Friday, August 28, 2026
Home Blog Page 358

ಮೇಳಗಳ ಇಂದಿನ (19.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (19.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಬಸ್ರೂರು ಮೂಡುಕೇರಿ ಶ್ರೀ ಕೋಟಿ ಚೆನ್ನಯ್ಯ ಗರಡಿ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಗಾಂಧಿನಗರ, ಸುಳ್ಯ 
ಕಟೀಲು ಎರಡನೇ ಮೇಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ತೋಕೂರು, ವಯಾ ಹಳೆಯಂಗಡಿ 
ಕಟೀಲು ಮೂರನೇ ಮೇಳಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನದ ವಠಾರ 
ಕಟೀಲು ನಾಲ್ಕನೇ ಮೇಳ ವಾಮದಪದವು ಶ್ರೀ ನೀಲಕಂಠೇಶ್ವರ ದೇವಸ್ಥಾನದ ವಠಾರ 
ಕಟೀಲು ಐದನೇ ಮೇಳ ದೆಪ್ಪುಣಿಗುತ್ತು, ಅತಿಕಾರಿಬೆಟ್ಟು, ಮೂಲ್ಕಿ 
ಕಟೀಲು ಆರನೇ ಮೇಳದೊಡ್ಡಬಾಲೆಪು ಹೌಸ್, ಪಂಜಿನಡ್ಕ, ಶಿಮಂತೂರು 
ಮಂದಾರ್ತಿ ಒಂದನೇ ಮೇಳ ಹೊಸಕಳಿ, ಕಟ್ ಬೆಲ್ತೂರು 
ಮಂದಾರ್ತಿ ಎರಡನೇ ಮೇಳ ಕುಳ್ಳುಂಜೆ, ಮಾವಿನಕೊಡ್ಲು 
ಮಂದಾರ್ತಿ ಮೂರನೇ ಮೇಳ ಕೆಳಕುಳಿ, ಸಿದ್ಧರಮಠ 
ಮಂದಾರ್ತಿ ನಾಲ್ಕನೇ ಮೇಳ ಶಾಂದ್ರಬೆಟ್ಟು ಮನೆ, ಶೇಡಿಮನೆ 
ಮಂದಾರ್ತಿ ಐದನೇ ಮೇಳ ಹಳಗ, ಮಂಡಗದ್ದೆ 
ಶ್ರೀ ಹನುಮಗಿರಿ ಮೇಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಭೀಷ್ಮ ವಿಜಯ, ಕನಕಾಂಗಿ ಕಲ್ಯಾಣ
ಶ್ರೀ ಸಾಲಿಗ್ರಾಮ ಮೇಳಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ – ರಾಜಾ ರುದ್ರಕೋಪ, ಶ್ರೀಕೃಷ್ಣ ತುಲಾಭಾರ 
ಶ್ರೀ ಪೆರ್ಡೂರು ಮೇಳತೆಕ್ಕಟ್ಟೆ ಸುಬ್ರಹ್ಮಣ್ಯ ದೇವಸ್ಥಾನ – ಶಪ್ತ ಭಾಮಿನಿ 
ಶ್ರೀ ದೇಂತಡ್ಕ ಮೇಳಶ್ರೀ ಕ್ಷೇತ್ರದಲ್ಲಿ – ಶ್ರೀ ವನದುರ್ಗಾ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಬ್ರಹ್ಮಲಿಂಗೇಶ್ವರ ಕೃಪಾ, ನಿಟ್ಟೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಬೆಳೆಕೊಡ್ಲು, ಮೇಲ್ ಹೊಸೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಬೆಟ್ಟಾಳಿಮನೆ. ನೂಜಾಡಿ 
ಶ್ರೀ ಪಾವಂಜೆ ಮೇಳ ಗೋಳಿದಡಿಗುತ್ತು ಗುರುಪುರ – ಶ್ರೀ ನಾಗವೃಜ ಕ್ಷೇತ್ರ ಮಹಾತ್ಮೆ  
ಶ್ರೀ ಹಟ್ಟಿಯಂಗಡಿ ಮೇಳಶಿವತಿಕೆರೆ ಈಶ್ವರ ದೇವಸ್ಥಾನ, ಕಾರ್ಕಳ – ಬೇಡರ ಕಣ್ಣಪ್ಪ, ಮೀನಾಕ್ಷಿ   
ಕಮಲಶಿಲೆ ಮೇಳ ‘ಎ’ಕೊಯಿಕಾಡಿಮನೆ, ಹಾಲಾಡಿ 
ಕಮಲಶಿಲೆ ಮೇಳ ‘ಬಿ’ಸಂಪಿಕಟ್ಟು
ಶ್ರೀ ಬಪ್ಪನಾಡು ಮೇಳಪೆರಾಬೆ ಶ್ರೀ ಶಾರದಾ ಭಜನಾ ಮಂದಿರ ಕುಂತೂರು – ಬಂಗಾರ್ ಬಾಲೆ 
ಶ್ರೀ ಅಮೃತೇಶ್ವರೀ ಮೇಳಸೂರುಹಿತ್ಲುಮನೆ, ಮಯಾಡಿ, ಬೈಂದೂರು 
ಶ್ರೀ ಬೋಳಂಬಳ್ಳಿ ಮೇಳ ಚಿಕ್ಕಮ್ಮ ದೇವಸ್ಥಾನ, ಕರ್ಕಿ
ಶ್ರೀ ಸೌಕೂರು ಮೇಳಶೆಟ್ರಕಟ್ಟೆ ಅರ್ಧನಾರೀಶ್ವರ ದೇವಸ್ಥಾನ – ಪುಷ್ಪಚಂದನ 
ಶ್ರೀ ಹಾಲಾಡಿ ಮೇಳಕಾಸನಮಕ್ಕಿ, ಹೆನ್ನಾಬೈಲು 
ಶ್ರೀ ಬೆಂಕಿನಾಥೇಶ್ವರ ಮೇಳ  ಅರೆಹೊಳೆ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ  – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಕಕ್ಕುಂಜೆ ಕಂಬಿಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೋಡಿಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ದೇವು ಪೂಂಜ ಪ್ರತಾಪ 
ಶ್ರೀ ಶನೀಶ್ವರ ಮೇಳ ಶಾಂತೋಡಿ, ಶಿರೂರು ಕೆಳಪೇಟೆ – ಶನೀಶ್ವರ ಮಹಾತ್ಮೆ 
ಶ್ರೀ ಸಿಗಂದೂರು ಮೇಳಹೆಮ್ಮಾಡಿಕಟ್ಟು ಉಗ್ರಾಣಿ ಮನೆ 
ಶ್ರೀ ನೀಲಾವರ ಮೇಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಳ್ತೂರು

