Sunday, March 15, 2026
Home Blog Page 110

ಬಡಗುತಿಟ್ಟಿನ ಮದ್ದಳೆವಾದನದಲ್ಲಿ ಕರ್ಕಿ ಮನೆತನ – ಶ್ರೀ ಪ್ರಭಾಕರ ಭಂಡಾರಿ, ಶ್ರೀ ಮಂಜುನಾಥ ಭಂಡಾರಿ, ಶ್ರೀ ಪರಮೇಶ್ವರ ಭಂಡಾರಿ ಕರ್ಕಿ 

ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಎಂಬ ಊರು ಯಕ್ಷಗಾನ ಕಳೆಯ ಆಡೊಂಬಲ ಎಂದರೂ ತಪ್ಪಾಗಲಾರದು. . ಬಡಗುತಿಟ್ಟಿನ ಹಿಮ್ಮೇಳ, ಮುಮ್ಮೇಳದ ಅನೇಕ ಕಲಾವಿದರನ್ನು ಯಕ್ಷಗಾನ ಕಲಾ ಮಾತೆಯ ಮಡಿಲಿಗಿಕ್ಕಿದ ಮಣ್ಣು ಇದು. ಇಲ್ಲಿ ಹುಟ್ಟಿ ಬೆಳೆದ ಕಲಾವಿದರೆಲ್ಲಾ ತಾವು ತೊಡಗಿಸಿಕೊಂಡ ವಿಭಾಗದಲ್ಲಿ ಖ್ಯಾತರಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಕರ್ಕಿ ಹಾಸ್ಯಗಾರ ಮನೆತನದಲ್ಲಿ ಜನಿಸಿದ ಅನೇಕರು ಬಡಗುತಿಟ್ಟಿನ ಮುಮ್ಮೇಳದ ಕಲಾವಿದರಾಗಿ ಖ್ಯಾತರಾದುದು ನಮಗೆಲ್ಲಾ ತಿಳಿದ ವಿಚಾರ. ಬಡಗುತಿಟ್ಟಿನ ಯಕ್ಷಗಾನ ಹಿಮ್ಮೇಳಕ್ಕೂ ಕರ್ಕಿ ಮಣ್ಣಿನ ಕೊಡುಗೆಯು ಅಪಾರ. ಕರ್ಕಿ ಭಂಡಾರಿ ಮನೆತನದಲ್ಲಿ ಜನಿಸಿದ ಅನೇಕರು ಅತ್ಯುತ್ತಮ ಮದ್ದಳೆವಾದಕರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಖ್ಯಾತರಾಗಿದ್ದಾರೆ.

ಇವರಲ್ಲಿ ಶ್ರೀ ಪ್ರಭಾಕರ ಭಂಡಾರಿ ಕರ್ಕಿ, ಶ್ರೀ ಮಂಜುನಾಥ ಭಂಡಾರಿ ಕರ್ಕಿ ಮತ್ತು ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಪ್ರಮುಖರು. ಬಡಗುತಿಟ್ಟಿನ  ಹಿರಿಯ,ಅನುಭವೀ, ಖ್ಯಾತ ಮದ್ದಳೆಗಾರ ಶ್ರೀ ಪ್ರಭಾಕರ ಭಂಡಾರಿ ಕರ್ಕಿ ಅವರಿಗೀಗ 82 ವರ್ಷ ವಯಸ್ಸು. ಕಳೆದ 20 ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯಕ್ಕೆ ವಿದಾಯ ಹೇಳಿ ಮಕ್ಕಳಾದ ಶ್ರೀ ಮಂಜುನಾಥ ಭಂಡಾರಿ ಕರ್ಕಿ ಮತ್ತು ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಇವರೊಂದಿಗೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ ಪ್ರಭಾಕರ ಭಂಡಾರಿ ಕರ್ಕಿ

ಬಡಗುತಿಟ್ಟಿನ ಹಿರಿಯ ಅನುಭವೀ ಮದ್ದಳೆಗಾರರಾದ ಶ್ರೀ ಪ್ರಭಾಕರ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಕರ್ಕಿ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಇವರ ಮನೆ. 1940ರಲ್ಲಿ ಕರ್ಕಿ ಶ್ರೀ ಪಾಂಡುರಂಗ ಭಂಡಾರಿ ಮತ್ತು ಶ್ರೀಮತಿ ಹೊನ್ನಮ್ಮ ದಂಪತಿಗಳ ಮಗನಾಗಿ ಈ ಲೋಕದ ಬೆಳಕನ್ನು ಕಂಡವರು. ಶ್ರೀ ಪಾಂಡುರಂಗ ಭಂಡಾರಿಗಳು ಆ ಕಾಲದ ಅತ್ಯುತ್ತಮ ಮದ್ದಳೆಗಾರರಾಗಿದ್ದರು. ಶ್ರೀಯುತರು ಕರ್ಕಿ ಪರಮಯ್ಯ ಹಾಸ್ಯಗಾರರ ಕರ್ಕಿ ಮೇಳದಲ್ಲಿ ವ್ಯವಸಾಯ ಮಾಡಿದವರು.

ಪ್ರಭಾಕರ ಭಂಡಾರಿಗಳ ಅಣ್ಣಂದಿರಾದ ಶ್ರೀ ಕೇಶವ ಭಂಡಾರಿ ಮತ್ತು  ಶ್ರೀ ಸತ್ಯನಾರಾಯಣ ಭಂಡಾರಿಗಳು ಮದ್ದಳೆಗಾರರಾಗಿ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಹೀಗೆ ಕಲಾಸಕ್ತಿಯು ಪ್ರಭಾಕರ ಭಂಡಾರಿಗಳಿಗೆ ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ಈ ಮನೆಯ ಸದಸ್ಯರೆಲ್ಲರೂ  ನುಡಿಸುವಿಕೆಯಲ್ಲಿ ಪ್ರವೀಣರಾಗಿದ್ದರು. (ಪಂಚವಾದ್ಯ) ದೇವಸ್ಥಾನದ ಕಾರ್ಯಕ್ರನಗಳಲ್ಲಿ, ಮದುವೆ ಇನ್ನಿತರ ಶುಭಸಮಾರಂಭಗಳಲ್ಲಿ ಇವರು ವಾದ್ಯಗಳನ್ನು ನುಡಿಸುತ್ತಿದ್ದರು. ಈ ಕಲೆಯು ಇವರಿಗೆ ಪರಂಪರೆಯಿಂದ ಬಂದುದು.

ಇವರು ಕರಕುಶಲಗಾರಿಕೆಯನ್ನೂ ಬಲ್ಲವರು. ಮಣ್ಣಿನಿಂದ ಗಣಪತಿಯ ಮೂರ್ತಿಯನ್ನು ರಚಿಸುತ್ತಿದ್ದರು. ಅಲ್ಲದೆ ವಿವಿಧ ದೇವರುಗಳ, ಪುರಾಣ ಪುರುಷರ, ಸಮಾಜ ಸೇವಕರ ಮೂರ್ತಿಗಳನ್ನೂ ಮಣ್ಣಿನಿಂದ ರಚಿಸುವ ಕಲೆಯು ಈ ಮನೆಯವರಿಗೆ ಕರಗತವಾಗಿತ್ತು. ಶ್ರೀ ಪ್ರಭಾಕರ ಭಂಡಾರಿಯವರಿಗೆ ಮದ್ದಳೆಗಾರಿಕೆಯಲ್ಲಿ ತಂದೆ ಮತ್ತು ಅಣ್ಣಂದಿರೇ ಗುರುಗಳು. ಅವರು ಮದ್ದಳೆ ನುಡಿಸುವುದನ್ನು ನೋಡಿ ಕೇಳಿಯೇ ಕಲಿತಿದ್ದರು. ತಂದೆ ಮತ್ತು ಅಣ್ಣಂದಿರಿಂದ ತರಬೇತಿಯನ್ನೂ ಪಡೆದಿದ್ದರು.  ಶ್ರೀ ಪ್ರಭಾಕರ ಭಂಡಾರಿ ಅವರು ಓದಿದ್ದು ಐದನೆಯ ತರಗತಿಯ ವರೆಗೆ. ಇವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ಸದ್ರಿ ಮೇಳದಲ್ಲಿ  ಏಳು ವರ್ಷ ತಿರುಗಾಟ.

