ಯಕ್ಷಗಾನವು ಈಗೀಗ ವಿಭಿನ್ನ ಪ್ರಯೋಗಗಳನ್ನು ಕಾಣುತ್ತದೆ. ಪ್ರಯೋಗಗಳು ತಪ್ಪಲ್ಲ. ಆದರೆ ಹೊಸತೊಂದು ಯೋಚನೆಯನ್ನು ರಂಗದಲ್ಲಿ ಪ್ರಯೋಗಿಸುವ ಮುನ್ನ ಅದು ಯಕ್ಷಗಾನಕ್ಕೆ ಹೊಂದುತ್ತದೆಯೇ ಎಂದು ಯೋಚಿಸಿ ನಿರ್ಧರಿಸುವುದು ಮುಖ್ಯವಾಗುತ್ತದೆ. ಅದಿಲ್ಲದಿದ್ದರೆ ಆ ಪ್ರಯೋಗವೂ ಒಂದೆರಡು ಪ್ರಯತ್ನಗಳಲ್ಲಿ ಮುಗ್ಗರಿಸಿ ಕೇವಲ ಪ್ರಯೋಗವಾಗಿಯೇ ಉಳಿದುಬಿಡುತ್ತದೆ. ಈ ವಿಷಯವನ್ನು ನಾನು ಬಹಳಷ್ಟು ಬಾರಿ ಯೋಚಿಸುತ್ತಿರುತ್ತೇನೆ.
ಭಾಗವತನು ರಂಗನಿರ್ದೇಶನಕಾರನೂ ಆಗಿರುವುದರಿಂದ ಪ್ರದರ್ಶನಗಳಲ್ಲಿ ಹೊಣೆಗಾರಿಕೆಯೂ ಹೆಚ್ಚಿರುತ್ತದೆ. ಅಷ್ಟೇ ಒತ್ತಡವೂ ಇರುತ್ತದೆ. ಇದನ್ನೆಲ್ಲಾ ನಿಭಾಯಿಸಿಕೊಂಡು ಹೋಗುವುದು ಈಗೀಗ ಅಭ್ಯಾಸವಾಗಿಬಿಟ್ಟಿದೆ. ಒತ್ತಡಗಳ ಜೊತೆಗೆ ಬದುಕುವುದೂ ಒಂದು ಕಲೆ. ನಮ್ಮಂತಹಾ ಕಲಾವಿದರಿಗೆ ನಿದ್ರೆಗೆಡುವುದರ ಜೊತೆಯಲ್ಲಿ ಕೆಲವೊಮ್ಮೆ ಇದೂ ಒಂದು ಪರೀಕ್ಷೆಯಾಗಿ ಪರಿಣಮಿಸುತ್ತದೆ.
ನಮ್ಮಂತಹ ಕಲಾವಿದರಿಗೆ ಇದು ಬಲು ಕಷ್ಟ. ಪ್ರದರ್ಶನಗಳನ್ನೂ ಗೆಲ್ಲಿಸಬೇಕು. ಬಾಕ್ಸ್ ಆಫಿಸ್ ದೃಷ್ಟಿಯಿಂದ ಜನಪ್ರಿಯತೆ ಹೆಚ್ಚಿ ಆಟಗಳ ಸಂಖ್ಯೆಯೂ ಹೆಚ್ಚಾಗಬೇಕು. ಅದು ಮೇಳದ ಯಜಮಾನರ ನಿರೀಕ್ಷೆ. ಕೆಲವೊಮ್ಮೆ ಸಂಪ್ರದಾಯವನ್ನು ಮುರಿದು ನಮ್ಮ ಮನಸ್ಸಾಕ್ಷಿಗೆ ವಿರುದ್ಧವಾಗಿ ಪದ್ಯ ಹೇಳಬೇಕು. ಅದು ಕಲಾವಿದರ ಅಪೇಕ್ಷೆ.
ಪದ್ಯದ ಭಾವ, ರಾಗ, ತಾಳ ಮತ್ತು ಮಟ್ಟು ಮುಖ್ಯವಲ್ಲ. ಕಲಾವಿದರಿಗೆ, ವೇಷಧಾರಿಗೆ ಕುಣಿತಕ್ಕೆ ಅನುಕೂಲವಾಗುವಂತೆ ಪದ್ಯ ಹೇಳಬೇಕು. ಇಲ್ಲದಿದ್ದರೆ ಆ ಭಾಗವತರಿಗೆ ಏನೂ ಗೊತ್ತಿಲ್ಲ ಎಂಬ ಹೇಳಿಕೆಗಳು ಹರಿದಾಡಿ ಅದು ಮೇಳದ ಯಜಮಾನರ ಕಿವಿಗೂ ತಲುಪಿ ಮುಂದಿನ ತಿರುಗಾಟದಲ್ಲಿ ಭಾಗವತನ ಸ್ಥಾನವನ್ನು ಇನ್ನೊಬ್ಬ ಅಲಂಕರಿಸಿರುತ್ತಾನೆ. ಹಾಗೆ ಬಂದ ಹೊಸ ಭಾಗವತನಿಗೆ ಎಲ್ಲರಿಗೂ ಬೇಕಾದಂತೆ ಪದ್ಯ ಹೇಳುವ ಕಲೆ ಸಿದ್ಧಿಸಿರುತ್ತದೆ.
ವೇಷಧಾರಿಗೆ ಬೇಕಾದಂತೆ ಪದ್ಯ ಹೇಳದವನು ಈ ಕಾಲದಲ್ಲಿ ಯಶಸ್ವಿ ಭಾಗವತನಾಗಲಾರ. ಆದುದರಿಂದ ಕೆಲವೊಮ್ಮೆ ಮನಸ್ಸಿಗೆ ಕಿರಿಕಿರಿಯಾದರೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಜಾಣ್ಮೆಯನ್ನು ನಾನೂ ಅನುಸರಿಸಿದ್ದು ಹೌದು. ಹೊಟ್ಟೆ ಕೇಳಬೇಕಲ್ಲ. ನನಗೆ ಈ ಭಾಗವತಿಕೆಯನ್ನು ಬಿಟ್ಟು ಬೇರೆ ಏನೂ ಕೆಲಸ ಗೊತ್ತಿಲ್ಲ. ನನ್ನ ಸಂಸಾರದ ಹೊಟ್ಟೆ ಇದರಲ್ಲೇ ತುಂಬಬೇಕು. ಹೊಟ್ಟೆಗೆ ಕಲ್ಲು ಬೀಳುವ ಪ್ರಸಂಗ ಬಾರದಂತೆ ಒಮ್ಮೊಮ್ಮೆ ಜಾಗ್ರತೆ ವಹಿಸಬೇಕಾಗುತ್ತದೆ.
ನನ್ನ ಆತ್ಮಶಕ್ಷಿಗೆ ವಿರುದ್ಧವಾದ ರೀತಿಯಲ್ಲಿ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಲ್ಲಿ ಒಮ್ಮೊಮ್ಮೆ ನಾನೂ ಸಿಲುಕಿದ್ದೇನೆ. ಇಲ್ಲವೆಂದು ವೃಥಾ ಸುಳ್ಳು ಹೇಳಲಾರೆ. ಆದರದು ಅನಿವಾರ್ಯವಾಗಿತ್ತು. ನನಗೆ ಮಾತ್ರವಲ್ಲ. ಹಿಮ್ಮೇಳದ ಎಲ್ಲಾ ಕಲಾವಿದರೂ ಕೆಲವೊಮ್ಮೆ ತಮ್ಮತನವನ್ನು ಬಿಡಬೇಕಾಗುತ್ತದೆ.