ಕಲಾ ಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನ ‘ದಕ್ಷಯಜ್ಞ’

“ಯಕ್ಷಗಾನ ಭರತನಾಟ್ಯ ಶಾಸ್ತ್ರೀಯ ಸಂಗೀತ ಮೊದಲಾದ ಭಾರತೀಯ ಕಲೆಗಳು ಮನಸ್ಸನ್ನು ಅಂತರ್ಮುಖಗೊಳಿಸಿ ಸಶಕ್ತರನ್ನಾಗಿಸುತ್ತವೆ. ದಕ್ಷಯಜ್ಞದಂಥ ಪ್ರಸಂಗಗಳು ಒಳಿತು ಮಾಡುವುದಕ್ಕೆ ಪ್ರಚೋದನೆ ನೀಡುವವಲ್ಲದೇ ಕೆಡಕು ಮಾಡಬಾರದೆಂಬ ಅರಿವು ಮೂಡಿಸುತ್ತವೆ. ಭಾರತೀಯ ಕಲೆಗಳ ಅನುಸಂಧಾನ, ಆಸ್ವಾದನೆ ಮಾಡಿದಂತೆಲ್ಲ ಜ್ಞಾನ ಹೆಚ್ಚುತ್ತದೆ, ಅಂತರಂಗ ಮುದಗೊಳ್ಳುತ್ತದೆ.

