Thursday, March 12, 2026
Home Blog Page 333

ಮೇಳಗಳ ಇಂದಿನ (14.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (14.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಮುತ್ತಿನಕೊಪ್ಪ ಶಾಲಾ ಮೈದಾನ – ದಕ್ಷ ಯಜ್ಞ, ದಮಯಂತಿ ಪುನಃಸ್ವಯಂವರ 

ಕಟೀಲು ಒಂದನೇ ಮೇಳ =  = ಸಜಿಪ ಮಾಗಣೆ, ಸಜಿಪ ಮೂಡ ಬಂಟ್ವಾಳ 

ಕಟೀಲು ಎರಡನೇ ಮೇಳ ==  ಮೋoಟುಗೋಳಿ  ಕೈರಂಗಳ ಬೀರೂರು 

ಕಟೀಲು ಮೂರನೇ ಮೇಳ= ಬಡಗಬೆಳ್ಳೂರು ಪಲ್ಲಿಪಾಡಿ ಕಂಡದಬೆಟ್ಟು ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  == ಮೂಡುಪೆರಾರ ಮುಂಡೇವು ಹತ್ತು ಸಮಸ್ತರು 

ಕಟೀಲು ಐದನೇ ಮೇಳ ==  ಮುಂಡಾಜೆ ಬೆಳ್ತಂಗಡಿ  

ಕಟೀಲು ಆರನೇ ಮೇಳ == ‘ ಪೂಪಾಡಿಕಟ್ಟೆ ನಾವೂರು ಬಂಟ್ವಾಳ  

ಮಂದಾರ್ತಿ ಒಂದನೇ ಮೇಳ  ==  ಪಡುಬೆಟ್ಟು ಚಾಂತಾರು ಬ್ರಹ್ಮಾವರ 

ಮಂದಾರ್ತಿ ಎರಡನೇ ಮೇಳ   ==  ಹೊನ್ನಸಗದ್ದೆ ಕನ್ನಂಗಿ 

ಮಂದಾರ್ತಿ ಮೂರನೇ ಮೇಳ  ==   ಕಾವೇರಿ ನಿಲಯ ಕೆದೂರು  (ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ)

ಮಂದಾರ್ತಿ ನಾಲ್ಕನೇ ಮೇಳ   ==  ನೇರಳಮನೆ ಹಾಲುಗುಡ್ಡೆ ಹೊಸನಗರ  

ಮಂದಾರ್ತಿ    ಐದನೇ ಮೇಳ  ==  ಗೆಣಸಿನಕುಣಿ ಸಾಗರ 

ಶ್ರೀ ಹನುಮಗಿರಿ ಮೇಳ  ==  ಆಲಂಗಾರು ಶ್ರೀಮಹಾಗಣಪತಿ ದೇವಸ್ಥಾನ (ಮೂಡಬಿದ್ರೆ) – ಶಿಪ್ರಭ ಪರಿಣಯ (ರಾತ್ರಿ 7.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕೆರಾಡಿ ಬೀಟಿ ಬೊಬ್ಬರ್ಯ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಸ್ಪರ್ಶ ಕಲಾಮಂದಿರ ಬಿ.ಸಿ. ರೋಡ್ (ಜೋಡುಮಾರ್ಗ ಉದ್ಯಾವರ) – ಪಾಂಚಜನ್ಯ, ಶ್ರೀಕೃಷ್ಣ, ಚಂದ್ರಾವಳಿ 

ಶ್ರೀ ಸುಂಕದಕಟ್ಟೆ ಮೇಳ  ==  ಪಟ್ಟೆ – ನೂತನ ಪ್ರಸಂಗ 

ಶ್ರೀ ದೇಂತಡ್ಕ ಮೇಳ == ಸುಳ್ಯಪದವು – ಕಾರ್ಣಿಕದ ಸ್ವಾಮಿ ಕೊರಗಜ್ಜ (ಕಾಲಮಿತಿ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಾವೇರಿ ನಿಲಯ ಕೆದೂರು (ಮಂದಾರ್ತಿ ಮೇಳದೊಂದಿಗೆ ಕೂಡಾಟ)

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹೊಸಮನೆ ಮರವಂತೆ  

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಾಗಯಕ್ಷೆ ಬ್ರಹ್ಮಯಕ್ಷೆ ಸಹಪರಿವಾರ ದೈವಸ್ಥಾನ  ವಠಾರ ನಾಗೂರು ಹೊಸಹಿತ್ಲು 

ಶ್ರೀ ಪಾವಂಜೆ ಮೇಳ  ==  ಮಂದಾರ ಯಾತ್ರಿ ನಿವಾಸ ಕಾಪು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ತುಳಸಿ ಯಕ್ಷಿ ದೈವಸ್ಥಾನ – ದಿವ್ಯ ಸನ್ನಿಧಿ 

ಕಮಲಶಿಲೆ ಮೇಳ ‘ಎ‘ = ರಂಗನಕೆರೆ ಬಾರ್ಕೂರು  

ಕಮಲಶಿಲೆ ಮೇಳ ‘ಬಿ‘ ==  ತುಮಕೂರು 

ಶ್ರೀ ಬಪ್ಪನಾಡು ಮೇಳ == ಶಾಂತಿನಗರ ಕಾವೂರು – ಬಂಗಾರ್ ಬಾಲೆ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಂಜಿಕಲ್ಲುಪದವು  ಬಂಟ್ವಾಳ – ಕಂಚೀಲ್ದ ಪರಕೆ 

ಶ್ರೀ ಅಮೃತೇಶ್ವರೀ ಮೇಳ == ಬದ್ರಿಮನೆ ಗಂಗೊಳ್ಳಿ 

ಶ್ರೀ ಸೌಕೂರು ಮೇಳ ==  ನಾವುಂದ ಬೆಟ್ಟಿನಮನೆ  – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ತಾರಿಮಾರಿಜಡ್ಡು ಭಜನಾ ಮಂಡಳಿ ಬಳಿ 

ಶ್ರೀ ಬೆಂಕಿನಾಥೇಶ್ವರ ಮೇಳ  == ವಾಮಂಜೂರು ಸಂತೋಷ್ ನಗರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲೆನಾಡ ಮಡಿಲುನಗರ ನೂಲ್ ಗೆರೆ – ಕೋಟಿ ಚೆನ್ನಯ  

ಶ್ರೀ ಹಿರಿಯಡಕ ಮೇಳ == ಮೂಲ್ಕಿ ಕಾರ್ನಾಡು – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ಮಧುವನ 

