Sunday, August 2, 2026
Home Blog Page 78

ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲೆಯಲ್ಲಿ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಶಿಕ್ಷಕ – ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಅಮಾನವೀಯ ಘಟನೆ – ದೂರು ನೀಡಿದ ಪೋಷಕರು

0

ಶಿಕ್ಷಕರು ಎಂದರೆ ಮಕ್ಕಳನ್ನು ತಿದ್ದಿ ಸರಿದಾರಿಗೆ ತಂದು ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕಾದವರು. ಆದರೆ ಇಲ್ಲೊಬ್ನ ಶಿಕ್ಷಕ ತನ್ನ ಮನೋವಿಕೃತಿಯನ್ನು ಹೊರಜಗತ್ತಿಗೆ ಪರಿಚಯಿಸಿದ್ದಾನೆ.

ಸರಕಾರಿ ಶಾಲೆಗಳಲ್ಲಿ (Government Schools) ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದ್ದು, ಮೊಟ್ಟೆ ತಿನ್ನದ ಸಸ್ಯಾಹಾರಿ ಮಕ್ಕಳಿಗೆ ಬಾಳೆಹಣ್ಣು ವಿತರಿಸಲಾಗುತ್ತಿದೆ.

ಮಕ್ಕಳಿಗೆ ಯಾವುದು ವಿತರಿಸಬೇಕು ಎಂಬುದನ್ನು ಮೊದಲೇ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮಾಹಿತಿ ಪಡೆದಿರುತ್ತಾರೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಅಮಾನುಷ ಘಟನೆಯೊಂದು ನಡೆದಿದೆ.


ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿಯ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ಶಾಲೆಯಲ್ಲಿ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಮೃತ ಗ್ರಾಮದಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ.

ಪ್ರಾಥಮಿಕ ಶಾಲೆಯ ಶಿಕ್ಷಕ ಬಲವಂತವಾಗಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಿಸಿದ್ದಾರೆ. ಮೊಟ್ಟೆ ತಿಂದ ಬಳಿಕ ವಿದ್ಯಾರ್ಥಿನಿ ಮಾನಸಿಕವಾಗಿ ಕುಗ್ಗಿದ್ದು, ಆಕೆಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ, ಧಾರ್ಮಿಕ‌ ಆಚರಣೆಗೆ ಧಕ್ಕೆ ಉಂಟಾಗಿದೆ ಎಂದು‌‌ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಇದೊಂದು ಹೇಯ ಕೃತ್ಯ. ಇಂತಹ ಘಟನೆಗಳು ಮಕ್ಕಳ ‌ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕ್ರೂರ ಮನಸ್ಥಿತಿಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿಯ ತಂದೆ ಶ್ರೀಕಾಂತ್ ಶಾಸಕ ಆರಗ ಜ್ಞಾನೇಂದ್ರ ಹಾಗೂ ಡಿಡಿಪಿಐ ಅವರಿಗೆ ದೂರನ್ನು ನೀಡಿದ್ದಾರೆ.

ಚೀನಾದ ಶಾಲೆಗಳಲ್ಲಿ ಏಕಾಏಕಿ ವ್ಯಾಪಿಸಿದ ನಿಗೂಢ ನ್ಯುಮೋನಿಯಾ ಮತ್ತು ಅನಾರೋಗ್ಯದ ಮಕ್ಕಳಿಂದ ತುಂಬಿಹೋದ ಆಸ್ಪತ್ರೆಗಳು – ಚೀನಾದಿಂದ ವರದಿ ಕೇಳಿದ WHO

0


ನಿಗೂಢ ನ್ಯುಮೋನಿಯಾ ಏಕಾಏಕಿ ಚೀನಾದಲ್ಲಿ ಶಾಲೆಗಳಲ್ಲಿ ವ್ಯಾಪಿಸಿದೆ ಮತ್ತು ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿಹೋಗಿವೆ. ಈ ಪ್ರಕರಣಗಳ ಹೆಚ್ಚಳದ ಕುರಿತು WHO ಚೀನಾದಿಂದ ವಿವರವಾದ ಮಾಹಿತಿಯನ್ನು ಕೇಳಿದೆ.


ಕೋವಿಡ್ -19 ಸಾಂಕ್ರಾಮಿಕದ ವಿನಾಶಕಾರಿ ಪರಿಣಾಮಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಚೀನಾ, ಮತ್ತೊಂದು ಸಂಭವನೀಯ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ – ನಿಗೂಢ ನ್ಯುಮೋನಿಯಾ ಏಕಾಏಕಿ ಶಾಲೆಗಳಲ್ಲಿ ವ್ಯಾಪಿಸಿದೆ ಮತ್ತು ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿಹೋಗಿವೆ. ಇದು ಜಾಗತಿಕ ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ.

