Tuesday, May 12, 2026
Home Blog Page 196

ವೀಡಿಯೊ – 75 ರ ಯುವಕ ಮದುವೆಯಾದದ್ದು 28 ರ ಯುವತಿಯನ್ನು! – ಈ ಮದುಮಗ ವಧುವಿಗೆ ಕೊಟ್ಟದ್ದು 2.5 ಕೋಟಿ ರೂಪಾಯಿ ವಧುದಕ್ಷಿಣೆ!

0

75 ರ ಯುವಕ (?) 28 ರ ಯುವತಿಯನ್ನು ಮದುವೆಯಾದ ವಿಲಕ್ಷಣ, ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಷ್ಟೇ ಅಲ್ಲ, ವೃದ್ಧ ಮದುಮಗನ ಕಡೆಯಿಂದ ಮಹಿಳೆಯ ಕುಟುಂಬಕ್ಕೆ 2.5 ಕೋಟಿ ರೂಪಾಯಿ ನೀಡಿರುವುದಾಗಿಯೂ ವರದಿಯಾಗಿದೆ. ಪುದುಚೇರಿಯ ವೃದ್ಧರೊಬ್ಬರು ಫ್ರಾನ್ಸ್ ನಲ್ಲಿ ನೆಲೆಸಿದ್ದಾರೆ. 

ತಮಿಳುನಾಡಿನ ಪುದುಚೇರಿಯ ವೃದ್ಧರೊಬ್ಬರು ಫ್ರಾನ್ಸ್ ನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಪುದುಚೇರಿಗೆ ಬಂದಿದ್ದಾರೆ. ಪತ್ನಿ ತೀರಿಕೊಂಡಿದ್ದರಿಂದ ಕುಟುಂಬದ ಜವಾಬ್ದಾರಿ ನಿಭಾಯಿಸುವವರೇ ಇಲ್ಲದೇ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅವರು ಎಲ್ಲರಲ್ಲಿಯೂ ಅಳಲು ತೋಡಿಕೊಂಡರು.

ವೃದ್ಧನ ಸಂಬಂಧಿಕರು ಆ ಪ್ರದೇಶದ ಪತಿಯನ್ನು ಕಳೆದುಕೊಂಡ 28 ವರ್ಷದ ಯುವತಿಯನ್ನು ಮಾತನಾಡಿಸಿ ವೃದ್ಧನೊಂದಿಗೆ ಮದುವೆಯಾಗಲು ವ್ಯವಸ್ಥೆ ಮಾಡಿದರು. ಯುವತಿ ವಿಧವೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಇಬ್ಬರೂ ಇತ್ತೀಚೆಗೆ ಪುದುಚೇರಿಯ ಮನಕುಲ ವಿನಾಯಕರ್ ದೇವಸ್ಥಾನದಲ್ಲಿ ವಿವಾಹವಾದರು. ಈ ಕುರಿತು ದೇವಸ್ಥಾನದ ಧರ್ಮದರ್ಶಿಗಳು ತಿಳಿಸಿದ್ದಾರೆ.

ಪುದುಚೇರಿಯ ವಿನಾಯಕರ್ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಯುವತಿ ವೃದ್ಧನನ್ನು ಮದುವೆಯಾಗುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಅಲ್ಲದೇ ಇಬ್ಬರ ಕುಟುಂಬಸ್ಥರು ಹಾಗೂ ಸಂಬಂಧಿಕರು ಮದುವೆಯಲ್ಲಿ ಪಾಲ್ಗೊಂಡಿದ್ದರು.

ಈ ಮದುವೆಯ ವಿಡಿಯೋ ಇದೀಗ ಹೊರಬಂದಿದ್ದು, ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಧು ಮತ್ತು ವರ ಇಬ್ಬರ ಹೆಸರು ಮತ್ತು ಊರಿನ ಬಗ್ಗೆ ಯಾವುದೇ ವಿವರಗಳು ತಿಳಿದುಬಂದಿಲ್ಲ. ಮತ್ತು ಇಬ್ಬರೂ ಮದುವೆಯಾಗಲು ಶಾಸಕರಿಂದ ಶಿಫಾರಸು ಪತ್ರವನ್ನು ತಂದಿದ್ದರು.

ಇಬ್ಬರೂ ತಮ್ಮ ವಯಸ್ಸನ್ನು ಮುಚ್ಚಿಟ್ಟುಕೊಳ್ಳದೆ ಒಪ್ಪಿಕೊಂಡು ಮದುವೆಯಾದರು. ಅಷ್ಟೇ ಅಲ್ಲ, ವೃದ್ಧ ಮದುಮಗನ ಕಡೆಯಿಂದ ಮಹಿಳೆಯ ಕುಟುಂಬಕ್ಕೆ 2.5 ಕೋಟಿ ರೂಪಾಯಿ ನೀಡಿರುವುದಾಗಿಯೂ ವರದಿಯಾಗಿದೆ.