ಪಾಶ್ಚಾತ್ಯ ನೃತ್ಯ ಸಂಗೀತ ವಿಚಾರಧಾರೆಗಳು ಇಂದ್ರಿಯ ಮನಗಳನ್ನು ಹೊರಮುಖಕ್ಕೆ ಸೆಳೆದು ದಬ್ಬಿ ದೇಹ ಮನಶ್ಶಕ್ತಿಗಳನ್ನು ಕುಗ್ಗಿಸುತ್ತವೆ. ಆದರೆ ನಮ್ಮ ಭಾರತೀಯ ಕಲೆ ವಿಚಾರಧಾರೆಗಳು ದೇಹಮನಗಳನ್ನು ಪುಳಕಿತಗೊಳಿಸಿ, ಶಕ್ತಿಯನ್ನು ನೂರ್ಮಡಿಗೊಳಿಸುತ್ತವೆ”ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಸಂಜೆ (ದಿನಾಂಕ 17-01-2021) ಕೆಂಗೇರಿ ಉಪ ನಗರದ ಕೊಮ್ಮಘಟ್ಟದಲ್ಲಿ ಓಂಯೋಗಧಾಮ ಟ್ರಸ್ಟ್ ಏರ್ಪಡಿಸಿದ ಸಂಕ್ರಾಂತಿ ಕಲೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಲಾ ಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನವು ನಿಜಕ್ಕೂ ಒಂದು ಉತ್ತಮ ಪ್ರದರ್ಶನವಾಗಿ ಮೂಡಿ ಬಂದಿದೆ ನುರಿತ ಕಲಾವಿದರಂತೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಪ್ರಸಿದ್ದ ಯಕ್ಷಗಾನ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಮೂಡಿ ಬಂದ ಈ ಪ್ರಸಂಗ ಉರಾಳರ ಪ್ರತಿಭೆಗೆ ಸಾಟಿ ಇಲ್ಲಾ ಎಂಬುದು ನಿಜಕ್ಕೂ ಮೆಚ್ಚುವಂತದ್ದು ಎಂದು ಸ್ವಾಮೀಜಿಯವರು ಪ್ರಶಂಸೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯೊಂದಿಗೆ ಕಲಾಕದಂಬ ಆರ್ಟ ಸೆಂಟರ್ ನಿರ್ದೇಶಕ ಡಾ ರಾಧಾಕೃಷ್ಣ ಉರಾಳ್ ಅವರು ಪರಿಕಲ್ಪಿಸಿ ನಿರ್ದೇಶಿಸಿದ, ಮಧುಮಿತಾ, ಅದಿತಿ ಉರಾಳ್, ಪೂಜಾ ಆಚಾರ್, ಪೂರ್ಣಿಮಾ ಆಚಾರ್, ಮೊದಲಾದವರು ಅಭಿನಯಿಸಿ ಪ್ರದರ್ಶಿಸಿದ, ದಕ್ಷಯಜ್ಞ ಯಕ್ಷಗಾನ ಪ್ರಸಂಗ ಸಭಿಕರ, ಕಲಾಸಕ್ತರ ಮನಸೂರೆಗೊಂಡಿತು. ಓಂ ಯೋಗಧಾಮ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಸ್ವಪ್ನಾ ಪ್ರದೀಪ್, ಡಾ. ರಾಧಾಕೃಷ್ಣ ಉರಾಳ, ಕದಂಬ ಪ್ರತಿಷ್ಠಾನದ ಶ್ರೀ ದೇವರಾಜ ಕದಂಬ, ಮುರಳೀಧರ ನಾವಡ, ನಿತ್ಯಾನಂದ ನಾಯಕ್, ವಿಶ್ವನಾಥ ಉರಾಳ್, ನರಸಿಂಹ ಮೂರ್ತಿ, ಸಿ. ಎಚ್. ಕೃಷ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.

ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ – ಬಹುಮುಖ ಪ್ರತಿಭೆಯ ಸಂಗಮ ಅನ್ವಿತಾ ಭಟ್ 

ಅನ್ವಿತಾ ಭಟ್ ಆಲಂಕೋಡ್ಲು ಇವರು ಈ ಸಾಲಿನ ಅಂದರೆ 2020-21 ರ ವರ್ಷದಲ್ಲಿ ಕರ್ನಾಟಕ ಸೆಕೆಂಡರಿ ಎಜುಕೇಶನ್ ಎಕ್ಸಾಮಿನೇಷನ್ ಬೋರ್ಡ್ ನಡೆಸಿರುವ ಸೀನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಶೇಕಡಾ 94.5 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. 

ಪ್ರಸ್ತುತ ಬೆಂಗಳೂರಿನ ಮಿತ್ರ ಅಕಾಡೆಮಿಯ ICSE ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಅನ್ವಿತಾ ಭಟ್ 2018ರ ಮೇ ತಿಂಗಳಿನಲ್ಲಿ ಕರ್ನಾಟಕ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ 99 ಶೇಕಡಾ ಅಂಕಗಳೊಂದಿಗೆ ಕರ್ನಾಟಕ ರಾಜ್ಯದಲ್ಲಿಯೇ ಮೂರನೆಯ ರಾಂಕ್ ನೊಂದಿಗೆ ತೇರ್ಗಡೆ ಹೊಂದಿದ್ದಳು. ವೆಂಕಟ್ರಾಜ ಅಲಂಕೋಡ್ಲು ಮತ್ತು ಪ್ರಶಾಂತಿ ದಂಪತಿಗಳ ಪುತ್ರಿಯಾದ ಅನ್ವಿತಾ ಭಟ್ ಭರತನಾಟ್ಯವನ್ನು ಸುಮಾರು ಏಳು ವರ್ಷಗಳಿಂದ ವಿದುಷಿ ಶ್ರೀಮತಿ ಪೂರ್ಣಿಮಾ ಮೋಹನ್ ರಾಮ್ ಅವರಿಂದ ಅಭ್ಯಸಿಸುತ್ತಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಥಮವಾಗಿ ಅರುಣಾ ರಾಜಗೋಪಾಲ್ ಅವರಲ್ಲಿಯೂ ಆಮೇಲೆ ಸುಮಾರು ಎಂಟು ವರ್ಷಗಳ ಕಾಲ ವಿದುಷಿ ಲಕ್ಷ್ಮಿ ಆರ್. ರಾವ್ ಅವರಲ್ಲಿಯೂ ಅಭ್ಯಾಸ ಮಾಡಿ ಈಗ ಟಿ.ವಿ. ರಾಮಪ್ರಸಾದ್ ಅವರಲ್ಲಿ ತನ್ನ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. 

