Sunday, September 20, 2026
Home Blog Page 343

ಅಂಬಲಪಾಡಿ ಯಕ್ಷಗಾನ ಮಂಡಳಿಯಿಂದ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ

ಅಂಬಲಪಾಡಿ ದೇವಳದ ಧರ್ಮದರ್ಶಿಯಾಗಿ ವಿಶೇಷ ಸಾಧನೆಗೈದ ನಿ. ಅಣ್ಣಾಜಿ ಬಲ್ಲಾಳರ ಹೆಸರಿನಲ್ಲಿ ಅವರ ಸುಪುತ್ರ ಡಾ. ನಿ.ಬೀ ವಿಜಯ ಬಲ್ಲಾಳರು ಸ್ಥಾಪಿಸಿದ ‘ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ’ಗೆ ಕಳೆದ ಎಂಟು ದಶಕಗಳಿಂದ ಕಲಾ ಸಾಧನೆಗೈಯುತ್ತಿರುವ ಪರ್ಕಳದ ಹಿರಿಯ ಸಂಘಟನೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ (ರಿ.) ಆಯ್ಕೆಯಾಗಿದೆ.

ಮಂಡಳಿಯ ಸ್ಥಾಪಕರ ನೆನಪಿನಲ್ಲಿ ನೀಡುವ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ ಮತ್ತು ಕುತ್ಪಾಡಿ ಆನಂದ ಗಾಣಿಗ ಪ್ರಸಸ್ತಿಗಳನ್ನು ಅನುಕ್ರಮವಾಗಿ ಪ್ರಸಿದ್ಧ ಮದ್ದಲೆವಾದಕ ಶ್ರೀ ಮಂಜುನಾಥ ಭಂಡಾರಿ ಕರ್ಕಿ, ಹಿರಿಯ ಹವ್ಯಾಸಿ ಭಾಗವತ ಶ್ರೀ ಟಿ. ಭೋಜಪ್ಪ ಸಾಲ್ಯಾನ್ ತೋನ್ಸೆ ಹಾಗೂ ಬಹುಮುಖಿ ಕಲಾವಿದ ಶ್ರೀ ಗುರುರಾಜ ಮಾರ್ಪಳ್ಳಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 7, 2021 ಭಾನುವಾರದಂದು ಅಂಬಲಪಾಡಿಯಲ್ಲಿ ಜರಗಲಿದೆ ಎಂದು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಕಾರ್ಯದರ್ಶಿ ಕೆ.ಜೆ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಳಗಳ ಇಂದಿನ (01.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (01.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಗುಜ್ಜಾಡಿ ಶಾಲೆ ಸಮೀಪ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ = ಬಾಕಿಮಾರು ಗದ್ದೆ ಪಲ್ಲಿಪಾಡಿ ವಯಾ ಪೊಳಲಿ  

ಕಟೀಲು ಎರಡನೇ ಮೇಳ ==   ಗಣೇಶನಗರ ಸುಳ್ಯ 

ಕಟೀಲು ಮೂರನೇ ಮೇಳ=  ಸಾಧುಕೃಪಾ, ಬಡಗ ಎಕ್ಕಾರು 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ (2)

ಕಟೀಲು ಐದನೇ ಮೇಳ ==  ಕಟೀಲು ಕ್ಷೇತ್ರ (1)

ಕಟೀಲು ಆರನೇ ಮೇಳ == ಅರೆಮಜಲು ಪಲ್ಕೆ ಬಡಗಮಿಜಾರು 

ಮಂದಾರ್ತಿ ಒಂದನೇ ಮೇಳ  ==  ಧರೆಕೊಪ್ಪ ಶೃಂಗೇರಿ 

ಮಂದಾರ್ತಿ ಎರಡನೇ ಮೇಳ   ==   ಶಿರೂರು ಜಂಬೆಟ್ಟು ಕೆಳಮನೆ ಮುದ್ದುಮನೆ 

ಮಂದಾರ್ತಿ ಮೂರನೇ ಮೇಳ  ==   ಜನನಿನಿಲಯ ಗಿರ್ಕಿಮಠ ಯಡ್ತಾಡಿ  

ಮಂದಾರ್ತಿ ನಾಲ್ಕನೇ ಮೇಳ   ==  ನಮಿತ ಸದನ ನೂಜಿ ಕೊರ್ಗಿ ಹೊಸಮಠ 

ಮಂದಾರ್ತಿ    ಐದನೇ ಮೇಳ  ==  ಕನ್ನೇರಿಮನೆ ಕೊಡ್ಲಾಡಿ ಬಾಂಡ್ಯ 

ಶ್ರೀ ಹನುಮಗಿರಿ ಮೇಳ  ==  ಪುತ್ತೂರು ಪರ್ಲಡ್ಕ ಎಸ್.ಡಿ.ಪಿ ರೆಮಿಡೀಸ್ ವಠಾರ – ಶುಕ್ರನಂದನೆ (ಸಂಜೆ 6.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಠಾರ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಪೆರ್ಡೂರು ಮೇಳ == ಗೋಕರ್ಣ ಬಸ್ಟ್ಯಾಂಡ್ ಸಮೀಪ – ಶನೀಶ್ವರ ಮಹಾತ್ಮೆ, ಶ್ರೀರಾಮ ದರ್ಶನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುಕ್ಕಡ ತೋಟದಮನೆ ಇಡೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಬ್ಬುತೋಟ, ಕುಂದಬಾರಂಬಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಬಾನಾಳಿ ಹೊಸಿಮನೆ ಬಾಂಡ್ಯ (ಸೌಕೂರು ಮೇಳದೊಂದಿಗೆ ಕೂಡಾಟ) 