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಟ್ಟೆಯಲ್ಲಿ ಬಚ್ಚಿಟ್ಟಿದ್ದ 87 ಕ್ಯಾಪ್ಸುಲ್‌ಗಳ ರೂಪದಲ್ಲಿ 13 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶ, ಪ್ರಯಾಣಿಕನ ಬಂಧನ

0

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಟ್ಟೆಯಲ್ಲಿ ಬಚ್ಚಿಟ್ಟಿದ್ದ 87 ಕ್ಯಾಪ್ಸುಲ್‌ಗಳ ರೂಪದಲ್ಲಿ 13 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶ, ಪ್ರಯಾಣಿಕನ ಬಂಧನ   

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಜೆಯೊಬ್ಬನ ಹೊಟ್ಟೆಯಲ್ಲಿ ಬಚ್ಚಿಟ್ಟಿದ್ದ 87 ಕ್ಯಾಪ್ಸುಲ್‌ಗಳ ರೂಪದಲ್ಲಿ 13 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ಮುಂಬೈ ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ.

ಪ್ರಯಾಣಿಕನು ಅದನ್ನು ಯಾವ ರೀತಿ ಹೊಟ್ಟೆಯಲ್ಲಿ ಅಡಗಿಸಿದ್ದ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ಪ್ರಯಾಣಿಕನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಸ್ವಾತಂತ್ರ್ಯೋತ್ಸವದ 75ನೇ ವರ್ಷ ಆಚರಣೆ ಮತ್ತು ಶ್ರೀ ಗಣೇಶ ಚೌತಿಯ ನಿಮಿತ್ತವಾಗಿ ಶ್ರೀ ಸಹಸ್ರಲಿಂಗೇಶ್ವರ ದೇವಳದಲ್ಲಿ ತಾಳಮದ್ದಳೆ

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಾಪ್ತಾಹಿಕ ಕೂಟದಲ್ಲಿ ವಿಶೇಷವಾಗಿ ಸ್ವಾತಂತ್ರ್ಯೋತ್ಸವದ 75ನೇ ವರ್ಷ ಆಚರಣೆ ಮತ್ತು ಶ್ರೀ ಗಣೇಶ ಚೌತಿಯ ನಿಮಿತ್ತವಾಗಿ ಶ್ರೀ ಸಹಸ್ರ ಲಿಂಗೇಶ್ವರ ದೇವಳದಲ್ಲಿ ಶ್ರೀ ಗಣೇಶ ಮಹಾತ್ಮೆ ತಾಳಮದ್ದಳೆಯನ್ನು ನಡೆಸಲಾಯಿತು 

ಭಾಗವತರಾಗಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳಂತಿಲ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ 

ಅರ್ಥದಾರಿಗಳಾಗಿ ಪ್ರಭಾಕರ ಆಳ್ವ, ಹರೀಶ ಆಚಾರ್ಯ ಬಾರ್ಯ, ಸಂಜೀವ ಪಾರೆಂಕಿ, ಬಾಲಕೃಷ್ಣ ಕೇಪುಳು, ವಿಜಯ್ ಕುಮಾರ್ ಕೊಯ್ಯುರು, ಶ್ರೀಮತಿ ಪುಷ್ಪಲತಾ .ಎಂ ಭಾಗವಹಿಸಿದ್ದರು.

ಸೀತಾ೦ಗೋಳಿ ಶ್ರೀದೇವಿ ಭಜನಾ  ಮಂದಿರದಲ್ಲಿ ತಾಳಮದ್ದಳೆ

ಗುರುವಾರ ಶ್ರೀಗಣೇಶ ಚತುರ್ಥಿಯ ಶುಭ ಸಂದರ್ಬದಲ್ಲಿ ಸೀತಾ೦ಗೋಳಿ ಶ್ರೀದೇವಿ ಭಜನಾ  ಮಂದಿರದಲ್ಲಿ ಗಣೇಶೋತ್ಸವದ ಪ್ರಯುಕ್ತ ಸ್ವಸ್ತಿಶ್ರೀ ಕಲಾ ಪ್ರತಿಷ್ಟಾನ ಎಡನಾಡು ಇವರಿಂದ ಅಡೂರು ಬಳಕಿಲ ವಿಷ್ಣಯ್ಯ ವಿರಚಿತ ಶ್ರೀ ಗಣಪತಿ ಮಹಾತ್ಮೆ’ ಎಂಬ ಯಕ್ಷಗಾನ ಕೂಟವು ನಡೆಯಿತು.