ಯಕ್ಷಕಲಾ ಅಕಾಡೆಮಿ (ರಿ.) ಏರ್ಪಡಿಸಿದ ಯಕ್ಷಗಾನ ಉತ್ಸವ ಉದ್ಘಾಟನೆ – ಸಮಕಾಲೀನ ಪ್ರಸಂಗದ ಅವಶ್ಯಕತೆ: ಗೋಪಾಲಕೃಷ್ಣ ನಾಯರಿ

ಇಂದು ನಮ್ಮ ಸುತ್ತ ಮುತ್ತ ಎದ್ದು ಕಾಣುತ್ತಿರುವ ಸಾಮನ್ಯ ಸಾಮಾಜಿಕ ಪಿಡುಗುಗಳನ್ನು ಪ್ರತಿಬಿಂಬಿಸುವ ಹಾಗೂ ಅದಕ್ಕೆ ಪರಿಹಾರವನ್ನು ಕೂಡ ನೀಡುವಂತಹ ಸಮಕಾಲೀನ ಪ್ರಸಂಗದ ಅವಶ್ಯಕತೆ ಇದೆ ಎಂದು ದೇಸಿ ಪ್ರಸಿದ್ಧಿಯ ರಂಗ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ನಾಯರಿ ಅಭಿಪ್ರಾಯ ಪಟ್ಟರು.

ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ (ರಿ.) ಏರ್ಪಡಿಸಿದ ಯಕ್ಷಗಾನ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ನಾಯರಿಯವರು, ಸಂಘಟಕರು ಆಯ್ಕೆ ಮಾಡುವಂತಹ ಪ್ರಸಂಗಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿರದೆ, ಜನರಲ್ಲಿರುವ ಮೌಢ್ಯತೆಯನ್ನು ಹೋಗಲಾಡಿಸಿ, ಸಾಮಾಜಿಕ ಅರಿವನ್ನು ಮೂಡಿಸುವಂತಹ ಪ್ರಸಂಗಗಳು ಸಾಂಪ್ರದಾಯಿಕ ಚೌಕಟ್ಟಿನ್ಲಲಿ ಹೊರಬರಬೇಕೆಂದು ಆಶಿಸಿದರು.

ಇನ್ನೋರ್ವ ಗಣ್ಯರಾದ ಬೆಂಗಳೂರಿನ ಶೇಖರ್‌ ಹಾಸ್ಪಿಟಲ್‌ನ ಸಂಸ್ಥಾಪಕ ನಿರ್ದೇಶಕರಾದ ಡಾ|| ಪಿ. ವಿ. ಐತಾಳರವರು ಮಾತನಾಡುತ್ತ, ವಿದ್ಯಾರ್ಥಿಗಳಲ್ಲಿ ಕಲಾ ಪ್ರಜ್ಞೆಯನ್ನು ಬೆಳೆಸಬೇಕಾದುದು ಸುಂದರ ಸಮಾಜದ ನಿರ್ಮಾಣದ ದೃಷ್ಟಿಯಿಂದ ಅತೀ ಅವಶ್ಯವಾದ ಕಾರ್ಯವಾಗಿದೆ. ಕಲೆಯನ್ನು ಶಿಕ್ಷಣದೊಂದಿಗೆ ಮೈಗೂಡಿಸಿಕೊಂಡವರಿಗೆ ಸಾಮಾಜಿಕ ಸಂವಹನವು ಸುಲಭವಾಗುತ್ತದೆ ಎಂದರು. ಹಂಗಾರಕಟ್ಟೆ ಯಕ್ಷಗಾನ   ಕಲಾಕೇಂದ್ರದ ಕಾರ್ಯದರ್ಶಿಯವರು ಮಾತನಾಡುತ್ತ ಮೌಲ್ಯಯುತ ಯಕ್ಷಗಾನ ಉಳಿಸಲು ಹಾಗೂ ಬೆಳೆಸಲು ಪ್ರೇಕ್ಷಕರ ಪಾತ್ರವೂ ಕೂಡ ಮಹತ್ವವಾದುದು. ಸಭೆಯಲ್ಲಿ ಸಭ್ಯ ರೀತಿಯ ವರ್ತನೆ, ಹಾಗೂ ಕಲಾವಿದರ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸುವ ಸಮಯದಲ್ಲಿ ಪ್ರೇಕ್ಷಕರ ಸಭ್ಯರೀತಿಯಲ್ಲಿ  ಪ್ರತಿಸ್ಪಂದನೆಯು ಅತೀ ಮಹತ್ವದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಸುದರ್ಶನ ಉರಾಳರನ್ನು ಯಕ್ಷಕಲಾ ಅಕಾಡೆಮಿ ವತಿಯಿಂದ ಗೌರವಿಸಲಾಯಿತು.

ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಯಕ್ಷಗಾನ ಗುರುಗಳಾದ ಶ್ರೀ ಕೃಷ್ಣಮೂರ್ತಿ ತುಂಗರವರು ಸ್ವಾಗತಿಸಿದರು. ಸಂಸ್ಥೆಯು ಅಧ್ಯಕ್ಷರಾದ ಶ್ರೀಮತಿ ಅನುಸೂಯ ಕೆ ರವರು ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಾಮಚಂದ್ರ ಐತಾಳರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಸಂಸ್ಥೆಯ ಕಲಾವಿದರಿಂದ “ಭೀಷ್ಮ ಪ್ರತಿಜ್ಞೆ” ಎನ್ನುವ ಯಕ್ಷಗಾನ ಪ್ರದರ್ಶನ ನಡೆಯಿತು.

ಮೇಳಗಳ ಇಂದಿನ (18.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (18.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಆರೂರು ಕುಂಜಾಲು ಶ್ರೀ ದುರ್ಗಾನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಬಾಜುವಳ್ಳಿ, ಬೆಟ್ಟಂಪಾಡಿ, ಪುತ್ತೂರು 
ಕಟೀಲು ಎರಡನೇ ಮೇಳ ನಿಶ್ಮಿತಾ ಟವರ್ಸ್, ಮೂಡಬಿದ್ರಿ 
ಕಟೀಲು ಮೂರನೇ ಮೇಳಮಲ್ಲಿಗೆ ಅಂಗಡಿ, ಕಟೀಲು 
ಕಟೀಲು ನಾಲ್ಕನೇ ಮೇಳ ದೇಲಂತಬೆಟ್ಟು ವಯಾ ಶಿಬರೂರು 
ಕಟೀಲು ಐದನೇ ಮೇಳ ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ, ದೇವಂದಬೆಟ್ಟು, ಕಲ್ಲಿಗೆ, ಬಂಟ್ವಾಳ 
ಕಟೀಲು ಆರನೇ ಮೇಳಮಳಲಿ ಮಟ್ಟಿಮನೆ, ಬಡಗು ಉಳಿಪ್ಪಾಡಿ 
ಮಂದಾರ್ತಿ ಒಂದನೇ ಮೇಳ ಬರೇಗದ್ದೆ ಕೊಂಜಾಡಿ, ಆರ್ಡಿ – ಕೂಡಾಟ 
ಮಂದಾರ್ತಿ ಎರಡನೇ ಮೇಳ ಸಾಂತಗೋಡು, ಕುಚ್ಚೂರು, ಹೆಬ್ರಿ 
ಮಂದಾರ್ತಿ ಮೂರನೇ ಮೇಳ ರಥಬೀದಿ, ತೀರ್ಥಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಬರೇಗದ್ದೆ ಕೊಂಜಾಡಿ, ಆರ್ಡಿ – ಕೂಡಾಟ  
ಮಂದಾರ್ತಿ ಐದನೇ ಮೇಳ ಕೆಸರೆ, ಹುಂಚದಕಟ್ಟೆ 
ಶ್ರೀ ಹನುಮಗಿರಿ ಮೇಳ ಉಡುಪಿ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ – ಶ್ರೀನಿವಾಸ ಕಲ್ಯಾಣ, ಮಾಯಾ ಮಾರುತೇಯ 
ಶ್ರೀ ಸಾಲಿಗ್ರಾಮ ಮೇಳಕೋಟ ಹಂದಟ್ಟು ಹಂದೆ ದೇವಸ್ಥಾನದ ಬಳಿ – ಶ್ರೀ ಶನೀಶ್ವರ ಮಹಾತ್ಮೆ 