ಇನ್ನು ಕಲಾವಿದರು, ವೇಷಧಾರಿಗಳು ಕೂಡಾ ಹಾಗೆಯೇ ಪೂರ್ಣ ಸ್ವತಂತ್ರರಲ್ಲ. ಅವರಿಗೂ ಹಾಗೆ ಅಭಿನಯಿಸಬೇಕು, ಈ ರೀತಿಯ ಚಪ್ಪಾಳೆ ಬೀಳುವ ಸಂಭಾಷಣೆಗಳನ್ನು ಹೇಳಬೇಕೆಂಬ ಒತ್ತಡವಿರುತ್ತದೆ. ಎಲ್ಲರೂ ಅಷ್ಟೇ. ನಮ್ಮ ಕಲಾವಿದರ ಜೀವನವೇ ಹಾಗೆ. ಜನ ಮೆಚ್ಚಬೇಕು. ನಮ್ಮ ಮೇಳ ಜನಪ್ರಿಯ ಆಗದಿದ್ದರೆ ಆ ಸ್ಥಾನಕ್ಕೆ ಇನ್ನೊಂದು ಮೇಳ ಬರುತ್ತದೆ.
ಆದುದರಿಂದ ನಾವೆಲ್ಲಾ ಆ ಸೂತ್ರಧಾರ ಆಡಿಸುವ ಬೊಂಬೆಗಳು. ಕಲಾವಿದರಿಗೂ ಜೀವನವಿರುತ್ತದೆ. ಕಲಾವಿದರಿಗೂ ಸಂಸಾರ, ಕಷ್ಟಸುಖಗಳಿರುತ್ತವೆ. ನಮಗೂ ಎಲ್ಲರಂತೆಯೇ ಮೃದು ಮನಸೂ ಇರುತ್ತದೆ. ಎಲ್ಲ ರಂಗಗಳಲ್ಲಿರುವಂತೆ ಇಲ್ಲಿಯೂ ಸ್ಪರ್ಧೆ ಇದೆ. ಮೇಳಗಳ ನಡುವೆ ಸ್ಪರ್ಧೆ, ಭಾಗವತರ ನಡುವೆ ಸ್ಪರ್ಧೆ, ಹಿಮ್ಮೇಳ ವಾದಕರ ನಡುವೆ ಸ್ಪರ್ಧೆ, ವೇಷಧಾರಿಗಳ ನಡುವೆ ಸ್ಪರ್ಧೆ ರಂಗಸ್ಥಳದಲ್ಲಿ ನಡೆಯುತ್ತಲೇ ಇರುತ್ತದೆ. ಅದು ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಜ . ಅದಕ್ಕೆ ಕಲಾಕ್ಷೇತ್ರವೂ ಹೊರತಲ್ಲ. (ಮುಂದಿನ ಸಂಚಿಕೆಯಲ್ಲಿ ಮುಂದುವರಿಯುವುದು)
(ಈ ಕಥಾವಸ್ತು ಕೇವಲ ಕಾಲ್ಪನಿಕ. ಯಾರಿಗಾದರೂ, ಯಾವುದಕ್ಕಾದರೂ ಹೋಲಿಕೆಗಳು ಕಂಡುಬಂದಲ್ಲಿ ಅದು ಕಾಕತಾಳೀಯ ಮಾತ್ರ)
ಕಲೆಯ ಸೆಳೆತ ಮತ್ತು ರಂಗಪ್ರದರ್ಶನದ ಉತ್ಸಾಹ ಅದಮ್ಯವಾದದ್ದು. ಅದೇನೋ ಚುಂಬಕಶಕ್ತಿ ಅದರೊಳಗೆ ಅಡಗಿದೆ. ಯಾವುದಾದರೂ ಕಲಾಪ್ರದರ್ಶನವನ್ನೋ ಅಥವಾ ಭಾರತೀಯ ಸಂಗೀತದ ವಿವಿಧ ಪ್ರಾಕಾರಗಳನ್ನೋ ಗಮನಿಸಿದಾಗ ಅಥವಾ ಅದನ್ನು ಕೂಲಂಕುಷವಾಗಿ ಅಭ್ಯಸಿಸಲು ತೊಡಗಿದಾಗ ಹಲವಾರು ಸೋಜಿಗಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ.
ಯಾವುದೇ ಒಂದು ರಂಗಕಲೆಯು ಅದರ ಉಗಮಸ್ಥಾನದಲ್ಲಿ ಪರಿಪೂರ್ಣತೆಯನ್ನು ಪಡೆದಿರುವುದಿಲ್ಲ. ನದಿಯ ಉಗಮಸ್ಥಾನದಲ್ಲಿ ಅದು ಹೇಗೆ ಕೇವಲ ಸಣ್ಣ ನೀರಿನ ಒರತೆಯಾಗಿರುತ್ತದೆಯೋ ಹಾಗೆ. ಆಮೇಲೆ ಒರತೆಗಳು, ಝರಿಗಳು ಕವಲುಗಳು ಬಂದು ಸೇರುತ್ತಾ ಮುಂದಕ್ಕೆ ಪರಿಪೂರ್ಣ ನದಿಯಾಗಿ ಮೈದುಂಬಿ ಹರಿಯುತ್ತದೆ.
ಕಲೆಯೊಂದು ಉಗಮವಾದಾಗ ಅಥವಾ ರೂಪುಗೊಂಡಾಗ ಇದ್ದ ಸ್ಥಿತಿಯಲ್ಲಿಯೇ ಸದಾಕಾಲ ಇರಬೇಕೆಂದು ಬಯಸುವುದು ಮೂರ್ಖತನ. ಮಾನವರು ಕೂಡಾ ಅನಾಗರಿಕ ಪ್ರಪಂಚದಿಂದ ನಾಗರಿಕತನದ ಸುಂದರ ಜಗತ್ತಿನಲ್ಲಿ ಜೀವಿಸುತ್ತಿಲ್ಲವೇ? ಕಲೆಯೊಂದು ಬೆಳವಣಿಗೆಯಾಗುವ ಹಂತದಲ್ಲಿ ಅದರ ಬೆಳವಣಿಗೆಗೆ ಸಹಕಾರಿಯಾಗಿ ಸೇವೆ ಸಲ್ಲಿಸಿದ ಹಲವಾರು ಕೈಗಳಿರುತ್ತವೆ.
ಒಂದೇ ಕುಟುಂಬದ ಹಲವಾರು ಮಂದಿ ಕಲಾವಿದರಾಗಿ ಪ್ರದರ್ಶನಗಳನ್ನು ನೀಡಿ ಪ್ರಸಿದ್ಧರಾದುದನ್ನು ಕಾಣಬಹುದು. ಹಾಗೆಯೇ ಕಲಾಭ್ಯಾಸ ಎಂಬುದು ಅಪ್ಪನಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ಮುಂದುವರಿದ ಸಾಕಷ್ಟು ಉದಾಹರಣೆಗಳಿವೆ. ಕುಟುಂಬದ ಎಲ್ಲ ಸದಸ್ಯರು ಕಲಾವಿದರಾಗಿ ಕಲೆಯಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡ ನಿದರ್ಶನಗಳೂ ಹೇರಳವಾಗಿವೆ.
ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ಕಥಕ್ಕಳಿ, ಕೂಚುಪುಡಿ, ಒಡಿಸ್ಸಿ, ಕಥಕ್, ಮಣಿಪುರಿ, ಪಕ್ಕವಾದ್ಯಗಳಾದ ತಬಲಾ, ಮೃದಂಗ, ವಯೊಲಿನ್, ಘಟಂ, ಹಾಡುಗಾರಿಕೆ ಮೊದಲಾದ ರಂಗಕ್ರಿಯೆಗಳಲ್ಲಿ ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರು ತಾದಾತ್ಮ್ಯತೆಯಿಂದ ತೊಡಗಿಸಿಕೊಂಡ ನಿದರ್ಶನಗಳು ಹೇರಳವಾಗಿ ಕಾಣಸಿಗತ್ತವೆ.
ಆದರೆ ಸದ್ಯಕ್ಕೆ ಉಳಿದೆಲ್ಲಾ ಕಲೆಗಳನ್ನು ಬದಿಗಿರಿಸಿ ಯಕ್ಷಗಾನದತ್ತ ಬರೋಣ. ಯಕ್ಷಗಾನ ಎಂದ ಕೂಡಲೇ ತಿಟ್ಟುಗಳ ವಿಭಾಗಿಸುವಿಕೆ ಎಂಬುದು ಸಹಜವಾಗಿ ಕೇಳಿಬರುವ ಧ್ವನಿ. ಉಭಯ ತಿಟ್ಟುಗಳಲ್ಲಿಯೂ ಅಥವಾ ವಿಮರ್ಶಕರು ಗುರುತಿಸುವ ಮತ್ತೆರಡು ತಿಟ್ಟುಗಳನ್ನೂ ಸೇರಿಸಿ ಹೇಳುವುದಿದ್ದರೂ ನಮಗೆ ಯಕ್ಷಗಾನ ಕಲಾವಿದರ ಕೆಲವೊಂದು ವಂಶಗಳು ಕಾಣಸಿಗುತ್ತವೆ. ಅಂತಹಾ ಒಂದಕ್ಕಿಂತ ಹೆಚ್ಚು ಕಲಾವಿದರು ಇರುವ ಮನೆತನವನ್ನು ಗುರುತಿಸುವ ಅಥವಾ ಹೆಸರಿಸುವ ಒಂದು ಸಣ್ಣ ಪ್ರಯತ್ನ ಇದು. ಹೆಚ್ಚಿನ ವಿವರಣೆಗಳಿಲ್ಲದೆ ಕೇವಲ ಉಲ್ಲೇಖ ಮಾತ್ರ ಇಲ್ಲಿರುತ್ತದೆ.
ಎಲ್ಲಿಂದ ಆರಂಭಿಸುವುದು? ಇವರನ್ನು ಹೇಳಿದರೆ ಇವರಿಗಿಂತಲೂ ಮೊದಲು ಅವರು ಇರಲಿಲ್ಲವೇ ಎಂಬ ಪ್ರಶ್ನೆಗಳನ್ನು ಆಚೆಗಿಟ್ಟು ನೋಡಿದಾಗ ಸಹಜವಾಗಿಯೇ ಕೆರೆಮನೆ ಕುಟುಂಬದ ಹೆಸರನ್ನು ಉಲ್ಲೇಖಿಸಲೇ ಬೇಕು. ಕೆರೆಮನೆ ಶಿವರಾಮ ಹೆಗಡೆಯವರು ಸ್ವಾತಂತ್ರ್ಯಪೂರ್ವದಲ್ಲಿಯೇ ಯಕ್ಷಗಾನದಲ್ಲಿ ಸಾಕಷ್ಟು ವ್ಯವಸಾಯವನ್ನು ಮಾಡಿದವರು.
ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಅಕಾಲ ಮೃತ್ಯುವಶರಾಗಿದ್ದ ಕೆರೆಮನೆ ಗಜಾನನ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಶಿವರಾಮ ಹೆಗಡೆ ಕೆರೆಮನೆ ಮತ್ತು ಕೆರೆಮನೆ ಶ್ರೀಧರ ಹೆಗಡೆ ಹೀಗೆ ಕಲಾವಿದರ ಪಟ್ಟಿಯೇ ಕೆರೆಮನೆ ಕುಟುಂಬದಲ್ಲಿದೆ. ಅದೂ ಅಲ್ಲದೆ ಕೆರೆಮನೆ ಕುಟುಂಬಕ್ಕೆ ಸಂಬಂಧಿಸಿ ಗುಣವಂತೆಯ ‘ಶ್ರೀಮಯ ಕಲಾಕೇಂದ್ರ ಕೆರೆಮನೆ’, ಇಡಗುಂಜಿ ಮೇಳ ಎಂದು ಪ್ರಸಿದ್ಧವಾಗಿದ್ದ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ’, ಮೊದಲಾದುವುಗೆಲ್ಲಾ ಕೆರೆಮನೆ ಕುಟುಂಬದ ಕೊಡುಗೆಗಳು. (ಮುಂದುವರಿಯುವುದು)
ಜಮೈಕಾಕ್ಕೆ ಭಾರತವು COVID-19 ಲಸಿಕೆ ಉಡುಗೊರೆ ನೀಡಿದೆ. ಈ ಸಂಬಂಧ ಮೋದಿಗೆ ವೆಸ್ಟ್ ಇಂಡೀಸಿನ ಖ್ಯಾತ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ
ಇಂಡೀಸ್ ಕ್ರಿಕೆಟಿಗ ಮತ್ತು ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಅವರು ಜಮೈಕಾಗೆ COVID-19 ಲಸಿಕೆಗಳನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಕ್ರವಾರ ಕೃತಜ್ಞತೆ ಸಲ್ಲಿಸಿದರು. ಮಾರ್ಚ್ 11 ರಂದು ಕೆರಿಬಿಯನ್ ಪ್ರದೇಶಕ್ಕೆ ಭಾರತದಿಂದ 20,000 ಡೋಸ್ ಕರೋನವೈರಸ್ ಲಸಿಕೆಗಳು ತಲುಪಿತು,
ಜಮೈಕಾದ ಭಾರತ ಹೈಕಮಿಷನ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕ್ರಿಸ್ ಗೇಲ್ ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರಕ್ಕೆ ಕೆರಿಬಿಯನ್ ಪ್ರದೇಶಕ್ಕೆ ಲಸಿಕೆಗಳ ಮೂಲಕ ಸಹಾಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಹಿಂದೆ, ಸರ್ ವಿವಿಯನ್ ರಿಚರ್ಡ್ಸ್ ಸೇರಿದಂತೆ ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಲಸಿಕೆಗಳನ್ನು ನೀಡುವ ಮೆಗಾ ಉಪಕ್ರಮದ ಮೂಲಕ ಕೆರಿಬಿಯನ್ ಪ್ರದೇಶಕ್ಕೆ ಸಹಾಯ ಮಾಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಸರ್ ರಿಚರ್ಡ್ಸ್ ಆಂಟಿಗುವಾ ಮತ್ತು ಬಾರ್ಬುಡಾದ ಜನರ ಪರವಾಗಿ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳ ಅದ್ಭುತ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು.
ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಇನ್ನೇನು ಕೆಲವೇ ದಿನಗಳು ಉಳಿದಿವೆ. 1987 ರ ಜನಪ್ರಿಯ ದೂರದರ್ಶನ ಕಾರ್ಯಕ್ರಮ ರಾಮಾಯಣದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದ ನಟ ಅರುಣ್ ಗೋವಿಲ್ ಅವರು ಬಿಜೆಪಿಗೆ ಸೇರಿದ್ದಾರೆ.
ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ, ಆದರೆ ಪಕ್ಷದ ಪರವಾಗಿ ಪ್ರಚಾರ ಮಾಡಲಿದ್ದಾರೆ. ಮಾರ್ಚ್ 27 ರಿಂದ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಬಲಪಂಥೀಯ ಮತದಾರರನ್ನು ಸೆಳೆಯುವ ಗುರಿಯನ್ನು ಹೊಂದಿದ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ.
ರಾಮಾಯಣದ ಹೊರತಾಗಿ, 63 ವರ್ಷದ ಶ್ರೀ ಗೋವಿಲ್ ಹಲವಾರು ಹಿಂದಿ, ಭೋಜ್ಪುರಿ, ಒಡಿಯಾ ಮತ್ತು ತೆಲುಗು ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪೋಷಕ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ. ಆದರೂ, ಅವರು ಹೆಚ್ಚಾಗಿ ಪೌರಾಣಿಕ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ವಿಶೇಷವೆಂದರೆ, 1980 ರ ದಶಕದಲ್ಲಿ ಅವರ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ, ಶ್ರೀ ಗೋವಿಲ್ ಅವರು ಕಾಂಗ್ರೆಸ್ ಅನ್ನು ಬೆಂಬಲಿಸಿದರು. ರಾವಣ (ಅರವಿಂದ ತ್ರಿವೇದಿ) ಮತ್ತು ಸೀತಾ (ದೀಪಿಕಾ ಚಿಖಲಿಯಾ) ಪಾತ್ರದಲ್ಲಿ ನಟಿಸಿದ ಅದೇ ಸರಣಿಯ ನಟರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇಬ್ಬರೂ ಸಂಸದರಾಗಿದ್ದರು.
ಪುರುಲಿಯಾದಲ್ಲಿ ನಡೆದ ಸಾರ್ವಜನಿಕ ರಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಟ್ಲಾ ಹೌಸ್ ಎನ್ಕೌಂಟರ್ನಲ್ಲಿ ಭಯೋತ್ಪಾದಕರ ಕಡೆಗೆ ಬೆಂಬಲ ನೀಡಿದ್ದಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಚುನಾವಣಾ ರಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾತನಾಡಿದರು.
ತಮ್ಮ ರಾಲಿಯಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮಯವು ಮುಗಿಯುತ್ತಿದೆ ಎಂದು ತಿಳಿದಿದೆ ಮತ್ತು ಪ್ರತಿಯೊಬ್ಬರೂ ಅವರ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದ ಪ್ರಧಾನಿ ಮೋದಿ, ಪುಲ್ವಾಮಾ ಭಯೋತ್ಪಾದಕ ದಾಳಿಯ ಸಮಯದಲ್ಲಿ, ಟಿಎಂಸಿ ಮುಖ್ಯಸ್ಥರು ಭಯೋತ್ಪಾದಕರ ಪರವಾಗಿ ಮಾತನಾಡಿದ್ದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಬಟ್ಲಾ ಹೌಸ್ ಎನ್ಕೌಂಟರ್ನಲ್ಲಿ ಆರಿಫ್ ಖಾನ್ ಅವರಿಗೆ ನೀಡಲಾದ ಅಪರಾಧ ಮತ್ತು ಮರಣದಂಡನೆ ಶಿಕ್ಷೆಯನ್ನು ಪ್ರಸ್ತಾಪಿಸಿದ ಪಿಎಂ ಮೋದಿ, “ಈ ನಿರ್ಧಾರವು ಹಲವಾರು ಹೊಸ ಪ್ರಶ್ನೆಗಳಿಗೆ ಬೆಳಕನ್ನು ತಂದಿದೆ. ಬಟ್ಲಾ ಹೌಸ್ ಎನ್ಕೌಂಟರ್ ಸಮಯದಲ್ಲಿ ಇನ್ಸ್ಪೆಕ್ಟರ್ ಮೋಹನ್ ಚಂದ್ರ ಶರ್ಮಾ ಅವರನ್ನು ಗುಂಡು ಹಾರಿಸಿದಾಗ, ಭಯೋತ್ಪಾದಕರೊಂದಿಗೆ ಎನ್ಕೌಂಟರ್ ಅನ್ನು ಪ್ರಶ್ನಿಸುವವರಲ್ಲಿ ದೀದಿ ಕೂಡಾ ಸೇರಿದ್ದರು” ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಅವರ ‘ಖೇಲಾ ಹೋಬ್’ ಘೋಷಣೆಯನ್ನು ಪ್ರಶ್ನಿಸಿದ ಪಿಎಂ ಮೋದಿ ಅವರು ಪಶ್ಚಿಮ ಬಂಗಾಳದ ಮತದಾನದ ರಾಜ್ಯದಲ್ಲಿ ಉದ್ಯೋಗ, ಅಭಿವೃದ್ಧಿ ಮತ್ತು ಶಿಕ್ಷಣದ ಭರವಸೆ ನೀಡಿದರು. “ದೀದಿ ಬೋಲೆ ಖೇಲಾ ಹೋಬ್, ಬಿಜೆಪಿ ಬೋಲೆ ಚಕ್ರಿ (ಉದ್ಯೋಗ) ಹೋಬ್. ದೀದಿ ಬೋಲೆ ಖೇಲಾ ಹೋಬ್, ಬಿಜೆಪಿ ಬೋಲೆ ವಿಕಾಸ್ ಹೋಬ್. ದೀದಿ ಬೋಲೆ ಖೇಲಾ ಹೋಬ್, ಬಿಜೆಪಿ ಬೋಲೆ ಶಿಕ್ಷಾ ಹೋಬ್. ಖೇಲಾ ಶೆಶ್ ಹೋಬ್, ವಿಕಾಸ್ ಆರಾಂಬ್ ಹೋಬ್” ಎಂದು ಅವರು ಹೇಳಿದರು.