ಶ್ರೀ ಸಿಗಂದೂರು ಮೇಳ == ಶ್ರೀ ಮಹಾಸತಿ ದೇವಸ್ಥಾನ ಬೈಲಗದ್ದೆ 

ಶ್ರೀ ನೀಲಾವರ ಮೇಳ  == ಬಂಡೀಮಠ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ದೆಮ್ಲಾಪುರ ಚಿಕ್ಕಾಲಹಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಹೂಂಬಾಗಿ ನಡಬೂರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಕುಲದೈವ ಪಂಜುರ್ಲಿ  

ಯಕ್ಷಗಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಪತ್ನಿಗೆ ಯಕ್ಷಗಾನ ಕಲಾರಂಗದ ವತಿಯಿಂದ ನೆರವು

ಕಳೆದ ವರ್ಷ ನಿಧನ ಹೊಂದಿದ ಬಡಗತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್‍ ಅವರ ಪತ್ನಿ ಶ್ರೀಮತಿ ಸರಸ್ವತಿ ಆಚಾರ್‍ ಅವರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ರೂಪಾಯಿ 25 ಸಾವಿರ ನೆರವನ್ನು ನೇಜಾರಿನಲ್ಲಿರುವ ಅವರ ಮನೆಗೆ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ತೆರಳಿ ಅಧ್ಯಕ್ಷರಾದ ಎಂ. ಗಂಗಾಧರ ರಾವ್‍ ಅವರು ನೀಡಿದರು.

ಅವರ ಪುತ್ರಿ ಸೀಮಾಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಭರಿಸುತ್ತಿದೆ. ಇದೇ ಸಂದರ್ಭದಲ್ಲಿ ಸೆಲ್ಕೋ ಸಂಸ್ಥೆಯ ವತಿಯಿಂದ ನೀಡಲ್ಪಟ್ಟ ಸೆಲ್ಕೋ ಸೋಲಾರ್ ಹೊಲಿಗೆ ಯಂತ್ರವನ್ನು ಸಂಸ್ಥೆಯ ಎ.ಜಿ.ಎಂ. ಗುರುಪ್ರಕಾಶ್ ಶೆಟ್ಟಿಯವರು ಹಸ್ತಾಂತರಿಸಿದರು.

ಕಲಾರಂಗದ ಪದಾಧಿಕಾರಿಗಳ ತಂಡದಲ್ಲಿ ಉಪಾಧ್ಯಕ್ಷ ಎಸ್.ವಿ.ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಹಾಗೂ ಎಚ್.ಎನ್. ವೆಂಕಟೇಶ್ ಉಪಸ್ಥಿತರಿದ್ದರು.

ರಾಜಶ್ರೀ ಟಿ ರೈಯವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಗೌರವ ಪ್ರಶಸ್ತಿ

ರವಿವಾರ ಕರ್ನಾಟಕ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅದ್ಧೂರಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  2018 ನೇ ಸಾಲಿನ ಪುಸ್ತಕ ಗೌರವ ಪ್ರಶಸ್ತಿಯನ್ನು  ಶ್ರೀಮತಿ ರಾಜಶ್ರೀ ಟಿ ರೈ ಪೆರ್ಲ ಇವರಿಗೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದರು ಅರವಿಂದ ಲಿಂಬಾವಳಿ ಮತ್ತು ಸಚಿವರಾದ ಎಸ್ ಅಂಗಾರ ಅವರು ಗಣ್ಯರ ಉಪಸ್ಥಿತಿಯಲ್ಲಿ  ಪ್ರದಾನ ಮಾಡಿದರು.

ವರ್ಷದ ಅತ್ಯುತ್ತಮ ತುಳು ಕಾದಂಬರಿಯಾಗಿ ರಾಜಶ್ರೀ ಟಿ ರೈ ಪೆರ್ಲ ಅವರ “ಕೊಂಬು” ಕಾದಂಬರಿ ಪ್ರಶಸ್ತಿಗೆ ಪಾತ್ರವಾಗಿದೆ. ಕಲ್ಲಡ್ಕ ಪ್ರಭಾಕರ ಭಟ್, ಉಡುಪಿ ಪೇಜಾವರ ಮಠದ ಪರಮ ಪೂಜ್ಯ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು  ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಕಾಂತಿ ಶೆಟ್ಟಿ ಮತ್ತು  ಅಕಾಡೆಮಿಯ  ಸದಸ್ಯರು ಮತ್ತಿತರು   ಉಪಸ್ಥಿತರಿದ್ದರು. 

ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ರಾಜಶ್ರೀ ಟಿ ರೈ ಪೆರ್ಲ ಅವರ ಯಕ್ಷಗಾನ ಕಲಾವಿದರ ಜೀವನಾಧರಿತ ತುಳು ಕಾದಂಬರಿ “ಚೌಕಿ” ಪನಿಯಾಡಿ ಪ್ರಶಸ್ತಿ ಪಡೆದುಕೊಂಡಿತ್ತು.

ಮೇಳಗಳ ಇಂದಿನ (13.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕಾನೂರು, ಕುದ್ರೆಗುಂಡಿ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ =  = ಕುಡುಪು ಕೆ ಎಚ್ ಬಿ ಲೇ ಔಟ್ 

ಕಟೀಲು ಎರಡನೇ ಮೇಳ ==  ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ ಉರ್ವಸ್ಟೋರ್  

ಕಟೀಲು ಮೂರನೇ ಮೇಳ= ಕೂಳೂರು ಮಂಗಳೂರು 

ಕಟೀಲು ನಾಲ್ಕನೇ ಮೇಳ  == ಅಂಬ್ಲಮೊಗರು ಬಸ್ತಿಕಟ್ಟೆ 

ಕಟೀಲು ಐದನೇ ಮೇಳ ==  ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಬೆಳ್ತಂಗಡಿ  

ಕಟೀಲು ಆರನೇ ಮೇಳ == ‘ ಕಟೀಲು ಕ್ಷೇತ್ರ – ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  ==  ಕೈಕಂಬ ಕಿನ್ನಿಗೋಳಿ ಮಂಗಳೂರು 

ಮಂದಾರ್ತಿ ಎರಡನೇ ಮೇಳ   ==  ಅಮ್ಮನಮನೆ ತಳುವೆ ಮೇಳಿಗೆ  

ಮಂದಾರ್ತಿ ಮೂರನೇ ಮೇಳ  ==   ನಡೂರು ರಂಗನಕೆರೆ ಬಾರ್ಕೂರು 

ಮಂದಾರ್ತಿ ನಾಲ್ಕನೇ ಮೇಳ   == ಅಗಸಾಡಿ ಗುಡ್ಡೆಕೊಪ್ಪ  

ಮಂದಾರ್ತಿ    ಐದನೇ ಮೇಳ  ==  ಹೊಸೂರು ವರದಮೂಲ ಸಾಗರ  

ಶ್ರೀ ಹನುಮಗಿರಿ ಮೇಳ  ==  ಎಡಪದವು ಪಾಡ್ಯಾರ್ ಮಜಲುಗದ್ದೆ – ಮಹಾಕಲಿ ಮಗಧೇಂದ್ರ  (ರಾತ್ರಿ 9.30)