ಶ್ರೀ ಪೆರ್ಡೂರು ಮೇಳಮತ್ಯಾಡಿ – ಶಪ್ತ ಭಾಮಿನಿ 
ಶ್ರೀ ಮಾರಣಕಟ್ಟೆ ಮೇಳ ‘ಎ’ಕಳಿಬಾಗಲ್ ಬೆಟ್ಟು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಜನ್ನಾಲ್ ಮೇಲ್ಜೆಡ್ಡು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಯಳೂರು ಕೆರೆಮನೆ, ಹಕ್ಲಾಡಿ 
ಶ್ರೀ ಪಾವಂಜೆ ಮೇಳ ಜಲದುರ್ಗಾ ದೇವಸ್ಥಾನ, ಪೆರುವಾಜೆ, ಬೆಳ್ಳಾರೆ – ಶ್ರೀ ದೇವಿ ಲಲಿತೋಪಾಖ್ಯಾನ 
ಶ್ರೀ ಹಟ್ಟಿಯಂಗಡಿ ಮೇಳಧರ್ಮಸ್ಥಳ
ಕಮಲಶಿಲೆ ಮೇಳ ‘ಎ’ಆರೆಮಕ್ಕಿ ಚಿಕ್ಕುಪರಿವಾರ ದೇವಸ್ಥಾನ ನೇರಳಕಟ್ಟೆ, ಕರ್ಕುಂಜೆ, ದೊಡ್ಮನೆ 
ಕಮಲಶಿಲೆ ಮೇಳ ‘ಬಿ’ಶ್ರೀಕೃಷ್ಣ ನಿಲಯ, ಎಡಬೆಟ್ಟು, ಸಾಸ್ತಾನ 
ಶ್ರೀ ಸಸಿಹಿತ್ಲು ಭಗವತೀ ಮೇಳ ಪೇಪರ್ ಮಿಲ್ ಕೆಂಪ್ಲಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ರಂಗಸ್ಥಳ 
ಶ್ರೀ ಅಮೃತೇಶ್ವರೀ ಮೇಳಹೊಸಮನೆ ತೋಡ್ಕಟ್ಟು, ಪಾರಂಪಳ್ಳಿ 
ಶ್ರೀ ಬೋಳಂಬಳ್ಳಿ ಮೇಳ ವರಂಗ  – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಮೇಲ್ ಗಂಗೊಳ್ಳಿ ಗ್ರಾಮ ಜೆಟ್ಟಿಗೇಶ್ವರ
ಶ್ರೀ ಹಾಲಾಡಿ ಮೇಳಮುದೂರಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಮರವಂತೆ ಬ್ರೇಕ್ ವಾಟರ್ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಗರಡಿಮಜಲು  – ರಾಜವಂಶ ಗುಳಿಗ  
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬೈಂದೂರು ಶಿರೂರು ಶ್ರೀ ವೀರ ಮಹಾಸತಿ ದೇವಸ್ಥಾನದ ವಠಾರ
ಶ್ರೀ ಹಿರಿಯಡಕ ಮೇಳಆತ್ರಾಡಿ ಮದಗ ತಿರುಮಂತೋಡಿ – ಹಿರಿಯಡಕ ಕ್ಷೇತ್ರ ಮಹಾತ್ಮೆ   
ಶ್ರೀ ಶನೀಶ್ವರ ಮೇಳ ಶ್ರೀ ನಂದಿಕೇಶ್ವರ ಅಮ್ಮನವರ ದೇವಸ್ಥಾನ, ಅರೇಶಿರೂರು 
ಶ್ರೀ ಸಿಗಂದೂರು ಮೇಳಧಾರೇಶ್ವರ  
ಶ್ರೀ ನೀಲಾವರ ಮೇಳ ಸಾಸ್ತಾನ ಪೇಟೆ 

ಕನ್ನಡ ಭಾಷೆಯ ನುಡಿಗಟ್ಟುಗಳನ್ನು ಯಥೇಚ್ಛವಾಗಿ ಬಳಸುವ ತೆಕ್ಕಟ್ಟೆ ಆನಂದ ಮಾಸ್ತರರ ಅರ್ಥಗಾರಿಕೆಯ ತುಣುಕು  

