Sunday, May 10, 2026
Home Blog Page 172

ನಿಷ್ಠಾವಂತ ಯುವ ಮದ್ದಳೆಗಾರ ಶ್ರೀ ರಾಜೇಶ ಆಚಾರ್ಯ ಮಡಂತ್ಯಾರು 

ಯಕ್ಷಗಾನದಲ್ಲಿ ಇಂದು ಅನೇಕ ಯುವ, ಉತ್ಸಾಹೀ ಮದ್ದಳೆಗಾರರು ಕಲಾಸೇವೆಯನ್ನು ಮಾಡುತ್ತಿರುವುದು ಸಂತಸದ ವಿಚಾರ. ಯಕ್ಷಗಾನದ ಹಿಮ್ಮೇಳ ವಿಭಾಗವನ್ನು ಮೆರೆಸುವ ಕಾರ್ಯವು ಇವರಿಂದ ನಡೆಯಲಿ. ಪ್ರಸ್ತುತ ವೃತ್ತಿ ಕಲಾವಿದನಾಗಿ ತಿರುಗಾಟ ನಡೆಸುತ್ತಿರುವ ವಾದನಕಾರರಲ್ಲಿ ಶ್ರೀ ರಾಜೇಶ ಆಚಾರ್ಯ ಮಡಂತ್ಯಾರು ಅವರೂ ಒಬ್ಬರು.

ನಿಷ್ಠಾವಂತ, ಯುವ ವಾದಕರಾದ  ಶ್ರೀ ರಾಜೇಶ ಆಚಾರ್ಯರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ತಮ್ಮ ಕರ್ತವ್ಯವನ್ನು ಮುಗಿಸಿ ತಮ್ಮ ಪಾಡಿಗೆ ತಾವಿರುತ್ತಾರೆ. ಪ್ರದರ್ಶನಕ್ಕೆ ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. 

ಕಟೀಲು ಮೇಳದ ಮದ್ದಳೆಗಾರ  ಶ್ರೀ ರಾಜೇಶ ಆಚಾರ್ಯರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ಪುಣ್ಕೆದೊಟ್ಟು ಎಂಬಲ್ಲಿ. 1977ನೇ ಇಸವಿ ಮೇ ಒಂದರಂದು ಶ್ರೀನಿವಾಸ ಆಚಾರ್ಯ ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರನಾಗಿ ಜನನ. ಇವರು ಓದಿದ್ದು ಹತ್ತನೇ ತರಗತಿ ವರೆಗೆ. 7ನೇ ತರಗತಿ ವರೆಗೆ ಗಾರ್ಡಿಯನ್ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಹತ್ತನೇ ತರಗತಿ ವರೆಗೆ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ.

ಅನಿವಾರ್ಯವಾಗಿ ಓದು ನಿಲ್ಲಿಸಬೇಕಾಗಿ ಬಂದಿತ್ತು.(ತಂದೆಯವರ ಅಸೌಖ್ಯತೆಯ ಕಾರಣ) ರಾಜೇಶರ ತಂದೆ ಶ್ರೀನಿವಾಸ ಆಚಾರ್ಯರು ತಮ್ಮ ಕುಲಕಸುಬನ್ನು ಮಾಡುತ್ತಿದ್ದರು. ಚಿನ್ನ, ಬೆಳ್ಳಿ, ಕಬ್ಬಿಣ ಮತ್ತು ಮರದ ಕೆಲಸಗಳನ್ನು ಬಲ್ಲವರಾಗಿದ್ದರು. ರಾಜೇಶರ ಅಣ್ಣಂದಿರ ಪೈಕಿ ಒಬ್ಬರಾದ ಶ್ರೀ ಜಗದೀಶ ಆಚಾರ್ಯರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. (ಹವ್ಯಾಸೀ) ಮತ್ತೊಬ್ಬ ಅಣ್ಣ ಶ್ರೀ ಜನಾರ್ದನ ಆಚಾರ್ಯ ಬಂಟ್ವಾಳದಲ್ಲಿ ಚಿನ್ನದ ಕೆಲಸವನ್ನು ಮಾಡುತ್ತಿದ್ದಾರೆ.

ಶ್ರೀ ರಾಜೇಶ ಆಚಾರ್ಯರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ವಿದ್ಯಾರ್ಥಿಯಾಗಿದ್ದಾಗ ಡೇರೆ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ಇವರಿಗೆ ಹೆಚ್ಚಿನ ಆಸಕ್ತಿ ಇದ್ದುದು ಹಿಮ್ಮೇಳದಲ್ಲಿ. ಬಾಲಕನಾಗಿರುವಾಗಲೇ ಯಕ್ಷಗಾನ ಚೆಂಡೆವಾದಕನಾಗಬೇಕೆಂಬ ಕನಸು ಕಂಡಿದ್ದರು. ತೆಂಕುತಿಟ್ಟಿನ ಹೆಸರಾಂತ ಮದ್ದಳೆಗಾರರಾದ ಶ್ರೀ ಕಡಬ ನಾರಾಯಣ ಆಚಾರ್ಯರು ಆಗ ಮಡಂತ್ಯಾರಿನಲ್ಲಿ ವಾಸವಾಗಿದ್ದರು. ಅವರು ಮನೆಯಲ್ಲಿ ಕಲಿಕಾಸಕ್ತರಿಗೆ ತರಬೇತಿಯನ್ನು ನೀಡುತ್ತಿದ್ದರು.