ಈ ಏಕಾಏಕಿ ಕೇಂದ್ರಬಿಂದುಗಳು ಬೀಜಿಂಗ್ ಮತ್ತು ಲಿಯಾನಿಂಗ್ ಪ್ರಾಂತ್ಯಗಳಾಗಿವೆ, ಅಲ್ಲಿ ಮಕ್ಕಳ ಆಸ್ಪತ್ರೆಗಳು ಅಗಾಧ ಸಂಖ್ಯೆಯ ಅನಾರೋಗ್ಯದ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿವೆ. ಪರಿಸ್ಥಿತಿಯ ತೀವ್ರತೆಯು ಕೆಲವು ಶಾಲೆಗಳಲ್ಲಿ ತರಗತಿಗಳನ್ನು ಸ್ಥಗಿತಗೊಳಿಸಲು ಕಾರಣವಾಗಿದೆ, ಏಕೆಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರೂ ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ಇದು ಕೋವಿಡ್ -19 ರ ಆರಂಭಿಕ ದಿನಗಳನ್ನು ನೆನಪಿಸುತ್ತದೆ.


ಬಾಧಿತ ಮಕ್ಕಳು ಪ್ರದರ್ಶಿಸುವ ರೋಗಲಕ್ಷಣಗಳು ಅಧಿಕ ಜ್ವರ ಮತ್ತು ಶ್ವಾಸಕೋಶದ ಉರಿಯೂತ, ಆದರೆ ಕೆಮ್ಮು ಇರುವುದಿಲ್ಲ, ಒಬ್ಬ ವ್ಯಕ್ತಿಯು ಜ್ವರದಿಂದ ಬಳಲುತ್ತಿರುವಾಗ ಅಥವಾ RSV ನಂತಹ ಉಸಿರಾಟದ ವೈರಸ್ ಕಾಯಿಲೆಗಳಿಂದ ಬಳಲುತ್ತಿರುವಾಗ ಇದು ಸಾಮಾನ್ಯವಾಗಿದೆ.

ಬೀಜಿಂಗ್‌ನ ನಾಗರಿಕರೊಬ್ಬರು ತೈವಾನೀಸ್ ಸುದ್ದಿ ವೆಬ್‌ಸೈಟ್ ಎಫ್‌ಟಿವಿ ನ್ಯೂಸ್‌ಗೆ ಹೇಳಿದರು, “ಹಲವು, ಅನೇಕ (ಮಕ್ಕಳು) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಕೆಮ್ಮುವುದಿಲ್ಲ ಮತ್ತು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಅವರು ಕೇವಲ ಹೆಚ್ಚಿನ ತಾಪಮಾನವನ್ನು ಹೊಂದಿದ್ದಾರೆ ಮತ್ತು ಅನೇಕರು ಶ್ವಾಸಕೋಶದ ಗಂಟುಗಳನ್ನು ಹೊಂದಿದ್ದಾರೆ.


ಅಂತರರಾಷ್ಟ್ರೀಯ ರೋಗ ಕಣ್ಗಾವಲು ವೇದಿಕೆಯಾದ ಪ್ರೋಮೆಡ್ ಮಂಗಳವಾರ ಮಕ್ಕಳ ಮೇಲೆ ಪರಿಣಾಮ ಬೀರುವ ರೋಗನಿರ್ಣಯ ಮಾಡದ ನ್ಯುಮೋನಿಯಾದ ಬಗ್ಗೆ ಎಚ್ಚರಿಕೆಯನ್ನು ನೀಡಿತು. ಪ್ರಸ್ತುತ ಏಕಾಏಕಿ ಪ್ರಾರಂಭವು ಅಸ್ಪಷ್ಟವಾಗಿದೆ, ಮತ್ತು ಇದು ವಯಸ್ಕರ ಮೇಲೆ ಪರಿಣಾಮ ಬೀರುವ ಬಗ್ಗೆ ವರದಿಯಾಗಿಲ್ಲವಾದರೂ, ಮಕ್ಕಳಲ್ಲಿ ಕ್ಷಿಪ್ರವಾಗಿ ಹರಡುವಿಕೆಯು ಶಾಲಾ ಪರಿಸರಕ್ಕೆ ಸಂಭವನೀಯ ಲಿಂಕ್ ಅನ್ನು ಸೂಚಿಸುತ್ತದೆ.

ಚೀನೀ ಆಸ್ಪತ್ರೆಗಳು ರೋಗನಿರ್ಣಯ ಮಾಡದ ನ್ಯುಮೋನಿಯಾ ಪ್ರಕರಣಗಳಲ್ಲಿ ಹೆಚ್ಚಳವನ್ನು ಗಮನಿಸಿವೆ, ವಿಶೇಷವಾಗಿ ಅಕ್ಟೋಬರ್ ಆರಂಭದಲ್ಲಿ ರಾಷ್ಟ್ರೀಯ ದಿನದ ರಜೆಯ ನಂತರ. ಏಕಾಏಕಿ ತೀವ್ರತೆಯ ಹೊರತಾಗಿಯೂ, ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ.