ಶ್ರೀ ಸಾಲಿಗ್ರಾಮ ಮೇಳ == ಮೊಳಹಳ್ಳಿ ಕೈಲ್ಕೆರೆ ಕಂಚಮ್ಮ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಬ್ರಹ್ಮಾವರ ಗಾಂಧಿ ಮೈದಾನ- ಬ್ರಹ್ಮ ಕಪಾಲ, ಮಾಗಧ ವಧೆ 

ಶ್ರೀ ತಳಕಲ ಮೇಳ == ಬಜಪೆ ಕೇಂದ್ರ ಮೈದಾನ – ಶಾಂಭವಿ ವಿಜಯ, ಪಾಪಣ್ಣ ವಿಜಯ ಗುಣಸುಂದರಿ 

ಶ್ರೀ ಸುಂಕದಕಟ್ಟೆ ಮೇಳ  ==  ಸಾಣೂರು ಗುರುಬೆಟ್ಟು ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಸನ್ನಿಧಿ – ಪಾಪಣ್ಣ ವಿಜಯ ಗುಣಸುಂದರಿ  

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊಣ್ಣಿಮಕ್ಕಿಬೆಟ್ಟು ಬಳ್ಕೂರು  

ಶ್ರೀ ಮಾರಣಕಟ್ಟೆ ಮೇಳ ‘ಬಿ == ಗಣೇಶ ನಿಲಯ ಕೆಂಚನೂರು ಶಾಲಾ ಬಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮಹಾವಿಷ್ಣುಸದನ ದೇವಲಕುಂದ ಕೆಳಾಮನೆ 

ಶ್ರೀ ಪಾವಂಜೆ ಮೇಳ  ==  ಬೆರಿಪದವು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಾಗಯಕ್ಷಿ ಬೊಬ್ಬರ್ಯ ದೇವಸ್ಥಾನ ಹುಣಸೆಕಟ್ಟೆ – ಶ್ರೀ ಶನೀಶ್ವರ ಮಹಾತ್ಮೆ 

ಕಮಲಶಿಲೆ ಮೇಳ ‘ಎ‘ = ಕೊಳಂಜೆ ಗುರುಪುರ 

ಕಮಲಶಿಲೆ ಮೇಳ ‘ಬಿ‘ ==  ಶ್ರೀ ಆಂಜನೇಯ ದೇವಸ್ಥಾನ ದಾಸರಮಕ್ಕಿ 

ಶ್ರೀ ಬಪ್ಪನಾಡು ಮೇಳ == ನಾಗಬ್ರಹ್ಮ ಸೇವಾ ಸಮಿತಿ ಕೋಡಿಕಲ್ – ಬಂಗಾರ್ ಬಾಲೆ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ನಿಡ್ಡೋಡಿ ಕಲ್ಲಕುಮೇರು ಪಲ್ಕೆ – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ == ಶಾನ್ಕಟ್ಟು  ಅಂಪಾರು 

ಶ್ರೀ ಸೌಕೂರು ಮೇಳ ==  ನೇರಳಕಟ್ಟೆ ಹಾಡಿಮನೆ – ಸುಧನ್ವಾರ್ಜುನ ಮಹಿಷಮರ್ದಿನಿ ವೀರ ಅಭಿಮನ್ಯು 

ಶ್ರೀ ಹಾಲಾಡಿ ಮೇಳ == ಗೋರಾಜೆ ಹಾಲಾಡಿ 76 – ಚತುರ್ಜನ್ಮ ಮೋಕ್ಷ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಾಟಿಪಳ್ಳ ITA ಗುರುನಗರ 3ನೇ ಬ್ಲಾಕ್ – ಶ್ರೀ ದೇವಿ ಅಗ್ನಿ ಕಲ್ಲುರ್ಟಿ 

ಶ್ರೀ ಮಡಾಮಕ್ಕಿ ಮೇಳ == ಆರೂರು ಕೀರ್ತಿನಗರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ದಿಂಡ್ ಕಲ್ ಶ್ರೀ ಬೊಬ್ಬರ್ಯ ದೈವಸ್ಥಾನ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಜನ್ಯಾಡಿ ಶಾಲಾ ವಠಾರ – ಹಿರಿಯಡಕ ಕ್ಷೇತ್ರ ಮಹಾತ್ಮೆ  

ಶ್ರೀ ಶನೀಶ್ವರ ಮೇಳ ==  ನೆಲ್ಲಿಕಟ್ಟೆ, ಹಡಾಳಿ 

ಶ್ರೀ ಸಿಗಂದೂರು ಮೇಳ == ಬೀಜಾಡಿ ಬೈಪಾಸ್ 

ಶ್ರೀ ನೀಲಾವರ ಮೇಳ  == ನೀಲಾವರ – ಕಾರ್ತವೀರ್ಯ, ಮಂಗಳಗೌರಿ ವೃತ ಮಹಾತ್ಮೆ 

ಶ್ರೀ ಮಂಗಳಾದೇವಿ ಮೇಳ == ಕಾಪು ಲಕ್ಷ್ಮಿ ಜನಾರ್ದನ ದೇವಸ್ಥಾನದ ಬಳಿ – ಕಾರ್ಣಿಕದ ಕೊರಗಜ್ಜ (ತುಳು)

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಹಳ್ಳಿಬೈಲು  

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕೋಣಂದೂರು ಉಡುಕೆರೆ 

ಶ್ರೀ ಮೇಗರವಳ್ಳಿ ಮೇಳ == ಹರತಾಳು ಹೊಸಮ್ಮ ಸೇವಾ ಸಮಿತಿ – ಕುಲದೈವ ಪಂಜುರ್ಲಿ  

ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು (ಭಾಗ – 3)

 ಕಂಡೆತ್ತೋಡಿ ಶ್ರೀ ನಾರಾಯಣ ಕೇಕುಣ್ಣಾಯರು ಆ ಕಾಲದ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ. ಇವರೇ ಯಕ್ಷಗಾನ ಕಲಾವಿದನಾಗಲು ವಿಷ್ಣು ಭಟ್ಟರಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ಪ್ರಿಯ ಶಿಷ್ಯನಾಗಿಯೇ ವಿಷ್ಣು ಭಟ್ಟರು ಕಲಾವಿದನಾಗಿ ಕಾಣಿಸಿಕೊಂಡಿದ್ದರು.   ಮದರಾಸು ಸರಕಾರದ ಆಡಳಿತ. ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಆಗ ಪ್ರಾಥಮಿಕ ಶಾಲಾ ಶಿಕ್ಷಕನಾಗಲು ವಿದ್ಯಾರ್ಹತೆಯ ನಿಬಂಧನೆಗಳು ಇರಲಿಲ್ಲ.