ಅಣ್ಣಂದಿರ ಪ್ರೋತ್ಸಾಹದಂತೆ ರಾಜೇಶ ಆಚಾರ್ಯರು ಕಡಬ ನಾರಾಯಣ ಆಚಾರ್ಯರಿಂದ ವಾದನ ಕ್ರಮವನ್ನು ಅಭ್ಯಸಿಸಿದರು. ಬಳಿಕ 2001ರಲ್ಲಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಮನೆಗೆ ತೆರಳಿ ತರಬೇತಿಯನ್ನು ಪಡೆದರು. ಶ್ರೀ ರಾಜೇಶರಿಗೆ ಚೆಂಡೆ ನುಡಿಸುವುದರಲ್ಲಿ ಹೆಚ್ಚಿನ ಆಸಕ್ತಿ. ಹಾಗೆಂದು ಮದ್ದಳೆಯನ್ನೂ ಚೆನ್ನಾಗಿ ಬಾರಿಸಬಲ್ಲರು. ಮೊದಲಾಗಿ ರಂಗವೇರಿ ಚೆಂಡೆ ಬಾರಿಸಿದ್ದು 2003ರಲ್ಲಿ. ಬಳಿಕ ಊರ ಪರವೂರ ಕಾರ್ಯಕ್ರಮಗಳಲ್ಲಿ ಭಾಗಿ.

ಕಡಬ ನಾರಾಯಣ ಆಚಾರ್ಯರ ಪುತ್ರ ಶ್ರೀ ವಿನಯ ಆಚಾರ್ಯರು ಪ್ರದರ್ಶನಗಳಿಗೆ ರಾಜೇಶ್ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಊರ ಪರವೂರ ಪ್ರದರ್ಶನಗಳಲ್ಲಿ ಚೆಂಡೆ ಮದ್ದಳೆ ನುಡಿಸಿ ಅನುಭವ ಗಳಿಸಿಕೊಂಡರು. ಈ ಸಂದರ್ಭದಲ್ಲಿ ಅಣ್ಣ ಜನಾರ್ದನ ಆಚಾರ್ಯರಿಂದ ಬಂಟ್ವಾಳದಲ್ಲಿ ಚಿನ್ನದ ಕೆಲಸವನ್ನೂ ಕಲಿತಿದ್ದರು. ಆ ಕೆಲಸದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಅಲ್ಲದೆ ಕಲಾವಿದರು ರಜೆ ಮಾಡಿದಾಗ ಅನಿವಾರ್ಯಕ್ಕೆ ಕಟೀಲು, ಬಪ್ಪನಾಡು, ಸುಂಕದಕಟ್ಟೆ, ತಲಕಳ ಮೇಳಗಳಲ್ಲಿ ಕಲಾ ಸೇವೆಯನ್ನು ಮಾಡುತ್ತಾ ಬಂದರು. ಜತೆಗೆ ಚಿನ್ನದ ಕೆಲಸವನ್ನೂ ಮಾಡುತ್ತಿದ್ದರು. ಶ್ರೀ ರಾಜೇಶ್ ಆಚಾರ್ಯರು ವೃತ್ತಿ ಕಲಾವಿದರಾಗಿ ಮೇಳದ ತಿರುಗಾಟ ಆರಂಭಿಸಿದ್ದು 2011ರಲ್ಲಿ. ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರ ಹೇಳಿಕೆಯಂತೆ ಮೇಳಕ್ಕೆ ಸೇರಿದ್ದರು. ಕಳೆದ ಹನ್ನೆರಡು ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪ್ರಸಾದ್ ಬಲಿಪ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಅಂಡಾಲ ದೇವಿಪ್ರಸಾದ್ ಶೆಟ್ಟಿ, ಬೊಂದೇಲ್ ಸತೀಶ್ ಶೆಟ್ಟಿ, ಮೋಹನ ಶಿಶಿಲ, ದೇವಿಪ್ರಸಾದ್ ಆಳ್ವ ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದಾರೆ. ಚೆಂಡೆ ಮದ್ದಳೆಗಾರಿಕೆಯಲ್ಲಿ ಮಿಜಾರು ಮೋಹನ ಶೆಟ್ಟಿಗಾರ್, ಮುರಾರಿ ಕಡಂಬಳಿತ್ತಾಯ, ಮಿಜಾರು ದಯಾನಂದ ಶೆಟ್ಟಿಗಾರ್, ಮೊದಲಾದವರ ಒಡನಾಟ, ಸಹಕಾರವು ಇವರಿಗೆ ದೊರಕಿದೆ.

ಪೂಂಜರೊಂದಿಗೆ ತಿರುಗಾಟ ಮರೆಯಲಾಗದ ಅನುಭವವೆಂದು ಶ್ರೀ ರಾಜೇಶರು ಅದನ್ನು ನೆನಪಿಸುತ್ತಾರೆ. ಕಲಿಯುತ್ತಾ ಬೆಳೆಯುವಾಗ ಗುರುಗಳ ಪುತ್ರ ಶ್ರೀ ವಿನಯ ಆಚಾರ್ಯರ ಸಹಕಾರವೂ ದೊರೆತಿತ್ತು. ಒಂದನೇ ಮೇಳದಲ್ಲಿ ಅಂಡಾಲ ದೇವಿಪ್ರಸಾದ ಶೆಟ್ರು ಮತ್ತು ಮುರಾರಿ ಕಡಂಬಳಿತ್ತಾಯರ ಪ್ರೋತ್ಸಾಹವೂ ಸಿಕ್ಕಿತ್ತು. ಮಳೆಗಾಲದಲ್ಲಿ ಶ್ರೀ ರಾಜೇಶರು ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನೀ ಬಳಗವು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಎರಡು ಬಾರಿ ಭಾಗವಹಿಸಿದ್ದಾರೆ.