WHO ಚೀನಾದಿಂದ ವಿವರವಾದ ಮಾಹಿತಿಯನ್ನು ಬಯಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳ ಮತ್ತು ನ್ಯುಮೋನಿಯಾದ ಸಮೂಹಗಳ ಬಗ್ಗೆ ವಿವರವಾದ ಮಾಹಿತಿಗಾಗಿ ಚೀನಾಕ್ಕೆ ಅಧಿಕೃತ ವಿನಂತಿಯನ್ನು ಮಾಡಿದೆ

ಆಟವಾಡಿದ್ದಕ್ಕೆ ಸಿಟ್ ಅಪ್ (ಬಸ್ಕಿ) ತೆಗೆಯಲು ಹೇಳಿದ ಶಿಕ್ಷಕ – ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿ ಸಾವು

0


ಮಧ್ಯಾಹ್ನ 3 ಗಂಟೆಗೆ ತರಗತಿ ವೇಳೆ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಬಾಲಕ ಆಟವಾಡುತ್ತಿದ್ದ. ಶಿಕ್ಷಕರೊಬ್ಬರು ಅವರನ್ನು ನೋಡಿದರು ಮತ್ತು ಅವರ ಕೃತ್ಯಕ್ಕೆ ಶಿಕ್ಷೆಯಾಗಿ ಸಿಟ್-ಅಪ್ (ಬಸ್ಕಿ) ಮಾಡಲು ಆದೇಶಿಸಿದರು.


ಒಡಿಶಾ: ಒಡಿಶಾದ ಜಾಜ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಮಂಗಳವಾರ ಸಿಟ್‌ಅಪ್‌ ಮಾಡುವಂತೆ ಶಿಕ್ಷಕಿಯೊಬ್ಬರು ಒತ್ತಾಯಿಸಿದ ಕಾರಣ ಆ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.


ರುದ್ರ ನಾರಾಯಣ ಸೇಠಿ ಓರಳಿಯ ಸೂರ್ಯ ನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ.

ಮಂಗಳವಾರ ಹತ್ತರ ಹರೆಯದ ವಿದ್ಯಾರ್ಥಿ ಮಧ್ಯಾಹ್ನ 3 ಗಂಟೆಗೆ ಶಾಲಾ ಆವರಣದಲ್ಲಿ ನಾಲ್ವರು ಸಹ ವಿದ್ಯಾರ್ಥಿಗಳೊಂದಿಗೆ ಆಟವಾಡುತ್ತಿದ್ದನು. ಶಿಕ್ಷಕರೊಬ್ಬರು ಅವರನ್ನು ನೋಡಿದರು ಮತ್ತು ಅವರ ಕೃತ್ಯಕ್ಕೆ ಶಿಕ್ಷೆಯಾಗಿ ಸಿಟ್-ಅಪ್ ಮಾಡಲು ಆದೇಶಿಸಿದರು.


ಆದರೆ, ರುದ್ರ ಕುಸಿದು ಬಿದ್ದಿದ್ದು, ಸಮೀಪದ ರಸೂಲ್‌ಪುರ ಬ್ಲಾಕ್‌ನ ಓರಾಲಿ ಗ್ರಾಮದ ನಿವಾಸಿಗಳಾಗಿರುವ ಆತನ ಪೋಷಕರಿಗೆ ಘಟನೆಯ ಬಗ್ಗೆ ತಕ್ಷಣ ಮಾಹಿತಿ ನೀಡಲಾಗಿದೆ.

ಅವರು ಮತ್ತು ಶಿಕ್ಷಕರು ಅವರನ್ನು ಹತ್ತಿರದ ಸಮುದಾಯ ಕೇಂದ್ರಕ್ಕೆ ಮತ್ತು ಅಲ್ಲಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ಅಂತಿಮವಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮಂಗಳವಾರ ರಾತ್ರಿ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಅವರನ್ನು ಸಂಪರ್ಕಿಸಿದಾಗ, ರಸುಲ್‌ಪುರ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ನೀಲಾಂಬರ್ ಮಿಶ್ರಾ ಅವರು ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ಸ್ವೀಕರಿಸಿಲ್ಲ ಎಂದು ಹೇಳಿದರು.


ಕೇರಳ ಪೂಜಾ ಬಂಪರ್ ಲಾಟರಿ ವಿನ್ನರ್ ಘೋಷಣೆ; ಕಾಸರಗೋಡಿಗೆ 12 ಕೋಟಿ ರೂ? ಇನ್ನೂ ಪತ್ತೆಯಾಗದ ವಿಜೇತರು!

0


ಕಾಸರಗೋಡು: ಲಕ್ಕಿ ಡ್ರಾ ಆಸಕ್ತರ ಬಹು ನಿರೀಕ್ಷಿತ ಸುದ್ದಿಯಲ್ಲಿ ಬುಧವಾರದಂದು ಪೂಜಾ ಬಂಪರ್ ಲಾಟರಿ ಡ್ರಾ ಫಲಿತಾಂಶ ಪ್ರಕಟಗೊಂಡಿದ್ದು, ಅಧಿಕಾರಿಗಳನ್ನು ಕಂಗೆಡಿಸುವ ಸರಣಿ ಸಮಸ್ಯೆಗಳು ಎದುರಾಗಿವೆ.

