Friday, August 28, 2026
Home Blog Page 386

‘ವಿಭೀಷಣ ನೀತಿ’ ಯಕ್ಷಗಾನ ತಾಳಮದ್ದಲೆ ಲೈವ್ .. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರು ಪ್ರಸ್ತುತಪಡಿಸುವ ದಿನಾಂಕ 11.10.2020 ಭಾನುವಾರ ಸಂಜೆ 5.00 ರಿಂದ ಯಕ್ಷಗಾನ ತಾಳಮದ್ದಲೆ ವಿಭೀಷಣ ನೀತಿ.. ಯಕ್ಷಗಾನ ತಾಳಮದ್ದಲೆ ಲೈವ್ ಕಾರ್ಯಕ್ರಮ. ಲಿಂಕ್ ಕೆಳಗಿದೆ 

ಯಕ್ಷ ನಟ ಸಾರ್ವಭೌಮ – ಕುರಿಯ ವಿಠಲ ಶಾಸ್ತ್ರಿ (ಸಂ – ಕೆ.ಪಿ. ರಾಜಗೋಪಾಲ ಕನ್ಯಾನ)

‘ಯಕ್ಷ ನಟ ಸಾರ್ವಭೌಮ’ ಎಂಬ ಪುಸ್ತಕವು ಶ್ರೀ ಕುರಿಯ ವಿಠಲ ಶಾಸ್ತ್ರಿಗಳು ಬರೆದಿರುವ ಲೇಖನಗಳ ಒಂದು ಅಮೂಲ್ಯ ಸಂಗ್ರಹವು. ಈ ಹೊತ್ತಗೆಯು 2005ರಲ್ಲಿ ಪ್ರಕಟವಾಗಿತ್ತು. ಸಂಪಾದಕರು ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರು. ಪ್ರಕಾಶಕರು ಉಷಾ ಎಂಟರ್ಪ್ರೈಸೆಸ್, ಬೆಂಗಳೂರು. ಈ ಕೃತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮನವರಿಗೆ ಗೌರವದಿಂದ ಅರ್ಪಿಸಲಾಗಿದೆ. ಇದು ಸುಮಾರು ಇನ್ನೂರು ಪುಟಗಳುಳ್ಳ ಪುಸ್ತಕ. ಮೊದಲಾಗಿ ಸಂಪಾದಕ ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರ ಪರಿಚಯ ಲೇಖನವನ್ನೂ, ಅವರ ಕಥಾ ಸಂಯೋಜನೆಯಲ್ಲಿ ಈ ವರೆಗೆ ತಯಾರಾದ ಯಕ್ಷಗಾನ ಪ್ರಸಂಗಗಳ ವಿವರಗಳನ್ನೂ ನೀಡಲಾಗಿದೆ. ಈ ಪುಸ್ತಕವು ಯಕ್ಷ ನಟ ಸಾರ್ವಭೌಮ, ಕುರಿಯ ವಿಠಲ ಶಾಸ್ತ್ರಿ ವಿರಚಿತ ಲೇಖನಗಳು, ಕುರಿಯ ವಿಠಲ ಶಾಸ್ತ್ರಿಯವರನ್ನು ಕುರಿತಾಗಿ ಬರೆದ ಕವಿತೆಗಳು, ವಿವಿಧ ಕೃತಿಗಳಲ್ಲಿ ವಿಠಲ ಶಾಸ್ತ್ರಿಗಳ ಆಕೃತಿ ಎಂಬ ನಾಲ್ಕು ವಿಭಾಗಗಳಿಂದ ಕೂಡಿದೆ. ಮೊದಲ ವಿಭಾಗದಲ್ಲಿ ಶಾಸ್ತ್ರಿಗಳ ಬಗ್ಗೆ ವಿದ್ವಾನ್ ತಾಳ್ತಜೆ ಕೃಷ್ಣ ಭಟ್ಟ, ಪಂಜಳ ಇವರು ಬರೆದ ಲೇಖನವಿದೆ. ಎರಡನೆಯ ವಿಭಾಗದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ಬರೆದ ಏಳು ಲೇಖನಗಳಿವೆ. ಮೂರನೆಯ ವಿಭಾಗದಲ್ಲಿ ವಿದ್ವಾನ್ ತಾಳ್ತಜೆ ಕೃಷ್ಣ ಭಟ್ಟ, ಸೊಡಂಕೂರು ತಿರುಮಲೇಶ್ವರ ಭಟ್ಟ ವಿದ್ವಾನ್, ಅಮೃತ ಸೋಮೇಶ್ವರ, ಪ್ರೊ| ಟಿ. ಕೇಶವ ಭಟ್ಟ ಇವರುಗಳು ಶ್ರೀ ಶಾಸ್ತ್ರಿಗಳ ಬಗೆಗೆ ವಿವಿಧ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರಕಟಿತವಾದ ಕಿರು ಲೇಖನಗಳನ್ನು ನೀಡಲಾಗಿದೆ. ಬಳಿಕ ಸುಮಾರು ಮೂವತ್ತರಷ್ಟು ಕಪ್ಪು ಬಿಳುಪಿನ ಛಾಯಾ ಚಿತ್ರಗಳನ್ನು ನೀಡಲಾಗಿದೆ. ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರ ಈ ಸಂಗ್ರಹವು ಕುರಿಯ ವಿಠಲ ಶಾಸ್ತ್ರಿಗಳ ಬಗೆಗಿನ ಹೊತ್ತಗೆಯಾಗಿ ಕಾಣಿಸಿಕೊಂಡಿದ್ದು, ಇದು ಒಂದು ಅತ್ಯುತ್ತಮ ಪ್ರಯತ್ನ. ಅಭಿನಂದನೆಗಳು.  

