Saturday, March 14, 2026
Home Blog Page 85

ಭರತಾಗಮನ ಮತ್ತು ಭೃಗು ಶಾಪ – ಯಕ್ಷಗಾನ ಪ್ರದರ್ಶನ

ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇದರ 14ನೇ ವರುಷದ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 06 2023 ನೇ ಭಾನುವಾರ ಮಧ್ಯಾಹ್ನ 3 ರಿಂದ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವನ್ನು ಆಯೋಜಿಸಲಾಗಿದೆ. ಮಧಾಹ್ನ 3 ರಿಂದ ಯಕ್ಷಕಲಾ ಅಕಾಡಮಿ ಬೆಂಗಳೂರು ಇದರ ಬಾಲ ಕಲಾವಿದರಿಂದ ಪಾರ್ತಿಸುಬ್ಬ ಮತ್ತು ಹೊಸ್ತೋಟ ಮಂಜುನಾಥ ಭಾಗವತರು ರಚಿತ ಭರತಾಗಮನ ಹಾಗೂ ಸಂಜೆ 5 ರಿಂದ ಯಕ್ಷಸಿಂಚನ ತಂಡದ ಕಲಾವಿದರಿಂದ ಶ್ರೀಧರ್ ಡಿ.ಎಸ್ ರಚಿತ ಭೃಗು ಶಾಪ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ.

ಇದೇ ಸಂದರ್ಭದಲ್ಲಿ ಖ್ಯಾತ ಹಿಮ್ಮೇಳ ಕಲಾವಿದರು ಹಾಗೂ ಯಕ್ಷಗುರುಗಳಾದ ಶ್ರೀ ಐನ್ಬೈಲ್ ಪರಮೇಶ್ವರ ಹೆಗಡೆ ಅವರಿಗೆ ಸಾರ್ಥಕ ಸಾಧಕ-2023 ಪ್ರಶಸ್ತಿ ಪ್ರದಾನವಾಗಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀಧರ್ ಡಿ.ಎಸ್ ಖ್ಯಾತ ಪ್ರಸಂಗಕರ್ತರು ಹಾಗೂ ಸಾಹಿತಿಗಳು, ಶ್ರೀ ಜಗದೀಶ್ ಶರ್ಮ ಸಂಪಾ, ಖ್ಯಾತ ಸಾಹಿತಿಗಳು, ಶ್ರೀ ಕಿರಣ್ ಉಪಾಧ್ಯಾಯ, ಬಹ್ರೇನ್ , ಖ್ಯಾತ ಅಂಕಣಕಾರರು ಇವರುಗಳು ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮವು ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು ಇಲ್ಲಿ ಸಂಪನ್ನವಾಗುತ್ತಿದೆ.

ಹಿಮ್ಮೇಳದಲ್ಲಿ ಶ್ರೀ ಐನ್ಬೈಲ್ ಪರಮೇಶ್ವರ ಹೆಗಡೆ, ಶ್ರೀ ಎ.ಪಿ. ಪಾಠಕ್, ಶ್ರೀ ಕೃಷ್ಣಮೂರ್ತಿ ತುಂಗ, ಕುಮಾರಿ ಚಿತ್ಕಲಾ ತುಂಗಾ, ಶ್ರೀ ಚಿನ್ಮಯ ಅಂಬರಗೊಡ್ಲು, ಶ್ರೀ ಮನೋಜ್ ಆಚಾರ್ಯ ಭಾಗವಹಿಸಿದರೆ