ಬಳಿಕ ಕೊಳಗಿ ಬೀಸ್ ಟೆಂಟ್ ಮೇಳದಲ್ಲಿ ಎರಡು ವರ್ಷಗಳ ತಿರುಗಾಟ. ಬಳಿಕ ಅಮೃತೇಶ್ವರೀ ಮೇಳದಲ್ಲಿ  ಶ್ರೀ ನಾರಣಪ್ಪ ಉಪ್ಪೂರರ ಜತೆ ವ್ಯವಸಾಯ. ಬಳಿಕ ಸಾಲಿಗ್ರಾಮ ಮೇಳದಲ್ಲಿ ಒಂಭತ್ತು ವರ್ಷ ವ್ಯವಸಾಯ. ಬಳಿಕ ಕೆರೆಮನೆ ಶಂಭು  ಹೆಗಡೆ ಅವರ ಇಡಗುಂಜಿ ಮೇಳದಲ್ಲಿ ವ್ಯವಸಾಯ. ಮರಳಿ ಅಮೃತೇಶ್ವರೀ ಮೇಳದಲ್ಲಿ ವ್ಯವಸಾಯ. ಅಲ್ಲದೆ ಕೆರೆಮನೆ ಶಂಭು ಹೆಗಡೆ ಅವರ ನೇತೃತ್ವದ ಕಾಲಮಿತಿಯ ತಂಡದಲ್ಲಿ ಒಂಭತ್ತು ವರ್ಷ ವ್ಯವಸಾಯ ಮಾಡಿದ್ದರು. (ಮೂರು ಘಂಟೆಗಳ ಕಾಲದ ಪ್ರದರ್ಶನ) ಇಡಗುಂಜಿ ಮೇಳದಲ್ಲಿರುವಾಗ ಕಿನ್ನೀರು ನಾರಾಯಣ ಹೆಗಡೆ ಮತ್ತು ಅಮೃತೇಶ್ವರೀ ಮೇಳದಲ್ಲಿರುವಾಗ ಬೇಳಿಂಜೆ ತಿಮ್ಮಪ್ಪ ನಾಯ್ಕ ಇವರಿಂದ ಕಲಿತು ಅನುಭವಗಳನ್ನು ಗಳಿಸಲು ಅವಕಾಶವಾಗಿತ್ತು.

ಶ್ರೀ ಪ್ರಭಾಕರ ಭಂಡಾರಿ ಅವರು ತಮ್ಮ ವೃತ್ತಿ ಬದುಕಿನುದ್ದಕ್ಕೂ ಶ್ರೀ ನಾರ್ಣಪ್ಪ ಉಪ್ಪೂರ, ಗುಂಡ್ಮಿ ರಾಮಚಂದ್ರ ನಾವಡ, ಕಪ್ಪೆಕೆರೆ ಸುಬ್ರಾಯ ಭಾಗವತ, ಜಿ.ಆರ್ ಕಾಳಿಂಗ ನಾವಡ, ಕಡತೋಕಾ ಕೃಷ್ಣ ಭಾಗವತ, ವಿದ್ವಾನ್ ಗಣಪತಿ ಭಟ್, ನಾರಾಯಣ ಶಬರಾಯ ಮೊದಲಾದ ಭಾಗವತರ ಹಾಡುಗಾರಿಕೆಗೆ ಮದ್ದಳೆ ನುಡಿಸಿದ್ದರು. ಮಳೆಗಾಲದ ಪ್ರದರ್ಶನಗಳಲ್ಲಿ ಕಡತೋಕಾ ಮಂಜುನಾಥ ಭಾಗವತರೊಂದಿಗೂ ವ್ಯವಸಾಯ ಮಾಡಿದ್ದರು. ಕೆರೆಮನೆ ತಂಡದ ಸದಸ್ಯನಾಗಿ ಇಂಗ್ಲೆಂಡ್, ಬಹರೈನ್, ಬಾಂಗ್ಲಾ, ಮಲೇಷಿಯಾ ಮೊದಲಾದ ಕಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಅನಾರೋಗ್ಯದ ನಿಮಿತ್ತ ಮೇಳದ ವ್ಯವಸಾಯಕ್ಕೆ ವಿದಾಯ  ಶ್ರೀ  ಪ್ರಭಾಕರ ಭಂಡಾರಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ತನ್ನ ಪ್ರತಿಭಾ ವ್ಯಾಪಾರದಿಂದ ಮದ್ದಳೆ ನುಡಿಸುತ್ತಾ ಕಲಾವಿದರಲ್ಲಿ ಉತ್ಸಾಹವನ್ನು ತುಂಬಿ. ಪ್ರದರ್ಶನಗಳನ್ನು ರಂಜಿಸುವಂತೆ ಮಾಡಿದ ಹಿರಿಯ ಕಲಾವಿದರಿವರು. ಮದ್ದಳೆವಾದಕನಾಗಿ ಇವರ ಕೆಲವು ನುಡಿತಗಳು ಕರ್ಕಿ ಪೆಟ್ಟುಗಳೆಂದೇ ಪ್ರಸಿದ್ಧವಾಗಿದೆ. ಈ ಪ್ರತಿಭೆಯನ್ನು ಇವರ ಮಕ್ಕಳಾದ  ಶ್ರೀ ಮಂಜುನಾಥ ಭಂಡಾರಿ ಮತ್ತು  ಶ್ರೀ ಪರಮೇಶ್ವರ ಭಂಡಾರಿ ಇವರ ವಾದನ ಕ್ರಮದಲ್ಲೂ ಗಮನಿಸಬಹುದು. 

ಶ್ರೀ ಮಂಜುನಾಥ ಭಂಡಾರಿ ಕರ್ಕಿ :

ಕರ್ಕಿ  ಶ್ರೀ ಮಂಜುನಾಥ ಭಂಡಾರಿ ಅವರು ಬಡಗುತಿಟ್ಟಿನ ಅನುಭವೀ ಮದ್ದಳೆವಾದಕರು. ಇಡಗುಂಜಿ, ಅಮೃತೇಶ್ವರೀ, ಪೆರ್ಡೂರು, ಹಾಲಾಡಿ, ಸಾಲಿಗ್ರಾಮ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿ ಮದ್ದಳೆಗಾರರಾಗಿ ಹೆಸರನ್ನು ಗಳಿಸಿದ್ದಾರೆ. ತಂದೆಯಂತೆ ಶಿಸ್ತಿನ, ಸರಳ, ಸಜ್ಜನ ಕಲಾವಿದರಿವರು. ತಂದೆ ಪ್ರಭಾಕರ ಭಂಡಾರಿ ಅವರಂತೆ ಯಕ್ಷಗಾನ ವಾದ್ಯೋಪಕರಣಗಳಾದ ಚೆಂಡೆ, ಮದ್ದಳೆಗಳನ್ನು ತಯಾರಿಸುವ ಕಲೆಯು ಇವರಿಗೆ ಕರಗತವಾಗಿದೆ. ಹಳೆ ಚೆಂಡೆ ಮದ್ದಳೆಗಳನ್ನು ದುರಸ್ಥಿಗೊಳಿಸಿ ವಾದನಯೋಗ್ಯವನ್ನಾಗಿ ಮಾಡುವ ಕೆಲಸವನ್ನೂ ಇವರು ಬಲ್ಲವರು.