ಭಾಗವತರಾಗಿ ಶ್ರೀ ಸಚಿನ್ ಶೆಟ್ಟಿ ಕುದುರೆಪ್ಪಾಡಿ ಚೆಂಡೆ ಮತ್ತು ಮದ್ದಳೆಗಾರರಾಗಿ ಶ್ರೀ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಶ್ರೀ ಲಕ್ಷ್ಮೀಶ ಬೆಂಗ್ರೋಡಿ,

ಅರ್ಥದಾರಿಗಳಾಗಿ ಶ್ರೀ ಶಂಕರ ರೈ ಮಾಸ್ಟರ್ ಮಂಟಪಾಡಿ, ಶ್ರೀ ಶೇಣಿ ವೇಣುಗೋಪಾಲ ಭಟ್, ಶ್ರೀ ಶಶಿಧರ ಕುದಿಂಗಿಲ, ಶ್ರೀ ಕಾರ್ತಿಕ ಪಡ್ರೆ ಭಾಗವಹಿಸಿದ್ದು ಮೊದಲಿಗೆ ಅಪ್ಪಣ್ಣ ಸೀತಾಂಗೋಳಿ ಸ್ವಾಗತಿಸಿ ಕೊನೆಗೆ ವಂದಿಸಿದರು.

ಸೂರಂಬೈಲು ಶ್ರೀ ಗಣೇಶ ಮಂದಿರದಲ್ಲಿ ‘ಶ್ರೀ ಗಣಪತಿ ಮಹಾತ್ಮೆ’ ಯಕ್ಷಗಾನ ಕೂಟ

ಸೂರಂಬೈಲು: ಸೂರಂಬೈಲು ಶ್ರೀ ಗಣೇಶ ಮಂದಿರದಲ್ಲಿ 31- ಆಗಸ್ಟ್-2022 ರಂದು ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ  ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಇವರಿಂದ  ಅಡೂರು ಬಳಕಿಲ ವಿಷ್ಣಯ್ಯ ವಿರಚಿತ ಶ್ರೀ ಗಣಪತಿ ಮಹಾತ್ಮೆ ಯಕ್ಷಗಾನ ಕೂಟ ನಡೆಯಿತು.

        ಶ್ರೀ ವೆಂಕಟ್ರಾಜಾ ಕುಂಠಿಕಾನ,ಶ್ರೀ ವಸಂತ ಕುಮಾರ್ ದೊಡ್ಡಮಾಣಿ, ಶ್ರೀಮತಿ ರೋಹಿಣಿ ಎಸ್ ದಿವಾಣ ಯಕ್ಷಗಾನ ಭಾಗವತಿಕೆ ನಡೆಸಿದರು.

       ಚೆಂಡೆ ಮತ್ತು ಮದ್ದಳೆಗಾರರಾಗಿ ಶ್ರೀ ಸ್ಕಂದ ದಿವಾಣ,ಶ್ರೀ ಕೆ.ಯಂ.ಅನಿಕೇತ ಸುಬ್ರಾಯ ಭಟ್,ಹಾಗು ಅರ್ಥಧಾರಿಗಳಾಗಿ ಶ್ರೀ ಶಿವಶಂಕರ ಭಟ್ ದಿವಾಣ, ವಸಂತ ಕುಮಾರ್ ಮಾಸ್ಟರ್ ಚೇರಾಲು, ಸದಾಶಿವ ಗಟ್ಟಿ ಮುಳಿಯಡ್ಕ, ಶ್ರೀ ವಿನಯ ಎಸ್ ಚಿಗುರುಪಾದೆ, ಶ್ರೀ ಕಾರ್ತಿಕ್ ಪಡ್ರೆ ಭಾಗವಹಿಸಿದ್ದರು.

       ಮಂದಿರದ ಪರವಾಗಿ ಅಧ್ಯಕ್ಷರಾದ ಶ್ರೀ ವಸಂತ ಕುಮಾರ್ ಮಾಸ್ಟರ್ ಸ್ವಾಗತಿಸಿ,ಕಲಾವಿದರನ್ನು ಗೌರವಿಸಿ ವಂದಿಸಿದರು.