ಲೇಖಕ: ರವಿಶಂಕರ್ ವಳಕ್ಕುಂಜ 

ವಾಚಿಕ – ‘ತಾಳಮದ್ದಳೆ ಅಧ್ಯಯನ – ಲೇಖನ ಸಂಚಯ’

‘ವಾಚಿಕ’ ಎಂಬ ಶೀರ್ಷಿಕೆಯ ಈ ಕೃತಿಯು ತಾಳಮದ್ದಳೆ ಅಧ್ಯಯನ-ಲೇಖನ ಸಂಚಯವಾಗಿ ಓದುಗರ ಕೈ ಸೇರಿದೆ. ಇದು ಮುದ್ರಣಗೊಂಡು ಪ್ರಕಟವಾದುದು 2009ರಲ್ಲಿ. ಅತ್ಯುತ್ತಮ ಸಂಗ್ರಹಯೋಗ್ಯ ಮಾಹಿತಿಗಳನ್ನೊದಗಿಸುವ ಕೃತಿಯು. ವಾಚಿಕ ಎಂಬ ಈ ಹೊತ್ತಗೆಯ ಸಂಪಾದಕರು ವಿದ್ವಾಂಸರುಗಳಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮತ್ತು ಡಾ. ಎಂ. ಪ್ರಭಾಕರ ಜೋಷಿ ಅವರುಗಳು. ಪ್ರಕಾಶಕರು ಕಲಾವಿದರೆಲ್ಲರ ಹೆಮ್ಮೆಯ ಕಲಾವಿದರ ಕ್ಷೇಮಕ್ಕಾಗಿ ಮೊತ್ತಮೊದಲು ಸ್ಥಾಪಿಸಲ್ಪಟ್ಟ ಸಂಸ್ಥೆಯಾದ ಯಕ್ಷಗಾನ ಕಲಾರಂಗ (ರಿ) ಉಡುಪಿ. ಸದ್ರಿ ಸಂಸ್ಥೆಯ ತಾಳಮದ್ದಳೆ ದಶಮಾನ ಸಂಭ್ರಮದಲ್ಲಿ ಈ ಕೃತಿಯು ಲೋಕಾರ್ಪಣೆಗೊಂಡಿತ್ತು. ಪುಸ್ತಕವೊಂದನ್ನು ಪ್ರಕಟಿಸುವ ಮೂಲಕ ದಶಮಾನೋತ್ಸವವನ್ನು ಅರ್ಥಪೂರ್ಣಗೊಳಿಸಬೇಕೆಂದು ಡಾ. ಎಂ. ಪ್ರಭಾಕರ ಜೋಷಿಯವರು ಸೂಚಿಸಿದರೆಂದೂ ಸಂಪಾದಕತ್ವದ ಹೊಣೆ ಹೊತ್ತು ಶ್ರೀಯುತರೂ ಡಾ. ಪಾದೇಕಲ್ಲು ವಿಷ್ಣು ಭಟ್ಟರೂ ಈ ಯೋಜನೆಯನ್ನು ಯಶಸ್ವಿಗೊಳಿಸಿದರೆಂದೂ ಪ್ರಕಾಶಕರು ತಮ್ಮ ಲೇಖನದಲ್ಲಿ ತಿಳಿಸಿರುತ್ತಾರೆ. ತಾಳಮದ್ದಳೆ ಕ್ಷೇತ್ರದ ಕಲಿಕಾಸಕ್ತರಿಗೆ ಖಂಡಿತಾ ಇದು ಒಂದು ಕೈಪಿಡಿಯಾಗಿ ಸಹಕರಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಮೊದಲಾಗಿ ‘ಕಲಾರಂಗ ಮತ್ತು ತಾಳಮದ್ದಳೆ ಸಪ್ತಾಹ’ ಎಂಬ ಶೀರ್ಷಿಕೆಯಡಿಯ ಲೇಖನದಲ್ಲಿ ಪ್ರೊ|ಎಂ. ನಾರಾಯಣ ಹೆಗಡೆಯವರು ಯಕ್ಷಗಾನ ಕಲಾರಂಗ ಸಂಸ್ಥೆಯ ಹುಟ್ಟು, ಬೆಳವಣಿಗೆ, ಕೈಗೊಂಡ ಯೋಜನೆ, ಕಾರ್ಯಚಟುವಟಿಕೆಗಳ ವಿವರಗಳನ್ನು ನೀಡಿರುತ್ತಾರೆ. ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮತ್ತು ಡಾ. ಎಂ. ಪ್ರಭಾಕರ ಜೋಷಿ  ಅವರು ‘ಸಂಪಾದಕೀಯ ಲೇಖನವನ್ನು ಬರೆದಿರುತ್ತಾರೆ. ಈ ಕೃತಿಯು ಲೇಖನ ಸಂಚಯ, ಸಂವಾದ ಸಾಂಚ್ಯಾ, ಅಭಿಪ್ರಾಯ ಸಂಚಯ, ವಿಮರ್ಶಾ ಸಂಚಯ, ಎಂಬ ನಾಲ್ಕು ವಿಭಾಗಗಳಿಂದಲೂ ಅನುಬಂಧಗಳು ಎಂಬ ಪೂರಕ ವಿಭಾಗದಿಂದಲೂ ಕೂಡಿದೆ. ಮೊದಲ ವಿಭಾಗದಲ್ಲಿ ಇಪ್ಪತ್ತೊಂಬತ್ತು ಲೇಖನಗಳಿವೆ. ಎರಡನೆಯ ವಿಭಾಗದಲ್ಲಿ ಇಪ್ಪತ್ತೊಂದು ಲೇಖನಗಳಿವೆ. ಮೂರನೆಯ ವಿಭಾಗದಲ್ಲಿ ವಿವಿಧ ವಿದ್ವಾಂಸರ ಅಭಿಪ್ರಾಯಗಳನ್ನು ನೀಡಲಾಗಿದೆ. ನಾಲ್ಕನೆಯ ವಿಭಾಗದಲ್ಲಿ ಏಳು ಲೇಖನಗಳನ್ನು ನೀಡಲಾಗಿದೆ. ಪೂರಕ ವಿಭಾಗದಲ್ಲಿ ಮೂರು ಲೇಖನಗಳನ್ನೂ ಎಲ್ಲಾ ಲೇಖಕರ ವಿಳಾಸಗಳನ್ನೂ ನೀಡಲಾಗಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ

ಮಾತಂಗ ಕನ್ಯೆ, ಶ್ರೀರಾಮ ದರ್ಶನ – ಪೊಳಲಿಯಲ್ಲಿ ಅಪೂರ್ವ ಯಕ್ಷಗಾನ ಪ್ರದರ್ಶನ 

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ 17.10.2020 ಶನಿವಾರದಂದು ಸಂಜೆ ಘಂಟೆ 6ರಿಂದ ರಾತ್ರಿ ಘಂಟೆ 2ರ ವರೆಗೆ  ‘ಮಾತಂಗ ಕನ್ಯೆ – ಶ್ರೀರಾಮ ದರ್ಶನ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪ್ರಸಿದ್ಧ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿರುವರು. 