ಸಂಖ್ಯೆ ಜೆಸಿ 253199 ಪ್ರಥಮ ಬಹುಮಾನ 12 ಕೋಟಿ ರೂ. ಕಾಸರಗೋಡಿನ ಹೊಸಂಗಡಿಯಲ್ಲಿರುವ ಭಾರತ್ ಎಂಬ ಲಾಟರಿ ಏಜೆನ್ಸಿಯಿಂದ ಟಿಕೆಟ್ ಮಾರಾಟವಾಗಿದೆ. ಏಜೆನ್ಸಿಯು ಮೇರಿಕುಟ್ಟಿ ಜೊಜೊ ಅವರ ಒಡೆತನದಲ್ಲಿದೆ. ಆದಾಗ್ಯೂ, ವಿಜೇತರನ್ನು ಇನ್ನೂ ಟ್ರ್ಯಾಕ್ ಮಾಡಲಾಗಿಲ್ಲ ಮತ್ತು ವಿಜೇತರು ಎಂದು ಯಾರೂ ಕಚೇರಿಗೆ ಬಂದಿಲ್ಲ.


ಭಾರತ್ ಏಜೆನ್ಸಿ ಕಣ್ಣೂರು ಮತ್ತು ಎರ್ನಾಕುಲಂ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತದೆ. ಅವರು ಕಾರ್‌ಗಳಲ್ಲಿ ಜಾಹೀರಾತು ಮತ್ತು ನಗರಗಳಾದ್ಯಂತ ಪ್ರಯಾಣಿಸುವ ಮೂಲಕ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಾರೆ.

ಟಿಕೆಟ್ ಮಾರಾಟ ಮಾಡಿದ ಏಜೆಂಟ್ ಸಂದಿಗ್ಧತೆಗೆ ಸಿಲುಕಿದ್ದಾರೆ ಮತ್ತು ಟಿಕೆಟ್ ಅನ್ನು ಯಾರು ಎಲ್ಲಿಂದ ಖರೀದಿಸಿದ್ದಾರೆಂದು ತಿಳಿದಿಲ್ಲ. ಹೊಸಂಗಡಿಯು ಕರ್ನಾಟಕದ ಗಡಿಯನ್ನು ಹಂಚಿಕೊಂಡಿರುವುದರಿಂದ, ನೆರೆಯ ರಾಜ್ಯದ ಅನೇಕರು ಟಿಕೆಟ್ ಖರೀದಿಸುವ ಅದೃಷ್ಟವನ್ನು ಪ್ರಯತ್ನಿಸಿದ್ದಾರೆ.

ಆದುದರಿಂದ ಟಿಕೇಟ್ ವಿಜೇತರು ಕೇರಳದ ನೆರೆಯ ರಾಜ್ಯವಾದ ಕರ್ನಾಟಕದಲ್ಲಿ ಇದ್ದಾರೆಯೇ ಎಂಬ ಸಂಶಯ ಟಿಕೇಟ್ ಏಜೆಂಟರನ್ನು ಕಾಡುತ್ತಿದೆಯಂತೆ.

ಗೀತಾಭಿಯಾನ ಸ್ಪರ್ಧೆಯಲ್ಲಿ ವೈಷ್ಣವಿ ಪೈ, ತನ್ಮಯಿ ವಾಗ್ಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಗೀತಾಭಿಯಾನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಂಗಳೂರು ಸಂಸ್ಕ್ರತ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರ ಸಂಯುಕ್ತ ಸಂಯುಕ್ತ ಆಶ್ರಯದಲ್ಲಿ

ನರಿಮೊಗರು ಸರಸ್ವತೀ ವಿದ್ಯಾಕೇಂದ್ರದಲ್ಲಿ ಗೀತಾಭಿಯಾನದ ಅಂಗವಾಗಿ ನಡೆದ ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಕುಮಾರಿ ವೈಷ್ಣವಿ ಪೈ ( ಶ್ರೀ ನಾಗೇಶ ಪೈ ಮತ್ತು ಶ್ರೀಮತಿ ಸಹನಾ ಪೈ ದಂಪತಿಗಳ ಪುತ್ರಿ) ಪ್ರಥಮ ಸ್ಥಾನ ಹಾಗೂ 10ನೇತರಗತಿಯ ಕುಮಾರಿ ತನ್ಮಯಿ ವಾಗ್ಲೆ ( ಶ್ರೀ ಸತೀಶ್ ವಾಗ್ಲೆ ಮತ್ತು ಶ್ರೀಮತಿ ಪೂರ್ಣಿಮಾ ವಾಗ್ಲೆ ದಂಪತಿಗಳ ಪುತ್ರಿ) ದ್ವಿತೀಯ ಸ್ಥಾನ ಗಳಿಸಿ

ಧರ್ಮಸ್ಥಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಗೀತಾಭಿಯಾನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಸುಳ್ಯದ ಹಿರಿಯರ ಕ್ರೀಡಾ ಸಂಘದ ನೇತೃತ್ವದಲ್ಲಿ ಪಂಜದ ಶ್ರೀ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆದ ಸುಳ್ಯ, ಕಡಬ ಹಾಗೂ ಪುತ್ತೂರು ತಾಲೂಕು 10ನೇಹಿರಿಯರ ಕ್ರೀಡಾಕೂಟದಲ್ಲಿ