ವಿದ್ಯಾ ಕೋಳ್ಯೂರು ಅವರ “ಯಕ್ಷ ಮಂಜೂಷ” ತಂಡದಲ್ಲಿದ್ದು ದೆಹಲಿ, ಹಿಮಾಚಲ ಪ್ರದೇಶದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಶ್ರೀ ಶರತ್ ಕುಮಾರ್ ಕದ್ರಿ ಅವರ ಸಹಕಾರ, ಪ್ರೋತ್ಸಾಹವೂ ಇತ್ತು. ಶರತ್ ಅವರ ಹವ್ಯಾಸೀ ಬಳಗ ಕದ್ರಿ ತಂಡದ ಸದಸ್ಯನಾಗಿ ಕರ್ನಾಟಕದ ಹಲವೆಡೆ ನಡೆದ ಪ್ರದರ್ಶನಗಳಲ್ಲಿ ಚೆಂಡೆ ನುಡಿಸಿದ್ದರು. ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚಿತವಾಗಿಯೇ ಬಂದು ಪೂರ್ವಸಿದ್ಧತೆಗಳೊಂದಿಗೆ ರಂಗವೇರುವ ನಿಷ್ಠಾವಂತ ಹಿಮ್ಮೇಳವಾದಕ ಶ್ರೀ ರಾಜೇಶ್ ಆಚಾರ್ಯ ಮಡಂತ್ಯಾರು.

ಇವರ ಪತ್ನಿ ಶ್ರೀಮತಿ ಜಯರೇಖಾ ಗೃಹಣಿ. (2017ರಲ್ಲಿ ವಿವಾಹ) ರಾಜೇಶ್, ಜಯರೇಖಾ ದಂಪತಿಗಳಿಗೆ ಓರ್ವ ಪುತ್ರ. ಮಾ| ರಜತ್ ಆರ್. ಆಚಾರ್ಯ (ನಾಲ್ಕು ವರ್ಷ ವಯಸ್ಸು) ಮಾ| ರಜತ್ ಗೆ ಅತ್ಯುತ್ತಮ ಭವಿಷ್ಯವು ದೊರಕಲಿ. ಶ್ರೀ ರಾಜೇಶ್ ಆಚಾರ್ಯರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ದೊರೆಯಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಬಣ್ಣದ ವೇಷಧಾರಿ ಚಂದ್ರಗಿರಿ ಅಂಬು ಅವರು ವಾಸವಿದ್ದ ಮನೆ ಈಗ ಹೇಗಿದೆ? – ರಂಗಸ್ಥಳದಲ್ಲಿ ಅಂಬು ಅವರ ಗತವೈಭವವನ್ನು ನೆನಪಿಸುವ ಸನ್ಮಾನಪತ್ರಗಳನ್ನು ಗೋಡೆಗಳಲ್ಲಿ ತೂಗುಹಾಕಿದ ಪುಟ್ಟ ಮನೆ ಕಲಾಸ್ಮಾರಕವಾಗಲು ಯೋಗ್ಯ 

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಬಣ್ಣದ ವೇಷಧಾರಿ ಚಂದ್ರಗಿರಿ ಅಂಬು ಅವರು ವಾಸವಿದ್ದ ನಿವಾಸ ಈಗ ಹೇಗಿದೆ? – ರಂಗಸ್ಥಳದಲ್ಲಿ ಅಂಬು ಅವರ ಗತವೈಭವವನ್ನು ನೆನಪಿಸುವ ಸನ್ಮಾನಪತ್ರಗಳನ್ನು ಗೋಡೆಗಳಲ್ಲಿ ತೂಗುಹಾಕಿದ ಪುಟ್ಟ ಮನೆ ಕಲಾಸ್ಮಾರಕವಾಗಲು ಯೋಗ್ಯ ಎಂದು ಹೇಳಿದರೆ ಅದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. 

ಒಂದು ಕಾಲದಲ್ಲಿ ತೆಂಕುತಿಟ್ಟಿನ ಬಣ್ಣದ ವೇಷದ ಸಾಮ್ರಾಜ್ಯದ ಅಧಿಪತಿಯಾಗಿದ್ದ ಚಂದ್ರಗಿರಿ ಅಂಬು ಕೊನೆಯ ದಿನಗಳು ಅಷ್ಟೇನೂ ಸುಖಮಯವಾಗಿರಲಿಲ್ಲ. ಇರಲು ಪುಟ್ಟದಾದ ಒಂದು ಹಂಚಿನ ಮಾಡಿನ ಮನೆ. ಅದೂ ಆಗಾಗ ದುರಸ್ತಿಯನ್ನು ಕಾಣುತ್ತಿತ್ತು.

ಅಂಬು ಅವರ ನಿವೃತ್ತ ಜೀವನದ ಕೊನೆಯ ವರ್ಷಗಳಲ್ಲಿಯೂ ಶ್ರೀ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಮನೆಯನ್ನು ದುರಸ್ತಿಗೊಳಿಸಲಾಗಿತ್ತು ಎಂದು ಹತ್ತಿರದ ಮನೆಯವರು ಈಗಲೂ ಹೇಳುತ್ತಿದ್ದುದನ್ನು ನಾನು ಇಂದು ಕೇಳಿಸಿಕೊಂಡೆ. ನಿವೃತ್ತಿಯಾದ ನಂತರವೂ ಶ್ರೀ ಧರ್ಮಸ್ಥಳ ಕ್ಷೇತ್ರ ಮತ್ತು ಖಾವಂದರು ಸಹಾಯಹಸ್ತವನ್ನು ನೀಡುತ್ತಿದ್ದರು. 