ಅಮೃತ ಸೋಮೇಶ್ವರ ಅವರಿಗೆ ಬಾಲವನ ಪ್ರಶಸ್ತಿ – 2020

ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ನೀಡಲಾಗುವ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ – 2020 ನ್ನು ಈ ಬಾರಿ ಖ್ಯಾತ ಜಾನಪದ ಹಾಗೂ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ, ಸಾಹಿತಿ, ನಿವೃತ್ತ ಉಪನ್ಯಾಸಕರಾದ ಪ್ರೊ| ಅಮೃತ ಸೋಮೇಶ್ವರ ಅವರಿಗೆ ಕೋಟೆಕಾರಿನಲ್ಲಿರುವ ಅವರ ಮನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ  ಕೋಟ ಶ್ರೀನಿವಾಸ ಪೂಜಾರಿಯವರು ನೀಡಿ ಗೌರವಿಸಿದರು. 

ಪ್ರೊ| ಅಮೃತ ಸೋಮೇಶ್ವರ

ಕುರಿಯ ಮನೆಯಂಗಳದಲ್ಲಿ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ ದಂಪತಿಗೆ ಸಮ್ಮಾನ

ಯಕ್ಷಮೇನಕಾ ಮೂಡಬಿದಿರೆ, ರಂಗಸ್ಥಳ ಮಂಗಳೂರು (ರಿ), ಯಕ್ಷಚೈತನ್ಯ (ರಿ) ಅಶ್ವತ್ಥಪುರ ಎಂಬ ಮೂರು ಯಕ್ಷಸಂಘಟನೆಗಳಿಂದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗೆ  ಕುರಿಯ ಮನೆಯಂಗಳದಲ್ಲಿ  ಸಮ್ಮಾನ   

ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಭೆ


ಇತ್ತೀಚಿಗೆ ಪರಮೈಕ್ಯರಾದ ಹಿರಿಯ ವಿದ್ವಾಂಸರೂ ಯಕ್ಷಗಾನ ಕಲಾವಿದರೂ  ಆದ ಉಡುಪುಮೂಲೆ  ಶ್ರೀ ಗೋಪಾಲಕೃಷ್ಣ ಭಟ್,  ಹಿರಿಯ ಯಕ್ಷಗಾನ ಭಾಗವತರಾದ ತೆಂಕಬಯಲು ತಿರುಮಲೇಶ್ವರ ಶಾಸ್ತ್ರಿ , ಪ್ರಸಿದ್ಧ ಯಕ್ಷಗಾನ ಕಲಾವಿದರಾದ ರಘುರಾಮ ಗೋಳಿಯಡ್ಕ  ಅವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಸಮರ್ಪಿಸಿ ಅವರ ದಿವ್ಯಾತ್ಮಕ್ಕೆ ಚಿರ ಶಾಂತಿ ದೊರೆಯುವಂತೆ ಪ್ರಾರ್ಥಿಸಲಾಯಿತು.ಕೋವಿದ್ 19 ರ ಮಾನದಂಡಗಳನ್ನು ಪಾಲಿಸಿಕೊಂಡು ಸಭೆ ಜರಗಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ  ಕಾರ್ಯಕ್ರಮ ಜರಗಿತು.  ಅಗಲಿದ  ಚೇತನಗಳಿಗೆ ಶ್ರದ್ಧಾಂಜಲಿ  ಹೇಳುತ್ತಾ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರು   ನುಡಿ ನಮನದ  ಮಾತುಗಳನ್ನಾಡಿದರು.   ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಮೆನೇಜರ್ ಶ್ರೀ  ಸೀತಾರಾಮ ಬಳ್ಳುಳ್ಳಾಯ , ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ,    ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ , ಸಹಕಾರ್ಯದರ್ಶಿ ಡಾ. ಶಿವಕುಮಾರ್ ಅಡ್ಕ ನುಡಿನಮನಗಳನ್ನು ಅರ್ಪಿಸಿದರು.ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಸ್ವಾಗತಿಸಿ ಕೋಶಾಧಿಕಾರಿ ಕೃಷ್ಣ ಭಟ್ ಅಡ್ಕ ಧನ್ಯವಾದ ಸಮರ್ಪಿಸಿದರು.