ಪದ್ಯ: ಎನಲು ಸಂಜಯ ನುಡಿದ ಎನ್ನೊಳು| ಇನಿತು ವೈರಾಗ್ಯಗಳು ಏತಕೆ| ಜನಪನವನಿಯ ಸೋತ ಮೇಲನುವರದೊಳು ಯುದ್ಧದ|| ಮೊನೆಯೊಳೀವುದು ಕ್ಷತ್ರಿಯ| ವಂಶದ ಗುಣದ ಪದ್ಧತಿ ಸತ್ಯವಿರ್ದರೆ| ಜನಪನನುವಾಗಲಿ ಎನಲೈ ತಂದೆ ತಾನೆಂದ ||

ಸಂಜಯ (ತೆಕ್ಕಟ್ಟೆ ಆನಂದ ಮಾಸ್ತರ್): ಧರ್ಮರಾಜಾ, ಉದ್ಯೋಗ ಪರ್ವ ಇದು. ಉದ್ಯಮಶೀಲನಾಗಿರುವವನು ಕರುಣೆಯ ಉದ್ವೇಗಗಳಿಗೆ ಒಳಗಾಗಬಾರದು. ಭಾವವಿವಶನಾಗಿ ಯಾವನು ಜೀವನದಲ್ಲಿ ಮುಂದೆ ಸಾಗುತ್ತಾನೋ ಅವನು ಹೆಜ್ಜೆ ಹೆಜ್ಜೆಗೂ ಸೋಲನ್ನೇ ಅನುಭವಿಸುತ್ತಾನೆಯೇ ಹೊರತು ಗೆಲುವನ್ನಲ್ಲ. ನಿನ್ನ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದವರು ನಾವು. ನಾವು ಅಂದರೆ ನಾನು ಒಬ್ಬನೇ. ಹಾಗಾದರೆ ನಾವು ಅಂತ ಯಾಕೆ ಹೇಳಿದೆ? ನಿನ್ನ ತಂದೆ, ದೊಡ್ಡತಂದೆ ಅವರ ಸಮಕಾಲೀನನೂ ಒಡನಾಡಿಯೂ ನಾನು.

ಸಾಮಾಜಿಕವಾದ ಸ್ಥಾನಮಾನಗಳಲ್ಲಿ ನಮಗೆ ಭಿನ್ನತೆ ಇದ್ದರೂ ಆಂತರಂಗಿಕವಾದ ಸೌಹಾರ್ದ, ಸ್ನೇಹಗಳಲ್ಲಿ ನಮ್ಮಲ್ಲಿ ವಿಭಿನ್ನತೆಯಿರಲಿಲ್ಲ. ಹಾಗಾದ್ದರಿಂದಲೇ ಇಲ್ಲಿಗೆ ಬರುವಾಗ ನಾನು ಏನನ್ನು ನಿರೀಕ್ಷೆ ಮಾಡಿಕೊಂಡಿದ್ದೆನೋ ಅದು ತಲೆ ಕೆಳಗಾಗಿ ಹೋಯಿತು. ಅಯ್ಯಾ, ಈ ಪಕ್ಷದ ಪ್ರಮುಖನೂ ಪ್ರಧಾನನೂ ನೀನು. ನೀನಾಗಲೀ ನಿನ್ನವರಾಗಲೀ ನನ್ನನ್ನು ಹೀಗೆ ಸ್ವಾಗತಿಸುತ್ತೀರಿ ಎಂದು ನಾನು ಎಣಿಸಿರಲಿಲ್ಲ. ಯಾಕೆ ಗೊತ್ತೋ? ‘ಕೋಣಕ್ಕೆ ಹುಣ್ಣಾದರೆ ಆಕಳಿಗೆ ಬರೆ’ ಎಳೆಯಲಾಗದಲ್ಲ? ಸುಯೋಧನನ ಬಗ್ಗೆ ನಿಮ್ಮವರ ಮನಸ್ಸಿನಲ್ಲಿ ಮೂಡಿರುವ ದ್ವೇಷ, ಈರ್ಷೆ, ಮಾತ್ಸರ್ಯ ಇವುಗಳನ್ನು ಅವನ ದೂತನಾಗಿ ಬಂದ ನನ್ನ ಮುಂದೆ ಆಡಿದರೆ, ತೋಡಿದರೆ ಫಲವೇನು ಹೇಳು.

