ವೈದ್ಯಕೀಯ ನಿರ್ಲಕ್ಷ್ಯದಿಂದ ಭಾವೀ ವಧು ತನ್ನ ಕೈಯನ್ನೇ ಕಳೆದುಕೊಂಡಳು. ಮಾತ್ರವಲ್ಲದೆ ನಿಶ್ಚಯವಾಗಿದ್ದ ಮದುವೆಯೂ ಸ್ಥಗಿತಗೊಂಡಿದೆ. ವೈದ್ಯಕೀಯ ನಿರ್ಲಕ್ಷ್ಯದ ದುರಂತ ಪ್ರಕರಣದಲ್ಲಿ, ನವೆಂಬರ್ ವೇಳೆಗೆ ಮದುವೆಯಾಗಲಿದ್ದ 20 ವರ್ಷದ ಹುಡುಗಿ ತನ್ನ ಕೈಯನ್ನು ಕಳೆದುಕೊಂಡಳು, ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿತು.
ಸಣ್ಣ ಕಿವಿ ಶಸ್ತ್ರಚಿಕಿತ್ಸೆಯ ನಂತರ ನೀಡಿದ ತಪ್ಪಾದ ಚುಚ್ಚುಮದ್ದಿನ ಕಾರಣ 20 ವರ್ಷದ ರೇಖಾ ಅವರ ಕೈಯನ್ನು ಕತ್ತರಿಸಬೇಕಾಯಿತು. ವರನ ಮನೆಯವರು ಮದುವೆಯನ್ನು ರದ್ದುಗೊಳಿಸುವುದರೊಂದಿಗೆ ಪರಿಸ್ಥಿತಿಯು ಮತ್ತಷ್ಟು ಜಟಿಲವಾಗಿದೆ. ಪಾಟ್ನಾ ಮಹಾವೀರ ಆರೋಗ್ಯ ಸಂಸ್ಥಾನ ಪಾಟ್ನಾ ಈ ಆಸ್ಪತ್ರೆಯ ಮಾನ್ಯತೆಯನ್ನು ರದ್ದುಗೊಳಿಸುವಂತೆ ರೇಖಾ ಅವರ ಕುಟುಂಬವು ಐಎಂಎಗೆ ಮನವಿ ಮಾಡಿದೆ.
ವಧುವಿನ ಕಿವಿಯಲ್ಲಿ ಸಮಸ್ಯೆ ಇತ್ತು, ಜುಲೈ 11 ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು, ನಂತರ ನರ್ಸ್ ಇಂಜೆಕ್ಷನ್ ನೀಡಿದರು. “ಆ ಇಂಜೆಕ್ಷನ್ನಿಂದ ರೇಖಾಗೆ ಎಡಗೈಯಲ್ಲಿ ತೊಂದರೆ ಪ್ರಾರಂಭವಾಯಿತು. ಅವಳ ಕೈಯ ಬಣ್ಣವು ಹಸಿರು ಬಣ್ಣಕ್ಕೆ ತಿರುಗಿತು ಮತ್ತು ಅವಳ ಕೈಯನ್ನು ಸರಿಯಾಗಿ ಚಲಿಸಲು ಸಾಧ್ಯವಾಗಲಿಲ್ಲ. ಅವರು ಈ ಬಗ್ಗೆ ಸಿಬ್ಬಂದಿಗೆ ದೂರು ನೀಡಿದರೂ ಅವರು ಕೇಳಲಿಲ್ಲ” ಎಂದು ರೇಖಾ ಅವರ ಸೋದರ ಸಂಬಂಧಿ ರೋಶ್ನಿ ಹೇಳಿದರು.
ರೋಶ್ನಿ, “ಆಸ್ಪತ್ರೆ ರೇಖಾಳನ್ನು ಐಜಿಐಎಂಎಸ್ಗೆ ರೆಫರ್ ಮಾಡಿದರೂ ಆಕೆಗೆ ಅಲ್ಲಿ ಪ್ರವೇಶ ಸಿಗಲಿಲ್ಲ. ಇದಾದ ನಂತರ ಆಕೆಯನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಜೀವ ಉಳಿಸುವ ಕ್ರಮವಾಗಿ ಆಕೆಯ ಕೈಯನ್ನು ಕತ್ತರಿಸಬೇಕೆಂದು ಹೇಳಿದರು. ಅವಳ ಕೈಯನ್ನು ಕತ್ತರಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ.
ನವೆಂಬರ್ನಲ್ಲಿ ಮದುವೆ ನಿಶ್ಚಯವಾಗಿದ್ದ ರೇಖಾ ಹುಡುಗನ ಮನೆಯವರು ಮದುವೆ ಒಪ್ಪಂದವನ್ನು ಮುರಿದ ನಂತರ ರೇಖಾ ಖಿನ್ನತೆಗೆ ಜಾರಿದರು. ಈ ಘಟನೆಗೆ ಮಹಾವೀರ ಆರೋಗ್ಯ ಸಂಸ್ಥಾನವೇ ಹೊಣೆಯಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೇಖಾ ಕುಟುಂಬದವರು ಹೇಳುತ್ತಾರೆ.
ಮಹಾವೀರ ಆರೋಗ್ಯ ಸಂಸ್ಥಾನದ ಹೆಚ್ಚುವರಿ ನಿರ್ದೇಶಕ ಡಾ.ವಿಮಲ್ ವಿಭಾಕರ್ ಮಾತನಾಡಿ, ರೇಖಾ ಅವರ ಅಂಗಾಂಗ ಕಸಿ ಮಾಡಲು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ರೇಖಾ ಅವರ ಕುಟುಂಬ ಸದಸ್ಯರಿಗೂ ತಿಳಿಸಲಾಗಿದೆ. ಮಹಾವೀರ ಆರೋಗ್ಯ ಸಂಸ್ಥಾನವು ರೋಗಿಯ ಕೃತಕ ಅಂಗವನ್ನು ಕಸಿ ಮಾಡಲಿದೆ. ಮತ್ತು ಈ ಘಟನೆಯ ನಂತರ ಕರ್ತವ್ಯದಲ್ಲಿದ್ದ ವೈದ್ಯರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಎಂದು ಹೇಳಿದ್ದಾರೆ.
ವಕೀಲ ರೂಪಮ್ ಪ್ರಕಾರ, ಈ ವಿಷಯವನ್ನು ನ್ಯಾಯಾಲಯದ ಮೆಟ್ಟಿಲೇರಿದ ನಂತರ, ರೇಖಾ ಅವರ ಕುಟುಂಬವು ನ್ಯಾಯಾಲಯದ ಹೊರಗೆ ವಿಷಯವನ್ನು ಇತ್ಯರ್ಥಪಡಿಸುವಂತೆ ಆಸ್ಪತ್ರೆಯ ಆಡಳಿತದಿಂದ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದೆ. ನಾವು ರೇಖಾಗೆ ಸರ್ಕಾರಿ ನೌಕರಿಗಾಗಿ ಒತ್ತಾಯಿಸುತ್ತೇವೆ. ಇದು ವೈದ್ಯಕೀಯ ನಿರ್ಲಕ್ಷ್ಯದ ಘಟನೆ ಎಂದು ಹೇಳಿದ್ದಾರೆ.