ಶ್ರೀ ಪಾವಂಜೆ ಮೇಳ  ==  ಕಿರಿಮಂಜೇಶ್ವರ ಬೈಂದೂರು – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಹೇರಿಕುದ್ರು 

ಕಮಲಶಿಲೆ ಮೇಳ ‘ಎ‘ = ಭಾಗೀಮನೆ ಹೊಸಂಗಡಿ 

ಕಮಲಶಿಲೆ ಮೇಳ ‘ಬಿ‘ == ಕಲ್ಪಂಡೆ ಪೆರ್ಡೂರು 

ಶ್ರೀ ಬಪ್ಪನಾಡು ಮೇಳ == ಶ್ರೀ ಮಹಮ್ಮಾಯಿ ಸೇವಾ ಸಮಿತಿ ಸಚ್ಚರಿಪೇಟೆ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕಸಬಾ ಗ್ರಾಮದ ಕಾಂಜಿರ್ ಕೋಡಿ ಬಯಲು ಗದ್ದೆ – ನಾಗತಂಬಿಲ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಬೋಳಂಬಳ್ಳಿ ಮೇಳ== ಚಿತ್ತೇರಿ ದೈವಸ್ಥಾನ ವಠಾರ ಹೊರ್ಲಾಳಿ – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ ==  ಬಾನಾಳಿ ಹೊಸಿಮನೆ ಬಾಂಡ್ಯ (ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ)    

ಶ್ರೀ ಹಾಲಾಡಿ ಮೇಳ == ಅರಳಸುರುಳಿ ಇಂದಿರಾನಗರ – ಚೆಲುವೆ ಚಿತ್ರಾವತಿ 

ಶ್ರೀ ಬೆಂಕಿನಾಥೇಶ್ವರ ಮೇಳ  == ಸಜಿಪಪಡು ವೀರಾಂಜನೇಯ ಭಜನಾ ಮಂದಿರ ತಲೆಮೊಗರು – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಹೆಬ್ರಿ ಚಾರ ನಾಗಬ್ರಹ್ಮ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೊಳಹಳ್ಳಿ ಶ್ರೀ ನಂದಿಕೇಶ್ವರ ಶ್ರೀ ಶಿವರಾಯ ಗರಡಿ ವಠಾರ 

ಶ್ರೀ ಹಿರಿಯಡಕ ಮೇಳ == ಕೇನ್ಯ – ನೂತನ ಪ್ರಸಂಗ (ತೆಂಕುತಿಟ್ಟು ತುಳು ಕಾಲಮಿತಿ)

ಶ್ರೀ ಶನೀಶ್ವರ ಮೇಳ == ಹೆಮ್ಮಾಡಿಮನೆ ನಾಯ್ಕನಕಟ್ಟೆ ಕೆರ್ಗಾಲ್ ಗ್ರಾಮ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ == ಕೊಡ್ಗಿ ರಾಮಲಿಂಗೇಶ್ವರ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಸಹೋದರ ಯುವಕ ಮಂಡಲ ಬಳಿ ಹನುಮಂತನಗರ – ದೈವ ಮಂಟಪ  

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕೋಣಂದೂರು ಮಲ್ಲಿಕಟ್ಟೆ 

ಶ್ರೀ ಮೇಗರವಳ್ಳಿ ಮೇಳ == ಆವಿನಳ್ಳಿ ಹೂಣಾಲ್  ಮಡಿಕೆ ಸರ್ಕಲ್ – ಕುಶಲವ, ಚಿತ್ರಾಕ್ಷಿ 

‘ಶ್ರೀರಾಮ – ಹನುಮ’ ತಾಳಮದ್ದಳೆ

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ಧಿ ಪ್ರಯುಕ್ತ ಮಂಗಳೂರು ಸಮಿತಿ ವತಿಯಿಂದ ಸಪ್ತ ಕಾರ್ಯಕ್ರಮಗಳ ಆರಂಭೋತ್ಸವವನ್ನು ಮಂಗಳಾದೇವಿ ದೇವಸ್ಥಾನದ ಕಲಾಮಂಟಪದಲ್ಲಿ ಏರ್ಪಡಿಸಲಾಗಿತ್ತು.

ಈ ಸಂದರ್ಭ ಯಕ್ಷಾಂಗಣ ಮಂಗಳೂರು ಸಂಯೋಜನೆಯಲ್ಲಿ ‘ಶ್ರೀರಾಮ – ಹನುಮ’ ಯಕ್ಷಗಾನ ತಾಳಮದ್ದಳೆ ಜರಗಿತು.

ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ (ಭಾಗವತರು), ಕೃಷ್ಣ ಪ್ರಕಾಶ್ ಉಳಿತ್ತಾಯ (ಮೃದಂಗ), ಮಯೂರ್ ನಾಯಗ (ಚೆಂಡೆ) ಭಾಗವಹಿಸಿದ್ದರು.           