ಮುಮ್ಮೇಳದಲ್ಲಿ ಕುಮಾರಿ ಪಂಚಮಿ, ಕುಮಾರ ರಜತ್, ಕುಮಾರ ರಿತೇಶ್, ಕುಮಾರಿ ವೈಷ್ಣವಿ, ಕುಮಾರ ಅಶ್ವಿನ್, ಕುಮಾರಿ ಭಾರ್ಗವಿ, ಕುಮಾರ ಸುಜನ್, ಕುಮಾರ ಸೃಜನ್, ಕುಮಾರ ಸ್ಕಂದ, ಕುಮಾರ ಪುರುಜಿತ್, ಕುಮಾರಿ ಕಾತ್ಯಾಯಿನಿ, ಶ್ರೀ ಪ್ರವೀಣ್ ಉಡುಪಿ, ಶ್ರೀ ರವಿ ಮಡೋಡಿ, ಶ್ರೀ ಶಶಿರಾಜ ಸೋಮಯಾಜಿ, ಶ್ರೀ ಮನೋಜ್ ಭಟ್, ಶ್ರೀ ಗುರುರಾಜ್ ಭಟ್, ಶ್ರೀ ಶಶಾಂಕ್ ಕಾಶಿ, ಶ್ರೀ ಆದಿತ್ಯ ಉಡುಪ, ಶ್ರೀ ಕೃಷ್ಣ ಶಾಸ್ತ್ರಿ ಮುಂತಾದವರು ಭಾಗವಹಿಸುತ್ತಿದ್ದಾರೆ.

ನಿರ್ದೇಶನ: ಶ್ರೀ ಕೃಷ್ಣಮೂರ್ತಿ ತುಂಗ

ಸಂಪರ್ಕ: ರವಿ ಮಡೋಡಿ-9986384205, ಶಶಿರಾಜ ಸೋಮಯಾಜಿ- 9986363495

ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ, ‘ಯಕ್ಷಾವತರಣ’ – ತಾಳಮದ್ದಳೆ ಸಪ್ತಾಹ

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ, ‘ಯಕ್ಷಾವತರಣ-4’ 07-08-2023 ಸೋಮವಾರದಿಂದ ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಭವನದಲ್ಲಿ ನಡೆಯಲಿದೆ.

07-08-2023 ಸೋಮವಾರದಿಂದ ಏಳು ದಿನಗಳ ಕಾಲ ನಡೆಯಲಿರುವ ಈ ಸಪ್ತಾಹವು ಪ್ರತಿದಿನ ಸಂಜೆ 6 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ನಡೆಯಲಿದೆ.

ಈ ಏಳೂ ದಿನಗಳಂದು ವಿದ್ವಾನ್ ಕೆರೇಕೈ ಉಮಾಕಾಂತ ಭಟ್ಟರ ಅರ್ಥ ಪ್ರಸ್ತುತಿ ನಡೆಯಲಿದೆ.

ಏಳು ದಿನಗಳಲ್ಲಿ ರಾಮ, ವಸಿಷ್ಠ, ಕರ್ಣ, ಕೃಷ್ಣ, ವಿದುರ, ಅತಿಕಾಯ, ಕೃಷ್ಣ ಎಂಬ ಪಾತ್ರಗಳ ಪ್ರಸ್ತುತಿ ನಡೆಯಲಿದೆ.

ವಿವರಗಳಿಗೆ ಚಿತ್ರವನ್ನು ನೋಡಿ.

ವಲಸೆ ಕಾರ್ಮಿಕನಿಂದ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಬಲಿಪಶು ಇನ್ನೊಬ್ಬ ವಲಸೆ ಕಾರ್ಮಿಕರ ಮಗಳು


ಮಲಪ್ಪುರಂ: ಅಲುವಾದಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳ ನೀಡಿ ಬರ್ಬರವಾಗಿ ಹತ್ಯೆ ಮಾಡಿರುವ ಸುದ್ದಿ ಕೇರಳದಲ್ಲಿ ಇನ್ನೂ ಹಸಿರಾಗಿದೆ..