ಅದೇ ಕಾಲಕ್ಕೆ ಊರ ಮಕ್ಕಳೆಲ್ಲಾ ವಿದ್ಯಾವಂತರಾಗಬೇಕೆಂಬ ಸದುದ್ದೇಶದಿಂದ ಸಮಾನಮನಸ್ಕರೆಲ್ಲ  ಕೀರಿಕ್ಕಾಡಿನಲ್ಲಿ ಪ್ರಾಥಮಿಕ  ಶಾಲೆಯನ್ನು ಆರಂಭಿಸಿದರು. (ಕೀರಿಕ್ಕಾಡು ಕೇಶವ ಭಟ್, ವಿಷ್ಣು ಭಟ್ಟರ ದೊಡ್ಡಪ್ಪಂದಿರು, ಕಂಡೆತ್ತೋಡಿ ರಾಮಚಂದ್ರ ಕೇಕುಣ್ಣಾಯರು, ವರಂಬುಡಿ  ಶಂಕರ ಭಟ್ಟರು ಸೇರಿ ಪ್ರಯತ್ನಿಸಿ ತೆರೆದ ಶಾಲೆ). ಸುಮಾರು 1927ರಲ್ಲಿ ಇರಬೇಕು. 5ನೇ ಕ್ಲಾಸಿನ ವರೆಗೆ ಓದಿದ 14 ವರ್ಷ ಪ್ರಾಯದ ವಿಷ್ಣು ಭಟ್ಟರು ಶ್ರೀ ವಿದ್ಯಾದಾಯಿನೀ ಕಿರಿಯ ಪ್ರಾಥಮಿಕ ಶಾಲೆಯ ಮೊದಲ ಏಕೋಪಾಧ್ಯಾಯರಾಗಿ ನೇಮಕಗೊಂಡಿದ್ದರು.

ಪ್ರತ್ಯೇಕ ಕಟ್ಟಡ ಇರಲಿಲ್ಲ. ಕೀರಿಕ್ಕಾಡು ಕೇಶವ ಭಟ್ಟರ ಮನೆಯ ಉಪಕಟ್ಟಡದಲ್ಲಿ ವಿದ್ಯಾಲಯವು ಕಾರ್ಯಾರಂಭ ಮಾಡಿತ್ತು. ಗೋಮಯ ಸರಿಸಿದ ನೆಲ. ವಿದ್ಯಾರ್ಥಿಗಳು ಕುಳಿತಿದ್ದರೆ ವಿಷ್ಣು ಎಂಬ ಎಳೆಯ ವಯಸ್ಸಿನ, ಟೀನೇಜಿನ ಅಧ್ಯಾಪಕ ನಿಂತೇ ಪಾಠ ಮಾಡಲು ಆರಂಭಿಸಿದ್ದ! ಆಗ ಶಾಲಾ ಅಧ್ಯಾಪಕರನ್ನು ಮಾಸ್ತರ್ ಎಂದು ಕರೆಯುವುದು ರೂಢಿಯಲ್ಲಿತ್ತು. ವಿಷ್ಣು ಭಟ್ಟರು ಮಾಸ್ತರ್ ವಿಷ್ಣು ಭಟ್ಟರೆಂದು ಕರೆಸಿಕೊಂಡರು. ಶಾಲೆಯಲ್ಲಿ ಮಾಸ್ತರರಾಗಿ  ಪಾಠ.

ಮುಂದಿನ ದಿನಗಳಲ್ಲಿ ಕೀರಿಕ್ಕಾಡು ಮಣ್ಣಿನಲ್ಲಿ ಯಕ್ಷಗಾನ ಕಲಾಸಕ್ತರಿಗೂ ಮಾಸ್ತರರಾಗಿ ಪಾಠ ಹೇಳಲಾರಂಭಿಸಿದರು. 1928ನೇ ಇಸವಿ. ಕೀರಿಕ್ಕಾಡು ಶಾಲೆಯಲ್ಲಿ ನಡೆದ ತಾಳಮದ್ದಳೆ. ‘ರಾಜಸೂಯಾಧ್ವರ, ಪ್ರಸಂಗ. ಗುರುಗಳಾದ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ಸೂಚನೆಯಂತೆ ಅರ್ಜುನನಾಗಿ ರಂಗಪ್ರವೇಶ. ವಿಷ್ಣು ಭಟ್ಟರು ಯಶಸ್ವಿಯಾಗಿ ಪ್ರೇಕ್ಷಕರಿಂದ ಹೊಗಳಿಸಿಕೊಂಡಿದ್ದರು. ಅಂದಿನಿಂದ ಯಕ್ಷಗಾನ ಕ್ಷೇತ್ರದಲ್ಲೂ ಕೀರಿಕ್ಕಾಡು ಮಾಸ್ತರರೆಂದೇ ಕರೆಸಿಕೊಂಡರು.

ಸಾಹಿತ್ಯದತ್ತ ಆಕರ್ಷಿತರಾದ ಇವರು ಲೇಖನಿಯಿಂದ ಸರಸ್ವತಿ ದೇವಿಯ ಸೇವೆಯನ್ನು ಮಾಡುವಲ್ಲಿ ತೊಡಗಿಸಿಕೊಂಡರು. ಸ್ವಯಂ ಪ್ರತಿಭಾವಂತರಾಗಿ ಕಾವ್ಯ, ಪುರಾಣಗಳನ್ನು ಓದಿ ಪಡೆದ ಅನುಭವಗಳು ಪದ್ಯ ರಚನೆಗೆ ಅನುಕೂಲವೂ ಆಗಿತ್ತು. ತನ್ನ 16ನೆಯ ವಯಸ್ಸಿನಲ್ಲಿ ‘ಶಿವ ಪಂಚಾಕ್ಷರೀ ಮಹಿಮೆ’ (ಶ್ವೇತಕುಮಾರ ಚರಿತ್ರೆ) ಎಂಬ ಪ್ರಸಂಗವನ್ನು ರಚಿಸಿದರು. 16ನೇ ವಯಸ್ಸಿನಲ್ಲಿ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದ ಹೆಗ್ಗಳಿಕೆ ಶ್ರೀಯುತರದು.