ಅರ್ಥಧಾರಿಗಳಾಗಿ ಡಾ.ಎಂ. ಪ್ರಭಾಕರ ಜೋಶಿ (ಹನುಮಂತ), ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ), ಜಬ್ಬಾರ್ ಸಮೋ ಸಂಪಾಜೆ (ಸುಗ್ರೀವ), ಕದ್ರಿ ನವನೀತ ಶೆಟ್ಟಿ (ವಿಶ್ವಾಮಿತ್ರ), ಡಾ.ದಿನಕರ ಎಸ್.ಪಚ್ಚನಾಡಿ (ಸೀತೆ), ಉಮೇಶ ಆಚಾರ್ಯ ಗೇರುಕಟ್ಟೆ (ನಾರದ) ಪಾಲ್ಗೊಂಡರು.       

ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಕಲಾವಿದರನ್ನು ಪರಿಚಯಿಸಿದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು.

‘ಬಾಲ ಗೌರವ ಪ್ರಶಸ್ತಿ’ ಪುರಸ್ಕೃತ ಯಕ್ಷಗಾನದ ಉದಯೋನ್ಮುಖ ಪ್ರತಿಭೆ ಸ್ವಸ್ತಿಕ್ ಶರ್ಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇವರು ನೀಡುತ್ತಿರುವ 2021ನೆಯ ಸಾಲಿನ “ಅಕಾಡೆಮಿ ಬಾಲ ಗೌರವ ಪ್ರಶಸ್ತಿ”ಗೆ ಯಕ್ಷಗಾನದ ಉದಯೋನ್ಮುಖ ಪ್ರತಿಭೆ, ಬಾಲ ಕಲಾವಿದ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಆಯ್ಕೆಯಾಗಿದ್ದಾರೆ.

ಗಡಿನಾಡು ವಿಭಾಗದ ಬಹುಮುಖ ಪ್ರತಿಭೆ ಎಂಬ ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಪಳ್ಳತ್ತಡ್ಕದ ಸ್ವಸ್ತಿಕ್ ಶರ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 28ರಂದು ಧಾರವಾಡದ ಡಾ. ಮಲ್ಲಿಕಾರ್ಜುನ ಮುನ್ಸೂರ್ ಕಲಾಭವನದಲ್ಲಿ ನಡೆಯಲಿದೆ. 

ಅತಿ ಸಣ್ಣ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಸಾಧನೆ ಮಾಡುವತ್ತ ದಾಪುಗಾಲು ಹಾಕುತ್ತಿರುವ ಸ್ವಸ್ತಿಕ್ ಶರ್ಮಾ ಇದುವರೆಗೆ ಸುಮಾರು 500ಕ್ಕಿಂತಲೂ ಅಧಿಕ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 

ಪಳ್ಳತ್ತಡ್ಕ ಕೇಶವ ಶರ್ಮ ಮತ್ತು ದಿವ್ಯ ದಂಪತಿಯ ಪುತ್ರ ಸ್ವಸ್ತಿಕ್ ವಿವಿಧ ಮೇಳಗಳ ಪ್ರದರ್ಶನಗಳಲ್ಲಿಯೂ ಭಾಗವಹಿಸಿ ವೃತ್ತಿಪರ ಕಲಾವಿದರ ಜೊತೆ ಪಾತ್ರನಿರ್ವಹಣೆ ಮಾಡುವ ಅನುಭವವನ್ನೂ ಗಳಿಸಿಕೊಂಡಿದ್ದಾರೆ.  

ಜನಪ್ರಿಯ ‘ಕೃಷ್ಣ ಧಾಬಾ’ ಮಾಲೀಕರ ಮಗ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ದಾಳಿಗೆ ಬಲಿ

0

ಜನಪ್ರಿಯ ಸಸ್ಯಾಹಾರಿ ಆಹಾರ ಹೋಟೆಲ್ ‘ಕೃಷ್ಣ ಧಾಬಾ’ ಮಾಲೀಕರ ಪುತ್ರ ಹನ್ನೊಂದು ದಿನಗಳ ನಂತರ ಶ್ರೀನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

ಫೆಬ್ರವರಿ 18 ರಂದು, ಆಕಾಶ್ ಕುಮಾರ್ ಅವರನ್ನು ಭಯೋತ್ಪಾದಕರು ಹತ್ತಿರದಿಂದ ಗುಂಡು ಹಾರಿಸಿದರು ಮತ್ತು ಅವರು ತೀವ್ರವಾಗಿ ಗಾಯಗೊಂಡರು. ಪ್ರಸ್ತುತ ದಲ್ಗೇಟ್ ಶ್ರೀನಗರದ ಜಾನಿಪುರ ಜಮ್ಮು ನಿವಾಸಿ ಆಕಾಶ್ (25) ಅವರು ಮುಂಜಾನೆ 3: 20 ರ ಸುಮಾರಿಗೆ ಎಸ್‌ಎಂಎಚ್‌ಎಸ್ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಕಳೆದ 11 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.  ಫೆಬ್ರವರಿ 19 ರಂದು ಭಯೋತ್ಪಾದಕ ದಾಳಿಯ ಆರೋಪಿಗಳೆಲ್ಲರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಮಾಹಿತಿ ನೀಡಿದರು.