“बिहार की बेटी रेखा को इंसाफ़ चाहिए”
कान का इलाज कराने गयी थी,अस्पताल की लापरवाही से हाथ कटवाना पड़ा, शादी भी टूटी। थाना ने FIR भी दर्ज करने से मना कर दिया।
वीडियो शिवहर के 20 साल की रेखा की है। जो कान का इलाज करवाने पटना के महावीर आरोग्य संस्थान गई थी। 1/4 pic.twitter.com/QbjzmIKc5j
ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕರ್ನಾಟಕದ ಶ್ರೀ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಅವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಐಸಿಯು ವಾರ್ಡ್ಗೆ ಕರೆದೊಯ್ಯಲಾಗುತ್ತಿದೆ.
ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿಗೆ ಕರೆತರಲಾಗಿತ್ತು. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
#WATCH | Karnataka: Chief pontiff of Sri Murugha Mutt Shivamurthy Murugha Sharanaru being taken to ICU ward of dist hospital, Chitradurga.
He was brought here after he complained of chest pain. He has been sent to 14-day judicial custody in case of sexual assault of minor girls. pic.twitter.com/zhPVpi1nen
ಬೆಂಗಳೂರಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು.
ಕೊಲ್ಲೂರು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ದೇವಿ ಪಾತ್ರಧಾರಿಯ ಸಂಭಾಷಣೆ ರಂಗಸ್ಥಳದಲ್ಲಿ ನಡೆಯುತ್ತಿತ್ತು. ಆಗ ಯಕ್ಷಾಭಿಮಾನಿಯೂ ಆಗಿದ್ದ ಆಸ್ತಿಕ ಮಹಾಶಯರೊಬ್ಬರು ರಂಗಸ್ಥಳಕ್ಕೆ ದಿಢೀರ್ ಆಗಮಿಸಿದ್ದಾರೆ. ಅವರು ದೇವಿ ಪಾತ್ರಧಾರಿಯ ವೇಷಭೂಷಣದ ಕೈಯ ಭಾಗಕ್ಕೆ ಏನನ್ನೋ ಸಿಕ್ಕಿಸುತ್ತಿರುವಂತೆ ಪ್ರೇಕ್ಷಕರಿಗೆ ಕಂಡಿತು.
ಅವರು ತೆರಳಿದ ನಂತರ ಅದು ರೂಪಾಯಿ ನೋಟು (ಹಣ)ಎಂದು ಗೊತ್ತಾಯಿತು. ಇದು ಬೆಂಗಳೂರು ಪ್ರೇಕ್ಷಕರ ಕಲಾಭಿಮಾನಕ್ಕೆ ಸಾಕ್ಷಿ ಎಂದು ಪ್ರೇಕ್ಷಕರು ಆಡಿಕೊಳ್ಳುತ್ತಿದ್ದರಂತೆ.
ಈ ಬಗ್ಗೆ ಎರಡಭಿಪ್ರಾಯಗಳಿರಬಹುದು. ನಮ್ಮೂರಿನ ಆಟದಲ್ಲಿ ಶ್ರೀ ದೇವಿ ಮಹಾತ್ಮೆ ಪ್ರಸಂಗದ ಆಟದಲ್ಲಿ ದೇವಿ ಪಾತ್ರಧಾರಿಗೆ ನೋಟಿನ ಮಾಲೆಯನ್ನೇ ಹಾಕುತ್ತಿದ್ದರು. ಅದನ್ನು ಆಗ ಎಲ್ಲರೂ ಅನುಮೋದಿಸುತ್ತಿದ್ದರು. ಆದ್ದರಿಂದ ಇದನ್ನು ಕಲೆಯ ಮೇಲಿನ ಪ್ರೀತಿ ಎಂದು ತಿಳಿದುಕೊಳ್ಳಬೇಕೇ ವಿನಃ ಅನಗತ್ಯ ವಿಚಾರ ವಿಮರ್ಶೆಗಳಿಗೆ ಹೋಗಬಾರದು.
3800 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಬರುತಿದ್ದಾರೆ.
ಸೆಪ್ಟೆಂಬರ್ 1 ರಿಂದ 2 ರವರೆಗೆ ದಕ್ಷಿಣ ಭಾರತದ ಕಿರು ಪ್ರವಾಸವನ್ನು ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೆಪ್ಟೆಂಬರ್ 2 ರಂದು 3,800 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲು ಕರ್ನಾಟಕದ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.
ಈ ಸಂಬಂಧ ಮಂಗಳೂರು ಸಾರಿಗೆ ಸಂಚಾರದಲ್ಲಿ ವ್ಯಾಪಕ ಬದಲಾವಣೆಯನ್ನು ಮಾಡಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಇಲಾಖೆ ಹೊರಡಿಸಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಈ ಬಗ್ಗೆ ತಾತ್ಕಾಲಿಕ ಸಂಚಾರ ವ್ಯವಸ್ಥೆಯ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅದರ ವಿವರ ಕೆಳಗೆ ಕೊಡಲಾಗಿದೆ.
ಈ ಜಲಪಾತದ ಹೆಸರೇ “ವಧುವಿನ ಜಲಪಾತ” (Bride Falls) ಪೆರುವಿನ ಈ ಜಲಪಾತವು ಮದುವೆಯ ಡ್ರೆಸ್ ಮತ್ತು ಮುಸುಕು ಧರಿಸಿದ ವಧುವನ್ನು ಹೋಲುತ್ತದೆ.
ಮದುವೆಯ ಡ್ರೆಸ್ ಮತ್ತು ಮುಸುಕು ಧರಿಸಿದ ವಧುವನ್ನು ಹೋಲುವ ಜಲಪಾತದ ಹಳೆಯ ವೀಡಿಯೊ ಮತ್ತೆ ಮರುಕಳಿಸಿದೆ. ಇದನ್ನು ವಧುವಿನ ಜಲಪಾತ ಎಂದು ಕರೆಯಲಾಗುತ್ತದೆ ಮತ್ತು ಇದು ಪೆರುವಿನಲ್ಲಿದೆ.
ಪ್ರಕೃತಿ ಮತ್ತು ಅದರ ಸೌಂದರ್ಯವು ನಮ್ಮನ್ನು ಮಂತ್ರಮುಗ್ಧರನ್ನಾಗಿಸುವ ಹಲವಾರು ಸಂದರ್ಭಗಳಿವೆ. ಪ್ರಕೃತಿಯ ವಿಸ್ಮಯಕ್ಕೆ ಉತ್ತಮ ಉದಾಹರಣೆ ಪೆರುವಿನ ಈ ಜಲಪಾತ. ಇದನ್ನು ವಧುವಿನ ಜಲಪಾತ ಎಂದು ಕರೆಯಲಾಗುತ್ತದೆ ಮತ್ತು ಆ ವಿಶಿಷ್ಟ ಹೆಸರಿನ ಹಿಂದಿನ ಕಾರಣವನ್ನು ತಿಳಿಯಲು ನೀವು ಮುಂದೆ ಓದಬೇಕು.