ಯಕ್ಷಗಾನ ಕ್ಷೇತ್ರದಲ್ಲಿ ಈಗಲೂ ವಿಜೃಂಭಿಸುತ್ತಿರುವ ಪ್ರಸಂಗವದು.  ಏಳಕ್ಕಿಂತಲೂ ಹೆಚ್ಚು ಬಾರಿ ಮುದ್ರಿತವಾಗಿತ್ತು. ಈ ವರೆಗೂ ಎಷ್ಟೋ ಸಾವಿರ ಬಾರಿ ಪ್ರದರ್ಶನಗೊಂಡಿರಬಹುದು. ಶೃಂಗಾರ, ಹಾಸ್ಯ, ಭಕ್ತಿ, ಕರುಣ ರಸಗಳಿಂದ ಈ ಪ್ರಸಂಗವು ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸುತ್ತದೆ. ಯಕ್ಷಗಾನಕ್ಕೆ ಇದೊಂದು ಅಪೂರ್ವ ಕೊಡುಗೆ. ಕೂಡ್ಲು ಮನೆತನದ ಎರೆಯಪ್ಪಾಡಿ ಕೇಶವ ಶಾನುಭೋಗರ ಆದೇಶದಂತೆ ಈ ಪ್ರಸಂಗವನ್ನು ಮಾಸ್ತರರು ರಚಿಸಿದ್ದರಂತೆ. ಬಂಧುಗಳಾದ ಸರ್ಪ೦ಗಳ ವೆಂಕಪ್ಪ ಶಾಸ್ತ್ರಿಗಳಿಂದ ಸಂಸ್ಕೃತ ಕಲಿತುದೂ ಅನುಕೂಲವಾಗಿತ್ತು.

1927ರಿಂದ 1942ರ ವರೆಗೆ ಕೀರಿಕ್ಕಾಡು ವಿದ್ಯಾದಾಯಿನೀ ಶಾಲೆಯಲ್ಲಿ ಅಧ್ಯಾಪನ. ಜತೆಗೆ ತಾಳಮದ್ದಳೆ ಅರ್ಥಗಾರಿಕೆ, ಕೃಷಿ ವ್ಯವಹಾರ , ಸಂಸಾರ ನಿರ್ವಹಣೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದರು. ದೇಹ ಮತ್ತು ಮನಸ್ಸುಗಳೆರಡೂ ಬಲಿಷ್ಠವಾಗಿದ್ದುದರಿಂದ ಮಾತ್ರ ಈ ಸಾಹಸವನ್ನು ನಿರೀಕ್ಸಿಸಬಹುದು. 1935ರಲ್ಲಿ ತೀರ್ಥರೂಪರು (ಕೀರಿಕ್ಕಾಡು ಕೇಶವ ಭಟ್ಟರು) ನಿಧನರಾದಾಗ ಸಂಸಾರದ ಹೊಣೆಯೂ ಹೆಚ್ಚಿತ್ತು. 1930ರಲ್ಲಿ ಅಂದರೆ ಹದಿನೇಳನೇ ವಯಸ್ಸಿಗೆ ಮರಕ್ಕಿಣಿ ಗೋವಿಂದ ಭಟ್ಟ , ಶಂಕರಿ ಅಮ್ಮ ದಂಪತಿಗಳ ಪುತ್ರಿ ಪರಮೇಶ್ವರಿ ಅವರನ್ನು ವಿವಾಹವಾಗಿ ಗೃಹಸ್ಥಾಶ್ರಮಿಯಾದರು.

ಯಕ್ಷಗಾನಾಸಕ್ತಿ ತೀವ್ರವಾಗಿದ್ದರೂ ಮನೆಯನ್ನು ನಿರ್ಲಕ್ಸಿಸದೆ ನೋಡಿಕೊಳ್ಳುತ್ತಿದ್ದರು. ಕಾಸರಗೋಡು ಪ್ರದೇಶದೆಲ್ಲೆಡೆ ನಡೆಯುವ ಕೂಟಗಳಿಗೆ ನಡೆದೇ ಸಾಗುತ್ತಿದ್ದರು. ಪೊಳಲಿ ಶಾಸ್ತ್ರಿಗಳು, ಕವಿಭೂಷಣ ವೆಂಕಪ್ಪ ಶೆಟ್ಟರು, ಪಡ್ರೆ ಶ್ರೀಪತಿ ಶಾಸ್ತ್ರಿಗಳು(ಪೆರ್ಲ ಕೃಷ್ಣ ಭಟ್ಟರ ತೀರ್ಥರೂಪರು), ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರು, ಪುಂಡೂರು ಗೋಪಾಲಕೃಷ್ಣ ಪುಣಿಚಿತ್ತಾಯರು, ಏನ್. ಎಸ್. ಕಿಲ್ಲೆ , ದೊಡ್ಡ ಸಾಮಗರು, ಅರ್ಕುಳ ಸುಬ್ರಾಯ ಆಚಾರ್ಯರು, ಕುಬಣೂರು ಬಾಲಕೃಷ್ಣ ರಾಯರು, ಕೊಳಂಬೆ ಪುಟ್ಟಣ್ಣ ಗೌಡರು ಮೊದಲಾದವರು ಆಗ ಕೂಟಗಳಲ್ಲಿ ದಿಗ್ಗಜರು. ಅವರೊಂದಿಗೆ ಅರ್ಥ ಹೇಳುತ್ತಾ ಅನುಭವಗಳಿಂದ ಸಮದಂಡಿಯಾಗಿ ಮೆರೆದರು.

ಕುರಿಯ ವಿಠಲ ಶಾಸ್ತ್ರಿಗಳೂ, ಮಾಸ್ತರರೂ ಸಾಧಾರಣ ಸಮಾನವಯಸ್ಕರು. ಜತೆಯಾಗಿಯೇ ಆಟ  ಕೂಟಗಳಲ್ಲಿ ಭಾಗವಹಿಸಿದ್ದರು. ಕೀರಿಕ್ಕಾಡು ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗ ಶಿಕ್ಷಣಾಧಿಕಾರಿಯವರ ಪ್ರಸಂಶೆಗೂ ಪಾತ್ರರಾಗಿದ್ದರು. ಶಾಲೆಯಲ್ಲಿ ನವರಾತ್ರಿ ಪೂಜಾ ಸಂದರ್ಭವಲ್ಲದೆ ಅವಕಾಶಗಳಿದ್ದಾಗ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ನೇತೃತ್ವದಲ್ಲಿ ಕೂಟಗಳು ನಡೆಯುತ್ತಿತ್ತು. ಪಂಬೆತಡ್ಕ ಶ್ರೀನಿವಾಸ ಕಡಂಬಳಿತ್ತಾಯರೂ ಕೂಟಗಳಲ್ಲಿ ಮಾಸ್ತರರ ಒಡನಾಡಿಯಾಗಿದ್ದರು. ಕೀರಿಕ್ಕಾಡಿನಲ್ಲಿರುವಾಗಲೇ ಶಿಷ್ಯಂದಿರನ್ನು ಸಿದ್ಧಗೊಳಿಸುವ ಕಾಯಕಕ್ಕೆ ತೊಡಗಿದ್ದರು.