ಬೈಕ್‌ನಿಂದ ಹಾರಿದ ಇಬ್ಬರು ಉಗ್ರರು ದಾಲ್‌ಗೇಟ್‌ನ ಸೂಕ್ಷ್ಮ ಪ್ರದೇಶಕ್ಕೆ ಬಂದು ಕೃಷ್ಣ ಧಾಬಾದ ಕೌಂಟರ್‌ನಲ್ಲಿ ಗುಂಡು ಹಾರಿಸಿದರು ಎಂದು ಅವರು ಹೇಳಿದರು. ಇಬ್ಬರು ಪಂಪೋರ್ ಮೂಲದವರು, ಮತ್ತು ಇಬ್ಬರೂ ಪಹಲ್ಗಾಂನಲ್ಲಿ ಪತ್ತೆಯಾಗಿದ್ದು ಅವರನ್ನು ಮರಳಿ ತರಲಾಯಿತು.

ಮೂರನೆಯವ ಪುಲ್ವಾಮಾದವ.  ಫೆಬ್ರವರಿ 18 ರಂದು ಕೃಷ್ಣ ಡಾಬಾ ಮಾಲೀಕರ ಪುತ್ರ 22 ವರ್ಷದ ಆಕಾಶ್ ಮೆಹ್ರಾ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ತೀವ್ರವಾಗಿ ಗಾಯಗೊಳಿಸಿದರು. ಮತ್ತು ತಕ್ಷಣ ಅವರನ್ನು ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಸಾಗಿಸಲಾಯಿತು.

ಕೃಷ್ಣ ಧಾಬಾ ಹೋಟೆಲ್ ಲಲಿತ್ ಬಳಿ ಇದೆ, ಸಸ್ಯಾಹಾರಿ ಆಹಾರವನ್ನು ಪೂರೈಸುವಲ್ಲಿ ಪ್ರಸಿದ್ಧವಾಗಿರುವ ಈ ಉಪಾಹಾರ ಗೃಹವು ನಗರದ ದುರ್ಗಾನಾಗ್ ಪ್ರದೇಶದಲ್ಲಿದೆ.  

ಇಂದು ಪುತ್ತೂರಿನಲ್ಲಿ ಯಕ್ಷಗಾನ – ಸಾಲಿಗ್ರಾಮ ಮೇಳದವರಿಂದ ‘ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ’ 

ಇಂದು, ಫೆಬ್ರವರಿ 28 ಆದಿತ್ಯವಾರ ಸಂಜೆ 6.30ಕ್ಕೆ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪುತ್ತೂರಿನ ಪರ್ಲಡ್ಕದ ಖ್ಯಾತ ವೈದ್ಯ ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ಸಾಲಿಗ್ರಾಮ ಮೇಳದವರು ‘ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.

ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಕಳೆದ 16 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.  ಈ ವರ್ಷದ ಕಾರ್ಯಕ್ರಮ ಇಂದಿನಿಂದ ಅಂದರೆ ಫೆಬ್ರವರಿ 27ರಿಂದ ಆರಂಭವಾಗಲಿದ್ದು ಮಾರ್ಚ್ 1ರ ವರೆಗೆ ನಡೆಯಲಿದೆ.

ಕೊನೆಯ ದಿನ ಮಾರ್ಚ್ 1, ಸೋಮವಾರದಂದು ಸಂಜೆ 6.30ಕ್ಕೆ ತೆಂಕುತಿಟ್ಟಿನ ಯಕ್ಷಗಾನ ಕಾರ್ಯಕ್ರಮ ಇರುತ್ತದೆ. ಹನುಮಗಿರಿ ಮೇಳದವರಿಂದ ‘ಶುಕ್ರನಂದನೆ’ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ.

ಮೇಳಗಳ ಇಂದಿನ (28.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (28.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಸಿದ್ಧಾಪುರ, ಬಾಲೋಡಿ ಮನೆ – ಅಮರವಾಹಿನಿ 

ಕಟೀಲು ಒಂದನೇ ಮೇಳ = ಶ್ರೀ ದೇವಿ ಮಿತ್ರಮಂಡಳಿ ಜತ್ತಬೆಟ್ಟು ಜೋಗಟ್ಟೆ    

ಕಟೀಲು ಎರಡನೇ ಮೇಳ ==   ಬೆಟ್ಟಂಪಾಡಿ ಬಿಲ್ವಗಿರಿ ಪುತ್ತೂರು 

ಕಟೀಲು ಮೂರನೇ ಮೇಳ=  ಬಾಳೆಪುಣಿ, ಹೂ ಹಾಕುವ ಕಲ್ಲು ವಯಾ ಮುಡಿಪು 

ಕಟೀಲು ನಾಲ್ಕನೇ ಮೇಳ  == ಕಾವೂರು ಮೈದಾನದಲ್ಲಿ , ಮಂಗಳೂರು 

ಕಟೀಲು ಐದನೇ ಮೇಳ == ಲೀಲಾ ವಿಹಾರ, ಪಡುಪಣಂಬೂರು ವಯಾ ಹಳೆಯಂಗಡಿ  

ಕಟೀಲು ಆರನೇ ಮೇಳ == ಕೂರಿಯಾಳ ಶಾಲಾ ಬಳಿ, ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  ==  ಹೊಸಕೊಪ್ಪ ಮಲ್ಲೇಸರ ನೊಣಬೂರು 