ದರ್ಬೆತ್ತಡ್ಕದ ಶ್ರೀ ವೆಂಕಟೇಶ್ ಪ್ರಸಾದ್ ಇವರು ಉದ್ದ ಜಿಗಿತ, ಜಾವೆಲಿನ್ ಮತ್ತು ಡಿಸ್ಕಸ್ ತ್ರೋಗಳಲ್ಲಿ ದ್ವಿತೀಯ ಸ್ಥಾನ ಪಡೆದು ಜನವರಿ 13 ಮತ್ತು 14ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆಯುವಂತೆ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕ್ರತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ – ‘ಸಂಸ್ಕಾರ ನೀಡುವ ಯಕ್ಷಗಾನ ಕಲಾವಿದರು ಅಭಿನಂದನೀಯರು’.ಪೇಜಾವರ ಶ್ರೀ

0

ಉಡುಪಿ : ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ 18.11.2023 ರಂದು ಅತ್ಯಂತ ಯಶಸ್ವಿಯಾಗಿ ಜರಗಿತು.
ಸಂಸ್ಕಾರ ನೀಡುವ, ಸಂಸ್ಕೃತಿ ಉಳಿಸುವ, ಶ್ರೀಮಂತ ಕಲೆ ಯಕ್ಷಗಾನದ ಕಲಾವಿದರ ತ್ಯಾಗ, ಶ್ರಮ ದೊಡ್ಡದು. ಅವರು ಸದಾ ಅಭಿನಂದನೀಯರು ಎಂದು ಪ್ರಶಸ್ತಿ ಪ್ರದಾನ ಮಾಡಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಅಂತಹ ಕಲಾವಿದರನ್ನು ಗೌರವಿಸುವುದು ಸ್ತುತ್ಯರ್ಹ ಎಂದರು.

ಕಲಾವಿದರಾದ ಚಿದಂಬರಬಾಬು , ಕೋಟ ಗೋವಿಂದ ಉರಾಳ, ಮುಂಡ್ಕೂರು ವಸಂತ ಶೆಟ್ಟಿ, ತೀರ್ಥಹಳ್ಳಿ ಶಿವಶಂಕರ ಭಟ್, ಸಿದ್ದಾಪುರ ಸಂಜೀವ ಕೊಠಾರಿ, ಸೀತೂರು ಅನಂತಪದ್ಮನಾಭ ರಾವ್, ಕವ್ವಾಳೆ ಗಣಪತಿ ರಾಮಚಂದ್ರ ಭಾಗ್ವತ, ಮಂದಾರ್ತಿ ರಘುರಾಮ ಮಡಿವಾಳ, ಕೋಡಿ ವಿಶ್ವನಾಥ ಗಾಣಿಗ, ಸಿದ್ದಾಪುರ ಅಶೋಕ್ ಭಟ್, ಗುಣವಂತೆ ಸುಬ್ರಾಯ ನಾರಾಯಣ ಭಂಡಾರಿ, ಚೋರಾಡಿ ವಿಠಲ ಕುಲಾಲ್, ಎರ್ಮಾಳು ವಾಸುದೇವ ರಾವ್, ಈಚಲಕೊಪ್ಪ ಪ್ರಭಾಕರ ಹೆಗಡೆ, ಮಧೂರು ರಾಧಾಕೃಷ್ಣ ನಾವಡ, ಪಡುಬಿದ್ರೆ ರತ್ನಾಕರ ಆಚಾರ್ಯ, ಗುಂಡಿಮಜಲು ಗೋಪಾಲ ಭಟ್, ಇಡುವಾಣಿ ತ್ರ್ಯಂಬಕ ಹೆಗಡೆ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಕಾಯರ್ತ್ತಡ್ಕ ವಸಂತ ಗೌಡ, ಶ್ರೀಧರ ಪಂಜಾಜೆ ಈ 21 ಕಲಾವಿದರನ್ನು ತಲಾ ರೂ. 20 ಸಾವಿರ ನಗದು ಸಹಿತ ಫಲಕ ನೀಡಿ ಸಂಮಾನಿಸಲಾಯಿತು.


ಶ್ರೀ ಸ್ವರ್ಣವಲ್ಲೀ ಮಠದ ಕೃಪಾಶ್ರಯದ ಯಕ್ಷಶಾಲ್ಮಲಾ ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ರೂ. 50 ಸಾವಿರ ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸೋಂದಾ ನಾಗರಾಜ ಜೋಶಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಯಕ್ಷಗಾನ ಕಲಾರಂಗದ ಹಿರಿಯ ಕಾರ್ಯಕರ್ತರಾದ ಮುದ್ರಾಡಿ ವಿಜಯಕುಮಾರ್ ಇವರಿಗೆ ಬೆಳ್ಳಿಯ ಹರಿವಾಣದಲ್ಲಿ ಫಲವಸ್ತು ನೀಡಿ ‘ಯಕ್ಷ ಚೇತನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ಇತ್ತೀಚಿಗೆ ನಿಧನರಾದ ಸಿಗಂಧೂರು ಮೇಳದ
ಭಾಗವತ ರಾಮಚಂದ್ರ ಜಿ. ನಾಯ್ಕ್ ಅವರ ಪತ್ನಿ ಗೀತಾ ಆರ್. ನಾಯ್ಕ್ ಅವರಿಗೆ ರೂ. 50 ಸಾವಿರ ಸಾಂತ್ವನ ನಿಧಿ ನೀಡಲಾಯಿತು.