ಪಾಕಿಸ್ತಾನದ ಮೂರನೇ ಒಂದು ಭಾಗಕ್ಕಿಂತಲೂ (1/3) ಹೆಚ್ಚು ನೀರಿನಡಿಯಲ್ಲಿ – ತನ್ನ ಇತಿಹಾಸದಲ್ಲಿ ಅತ್ಯಂತ ಭೀಕರವಾದ ಪ್ರವಾಹಕ್ಕೆ ಸಿಲುಕಿದ  ಪಾಕಿಸ್ಥಾನ

0

ಪಾಕಿಸ್ತಾನದ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯವಾಗಿ ಭಾರೀ ಮಳೆಯಾಗುತ್ತದೆ, ಆದರೆ 1961 ರಿಂದ ಈಚೆಗೆ ದಾಖಲೆಗಳು ಪ್ರಾರಂಭವಾದಾಗಿನಿಂದ ಈ ವರ್ಷವು ಅತ್ಯಂತ ಭೀಕರವಾಗಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆಯ ಹೇಳಿದೆ. ದಕ್ಷಿಣ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ, ಆಗಸ್ಟ್ 30 ರವರೆಗೆ ಸರಾಸರಿಗಿಂತ 500 ಪ್ರತಿಶತದಷ್ಟು ಮಳೆಯಾಗಿದೆ.

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್ಎ) ಯ ಉಪಗ್ರಹ ಚಿತ್ರಗಳ ಪ್ರಕಾರ, ಪಾಕಿಸ್ತಾನದ ಇತಿಹಾಸದಲ್ಲಿ ಅದರ ಭೀಕರ ಪ್ರವಾಹದ ನಡುವೆ ಮೂರನೇ ಒಂದು ಭಾಗದಷ್ಟು ಹೆಚ್ಚು ನೀರಿನ ಅಡಿಯಲ್ಲಿದೆ. ಮಾರಣಾಂತಿಕ ಪ್ರವಾಹವು ದ್ವಿತೀಯ ವಿಪತ್ತುಗಳನ್ನು ಸೃಷ್ಟಿಸುವ ಬೆದರಿಕೆಯನ್ನುಂಟುಮಾಡುತ್ತದೆ, ನೀರು ಲಕ್ಷಾಂತರ ಎಕರೆ ಬೆಳೆಗಳನ್ನು ಆವರಿಸಿದ ನಂತರ ಮತ್ತು ನೂರಾರು ಸಾವಿರ ಜಾನುವಾರುಗಳನ್ನು ನಾಶಪಡಿಸಿದ ನಂತರ ಆಹಾರದ ಕೊರತೆಯಾಗಲಿದೆ ಎಂದು CNN ವರದಿ ಮಾಡಿದೆ.

ಧಾರಾಕಾರ ಮಾನ್ಸೂನ್ ಮಳೆಯು ವಾಡಿಕೆಗಿಂತ 10 ಪಟ್ಟು ಹೆಚ್ಚು ಸುರಿಯುತ್ತಿರುವುದರಿಂದ ಸಿಂಧೂ ನದಿಯು ಉಕ್ಕಿ ಹರಿಯುವಂತೆ ಮಾಡಿದೆ, ಪರಿಣಾಮವಾಗಿ ಹತ್ತಾರು ಕಿಲೋಮೀಟರ್ ಅಗಲದ ಉದ್ದವಾದ ಸರೋವರವನ್ನು ಸೃಷ್ಟಿಸಿದೆ.

ಪಾಕಿಸ್ತಾನವು ಅಭೂತಪೂರ್ವ ಪ್ರವಾಹದಿಂದ ತಂದ ಅವಳಿ ಆಹಾರ ಮತ್ತು ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆಕ್ಷನ್ ಎಗೇನ್ಸ್ಟ್ ಹಂಗರ್ ಎಂಬ ಚಾರಿಟಿ ಪ್ರಕಾರ, ಪ್ರವಾಹದ ಮೊದಲು ದೇಶದಲ್ಲಿ 27 ಮಿಲಿಯನ್ ಜನರಿಗೆ ಸಾಕಷ್ಟು ಆಹಾರ ಲಭ್ಯವಿರಲಿಲ್ಲ ಮತ್ತು ಈಗ ವ್ಯಾಪಕವಾದ ಹಸಿವಿನ ಅಪಾಯವು ಇನ್ನೂ ಹೆಚ್ಚು ಸನ್ನಿಹಿತವಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಜನರು ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಟೊಮೆಟೊ ಮತ್ತು ಈರುಳ್ಳಿಯಂತಹ ಮೂಲಭೂತ ವಸ್ತುಗಳ ಬೆಲೆ “ಗಗನಕ್ಕೇರಿದೆ” ಎಂದು ಪ್ರಧಾನಿ ಷರೀಫ್ ಆಗಸ್ಟ್ 30 ರಂದು ಹೇಳಿದರು.