ಮಂದಾರ್ತಿ ಎರಡನೇ ಮೇಳ   ==   ಶೇರ್ಡಿ ಕೆಳಮನೆ ಕಕ್ಕುಂಜೆ  

ಮಂದಾರ್ತಿ ಮೂರನೇ ಮೇಳ  ==   ಬಾಗಳಬೆಟ್ಟು ಹೆಸ್ಕುಂದ ನಂಚಾರು  

ಮಂದಾರ್ತಿ ನಾಲ್ಕನೇ ಮೇಳ   ==  ಹೊಸಿಮನೆ ಇಡೂರು ಕುಂಜ್ನಾಡಿ 

ಮಂದಾರ್ತಿ    ಐದನೇ ಮೇಳ  ==  ಗುಡುಮಕ್ಕಿ ತೊಂಬಟ್ಟು ಮಚ್ಚಟ್ಟು 

ಶ್ರೀ ಹನುಮಗಿರಿ ಮೇಳ  ==  ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನ ತೆಳ್ಳಾರು (ಕಾರ್ಕಳ) – ಶ್ರೀ ದೇವಿ ಮಹಾತ್ಮೆ  (ರಾತ್ರಿ 8ರಿಂದ 

ಶ್ರೀ ಸಾಲಿಗ್ರಾಮ ಮೇಳ == ಪುತ್ತೂರು ಪರ್ಲಡ್ಕ ಎಸ್.ಡಿ.ಪಿ ರೆಮಿಡೀಸ್ ‘ಕಲೋಪಾಸನಾ 21 – ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಶ್ರೀ ಆದಿ ಜನಾರ್ದನ ಭಕ್ತವೃಂದ ಸೀಮಂತೂರು – ಶಪ್ತ ಭಾಮಿನಿ 

ಶ್ರೀ ಸುಂಕದಕಟ್ಟೆ ಮೇಳ  ==  ಪೆರ್ಮಂಕಿ ದರಿಬಾಗಿಲು – ಬ್ರಹ್ಮ ಬಲಾಂಡಿ 

ಶ್ರೀ ದೇಂತಡ್ಕ ಮೇಳ == ಬಾಯಿಲ ಕಲ್ಲಡ್ಕ ಶ್ರೀ ರಾಜೀವ ಯುವಕ ಮಂಡಲ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಆಸ್ಕಿಮನೆ ಅರೆಶಿರೂರು ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಯಿಕೋಡ್ ಏಳಜಿತ್ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಕಟ್ಟಿನಮಕ್ಕಿ ಗುಡಿಮನೆ ಹರ್ಕೂರು 

ಶ್ರೀ ಪಾವಂಜೆ ಮೇಳ  ==  ಕಟ್ಕೆರೆ, ಕುಂದಾಪುರ – ಇಂದ್ರಜಿತು, ಪಾರಿಜಾತ, ನರಕಾಸುರ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ತೆಗ್ಗರ್ಸೆ, ಗುಡ್ಡೆ ಅಂಗಡಿ – ಕೊರಾಳ ಚಿಕ್ಕಮ್ಮ ಮಹಾತ್ಮೆ 

ಕಮಲಶಿಲೆ ಮೇಳ ‘ಎ‘ = ಗೆದ್ದೋಡು ಸಿದ್ದಾಪುರ 

ಕಮಲಶಿಲೆ ಮೇಳ ‘ಬಿ‘ == ಸಾಲಿಗದ್ದೆ ಯಡಮೊಗೆ 

ಶ್ರೀ ಬಪ್ಪನಾಡು ಮೇಳ == ದೇವಿನಗರ (ತೇವುಕಾಡು) ಮೇರೆಮಜಲು  – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಪೆಕೊಳ – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ == ಧರ್ಮಶ್ರೀ ಕಾಲನಿ, ಶಶಿಗೋಳಿ 

ಶ್ರೀ ಬೋಳಂಬಳ್ಳಿ ಮೇಳ== ಕಜ್ಕೆ – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ == ಸೌಕೂರು ದುರ್ಗಾನಗರ ವಿದ್ಯಾನಿಧಿ ನಿಲಯ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಶ್ರೀ ದುರ್ಗಾ ಮೈದಾನ, ಯಕ್ಷಮಿತ್ರರು ಮಾಣಿಮಂಡ್ರಳ್ಳಿ, ತೊಗರಿಗ್ರಾಮ – ಶ್ವೇತಕುಮಾರ, ಗದಾಯುದ್ಧ 

ಶ್ರೀ ಮಡಾಮಕ್ಕಿ ಮೇಳ == ಕಿನ್ನಿಗೋಳಿ ಯಕ್ಷಮಿತ್ರರು – ಶ್ರೀ ದೇವಿ ಮಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಐರೋಡಿ, ಗೋಳಿಬಿಟ್ಟು – ಶ್ವೇತಕುಮಾರ 

ಶ್ರೀ ಹಿರಿಯಡಕ ಮೇಳ == ನಾರಾವಿ ಜಾತ್ರೆ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಮೈಕಳ ಮೂಕಾಂಬಿಕಾ ಹೋಟೆಲ್ ಸಮೀಪ 