ಅದಿರಲಿ, ಅತಿ ಸಣ್ಣವನಿದ್ದಾಗ ನಾನು ಅವರ ಬಣ್ಣದ ವೇಷವನ್ನು ನೋಡಿದ ನೆನಪು ನನಗಿತ್ತು. ಹಾಗೆಂದೂ ಅವರ ಎಲ್ಲ ವೇಷಗಳನ್ನು ನೋಡಿದವನು ನಾನಲ್ಲ. ಮೂರೋ ನಾಲ್ಕೋ ವೇಷಗಳನ್ನು ಮಾತ್ರ ನೋಡಿದ್ದೆನಷ್ಟೆ. ಅಷ್ಟು ಪಾತ್ರಗಳಲ್ಲೇ ಅವರು ನನ್ನ ಮನಸ್ಸಿನ ಮೇಲೆ ಗಾಢ ಪ್ರಭಾವವನ್ನು ಬೀರಿದ್ದರು.

ಸಣ್ಣ ವಯಸ್ಸಿನವರಾಗಿದ್ದುದರಿಂದ ಆ ಸಮಯದಲ್ಲಿ ಆಗಾಗ ಯಕ್ಷಗಾನ ಪ್ರದರ್ಶನಗಳಿಗೆ ಹೋಗುವ ಅನುಕೂಲವೂ ಇಲ್ಲ, ಅವಕಾಶವೂ ಇರಲಿಲ್ಲ. ಆದರೆ ನನಗೆ ಮತ್ತೆ ಚಂದ್ರಗಿರಿ ಅಂಬು ಬಗ್ಗೆ ಆಗಿಲ್ಲದ ಕುತೂಹಲ ಈಗ ಮೂಡಿತು. ಯಾಕೆಂದರೆ ನಾನು ಆಗಾಗ ಭೇಟಿ ನೀಡುತ್ತಿದ್ದ ಕಾಂಞಗಾಂಡ್ ಪರಿಸರದಲ್ಲಿಯೇ ಅವರ ಮನೆಯಿದೆ ಎಂದು ಗೊತ್ತಿತ್ತು.

ರಂಗದಲ್ಲಿ ಅಬ್ಬರದ ರಾಕ್ಷಸ ಪಾತ್ರಧಾರಿಯಾಗಿದ್ದರೂ ಮನೆಯಲ್ಲಿ ಸಾಧು ಸ್ವಭಾವದ ಸಾತ್ವಿಕರಾಗಿದ್ದರು ಎಂಬುದನ್ನು ಕೇಳಿ ಬಲ್ಲೆವು. ಅಂತಹಾ ಸಾತ್ವಿಕರ ಮನೆ ಹೇಗಿದೆ ಎಂಬ ಕುತೂಹಲದಿಂದ ದಾರಿ ಹುಡುಕಿಕೊಂಡು ಹೋದೆ. ಮನೆಯೇನೂ ಸಿಕ್ಕಿತು.  ಆದರೆ ಈಗ ಆ ಮನೆಯಲ್ಲಿ ಯಾರೂ ವಾಸವಿರಲಿಲ್ಲ.

ಚಂದ್ರಗಿರಿ ಅಂಬು ಅವರ ಮನೆಯ ಮುಂದೆ ಲೇಖಕರು 

ಆದರೂ ಹತ್ತಿರದ ಮನೆಯ ಸುರೇಶ್ ಎಂಬವರು ಸಿಕ್ಕಿದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ.  ಅವರಲ್ಲಿ ಮಲಯಾಳದಲ್ಲಿ ಮಾತನಾಡಿ ಕೇಳಿ ಅನುಮತಿಯನ್ನು ಪಡೆದು ಮನೆಯ ಹತ್ತಿರ ಹೋದೆ. ಮನೆಗೆ ಬೀಗ ಹಾಕಲಾಗಿತ್ತು.

ಆದರೂ ಹೊರಜಗಲಿಯಲ್ಲಿ ನೋಡಿದಾಗ ಸಾಲು ಸಾಲು ಸನ್ಮಾನಪತ್ರಗಳು ಕಾಣಿಸಿತು. ಅಂಬು ಅವರ  ಒಂದೆರಡು ವೇಷದ ಫೋಟೋಗಳೂ ಕಂಡಿತು. ಆ ಫೋಟೋಗಳನ್ನು ನೋಡಿದಾಗ ಚಂದ್ರಗಿರಿ ಅಂಬು ಈಗಲೂ ನಮ್ಮ ಜೊತೆಯಲ್ಲಿ ಜೀವಂತವಾಗಿ ಇರುವಂತೆ ಭಾಸವಾಯಿತು. ಕೆಲವು ಕ್ಷಣಗಳ ಕಾಲ ಅಲ್ಲಿದ್ದೆ.

ಯಾಕೋ ಮನಸ್ಸು ಭಾರವಾಯಿತು. ಕೆಲವು ಫೋಟೋಗಳನ್ನು ಹೊಡೆದುಕೊಂಡು ಭಾರವಾದ ಮನಸ್ಸಿನಿಂದ ಹಿಂದಿರುಗಿದೆ. ನಿಜವಾಗಿಯೂ ಚಂದ್ರಗಿರಿ ಅಂಬು ಅವರು ಸಾಯಲಿಲ್ಲ. ಅವರು ನಮ್ಮೆಲ್ಲರ ಮನಸ್ಸುಗಳಲ್ಲಿ ಜೀವಂತ ಇದ್ದಾರೆ.