ಇದೀಗ ಮಲಪ್ಪುರಂನಲ್ಲೂ ಅಂಥದ್ದೇ ಒಂದು ಅಪರಾಧ ವರದಿಯಾಗಿದೆ. ತಿರುರಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರಿ ಎಂಬಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

ಬಲಿಪಶು ವಲಸೆ ಕಾರ್ಮಿಕ ದಂಪತಿಯ ಪುತ್ರಿ. ದಂಪತಿಯ ಸ್ನೇಹಿತ, ಮಧ್ಯಪ್ರದೇಶ ಮೂಲದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ.

ಆಕೆಯೊಂದಿಗೆ ಆಟವಾಡುವ ನೆಪದಲ್ಲಿ ಆರೋಪಿ ಮಗುವನ್ನು ತನ್ನ ಕೋಣೆಗೆ ಕರೆದೊಯ್ದಿದ್ದಾನೆ. ಬಾಲಕಿಯ ಕಿರುಚಾಟ ಕೇಳಿ ಪೋಷಕರು ಸ್ಥಳಕ್ಕೆ ಧಾವಿಸಿದ್ದಾರೆ. ಮಗುವಿನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ ಆರೋಪಿ ಹಾಗೂ ಮಗುವಿನ ಪೋಷಕರು ಮಧ್ಯಪ್ರದೇಶ ಮೂಲದವರು.

ಚೆಸ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮೂಡ್ನೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ತ್ರಿಶೂಲ್ ಎನ್.ಡಿ ( ನಂದಿಲ ದಾಮೋದರ್ ಮತ್ತು ಶಿಕ್ಷಕಿ ಶ್ರೀಮತಿ ನವೀನ ದಂಪತಿಗಳ ಪುತ್ರ) ಮತ್ತು ಸುಶ್ಮಿತಾ ರಾವ್ (ತ್ರಿವಿಕ್ರಮ ರಾವ್ ಮತ್ತು ಶಾರದಾ ದಂಪತಿಗಳ ಪುತ್ರಿ) ವಿಜೇತರಾಗಿದ್ದು,

ಆಗಸ್ಟ್ 3ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ನಡೆಯುವ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ರಾಮಾಯಣ ಮಾಸಾಚರಣೆ – ಭಜನೆ, ತಾಳಮದ್ದಳೆ, ಪ್ರವಚನ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ರಾಮಾಯಣ ಮಾಸಾಚರಣೆ ಪ್ರಯುಕ್ತ ಭಜನೆ, ತಾಳಮದ್ದಳೆ, ಪ್ರವಚನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

11.08.2023ರಿಂದ 17.08.2023ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ವಿವರಗಳಿಗೆ ಚಿತ್ರ ನೋಡಿ.

ಇನ್‌ಸ್ಟಾ ಗ್ರಾಂ ಸ್ನೇಹಿತ’ನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಲು ಯತ್ನಿಸುತ್ತಿದ್ದ ಹದಿಹರೆಯದ ಹಿಂದೂ ಯುವತಿ – ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧನ


ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆಯಲ್ಲಿ, ಭದ್ರತಾ ಸಿಬ್ಬಂದಿ 16 ವರ್ಷದ ಹಿಂದೂ ಹುಡುಗಿಯೊಬ್ಬಳು ತಾನು ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿದ ಹುಡುಗನನ್ನು ಭೇಟಿ ಮಾಡಲು ಪಾಕಿಸ್ತಾನದ ಲಾಹೋರ್‌ಗೆ ಹಾರಲು ಪ್ರಯತ್ನಿಸುತ್ತಿದ್ದಳು.

ವರದಿಯ ಪ್ರಕಾರ, ಹಿಂದೂ ಹುಡುಗಿ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಹೋರ್‌ಗೆ ಟಿಕೆಟ್‌ಗಾಗಿ ವಿಚಾರಿಸಿದಾಗ ವಿಮಾನ ನಿಲ್ದಾಣದ ಭದ್ರತೆಯ ಗಮನ ಸೆಳೆದಳು. ಮತ್ತೊಂದೆಡೆ, ಆಕೆಯ ಬಳಿ ಪಾಸ್‌ಪೋರ್ಟ್, ವೀಸಾ ಅಥವಾ ಯಾವುದೇ ಇತರ ದಾಖಲೆಗಳು ಇರಲಿಲ್ಲ.


