವಾಲಯ 

ಕಮಲಶಿಲೆ ಮೇಳ ‘ಎ‘ = ಹನ್ಕಿ, ಹಳ್ಳಿಹಪಳೆ  

ಕಮಲಶಿಲೆ ಮೇಳ ‘ಬಿ‘ == ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರೋಡಿ, ಬೆಳ್ಳಂಜೆ 

ಶ್ರೀ ಬಪ್ಪನಾಡು ಮೇಳ == ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮತ ವಠಾರ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ನಾಗ ತಂಬಿಲ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ == ಹೊಸಕೋಟೆ ಮನೆ ಬೈಂದೂರು, ಶಿರೂರು 

ಶ್ರೀ ಬೋಳಂಬಳ್ಳಿ ಮೇಳ== ಚಿತ್ತೂರು   

ಶ್ರೀ ಸೌಕೂರು ಮೇಳ == ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ – ಪುಷ್ಪ ಚಂದನ  

ಶ್ರೀ ಹಾಲಾಡಿ ಮೇಳ == ಉಮಾಮಹೇಶ್ವರ ದೇವಸ್ಥಾನ ಕೆಳಸುಂಕ  – ನೂತನ ಪ್ರಸಂಗ (ಕಾಲಮಿತಿ) (8.30ರಿಂದ)

ಶ್ರೀ ಬೆಂಕಿನಾಥೇಶ್ವರ ಮೇಳ  == ಹರೆಗೋಡು ಕೊತ್ತಾಡಿ ಶ್ರೀ ಮಾರಿಕಾಂಬಾ ದೇವಸ್ಥಾನ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಶಿರ್ಲಾಲ್ ಹಾಡಿ ಅಂಗಡಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀಯಮ್ಮ ದೇವಸ್ಥಾನದ ವಠಾರ – ಶ್ರೀ ಆದಿಶಕ್ತಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಪೆರ್ಣಂಕಿಲ ಜನತಾನಗರ  – ಪವಿತ್ರ ಫಲ್ಗುಣಿ 

ಶ್ರೀ ಸಿಗಂದೂರು ಮೇಳ == ಗುಜ್ಜಾಡಿ ಮಕ್ಕಿಮನೆ ‘ಮಾನಸ ನಿಲಯ’ 

ಶ್ರೀ ನೀಲಾವರ ಮೇಳ  == ನಂದಿಕೇಶ್ವರ ಸಪರಿವಾರ ದೇವಸ್ಥಾನ ಹೆಗಡೆಕೆರೆ, ಹಳ್ಳಾಡಿ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಹೊಲ್ಕೋಡ್ 

ಶ್ರೀ ಮೇಗರವಳ್ಳಿ ಮೇಳ == ಸಾಲಿಗ್ರಾಮ ಗೆಂಡೆಕೆರೆ ಫ್ರೆಂಡ್ಸ್ – ರಕ್ತೇಶ್ವರಿ ಕ್ಷೇತ್ರ ಮಹಾತ್ಮೆ 

ಗುಜರಾತ್ ಚುನಾವಣಾ ಫಲಿತಾಂಶಗಳು 2021 – ಬಿಜೆಪಿಗೆ ಎದುರಿಲ್ಲದ ಮುನ್ನಡೆ, 23 ಸ್ಥಾನ ಗಿಟ್ಟಿಸಿದ  AAP 

ಗುಜರಾತ್ ಚುನಾವಣಾ ಫಲಿತಾಂಶ – ಇತ್ತೀಚೆಗಿನ ಫಲಿತಾಂಶ ಈ ರೀತಿ ಇದೆ

ಇಲ್ಲಿಯವರೆಗೆ ಪಕ್ಷದ ಸ್ಥಾನ: 455 ಸ್ಥಾನಗಳೊಂದಿಗೆ ಬಿಜೆಪಿ ಮುಂದಿದೆ

ಇಲ್ಲಿಯವರೆಗೆ ರಾಜಕೀಯ ಪಕ್ಷಗಳು ಗೆದ್ದ ಸ್ಥಾನಗಳು:

ಬಿಜೆಪಿ- 455

ಕಾಂಗ್ರೆಸ್- 44

ಎಎಪಿ- 23

ಬಿಎಸ್ಪಿ- 3

ಸ್ವತಂತ್ರ- 1