ಅವರನ್ನು ಇನ್ನೂ ಜೀವಂತವಾಗಿಡಲು ಅವರ ಮನೆಯನ್ನು ಕಲಾಸ್ಮಾರಕವನ್ನಾಗಿ ನಿರ್ಮಿಸಬೇಕು. ಹೇಳಿದಷ್ಟು ಸುಲಭ ಅಲ್ಲ. ನಮ್ಮಂತಹಾ ಸಾಮಾನ್ಯ ಮನುಷ್ಯರಿಂದ ಸಾಧ್ಯವಿಲ್ಲ. ದೊಡ್ಡವರೇ ಮನಸ್ಸು ಮಾಡಬೇಕು. ಸರಕಾರ, ಸ್ಥಳೀಯ ಆಡಳಿತ, ಕುಟುಂಬದವರೇ ಮೊದಲಾದವರು ಕೈಜೋಡಿಸಬೇಕು. 

ಲೇಖಕ: ಮನಮೋಹನ್ ವಿ.ಎಸ್ – 9164828688

ಲೇಖಕ: ಮನಮೋಹನ್ ವಿ.ಎಸ್ 

ವಿದ್ಯೋದಯ ಪದವಿ ಪೂರ್ವ ಕಾಲೇಜು ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ–ಉಪನ್ಯಾಸ ಕಾರ್ಯಕ್ರಮ

0

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸ0ಸ್ಥೆ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಉಡುಪಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಮತ್ತು ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು 29 ಸೆಪ್ಟೆಂಬರ್ 2022ರಂದು ಆಯೋಜಿಸಲಾಗಿತ್ತು.

ಶ್ರೀಮತಿ ಶರ್ಮಿಳಾ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರು ಕಾರ್ಯಕ್ರಮ ಉದ್ಘಾಟಿಸಿ, ಪ್ರಸ್ತಾವನೆಗೈದರು. ಡಾ| ಸುನಿಲ್, ವೈದ್ಯರು, ಎ.ವಿ. ಬಾಳಿಗ ಆಸ್ಪತ್ರ‍್ರೆ, ಉಡುಪಿ ಇವರು ಮಾದಕದ್ರವ್ಯ ವ್ಯಸನ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಇದರ ವಿಷ ವರ್ತುಲದೊಳಗೆ ಸಿಗದಂತೆ ಜಾಗರೂಕರಾಗಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್‌ಕುಮಾರ್ ಸ್ವಾಗತಿಸಿ ಧನ್ಯವಾದ ಅರ್ಪಿಸಿದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶರಾದ ಶ್ರೀ ಮಾರುತಿ, ಮತ್ತು ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ರಂಜನಾ ಕೆ. ಉಪಸ್ಥಿತರಿದ್ದರು.

ಪುಸ್ತಕಗಳ ರಚನೆಯಲ್ಲಿ ಎಚ್ಚರಿಕೆ ಅವಶ್ಯ: ಡಾ. ಕೆ. ಕಮಲಾಕ್ಷ
ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಗೋಷ್ಠಿಗಳು

0

ಪುತ್ತೂರು: ಪುಸ್ತಕಗಳು ಓದುಗರ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಲೇಖಕರು ಪುಸ್ತಕವನ್ನು ಎಚ್ಚರಿಕೆಯಿಂದ ರಚಿಸಬೇಕಾದ ಅವಶ್ಯಕತೆಯಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿಯಲ್ಲಿ ನಾಲ್ಕು ನೂತನ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.


ಬರವಣಿಗೆ ಕ್ರೀಯೆ ಹಲವಾರು ಹಂತಗಳನ್ನು ಒಳಗೊಂಡಿದ್ದು, ಇವುಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಾಗ ಉತ್ತಮ ಕೃತಿಯನ್ನು ರಚಿಸಲು ಸಾಧ್ಯ ಎಂದು ಹೇಳಿದರು.
ರಮೇಶ್ ಉಳಯ ಅವರು ‘ಮಕ್ಕಳ ಸಾಹಿತ್ಯ- ಹೊಸ ಕಾಲದ ಗದ್ಯ’ ವಿಷಯ ಮಂಡಿಸಿ, ಹಿಂದಿನ ಜಾನಪದ ಗದ್ಯ ಪದ್ಯ ಹಾಗೂ ಇತ್ತೀಚಿನ ದಿನಗಳಲ್ಲಿರುವ ಮಕ್ಕಳ ಅಭಿರುಚಿಗಳ ಮಾಹಿತಿ ನೀಡಿದರು.
ರಾಧೇಶ್ ತೋಳ್ಪಾಡಿ ಅವರು ‘ಮಕ್ಕಳ ಕಾವ್ಯದಲ್ಲಿ ಇತ್ತೀಚಿನ ಒಲವುಗಳು’ ವಿಚಾರ ಮಂಡನೆ ಮಾಡಿ ಕಾಲದಿಂದ ಕಾಲಕ್ಕೆ ಮಕ್ಕಳ ಸಾಹಿತ್ಯದಲ್ಲಿ ಆಗಿರುವ ಬದಲಾವಣೆಗಳನ್ನು ಉಲ್ಲೇಖಿಸಿದರು. ತಿರುಮಲೇಶ್ ಅವರು ಬರೆದಿರುವ 10 ಕವನ ಸಂಕಲಗಳಿ0ದ ಕೆಲ ಮಕ್ಕಳ ಸಾಹಿತ್ಯದ ಗೀತೆಗಳ ವಾಚನ ಮಾಡಿದರು.