ವೈರಲ್ ವೀಡಿಯೊವನ್ನು 2019 ರಲ್ಲಿ ಎಡುತುರುಮಾ ಎಂಬ ಚಾನಲ್ ಯೂಟ್ಯೂಬ್ನಲ್ಲಿ ಹಂಚಿಕೊಂಡಿದೆ. ಉಡುಗೆ ಮತ್ತು ಮುಸುಕು ಧರಿಸಿದ ವಧುವಿನ ಹೋಲಿಕೆಯಿಂದಾಗಿ ಈ ಹೆಸರನ್ನು ಅದು ಪಡೆದುಕೊಂಡಿದೆ. ಕ್ಲಿಪ್ ತುಂಬಾ ಸುಂದರವಾಗಿರುವುದರಿಂದ ನೀವು ನಮ್ಮಂತೆಯೇ ಕುತೂಹಲದಿಂದ ನೋಡುತ್ತೀರಿ.
ನನ್ನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಾ ರಸ್ತೆಯಲ್ಲಿ ಹುಡುಗನನ್ನು ಓಡಾಡಿಸಿ ದುಂಬಾಲು ಬಿದ್ದ ಹುಡುಗಿಯ ವೀಡಿಯೊ ವೈರಲ್ ಆಗಿದೆ. ಬಿಹಾರದ ನವಾಡದಲ್ಲಿ ರಸ್ತೆಯಲ್ಲಿ ತನ್ನ ವರನ ಹಿಂದೆ ಮದುವೆಯಾಗಲು ಒತ್ತಾಯಿಸುತ್ತಾಓಡುತ್ತಿರುವ ಹುಡುಗಿಯ ನಾಟಕೀಯ ವೀಡಿಯೊ ವೈರಲ್ ಆಗಿದೆ. ವೈರಲ್ ವೀಡಿಯೊವನ್ನು ಕೆಳಗೆ ನೋಡಿ.
ಬಿಹಾರದಿಂದ ವರದಿಯಾಗಿರುವ ವಿಲಕ್ಷಣ ಘಟನೆಯೊಂದರಲ್ಲಿ, ನಾವಡಾದ ಭಗತ್ ಸಿಂಗ್ ಚೌಕ್ನಲ್ಲಿ ಮಹಿಳೆಯೊಬ್ಬರು ತನ್ನ ವರನ ಹಿಂದೆ ಓಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮದುವೆಗೆ ಒಪ್ಪಿ ತಪ್ಪಿಸಿದ್ದ ತನ್ನ ವರನನ್ನು ಹುಡುಗಿ ಗುರುತಿಸಿ ಆತನನ್ನು ಮದುವೆಯಾಗುವಂತೆ ಒತ್ತಾಯಿಸಿದಳು.
ಸ್ಥಳೀಯರು ಕಿಕ್ಕಿರಿದು ಸೇರುತ್ತಿದ್ದಂತೆ, ವ್ಯಕ್ತಿ ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದನು. ಆದರೆ, ಮಹಿಳೆ ಆತನ ಹಿಂದೆ ಓಡಿ ಬಂದು ಆತನನ್ನು ಹಿಡಿದು ‘ಮೇರಿ ಶಾದಿ ಕರ್ವಾವೋ’ ಎಂದು ಮನವಿ ಮಾಡಿದ್ದಾಳೆ. ವೀಡಿಯೊದಲ್ಲಿ, ಪುರುಷನು ಮಹಿಳೆಯ ಹಿಡಿತದಿಂದ ತನ್ನನ್ನು ಮತ್ತೆ ಮತ್ತೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಮೂರು ತಿಂಗಳ ಹಿಂದೆ ಮದುವೆ ದಿನಾಂಕ ನಿಗದಿಯಾಗಿತ್ತು ಎಂದು ಮಹಿಳೆಯ ಮನೆಯವರು ಹೇಳಿದ್ದಾರೆ. ಅವರು ವ್ಯಕ್ತಿಯ ಕುಟುಂಬಕ್ಕೆ ವರದಕ್ಷಿಣೆಯಾಗಿ ಬೈಕ್ ಮತ್ತು 50,000 ರೂ.ನೀಡಿದ್ದಾರೆ. ಮದುವೆಯ ದಿನಾಂಕವನ್ನು ಸಮೀಪಿಸಿದಾಗ, ಹುಡುಗ ಸಬೂಬು ಹೇಳುತ್ತಾ ತಪ್ಪಿಸಲು ಯತ್ನಿಸಿದನು.
ಪುರುಷ ಮೆಹಕರ್ ಗ್ರಾಮದವನಾಗಿದ್ದರೆ, ಮಹಿಳೆ ಮಾಹುಲಿ ಗ್ರಾಮದವಳು. ಹೈವೋಲ್ಟೇಜ್ ನಾಟಕದ ಸುದ್ದಿ ಹಬ್ಬಿದಾಗ ಪೊಲೀಸರು ಮಧ್ಯ ಪ್ರವೇಶಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕಡೆಯವರನ್ನು ಮಹಿಳಾ ಠಾಣೆಗೆ ಕರೆದೊಯ್ದರು.
ಮಹಿಳೆ ಮತ್ತು ಪುರುಷನ ಕುಟುಂಬಗಳಿಗೆ ಸಲಹೆ ನೀಡಲಾಯಿತು. ಕೊನೆಗೆ ಎರಡೂ ಕಡೆಯವರು ಮದುವೆಗೆ ಒಪ್ಪಿದರು. ಕೊನೆಗೆ ಪೊಲೀಸ್ ಠಾಣೆ ಪಕ್ಕದಲ್ಲಿರುವ ದೇವಸ್ಥಾನದಲ್ಲಿ ಮಹಿಳೆ ಮತ್ತು ಪುರುಷ ವಿವಾಹವಾದರು.
एक शादी ऐसा भी
जब शादी करने से भाग रहा था लड़का, तब लड़की ने उसे खुद पकड़कर रचाई शादी
ಕೂಡ್ಲು ಗ್ರಾಮದಲ್ಲಿರುವ ಅತ್ಯಂತ ಪುರಾತನ ಕ್ಷೇತ್ರವಾಗಿರುವ ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 04.09.2022ನೇ ಭಾನುವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು. ಬೆಳಗ್ಗೆ 9.00 ಘಂಟೆಗೆ ಪೂಜೆ ಆರಂಭಗೊಳ್ಳಲಿರುವುದು.
ಮಧ್ಯಾಹ್ನ 12 ಘಂಟೆಗೆ ದೇವಸ್ಥಾನದ ಪೂಜೆ ಕಳೆದ ಮೇಲೆ ಸತ್ಯನಾರಾಯಣ ದೇವರ ಮಹಾಪೂಜೆ ನಡೆಯಲಿರುವುದು. 1.00 ಘಂಟೆಗೆ ಅನ್ನದಾನ ಆರಂಭಗೊಳ್ಳುವುದು.
ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ, ಸ್ಥಳಪುರಾಣಗಳನ್ನೊಳಗೊಂಡಿರುವ “ಚಕ್ರತೀರ್ಥ” ಎಂಬ ಕೃತಿ ಬಿಡುಗಡೆಗೊಳ್ಳಲಿರುವುದು. ಊರ, ಪರವೂರ ಭಕ್ತರನ್ನು ಈ ಕಾರ್ಯಕ್ರಮಕ್ಕೆ ವಿನಯಪೂರ್ವಕ ಆಮಂತ್ರಿಸಲಾಗಿದೆ ಎಂದು ಪೂಜಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಇವರನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಬಲ್ಲರು. ಇವರು ಬಡಗುತಿಟ್ಟಿನ ಶ್ರೇಷ್ಠ ಭಾಗವತರುಗಳಲ್ಲಿ ಒಬ್ಬರು. ಸಂಸ್ಕೃತ ಭಾಷೆಯ ಸಾಹಿತ್ಯ ಮತ್ತು ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿಯನ್ನು ಪಡೆದುದು ಮಾತ್ರವಲ್ಲ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ವರೆಗೂ ಅಭ್ಯಸಿಸಿದವರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತುದು ಶ್ರೀ ಗಂಗಾರಾಂ ಭಟ್, ಶ್ರೀ ಪರಮೇಶ್ವರ ಭಟ್ ಮತ್ತು ಪ್ರೊ| ರಾಜಗೋಪಾಲಾಚಾರ್ಯ ಅವರುಗಳಿಂದ.
ಸುಮಾರು ನೂರಕ್ಕೂ ಮಿಕ್ಕಿ ರಾಗಗಳನ್ನು ತಮ್ಮ ಯಕ್ಷಗಾನ ಹಾಡುಗಾರಿಕೆಗೆ ಬಳಸಿಕೊಂಡ ಸಾಧಕರಿವರು. ಬಡಗುತಿಟ್ಟಿನ ಹಾಡುಗಾರಿಕೆಗೆ ಪ್ರಪ್ರಥಮವಾಗಿ ದರ್ಬಾರ್ ಕಾನಡ, ಬಹುಧಾರೀ, ಕಲ್ಯಾಣ ವಸಂತ, ಬಿಲಹರಿ, ಷಹನಾ, ರೀತಿಗೌಳ, ಕದನ ಕುತೂಹಲ, ಕೇದಾರ, ಭಾಗ್ಯಶ್ರೀ, ನಾಟಿಕುರುಂಜಿ, ಸಿಂಹೇಂದ್ರ ಮಧ್ಯಮ, ಸಾರಂಗ, ಧರ್ಮಾವತಿ, ನೀಲಾಂಬರಿ ಮೊದಲಾದ ರಾಗಗಳನ್ನು ಬಳಸಿಕೊಂಡ ಗಾಯಕರಿವರು. ಯಕ್ಷಗಾನ ಭಾಗವತಿಕೆಯನ್ನು ಕಲಿತು ತಮ್ಮ ಹಾಡುಗಾರಿಕೆಯಿಂದ ಕಲಾಭಿಮಾನಿಗಳನ್ನು ರಂಜಿಸುವ ಇವರು ಕಲಿಕಾಸಕ್ತರಿಗೆ ಗುರುವಾಗಿ ತರಬೇತಿಯನ್ನು ನೀಡಿದ್ದಾರೆ, ನೀಡುತ್ತಿದ್ದಾರೆ.
ಲೇಖಕರಾಗಿಯೂ ವಿದ್ವಾನ್ ಶ್ರೀ ಗಣಪತಿ ಭಟ್ಟರು ಪ್ರಸಿದ್ಧರು. ಯಕ್ಷಗಾನ ಹಿಮ್ಮೇಳದ ಬಗೆಗೆ “ಯಕ್ಷಗಾನ ಗಾನಸಂಹಿತೆ” ಎಂಬ ಗ್ರಂಥವನ್ನೂ ರಚಿಸಿರುತ್ತಾರೆ. ಇದು ಯಕ್ಷಗಾನಕ್ಕೆ, ಹಿಮ್ಮೇಳದ ಅಭ್ಯಾಸಿಗಳಿಗೆ ಅವರ ಕೊಡುಗೆ. ಖ್ಯಾತ ತಾಳಮದ್ದಳೆ ಅರ್ಥಧಾರಿ, ವಿದ್ವಾಂಸರಾದ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಅವರ ಅಭಿಪ್ರಾಯದಂತೆ ‘ಯಕ್ಷಗಾನ ಗಾನಸಂಹಿತೆ’ ಎಂಬ ಪುಸ್ತಕವು ‘ಯಕ್ಷಗಾನ ಗಾನಪದ್ಧತಿ ಮತ್ತು ಹಿಮ್ಮೇಳದ ಬಗ್ಗೆ ರಚಿಸಲಾದ ಲಕ್ಷಣಗ್ರಂಥ, ಆಚಾರ್ಯಕೃತಿ. ಈ ಗ್ರಂಥವು ಪರೋಕ್ಷವಾದ ಯಕ್ಷಗಾನ ಶಾಲೆ. ಇದು ಪ್ರತ್ಯಕ್ಷವಾದ ಶಾಲೆಗಿಂತ ಪ್ರಬಲ’. ವಿದ್ವಾನ್ ಉಮಾಕಾಂತ ಭಟ್ಟರ ಮಾತುಗಳಿಂದ ಈ ಗ್ರಂಥದ ಮೌಲ್ಯವನ್ನು ನಾವು ತಿಳಿಯಬಹುದು.
ಬಡಗುತಿಟ್ಟಿನ ಖ್ಯಾತ ಭಾಗವತ ಶ್ರೀ ವಿದ್ವಾನ್ ಗಣಪತಿ ಭಟ್ಟರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದ ಮೊಟ್ಟೆಗದ್ದೆ. 1961ನೇ ಇಸವಿ ಏಪ್ರಿಲ್ 20ರಂದು ಶ್ರೀ ವೆಂಕಟ್ರಮಣ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಭಟ್ ದಂಪತಿಗಳ ಪುತ್ರನಾಗಿ ಜನನ. ಇವರದ್ದು ಪೌರೋಹಿತ್ಯ ಮನೆತನ. ತಂದೆ ವೆಂಕಟ್ರಮಣ ಭಟ್ಟರು ಕೃಷಿ ಮತ್ತು ಪುರೋಹಿತ ವೃತ್ತಿಯ ಜತೆ ತಾಳಮದ್ದಳೆಯ ಹವ್ಯಾಸೀ ಅರ್ಥಧಾರಿಯೂ ಆಗಿದ್ದರು. ತಾಯಿಯ ತಂದೆ ಶ್ರೀ ರಾಮಚಂದ್ರ ಭಟ್ಟರು (ಅಜ್ಜ) ಹವ್ಯಾಸಿ ಭಾಗವತರು. ವಿದ್ವಾನ್ ಗಣಪತಿ ಭಟ್ಟರ ಹಿರಿಯ ಅಣ್ಣ ನಾರಾಯಣ ಭಟ್ ತಾಳಮದ್ದಳೆ ಹವ್ಯಾಸಿ ಅರ್ಥಧಾರಿ. ಮನೆಯ ಸದಸ್ಯರೆಲ್ಲರೂ ಯಕ್ಷಗಾನಾಸಕ್ತರು. ಇದು ಗಣಪತಿ ಭಟ್ಟರಿಗಿದ್ದ ಯಕ್ಷಗಾನ ಹಿನ್ನೆಲೆ.