ಶ್ರೀ ಮಂಜುನಾಥ ಭಂಡಾರಿ ಕರ್ಕಿ

ವಿಶೇಷವಾಗಿ ಮಣ್ಣಿನಿಂದ ಮೂರ್ತಿಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತವಾಗಿದೆ. ಈ ಮನೆಯವರು ನಿರ್ಮಿಸುವ ಗಣಪತಿ ದೇವರ ಮೂರ್ತಿಗಳಿಗೆ ಕರ್ನಾಟಕ ಅಲ್ಲದೆ ದೇಶದಾದ್ಯಂತ ಬಹು ಬೇಡಿಕೆಯಿದೆ. ಇವರು ನಿರ್ಮಿಸುವ ಗಣಪತಿ ದೇವರುಗಳ ಮೂರ್ತಿಗಳು ‘ಕರ್ಕಿ ಗಣಪತಿ’ ಎಂದೇ ಪ್ರಸಿದ್ಧವಾಗಿದೆ. ವಿವಿಧ ದೇವರ ಮೂರ್ತಿಗಳನ್ನೂ, ಪುರಾಣ ಪುರುಷರ, ಸಮಾಜ ಸೇವಕರ ಮೂರ್ತಿಗಳನ್ನೂ ಇವರು ಮಣ್ಣಿನಿಂದ ನಿರ್ಮಿಸಬಲ್ಲರು. ಶ್ರೀದೇವಿ, ಹನುಮಂತ, ಗಣಪತಿ, ವಿವೇಕಾನಂದ, ಅಂಬೇಡ್ಕರ್, ಶಿವಾಜಿ, ಮಹಾತ್ಮಾ ಗಾಂಧಿ ಹೀಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಇವರು ಮೂರ್ತಿಗಳನ್ನು ಮಣ್ಣಿನಿಂದ ನಿರ್ಮಿಸಿಕೊಡಬಲ್ಲರು. ಈ ಕಲೆಯು ಮಂಜುನಾಥ ಭಂಡಾರಿ ಅವರಿಗೆ ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ಮೂರ್ತಿ ರಚನೆಯ ಕಾಯಕದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ಶ್ರೀ ಮಂಜುನಾಥ ಭಂಡಾರಿಗಳು ಗ್ರಾಹಕರ ಮೆಚ್ಚುಗೆಗೆ ಕಾರಣರಾಗಿದ್ದಾರೆ. 

ಬಡಗುತಿಟ್ಟಿನ ಅನುಭವಿ ಮದ್ದಳೆಗಾರರಾದ  ಶ್ರೀ ಮಂಜುನಾಥ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಖ್ಯಾತ ಮದ್ದಳೆಗಾರರಾದ  ಶ್ರೀ ಪ್ರಭಾಕರ ಭಂಡಾರಿ ಮತ್ತು ಶ್ರೀಮತಿ ಶಾರದಾ ದಂಪತಿಗಳ ಮಗನಾಗಿ 1967 ಜುಲೈ 20ರಂದು ಜನನ. ಇವರು ಓದಿದ್ದು ಆರನೇ ತರಗತಿ ವರೆಗೆ. ಎಳವೆಯಲ್ಲೇ ಯಕ್ಷಗಾನ ಆಸಕ್ತಿ ಇತ್ತು. ಅದು ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ತಂದೆಯ ಜತೆ ತೆರಳಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಹೀಗೆ ವಾದನ ಕ್ರಮವನ್ನು ಅಭ್ಯಾಸ ಮಾಡಿದ್ದರು.  ಶ್ರೀ ಪ್ರಭಾಕರ ಭಂಡಾರಿಗಳು ಮಕ್ಕಳಿಗೆ ತರಬೇತಿಯನ್ನೂ ನೀಡಿದ್ದರು. 

ಶ್ರೀ ಮಂಜುನಾಥ ಭಂಡಾರಿಗಳು ಮೊದಲ ತಿರುಗಾಟ ನಡೆಸಿದ್ದು ಕೆರೆಮನೆ ಶಂಭು ಹೆಗಡೆ ಅವರ ಸಂಚಾಲಕತ್ವದ ಇಡಗುಂಜಿ ಮೇಳದಲ್ಲಿ. ಸದ್ರಿ ಮೇಳದಲ್ಲಿ ಎರಡು ವರ್ಷ ತಿರುಗಾಟ. ಬಳಿಕ ಪಳ್ಳಿ  ಶ್ರೀ ಸೋಮನಾಥ ಹೆಗ್ಡೆ ಮತ್ತು ಬಿ.ವಿ ಶೆಟ್ರ ಅಮೃತೇಶ್ವರೀ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಬಳಿಕ ಪೆರ್ಡೂರು ಮೇಳದಲ್ಲಿ ಒಂದು ವರ್ಷ ತಿರುಗಾಟ. (ಬಯಲಾಟ ಮೇಳ) ಬಳಿಕ ಒಂದು ವರ್ಷದಲ್ಲಿ ಹಾಲಾಡಿ ಮೇಳದಲ್ಲಿ. ಬಳಿಕ ಒಂದು ವರ್ಷ ಪೆರ್ಡೂರು ಟೆಂಟ್ ಮೇಳದಲ್ಲಿ. ಇಲ್ಲಿ ಖ್ಯಾತ ಮದ್ದಳೆಗಾರರಾದ ದುರ್ಗಪ್ಪ ಗುಡಿಗಾರರ ಒಡನಾಟವು ಸಿಕ್ಕಿತ್ತು. ಬಳಿಕ ಐದು ವರ್ಷ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ನಾಲ್ಕು ವರ್ಷಗಳ ವ್ಯವಸಾಯ ಮಾಡಿದ ಬಳಿಕ ಮುಖ್ಯ ಮದ್ದಳೆಗಾರನಾಗಿ ಭಡ್ತಿ ಹೊಂದಿದ್ದರು.