ಡಾ. ಕೆ. ಕಮಲಾಕ್ಷ ಅವರು ಮಿತ್ತೂರು ವಿಶ್ವನಾಥ ಕುಲಾಲ್ ಬರೆದ ಕವನ ಸಂಕಲನ ನಾಲ್ಕಾಣೆ ನಾಣ್ಯ, ಮಲ್ಲೇಶಯ್ಯ ಹೆಚ್.ಎಂ. ಅವರ ಭರವಸೆಯೇ ಬಾಳಿನ ಬೆಳಕು, ಛಲ ಬಿಡದ ಹುಡುಗಿ, ಮನಸ್ಸಿದ್ದೆಡೆ ಮಾರ್ಗ ನಾಟಕಗಳು, ಶಾಂತ ಕುಂಟಿನಿ ಅವರು ಬರೆದ ಕವನ ಸಂಕಲನ ಬಿಡುಗಡೆ ಮಾಡಿದರು.
ಸಮಾವೇಶದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಎಚ್.ಜಿ., ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಉಪಸ್ಥಿತರಿದ್ದರು.
ಗೋಷ್ಠಿಯನ್ನು ಡಾ. ಪೀಟರ್ ವಿಲ್ಸನ್ ನಿರೂಪಿಸಿದರು. ಪುತ್ತೂರು ಉಮೇಶ್ ನಾಯಕ್ ಸ್ವಾಗತಿಸಿ, ಕುಸುಮ್‌ರಾಜ್ ವಂದಿಸಿದರು. ಶ್ರುತಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.


ಯುವ ಸಮಾವೇಶ:
ಬೆಳಗ್ಗೆ ‘ನನ್ನ ಮೆಚ್ಚಿನ ಸಾಹಿತ್ಯ’ ವಿಚಾರದಲ್ಲಿ ಯುವ ಸಮಾವೇಶ ನಡೆಯಿತು.
ಸಾಹಿತಿ ಅನಘಾ ಎ. ಮಾತನಾಡಿ, ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಓದುವವರ ಅಭಿರುಚಿ ಹಿಂದಿಗೂ, ಈಗಿನ ಕಾಲಕ್ಕೂ ಬದಲಾಗಿದೆ. ಇಂದಿನ ದಿನಗಳಲ್ಲಿ ಯುವಜನತೆ ತಾವು ಅಭಿರುಚಿ ಹೊಂದಿರುವ, ವಾಸ್ತವತೆ ಹೊಂದಿರುವ ವಿಚಾರಗಳನ್ನು ಓದುತ್ತಿದ್ದಾರೆ ಎಂದು ಹೇಳಿದರು.


ವಿದ್ಯಾರ್ಥಿಗಳಾದ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಧನ್ಯಶ್ರೀ, ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೇಘಾ ಡಿ., ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಖತೋಜತಿಲ್ ದಿಲ್ಶಾನಾ ತಮ್ಮ ಅಭಿಪ್ರಾಯ ಮಂಡಣೆ ಮಾಡಿದರು.
ಸಮಾವೇಶದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಎಚ್.ಜಿ., ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತರಿದ್ದರು.


ಉಪನ್ಯಾಸಕ ಗಿರೀಶ್ ಭಟ್ ನಿರೂಪಿಸಿದರು. ಚಂದ್ರಕಾ0ತ ಗೋರೆ ಸ್ವಾಗತಿಸಿ, ಸೌಂದರ್ಯಲಕ್ಷ್ಮಿ  ವಂದಿಸಿದರು. ಜಯಂತಿ ಪಿ. ಕಾರ್ಯಕ್ರಮ ನಿರ್ವಹಿಸಿದರು.


ಚಿಂತನ, ಉದಯರಾಗ:
ಬೆಳಗ್ಗೆ ಚಿಂತನ ಕಾರ್ಯಕ್ರಮ ನಡೆದಿದ್ದು, ಚಿಂತಕ ಹಾಗೂ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಆತ್ಮವಿಶ್ವಾಸದ ಕುರಿತು ಮಾತನಾಡಿ, ವಿದ್ಯಾರ್ಥಿಗಳು ತಮ್ಮೊಳಗಿನ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗಿದಾಗ ಯಶಸ್ಸು ಸಾಧಿಸಲು ಸಾಧ್ಯ. ಅದೇ ರೀತಿ ಆತ್ಮವಿಶ್ವಾಸವನ್ನು ಸಮಾಜ ಹಾಗೂ ರಾಷ್ಟ್ರಕ್ಕಾಗಿ ಜೀವನ ಮುಡಿಪಾಗಿಡಬೇಕು ಎಂದರು.


ಉದಯರಾಗ ಭಾವಗೀತೆ ಗಾಯನ ಕಾರ್ಯಕ್ರಮದಲ್ಲಿ ಕಾರುಣಾಳು ಬಾ ಬೆಳಕೆ, ದೀಪವು ನಿನ್ನದೆ ಗಾಳಿಯೂ ನಿನ್ನದೆ, ಕಾಣದ ಕಡಲಿಗೆ ಹಂಬಲಿಸಿದೆ ಮನ, ಲೋಕದ ಕಣ್ಣಿಗೆ ರಾಧೆಯೂ ಕೂಡ ಮೊದಲಾದ ಗೀತೆಗಳನ್ನು ಹಾಡಿದರು. ಉಪನ್ಯಾಸಕಿ ಸುಚೇತರತ್ನ ಕಾರ್ಯಕ್ರಮ ನಿರೂಪಿಸಿದರು.