ಕಟೀಲು ದೇಗುಲದ ಅನುವಂಶಿಕ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ. ಕಮಲಾದೇವಿಪ್ರಸಾದ ಆಸ್ರಣ್ಣ ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಕಲ್ಲಾಡಿ ದೇವೀಪ್ರಸಾದ ಶೆಟ್ಟರನ್ನು ಗೌರವಿಸಲಾಯಿತು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.


ಸುವರ್ಣ ಪ್ರತಿಷ್ಠಾನದ ಪ್ರಭಾಕರ ಸುವರ್ಣ, ನಮ್ಮ ಕುಡ್ಲದ ಲೀಲಾಕ್ಷ ಬಿ. ಕರ್ಕೇರ, ಎಂ. ಕೆ. ಭಟ್ ಕಡತೋಕ, ಕೆ. ಸದಾಶಿವ ಭಟ್ ಅಭ್ಯಾಗತರಾಗಿ ಪಾಲ್ಗೊಡಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಪಿ.ಕಿಷನ್ ಹೆಗ್ಡೆ, ವಿ.ಜಿ.ಶೆಟ್ಟಿ ಸ್ವಾಮೀಜಿಯವರಿಗೆ ಫಲ-ಪುಷ್ಪ ಸಮರ್ಪಿಸಿದರು.

ಜೊತೆ ಕಾರ್ಯದರ್ಶಿ ನಾರಾಯಣ ಎಂ ಹೆಗಡೆ ಸ್ಮರಣೀಯರ ಮತ್ತು ಗೌರವಾನ್ವಿತರ ಕುರಿತು ತಿಳಿಸಿದರು. ಸನ್ಮಾನ್ಯರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.


ಸಭೆಯ ಪೂರ್ವದಲ್ಲಿ ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ವಿದ್ಯಾರ್ಥಿಗಳಿಂದ ‘ಶಶಿಪ್ರಭಾ ಪರಿಣಯ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನಗೊಂಡಿತು. ಬಳಿಕ ತೆಂಕು-ಬಡಗು- ಕರ್ನಾಟಕ ಶಾಸ್ತ್ರೀಯ ಸಂಗೀತ ಇವುಗಳ ‘ರಾಗ ಸಂಯೋಗ ‘ ಮತ್ತು ತೆಂಕುತಿಟ್ಟು ಕಲಾವಿದರಿಂದ,’ಶ್ರೀ ಮನೋಹರ ಸ್ವಾಮಿ ಪರಾಕು’ ಯಕ್ಷಗಾನ ರೂಪಕ ಪ್ರಸ್ತುತಗೊಂಡಿತು.

‘ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಸಂಸ್ಮರಣಾ ಗ್ರಂಥ ಬಿಡುಗಡೆ

0

ದೇರಾಜೆ ಸೀತಾರಾಮಯ್ಯನವರು ಓರ್ವ ಅಪರೂಪದ ಕಲಾವಿದ. ಭಾವನಾತ್ಮಕ ಮತ್ತು ಮಾನವೀಯ ನೆಲಗಟ್ಟಿನಲ್ಲಿ ಯಾವುದೇ ಪಾತ್ರಕ್ಕೂ ಅರ್ಥ ಮಾತಾಡುವ ಸಾಮರ್ಥ್ಯ ಹೊಂದಿದ್ದ ಶ್ರೇಷ್ಠ ಸಾಹಿತಿ ಕಲಾವಿದ.

ಅವರೂ ನಮ್ಮ ಮಠದ ಶಿಷ್ಯರಾಗಿ, ಅವರಿಗೆ ನಮ್ಮ ಮಠದ ಉಪ್ಪಿನ ಋಣ ಇದೆ. 1972ರಲ್ಲಿಯೇ ಸಾರ್ವಜನಿಕವಾಗಿ ಅರ್ಥ ಹೇಳುವುದನ್ನು ನಿಲ್ಲಿಸಿದ್ದರೂ ನಮ್ಮ ಮಠದಲ್ಲಿ ಮಾತ್ರ ಕೊನೆವರೆಗೂ ಹೇಳಿದ್ದಾರೆ.

ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀಯವರ ಆಪ್ತ ಶಿಷ್ಯ ಆಗಿದ್ದವರು ದೇರಾಜೆಯವರು. ಅವರ ಕುರಿತ ಗ್ರಂಥ ನಮ್ಮ ಮಠದಲ್ಲಿ ಆಗುತ್ತಿರುವುದು ನಮಗೆ ಎಲ್ಲರಿಗೂ ಬಹಳ ಸಂತಸದ ವಿಚಾರ ಎಂದು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.

ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿಯ ನೇತೃತ್ವದಲ್ಲಿ ಸಿದ್ದಗೊಂಡ ‘ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಎಂಬ ಸಂಸ್ಮರಣಾ ಗ್ರಂಥದ ಲೋಕಾರ್ಪಣೆ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.