#LIVE | "Didi Bole 'Khela Hobe'… BJP bole…": PM Modi unleashes volley about party's development vision in play of words against Trinamool's election slogan, at rally in West Bengal's Purulia https://t.co/jghcajZuXfpic.twitter.com/0Xr04yrh71
ಶ್ರೀ ಅಳಿಕೆ ರಾಮಯ್ಯ ರೈಗಳು 1915ನೇ ಇಸವಿ ಮಾರ್ಚ್ 17ರಂದು ಅಳಿಕೆ ಮೋನಪ್ಪ ರೈ ಮತ್ತು ಮಂಜಕ್ಕೆ ದಂಪತಿಗಳ ಹಿರಿಯ ಮಗನಾಗಿ ಈ ಲೋಕದ ಬೆಳಕನ್ನು ಕಂಡರು. ಅಳಿಕೆ ರಾಮಯ್ಯ ರೈಗಳ ಅಜ್ಜ ಅಟ್ಟೆಪ್ಪಿಲ ರಾಮಣ್ಣ ರೈಗಳು ಆ ಕಾಲದ ಉತ್ತಮ ಭಾಗವತರಾಗಿದ್ದರು. ಮೋನಪ್ಪ ರೈಗಳೂ ಯಕ್ಷಗಾನ ಕಲಾವಿದರಾಗಿದ್ದರು. ಚಿಕ್ಕಪ್ಪ ದೂಮಣ್ಣ ರೈಗಳೂ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಹೀಗೆ ಯಕ್ಷಗಾನ ಕಲೆಯು ಅಳಿಕೆ ರಾಮಯ್ಯ ರೈಗಳಿಗೆ ರಕ್ತಗತವಾಗಿ ಹರಿದು ಬಂದಿತ್ತು.
ಮನೆಯೇ ಮೊದಲ ಪಾಠಶಾಲೆಯಾಯಿತು. ಮನೆಯ ಹಿರಿಯರೇ ಗುರುಗಳಾಗಿ ಕಲಿಸಿದರು. ಅಳಿಕೆ ರಾಮಯ್ಯ ರೈಗಳು ಶಾಲೆಯಲ್ಲಿ 4ನೇ ತರಗತಿ ವರೇಗೆ ಓದಿದ್ದರು. 1927ನೇ ಇಸವಿ ಜನವರಿಯಲ್ಲಿ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಮಾಂಬಾಡಿ ನಾರಾಯಣ ಭಾಗವತರಿಂದ ಗೆಜ್ಜೆ ಪಡೆದು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯದಲ್ಲಿ ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗದ ಮರಿವಾನರನಾಗಿ ರಂಗಪ್ರವೇಶ ಮಾಡಿದರು. ಶ್ರೀ ಕೋಟ್ಯಣ್ಣ ಆಳ್ವರ ಇಚ್ಲಂಪಾಡಿ ಮೇಳದಲ್ಲಿ ತಿರುಗಾಟ ಆರಂಭ.
ತಂದೆಯವರೇ ನಾಟ್ಯ, ಮಾತುಗಾರಿಕೆಗೆ ಮೊದಲ ಗುರುಗಳು. ಪುತ್ರನಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಅವರು ಗುರುತಿಸಿದ್ದರು. 1895ರಿಂದ ತೊಡಗಿ 1952ರ ವರೇಗೆ ಇಚ್ಲಂಪಾಡಿ, ಕದ್ರಿ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿ ಹೆಸರನ್ನು ಗಳಿಸಿದ್ದರು. ಮಳೆಗಾಲದಲ್ಲಿ ನಾಟ್ಯ ಮತ್ತು ಮಾತುಗಾರಿಕೆಯನ್ನು ಅಭ್ಯಾಸಿಗಳಿಗೆ ಹೇಳಿಕೊಡುತ್ತಿದ್ದರು. ಶಿಸ್ತಿನ ಸಿಪಾಯಿಯಾಗಿದ್ದ ತಂದೆಯ ಗರಡಿಯಲ್ಲೇ ಅಳಿಕೆ ರಾಮಯ್ಯ ರೈಗಳು ಪಳಗಿದರು. ಅಲ್ಲದೆ ಹಿರಿಯ ಬಲಿಪರು, ಖ್ಯಾತ ಸ್ತ್ರೀವೇಷಧಾರಿ ಐತಪ್ಪ ಶೆಟ್ಟರು, ಅಪ್ಪು ಹಾಸ್ಯಗಾರ, ಕೋಲುಳಿ ಸುಬ್ಬ (ಬಣ್ಣದ ವೇಷಧಾರಿ) ಶ್ರೇಷ್ಠ ಕಲಾವಿದ ಕುಂಬಳೆ ಗುಂಡಣ್ಣ ಮೊದಲಾದವರ ಒಡನಾಟವೂ ಸಿಕ್ಕಿತ್ತು.
ತೀರ್ಥರೂಪರ ಜತೆ ಮುಂದೆ ಕೊಡಿಯಾಲಗುತ್ತು ಶಂಭು ಹೆಗ್ಗಡೆ ಸಂಚಾಲಕತ್ವದ ಕದ್ರಿ ಮೇಳದಲ್ಲಿ ತಿರುಗಾಟ. ಪೂರ್ವರಂಗ ಅಲ್ಲದೆ ಪ್ರಹ್ಲಾದ, ಧ್ರುವ, ಶ್ರೀಕೃಷ್ಣ, ಷಣ್ಮುಖ ಮೊದಲಾದ ವೇಷಗಳನ್ನು ಮಾಡುತ್ತಾ ಬೆಳೆಯತೊಡಗಿದರು. ಅಳಿಕೆ ಮೋನಪ್ಪ ಶೆಟ್ರಿಗೆ ಮಗನು ಯಕ್ಷಗಾನ ಕಲೆಯ ಸರ್ವಾಂಗಗಳನ್ನೂ ಅಭ್ಯಸಿಸಿ ಪರಿಪೂರ್ಣನಾಗಬೇಕೆಂಬ ಬಯಕೆ. ಭಾಗವತಿಕೆ ಕಲಿಯಲು ಮವ್ವಾರು ಕಿಟ್ಟಣ್ಣ ಭಾಗವತರ ಬಳಿಗೆ ಕರೆದೊಯ್ದರು. ಅವರು ಕಟೀಲು ಸಮೀಪದ ಕೈಯ್ಯೂರು ಶ್ಯಾಮರಾಯರೆಂಬವರ ಮನೆಯಲ್ಲಿ ವಾಸ್ತವ್ಯವಿದ್ದು ಹಾಡುಗಾರಿಕೆ, ಚೆಂಡೆಮದ್ದಳೆ ಕಲಿಸಿ ಕೊಡುತ್ತಿದ್ದರು. ರಾಮಯ್ಯ ರೈಗಳು ಅಲ್ಲೇ ಉಳಿದು ಹಿಮ್ಮೇಳ ಅಭ್ಯಸಿಸಿದರು.
ಕಲಾಪ್ರೇಮಿಗಳಾಗಿದ್ದರು ಶ್ಯಾಮರಾಯ ದಂಪತಿಗಳು. ಶ್ಯಾಮರಾಯರ ಪತ್ನಿಯಂತೂ, ತುಂಬು ಸಂಸಾರ, ಮಕ್ಕಳು, ಮರಿಗಳಿಂದ ಕೂಡಿದ ಮನೆಯಲ್ಲಿ ಪ್ರತ್ಯಕ್ಷ ಅನ್ನಪೂರ್ಣೆಯೇ ಆಗಿದ್ದರು. ಅಳಿಕೆ ರಾಮಯ್ಯ ರೈಗಳು ಮನೆಯ ಮಗನಂತೆಯೇ ಅಲ್ಲಿದ್ದು ಕಲಿತರು. ‘‘ಶ್ಯಾಮರಾಯರ ಪತ್ನಿ ರಾಜಮ್ಮನವರು ಮಗನೆಂದೇ ನನ್ನನ್ನು ಕಂಡರು. ನರಕ ಚತುರ್ದಶಿಯ ದಿನದಂದು ನನ್ನ ಮೈಗೆ ಎಣ್ಣೆ ಪೂಸಿ ಸ್ನಾನ ಮಾಡಿಸಿದರು. ಅನ್ನವಿಕ್ಕಿ ಸಲಹಿದರು. ಮನೆಯ ಸದಸ್ಯರಲ್ಲಿ ನಾನೂ ಒಬ್ಬನಾಗಿ ಹಿಮ್ಮೇಳ ಕಲಿತೆ’’- ಅಳಿಕೆ ರಾಮಯ್ಯ ರೈಗಳು ತನ್ನ ಆತ್ಮಕಥನದಲ್ಲಿ ಈ ಘಟನೆಯನ್ನು ವಿವರವಾಗಿ ಹೇಳಿರುತ್ತಾರೆ.