ವಿಶೇಷ ಚೇತನ ಮಕ್ಕಳ ಬಗ್ಗೆ ಅರಿವು ಮೂಡಿಸಲು ಸಿರಿಬಾಗಿಲು ಪ್ರತಿಷ್ಠಾನದಿಂದ ‘ಜಡಭರತ’ ಯಕ್ಷಗಾನ 

ನಮ್ಮ ನಡುವೆ ಇರುವ ಹಾಗೂ ಆಕಸ್ಮಿಕವಾಗಿ ಹುಟ್ಟುವ ವಿಶೇಷ ಚೇತನ ಮಕ್ಕಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಅವರ ಬಗ್ಗೆ ಕುತ್ಸಿತ ಭಾವನೆ ತಾಳದೆ ಸಮಾಜದಲ್ಲಿ ಅವರಿಗೂ ಬದುಕಲು ಹಕ್ಕಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನವೆಂಬಂತೆ ಕುತೂಹಲಕಾರೀ ಕಥಾ ಹಂದರವುಳ್ಳ “ಜಡಭರತ” ಎಂಬ ಯಕ್ಷಗಾನ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಬುದ್ದಿಮಾಂದ್ಯ ಮಕ್ಕಳ ಶಾಲೆಯಾದ ಅಮರ ಸೌಂದರ್ಯ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ವಿಶಿಷ್ಟ ರೀತಿಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮ 11. 10. 2020 ರ ಆದಿತ್ಯವಾರ ರಾತ್ರಿ 8.30 ಘಂಟೆಗೆ ಯು ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಆಗಲಿದೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ.

ಭಾಗವತರು- ಸಿರಿಬಾಗಿಲು ರಾಮಕೃಷ್ಣ ಮಯ್ಯ, ತಲ್ಪಣಾಜೆ ವೆಂಕಟ್ರಮಣ ಭಟ್ ಚೆಂಡೆ- ಲಕ್ಮೀನಾರಾಯಣ ರಾವ್ ಅಡೂರು
ಮದ್ದಳೆ- ಲಕ್ಮೀಶ ಬೆಂಗ್ರೊಡಿ, ಉದಯ ಕಂಬಾರ್
ಚಕ್ರತಾಳ- ರವಿಶಂಕರ ಶೆಟ್ಟಿ
ಜಡಭರತ- ಸುಣ್ಣಂಬಳ ವಿಶ್ವೇಶ್ವರ ಭಟ್
ವೃಷಲ- ರಾಧಾಕೃಷ್ಣ ನಾವಡ.ಮಧೂರು
ರಹೂಗಣ- ರವಿರಾಜ ಪನೆಯಾಲ
ದೂತ- ಪೆರುವೊಡಿ ಸುಬ್ರಹ್ಮಣ್ಯ ಭಟ್
ಚಂಡಿ- ಬಾಲಕೃಷ್ಣ ಸೀತಾಂಗೊಳಿ
ಭರತ ಸಹೊದರರು- ಪ್ರಕಾಶ್ ನಾಯಕ್ ನೀರ್ಚಾಲ್,  ಶಿವಾನಂದ ಪೆರ್ಲ,
ಬೊವಿಗಳು- ಪ್ರಕಾಶ್ ನಾಯಕ್ ನೀರ್ಚಾಲ್, ಶಿವಾನಂದ ಪೆರ್ಲ, ಶ್ರೀಗಿರಿ ಅನಂತಪುರ.
ವೇಷಭೂಷಣ- ಕೊಲ್ಲಂಗಾನ ಮೇಳ
ವಿಡಿಯೋ ಚಿತ್ರೀಕರಣ- ಉದಯ ಕಂಬಾರ್, ವರ್ಣ ಸ್ಟಡಿಯೋ, ನೀರ್ಚಾಲ್ ಮತ್ತು
ಶ್ರೀವತ್ಸ ಕುಂಚಿನಡ್ಕ
ಛಾಯಾಗ್ರಹಣ- ಶ್ಯಾಮ್ ಕುಂಚಿನಡ್ಕ
ಇಂಗ್ಲಿಷ್ ಸಬ್ ಟೈಟಲ್- ಸುಮನ್ ರಾಜ್ ನೀಲಂಗಳ
ಎಡಿಟಿಂಗ್- ಶ್ರೀಮುಖ ಯಸ್. ಆರ್.ಮಯ್ಯ, ಸಿರಿಬಾಗಿಲು  

ಈ ಕಾರ್ಯಕ್ರಮದ ಯು ಟ್ಯೂಬ್ ಲಿಂಕ್ ಈ ಕೆಳಗಡೆ ಕೊಡಲಾಗಿದೆ.  