ಶ್ರೀ ಗಣಪತಿ ಭಟ್ಟರು ಓದಿದ್ದು ಎಸ್ಸೆಸ್ಸೆಲ್ಸಿ ವರೆಗೆ. ಬಳಿಕ 5 ವರ್ಷ ಸಂಸ್ಕೃತ ವೇದ ಮಂತ್ರಗಳ ಅಭ್ಯಾಸ. ಬಳಿಕ ಸಂಸ್ಕೃತ ಸಾಹಿತ್ಯ ಮತ್ತು ಅಲಂಕಾರ ಶಾಸ್ತ್ರದಲ್ಲಿ ವಿದ್ವತ್ ಪದವಿ. ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ಓದಿದ್ದು ಮಾಗೋಡು, ನಂದೊಳ್ಳಿ ಮತ್ತು ನಾಯ್ಕನಕೆರೆ ಶಾಲೆಗಳಲ್ಲಿ. ಎಸ್ಸೆಸ್ಸೆಲ್ಸಿ ಖಾಸಗಿಯಾಗಿ ಉತ್ತೀರ್ಣರಾಗಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ. ಮನೆಯವರ ಜತೆ ಆಟ, ತಾಳಮದ್ದಳೆಗಳಿಗೆ ಹೋಗುತ್ತಿದ್ದರು. ಹಿರಿಯ ಭಾಗವತರುಗಳ ಹಾಡುಗಾರಿಕೆಯನ್ನು ಕೇಳುತ್ತಾ ತಾನೂ ಭಾಗವತನಾಗಬೇಕೆಂಬ ಆಸೆ ಉಂಟಾಗಿತ್ತು.
ಕವ್ವಾಳೆ ರಾಮಚಂದ್ರ ಭಾಗವತ, ಕಡತೋಕಾ ಮಂಜುನಾಥ ಭಾಗವತ, ನಾರ್ಣಪ್ಪ ಉಪ್ಪೂರ, ನೆಬ್ಬೂರು ನಾರಾಯಣ ಭಾಗವತ, ಜಿ.ಆರ್ ಕಾಳಿಂಗ ನಾವಡರ ಹಾಡುಗಾರಿಕೆಗೆ ಇವರು ಆಕರ್ಷಿತರಾಗಿದ್ದರು. 7ನೇ ತರಗತಿ ವರೆಗೆ ಓದಿದ ಬಳಿಕ ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಪಾಠಶಾಲೆಯಲ್ಲಿ 5 ವರ್ಷಗಳ ಕಾಲ ಸಂಸ್ಕೃತ ಭಾಷೆ ಮತ್ತು ವೇದ ಮಂತ್ರ ಅಭ್ಯಾಸ ಮಾಡಿದ್ದರು. ಹೆಚ್ಚಿನ ವ್ಯಾಸಂಗಕ್ಕಾಗಿ 1979ರಲ್ಲಿ ಉಡುಪಿ ಸಂಸ್ಕೃತ ಕಾಲೇಜಿಗೆ. ಉಡುಪಿಗೆ ತೆರಳಿದರೆ ಯಕ್ಷಗಾನ ಭಾಗವತಿಕೆ ಕಲಿಯಬಹುದೆಂಬ ನಿರ್ಣಯವೂ ಇತ್ತು. ಉಡುಪಿ ಸಂಸ್ಕೃತ ಕಾಲೇಜಿನಲ್ಲಿ 1979ರಿಂದ 1986ರ ವರೆಗೆ ಕಲಿತು ಸಂಸ್ಕೃತ ಸಾಹಿತ್ಯ ಮತ್ತು ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿಯನ್ನು ಪಡೆದರು.
ಫೋಟೋ ಕೃಪೆ: ಪ್ರಶಾಂತ್ ಮಲ್ಯಾಡಿ
ಉಡುಪಿ ಸಂಸ್ಕೃತ ಕಾಲೇಜಿಗೆ ಸೇರಿದ ಪ್ರಥಮ ವರ್ಷ ಕಾಲೇಜು ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನ ನಡೆಸುವ ನಿರ್ಣಯವಾಗಿತ್ತು. ಗಣಪತಿ ಭಟ್ಟರ ಹಾಡುವ ಹವ್ಯಾಸವನ್ನು ತಿಳಿದಿದ್ದ ಎಲ್ಲರೂ ತಂಡದ ಭಾಗವತನಾಗಲು ಒತ್ತಾಯಿಸಿದರು. ನಾಟ್ಯ ತರಬೇತಿಗಾಗಿ ಬಂದಿದ್ದ ಬನ್ನಂಜೆ ಶ್ರೀ ಸಂಜೀವ ಸುವರ್ಣರು ತಾಳವನ್ನು ಕಲಿಸಿ ತರಬೇತಿ ನೀಡಿದ್ದರು. ಕ್ಷಿಪ್ರ ಕಲಿಕೆಯ ಗುಣವನ್ನೂ ವಿದ್ವಾನ್ ಗಣಪತಿ ಭಟ್ಟರೊಳಗೆ ಅವ್ಯಕ್ತವಾಗಿ ನೆಲೆಸಿದ್ದ ಶ್ರೇಷ್ಠ ಭಾಗವತನನ್ನು ಶ್ರೀ ಸಂಜೀವ ಸುವರ್ಣರು ಅಂದೇ ಗುರುತಿಸಿದ್ದರು. ಪ್ರದರ್ಶನಕ್ಕೆ ‘ಗದಾಯುದ್ಧ’ ಪ್ರಸಂಗ. ಶ್ರೀ ಬನ್ನಂಜೆ ಸಂಜೀವ ಸುವರ್ಣರು ಗದಾಯುದ್ಧ ಪ್ರಸಂಗದ ಹಾಡುಗಳನ್ನು ಶ್ರೀ ಕಾಳಿಂಗ ನಾವಡರು ಹಾಡುತ್ತಿದ್ದ ರೀತಿಯನ್ನೂ ಆಡಿಯೋ ಕ್ಯಾಸೆಟ್ ಮೂಲಕ ಗಣಪತಿ ಭಟ್ಟರಿಗೆ ಕೇಳುವ ವ್ಯವಸ್ಥೆ ಮಾಡಿದ್ದರು. ಜತೆಗೆ ಅವರಿಂದ ತರಬೇತಿಯೂ ಸಿಕ್ಕಿತ್ತು.