ಈ ಸಂದರ್ಭದಲ್ಲಿ ಜಿ.ಆರ್ ಕಾಳಿಂಗ ನಾವಡರ ಹಾಡುಗಾರಿಕೆಗೆ ಮದ್ದಳೆ ನುಡಿಸಲು ಅವಕಾಶವಾಗಿತ್ತು. ಮಳೆಗಾಲದ ಪ್ರದರ್ಶನಗಳಲ್ಲೂ ಅವರ ಹಾಡುಗಾರಿಕೆಗೆ ಮದ್ದಳೆಗಾರನಾಗಿ ವ್ಯವಸಾಯ ಮಾಡಲು ಅನುಕೂಲವಾಗಿತ್ತು. ಕರ್ಕಿ ಮನೆಯ ಮದ್ದಳೆಗಾರರನ್ನು ತಮ್ಮ ಹಾಡುಗಾರಿಕೆಗೆ ಕಾಳಿಂಗ ನಾವಡರು ಬಯಸುತ್ತಿದ್ದರು. ಸಾಲಿಗ್ರಾಮ ಮೇಳದಲ್ಲಿ ಐದು ವರ್ಷ ವ್ಯವಸಾಯ ನಡೆಸಿ  ಶ್ರೀ ಮಂಜುನಾಥ ಭಂಡಾರಿಗಳು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು. ಬಹು ಬೇಡಿಕೆಯ ಕಲಾವಿದನಾಗಿರುವಾಗಲೇ ಇವರು ವ್ಯವಸಾಯದಿಂದ ದೂರ ಉಳಿದುದು ಬಹು ಬೇಸರದ ವಿಚಾರ. ಮೇಳ ಬಿಟ್ಟ ಬಳಿಕವೂ ಅತಿಥಿ ಕಲಾವಿದನಾಗಿ ಊರ ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ, ಮಣ್ಣಿನ ಮೂರ್ತಿಯ ರಚನೆ, ಚೆಂಡೆ ಮದ್ದಳೆ ತಯಾರಿಕೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಕರ್ಕಿಯ ತಮ್ಮ ಮನೆಯಲ್ಲಿ ವಾಸವಾಗಿದ್ದಾರೆ. 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ: 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಅವರು ಬಡಗುತಿಟ್ಟಿನ ಅನುಭವಿ ಮದ್ದಳೆಗಾರರು. ಕಳೆದ ಮೂವತ್ತನಾಲ್ಕು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಗುಂಡಬಾಳಾ, ಭುವನಗಿರಿ, ಶಿರಸಿ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಕಳೆದ ಇಪ್ಪತ್ತೈದು ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಚೆಂಡೆ ಮದ್ದಳೆ ತಯಾರಿಕಾ ಕಲೆಯನ್ನೂ ಬಲ್ಲವರು. ಅಲ್ಲದೆ ಕರಕುಶಲಗಾರಿಕೆಯನ್ನೂ ಬಲ್ಲವರು. ಕರ್ಕಿ ಮನೆತನದ ಸರಳ, ಸಜ್ಜನ ಶಿಸ್ತಿನ ಕಲಾವಿದರಿವರು. ಸಹ ಕಲಾವಿದರಿಗೆ ಮತ್ತು ಮಿತ್ರರಿಗೆ ಇವರು ಪ್ರೀತಿಯ ‘ಪರಮಣ್ಣ’. 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ

ಬಡಗುತಿಟ್ಟಿನ ಅನುಭವಿ ಮದ್ದಳೆಗಾರ  ಶ್ರೀ ಪರಮೇಶ್ವರ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಕರ್ಕಿ ಮನೆಯ ಮತ್ತೊಬ್ಬ ಮದ್ದಳೆಗಾರರಾಗಿ ಇವರು ಗುರುತಿಸಿಕೊಂಡಿದ್ದಾರೆ. 1971ನೇ ಇಸವಿ ಮೇ ತಿಂಗಳ 3ರಂದು  ಶ್ರೀ ಪ್ರಭಾಕರ ಭಂಡಾರಿ ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರನಾಗಿ ಜನನ. ಓದಿದ್ದು ಎಸ್ಸೆಸ್ಸೆಲ್ಸಿ ವರೆಗೆ. ಏಳನೇ ತರಗತಿ ವರೆಗೆ ಕರ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕರ್ಕಿ ಚೆನ್ನಕೇಶವ ಪ್ರೌಢ ಶಾಲೆಯಲ್ಲಿ.

ಇವರಿಗೆ ಯಕ್ಷಗಾನವು ಹಿರಿಯರಿಂದ ಬಳುವಳಿಯಾಗಿ ಬಂದುದು. ತಂದೆ ಮತ್ತು ಅಣ್ಣ ಮದ್ದಳೆ ಬಾರಿಸುವುದನ್ನು ನೋಡಿ, ಕೇಳಿಯೇ ಕಲಿತವರು. ಅವರು ಮೇಳದ ತಿರುಗಾಟಕ್ಕೆ ತೆರಳಿದಾಗ ಇವರು ಮನೆಯಲ್ಲಿ ಮದ್ದಳೆ ಬಾರಿಸುತ್ತಾ ಅಭ್ಯಾಸ ಮಾಡುತ್ತಿದ್ದರು. ತಂದೆಯವರಿಂದ ಮತ್ತು ಅಣ್ಣನಿಂದ ತರಬೇತಿಯನ್ನು ಪಡೆದಿದ್ದರು. ಶಾಲಾ ರಜಾದಿನಗಳಲ್ಲಿ ಭಾಗವತರಾದ ಗುಣವಂತೆ ಕೃಷ್ಣ ಭಂಡಾರಿಗಳ ಜತೆ ತೆರಳಿ ಪ್ರದರ್ಶನಗಳಲ್ಲಿ ಮದ್ದಳೆ ಬಾರಿಸಿ ಅನುಭವಗಳನ್ನು ಗಳಿಸಿಕೊಂಡರು. 

ಶ್ರೀ ಪರಮೇಶ್ವರ ಭಂಡಾರಿ ಅವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ದೊಡ್ಡಪ್ಪ ಸತ್ಯನಾರಾಯಣ ಭಂಡಾರಿಗಳ ಜತೆ ಸದ್ರಿ ಮೇಳದಲ್ಲಿ ವ್ಯವಸಾಯ. ಅಲ್ಲಿ ಚಂದ್ರಶೇಖರ ಹೆಗಡೇಕಾರ್ ಅವರ ಒಡನಾಟವು ದೊರೆತಿತ್ತು. ಗುಂಡಬಾಳಾ ಮೇಳದಲ್ಲಿ ಏಳು ವರ್ಷ ವ್ಯವಸಾಯ. ಬಳಿಕ ಶಿರಳಗಿ ಭಾಸ್ಕರ ಜೋಶಿ ಅವರ ಸಿದ್ಧಾಪುರ ಭುವನಗಿರಿ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಕಲಾವಿದನಾಗಿ ಇವರದ್ದು ಕ್ಷಿಪ್ರ ಬೆಳವಣಿಗೆ. ಭುವನಗಿರಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ವ್ಯವಸಾಯ. ಬಳಿಕ ಶಿರಸಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ಒಂದು ವರ್ಷ ವ್ಯವಸಾಯ. ಕಳೆದ 25 ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಮೊದಲ ಎರಡು ವರ್ಷ ಒತ್ತು ಮದ್ದಳೆಗಾರನಾಗಿ ತಿರುಗಾಟ. ಆಗ ಯಲ್ಲಾಪುರ ಶಂಕರ ಭಾಗವತರು ಪ್ರಧಾನ ಮದ್ದಳೆಗಾರರಾಗಿದ್ದರು. ಕಳೆದ 23 ವರ್ಷಗಳಿಂದ ಕರ್ಕಿ ಪರಮೇಶ್ವರ ಭಂಡಾರಿ ಅವರು ಮುಖ್ಯ ಮದ್ದಳೆಗಾರರಾಗಿ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಮೇಳದ ಮತ್ತು ಮಳೆಗಾಲದ ಪ್ರದರ್ಶನಗಳಲ್ಲಿ ನೆಬ್ಬೂರು, ಕಪ್ಪೆಕೆರೆ, ಸುಬ್ರಹ್ಮಣ್ಯ ಧಾರೇಶ್ವರ, ಹೆರಂಜಾಲು ಗೋಪಾಲ ಗಾಣಿಗ, ನಾರಾಯಣ ಶಬರಾಯ, ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು, ಸತ್ಯನಾರಾಯಣ ಪುಣಿಂಚತ್ತಾಯ, ಚಂದ್ರಕಾಂತ ಮೂಡುಬೆಳ್ಳೆ, ಮೊದಲಾದ ಭಾಗವತರ ಹಾಡುಗಾರಿಕೆಗೆ ಶ್ರೀ ಪರಮೇಶ್ವರ ಭಂಡಾರಿ ಅವರು ಮದ್ದಳೆಗಾರರಾಗಿ ವ್ಯವಸಾಯ ಮಾಡಿರುತ್ತಾರೆ.