WHO ಪಾಕಿಸ್ತಾನದ ಅತ್ಯಂತ ಕೆಟ್ಟ ಪ್ರವಾಹವನ್ನು “ಉನ್ನತ ಮಟ್ಟದ” ತುರ್ತುಸ್ಥಿತಿ ಎಂದು ವರ್ಗೀಕರಿಸಿದೆ, ವೈದ್ಯಕೀಯ ಸಹಾಯದ ಪ್ರವೇಶದ ಕೊರತೆಯಿಂದಾಗಿ ರೋಗವು ಶೀಘ್ರವಾಗಿ ಹರಡುವ ಎಚ್ಚರಿಕೆಯನ್ನು ನೀಡಿದೆ. ಪ್ರವಾಹದ ನಂತರ ಅತಿಸಾರ ರೋಗಗಳು, ಚರ್ಮದ ಸೋಂಕುಗಳು, ಉಸಿರಾಟದ ಸೋಂಕುಗಳು, ಮಲೇರಿಯಾ ಮತ್ತು ಡೆಂಗ್ಯೂಗಳ ಹೊಸ ಏಕಾಏಕಿ ಸಂಭವಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ,

ನೀರಿನಿಂದ ಹರಡುವ ರೋಗಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ. “ಜೂನ್ ಮಧ್ಯದಿಂದ 1,100 ಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಾವನ್ನಪ್ಪಿದ್ದಾರೆ, ಅವರಲ್ಲಿ ಸುಮಾರು 400 ಮಕ್ಕಳು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ತಿಳಿಸಿದೆ.

ವೇಗವಾಗಿ ಬಂದ ಟ್ರಕ್ ನಿಲ್ಲಿಸಿದ್ದ ಬಸ್ ಗೆ ಢಿಕ್ಕಿ – 4 ಸಾವು, 14 ಜನರಿಗೆ ಗಾಯ

0

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 3.30 ರ ಸುಮಾರಿಗೆ ವೇಗವಾಗಿ ಬಂದ ಟ್ರಕ್ ನಿಲ್ಲಿಸಿದ್ದ ಡಬಲ್ ಡೆಕ್ಕರ್‌ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.

ಬಸ್ ನೇಪಾಳದಿಂದ ಗೋವಾಕ್ಕೆ ಹೋಗುತ್ತಿದ್ದು, ಪಂಕ್ಚರ್ ಆದ ಟೈರ್ ಬದಲಾಯಿಸಲು ಬಸ್ಸನ್ನು ನಿಲ್ಲಿಸಿದ್ದಾಗ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ನಿಂತಿದ್ದ ನೇಪಾಳ-ಗೋವಾ ಬಸ್‌ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇತರರು ಗಾಯಗೊಂಡಿದ್ದಾರೆ. ನೇಪಾಳ-ಗೋವಾ ಬಸ್ ಪಂಕ್ಚರ್ ಆದ ಟೈರ್ ಬದಲಾಯಿಸಲು ನಿಂತಿದ್ದಾಗ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ 3:30 ರ ಸುಮಾರಿಗೆ ಘಟನೆ ನಡೆದಿದೆ.

ವೇಗವಾಗಿ ಬಂದ ಟ್ರಕ್‌ ಡಬ್ಬಲ್‌ ಡೆಕ್ಕರ್‌ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇತರರು ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ನೇಪಾಳ-ಗೋವಾ ಬಸ್ ಪಂಕ್ಚರ್ ಆದ ಟೈರ್ ಬದಲಾಯಿಸಲು ನಿಂತಿದ್ದಾಗ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ 3:30 ರ ಸುಮಾರಿಗೆ ಘಟನೆ ನಡೆದಿದೆ.

“ಪಂಕ್ಚರ್ ಆದ ಟೈರ್ ಬದಲಾಯಿಸಲು ಬಸ್ ನಿಲ್ಲಿಸಲಾಗಿತ್ತು ಮತ್ತು ಇನ್ನೊಂದು ವಾಹನ ಅದಕ್ಕೆ ಡಿಕ್ಕಿ ಹೊಡೆದಿದೆ. ಸುಮಾರು 14 ಜನರು ಗಾಯಗೊಂಡಿದ್ದಾರೆ. ಚಿಕಿತ್ಸೆ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ, ಇಬ್ಬರನ್ನು ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿದೆ. ಬಸ್‌ನಲ್ಲಿ ಸುಮಾರು 60 ಪ್ರಯಾಣಿಕರಿದ್ದರು. ಅವರನ್ನು ನೇಪಾಳಕ್ಕೆ ವಾಪಸ್‌ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ’’ ಎಂದು ಬಾರಾಬಂಕಿ ಹೆಚ್ಚುವರಿ ಎಸ್‌ಪಿ ಹೇಳಿದ್ದಾರೆ.