ಶ್ರೀ ಸಿಗಂದೂರು ಮೇಳ == ಬ್ರಹ್ಮಲಿಂಗೇಶ್ವರ ಸಭಾಭವನ ವಠಾರ – ಕೊಡ್ಲಿಬೈಲು, ಸಿದ್ದಾಪುರ 

ಶ್ರೀ ನೀಲಾವರ ಮೇಳ  == ಸಂಚಿತ ಸಂಕೀರ್ಣ, ನ್ಯೂ ಕುಬೇರ ಬಾರ್ ಬಳಿ, ಗೊದ್ದನಕಟ್ಟೆ, ಪೇತ್ರಿ – ದೈವ ಮಂಟಪ  

ಶ್ರೀ ಬಾಚಕೆರೆ ಮೇಳ == ಶ್ರೀ ಶಾರದಾ ಸೇವಾ ಟ್ರಸ್ಟ್, ದಾಸಗಿರಿ ಕುಳಾಲು – ಕಾರ್ಣಿಕದ ಕಲ್ಕುಡ ಕಲ್ಲುರ್ಟಿ 

ಶ್ರೀ ಮಂಗಳಾದೇವಿ ಮೇಳ == ಕಜೆಕಾರ್ ಕುರುವಳಗೋಳಿ – ಬೂಡುದ ಬಂಡಾರ (ತುಳು) 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==   ಕೊಂಡ್ಲೂರು ಹಾಗೂ ಕೊರಳು ಕೊಪ್ಪ 

ಶ್ರೀ ಮೇಗರವಳ್ಳಿ ಮೇಳ == ಪೇತ್ರಿ ಯಕ್ಷಾಭಿಮಾನಿ ಬಳಗ – ಮಧುರ ಮನಸ್ವಿ 

ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ – ಪಶ್ಚಿಮ ಬಂಗಾಳ ಮತದಾನದಲ್ಲಿ ‘ರಾಜಕೀಯ ಹಿಂಸಾಚಾರ’ ಕುರಿತು ಆರೋಪ

0

ಅಧಿಕಾರಿಗಳು ಹಿರಿಯ ನಾಗರಿಕರ ಮತಪತ್ರಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಂಚೆ ಮತಪತ್ರಗಳಲ್ಲಿ ‘ವ್ಯತ್ಯಾಸಗಳ ಬಗ್ಗೆ ಆರೋಪಿಸಿದೆ.

ಕೋಲ್ಕತ್ತಾದ ಟಿಎಂಸಿ ಗೂಂಡಾಗಳು ತಮ್ಮ ಎಲ್‌ಇಡಿ ವಾಹನಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶನಿವಾರ ಪಶ್ಚಿಮ ಬಂಗಾಳದಲ್ಲಿ ‘ರಾಜಕೀಯ ಹಿಂಸಾಚಾರ’ ಕುರಿತು ಚುನಾವಣಾ ಆಯೋಗದೊಂದಿಗೆ ಚರ್ಚಿಸಿದೆ. 

“ನಾವು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗವನ್ನು ತಲುಪಲು ಪ್ರಯತ್ನಿಸಿದ್ದೇವೆ. ಕೋಲ್ಕತಾ ಪೊಲೀಸ್ ಆಯುಕ್ತರೊಂದಿಗೆ ಈ ವಿಷಯವನ್ನು ಎತ್ತಲು ನಾವು ಬಯಸಿದ್ದೇವೆ ಆದರೆ ಅವರು ಮಾತನಾಡಲು ನಮಗೆ ಯಾವುದೇ ಸಮಯವನ್ನು ನೀಡಿಲ್ಲ. 

ಆದ್ದರಿಂದ ಈಗ ನಾವು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ನಡೆಯುತ್ತಿರುವ ರೀತಿಯ ದೌರ್ಜನ್ಯಗಳನ್ನು ಹಂಚಿಕೊಳ್ಳುತ್ತೇವೆ “ಎಂದು ಬಿಜೆಪಿ ಸಂಸದ ಸ್ವಪನ್ ದಾಸ್‌ಗುಪ್ತಾ ಸಭೆಯ ನಂತರ ಹೇಳಿದರು.  

ಇಂದಿನಿಂದ ಪುತ್ತೂರಿನಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಲಾ ಸಂಭ್ರಮ – ಕಲೋಪಾಸನಾ 2021

ಇಂದಿನಿಂದ ಪುತ್ತೂರಿನಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳು ನಡೆಯಲಿದೆ.  ಪುತ್ತೂರಿನ ಪರ್ಲಡ್ಕದ ಖ್ಯಾತ ವೈದ್ಯ ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ಜರಗಲಿರುವ ಈ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ.

 
  ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಕಳೆದ 16 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.  ಈ ವರ್ಷದ ಕಾರ್ಯಕ್ರಮ ಇಂದಿನಿಂದ ಅಂದರೆ ಫೆಬ್ರವರಿ 27ರಿಂದ ಆರಂಭವಾಗಲಿದ್ದು ಮಾರ್ಚ್ 1ರ ವರೆಗೆ ನಡೆಯಲಿದೆ.

ಪ್ರತಿದಿನವೂ ಸಂಜೆ 6.30 ಘಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ಬಾರಿ ಒಂದು ದಿನ ಶಾಸ್ತ್ರೀಯ ಸಂಗೀತ ಮತ್ತು ಉಳಿದೆರಡು ದಿನಗಳಲ್ಲಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.