ಶೀಘ್ರವಾಗಿ, ವಿಮಾನ ನಿಲ್ದಾಣದ ಭದ್ರತೆಯು ಅವಳನ್ನು ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಿತು, ಅಲ್ಲಿ ಅವಳು ಆರಂಭದಲ್ಲಿ ತನ್ನನ್ನು “ಗಜಾಲ್ ಮೊಹಮ್ಮದ್” ಎಂದು ಗುರುತಿಸಿಕೊಂಡಳು, ಮೂರು ವರ್ಷಗಳ ಹಿಂದೆ ತನ್ನ ಚಿಕ್ಕಮ್ಮನೊಂದಿಗೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಪ್ರಜೆ. ಆದರೆ, ಸಿಕಾರ್‌ನಲ್ಲಿರುವ ತನ್ನ ಸೋದರಸಂಬಂಧಿಯನ್ನು ಮದುವೆಯಾಗುವಂತೆ ಚಿಕ್ಕಮ್ಮನ ಒತ್ತಡದಿಂದಾಗಿ ಪಾಕಿಸ್ತಾನಕ್ಕೆ ಮರಳಲು ನಿರ್ಧರಿಸಿದೆ ಎಂದು ಅವಳು ಹೇಳಿಕೊಂಡಿದ್ದಾಳೆ.


ಘಟನೆಯಿಂದ ಅಧಿಕಾರಿಗಳು ಗಾಬರಿಗೊಂಡಿದ್ದಾರೆ, ವಿಶೇಷವಾಗಿ ಅಲ್ವಾರ್ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಪ್ರೇಮಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ ಪ್ರಕರಣವನ್ನು ಗಮನಿಸಿದರೆ. ಜೈಪುರ ಪೊಲೀಸರು ತಕ್ಷಣವೇ ರಾಜ್ಯ ಗುಪ್ತಚರವನ್ನು ಎಚ್ಚರಿಸಿದರು, ಡಿಸಿಪಿ (ಪೂರ್ವ) ಜ್ಞಾನ್ ಚಂದ್ರ ಯಾದವ್ ಮತ್ತು ಎಸಿಪಿ (ಮಾಳವೀಯ ನಗರ) ಚಿರಂಜಿ ಲಾಲ್ ಮೀನಾ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ತನಿಖೆಗೆ ಸೇರುವಂತೆ ಪ್ರೇರೇಪಿಸಿದರು.


ಹುಡುಗಿಯ ಚಿಕ್ಕಮ್ಮನನ್ನು ಸಿಕಾರ್‌ನಲ್ಲಿ ಪತ್ತೆಹಚ್ಚಲು ಪ್ರಯತ್ನಿಸಲಾಯಿತು, ಆದರೆ ಸಂಜೆ 6 ರ ಹೊತ್ತಿಗೆ, ಆ ವಿವರಣೆಯ ಪ್ರಕಾರ ಯಾವುದೇ ಮಹಿಳೆ ಅಥವಾ ಗಜಾಲ್ ಎಂಬ ಹುಡುಗಿ ಉಲ್ಲೇಖಿಸಿದ ಗ್ರಾಮದಲ್ಲಿ ವಾಸಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಹೆಚ್ಚಿನ ವಿಚಾರಣೆಯ ನಂತರ, ಹುಡುಗಿ ಅಂತಿಮವಾಗಿ ತನ್ನ ನಿಜವಾದ ಗುರುತು ಗಝಲ್ ಅಲ್ಲ ಎಂದು ಒಪ್ಪಿಕೊಂಡಳು; ಬದಲಾಗಿ, ತಾನು ಜೈಪುರದ ಬಳಿಯ ಚೋಮು ಎಂಬಲ್ಲಿ ವಾಸಿಸುತ್ತಿದ್ದಳು ಮತ್ತು ತನ್ನ ಸಹೋದರಿಯೊಂದಿಗೆ ಶಾಲೆಗೆ ಹೋಗುತ್ತಿದ್ದಳು ಎಂದು ಅವಳು ಬಹಿರಂಗಪಡಿಸಿದಳು.