A video of a minor girl being gang-raped by 8 people has gone viral

0

A video of 8 people gang-raping a minor girl has gone viral. A minor girl was gang-raped by eight people in Rajasthan’s Alwar district.

The accused had extorted money from the 16-year-old girl by threatening to release the video of the act. A minor girl in Rajasthan’s Alwar district was gang-raped by eight youths in their 20s and blackmailed her for Rs 50,000.

According to the police, the accused obtained private pictures of a 16-year-old girl from Kishangarh Bus Police Station in the district and blackmailed her saying that they would make the pictures public if they did not pay Rs 50,000.

Later she was gang-raped by eight people including the main accused in the case. After the incident, the minor girl’s brother filed a complaint on Wednesday.

On December 31, 2021, the prime accused, identified as Sahil, called his sister to a nearby place and told her that he had obtained some private pictures of the minor girl and if she did not come, he would make them public.

When the 8th class student reached the spot, eight men forcibly undressed her, sexually harassed her and made a video of the act. The accused started extorting money from the victim and threatened and raped her many times.

Between April and June this year, the accused extorted Rs 50,000 from the minor. But when the girl failed to pay more money, the accused circulated the video on local social media groups.

“An FIR has been registered under Section 376D of the Indian Penal Code (IPC) and the Protection of Children from Sexual Offenses (POCSO) Act. On the face of it, the allegations appear to be true,” Kishangarh Boss Circle Deputy Superintendent of Police (DSP) Atul Agra said.

He said that teams have been formed to find the absconding accused. More details will be revealed after arresting the accused, he said.

ಅಪ್ರಾಪ್ತ ಬಾಲಕಿಯ ಮೇಲೆ  8 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಡಿಯೋ ವೈರಲ್

0

ಅಪ್ರಾಪ್ತ ಬಾಲಕಿಯ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಕೃತ್ಯದ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿ ಆರೋಪಿಗಳು 16 ವರ್ಷದ ಬಾಲಕಿಯಿಂದ ಹಣ ವಸೂಲಿ ಮಾಡಿದ್ದರು. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಅಪ್ರಾಪ್ತ ಬಾಲಕಿಯ ಮೇಲೆ ಎಂಟು ಮಂದಿ 20 ರ ವಯಸ್ಸಿನ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆಕೆಗೆ ಬ್ಲಾಕ್ ಮೇಲ್ ಮಾಡುವ ಮೂಲಕ 50,000 ರೂ. ವಸೂಲಿ ಮಾಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳು ಜಿಲ್ಲೆಯ ಕಿಶನ್‌ಗಢ್ ಬಸ್ ಪೊಲೀಸ್ ಠಾಣೆ ವ್ಯಾಪ್ತಿಯ 16 ವರ್ಷದ ಬಾಲಕಿಯ ಖಾಸಗಿ ಚಿತ್ರಗಳನ್ನು ಪಡೆದುಕೊಂಡಿದ್ದಾರೆ ಮತ್ತು 50,000 ರೂಪಾಯಿಗಳನ್ನು ನೀಡದಿದ್ದರೆ ಚಿತ್ರಗಳನ್ನು ಸಾರ್ವಜನಿಕಗೊಳಿಸುವುದಾಗಿ ಹೇಳಿ ಬ್ಲಾಕ್‌ಮೇಲ್ ಮಾಡಿದ್ದಾರೆ.

ನಂತರ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಎಂಟು ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಘಟನೆಯ ನಂತರ ಅಪ್ರಾಪ್ತ ಬಾಲಕಿಯ ಸಹೋದರ ಬುಧವಾರ ದೂರು ದಾಖಲಿಸಿದ್ದಾರೆ.

ಡಿಸೆಂಬರ್ 31, 2021 ರಂದು, ಸಾಹಿಲ್ ಎಂದು ಗುರುತಿಸಲಾದ ಪ್ರಮುಖ ಆರೋಪಿಯು ತನ್ನ ಸಹೋದರಿಯನ್ನು ಹತ್ತಿರದ ಸ್ಥಳಕ್ಕೆ ಕರೆದು, ಅಪ್ರಾಪ್ತ ಬಾಲಕಿಯ ಕೆಲವು ಖಾಸಗಿ ಚಿತ್ರಗಳನ್ನು ಪಡೆದುಕೊಂಡಿದ್ದೇನೆ ಮತ್ತು ಅವಳು ಬರದಿದ್ದರೆ, ಅದನ್ನು ಸಾರ್ವಜನಿಕಗೊಳಿಸುವುದಾಗಿ ತಿಳಿಸಿದನು.

8ನೇ ತರಗತಿಯ ವಿದ್ಯಾರ್ಥಿನಿ ಸ್ಥಳಕ್ಕಾಗಮಿಸಿದಾಗ ಎಂಟು ಮಂದಿ ಆಕೆಯನ್ನು ಬಲವಂತವಾಗಿ ಬಟ್ಟೆ ಬಿಚ್ಚಿ, ಲೈಂಗಿಕ ಕಿರುಕುಳ ನೀಡಿ ಕೃತ್ಯದ ವಿಡಿಯೋ ಮಾಡಿದ್ದಾರೆ. ಆರೋಪಿಗಳು ಸಂತ್ರಸ್ತೆಯಿಂದ ಹಣ ವಸೂಲಿ ಮಾಡಲು ಆರಂಭಿಸಿದ್ದು, ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ.

ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ಆರೋಪಿಗಳು ಅಪ್ರಾಪ್ತರಿಂದ 50,000 ರೂ. ವಸೂಲಿ ಮಾಡಿದ್ದಾರೆ. ಆದರೆ ಹುಡುಗಿ ಹೆಚ್ಚಿನ ಹಣವನ್ನು ಪಾವತಿಸಲು ವಿಫಲವಾದಾಗ, ಆರೋಪಿಗಳು ಸ್ಥಳೀಯ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.

“ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376D ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮೇಲ್ನೋಟಕ್ಕೆ, ಆರೋಪಗಳು ನಿಜವೆಂದು ತೋರುತ್ತಿದೆ” ಎಂದು ಕಿಶನ್‌ಗಢ್ ಬಾಸ್ ವೃತ್ತ ಪೊಲೀಸ್ ಉಪ ಅಧೀಕ್ಷಕ (ಡಿಎಸ್‌ಪಿ) ಅತುಲ್ ಆಗ್ರಾ ಹೇಳಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಆರೋಪಿಗಳನ್ನು ಬಂಧಿಸಿದ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದರು.

Prime Minister Modi Flags off the Vande Bharat Express in Gandhinagar, Gujarat

0

Prime Minister Narendra Modi flagged off the Gandhinagar-Mumbai Vande Bharat Express train at Gandhinagar railway station.

Prime Minister Narendra Modi flagged off the Gandhinagar-Mumbai Vande Bharat Express train at Gandhinagar railway station on Friday.

He will inaugurate Phase-I of the Ahmedabad Metro Rail Project and launch various projects worth Rs 7,200 crore on Friday, the second day of his visit to Gujarat.

Modi flagged off the Vande Bharat Express from Gandhinagar Rajdhani Railway Station at around 10.25 am. He took a train from Gandhinagar to Ahmedabad’s Kalupur railway station.

The Prime Minister will inaugurate Phase-I of the ambitious and much-awaited Ahmedabad Metro project from Kalupur station, which has been completed at a cost of Rs 12,925 crore, a state government release said.

ಗುಜರಾತ್‌ನ ಗಾಂಧಿನಗರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

0

ಗಾಂಧಿನಗರ ರೈಲು ನಿಲ್ದಾಣದಲ್ಲಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಶುಕ್ರವಾರ ಗಾಂಧಿನಗರ ರೈಲು ನಿಲ್ದಾಣದಲ್ಲಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಅವರು ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಹಂತ-1 ಅನ್ನು ಉದ್ಘಾಟಿಸಲಿದ್ದಾರೆ ಮತ್ತು ಗುಜರಾತ್ ಭೇಟಿಯ ಎರಡನೇ ದಿನವಾದ ಶುಕ್ರವಾರ 7,200 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಗಾಂಧಿನಗರ ರಾಜಧಾನಿ ರೈಲು ನಿಲ್ದಾಣದಿಂದ ಬೆಳಗ್ಗೆ 10.25ರ ಸುಮಾರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ ನೀಡಿದರು. ಅವರು ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣಕ್ಕೆ ರೈಲಿನಲ್ಲಿ ಸವಾರಿ ಮಾಡಿದರು.

12,925 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಮಹತ್ವಾಕಾಂಕ್ಷೆಯ ಮತ್ತು ಬಹು ನಿರೀಕ್ಷಿತ ಅಹಮದಾಬಾದ್ ಮೆಟ್ರೋ ಯೋಜನೆಯ ಹಂತ-1 ಅನ್ನು ಕಲುಪುರ್ ನಿಲ್ದಾಣದಿಂದ ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.

After withdrawing cases filed against PFI, Congress has no grounds to ask why PFI was banned – Karnataka Chief Minister Basavaraja Bommai

0

Karnataka Chief Minister Basavaraja Bommai said that the Congress, which has withdrawn the cases filed against PFI, has no basis to ask why PFI was banned.

Congress has no basis to ask why PFI was banned, as the same party withdrew the cases filed against PFI.

Even though Congress leaders are demanding that RSS should be banned, they are not saying why it should be banned.

Karnataka CM Bommai said that Siddaramaiah should not have stooped to this level.

ಪಿಎಫ್‌ಐ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದ ಕಾಂಗ್ರೆಸ್‌ಗೆ ಪಿಎಫ್‌ಐ ಅನ್ನು ಏಕೆ ನಿಷೇಧಿಸಲಾಗಿದೆ ಎಂದು ಕೇಳಲು ಆಧಾರಗಳಿಲ್ಲ – ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0

ಪಿಎಫ್‌ಐ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದ ಕಾಂಗ್ರೆಸ್‌ಗೆ ಪಿಎಫ್‌ಐ ಅನ್ನು ಏಕೆ ನಿಷೇಧಿಸಲಾಗಿದೆ ಎಂದು ಕೇಳಲು ಆಧಾರಗಳಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ.   

ಪಿಎಫ್‌ಐ ಅನ್ನು ಏಕೆ ನಿಷೇಧಿಸಲಾಗಿದೆ ಎಂದು ಕೇಳಲು ಕಾಂಗ್ರೆಸ್‌ಗೆ ಯಾವುದೇ ಆಧಾರವಿಲ್ಲ, ಏಕೆಂದರೆ ಅದೇ ಪಕ್ಷ ಪಿಎಫ್‌ಐ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದಿದೆ.

ಆರೆಸ್ಸೆಸ್ ಮೇಲೆ ನಿಷೇಧ ಹೇರಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದರೂ ಅದನ್ನು ಏಕೆ ನಿಷೇಧಿಸಬೇಕು ಎಂದು ಹೇಳುತ್ತಿಲ್ಲ. ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಕರ್ನಾಟಕ ಸಿಎಂ ಬೊಮ್ಮಾಯಿ ಹೇಳಿದ್ದಾರೆ.