ಕಾಸರಗೋಡಿನ ಎಡನೀರು ಮಠದ ಆಶ್ರಯದಲ್ಲಿ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಸಹಯೋಗದಲ್ಲಿ ದಿನಾಂಕ 14.10.2023, ಮಂಗಳವಾರದಂದು ಶ್ರೀ ಮಠದಲ್ಲಿ ಈ ಸ್ಮರಣೀಯ ಕಾರ್ಯಕ್ರಮ ಸಂಪನ್ನಗೊಂಡಿತು. ಇದರ ಜೊತೆಗೆ ದ್ವಿತೀಯ ಮುದ್ರಣ ಕಂಡ ‘ರಸಋಷಿ’ ಎನ್ನುವ ದೇರಾಜೆ ಅಭಿನಂದನಾ ಗ್ರಂಥದ ಬಿಡುಗಡೆಯೂ ಇದೇ ಸಂದರ್ಭದಲ್ಲಿ ಶ್ರೀಗಳು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ರವರು ವಹಿಸಿ ಕೊಂಡಿದ್ದರು. ದೇರಾಜೆಯವರು ಜ್ಞಾನಪೀಠ ಪ್ರಶಸ್ತಿಗೆ ಎಲ್ಲಾ ರೀತಿಯಲ್ಲೂ ಯೋಗ್ಯರಾಗಿದ್ದವರು. ಅವರ ಅರ್ಥಗಾರಿಕೆ ವಿಶಿಷ್ಟ ಮತ್ತು ವಿಭಿನ್ನ ಎಂದು ಅವರು ನುಡಿದರು.

ದೇರಾಜೆ ಸಂಸ್ಮರಣಾ ಭಾಷಣವನ್ನು ಹಿರಿಯ ಅರ್ಥದಾರಿ, ದೇರಾಜೆ ಶಿಷ್ಯ ಶ್ರೀ ಉಡ್ವೇಕೋಡಿ ಸುಬ್ಬಪ್ಪಯ್ಯ ಮಾಡಿದರು. ಗ್ರಂಥದ ಕುರಿತಾಗಿ ಸಮಿತಿಯ ಶ್ರೀ ಸೇರಾಜೆ ಗೋಪಾಲಕೃಷ್ಣ ಭಟ್ ಮತ್ತು ಶ್ರೀಕರ ಭಟ್ ಮರಾಟೆ ಮಾತಾಡಿದರು. ಗ್ರಂಥ ರಚನಾ ಕಾರ್ಯದಲ್ಲಿ ಸಹಕರಿಸಿದ ಜಯರಾಮ ಅಳಿಕೆ, ಕೊಕ್ಕಡ ವೆಂಕಟರಮಣ ಭಟ್ ಇವರನ್ನು ಸನ್ಮಾನಿಸಲಾಯಿತು.

ಕಲಾವಿದ ಹರೀಶ ಬಳoತಿಮೊಗರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ದೇರಾಜೆ ಮೊಮ್ಮಗ ಶ್ರೀ ರಾಧಾಕೃಷ್ಣ ಕಲ್ಚರ್ ಸ್ವಾಗತಿಸಿದರು ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಶ್ರೀ ರಾಮಕೃಷ್ಣ ಮಯ್ಯ ಅವರೂ ಎಲ್ಲರನ್ನು ವಂದಿಸಿದರು. ದೇರಾಜೇಯವರ ಮರಿಮಗಳು ಕುಮಾರಿ ನೀಹಾರಿಕ ದೇರಾಜೆ ಪ್ರಾರ್ಥಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಶ್ರೀ ದಿವಾಕರ ಹೆಗಡೆ ಅವರಿಂದ ಸೀತಾoತರಂಗ ಎಂಬ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ ಮತ್ತು ಮದ್ದಳೆಯಲ್ಲಿ ಶ್ರೀ ಎ. ಪಿ. ಪಾಠಕ್ ಅವರು ಸಹಕರಿಸಿದರು. ಈ ಕಾರ್ಯಕ್ರಮ ಬಹಳ ಹೃದ್ಯವಾಗಿ ಮೂಡಿ ಬಂದಿತು.

ಶಿಕ್ಷಕನ ಜೊತೆಗಿನ ವರ್ಷಗಳ ಸಂಬಂಧವನ್ನು ಅಂತ್ಯಗೊಳಿಸಿದ ನಂತರ ಮಹಿಳೆ ಮಗಳನ್ನು ಕೊಂದು ತಾನೂ ಆತ್ಮಹತ್ಯೆ