Channel Link
youtube.com/c/svvision

ಯಕ್ಷಗಾನ ರಂಗಭಾಷೆ – ಚಂದ್ರಶೇಖರ ದಾಮ್ಲೆ (Dr. Chandrashekhara Damle)

‘ಯಕ್ಷಗಾನ ರಂಗಭಾಷೆ’  ಎಂಬ ಈ ಪುಸ್ತಕವು 2013ರಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಪ್ರಕಾಶಕರು ಸ್ನೇಹ ಪ್ರಕಾಶನ, ಸುಳ್ಯ. ಈ ಕೃತಿಯ ಲೇಖಕರು ಚಂದ್ರಶೇಖರ ದಾಮ್ಲೆ ಅವರು. ಡಾ. ಚಂದ್ರಶೇಖರ ದಾಮ್ಲೆಯವರು ಪ್ರಾಧ್ಯಾಪಕರಾಗಿ, ಸಂಘಟಕರಾಗಿ, ಕಲಾವಿದರಾಗಿ, ಉತ್ತಮ ಬರಹಗಾರರಾಗಿ ಎಲ್ಲರಿಗೂ ಪರಿಚಿತರು. ಸುಳ್ಯ ಸ್ನೇಹ ಶಾಲೆಯ ಆರಂಭಕ್ಕೆ ಕಾರಣರೂ ಆಗಿದ್ದರು. ಶ್ರೀಯುತರಿಗಿರುವ ಯಕ್ಷಗಾನಾಸಕ್ತಿ, ಸಂಘಟನಾಸಕ್ತಿ, ಸಾಹಿತ್ಯಾಸಕ್ತಿ ಅಭಿನಂದನೀಯವಾದುದು. ಲೇಖಕರಾಗಿ ಡಾ. ಚಂದ್ರಶೇಖರ ದಾಮ್ಲೆಯವರು  ಸಾಂಧರ್ಭಿಕವಾಗಿ ಬರೆದಿರುವ ಲೇಖನಗಳನ್ನು ಪುಸ್ತಕ ರೂಪದಲ್ಲಿ ನೀಡಲಾಗಿದೆ. ಈ ಲೇಖನಗಳೆಲ್ಲಾ ದಿನಪತ್ರಿಕೆಗಳಲ್ಲೂ ಪ್ರಕಟವಾಗಿತ್ತೆಂಬುದನ್ನು ಡಾ. ದಾಮ್ಲೆಯವರು ತಿಳಿಸಿರುತ್ತಾರೆ. ಸುಳ್ಯದಲ್ಲಿ ಮಕ್ಕಳ ಮೇಳವನ್ನು ಹುಟ್ಟು ಹಾಕಿ ವಿದ್ಯಾರ್ಥಿಗಳಿಗೆ ವಿದ್ಯಾದಾನದ ಜತೆಗೆ ಕಲಾಸಕ್ತಿಯೂ ಬೆಳೆಯಲು ಕಾರಣರಾದರು. ಅಲ್ಲದೆ ಅನೇಕ ಪ್ರದರ್ಶನಗಳನ್ನೂ ಯಕ್ಷಗಾನ ಕಮ್ಮಟ, ವಿಚಾರಗೋಷ್ಠಿ, ಶಿಬಿರಗಳನ್ನೂ ನಡೆಸುತ್ತಾ ಬಂದಿರುತ್ತಾರೆ. ಇವರ ಯಕ್ಷ ಪ್ರಯೋಗಗಳ ಯಶಸ್ಸಿಗೆ ಮಕ್ಕಳಾದ ಶ್ರೀ ಸಮೀರ್ ದಾಮ್ಲೆ ಮತ್ತು ಅಕ್ಷರ ದಾಮ್ಲೆ ಅವರ ಸಹಕಾರವೂ ಇದೆ. ಉಭಯ ಮಕ್ಕಳೂ ಯಕ್ಷಗಾನ ಕಲೆಯ ಸಂಬಂಧವಿರಿಸಿಕೊಂಡೇ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಚಾರ.