ಶ್ರೀಯುತರು ಮಳೆಗಾಲದಲ್ಲಿ ದೆಹಲಿ, ಹೈದೆರಾಬಾದ್, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಇವರು ತೆರೆದುಕೊಳ್ಳುವ ಸ್ವಭಾವದವರಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ಬಹು ಬೇಗನೆ ಪ್ರದರ್ಶನ ನಡೆಯುವ ಸ್ಥಳಕ್ಕೆ ಬಂದು ಸಿದ್ಧರಾಗುವ ಕರ್ಕಿ ಮನೆತನದ ಶಿಸ್ತನ್ನು ಇವರೂ ರೂಢಿಸಿಕೊಂಡು ಮುಂದುವರಿಯುತ್ತಿದ್ದಾರೆ. ಇವರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲಿ. ಕರ್ಕಿ ಮನೆಯ ಮದ್ದಳೆಗಾರರಿಗೆ ಶ್ರೀ  ದೇವರ ಅನುಗ್ರಹವು ಸದಾ ಇರಲಿ. ಭಗವಂತನು ಸಕಲ ಸೌಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ – 9164487083

“ಪಠಾಣ್ ಸಿನಿಮಾವನ್ನು ನಿಮ್ಮ ಮಗಳೊಂದಿಗೆ ಕುಳಿತು ವೀಕ್ಷಿಸಿ” ಶಾರುಖ್ ಖಾನ್ ಗೆ ಹೇಳಿದ ಮಧ್ಯಪ್ರದೇಶ ಸ್ಪೀಕರ್ ಗಿರೀಶ್ ಗೌತಮ್ 

0

“ಪಠಾಣ್ ಸಿನಿಮಾವನ್ನು ನಿಮ್ಮ ಮಗಳೊಂದಿಗೆ ಕುಳಿತು ವೀಕ್ಷಿಸಿ” ಎಂದು  ಶಾರುಖ್ ಖಾನ್ಗೆ ಮಧ್ಯಪ್ರದೇಶ ಸ್ಪೀಕರ್ ಗಿರೀಶ್ ಗೌತಮ್ ಹೇಳಿದ್ದಾರೆ, ಥಿಯೇಟರ್‌ಗಳಲ್ಲಿ “ಪಠಾಣ್” ಅನ್ನು ನಿಷೇಧಿಸುವ ಬೇಡಿಕೆಗಳ ನಡುವೆ ಇಂದು ಪ್ರಾರಂಭವಾಗುವ ಐದು ದಿನಗಳ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಶ್ರೀ ಗೌತಮ್ ಇದನ್ನು ಹೇಳಿದರು.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಂತರ, ರಾಜ್ಯದ ವಿಧಾನಸಭಾ ಸ್ಪೀಕರ್ ಗಿರೀಶ್ ಗೌತಮ್ ಕೂಡ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾನ್ ಅನ್ನು ವಿರೋಧಿಸಿದ್ದಾರೆ. “ಶಾರುಖ್ ಅವರು ತಮ್ಮ ಮಗಳ ಜೊತೆ ಈ ಚಿತ್ರವನ್ನು ನೋಡಬೇಕು, ಚಿತ್ರವನ್ನು ಅಪ್ಲೋಡ್ ಮಾಡಬೇಕು ಮತ್ತು ಅದನ್ನು ತಮ್ಮ ಮಗಳ ಜೊತೆ ನೋಡುತ್ತಿದ್ದಾರೆ ಎಂದು ಜಗತ್ತಿಗೆ ತಿಳಿಸಬೇಕು ಎಂದು ಅವರು ಹೇಳಿದರು.

ಥಿಯೇಟರ್‌ಗಳಲ್ಲಿ “ಪಠಾಣ್” ಅನ್ನು ನಿಷೇಧಿಸುವ ಬೇಡಿಕೆಗಳ ನಡುವೆ ಇಂದು ಪ್ರಾರಂಭವಾಗುವ ಐದು ದಿನಗಳ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಶ್ರೀ ಗೌತಮ್ ಇದನ್ನು ಹೇಳಿದರು. ಈ ವಿಚಾರವನ್ನು ಆಡಳಿತಾರೂಢ ಬಿಜೆಪಿಯು ಸದನದ ನೆಲದ ಮೇಲೆ ವಿಧಾನಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಈ ಚಿತ್ರವನ್ನು ವಿರೋಧಿಸಿದ್ದಾರೆ, ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. “ಇದು ಪಠಾಣ್ ಬಗ್ಗೆ ಅಲ್ಲ, ಆದರೆ ಪರಿಧಾನ್ (ಬಟ್ಟೆ)” ಎಂದು ಸುರೇಶ್ ಪಚೌರಿ ಹೇಳಿದರು,

ಭಾರತೀಯ ಸಂಸ್ಕೃತಿಯಲ್ಲಿ, ಯಾವುದೇ ಮಹಿಳೆ ಅಂತಹ ಬಟ್ಟೆಗಳನ್ನು ಧರಿಸುವುದು ಮತ್ತು ಆ ದೃಶ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಯಾರೂ ಅನುಮತಿಸುವುದಿಲ್ಲ, ಅದು ಹಿಂದೂಗಳು, ಮುಸ್ಲಿಮರು ಅಥವಾ ಯಾವುದೇ ಇತರ ಧರ್ಮದ  ಅನುಯಾಯಿಗಳು ಆಗಿರಲಿ ಎಂದು ಅವರು ಹೇಳಿದರು.

ಕಳೆದ ಬುಧವಾರ ನರೋತ್ತಮ್ ಮಿಶ್ರಾ ಚಿತ್ರದ ಒಂದು ಹಾಡಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. “ಹಾಡಿನಲ್ಲಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. ಹಾಡು ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ. ‘ಪಠಾನ್’ ನಿರ್ಮಾಪಕರು ‘ಬೇಷರಂ ರಂಗ್’ ಹಾಡನ್ನು ಬಿಡುಗಡೆ ಮಾಡಿದ ಎರಡು ದಿನಗಳ ನಂತರ ನರೋತ್ತಮ್ ಮಿಶ್ರಾ ಅವರ ಹೇಳಿಕೆಯು ಬಂದಿತು,

ಇದರಲ್ಲಿ ಶಾರುಖ್ ಖಾನ್ ನಟಿಸಿದ ನಾಯಕನ ಎದುರು ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. “ಹಾಡಿನ ಆಕ್ಷೇಪಾರ್ಹ ಭಾಗಗಳನ್ನು ಸರಿಪಡಿಸಲು ನಾನು ಚಿತ್ರದ ನಿರ್ಮಾಪಕರಿಗೆ ಸಲಹೆ ನೀಡುತ್ತೇನೆ. ಈ ಹಿಂದೆ ದೀಪಿಕಾ ಪಡುಕೋಣೆ ಜೆಎನ್‌ಯುನಲ್ಲಿ ‘ತುಕ್ಡೆ ತುಕ್ಡೆ ಗ್ಯಾಂಗ್’ ಬೆಂಬಲಕ್ಕೆ ನಿಂತಿದ್ದರು. ಅವರ ಮನಸ್ಥಿತಿಯನ್ನು ಅವರು ಅಲ್ಲಿ ಬಹಿರಂಗಪಡಿಸಿದರು.