ಶೇಣಿಯವರು ಬಾಲಕನಾಗಿದ್ದಾಗ ಅವರನ್ನೂ ತಾಳಮದ್ದಳೆ ಕ್ಷೇತ್ರಕ್ಕೆ ಸೆಳೆದು ಪ್ರೋತ್ಸಾಹಿಸಿದ್ದರು. ಉಕ್ಕಿನಡ್ಕ ಶ್ರೀ ವಸಿಷ್ಠಾಶ್ರಮ ಸಂಸ್ಕೃತ ಪಾಠಶಾಲೆಯಲ್ಲಿ ನಡೆದ ಕೂಟದಲ್ಲಿ ರತಿ ಕಲ್ಯಾಣ ಪ್ರಸಂಗದಲ್ಲಿ ಮಾಸ್ತರರಿಂದ ಪ್ರಚೋದಿಸಲ್ಪಟ್ಟ ಶೇಣಿಯವರು ಮೊತ್ತ ಮೊದಲ ಬಾರಿ ತಾಳಮದ್ದಳೆ ಅರ್ಥಧಾರಿಯಾಗಿ ಕಾಣಿಸಿಕೊಂಡರು. ನಿರಂತರ ಯಕ್ಷಗಾನ ಪಾಠವನ್ನೂ ಕೂಟಗಳನ್ನೂ ನಡೆಸಿ ಕೀರಿಕ್ಕಾಡಿನಲ್ಲಿರುವಾಗಲೇ ‘ಯಕ್ಷಗಾನ ಗುರು’ ಎನಿಸಿಕೊಂಡರು.

ಇವರ ಶಿಷ್ಯರಲ್ಲಿ ಶೇಣಿ ಮತ್ತು ಕಡಾರು  ನಾರಾಯಣ ಭಟ್ ಪ್ರಮುಖರು. ‘ಕೀರಿಕ್ಕಾಡು ಮಾಸ್ತರರಿಂದಾಗಿಯೇ ನಾನು ಯಕ್ಷಗಾನ ಕ್ಷೇತ್ರಕ್ಕೆ ಬಂದೆ. ಅವರೇ ನನ್ನನ್ನು ಕೂಟಗಳಿಗೆ ಎಳೆತಂದವರು. ವಿವೇಕಾನಂದರಿಗೆ ಪರಮಹಂಸರಿದ್ದಂತೆ ನನಗೆ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು’ ಎಂದು ಶೇಣಿಯವರು ಹೇಳುತ್ತಿದ್ದರು. ಕಡಾರು ನಾರಾಯಣ ಭಟ್ಟರು ನಾಟ್ಯ ಕಲಿತು ಒಳ್ಳೆಯ ಕಿರೀಟ ವೇಷಧಾರಿಯಾಗಿ ಮೇಳದ ತಿರುಗಾಟವನ್ನು ಮಾಡಿದವರು. ಅತಿಕಾಯನ ಪಾತ್ರವು ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತ್ತು. ಅವರನ್ನು ಎಲ್ಲರೂ ಅತಿಕಾಯ ನಾರಾಯಣಣ್ಣ ಎಂದು ಕರೆಯುತ್ತಿದ್ದರಂತೆ.

ಈ ಎಲ್ಲಾ ವಿಚಾರಗಳನ್ನು ನನ್ನ ತೀರ್ಥರೂಪರು ನನಗೆ ಹೇಳಿದ್ದರು. ಮೊಟ್ಟಮೊದಲು ಕೀರಿಕ್ಕಾಡು ಪ್ರಶಸ್ತಿಯನ್ನು ಶೇಣಿ ಗೋಪಾಲಕೃಷ್ಣ ಭಟ್ಟರಿಗೇ ನೀಡಿ ಗೌರವಿಸಲಾಗಿತ್ತು. ಇದು ಅಭಿನಂದನೀಯವೂ ಗುರು ಶಿಷ್ಯ ಪರಂಪರೆಗೆ ಸಂದ ಗೌರವವೂ ಆಗಿದೆ. ಮಾಸ್ತರರು ಎಳವೆಯಲ್ಲೇ ಅಧ್ಯಯನಾಸಕ್ತರಾಗಿ ಉಳಿದವರಿಗೆ ಬೋಧಿಸುವ ಕ್ರಮವನ್ನು ಪಾಲಿಸಿಕೊಂಡು ಬಂದವರು.  

– (ಮುಂದುವರಿಯುವುದು)

ಲೇಖನ: ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ (12.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (12.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಗಡಿಕಲ್ಲು, ಗಣಪತಿಕಟ್ಟೆ – ಚಕ್ರವ್ಯೂಹ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ =  = ಕಿಲೆಂಜೂರು ನಡುಗೋಡು 

ಕಟೀಲು ಎರಡನೇ ಮೇಳ ==  ಕಟೀಲು ಕ್ಷೇತ್ರ – ಸರಸ್ವತಿ ಸದನ 

ಕಟೀಲು ಮೂರನೇ ಮೇಳ= ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನ ಮಂಜನಾಡಿ 

ಕಟೀಲು ನಾಲ್ಕನೇ ಮೇಳ  == ಬುಡೋಳಿ ಪುಂಚೋಡಿ ಪಂಜಿಕಲ್ಲು ಬಂಟ್ವಾಳ 

ಕಟೀಲು ಐದನೇ ಮೇಳ ==  ಮಠದ ಮಜಲು ಮನೆ, ಚಾರ್ಮಾಡಿ ಬೆಳ್ತಂಗಡಿ  

ಕಟೀಲು ಆರನೇ ಮೇಳ == ‘ ಚಾವಡಿದಡಿ ಮನೆ, ಕೆಂಜಾರು ಪೇಜಾವರ ಬಜಪೆ 

ಮಂದಾರ್ತಿ ಒಂದನೇ ಮೇಳ  ==  ಅನುಗ್ರಹ ನಿಲಯ, ಕಾವಡಿ 

ಮಂದಾರ್ತಿ ಎರಡನೇ ಮೇಳ   ==  ಕಡಿದಾಳು, ಹಾರೋಗುಳಿಗೆ 

ಮಂದಾರ್ತಿ ಮೂರನೇ ಮೇಳ  ==   ಹಳ್ಳಿಕಟ್ಟು ಶೀರೂರು ಮುದ್ದುಮನೆ 

ಮಂದಾರ್ತಿ ನಾಲ್ಕನೇ ಮೇಳ   == ಕೋಣ್ಕೆರೆ , ಎನ್. ಆರ್. ಪುರ 

ಮಂದಾರ್ತಿ    ಐದನೇ ಮೇಳ  ==  ಮರ್ತುಗುಡ್ಡೆ ಭೀಮನಕೆರೆ ಹೊಸನಗರ 

ಶ್ರೀ ಹನುಮಗಿರಿ ಮೇಳ  ==  ಹೊಸಬೆಟ್ಟು ಶ್ರೀ ಕೋಡ್ದಬ್ಬು ದೈವಸ್ಥಾನದ ವಠಾರ – ಶುಕ್ರ ನಂದನೆ (ರಾತ್ರಿ 6.30)