ಲಾಹೋರ್‌ನ ‘ಅಸ್ಲಾಂ’ ಎಂಬ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಹೊಂದಿದ್ದಾಗಿ ಹುಡುಗಿ ಒಪ್ಪಿಕೊಂಡಿದ್ದಾಳೆ, ಪಾಕಿಸ್ತಾನಕ್ಕೆ ವಿಮಾನವನ್ನು ಬುಕ್ ಮಾಡುವಾಗ ‘ಗಜಾಲ್’ ಎಂಬ ಅಲಿಯಾಸ್ ಬಳಸುವಂತೆ ಸಲಹೆ ನೀಡಿದ್ದ. ಸಾಮಾಜಿಕ ಮಾಧ್ಯಮದ ಮೂಲಕ ಈ ಯೋಜನೆಯಲ್ಲಿ ಬಾಲಕ ತನ್ನ ಮೇಲೆ ಪ್ರಭಾವ ಬೀರಿ ತರಬೇತಿ ನೀಡಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದಾಗ್ಯೂ, ಹುಡುಗಿ ತನ್ನ ಹೆತ್ತವರ ಬಳಿಗೆ ಮರಳುವ ಸ್ಪಷ್ಟ ಬಯಕೆಯನ್ನು ವ್ಯಕ್ತಪಡಿಸಲಿಲ್ಲ.

ಜೈಪುರಕ್ಕೆ ಪ್ರಯಾಣಿಸಲು ಹುಡುಗಿಗೆ ಸಹಾಯ ಮಾಡಿದ ಇಬ್ಬರು ಹುಡುಗರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಇಬ್ಬರೂ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ಆಕೆಗೆ ಪರಿಚಯವಿದ್ದರು.

ವಿಶ್ವ ಜಾಂಬೂರಿ 2023: ವಿವೇಕಾನಂದ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ಪುತ್ತೂರು, ಜು 30: ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಇತರರೊಡನೆ ಕ್ರಿಯಾಶೀಲವಾಗಿ ಪಾಲ್ಗೊಳ್ಳುವ, ನಾಯಕತ್ವ, ಕುಶಲತೆ ಮತ್ತು ವೈಯಕ್ತಿಕ ಹೊಣೆಗಾರಿಕೆಯ ನಿಟ್ಟಿನಲ್ಲಿ ನಿಮ್ಮ ಕನಸುಗಳನ್ನು ಚಿತ್ರಿಸಿಕೊಳ್ಳಿ ಎಂಬ ಧ್ಯೇಯದೊಂದಿಗೆ ದಕ್ಷಿಣ ಕೊರಿಯಾದಲ್ಲಿ ದಿನಾಂಕ ಆ.1ರಿಂದ ಆ.12ರವರೆಗೆ ನಡೆಯುವ ಸ್ಕೌಟ್ಸ್ ಮತ್ತು ಗೈಡ್ಸ್ ನ 25ನೇ ವಿಶ್ವ ಜಾಂಬೂರಿಯಲ್ಲಿ 2023ರಲ್ಲಿ

ಭಾರತ ದೇಶದ ಪ್ರತಿನಿಧಿಗಳಾಗಿ ಭಾಗವಹಿಸಲು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.