ಹಾಡಿನ ಶೀರ್ಷಿಕೆ ‘ಬೇಷರಂ ರಂಗ್’ ಎಂದು ನಾನು ನಂಬುತ್ತೇನೆ. ಅಲ್ಲದೆ, ಕೇಸರಿ ಮತ್ತು ಹಸಿರು ಬಣ್ಣಗಳನ್ನು ವೇಷಭೂಷಣಗಳಲ್ಲಿ ಬಳಸಿರುವುದು ಆಕ್ಷೇಪಾರ್ಹವಾಗಿದೆ. ಬದಲಾವಣೆಗಳನ್ನು ಮಾಡಬೇಕಾಗಿದೆ, ವಿಫಲವಾದರೆ ನಾವು ಮಧ್ಯಪ್ರದೇಶದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಬೇಕೇ ಅಥವಾ ಬೇಡವೇ ಎಂದು ನಾವು ಯೋಚಿಸಬೇಕಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ

16 ವರ್ಷದ ಬಾಲಕಿ ಮೇಲೆ 12 ಗಂಟೆಗಳ ಕಾಲ 8 ಜನರಿಂದ ಸಾಮೂಹಿಕ ಅತ್ಯಾಚಾರ

0

ಮಹಾರಾಷ್ಟ್ರದಲ್ಲಿ 16 ವರ್ಷದ ಬಾಲಕಿ ಮೇಲೆ 12 ಗಂಟೆಗಳ ಕಾಲ 8 ಜನರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಅಪ್ರಾಪ್ತ ವಯಸ್ಕನೆಂದು ಹೇಳಲಾದ ವ್ಯಕ್ತಿಯೊಬ್ಬರು ತನಗೆ ಆಮಿಷ ಒಡ್ಡಿದ್ದರು ಎಂದು ಬಾಲಕಿ ಹೇಳಿದ್ದಾಳೆ.

ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಅಪ್ರಾಪ್ತ ವಯಸ್ಕನೆಂದು ಹೇಳಲಾದ ವ್ಯಕ್ತಿಯೊಬ್ಬರು ತನಗೆ ಆಮಿಷ ಒಡ್ಡಿದ್ದರು ಎಂದು ಬಾಲಕಿ ಹೇಳಿದ್ದಾಳೆ.

ಶುಕ್ರವಾರ ಸಂಜೆ ಆರೋಪಿಗಳು ಆಕೆಯನ್ನು ತಮ್ಮ ಕಡಲತೀರದ ಗ್ರಾಮದಲ್ಲಿರುವ ಖಾಲಿ ಬಂಗಲೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಮರುದಿನ ಬೆಳಗಿನ ತನಕ ಆಕೆಯ ಮೇಲೆ ಅತ್ಯಾಚಾರ ಎಸಗಿದರು.

“ಶನಿವಾರ ಸಲ್ಲಿಸಿದ ದೂರಿನಲ್ಲಿ, ಸಂತ್ರಸ್ತೆ ಡಿಸೆಂಬರ್ 16 ರಂದು ರಾತ್ರಿ 8 ಗಂಟೆಗೆ ತನ್ನ ಅಗ್ನಿಪರೀಕ್ಷೆ ಪ್ರಾರಂಭವಾಯಿತು, ಅದು ಮರುದಿನ ಬೆಳಿಗ್ಗೆ 11 ಗಂಟೆಯವರೆಗೆ ಮುಂದುವರೆಯಿತು ಎಂದು ಹೇಳಿದ್ದಾಳೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಆರೋಪಿಗಳು ಅವಳನ್ನು ಖಾಲಿ ಬಂಗಲೆಗೆ ಕರೆದೊಯ್ದರು, ಅಲ್ಲಿ ಅವರು ಅವಳ ಮೇಲೆ ಅತ್ಯಾಚಾರ ಎಸಗಿದರು, ನಂತರ ಅವರು ಅವಳನ್ನು ಸಮುದ್ರ ತೀರಕ್ಕೆ ಕರೆದೊಯ್ದರು, ಅಲ್ಲಿ ಅವರು ಮತ್ತೆ ಪೊದೆಗಳಲ್ಲಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು” ಎಂದು ಅವರು ಹೇಳಿದರು.

ಕರ್ನಾಟಕ ವಿಧಾನಸಭೆ ಸಭಾಂಗಣದಲ್ಲಿ ವಿ.ಡಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣ – ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕರು

0

ಬೆಳಗಾವಿ | ಕರ್ನಾಟಕ ವಿಧಾನಸಭೆ ಸಭಾಂಗಣದಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

ವಾಲ್ಮೀಕಿ, ಬಸವಣ್ಣ, ಕನಕದಾಸ, ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವರ ಭಾವಚಿತ್ರಗಳನ್ನು ಅಳವಡಿಸುವಂತೆ ಕಾಂಗ್ರೆಸ್ ಶಾಸಕರು ಸ್ಪೀಕರ್‌ಗೆ ಪತ್ರ ಬರೆದು ಪ್ರತಿಭಟನೆ ನಡೆಸಿದ್ದಾರೆ.

ವಿಧಾನಸಭೆ ಸಭಾಂಗಣದಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಪ್ರತಿಷ್ಠಾಪಿಸುವುದನ್ನು ವಿರೋಧಿಸಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಶಾಸಕರು ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು.

“ನಮ್ಮ ವಿಧಾನಸಭೆ ಕಲಾಪ ನಡೆಯಬಾರದು ಎಂಬುದು ಅವರ ಅಪೇಕ್ಷೆ. ಅವರು ಅದನ್ನು ಅಡ್ಡಿಪಡಿಸಲು ಬಯಸುತ್ತಾರೆ. ಅವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ವಿಚಾರಗಳನ್ನು ಎತ್ತಲಿದ್ದೇವೆ ಎಂಬ ಕಾರಣಕ್ಕೆ ಈ ಫೋಟೋ ತಂದಿದ್ದಾರೆ. ಅವರಿಗೆ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲ” ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಮತ್ತು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಿನ್ನೆ ರಾತ್ರಿ ಬಿಎಸ್‌ಎಫ್‌ನ ಚಂದು ವಡಾಲಾ ಪೋಸ್ಟ್ ಮತ್ತು ಕಸೋವಾಲ್ ಪೋಸ್ಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆ – ಹೊಡೆದುರುಳಿಸಿದ ಭಾರತೀಯ ಸೇನೆ

0

ನಿನ್ನೆ ರಾತ್ರಿ ಪಂಜಾಬ್ ನ ಬಿಎಸ್‌ಎಫ್‌ನ ಚಂದು ವಡಾಲಾ ಪೋಸ್ಟ್ ಮತ್ತು ಕಸೋವಾಲ್ ಪೋಸ್ಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡವು. ಅದು ಮುಂದೆ ಪ್ರವೇಶಿಸದಂತೆ ತಡೆಯಲು ಯೋಧರು ಗುಂಡಿನ ದಾಳಿ ನಡೆಸಿದರು.

ಸಮೀಪದ ಪ್ರದೇಶಗಳನ್ನು ಶೋಧಿಸಲಾಗುತ್ತಿದೆ ಎಂದು ಪ್ರಭಾಕರ ಜೋಶಿ, ಬಿಎಸ್‌ಎಫ್ ಡಿಐಜಿ, ಗುರುದಾಸ್‌ಪುರ ಅವರು ಹೇಳಿದ್ದಾರೆ.

ಕಳೆದ ರಾತ್ರಿ ಬಿಎಸ್‌ಎಫ್‌ನ ಚಂದು ವಡಾಲಾ ಪೋಸ್ಟ್ ಮತ್ತು ಕಸೋವಾಲ್ ಪೋಸ್ಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡ ನಂತರ ಬಿಎಸ್‌ಎಫ್ ಜವಾನರು ಹತ್ತಿರದ ಪ್ರದೇಶಗಳನ್ನು ಹುಡುಕುತ್ತಿದ್ದಾರೆ.