ಅದರಂತೆ ಮೊದಲ ದಿನ ಅಂದರೆ ಫೆಬ್ರವರಿ 27 ಶನಿವಾರ 6 ಘಂಟೆಗೆ ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆ ದಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಹಾಡುಗಾರಿಕೆಯಲ್ಲಿ ವಿದ್ವಾನ್ ರಾಮಕೃಷ್ಣನ್ ಮೂರ್ತಿ, ವಯಲಿನ್ ವಿದುಷಿ ಚಾರುಮತಿ ರಘುರಾಮನ್, ಮೃದಂಗದಲ್ಲಿ ವಿದ್ವಾನ್ ದಿಲ್ಲಿ ಎಸ್. ಸಾಯಿರಾಮ್ ಮತ್ತು ಘಟಂ ವಾದಕರಾಗಿ ವಿದ್ವಾನ್ ವಝಪಲ್ಲೀ ಆರ್. ಕೃಷ್ಣಕುಮಾರ್ ಅವರು ಭಾಗವಹಿಸಲಿದ್ದಾರೆ. 

ಫೆಬ್ರವರಿ 28 ಆದಿತ್ಯವಾರ ಸಂಜೆ 6.30ಕ್ಕೆ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಾಲಿಗ್ರಾಮ ಮೇಳದವರು ‘ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.

ಕೊನೆಯ ದಿನ ಮಾರ್ಚ್ 1, ಸೋಮವಾರದಂದು ಸಂಜೆ 6.30ಕ್ಕೆ ತೆಂಕುತಿಟ್ಟಿನ ಯಕ್ಷಗಾನ ಕಾರ್ಯಕ್ರಮ ಇರುತ್ತದೆ. ಹನುಮಗಿರಿ ಮೇಳದವರಿಂದ ‘ಶುಕ್ರನಂದನೆ’ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ.

ಮೇಳಗಳ ಇಂದಿನ (27.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (27.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಮಾಸ್ತಿಕಟ್ಟೆ ಶ್ರೀ ವಿನಾಯಕ ರಂಗಮಂದಿರದ ಆವರಣ – ಮಹಾಕಲಿ ಮಗಧೇಂದ್ರ 

ಕಟೀಲು ಒಂದನೇ ಮೇಳ = ಪಡೀಲು ಸಂಕದ ಬಳಿ   

ಕಟೀಲು ಎರಡನೇ ಮೇಳ ==   ಮುಗ್ರೋಡಿ ಕೊಂಚಾಡಿ 

ಕಟೀಲು ಮೂರನೇ ಮೇಳ=  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜ್ಯೋತಿಗುಡ್ಡೆ ಮಾಣೂರು ಕಳ್ಳಿಗೆ ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  == ಕಾಂಜಿಲಕೋಡಿ ಅಡ್ಡೂರು ಪೊಳಲಿ 

ಕಟೀಲು ಐದನೇ ಮೇಳ == ಮಿತ್ತಬೈಲು ಪುತ್ತಿಗೆ ಮೂಡಬಿದ್ರಿ  

ಕಟೀಲು ಆರನೇ ಮೇಳ == ಹಿಂದೂ ಸೇವಾ ಸಮಿತಿ ಬೊಲ್ಪುಗುಡ್ಡೆ – ಕಾವೂರು ಮಂಗಳೂರು 

ಮಂದಾರ್ತಿ ಒಂದನೇ ಮೇಳ  ==  ಮಾಕೇರಿ ಹಣಗೇರಿ  

ಮಂದಾರ್ತಿ ಎರಡನೇ ಮೇಳ   ==   ಫೆವರಿಟ್ ಕ್ಯಾಶ್ಯೂ ಇಂಡಸ್ಟ್ರಿ, ಜನ್ನಾಡಿ ಬಿದ್ಕಲ್ ಕಟ್ಟೆ 

ಮಂದಾರ್ತಿ ಮೂರನೇ ಮೇಳ  ==   ಭಗವತಿ ರಸ್ತೆ, ಗುಂಡ್ಮಿ ಸಾಸ್ತಾನ 

ಮಂದಾರ್ತಿ ನಾಲ್ಕನೇ ಮೇಳ   ==  ಐತೂರು ಮನೆ ದೇವಲ್ಕುಂದ ಕೆಂಚನೂರು 

ಮಂದಾರ್ತಿ    ಐದನೇ ಮೇಳ  ==  ಕಾರೇಬೈಲು ಶಂಕರನಾರಾಯಣ 

ಶ್ರೀ ಹನುಮಗಿರಿ ಮೇಳ  ==  ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ – ದಮಯಂತಿ ಪುನಃಸ್ವಯಂವರ, ಗದಾಯುದ್ಧ, ರಕ್ತರಾತ್ರಿ (ಅಪರಾಹ್ನ 2ರಿಂದ)

ಶ್ರೀ ಸಾಲಿಗ್ರಾಮ ಮೇಳ == ಮುಂಡ್ಕಿನಜೆಡ್ಡು ಆರ್.ಕೆ ಪಾಟ್ಕರ್ ಶಾಲಾ ಬಳಿ – ಕೀಚಕ ವಧೆ, ಚಂದ್ರಾವಳಿ, ಮೈಂದ ದ್ವಿವಿದ 