ಶ್ರೀ ಸಾಲಿಗ್ರಾಮ ಮೇಳ == ಗಂಗೊಳ್ಳಿ ಎಸ್.ವಿ. ಜೂನಿಯರ್ ಕಾಲೇಜು ಮೈದಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಇಚಡ್ಕ (ಉ,ಕ) – ಶಶಿಪ್ರಭಾ, ಗದಾಯುದ್ಧ (ಕಾಲಮಿತಿ)

ಶ್ರೀ ಸುಂಕದಕಟ್ಟೆ ಮೇಳ  ==  ಕುಪ್ಪೆಪದವು ಬೊಳಿಯ, ವಜ್ರಕೋಗಿಲೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಾಸನಕಟ್ಟೆ ವಂಡ್ಸೆ  

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬೆಣ್ಣೇರಿ ಪಡುವಾಯಿನಮನೆ ಗುಜ್ಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ವಸಂತನಮನೆ ಅರೆಹೊಳೆ 

ಶ್ರೀ ಪಾವಂಜೆ ಮೇಳ  ==  ಯಕ್ಷಾಭಿಮಾನಿ ವಕೀಲರ ಸಂಘ, ಮಂಗಳೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ವಾಲ್ತೂರು ನಂದಿಕೇಶ್ವರ ದೈವಸ್ಥಾನ – ದಿವ್ಯ ಸನ್ನಿಧಿ (ಕಾಲಮಿತಿ)

ಕಮಲಶಿಲೆ ಮೇಳ ‘ಎ‘ = ಶ್ರೀ ಮಹಾಂಕಾಳಿ ದೇವಸ್ಥಾನ ಕೆದೂರು 

ಕಮಲಶಿಲೆ ಮೇಳ ‘ಬಿ‘ ==  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಾರದಾನಗರ , ಮುಂಡಾಜೆ, ಉಜಿರೆ  

ಶ್ರೀ ಬಪ್ಪನಾಡು ಮೇಳ == ಉಪ್ಪರಡ್ಕ ಅರಸಿನಮಕ್ಕಿ – ಬಂಗಾರ್ ಬಾಲೆ(ತುಳು)

ಶ್ರೀ ಅಮೃತೇಶ್ವರೀ ಮೇಳ == ಮಣೂರು ಜಟ್ಟೆಗೇಶ್ವರ ದೇವಸ್ಥಾನ 

ಶ್ರೀ ಬೋಳಂಬಳ್ಳಿ ಮೇಳ==  ಜಾಲಿಗದ್ದೆ ಕಾರ್ಗಲ್ – ಚಂದ್ರಾವಳಿ, ಕುಶಲವ  

ಶ್ರೀ ಸೌಕೂರು ಮೇಳ ==  ಕೋಟ ಆನಂದ ಶೆಟ್ಟಿ ಕಂಪೌಂಡ್ – ಚತುರ್ಜನ್ಮ ಮೋಕ್ಷ 

ಶ್ರೀ ಹಾಲಾಡಿ ಮೇಳ == ನಾಲ್ಕೂರು ಜಂಗಮೇಶ್ವರ ದೇವಸ್ಥಾನದ ವಠಾರ – ವೀರ ಬರ್ಬರೀಕ (ಕಾಲಮಿತಿ)

ಶ್ರೀ ಬೆಂಕಿನಾಥೇಶ್ವರ ಮೇಳ  ==ಇಂದ್ರಾಳಿ ರೈಲ್ವೆ ಗೋಡೌನ್ ರಸ್ತೆ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಮರೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಳ್ಳೂರು – 74, ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರ – ಸಿರಿವಂತ ಶಿವರಾಯ 

ಶ್ರೀ ಹಿರಿಯಡಕ ಮೇಳ == ಕುಂಟಿಗೆ ಗೊರಗೋಡು (ಜಯನಗರ)- ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಬ್ರಹ್ಮಾವರ  

ಶ್ರೀ ಸಿಗಂದೂರು ಮೇಳ == ಸೌಳ್ನಾಡು ಶ್ರೀ ಕೋಟೇಶ್ವರ ದೇವಸ್ಥಾನ ಹೊಸಕೊಪ್ಪ  

ಶ್ರೀ ನೀಲಾವರ ಮೇಳ  == ಹೆಬ್ರಿ ಪೇಟೆ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಮಂಡಗದ್ದೆ ಮಳವಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಬೆಜ್ಜವಳ್ಳಿ – ಮಧುರ ಮನಸ್ವಿ 

ಗೋವಾ ರಜಾದಿನದಲ್ಲಿ ಕನಸಿನ ಚಿತ್ರಗಳನ್ನು ಹಂಚಿಕೊಂಡ ಸರ್ಗುನ್ ಮೆಹ್ತಾ

ಸರ್ಗುನ್ ಮೆಹ್ತಾ ಅವರು ಇತ್ತೀಚೆಗೆ ರಜಾದಿನಗಳಲ್ಲಿ ಗೋವಾದಲ್ಲಿ ತೆಗೆದಿದ್ದ ಸ್ವಪ್ನಮಯ ಚಿತ್ರಗಳನ್ನು ಇನ್ಸ್ಟಾಗ್ರಾಮ್ಹಂ ನಲ್ಲಿ ಹಂಚಿಕೊಂಡಿದ್ದಾರೆ.