ಅದು ಮುಂದೆ ಪ್ರವೇಶಿಸದಂತೆ ತಡೆಯಲು ಯೋಧರು ಗುಂಡಿನ ದಾಳಿ ನಡೆಸಿದರು.

ಯೋಗಾಸನ ಸ್ಪರ್ಧೆಯಲ್ಲಿ ಸಾಗರಿ ಎನ್ ರೈಗೆ ಚಿನ್ನದ ಪದಕ

0

ಪುತ್ತೂರು, ಡಿ 19 : ರಾಜಸ್ತಾನದ ಉದಯಪುರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಾಗರಿ ಎನ್ ರೈ ಬಾಲಕಿಯರ ವಿಭಾಗದ ಆರ್ಟಿಸ್ಟಿಕ್ ಯೋಗ ಸ್ಫರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸಲಿರುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಈಕೆ ಮೈಸೂರಿನ ನೂತನ್ ಕುಮಾರ್ ಮತ್ತು ಸುಚಿತ್ರಾ ರೈ ದಂಪತಿ ಪುತ್ರಿ.

ಬಾಲಕರ ವಿಭಾಗದ ಆರ್ಟಿಸ್ಟಿಕ್ ವಿಭಾಗದ ಯೋಗ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ ಜೆ (ಪುತ್ತೂರಿನ ನೆಹರೂನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ) ದ್ವಿತೀಯ ಸ್ಥಾನ ಗಳಿಸಿದ್ದಾರೆ.

ರಿಧಮಿಕ್ ವಿಭಾಗದ ಯೋಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮನ್ನಿತ್ ಎನ್ ಗೌಡ (ಬನ್ನೂರಿನ ರಮೇಶ ಗೌಡ ಎನ್ ಮತ್ತು ನಳಿನಿ ದಂಪತಿ ಪುತ್ರ) ತೃತೀಯ ಸ್ಥಾನ ಗಳಿಸಿದ್ದಾರೆ.

ಈ ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಯಕ್ಷಗಾನ ಕಲಾವಿದರಿಗೆ ಬಸ್‍ಪಾಸ್ ವಿತರಣೆ

0

ಕೆನರಾ ಬಸ್ ಮಾಲಕರ ಸಹಕಾರದಿಂದ ಯಕ್ಷಗಾನ ಕಲಾರಂಗ ಕಳೆದ ಹಲವು ವರ್ಷಗಳಿಂದ ವೃತ್ತಿ ಮೇಳದ ಕಲಾವಿದರಿಗೆ ಪ್ರತಿಶತ 50 ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಾ ಬಂದಿದ್ದು, ಈ ವರ್ಷದ ಆಗಸ್ಟ್ 31, 2023ರ ವರೆಗೆ ಅನ್ವಯವಾಗುವಂತೆ ಕೊಡಮಾಡಿದ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಇಂದು (18-12-2021) ಸಂಸ್ಥೆಯ ಕಚೇರಿಯಲ್ಲಿ ಜರಗಿತು.

ಕೆನರಾ ಬಸ್ಸು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಮೇಳದ ಪ್ರತಿನಿಧಿಗಳಿಗೆ ವಿತರಿಸಿ ಮಾತನಾಡಿ, ಕಲಾವಿದರಿಗೆ ಅನುಕೂಲವಾಗುವಂತೆ ಮುಂದೆ ಅಕ್ಟೋಬರ್ 31ರವರೆಗೆ ವಿಸ್ತರಿಸುವುದಾಗಿ ಭರವಸೆ ನೀಡಿದರು.

ಸೌಕೂರು ಮೇಳದ ಆನಂದ ರಾವ್, ಗೋಳಿಗರಡಿ ಮೇಳದ ಕೃಷ್ಣ ಸಂತೆಕಟ್ಟೆ ಮತ್ತು ಶನೀಶ್ವರ ಮೇಳದ ಪ್ರವೀಣ ಬಲ್ಯಾಯ ಸ್ವೀಕರಿಸಿದರು. 25 ವಿವಿಧ ಮೇಳಗಳ 400ಕ್ಕೂ ಮಿಕ್ಕಿದ ಕಲಾವಿದರು ಪಾಸ್ ಸೌಲಭ್ಯ ಪಡೆಯಲಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಪದಾಧಿಕಾರಿಗಳಾದ ಪಿ. ಕಿಶನ್ ಹೆಗ್ಡೆ, ಪ್ರೊ. ನಾರಾಯಣ ಎಮ್. ಹೆಗಡೆ, ಹೆಚ್.ಎನ್. ಶೃಂಗೇಶ್ವರ, ಕಿಶೋರ್ ಸಿ. ಉದ್ಯಾವರ, ವಿಶ್ವನಾಥ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ, ವೃತ್ತಿ ಕಲಾವಿದರಿಗೆ ಈ ಸೌಲಭ್ಯ ಕಲ್ಪಿಸಿದ ಕೆನರಾ ಬಸ್ ಮಾಲಕರ ಸಂಘದ ಪದಾಧಿಕಾರಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.

ರೆಹಾನಾ ಫಾತಿಮಾಗೆ ಶಬರಿಮಲೆ ಪ್ರಕರಣದಲ್ಲಿ ಜಾಮೀನು ಷರತ್ತುಗಳ ಮೇಲೆ ಯಾವುದೇ ಸಡಿಲಿಕೆಗೆ ಕೋರಿಕೆ ಇಲ್ಲ – ಸುಪ್ರೀಂ ಕೋರ್ಟಿಗೆ ಕೇರಳ ಸರಕಾರ ಅಫಿದಾವಿತ್

0

ಹೊಸದಿಲ್ಲಿ: ಶಬರಿಮಲೆಗೆ ಮಹಿಳೆಯರ ಪ್ರವೇಶದ ತೀರ್ಪಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಕರಣದಲ್ಲಿ ರೆಹಾನಾ ಫಾತಿಮಾಗೆ ಜಾಮೀನು ಷರತ್ತುಗಳನ್ನು ಸಡಿಲಿಸದಂತೆ ರಾಜ್ಯವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ರಾಜ್ಯದ ಪರ ವಕೀಲ ಹರ್ಷದ್ ವಿ ಹಮೀದ್ ಅಫಿಡವಿಟ್ ಸಲ್ಲಿಸಿದರು.

ನ್ಯಾಯಾಲಯದ ಷರತ್ತುಗಳನ್ನು ಹಲವು ಬಾರಿ ಉಲ್ಲಂಘಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದ್ದು, ಆಕೆಯ ಮನವಿಯನ್ನು ತಿರಸ್ಕರಿಸಬೇಕು ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ.

ಮಹಿಳೆಯರ ಪ್ರವೇಶದ ತೀರ್ಪಿನ ನಂತರ ಶಬರಿಮಲೆಗೆ ಭೇಟಿ ನೀಡಲು ಪತ್ತನಂತಿಟ್ಟ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಜಾಮೀನಿನ ಷರತ್ತುಗಳನ್ನು ಸಡಿಲಿಸಬೇಕು ಎಂದು ಕೋರಿ ರೆಹಾನಾ ಫಾತಿಮಾ ಅರ್ಜಿ ಸಲ್ಲಿಸಿದ್ದಾರೆ. ಅಫಿಡವಿಟ್ ಇದಕ್ಕೆ ವಿರುದ್ಧವಾಗಿದೆ. ರೆಹಾನಾ ಈ ಹಿಂದೆ ಹಲವು ವಿವಾದಗಳ ಮೂಲಕ ಕುಖ್ಯಾತಿ ಪಡೆದಿದ್ದರು.

ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಶಬರಿಮಲೆಗೆ ಭೇಟಿ ನೀಡಿದ ರೆಹಾನಾ ತನ್ನ ಅಪ್ರಾಪ್ತ ಮಕ್ಕಳನ್ನು ಬೆತ್ತಲೆ ದೇಹದ ಮೇಲೆ ಬಣ್ಣ ಹಚ್ಚಿ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ವಿವಾದಾತ್ಮಕ ನಾಯಕಿಯಾಗಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾದ ಪಾಕಶಾಲೆಯ ವೀಡಿಯೊದಲ್ಲಿ, ಫಾತಿಮಾ ಅಡುಗೆ ಮಾಡುವ ಖಾದ್ಯವನ್ನು ‘ಗೋಮಾತಾ ಉಲರ್ತ್’ ಎಂದು ಉಲ್ಲೇಖಿಸಿದ್ದರು. ಎರ್ನಾಕುಲಂನ ವಕೀಲ ರಾಜೀಶ್ ರಾಮಚಂದ್ರನ್ ಅವರು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಅಡುಗೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಶಬರಿಮಲೆ ವಿವಾದವು ಕಂಪನಿಯ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿ ಬಿಎಸ್‌ಎನ್‌ಎಲ್ ರೆಹಾನಾ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.

ಆನ್‌ಲೈನ್ ಲಾಟರಿ ಟಿಕೆಟ್ ವಂಚನೆಯ ಜಾಲ ಬಯಲು – ಲಾಟರಿಯ ಆನ್ ಲೈನ್ ಖರೀದಿದಾರರಿಗೆ ಎಚ್ಚರಿಕೆ

0

ಕೇರಳ ರಾಜ್ಯ ಲಾಟರಿಯ ಕ್ರಿಸ್‌ಮಸ್‌ ಬಂಪರ್ ಸೇರಿದಂತೆ 16 ಕೋಟಿ ರೂಪಾಯಿಯ ನಕಲಿ ಆನ್‌ಲೈನ್ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಜನರನ್ನು ವಂಚಿಸಲಾಗುತ್ತಿದೆ.

ವ್ಯಾಪಾರವು ವೆಬ್‌ಸೈಟ್, WhatsApp, Facebook ಮತ್ತು Twitter ಮೂಲಕ ನಡೆಸಲ್ಪಡುತ್ತದೆ. ಬೇರೆ ರಾಜ್ಯಗಳ ಜನರು ಹೆಚ್ಚಾಗಿ ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಹಣವನ್ನು Google Pay ಮೂಲಕ ಪಾವತಿಸಬೇಕಾಗಿದೆ.

ವಾಸ್ತವವಾಗಿ ಒಂದಕ್ಕಿಂತ ಹೆಚ್ಚು ಮಂದಿಗೆ ಒಂದೇ ಟಿಕೆಟ್ ನ್ನು ಮಾರಾಟ ಮಾಡಿ ವಂಚಿಸಲಾಗುತ್ತಿದೆ. ಇಲಾಖೆಯು ಏಜೆನ್ಸಿ ಮುದ್ರೆಯೊಂದಿಗೆ ಇರುವ ಕಾಗದದ ಲಾಟರಿಯನ್ನು ಮಾತ್ರ ಖರೀದಿಗೆ ಅನುಮೋದಿಸಲಾಗಿದೆ. ಇದರ ಅರಿವಿಲ್ಲದವರು ಈ ಮೋಸಕ್ಕೆ ಬಲಿಯಾಗುತ್ತಾರೆ.

ವಂಚಕರು ಆನ್‌ಲೈನ್ ಲಾಟರಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಜನರನ್ನು ಆಕರ್ಷಿಸುತ್ತಾರೆ. 40 ರೂಪಾಯಿ ಟಿಕೆಟ್ 35 ರೂಪಾಯಿಗೆ ಆನ್ಲೈನ್ ನಲ್ಲಿ ಮಾರಾಟವಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಪ್ರಚಾರಕ್ಕಾಗಿ ಲಾಟರಿ ಟಿಕೆಟ್‌ಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇಲಾಖೆಯ ಗಮನಕ್ಕೆ ಬಂದಿದೆ. ಹಾಗೆ ಮಾಡುವುದು ಕಾನೂನು ಬಾಹಿರ.

ನಿಯಮಗಳ ಪ್ರಕಾರ ನಗದು ನೀಡಿ ನೇರವಾಗಿ ಲಾಟರಿ ಖರೀದಿಸಬೇಕು. ಲಾಟರಿಯಲ್ಲಿ ಆನ್‌ಲೈನ್ ವಹಿವಾಟು ಕಾನೂನಿಗೆ ವಿರುದ್ಧವಾಗಿದೆ. ಲಾಟರಿ ಇಲಾಖೆಗೆ ಜಾರಿ ಅಧಿಕಾರ ಇಲ್ಲದಿರುವುದರಿಂದ ಪೊಲೀಸರಿಗೆ ದೂರು ನೀಡಲಾಗುವುದು.

ಇದಕ್ಕಾಗಿ ಕಾನೂನಿನ ಮೇಲೆ ತಿದ್ದುಪಡಿ ತರುವುದು ಅವಶ್ಯಕವಾಗಿದೆ. ಪ್ರಸ್ತುತ, ಆನ್‌ಲೈನ್ ವಹಿವಾಟಿನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಸಾಧ್ಯ ಎಂದು ಮೂಲಗಳು ಹೇಳುತ್ತಿವೆ.

5 ಟನ್ ತೂಕದ ‘ರುದ್ರ ವೀಣೆ’ಯನ್ನು ಸ್ಕ್ರ್ಯಾಪ್ ಮತ್ತು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ 15 ಕಲಾವಿದರ ತಂಡ

0

15 ಕಲಾವಿದರ ತಂಡವು 5 ಟನ್ ತೂಕದ ಭಾರತೀಯ ಸಂಗೀತ ವಾದ್ಯ ‘ವೀಣೆ’ಯ ಮಾದರಿಯನ್ನು ಸ್ಕ್ರ್ಯಾಪ್ ಮತ್ತು ತ್ಯಾಜ್ಯ ವಸ್ತುಗಳಿಂದ ತಯಾರಿಸಿದೆ.

ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ 15 ಕಲಾವಿದರ ತಂಡವು ಭಾರತೀಯ ಸಂಗೀತ ವಾದ್ಯ ‘ವೀಣೆ’ಯ ಮಾದರಿಯನ್ನು ಸ್ಕ್ರ್ಯಾಪ್ ಮತ್ತು ತ್ಯಾಜ್ಯ ವಸ್ತುಗಳಿಂದ ತಯಾರಿಸಿದೆ.

ಈ ಹಿಂದೆಯೂ ಸಹ, ನಾವು ತ್ಯಾಜ್ಯದಿಂದ ಉತ್ತಮವಾದ ತತ್ವದ ಮೇಲೆ ಸ್ಕ್ರ್ಯಾಪ್ ವಸ್ತುಗಳಿಂದ ಅನೇಕ ಇತರ ಮಾದರಿಗಳನ್ನು ತಯಾರಿಸಿದ್ದೇವೆ.

ಯುವ ಪೀಳಿಗೆಗೆ ಭಾರತೀಯ ಸಂಗೀತ ವಾದ್ಯಗಳ ಬಗ್ಗೆ ಅರಿವು ಮೂಡಿಸಲು ನಾವು ವೀಣೆಯನ್ನು ಸ್ಕ್ರ್ಯಾಪ್ ವಸ್ತುಗಳಿಂದ ತಯಾರಿಸಿದ್ದೇವೆ ಎಂದು ಕಲಾವಿದರು ಹೇಳುತ್ತಾರೆ.