ಪ್ರದರ್ಶನದಲ್ಲಿ ಭಾಗವತನಾಗಿ ರಂಗವೇರಿದ ಗಣಪತಿ ಭಟ್ಟರು ಯಶಸ್ವಿಯಾಗಿದ್ದರು. ಹಾಗಾಗಿ ಬನ್ನಂಜೆ ಶ್ರೀ ಸಂಜೀವ ಸುವರ್ಣರೇ ನನ್ನ ಮೊದಲ ಗುರುಗಳು ಎಂದು ಗಣಪತಿ ಭಟ್ಟರು ಕೃತಜ್ಞತೆಯಿಂದ ಹೇಳುತ್ತಾರೆ. ಶ್ರೀ ಸಂಜೀವ ಸುವರ್ಣರು ಶಾಸ್ತ್ರೀಯವಾಗಿ ಭಾಗವತಿಕೆ ಕಲಿಯಲು ಸಲಹೆ ನೀಡಿದ್ದರು. ಗಣಪತಿ ಭಟ್ಟರ ಕಲಿಯುವ ಆಸೆಗೆ ಇದು ಪೂರಕವಾಗಿತ್ತು. ಶ್ರೀ ಬನ್ನಂಜೆ ಸಂಜೀವ ಸುವರ್ಣರೇ ಗಣಪತಿ ಭಟ್ಟರನ್ನು ಉಡುಪಿ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು.
ನೀಲಾವರ ಶ್ರೀ ರಾಮಕೃಷ್ಣಯ್ಯ ಅವರಿಂದ ಭಾಗವತಿಕೆಯ ಪರಿಪೂರ್ಣ ಪಾಠ. ಆಗ ಶ್ರೀ ಮಹಾಬಲ ಕಾರಂತ ಅವರು ಮೃದಂಗ ಗುರುಗಳಾಗಿದ್ದರು. ಹಗಲು ಸಂಸ್ಕೃತ ಕಾಲೇಜು, ರಾತ್ರಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ಅಭ್ಯಾಸ. ಸಭಾಲಕ್ಷಣದ ಪಾಠವು ಮನದಲ್ಲಿ ಗಟ್ಟಿಯಾಗಿತ್ತು. ಈ ಸಂದರ್ಭದಲ್ಲಿ ಗುರುಗಳಾದ ಶ್ರೀ ನೀಲಾವರ ರಾಮಕೃಷ್ಣಯ್ಯನವರ ಅಪ್ಪಣೆಯಂತೆ ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ಭಾಗವತರಾಗಿ ಪ್ರಸಂಗಗಳನ್ನು ಮುನ್ನಡೆಸಲು ಅವಕಾಶಗಳು ಸಿಕ್ಕಿತ್ತು. ಮೃದಂಗ ಗುರುಗಳಾದ ಶ್ರೀ ಮಹಾಬಲ ಕಾರಂತರೂ ಅವಕಾಶ ನೀಡಿ ಪ್ರೋತ್ಸಾಹಿಸಿದ್ದರು.
ಕೋಟ ಶ್ರೀ ಶಿವರಾಮ ಕಾರಂತರ ‘ಯಕ್ಷರಂಗ’ ಎಂಬ ತಂಡದ ಪ್ರದರ್ಶನಗಳಲ್ಲಿ ಆಗ ಭಾಗವತರಾಗಿ ನೀಲಾವರ ಶ್ರೀ ರಾಮಕೃಷ್ಣಯ್ಯ ಮತ್ತು ಮೃದಂಗವಾದಕರಾಗಿ ಶ್ರೀ ಮಹಾಬಲ ಕಾರಂತರು ಸಕ್ರಿಯರಾಗಿದ್ದರು. (ಬ್ಯಾಲೆ ಪ್ರದರ್ಶನ) ನೀಲಾವರ ಶ್ರೀ ರಾಮಕೃಷ್ಣಯ್ಯನವರ ಸೂಚನೆಯಂತೆ ಶಿವರಾಮ ಕಾರಂತರು ತಮ್ಮ ತಂಡಕ್ಕೆ ಭಾಗವತರಾಗಿ ಶ್ರೀ ಗಣಪತಿ ಭಟ್ಟರನ್ನು ಆಯ್ಕೆ ಮಾಡಿದ್ದರು. ಈ ತಂಡದ ಪ್ರದರ್ಶನಗಳಲ್ಲಿ ಹಾಡಬೇಕಾದರೆ ವಿಶೇಷ ತರಬೇತಿಯನ್ನು ಹೊಂದುವ ಅನಿವಾರ್ಯತೆಯಿದ್ದು ಶಿವರಾಮ ಕಾರಂತರೇ ಗಣಪತಿ ಭಟ್ಟರಿಗೆ ತರಬೇತಿ ನೀಡಿದ್ದರು. (20 ದಿನಗಳ ತರಬೇತಿ) ‘ಯಕ್ಷರಂಗ’ ತಂಡದ ಸುಮಾರು ಇನ್ನೂರಕ್ಕೂ ಮಿಕ್ಕಿದ ಪ್ರದರ್ಶನಗಳಲ್ಲಿ ವಿದ್ವಾನ್ ಗಣಪತಿ ಭಟ್ಟರು ಭಾಗವಹಿಸಿದರು. ಶ್ರೀ ನೀಲಾವರ ರಾಮಕೃಷ್ಣಯ್ಯ ಮತ್ತು ಶ್ರೀ ಮಹಾಬಲ ಕಾರಂತರ ಸೂಚನೆಯಂತೆ ಉಡುಪಿ ಯಕ್ಷಗಾನ ಕೇಂದ್ರದ ಗುರುವಾಗಿ 2 ವರ್ಷಗಳ ಕಾಲ ಕಲಿಕಾಸಕ್ತರಿಗೆ ತರಬೇತಿ ನೀಡುವ ಅವಕಾಶವೂ ಸಿಕ್ಕಿತ್ತು.