ವಿದ್ಯಾರ್ಥಿಗಳಾದ ಧನುಷ್‌ರಾಮ್ ಎಂ (ಕಿಯೋನಿಕ್ಸ್ನ ದಿನೇಶ್ ಪ್ರಸನ್ನ ಮತ್ತು ಉಮಾ ಪ್ರಸನ್ನ ರವರ ಪುತ್ರ) ಹಾಗೂ ವೈಷ್ಣವಿ(ಮುಕ್ರುಂಪಾಡಿಯ ಹರ್ಷ ಡಿ ಎಸ್ ಮತ್ತು ಕವಿತಾ ಕೆ ರವರ ಪುತ್ರಿ) ಭಾಗವಹಿಸಲಿದ್ದಾರೆ.

ಜುಲೈ 31ಕ್ಕೆ ಮಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವ 48 ವಿದ್ಯಾರ್ಥಿಗಳ ತಂಡದೊಂದಿಗೆ ಈ ವಿದ್ಯಾರ್ಥಿಗಳು ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ಸೌತ್ ಕೊರಿಯಾಕ್ಕೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಿರಿಬಾಗಿಲಿನಲ್ಲಿ ಮಂಜುನಾದ

ಮಣಿಕೃಷ್ಣ ಸ್ವಾಮಿ ಅಕಾಡಮಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಕೃತಿಗಳಾಧರಿತ 14″ನೇ ಸಂಗೀತ ಕಛೇರಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯಿತು.

ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗಡಿನಾಡು ಕಾಸರಗೋಡಿನಲ್ಲಿ ಚಾರಿತ್ರಿಕ ಕಾರ್ಯಕ್ರಮ ಆಯೋಜಿಸಿ ಸಿರಿಬಾಗಿಲು ಪ್ರತಿಷ್ಠಾನದ ಯೋಜನೆ ಯೋಚನೆ ಅದ್ವಿತೀಯವಾದುದು.

ಸಾಂಸ್ಕೃತಿಕ ಹಾಗು ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾಯಕ ಪ್ರತಿಷ್ಠಾನ ನಡೆಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ದ ಕೃತಿಗಳನ್ನು ಆಧಾರಿಸಿ ಮಣಿಕೃಷ್ಣ ಸ್ವಾಮಿ ಅಕಾಡಮಿಯು ಇಂತಹ ಅಪೂರ್ವವಾದ ಕೊಡುಗೆ ಸಮಾಜಕ್ಕೆ ನೀಡುತ್ತಿದೆ. ಮಂಜುನಾಥ ಸ್ವಾಮಿಯು ಅನುಗ್ರಹಿಸಲಿ ಎಂದು ಹರಸಿದರು.

ಶ್ರೀ ಕಲ್ಮಾಡಿ ಸದಾಶಿವ ಆಚಾರ್ಯರವರು ಅಪಾರ ಶಿಷ್ಯ ವೃಂದವನ್ನು ಹೊಂದಿದ ಸಂಗೀತ ಕ್ಷೇತ್ರದ ಕಾಸರಗೋಡಿನ ಹಿರಿಯ ವಿದ್ವಾಂಸ ರಾಗಿದ್ದಾರೆ.


ಧಾರ್ಮಿಕ ಮುಂದಾಳು ಶ್ರೀ ವೆಂಕಟ್ರಮಣ ಹೊಳ್ಳ ಕಾಸರಗೋಡು, ನಿವೃತ್ತ ಪ್ರಾಧ್ಯಾಪಕ ಪ್ರೋ. ಶ್ರೀನಾಥ್, ಶ್ರೀ ಮೋಹನದಾಸ್ ಶೆಟ್ಟಿ ಸಿರಿಬಾಗಿಲು, ಸಂಗೀತ ವಿಧುಷಿ ಶ್ರೀಮತಿ ರಾಧಾ ಮುರಳೀಧರನ್,ಶ್ರೀ ಲಕ್ಷ್ಮೀ ನಾರಾಯಣ ಕಾವುಮಠ ಉಪಸ್ಥಿತರಿದ್ದರು.