ವಿಶ್ವ ಆರ್ಥಿಕತೆ: ಬ್ರಿಟನ್ ನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ನೆಗೆದ ಭಾರತ 

0

ವಿಶ್ವ ಆರ್ಥಿಕತೆಯ ಶ್ರೇಯಾಂಕದಲ್ಲಿ ಬ್ರಿಟನ್ ನ್ನು ಹಿಂದಿಕ್ಕಿ ಭಾರತ ಐದನೇ ಸ್ಥಾನಕ್ಕೆ ತಲುಪಿದೆ. ಇಂಗ್ಲೆಂಡಿನಲ್ಲಿ ಪ್ರಧಾನ ಮಂತ್ರಿ ಚುನಾವಣೆ ನಡೆಯುತ್ತಿರುವುದರಿಂದ ಸ್ಥಾನಮಾನ ನಷ್ಟ ಸಂಭವಿಸಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆ.

ಜೀವನ ನಿರ್ವಹಣಾ ವೆಚ್ಚದ ಏರಿಕೆಯು ಬ್ರಿಟನನ್ನು ಬಾಧಿಸುತ್ತದೆ ಮತ್ತು ಭಾರತದ ಆರ್ಥಿಕತೆಯು ಸುಧಾರಣೆಯನ್ನು ಕಾಣುತ್ತದೆ ಎಂದು ಸಮೀಕ್ಷೆಯು ತಿಳಿಸಿದೆ. ಭಾರತವು  2021 ರ ಕೊನೆಯಲ್ಲಿ ಮತ್ತು 2022ರ ಆರಂಭದಲ್ಲಿ ಇಂಗ್ಲೆಂಡನ್ನು ದಾಟಿ ವಿಶ್ವದ ಐದನೇ-ದೊಡ್ಡ ಆರ್ಥಿಕತೆಯಾಯಿತು.

ಲೆಕ್ಕಾಚಾರವು US ಡಾಲರ್‌ಗಳನ್ನು ಆಧರಿಸಿದೆ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿಅಂಶಗಳ ಪ್ರಕಾರ ಭಾರತವು ಮೊದಲ ತ್ರೈಮಾಸಿಕದಲ್ಲಿ ತನ್ನ ಮುನ್ನಡೆಯನ್ನು ವಿಸ್ತರಿಸಿದೆ. ಅಂತರರಾಷ್ಟ್ರೀಯ ಶ್ರೇಯಾಂಕದಲ್ಲಿ ಬ್ರಿಟನಿನ ಕುಸಿತವು ಹೊಸ ಪ್ರಧಾನ ಮಂತ್ರಿಗೆ ಅನಪೇಕ್ಷಿತ ಹಿನ್ನಡೆಯಾಗಿದೆ.

ಕನ್ಸರ್ವೇಟಿವ್ ಪಕ್ಷದ ಸದಸ್ಯರು ಸೋಮವಾರ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತಾರೆ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಮಾಜಿ ಕುಲಪತಿ ರಿಷಿ ಸುನಕ್ ಅವರನ್ನು ಸೋಲಿಸುವ ನಿರೀಕ್ಷೆಯಿದೆ.

ಭಾರತದ ಆರ್ಥಿಕತೆಯು ಈ ವರ್ಷ 7% ಕ್ಕಿಂತ ಹೆಚ್ಚು ಬೆಳೆಯುವ ಮುನ್ಸೂಚನೆ ಇದೆ. ಹೊಂದಾಣಿಕೆಯ ಆಧಾರದ ಮೇಲೆ ಮತ್ತು ಸಂಬಂಧಿತ ತ್ರೈಮಾಸಿಕದ ಕೊನೆಯ ದಿನದಂದು ಡಾಲರ್ ವಿನಿಮಯ ದರವನ್ನು ಬಳಸಿಕೊಂಡು, ಮಾರ್ಚ್ ತ್ರೈಮಾಸಿಕದಲ್ಲಿ “ನಾಮಮಾತ್ರ” ನಗದು ಪರಿಭಾಷೆಯಲ್ಲಿ ಭಾರತೀಯ ಆರ್ಥಿಕತೆಯ ಗಾತ್ರವು $ 854.7 ಬಿಲಿಯನ್ ಡಾಲರ್ ಆಗಿತ್ತು. ಅದೇ ಆಧಾರದ ಮೇಲೆ, ಇಂಗ್ಲೆಂಡಿನ ಆರ್ಥಿಕತೆಯು $ 816 ಬಿಲಿಯನ್ ಡಾಲರ್ ಆಗಿತ್ತು.