ವಿದ್ವಾನ್ ಶ್ರೀ ಗಣಪತಿ ಭಟ್ಟರು ಮೇಳದ ತಿರುಗಾಟ ಆರಂಭಿಸಿದ್ದು 1989-90ರಲ್ಲಿ. ಶಿರಸಿ ಶ್ರೀ ಪಂಚಲಿಂಗೇಶ್ವರ ಮೇಳದಲ್ಲಿ ಒಂದು ವರ್ಷ. ನೆಬ್ಬೂರು ಶ್ರೀ ನಾರಾಯಣ ಭಾಗವತ ಮತ್ತು ಶ್ರೀ ಕೆ.ಪಿ. ಹೆಗಡೆ ಅವರೊಂದಿಗೆ ವ್ಯವಸಾಯ. ಈ ಸಂದರ್ಭದಲ್ಲಿ ಕೆರೆಮನೆ ಶಂಭು ಹೆಗಡೆ, ಗೋಡೆ ನಾರಾಯಣ ಹೆಗಡೆ, ಕುಂಜಾಲು ರಾಮಕೃಷ್ಣ, ಎಂ.ಎ ನಾಯ್ಕ, ಕೊಂಡದಕುಳಿ ರಾಮಚಂದ್ರ ಹೆಗಡೆ ಮೊದಲಾದವರ ಒಡನಾಟವು ದೊರೆತಿತ್ತು. ಬಳಿಕ 5 ವರ್ಷ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ಸಾಲಿಗ್ರಾಮ ಮೇಳದಲ್ಲಿ. ಶ್ರೀ ನಾರಾಯಣ ಶಬರಾಯರ ಜೊತೆ ವ್ಯವಸಾಯ. ಬಳ್ಕೂರು ಕೃಷ್ಣಯಾಜಿ, ಅರಾಟೆ ಮಂಜುನಾಥ, ಕೊಂಡದಕುಳಿ ರಾಮಚಂದ್ರ ಹೆಗಡೆ, ಬಿಳಿಯೂರು ಕೃಷ್ಣಮೂರ್ತಿ, ಹಳ್ಳಾಡಿ ಜಯರಾಮ ಶೆಟ್ಟಿ, ದಯಾನಂದ ನಾಗೂರು ಮೊದಲಾದವರ ಒಡನಾಟವು ದೊರೆತಿತ್ತು.
ವಿದ್ವಾನ್ ಶ್ರೀ ಗಣಪತಿ ಭಟ್ಟರು ಬರೆದ “ಯಕ್ಷಗಾನ ಗಾನಸಂಹಿತೆ” ಎಂಬ ಗ್ರಂಥ
ಸಾಲಿಗ್ರಾಮ ಮೇಳದಲ್ಲಿ 5 ವರ್ಷಗಳ ವ್ಯವಸಾಯದ ಬಳಿಕ ತಿರುಗಾಟ ನಿಲ್ಲಿಸಿ ಮನೆಯಲ್ಲಿದ್ದರೂ ಅತಿಥಿ ಕಲಾವಿದರಾಗಿ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಶ್ರೀ ಶಂಭು ಹೆಗಡೆ ಅವರ ನೇತೃತ್ವದ ಇಡಗುಂಜಿ ಶ್ರೀಮಯ ಕಲಾಕೇಂದ್ರದ ಗುರುವಾಗಿ 6 ವರ್ಷ ಭಾಗವತಿಕೆ ಕಲಿಕಾಸಕ್ತರಿಗೆ ತರಬೇತಿ ನೀಡಿದ್ದರು. ಮಳೆಗಾಲದ ಪ್ರದರ್ಶನಗಳಲ್ಲೂ ವಿದ್ವಾನ್ ಶ್ರೀ ಗಣಪತಿ ಭಟ್ಟರು ಭಾಗವತರಾಗಿ ಪ್ರೇಕ್ಷಕರನ್ನು ತಮ್ಮ ಗಾನಸುಧೆಯಿಂದ ಸಂತೋಷಪಡಿಸಿದ್ದಾರೆ. ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಅವರ ಶ್ರೀ ವೀರಾಂಜನೇಯ ಯಕ್ಷಗಾನ ಮಂಡಳಿ ಬಂಗಾರಮಕ್ಕಿ ಮತ್ತು ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಅವರ ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನ (ರಿ) ಕುಂಭಾಶಿ ತಂಡಗಳ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ಶತಾವಧಾನಿ ಡಾ. ಆರ್. ಗಣೇಶ್ ಅವರ ಪರಿಕಲ್ಪನೆಯ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಮಂಟಪ ಶ್ರೀ ಪ್ರಭಾಕರ ಉಪಾಧ್ಯರ ಯುಗಳ ಯಕ್ಷಗಾನ ‘ವಿಜಯ ವಿಲಾಸ’ದಲ್ಲಿ ಭಾಗವಹಿಸಿರುತ್ತಾರೆ. (45 ಪ್ರದರ್ಶನ) ಮಂಟಪ ಶ್ರೀ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನಗಳಲ್ಲಿ ಹತ್ತು ವರ್ಷಗಳ ಕಾಲ ಭಾಗವಹಿಸಿದವರು ವಿದ್ವಾನ್ ಶ್ರೀ ಗಣಪತಿ ಭಟ್ಟರು. ವಿದೇಶಗಳ ಅನೇಕ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಹಾಡುವ ಅವಕಾಶವು ಇವರಿಗೆ ಸಿಕ್ಕಿದೆ. ಕೋಟ ಶಿವರಾಮ ಕಾರಂತರ ಯಕ್ಷ ತಂಡದ (ಬ್ಯಾಲೆ ಪ್ರದರ್ಶನ) ಭಾಗವತನಾಗಿ ರಷ್ಯಾ, ದುಬೈ, ಅಬುದಾಭಿಗಳಲ್ಲಿ ಭಾಗವಹಿಸಿರುತ್ತಾರೆ.
ಉಪ್ಪಿನಕುದ್ರು ಶ್ರೀ ಕೊಗ್ಗ ಕಾಮತ್ ಅವರ ಬೊಂಬೆಯಾಟದ ತಂಡವು ರಷ್ಯಾ, ಬೆಲ್ಜಿಯಂ, ಪ್ಯಾರಿಸ್ ನಗರಗಳಲ್ಲಿ ನಡೆಸಿದ ಪ್ರದರ್ಶನಗಳಲ್ಲಿ ಹಾಡುವ ಅವಕಾಶವೂ ಸಿಕ್ಕಿತ್ತು. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಕಾರ್ಯಕ್ರಮ ಅಮೆರಿಕಾದಲ್ಲಿ ನಡೆದಾಗ ಶ್ರೀ ಎ.ಪಿ. ಪಾಠಕರ ಜತೆ ಅಲ್ಲೂ ಭಾಗವಹಿಸಿದ್ದರು. ಪ್ರಸ್ತುತ ಅತಿಥಿ ಕಲಾವಿದರಾಗಿ ಪ್ರದರ್ಶನಗಳಲ್ಲಿ ಭಾಗವಹಿಸುವ ವಿದ್ವಾನ್ ಶ್ರೀ ಗಣಪತಿ ಭಟ್ಟರು ಕಲಿಕಾಸಕ್ತರಿಗೆ ತಮ್ಮ ಮನೆಯಲ್ಲಿ ತರಬೇತಿಯನ್ನು ನೀಡುತ್ತಾರೆ( ಪ್ರತಿಫಲಾಪೇಕ್ಷೆ ಇಲ್ಲದೆ ತರಬೇತಿ).