ಹಲವು ಕ್ಷೇತ್ರದಲ್ಲಿ ಸಂಗೀತ ಕಾರ್ಯಾಗಾರ ನಡೆಸಿದ್ದೇವೆ. ಯಕ್ಷಗಾನ ಕ್ಷೇತ್ರದ ಪ್ರಧಾನ ಕೇಂದ್ರವಾಗಿರುವ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇದೇ ಪ್ರಥಮ. ನಮ್ಮ ಸುಯೋಗವೆಂದು ಮಣಿಕೃಷ್ಣ ಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಶ್ರೀ ನಿತ್ಯಾನಂದ ರಾವ್ ಪೇಜಾವರ ಹೇಳಿದರು. .


ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಸ್ವಾಗತಿಸಿದರು.
ಆ ಬಳಿಕ ಶ್ರೇಯಾ ಕೊಳತ್ತಾಯ ಸುರತ್ಕಲ್, ಉಷಾ ರಾಮಕೃಷ್ಣ ಭಟ್ ಕಿನ್ನಿಗೊಳಿ, ಶರಣ್ಯಾ ಕೆ.ಯಸ್. ಸುರತ್ಕಲ್, ಸುಮೇಧಾ ಕೆ.ಯನ್.ಮೇಧಾ ಉಡುಪ ಮಂಗಳೂರು ಇವರಿಂದ ಮಂಜುನಾದ ಸಂಗೀತ ಕಛೇರಿ ನಡೆಯಿತು,

ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಕೌಶಿಕ್ ರಾಮಕೃಷ್ಣನ್ ಕಾಸರಗೋಡು ಸಹಕರಿಸಿದರು . .


ಸಿರಿಬಾಗಿಲು ಪ್ರತಿಷ್ಠಾನದ ವರದಿ

ಸಾಮ್ರಾಟ್ ನಹುಷೇಂದ್ರ- ಅಮೋಘ ಯಕ್ಷಗಾನ ಪ್ರದರ್ಶನ

ಕುಡುಪು ವಿವಿದೊದ್ದೇಶ ಸಹಕಾರಿ ಸಂಘ(ರಿ) ಕುಡುಪು

ಇದರ ವಾರ್ಷಿಕ ಮಹಾಸಭೆಯ ಪ್ರಯುಕ್ತ ದಿನಾಂಕ 30.07.2023 ರಂದು ಮದ್ಯಾಹ್ನ 2.30 ರಿಂದ ಶ್ರೀ ಕ್ಷೇತ್ರ ಕುಡುಪು ವಿನಲ್ಲಿ ಪೌರಾಣಿಕ ಯಕ್ಷಗಾನ

ಸಾಮ್ರಾಟ್ ನಹುಷೇಂದ್ರ

ಹಿಮ್ಮೇಳದಲ್ಲಿ :
ಭಾಗವತರು : ಶ್ರೀ ರಘುರಾಮ ಹೊಳ್ಳ ಪುತ್ತಿಗೆ , ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು
ಚೆಂಡೆ ಮದ್ದಲೆ : ಶ್ರೀ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಶ್ರೀ ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ , ಕೌಶಿಕ್ ರಾವ್ ಪುತ್ತಿಗೆ, ಅಲೆವೂರಾಯ

ಮುಮ್ಮೇಳ :
▪️ಆಯು ಮಹಾರಾಜ, ಧರ್ಮರಾಯ : ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ
▪️ಹುಂಡಾಸುರ 1 : ರಾಧಾಕೃಷ್ಣ ನಾವಡ ಮಧೂರು
▪️ಹುಂಡಾಸುರ 2 : ಹರಿನಾರಾಯಣ ಭಟ್ ಎಡನೀರು
▪️ಬಲಗಳು : ಉಮೇಶ್ ಕುಪ್ಪೆಪದವು, ನಿಖಿಲ್ ಕೊಯಿಲ
▪️ಶಿವಮುನಿ, ಪಾಚಕ , ಸಖ‌: ಮಹೇಶ್ ಮಣಿಯಾಣಿ
▪️ದುರ್ಮುಖಿ : ಬಾಲಕೃಷ್ಣ ಮಿಜಾರು