ಕಲಾ ಸಂಶೋಧಕಿ ನೂಪುರ ಭ್ರಮರಿಯ ಸಂಪಾದಕಿ, ಪ್ರಾಚಾರ್ಯೆ ಡಾ.ಮನೋರಮಾ ಬಿ.ಎನ್ ಇವರ ದಶವರ್ಷಗಳ ನಿರಂತರ ಅಧ್ಯಯನದ ಕಲಾಕುಸುಮ ‘ಯಕ್ಷಮಾರ್ಗಮುಕುರ’ ಬಿಡುಗಡೆಗೆ ಸಿದ್ಧ

0

 

ಕಲಾ ಸಂಶೋಧಕಿ ನೂಪುರ ಭ್ರಮರಿಯ ಸಂಪಾದಕಿ, ಪ್ರಾಚಾರ್ಯೆ ಡಾ.ಮನೋರಮಾ ಬಿ.ಎನ್ ಇವರ ದಶವರ್ಷಗಳ ನಿರಂತರ ಅಧ್ಯಯನದ  ಕಲಾಕುಸುಮ ‘ಯಕ್ಷಮಾರ್ಗಮುಕುರ’

ಶ್ರೀ ಉಜಿರೆ ಅಶೋಕ ಭಟ್ಟರ ಸಂಚಾಲಕತ್ವದ ‘ಕುರಿಯ ವಿಠಲಶಾಸ್ತ್ರಿ ಸಾಂಸ್ಕ್ರತಿಕ ಪ್ರತಿಷ್ಠಾನ ರಿ.ಉಜಿರೆ’ ಇವರ ರಜತಪರ್ವ ಸಂಭ್ರಮ ನಿಮಿತ್ತವಾಗಿ ಪ್ರಕಾಶನದ ಕಲಾ ಸಂಶೋಧಕಿ ನೂಪುರ ಭ್ರಮರಿಯ ಸಂಪಾದಕಿ, ಪ್ರಾಚಾರ್ಯೆ ಡಾ.ಮನೋರಮಾ ಬಿ.ಎನ್ ಇವರ ದಶ ವರ್ಷಗಳ ನಿರಂತರ ಅಧ್ಯಯನದ ಕಲಾಕುಸುಮ ‘ಯಕ್ಷಮಾರ್ಗಮುಕುರ’ ಗ್ರಂಥದ ಲೋಕಾರ್ಪಣೆ, ಇದೇ ಬರುವ ಅಕ್ಟೋಬರ್ ಒಂದನೇ ತಾರೀಕು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ. ಡಿ. ವೀರೇಂದ್ರ ಹೆಗ್ಗಡೆ ಅವರ ಅನುಗ್ರಹ ಹಾಗೂ ಅಮೃತ ಹಸ್ತದಿಂದ ಕರ್ನಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಎಂ.ಎಸ್ ಮಹಾಬಲೇಶ್ವರ ಭಟ್  ಇವರ ಘನ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ.

ಬಹು ನಿರೀಕ್ಷೆಯ ಭಾರತೀಯ ರಂಗನಾಟ್ಯಪದ್ಧತಿಗಳ ಸಂಶೋಧನ/ಅಧ್ಯಯನ ಕೃತಿ; ಡಾ. ಮನೋರಮಾ ಬಿ ಎನ್ ಅವರಿಂದ ರಚಿಸಲ್ಪಟ್ಟ ಸುಮಾರು 900 ಪುಟಗಳ ಉದ್ಗ್ರಂಥ ‘ಯಕ್ಷಮಾರ್ಗಮುಕುರ’ ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆಯಿಂದ ಪ್ರಕಾಶನಗೊಂದು ಅನಾವರಣಗೊಳ್ಳುವುದಕ್ಕೆ ಸಿದ್ಧವಾಗುತ್ತಿದೆ.

ನವರಾತ್ರದ ಪರ್ವಕಾಲದ ನಡುವೆ ಒಕ್ಟೋಬರ್ 1, 2022 ನೆ ದಿನಾಂಕದಂದು ಸಂಜೆ,  ಧರ್ಮಸ್ಥಳದಲ್ಲಿ ಪೂಜ್ಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕರಕಮಲಗಳಿಂದ, ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷರು ಮತ್ತು ಇನ್ನೂ ಹಲವು ಗಣ್ಯರ ಸಮಕ್ಷಮದಲ್ಲಿ ಲೋಕಾರ್ಪಣಗೊಳ್ಳಲಿದೆ.