0


ಕಾಸರಗೋಡು: ಮಹಿಳೆ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕನನ್ನು ಬಂಧಿಸಲಾಗಿದೆ. ಇಬ್ಬರು ಬಾವಿಗೆ ಹಾರಿ ಮೇಲ್ಪರಂಬ ಅರಮಾಂಗನಂನಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿದರು. ಎರೋಲ್ ಜುಮಾ ಮಸೀದಿ ಬಳಿ ಸಫ್ವಾನ್ ಆದೂರು (29) ಬಂಧಿತ ಆರೋಪಿ. ಸಾಕ್ಷ್ಯವನ್ನು ಹಾಳು ಮಾಡಿದ ಆರೋಪ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿತ್ತು.
ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ರುಬೀನಾ ಮತ್ತು ಅವರ ಐದೂವರೆ ವರ್ಷದ ಮಗಳು ಹನಾನಾ ಮರಿಯಮ್ ಅವರು ಸೆಪ್ಟೆಂಬರ್ 15 ರಂದು ಮುಂಜಾನೆ ಅರಮಂಗಾನಂನಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ತನಿಖೆಯ ವೇಳೆ ಅಗ್ನಿಶಾಮಕ ದಳದ ಸಹಾಯದಿಂದ ಸಮೀಪದ ಬಾವಿಯಿಂದ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಯಿತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಮಹಿಳೆಯ ವಲಸಿಗ ಪತಿ ಸಾವಿನ ಬಗ್ಗೆ ದೂರು ದಾಖಲಿಸಿದ್ದಾರೆ.
ಮಹಿಳೆ ಮತ್ತು ಶಿಕ್ಷಕಿ ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ಯುವಕರು ಸಂಬಂಧವನ್ನು ತೊರೆದು ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದ ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಇಬ್ಬರ ಮೊಬೈಲ್ ಫೋನ್ ಗಳನ್ನು ಪರಿಶೀಲಿಸಿದಾಗ ಅವರ ನಡುವಿನ ಚಾಟ್ ಡಿಲೀಟ್ ಆಗಿರುವುದು ಕಂಡು ಬಂದಿದೆ.

ತನ್ನ ಹೇಳಿಕೆಯನ್ನು ಪಡೆಯಲು ಶಿಕ್ಷಕನನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು, ವಿವರವಾದ ವಿಚಾರಣೆಯ ನಂತರ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಸಾಕ್ಷ್ಯ ನಾಶಕ್ಕಾಗಿ ಬಂಧಿಸಲಾಯಿತು. ಹೊಸದುರ್ಗ ನ್ಯಾಯಾಲಯ ಆರೋಪಿಯನ್ನು ರಿಮಾಂಡ್ ಮಾಡಿದೆ.

ಬೆಂಗಳೂರಿನಲ್ಲಿ ಕಸ ಹೆಕ್ಕುವವನಿಗೆ ಕಸದ ರಾಶಿಯಲ್ಲಿ ಸಿಕ್ಕಿದ 25 ಕೋಟಿ ಮೌಲ್ಯದ ಡಾಲರ್

0


ಬೆಂಗಳೂರು: ಬೆಂಗಳೂರಿನ ಕಸದ ರಾಶಿಯಲ್ಲಿ ಚಿಂದಿ ಆಯುವವನೊಬ್ಬನಿಗೆ ಅಮೆರಿಕನ್ ಡಾಲರ್‌ಗಳ 23 ಬ್ಯಾಗ್ ಸಿಕ್ಕಿದೆ. ಭಾರತೀಯ ಕರೆನ್ಸಿಯಲ್ಲಿ ಡಾಲರ್ ಮೌಲ್ಯ ₹ 25 ಕೋಟಿ.
ಚಿಂದಿ ಆಯುವ ಸಲ್ಮಾನ್ ಶೇಖ್ ಅವರು ನವೆಂಬರ್ 1 ರಂದು ಬಂಡಲ್ ಅನ್ನು ಕಂಡುಕೊಂಡರು.

ಇದರಿಂದ ಆಶ್ಚರ್ಯಚಕಿತನಾದ ಶ್ರೀ ಶೇಖ್ ತನ್ನ ಬಂಡಲ್ ಅನ್ನು ತನ್ನ ಬಳಿ ಇಟ್ಟುಕೊಂಡು ನವೆಂಬರ್ 5 ರಂದು ತನ್ನ ಬಾಸ್ ಬಪ್ಪಾ ಬಳಿಗೆ ತೆಗೆದುಕೊಂಡು ಹೋದನು.


ನಂತರ ಬಾಸ್ ಸಾಮಾಜಿಕ ಕಾರ್ಯಕರ್ತ ಕಲಿ ಮುಲ್ಲಾ ಅವರನ್ನು ಸಂಪರ್ಕಿಸಿದರು, ಅವರು ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದರು.

ಕೂಡಲೇ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರಿಗೆ ಸಮನ್ಸ್ ನೀಡಿದರು. ಪ್ರಕರಣದ ತನಿಖೆಯನ್ನು ಹೆಬ್ಬಾಳ ಪೊಲೀಸ್ ಠಾಣೆಗೆ ವಹಿಸಲಾಗಿದೆ.

ನೋಟುಗಳಲ್ಲಿ ರಾಸಾಯನಿಕ ಬೆರೆಸಲಾಗಿದ್ದು, ಕಪ್ಪು ಡಾಲರ್ ಹಗರಣದಲ್ಲಿ ತೊಡಗಿರುವ ಗ್ಯಾಂಗ್‌ಗಳ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.


ನೋಟುಗಳು ನಕಲಿಯೇ ಅಥವಾ ನಿಜವೇ ಎಂಬುದನ್ನು ನಿರ್ಧರಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕರೆನ್ಸಿ ನೋಟುಗಳನ್ನು ಕಳುಹಿಸಲಾಗಿದೆ.