▪️ಮೇಖಲೆ , ಭೀಮ : ಗಂಗಾಧರ ಪುತ್ತೂರು
▪️ವಸಿಷ್ಠ : ವಾದಿರಾಜ ಕಲ್ಲೂರಾಯ
▪️ಈಶ್ವರ , ಅಗಸ್ತ್ಯ : ರವಿ ಮುಂಡಾಜೆ
▪️ಪಾರ್ವತಿ : ರವಿ ಅಲೆವೂರಾಯ
▪️ಅಶೋಕ ಸುಂದರಿ : ಅರುಣ್ ಕೋಟ್ಯಾನ್
▪️ರಂಭೆ , ಶಚಿ : ಶರತ್ ಶೆಟ್ಟಿ ತೀರ್ಥಹಳ್ಳಿ
▪️ನಹುಷ 1 : ಚಂದ್ರಶೇಖರ ಧರ್ಮಸ್ಥಳ
▪️ನಹುಷ 2 : ಸುಬ್ರಾಯ ಹೊಳ್ಳ ಕಾಸರಗೋಡು


▪️ಯಯಾತಿ : ಅಕ್ಷಯ ಭಟ್ ಮೂಡಬಿದಿರೆ
▪️ದೃಢವರ್ಮ : ಗಣೇಶ್ ಶೆಟ್ಟಿ ಅರಳ
▪️ಬ್ರಹಸ್ಫತಿ : ಶಂಭಯ್ಯ ಭಟ್ ಕಂಜರ್ಪಣೆ

ಸರ್ವರಿಗೂ ಆದರದ ಸ್ವಾಗತ

ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಮಾಹಿತಿ ಕಾರ್ಯಾಗಾರ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಒಂದು ದಿನದ ಕಾರ್ಯಾಗಾರ ಶಾಲಾ ಸಭಾಂಗಣದಲ್ಲಿ ದಿನಾಂಕ 21-07-2023ರಂದು ನಡೆಯಿತು.

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಈ ಕಾರ್ಯಾಗಾರ ನಡೆಯಿತು. ಡಾ.ಸಂದೀಪ್.ಎಚ್.ಎಸ್ ಮಕ್ಕಳ

ತಜ್ಞರು ಮತ್ತು ಡಾ.ಅನನ್ಯ ಲಕ್ಷ್ಮೀ ಸಂದೀಪ್ ತಜ್ಞರು ಕಮ್ಯುನಿಟಿ ಮೆಡಿಸಿನ್, ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಹದಿಹರೆಯದ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ವಿವಿಧ ಚಟುವಟಿಕೆಗಳೊಂದಿಗೆ ಕ್ರಿಯಾಶೀಲರಾಗಿ ನೆರೆವೇರಿಸಿಕೊಟ್ಟರು.

ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ಸದಸ್ಯೆಯಾದ ಶ್ರೀಮತಿ ಮಾಲಾ ಮಹೇಶ್ ಉಪಸ್ಥಿತರಿದ್ದರು. ಶ್ರೀಮತಿ ಆಶಾ.ಕೆ ಮತ್ತು ಶ್ರೀಮತಿ ಭಾರತಿ.ಎಸ್.ಎ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ಶ್ರೀಮತಿ ಕವಿತಾ, ಶ್ರೀಮತಿ ಶಾಂತಿ, ಶ್ರೀಮತಿ ದೀಪ್ತಿ ಹಾಗೂ ಶ್ರೀಮತಿ ಲತಾ ಕುಮಾರಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಲಕ್ಷ್ಮೀ ಹಾಗೂ ಶ್ರೀಮತಿ ರೇಖಾ ಆಚಾರ್ಯ ವಂದಿಸಿದರು.