ಬಹುಶೃತ ವಿದ್ವಾಂಸರೂ ಶತಾವಧಾನಿಗಳೂ ಆದ ಡಾ. ಆರ್.ಗಣೇಶ್, ಹಿರಿಯ ಯಕ್ಷಗಾನ ವಿದ್ವಾಂಸರೂ ಸಂಶೋಧಕರೂ ಆದ ಡಾ.ಎಂ.ಪ್ರಭಾಕರ ಜೋಷಿ, ವಿದ್ವಾಂಸರೂ ರಂಗಕರ್ಮಿಗಳೂ ಆದ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಯಕ್ಷದಶಾವತಾರಿ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಶ್ರೀ ಕೆ.ಗೋವಿಂದ ಭಟ್ ಹಾಗೂ ನಾಟ್ಯಶಾಸ್ತ್ರ ಕೋವಿದೆ, ಭರತನಾಟ್ಯ ಪ್ರವೀಣೆ, ಸಂಶೋಧಕಿಯಾದ ಡಾ. ಶೋಭಾಶಶಿಕುಮಾರ್ ಇವರೆಲ್ಲರೂ 900 ಪುಟಗಳ ಈ ಅಧ್ಭುತ ಗ್ರಂಥದ ಬಗ್ಗೆ ತಮ್ಮ ಅವಲೋಕನವನ್ನು ಇಲ್ಲಿ ಮಂಡಿಸಿದ್ದಾರೆ.

ಪ್ರಕಟಣಾಪೂರ್ವ ಪ್ರತಿಗಳ ವಿವರಗಳಿಗೆ ಕರಪತ್ರವನ್ನು ಪರಿಶೀಲಿಸಿ.

ಸೂರಂಬೈಲಿನ ಶ್ರೀ ಗಣೇಶ್ ಮಂದಿರದಲ್ಲಿ ಯಕ್ಷಗಾನ ಪ್ರದರ್ಶನ – ಮೀನಾಕ್ಷಿ ಕಲ್ಯಾಣ ಮತ್ತು ಅಂಧಕಾಸುರ ಮೋಕ್ಷ

ಬದಿಯಡ್ಕದ ದಶಮಾನೋತ್ತರ ಸಂಸ್ಥೆ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಚೌತಿ ಹಬ್ಬದ ಸಂದರ್ಭದಲ್ಲಿ ಸೂರಂಬೈಲಿನ ಶ್ರೀ ಗಣೇಶ್ ಮಂದಿರದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು.

ಸವ್ಯಸಾಚಿ ಯಕ್ಷಗಾನ ಗುರುಗಳಾದ ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ಮೀನಾಕ್ಷಿ ಕಲ್ಯಾಣ ಪ್ರಸಂಗ ಮತ್ತು ಅಂಧಕಾಸುರ ಮೋಕ್ಷ ಪ್ರಸಂಗ ಪ್ರದರ್ಶಿಸಲಾಯಿತು.

ಪಾತ್ರವರ್ಗದಲ್ಲಿ ಮೀನಾಕ್ಷಿಯಾಗಿ ಅಭಿಜ್ಞ ಭಟ್ ಬೊಳುಂಬು, ಪದ್ಮಗಂಧಿನಿಯಾಗಿ ವರ್ಷ ಲಕ್ಷ್ಮಣ್, ಶೂರಸೇನನಾಗಿ ಮನ್ವಿತ್ ನಾರಾಯಣಮಂಗಲ, ನಾರದ ಮತ್ತು ಶಿವನಾಗಿ ಮೇಘನಾ ಕುಡಾಣ, ಮಂತ್ರಿ ಮತ್ತು ಅಂಧಕಾಸುರನಾಗಿ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ, ವಿಷ್ಣುವಾಗಿ ಉಪಾಸನಾ ಪಂಜರಿಕೆ, ಶಿವನಾಗಿ ನಂದಕಿಶೋರ ಮವ್ವಾರು, ಶಚಿಯಾಗಿ ಮನಸ್ವಿನಿ ನಾರಾಯಣಮಂಗಲ, ಶಿವಗಣಗಳಾಗಿ ಅಕ್ಷಿತ್, ದೀಕ್ಷಿತ್, ಮನೀಶ್, ಶ್ರೀವಿದ್ಯಾ, ಮನೀಶ್ ಜಿ ಪಿ, ತನ್ಮಯ್ ಹಾಗೂ ವಿಷ್ಣು ಇವರು ಪಾತ್ರಗಳಿಗೆ ಜೀವತುಂಬಿದರು.

ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಕಲ್ಲೂರಾಯ ರಂಜಿಸಿದರು. ಚೆಂಡೆ ಮದ್ದಳೆಗಳಲ್ಲಿ ಶಿವಶಂಕರ ಭಟ್ ಅಂಬೆಮೂಲೆ ಮತ್ತು ಗೋಪಾಲಕೃಷ್ಣ ನಾವಡ ಮಧೂರು ಕೈಚಳಕತೋರಿದರು. ನೇಪಥ್ಯದಲ್ಲಿ ಕೇಶವ ಕಿನ್ಯ, ರಾಜೇಂದ್ಫ್ರ ವಾಂತಿಚ್ಚಾಲು ಹಾಗೂ ಗಿರೀಶ್ ಕುಂಪಲ ಸಹಕರಿಸಿದರು.