ಮುಂದಿನ ದಿನಗಳಲ್ಲಿ ಎಲ್ಲರೂ ಮೂಗಿನ ಮೇಲೆ ಬೆರಳಿರಿಸುವ ಘಟನೆಯೊಂದು ನಡೆದಿತ್ತು. ಜೋಕಟ್ಟೆಯಲ್ಲಿ ದ್ರೌಪದಿ ಪ್ರತಾಪ ಆಟ. ಭಾಗವತರ ಅನುಪಸ್ಥಿತಿಯಲ್ಲಿ ಅಳಿಕೆ ರಾಮಯ್ಯ ರೈಗಳು. ಭಾಗವತಿಕೆ ಮಾಡಿ ಪ್ರಸಂಗವನ್ನು ಪ್ರೇಕ್ಷಕರು ಮೆಚ್ಚುವಂತೆ ಮುನ್ನಡೆಸಿದ್ದರು! ಮವ್ವಾರು ಕಿಟ್ಟಣ್ಣ ಭಾಗವತರಿಂದ ಕಲಿತುದು ಸಾರ್ಥಕವಾಗಿತ್ತು. ಕದ್ರಿ ಮೇಳದ ನಂತರ ರಾಮಯ್ಯ ರೈಗಳ ತಿರುಗಾಟ ಕಟೀಲು ಮೇಳದಲ್ಲಿ. ಕಲ್ಲಾಡಿ ಕೊರಗ ಶೆಟ್ರ ಯಜಮಾನಿಕೆಯಲ್ಲಿ. ನಂತರ ಕರ್ನಾಟಕ ಮೇಳದಲ್ಲಂತೂ ಅಳಿಕೆ ರಾಮಯ್ಯ ರೈಗಳು ವಿಜೃಂಭಿಸಿದರು.
ಶ್ರೀ ಅಳಿಕೆ ರಾಮಯ್ಯ ರೈಗಳ ಹೆಚ್ಚಿನ ತಿರುಗಾಟಗಳೂ ಕಲ್ಲಾಡಿ ಕೊರಗ ಶೆಟ್ಟರು ಮತ್ತು ಕಲ್ಲಾಡಿ ವಿಠಲ ಶೆಟ್ಟರ ಯಜಮಾನಿಕೆಯಡಿಯಲ್ಲೇ ನಡೆದಿತ್ತು. ‘‘ಬಣ್ಣಗಾರಿಕೆಯ ಯಕ್ಷಗಾನ ಕ್ಷೇತ್ರದಲ್ಲಿ ಸರ್ವಾಂಗ ಸುಂದರ, ಪರಿಪೂರ್ಣತೆ ಪಡೆದ ವೇಷ’’ ಎಂದು ಕವಿಭೂಷಣ ವೆಂಕಪ್ಪ ಶೆಟ್ಟರು ಅಳಿಕೆ ಮೋನಪ್ಪ ಶೆಟ್ಟರಿಗೆ ಆ ಕಾಲದಲ್ಲಿ ನೀಡಿದ ಮಾತಿನ ಪ್ರಶಸ್ತಿ. ತಂದೆಯ ಜತೆಗೇ ಸಹಕಲಾವಿದನಾಗಿ ತಿರುಗಾಟ. ತೀರ್ಥರೂಪರ ಪುರುಷಪಾತ್ರಗಳಿಗೆ ಅಳಿಕೆ ರಾಮಯ್ಯ ರೈಗಳು ಸ್ತ್ರೀಪಾತ್ರಧಾರಿಯಾಗಿ ಜೀವ ತುಂಬುತ್ತಿದ್ದರು. ನಳ-ದಮಯಂತಿ, ಹರಿಶ್ಚಂದ್ರ-ಚಂದ್ರಮತಿ, ದುಶ್ಯಂತ-ಶಕುಂತಲಾ, ದಶರಥ-ಕೈಕೇಯಿ ಪಾತ್ರಗಳಲ್ಲಿ ತಂದೆ ಮಗನ ಜೋಡಿಯು ರಂಜಿಸಿತ್ತು.
ಕುಮಾರವಿಜಯ ಪ್ರಸಂಗದ ಮಾಯಾ ಅಜಮುಖಿ ಪಾತ್ರವನ್ನು ನೋಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆಯವರು- ‘‘ನಿನಗೆ ಯಕ್ಷಗಾನದಲ್ಲಿ ಉಜ್ವಲ ಭವಿಷ್ಯವಿದೆ. ಮುಂದುವರಿಸು’’- ಎಂದು ಆಶೀರ್ವದಿಸಿದ್ದರು. ಅಳಿಕೆಯವರು ಯಾವ ವೇಷಗಳನ್ನೂ ಮಾಡ ಬಲ್ಲರು. ಮಾತ್ರವಲ್ಲ, ಮಾಡಿ ಮಿಂಚಿದವರು. ಪಾತ್ರದ ಸ್ವಭಾವವನ್ನರಿತು ಕೊರತೆಯಾಗದಂತೆ ಅಭಿನಯಿಸಬಲ್ಲ ಕಲೆ ಇವರಿಗೆ ಸಿದ್ಧಿಯಾಗಿತ್ತು. ಕಲಿಕೆಯ ಆಸಕ್ತಿ ಮತ್ತು ಎಳವೆಯಿಂದಲೇ ಯಕ್ಷಗಾನದ ಆವರಣದೊಳಗೇ ಬೆಳೆದುದು ಇದಕ್ಕೆ ಕಾರಣವಿರಬಹುದು.
ಹಿರಿಯ ಬಲಿಪ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಶ್ರೀ ದಾಮೋದರ ಮಂಡೆಚ್ಚ ಇವರುಗಳ ಭಾಗವತಿಕೆಯಲ್ಲಿ ಅಳಿಕೆಯವರ ವೇಷಗಳು ರಂಜಿಸಿದವು. ಮಂಡೆಚ್ಚರ ಭಾಗವತಿಕೆಯಲ್ಲಿ ಇವರ ಋತುಪರ್ಣ, ಹರಿಶ್ಚಂದ್ರ, ಕರ್ಣ, ಸುಧನ್ವ ಮೊದಲಾದ ಪಾತ್ರಗಳು ಮೆರೆದವು. ಕರ್ನಾಟಕ ಮೇಳದಲ್ಲಿ ಮಂಡೆಚ್ಚರು, ಹರಿದಾಸ ರಾಮದಾಸ ಸಾಮಗರು, ಬೋಳಾರ ನಾರಾಯಣ ಶೆಟ್ಟಿ, ಮಾಧವ ಶೆಟ್ಟಿ, ಮೂಡುಬಿದಿರೆ ಕಿಟ್ಟಣ್ಣ, ಕ್ರಿಶ್ಚನ್ ಬಾಬು, ಮಿಜಾರು ಅಣ್ಣಪ್ಪ, ನಾರಂಪಾಡಿ ಸುಬ್ಬಯ್ಯ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾಯರು, ಮಂಕುಡೆ ಸಂಜೀವ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ ಮೊದಲಾದವರು ಸಹಕಲಾವಿದರಾಗಿದ್ದವರು.