ಯಕ್ಷಗಾನ ರಂಗಭಾಷೆ ಎಂಬ ಪುಸ್ತಕದಲ್ಲಿ ಡಾ. ಚಂದ್ರಶೇಖರ ದಾಮ್ಲೆಯವರು ಬರೆದ ಯಕ್ಷಗಾನದ ರಂಗಭಾಷೆ, ಮಣ್ಣಿನ ಕಲೆ ಯಕ್ಷಗಾನ, ತುಳುನಾಡಿನ ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಯಕ್ಷಗಾನ, ಯಕ್ಷಗಾನಕ್ಕೊಂದು ಕಾಯಕಲ್ಪ, ತಾಳಮದ್ದಳೆ – ಚಿಂತನ ಕುಲುಮೆ, ಬದಲಾಗುತ್ತಿರುವ ಸಮಾಜದಲ್ಲಿ ಯಕ್ಷಗಾನ ಕಲೆ, ಯಕ್ಷಗಾನ ಪೋಷಣೆ: ಸಂರಕ್ಷಣೆ, ವಿದ್ಯಾರ್ಥಿಗಳಲ್ಲಿ ಕಲಾಪ್ರಜ್ಞೆ, ಆಡಲಾಗುತ್ತಿರುವ ಮೌಲ್ಯ, ಯಕ್ಷಗಾನದಲ್ಲಿ ಮೌಲ್ಯ ಪರಿವರ್ತನೆ, ಯಕ್ಷಗಾನಕ್ಕೆ ನಿರ್ದೇಶನ ಬೇಕೇ?, ಅರ್ಥಗಾರಿಕೆ ಶೇಣಿ ಚಿಂತನ ಎಂಬ ಹನ್ನೆರಡು ಲೇಖನಗಳಿವೆ. ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನಿಂದ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಸುಳ್ಯ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯು ಶ್ರೀ ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ಏರ್ಪಡಿಸಿದ ಮಹಾಭಾರತದ ಹದಿನೆಂಟು ಪ್ರಸಂಗಗಳ ಪ್ರದರ್ಶನದ ಸಂದರ್ಭದಲ್ಲಿ ಯಕ್ಷಗಾನ ರಂಗಭಾಷೆ ಎಂಬ ಈ ಪುಸ್ತಕವನ್ನು ಕಲಾಪ್ರೇಮಿಗಳಿಗೆ ಅರ್ಪಿಸಲಾಗಿತ್ತು. ಮುನ್ನುಡಿಯನ್ನು ಬರೆದವರು ವಿಶ್ರಾಂತ ಕುಲಪತಿಗಳಾದ ಪ್ರೊ| ಬಿ. ಎ. ವಿವೇಕ ರೈ ಅವರು. ಕೃತಿಕಾರನ ಅರಿಕೆ ಎಂಬ ಲೇಖನದಲ್ಲಿ ಶ್ರೀ ಚಂದ್ರಶೇಖರ ದಾಮ್ಲೆಯವರು ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸೂಚಿಸಿದ್ದಾರೆ. ಪುಸ್ತಕದ ಹೊರ ಆವರಣದಲ್ಲಿ ಪ್ರೊ. ಬಿ. ಎ. ವಿವೇಕ ರೈ ಅವರ ಮುನ್ನುಡಿ ಲೇಖನದಲ್ಲಿರುವ ವಿಚಾರಗಳನ್ನು ನೀಡಲಾಗಿದೆ. 

ಕೃತಿ ಪರಿಚಯ: ರವಿಶಂಕರ್ ವಳಕ್ಕುಂಜ 

‘ಕರ್ಣ ಪರ್ವ’ ಯಕ್ಷಗಾನ ತಾಳಮದ್ದಳೆ ನೇರ ಪ್ರಸಾರ

ಯಕ್ಷಮೇನಕಾ ಮೂಡಬಿದಿರೆ, ರಂಗಸ್ಥಳ ಮಂಗಳೂರು (ರಿ), ಯಕ್ಷಚೈತನ್ಯ (ರಿ) ಅಶ್ವತ್ಥಪುರ ಎಂಬ ಮೂರು ಯಕ್ಷಸಂಘಟನೆಗಳಿಂದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗಳಿಗೆ ಸಮ್ಮಾನ ಮತ್ತು ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ  ‘ಕರ್ಣ ಪರ್ವ’ ಎಂಬ ಯಕ್ಷಗಾನ ತಾಳಮದ್ದಳೆ ಇಂದು 10.10.2020ರಂದು ಅಪರಾಹ್ನ 4 ಘಂಟೆಗೆ ಆರಂಭವಾಗಲಿದೆ. ಕಾರ್ಯಕ್ರಮದ ನೇರ ಪ್ರಸಾರದ ಲಿಂಕ್ ಇಲ್ಲಿದೆ.