ವಿದ್ವಾನ್ ಶ್ರೀ ಗಣಪತಿ ಭಟ್ಟ ಯಲ್ಲಾಪುರ ಇವರ ಯಕ್ಷಗಾನದ ಹಾಡುಗಾರಿಕೆಯನ್ನು ವರ್ಣಿಸಲು ನನ್ನ ಈ ಪುಟ್ಟ ಬರಹದಲ್ಲಿ ಖಂಡಿತಾ ಸಾಧ್ಯವಿಲ್ಲ. ಅವರ ಹಾಡುಗಾರಿಕೆಯ ಸೊಬಗನ್ನು ಅಕ್ಷರಗಳಿಂದ ವರ್ಣಿಸಲು ಅಸಾಧ್ಯ. ನೋಡಿ,ಕೇಳಿ, ಅನುಭವಿಸಿ ಸಂತೋಷಪಡುವುದಕ್ಕೆ ಇರುವ ವಿಚಾರವದು. 2003 ರಿಂದ ತೊಡಗಿ ಸಾಲಿಗ್ರಾಮದ ಸಮೀಪ ಪಾರಂಪಳ್ಳಿ ಎಂಬಲ್ಲಿ ವಾಸಿಸುತ್ತಿದ್ದಾರೆ. (ಸ್ವಂತ ಜಾಗ)
ವೃತ್ತಿ ಕಲಾವಿದನಾಗಿಯೂ ಸಂಸಾರಿಕವಾಗಿಯೂ ಇವರು ತೃಪ್ತರು. ಇವರ ಪತ್ನಿ ಶ್ರೀಮತಿ ಇಂದಿರಾ ಭಟ್ (1990ರಲ್ಲಿ ವಿವಾಹ) ವಿದ್ವಾನ್ ಶ್ರೀ ಗಣಪತಿ ಭಟ್ಟ ಯಲ್ಲಾಪುರ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ರಾಘವೇಂದ್ರ ಸಂಸ್ಕೃತ ಭಾಷೆ ಮತ್ತು ವೇದ ಅಭ್ಯಸಿಸಿದ್ದಾರೆ. ಪುರೋಹಿತರಾಗಿ ಎಲ್ಲರಿಗೂ ಪರಿಚಿತರು. ಕಿರಿಯ ಪುತ್ರ ಶ್ರೀಪ್ರದ ಪ್ರಥಮ ವರ್ಷ ಬಿ.ಕಾಮ್ ವಿದ್ಯಾರ್ಥಿ. ವಿದ್ವಾನ್ ಶ್ರೀ ಗಣಪತಿ ಭಟ್ಟ ಯಲ್ಲಾಪುರ ಅವರಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ ಎಂಬ ಹಾರೈಕೆಗಳು.
ಪುತ್ತೂರು, ಸೆ 1 : ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಫುಟ್ಬಾಲ್ ಸ್ಫರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದೆ.
ತಂಡದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಹಾರ್ದಿಕ್, ದೀಪಕ್, ಸಂಜಯ್, ಶಶಿಕಾಂತ್, ಎಂ. ಸಾತ್ವಿಕ್, ಸುನೀಲ್ ಕುಮಾರ್, ಭಿದ್ಯರಾಜ್, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಅನುಷ್ ಕೆ.ಎನ್, ಅರ್ಜುನ್ ಕೆ.ಎಚ್, ವಾಣಿಜ್ಯ ವಿಭಾಗದ ಲಿಂಕಿತ್, ತಿಲಕ್, ಜಿತೇಶ್, ಅವಿನಾಶ್ ಭಾಗವಹಿಸಿದ್ದರು.
ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ರೈಲ್ವೆ ಕ್ರಾಸಿಂಗ್ ಗೇಟ್ ಮುಚ್ಚಿದ ಸಂದರ್ಭದಲ್ಲೂ ಬೈಕ್ ಸವಾರ ಹಳಿ ದಾಟಲು ಯತ್ನಿಸಿದ್ದು, ಆತ ತನ್ನ ಬೈಕ್ ಕಳಕೊಂಡಿದ್ದಾನೆ. ಆತನ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅವನನ್ನು ಬಂಧಿಸುವ ಸಾಧ್ಯತೆ ಇದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ರೈಲ್ವೇ ಕ್ರಾಸ್ ಜಂಕ್ಷನ್ನಲ್ಲಿ ವೇಗವಾಗಿ ಬರುತ್ತಿದ್ದ ರೈಲನ್ನು ನೋಡಿ ವ್ಯಕ್ತಿಯೊಬ್ಬ ತನ್ನ ಬೈಕ್ ಅನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ.
ಇಟಾವಾದ ರಾಮನಗರ ಪ್ರದೇಶದಲ್ಲಿ ನಡೆದ ಈ ನಾಟಕೀಯ ಸರಣಿಯು ಭದ್ರತಾ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೈಲ್ವೆ ಗೇಟನ್ನು ಮುಚ್ಚಲಾಗಿದೆ. ಆದರೂ ಹಲವರು ಗೇಟ್ ಅಡಿಯಿಂದ ಬೈಕ್ ಸಮೇತ ದಾಟಲು ಯತ್ನಿಸುತ್ತಾರೆ. ವೇಗವಾಗಿ ರೈಲು ಬರುತ್ತದೆ. ಎಲ್ಲರೂ ಹಿಂದೆ ಸರಿದರೂ ಒಬ್ಬನ ಬೈಕ್ ಹಳ್ಳಿಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ.
ಆದರೆ ವೇಗವಾಗಿ ಬರುತ್ತಿರುವ ರೈಲು ತನ್ನ ಕಡೆಗೆ ಬರುತ್ತಿದೆ ಎಂದು ತಿಳಿದಾಗ, ಅವನು ಅವನ ಬೈಕನ್ನು ಹಳಿಯಿಂದ ಎಳೆಯಲು ಪ್ರಯತ್ನಿಸಿದನು ಆದರೆ ಬೈಕ್ ಮುಂಭಾಗದ ಟೈರ್ ಸಿಲುಕಿಕೊಂಡಿತು.
ಜಾರ್ಖಂಡ್ ಸ್ವರ್ಣ ಜಯಂತಿ ಎಕ್ಸ್ಪ್ರೆಸ್ ಅತಿವೇಗದಲ್ಲಿ ಬರುತ್ತಿರುವುದನ್ನು ಕಂಡು ಅವನು ತನ್ನ ಮೋಟಾರು ಸೈಕಲ್ ಅನ್ನು ಬಿಟ್ಟು ರೈಲು ಹಳಿಯಿಂದ ಓಡಿಹೋದ. ಬೈಕ್ ರೈಲಿನಡಿ ನಜ್ಜುಗುಜ್ಜಾಗಿದ್ದು, ಬೈಕ್ ನ ಕೆಲವು ಭಾಗಗಳು ಹಳಿಗಳ ಬಳಿ ಪತ್ತೆಯಾಗಿವೆ.
ವರದಿಗಳ ಪ್ರಕಾರ, ಬೈಕ್ ಸವಾರನಿಗೆ ನೋಟಿಸ್ ನೀಡಲಾಗುವುದು ಮತ್ತು ರೈಲ್ವೇ ಕ್ರಾಸಿಂಗ್ ಅನ್ನು ಮುಚ್ಚಿದಾಗಲೂ ಹಳಿಗಳನ್ನು ದಾಟಲು ಯತ್ನಿಸಿದ ಕಾರಣ ಅವರನ್ನು ಬಂಧಿಸಬಹುದು.