ಕರ್ನಾಟಕ ಮೇಳವು ತಿರುಗಾಟವನ್ನು ನಿಲ್ಲಿಸಿದಾಗ ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ ಮಾಡಿ ಅಳಿಕೆ ರಾಮಯ್ಯ ರೈಗಳು ಸ್ವಯಂ ನಿವೃತ್ತಿಯನ್ನು ಹೊಂದಿದವರು. ಪುಂಡುವೇಷ, ಸ್ತ್ರೀವೇಷ, ಕಿರೀಟ ವೇಷ- ಹೀಗೆ ಎಲ್ಲಾ ವಿಭಾಗಗಳಲ್ಲೂ ಹೊಳೆದು ಕಾಣಿಸಿಕೊಂಡರು. ಎಲ್ಲಾ ಪಾತ್ರಗಳಲ್ಲೂ ಸಲೀಸಾಗಿ ಅಭಿನಯಿಸುತ್ತಿದ್ದ ಕಾರಣವೇ ಯಕ್ಷಗಾನದ ನವರಸ ನಾಯಕನೆಂದು ಪ್ರಸಿದ್ಧರಾದರು. ದುಷ್ಯಂತ, ನಳ, ಅತಿಕಾಯ, ಹಿರಣ್ಯಾಕ್ಷ, ಇಂದ್ರಜಿತು, ಋತುಪರ್ಣ, ಕರ್ಣ, ಹನೂಮಂತ, ಕೌರವ, ರಕ್ತಬೀಜ, ಅರ್ಜುನ, ಕೀಚಕ, ಅಭಿಮನ್ಯು, ಬಭ್ರುವಾಹನ, ಶ್ವೇತಕುಮಾರ, ಚಂದ್ರಮತಿ, ದಮಯಂತಿ, ಶಕುಂತಲೆ, ಅಂಬೆ, ಮಂಡೋದರಿ ಅಲ್ಲದೆ ಇನ್ನೂ ಅನೇಕ ಪಾತ್ರಗಳು ಅಳಕೆಯವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು.
ರಾಜ್ಯಪ್ರಶಸ್ತಿ ಪಡೆದ ಮೊದಲ ತೆಂಕಿನ ಕಲಾವಿದನೆಂಬ ಗೌರವಕ್ಕೂ ಪಾತ್ರರಾದರು. ಅಳಿಕೆಯವರ ಸಾಧನೆಗೆ ಅನೇಕ ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿವೆ. 1926ರಿಂದ ತೊಡಗಿ 1984ರ ವರೇಗೆ ಕಲಾಸೇವೆಯನ್ನು ಮಾಡಿ ಪುರಾಣ ಅಲ್ಲದೆ ಅನೇಕ ತುಳು ಪ್ರಸಂಗಗಳಲ್ಲಿ ಕಾಣಿಸಿಕೊಂಡರು. ಜೋಡಾಟಗಳಲ್ಲಿ ರಂಜಿಸಿದವರು. ಸ್ಪರ್ಧಾತ್ಮಕವಾದ ಜೋಡಾಟಗಳಲ್ಲಿ ಇವರನ್ನು ಸೋಲಿಸಲೆಂದೇ ವ್ಯೂಹವನ್ನು ಬಲಿದರೂ ಅಳಿಕೆ ರಾಮಯ್ಯ ರೈಗಳು ಗೆಲುವಿನ ನಗೆಯನ್ನು ಬೀರಿದ ಸಾಧಕ. ದೊಡ್ಡ ಸಾಮಗರು, ಶೇಣಿ, ರಾಮದಾಸ ಸಾಮಗರೊಂದಿಗೆ ಇವರು ಹಲವಾರು ವೇಷಗಳನ್ನು ಮಾಡಿ ಸೈ ಎನಿಸಿಕೊಂಡರು. ದೊಡ್ಡ ಸಾಮಗರ ಭೀಷ್ಮನಿಗೆ ಅಂಬೆಯಾಗಿ, ಶೇಣಿಯವರ ವೀರಮಣಿಗೆ ಹನೂಮಂತನಾಗಿ ಅವರ ಅಭಿನಯವನ್ನು ಹಿರಿಯರು ಇಂದಿಗೂ ನೆನಪಿಸುತ್ತಾರೆ.
2012ರಲ್ಲಿ ಡಾ. ನಿತ್ಯಾನಂದ ಬಿ. ಶೆಟ್ಟಿಯವರ ಸಂಪಾದಕತ್ವದಲ್ಲಿ ‘ಅಳಿಕೆ’- ಯಕ್ಷಗಾನದ ಮೇರುಕಲಾವಿದ ಅಳಿಕೆ ರಾಮಯ್ಯ ರೈ, ಸ್ಮೃತಿ-ಕೃತಿ ಎಂಬ ಪುಸ್ತಕವು ಹೊರಬಂದಿತ್ತು. ಇದರ ಪ್ರಕಾಶಕರು ‘ದೆಹಲಿ ಮಿತ್ರ’ ಸಂಸ್ಥೆ. ಇವರಲ್ಲಿ ಅಳಿಕೆಯವರ ಆತ್ಮಕಥನವು ಮನೋಜ್ಞವಾಗಿ ಅಕ್ಷರ ರೂಪದಲ್ಲಿದೆ. ಆ ಕಾಲದ ಯಕ್ಷಗಾನದ ಸ್ವರೂಪ, ಬೆಳೆದು ಬಂದ ದಾರಿ, ಯಕ್ಷಗಾನಕ್ಕೆ ಪೂರಕ ಮಾರಕವಾಗಬಲ್ಲ ವಿಚಾರಗಳು, ನಿಜವಾದ ಭಾಗವತನು ಹೇಗಿರಬೇಕು? ಕಲಾವಿದರು ಹೇಗಿರಬೇಕು? ಕಲಿಕಾಸಕ್ತ ಕಲಾವಿದರು ಹೇಗಿರಬೇಕು? ಎಂಬ ಬಗೆಗೆ ಅಳಿಕೆಯವರು ತನ್ನ ಆತ್ಮಕಥನದಲ್ಲಿ ತಿಳಿಸಿದ್ದಾರೆ. ತನ್ನ ಬದುಕನ್ನು ಯಕ್ಷಗಾನಕ್ಕಾಗಿಯೇ ಸವೆಸಿ 1989ರಲ್ಲಿ ಅಳಿಕೆ ರಾಮಯ್ಯ ರೈಗಳು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರು. ಬಹಳಷ್ಟನ್ನು ಯಕ್ಷಗಾನಕ್ಕಾಗಿ ನೀಡಿ ಕಣ್ಮರೆಯಾದ ಅವರಿಗೆ ಕಲಾಭಿಮಾನಿ ಗಳೆಲ್ಲರ ಪರವಾಗಿ ನಮನಗಳು.