ಸರ್ಗುನ್ ಮೆಹ್ತಾ ಅವರು ಇತ್ತೀಚೆಗೆ ಗೋವಾಕ್ಕೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ತೆಗೆದ ತನ್ನ ಕನಸಿನ ಚಿತ್ರಗಳೊಂದಿಗೆ ತನ್ನ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದರು. ಪ್ರಕಾಶಮಾನವಾಗಿ ಬೆಳಗಿದ ಸ್ವಿಂಗ್ ಮೇಲೆ ಕುಳಿತಿದ್ದ ಫೋಟೋವನ್ನು ಹಂಚಿಕೊಳ್ಳಲು ಬಾಲಿಕಾ ವಧು ನಟಿ ಇನ್ಸ್ಟಾಗ್ರಾಮ್ ಆಯ್ಕೆ ಮಾಡಿಕೊಂಡರು.

ಒಂದು ಫೋಟೋದಲ್ಲಿ ಅವಳು ಹೃದಯ ಆಕಾರದ-ರೇಲಿಂಗ್ನಿಂದ ಮಾಡಿದ ಸ್ವಿಂಗ್ ಮೇಲೆ ಕುಳಿತು ಕಾಲ್ಪನಿಕ ದೀಪಗಳಿಂದ ಅಲಂಕರಿಸಲ್ಪಟ್ಟ ಚಿತ್ರದಲ್ಲಿ ರಾರಾಜಿಸುತ್ತಿದ್ದಾಳೆ. ಬದಿಯಲ್ಲಿ ನೇರಳೆ ಮತ್ತು ಬಿಳಿ ಹೂವುಗಳಿವೆ, ಮತ್ತು ಸ್ವಿಂಗ್ ಸ್ನೇಹಶೀಲವಾಗಿ ಕಾಣುವ ಉದ್ಯಾನವನದಲ್ಲಿದೆ. ಸರ್ಗುನ್ ಸಡಿಲವಾದ ಉದ್ದನೆಯ ಶರ್ಟ್ ಧರಿಸಿರುವುದು ಕಂಡುಬರುತ್ತದೆ.

ಬಡಗುತಿಟ್ಟಿನ ಹಿರಿಯ ಬಣ್ಣದ ವೇಷದಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರಿಗೆ ಕಂಡ್ಲೂರಿನಲ್ಲಿ ಸನ್ಮಾನ

ಶ್ರೀ ಕನ್ನಿಕಾ ಪರಮೇಶ್ವರಿ ಯಕ್ಷಗಾನ ಕಲಾ ಸಂಘ,  ಕಂಡ್ಲೂರು ಇದರ ವತಿಯಿಂದ,  ಸಂಘದ 46ನೇ ಯಕ್ಷಕಲೋತ್ಸವದ ಅಂಗವಾಗಿ  ಮಾರ್ಚ್ 5, 2021ನೇ ಶುಕ್ರವಾರದಂದು ಪ್ರಸಿದ್ಧ ಯಕ್ಷಗಾನ ಕಲಾವಿದ, ಬಡಗುತಿಟ್ಟಿನ ಹಿರಿಯ ಬಣ್ಣದ ವೇಷದಾರಿ ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರಿಗೆ  ಕಂಡ್ಲೂರಿನಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.   

ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ಅಮೃತಾಭಿವಂದನಂ – ಸನ್ಮಾನ, ಗೌರವಕ್ಕಿಂತ ಪ್ರೀತಿ ದೊಡ್ಡದು: ಪ್ರೊ. ಅಮೃತ ಸೋಮೇಶ್ವರ

‘ಸ್ಥಾನ-ಮಾನಕ್ಕಿಂತ ಮಿಗಿಲಾಗಿ ತತ್ವ-ಸಿದ್ಧಾಂತಗಳಿಗಾಗಿ ಬದುಕುವುದು ನಮ್ಮ ಧ್ಯೇಯವಾಗಬೇಕು. ಅಂಥವರಿಗೆ ಸಮಾಜದ ಅಭಿಮಾನವೇ ಶ್ರೀರಕ್ಷೆ. ನಾವು ಮಾಡಿದ ಸಾಧನೆಗೆ ಸನ್ಮಾನ ಅಥವಾ ಗೌರವ ಲಭಿಸುವುದು ಸರ್ವೇಸಾಮಾನ್ಯ. ಆದರೆ ಅದಕ್ಕಿಂತ ಜನರು ತೋರುವ ಪ್ರೀತಿಯೇ ದೊಡ್ಡದು’ ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಹೇಳಿದ್ದಾರೆ.         

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ – ವಿರಾಂಟ್ ವತಿಯಿಂದ ಉಳ್ಳಾಲ ಸೋಮೇಶ್ವರದ ಸ್ವಗ್ರಹ ‘ಒಲುಮೆ’ ಯಲ್ಲಿ ಏರ್ಪಡಿಸಲಾದ ‘ಅಮೃತಾಭಿವಂದನಂ’ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಪ್ರತಿಯಾಗಿ ಅವರು ಮಾತನಾಡಿದರು.         

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿ ‘ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ ದುಡಿಯುವ ನೂರಾರು ಎಳೆಯರಿಗೆ ಅಮೃತರು ಓರ್ವ ಮಾರ್ಗದರ್ಶಕ ವಿದ್ವಾಂಸರು. ಎಂಬತ್ತಾರರ ಹರೆಯದಲ್ಲೂ ಜೀವನ ಪ್ರೀತಿಯೊಂದಿಗೆ ಸದಾ ಬರವಣಿಗೆಯಲ್ಲಿ ತೊಡಗಿರುವ ಅವರು ಬೆಳೆಯುವ ಕವಿ – ಸಾಹಿತಿಗಳಿಗೆ ಆದರ್ಶಪ್ರಾಯರು. ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿಯ ಪ್ರಧಾನ ಸಲಹೆಗಾರರಾಗಿ ಅವರ ಸೇವೆ ಸ್ಮರಣೀಯ’ ಎಂದು ನುಡಿದರು.         

ಕಾರ್ಯಕ್ರಮದಲ್ಲಿ ಡಾ.ಅಮೃತ ಸೋಮೇಶ್ವರ ಮತ್ತು ನರ್ಮದಾ ಸೋಮೇಶ್ವರ ದಂಪತಿಯನ್ನು ಮೈಸೂರು ಪೇಟ, ಶಾಲು, ಸ್ಮರಣಿಕೆ ಮತ್ತು ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್  ಸ್ವಾಗತಿಸಿದರು.

ವಿರಾಂಟ್ ಕೋಶಾಧಿಕಾರಿ ಪಿ.ಡಿ.ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿಜಯ ಲಕ್ಷ್ಮೀ ಕಟೀಲು ಮತ್ತು ಸುಮಾ ಪ್ರಸಾದ್ ಸಹಕರಿಸಿದರು. ಜೀವನ್ ಸೋಮೇಶ್ವರ ಮತ್ತು ಸತ್ಯಾ ಜೀವನ್ ಉಪಸ್ಥಿತರಿದ್ದರು.