ಶ್ರೀ ಪೆರ್ಡೂರು ಮೇಳ == ಶ್ರೀ ಹಿರೇಮಹಾಲಿಂಗೇಶ್ವರ ಜಾತ್ರೆ ಕೋಟ – ಶೂದ್ರ ತಪಸ್ವಿನಿ  

ಶ್ರೀ ಸುಂಕದಕಟ್ಟೆ ಮೇಳ  ==  ಮಳಲಿ ಮಟ್ಟಿ – ಸರ್ಪ ಸಂಬಂಧ 

ಶ್ರೀ ದೇಂತಡ್ಕ ಮೇಳ == ಶ್ರೀ ವೆಂಕಟ್ರಮಣ ಭಜನಾ ಮಂಡಳಿ ಅರಳೀವೃಂದ ಕಡಂಬು – ಅಧ್ವರತ್ರಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೇರೂರು ರಾಗಿಹಕ್ಲು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹೆಮ್ಮಾಡಿ   

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಮಟಪಾಡಿ 

ಶ್ರೀ ಪಾವಂಜೆ ಮೇಳ  ==  ಶ್ರೀ ಮಹಾಲಿಂಗೇಶ್ವರ ಅಮ್ಮನವರ ದೇವಸ್ಥಾನ ಅರೆಹೊಳೆ ನಾವುಂದ  ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಕೊಡಪಾಡಿ ಗುಜ್ಜಾಡಿ – ಕೊರಾಳ ಚಿಕ್ಕಮ್ಮ ಮಹಾತ್ಮೆ 

ಕಮಲಶಿಲೆ ಮೇಳ ‘ಎ‘ = ಕೊರಾಡಿ 

ಕಮಲಶಿಲೆ ಮೇಳ ‘ಬಿ‘ == ಶ್ರೀ ಸದಾಶಿವ ದೇವಸ್ಥಾನ ಗುರುಪುರ ಕೈಕಂಬ 

ಶ್ರೀ ಬಪ್ಪನಾಡು ಮೇಳ == ಉರುಂದಾಡಿ ಪಂಜಿಮೊಗರು ಧನುಷ್ ಸಾರ್ವಜನಿಕ ಮೈದಾನ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಹಳೆಯಂಗಡಿ 10ನೇ ತೋಕೂರು ಶ್ರೀ ಓಂಕಾರೇಶ್ವರಿ ಭಜನಾ ಮಂದಿರದ ಮುಂಭಾಗ – ಕೋಟಿ ಚೆನ್ನಯ 

ಶ್ರೀ ಅಮೃತೇಶ್ವರೀ ಮೇಳ == ಬನ್ನಾಡಿ 

ಶ್ರೀ ಬೋಳಂಬಳ್ಳಿ ಮೇಳ== ಮೈರ್ಕೊಮೆ – ಭಾರತೀಪುರ ಬನಶಂಕರಿ  

ಶ್ರೀ ಸೌಕೂರು ಮೇಳ == ನೇರಳಕಟ್ಟೆ ಜಾಡ್ಕಟ್ಟು ರಸ್ತೆ ವನದುರ್ಗಾಪರಮೇಶ್ವರಿ ದೇವಸ್ಥಾನ – ಕಾಮಿತಾರ್ಥ ಪ್ರದಾಯಿನಿ 

ಶ್ರೀ ಹಾಲಾಡಿ ಮೇಳ == ಮಟ್ನಗೆದ್ದೆಮನೆ ಹೆಂಗವಳ್ಳಿ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  == ಪಚ್ಚನಾಡಿ ಚಾಮುಂಡೇಶ್ವರಿ ದೇವಸ್ಥಾನ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಪಕ್ಷಿಕೆರೆ – ಶ್ರೀ ದೇವಿ ಮಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅಚಲಾಡಿ ಸೂರಿಬೆಟ್ಟು – ಕೋಟಿ ಚೆನ್ನಯ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಶುಚಿಸೌಧ – ಮೇಗರವಳ್ಳಿ ಮೇಳದೊಂದಿಗೆ ತೆಂಕು ಬಡಗು ಕೂಡಾಟ – ತ್ರಿಜನ್ಮ ಮೋಕ್ಷ 

ಶ್ರೀ ಶನೀಶ್ವರ ಮೇಳ == ಗುಲ್ವಾಡಿ ಗ್ರಾಮ ಪಂಚಾಯತ್ ಎದುರುಗಡೆ 

ಶ್ರೀ ಸಿಗಂದೂರು ಮೇಳ == ಕಾನ್ ಸೂರು 

ಶ್ರೀ ನೀಲಾವರ ಮೇಳ  == ಕರ್ದಾಡಿ ಎಳ್ಳಂಪಳ್ಳಿ – ನಾಗಶ್ರೀ, ಕನಕಾಂಗಿ ಕಲ್ಯಾಣ 

ಶ್ರೀ ಮಂಗಳಾದೇವಿ ಮೇಳ == ವಗ್ಗ ಶ್ರೀ ಮುಖ್ಯಪ್ರಾಣ ದೇವಸ್ಥಾನ – ಬೂಡುದ ಬಂಡಾರ (ತುಳು) 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಆನಂದಪುರ 

ಶ್ರೀ ಮೇಗರವಳ್ಳಿ ಮೇಳ == ಹಿರಿಯಡಕ ಶುಚಿಸೌಧ – ಹಿರಿಯಡಕ ಮೇಳದೊಂದಿಗೆ ತೆಂಕು ಬಡಗು ಕೂಡಾಟ – ತ್ರಿಜನ್ಮ ಮೋಕ್ಷ