ಕೋವಿಡ್ ಲಸಿಕೆಯ 22 ಲಕ್ಷ ಡೋಸೇಜ್ ಬಂಗಾಳದಲ್ಲಿ ಬಳಕೆಯಾಗದೆ ಉಳಿದಿದೆ ಎಂದು ಕೇಂದ್ರ ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿದೆ. ಪಶ್ಚಿಮ ಬಂಗಾಳದ ಇನಾಕ್ಯುಲೇಷನ್ ಡ್ರೈವ್ಗಾಗಿ ಇದುವರೆಗೆ 52.90 ಲಕ್ಷ ಲಸಿಕೆಗಳನ್ನು ಕಳುಹಿಸಲಾಗಿದೆ ಎಂದು ಬಹಿರಂಗಪಡಿಸಿದ ಕೇಂದ್ರ ಇದರಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ರಮಾಣದ ಲಸಿಕೆಗಳನ್ನು ಇನ್ನೂ ಬಳಸದೆ ಇರುವುದನ್ನು ಉಲ್ಲೇಖಿಸಿದೆ.
ಇಷ್ಟೆಲ್ಲಾ ಮಾಡಿಯೂ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿಯವರು ಕರೆದ ಮುಖ್ಯಮಂತ್ರಿಗಳ ಸಭೆಗೆ ಹಾಜರಾಗದೆ ಇರುವ ತನ್ನ ಚಾಳಿಯನ್ನು ಮುಂದುವರಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಕ್ಕೆ ಲಸಿಕೆ ಪ್ರಮಾಣವನ್ನು ಕೇಂದ್ರವು ತಡೆಹಿಡಿದಿದ್ದಾರೆ ಎಂದು ಆರೋಪಿಸಿ COVID-19 ವ್ಯಾಕ್ಸಿನೇಷನ್ ಡ್ರೈವ್ ಅನ್ನು ರಾಜಕೀಯಗೊಳಿಸಲು ಪ್ರಯತ್ನಿಸಿದ ನಂತರ, ಕೇಂದ್ರವು ಪಶ್ಚಿಮ ಬಂಗಾಳದ ಲಸಿಕೆ ಡೇಟಾವನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ಸೂಕ್ತ ತಿರುಗೇಟು ನೀಡಿದೆ.
ಯಾವುದೇ ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಇಲ್ಲ. ಪ್ರತಿದಿನ, ನಾವು ರಾಜ್ಯಗಳಿಗೆ ನೀಡಲಾಗುವ ಲಸಿಕೆಗಳ ಡೇಟಾವನ್ನು ಬಿಡುಗಡೆ ಮಾಡಿದ್ದೇವೆ. ಯಾವುದೇ ರಾಜ್ಯದ ಇಂತಹ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ”ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು COVID-19 ಲಸಿಕೆಗಳನ್ನು ನ್ಯಾಯಯುತವಾಗಿ ನೀಡುವ ಬಗ್ಗೆ ಪ್ರತಿಪಾದಿಸಿದರು, ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ನೀಡುವ ಮೊದಲು ರಾಜ್ಯಗಳು ತಮ್ಮಲ್ಲಿ ಮೊದಲೇ ಇರುವ ಲಸಿಕೆ ದಾಸ್ತಾನುಗಳನ್ನು ಮೊದಲು ಬಳಸಬೇಕೆಂದು ಒತ್ತಾಯಿಸಿದರು. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಾಸ್ತವಿಕವಾಗಿ ನಿರ್ಣಾಯಕ ಸಭೆ ನಡೆಸುವಾಗ, ವ್ಯರ್ಥವಾಗುವುದನ್ನು ತಡೆಯಲು ಲಸಿಕೆಗಳ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಚೀನಾಕ್ಕೆ ಪ್ರಯಾಣಿಸುವ ಭಾರತೀಯರು ಮತ್ತು ವಿದೇಶಿಯರು ‘ಮೇಡ್ ಇನ್ ಚೀನಾ’ ಲಸಿಕೆ ಪಡೆಯಬೇಕು ಎಂದು ಭಾರತದ ಚೀನೀ ರಾಯಭಾರ ಕಚೇರಿ ಹೇಳಿದ ಒಂದು ದಿನದ ನಂತರ, ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಚೀನಾ ಜಾರಿಗೆ ತಂದಿರುವ ಕ್ರಮಗಳ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರಿಗಾಗಿ. ‘ಚೀನಾ ತಮ್ಮ ದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೆ ತಮ್ಮದೇ ದೇಶದ ಲಸಿಕೆಗಳನ್ನು ಕಡ್ಡಾಯಗೊಳಿಸಿರುವುದು ದುರದೃಷ್ಟಕರ’ ಎಂದು ಅವರು ಹೇಳಿದರು. ಕರ್ನಾಟಕ ಆರೋಗ್ಯ ಸಚಿವರು, “ಚೀನಾದ ಲಸಿಕೆಗಳನ್ನು ಪಡೆಯುವವರಿಗೆ ಮಾತ್ರ ಚೀನಾದೊಳಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಚೀನಾ ಹೇಳುತ್ತಿರುವುದು ತುಂಬಾ ದುರದೃಷ್ಟಕರ” ಎಂದು ಹೇಳಿದರು.
ಚೀನಾ ಆದೇಶದ ಕುರಿತು ಹೆಚ್ಚಿನ ವಿವರಗಳನ್ನು ಕೇಳಿದಾಗ, “ಈ ಕುರಿತು ಹೆಚ್ಚಿನ ವಿವರಗಳ ಬಗ್ಗೆ ನನಗೆ ತಿಳಿದಿಲ್ಲ. ವಿದೇಶಾಂಗ ಸಚಿವಾಲಯವು ಇದನ್ನು ಪರಿಶೀಲಿಸುತ್ತದೆ” ಎಂದು ಹೇಳಿದರು.
ಕೋವಿಡ್ -19 ವಿರುದ್ಧ ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಚೀನೀ ಲಸಿಕೆಗಳು ಬಳಕೆಯಲ್ಲಿಲ್ಲ ಎಂದು ಗಮನಿಸಬೇಕು, ಆದರೆ ಭಾರತ ದೇಶವು ಆಗಮಿಸುವ ವಿದೇಶಿ ಪ್ರಜೆಗಳಿಗೆ ಅಂತಹ ಯಾವುದೇ ಆದೇಶಗಳನ್ನು ನೀಡಿಲ್ಲ. ಚೀನಾದ ಲಸಿಕೆ ಹಾಕಿದವರಿಗೆ ಮಾತ್ರ ದೇಶದೊಳಗೆ ಅವಕಾಶ ನೀಡಲಾಗುವುದು ಎಂಬ ಷರತ್ತಿನ ಮೇರೆಗೆ ಭಾರತೀಯ ಪ್ರಯಾಣಿಕರಿಗೆ ವೀಸಾ ಅರ್ಜಿಗಳನ್ನು ಸರಳೀಕರಿಸುವುದಾಗಿ ಚೀನಾ ರಾಯಭಾರ ಕಚೇರಿ ಮಂಗಳವಾರ ಪ್ರಕಟಿಸಿತ್ತು.