ಒಂದು ಮಾತು ನಿಮಗೆ ಹೇಳ್ತೇನೆ. ‘ಕುಲ ನಾಲಿಗೆಯರುಹಿತು’. ನಿಮ್ಮ ಮಾತುಗಳಲ್ಲಿರುವ ವೀರ್ಯ, ನಿಮ್ಮ ಮಾತುಗಳಲ್ಲಿರುವ ಶೌರ್ಯ, ನಿಮ್ಮ ಮಾತುಗಳಲ್ಲಿರುವ ವ್ಯಂಗ್ಯ, ಪ್ರಯೋಜನಕಾರಿಯಲ್ಲ. ಮಾತು ಕೃತಿಯಾಗಿ ಮೂಡಿದಾಗಲೇ ಮನುಷ್ಯ ಮಹತ್ವನೆನಿಸಿಕೊಳ್ಳುತ್ತಾನೆ. ಹಾಗಾದರೆ ನೀನಾಗಲೀ ನಿನ್ನವರಾಗಲೀ ಕೇಳಿದ ಮಾತಿನ ವಾಚ್ಯಾರ್ಥ ನನಗೆ ಗ್ರಾಹ್ಯ ಅಲ್ಲವಷ್ಟೇ ? ಒಟ್ಟಾರೆ ಎಲ್ಲವರೂ ಸುಯೋಧನನ, ಸುಯೋಧನನ ಕಡೆಯವರ ಕ್ಷೇಮವನ್ನು ವಾಚ್ಯವಾಗಿ ಕೇಳಿದ್ದೀರಲ್ಲ. ಹಾಗಾದರೆ ವಾಚ್ಯಾರ್ಥ ಅಲ್ಲ. ನಿಮಗೆಲ್ಲರಿಗೂ ವೃಷ್ಟಿಯಾಗಿ ಸುಯೋಧನನ ಬಗ್ಗೆ ಅಂತರಂಗದಲ್ಲಿ ಮೂಡಿರುವ ದ್ವೇಷ, ಈರ್ಷ್ಯೆಗಳೇ, ಅವುಗಳ ವಾಸನೆಯೇ, ಅವುಗಳ ಕಂಪೇ ನಿಮ್ಮ ಮಾತಿನಲ್ಲಿದೆ. ಹಾಗಾಗಿ ಪ್ರಸ್ತುತ ಆ ಬಗ್ಗೆ ಉತ್ತರಿಸುವುದಕ್ಕೆ ನಾನು ಉತ್ತರದಾಯಿ ಅಲ್ಲ.

ಇನ್ನೊಬ್ಬ ನಿಮ್ಮಲ್ಲಿ ಒಳಗಿದ್ದೂ ಹೊರಗುಳಿಯುವವನು. ಹೊರಗಿದ್ರೂ ಒಳಗೆ ನಡೆಸುವವನು. ವಾಸುದೇವ. ಅವನ ಬಗ್ಗೂ ಅಷ್ಟೇ. ಶ್ರದ್ಧೆಯಿಂದ ನಮಸ್ಕಾರ ಕೊಟ್ಟೇನೆ ವಿನಃ ಬುದ್ಧಿಯಿಂದ ಪ್ರತ್ಯುತ್ತರ ನೀಡಲಾರೆ. ಯಾಕೆ? ನನಗದು ಉದ್ಯೋಗ ಅಲ್ಲ. ಈಗ ನಾನಿಲ್ಲಿಗೆ ಬಂದಿರುವುದು ಯಾವನನ್ನು ನೀವು ಪ್ರತಿಕಕ್ಷಿ ಎಂದು ಸ್ವೀಕರಿಸಿ, ಒಪ್ಪಿದ್ದೀರಿ, ನಿಮ್ಮ ಸುದೀರ್ಘವಾದ ಜೀವಮಾನದಲ್ಲಿ ಇದು ತನಕದ ನಿಮ್ಮ ಆಯುರ್ಮಾನವನ್ನು ಯಾರಾತನ ವಿರೋಧವನ್ನು ಸಾಧಿಸುವುದಕ್ಕಾಗಿ ನೀವು ಸವೆಸಿದ್ದೀರಿ, ಅಂತಹಾ ಸುಯೋಧನನಿಂದ ಆಜ್ಙಾಪಿತನಾಗಿ ಬಂದಿರುವ ರಾಜದೂತ ನಾನು.

ದೂತನಾದವನ ಕಾರ್ಯವ್ಯಾಪ್ತಿ ಎಷ್ಟು ಅಂತ ಅರಿಯದೆ ಇದ್ದ ಅಜ್ಞ, ಅಪ್ರಬುದ್ಧ ರಾಜಕಾರಣಿ ನೀನಲ್ಲ. ಈ ಭರವಸೆಯಿಂದ ನಿನಗೆ ಹೇಳುತ್ತಾ ಇದ್ದೇನೆ. ಸುಯೋಧನನಾಡಿದ ಮಾತುಗಳನ್ನೇ ಅನುವಾದ ರೂಪವಾಗಿ ನನ್ನ ನಾಲಗೆಯಿಂದ ಹೇಳ್ತೇನೆ. ಜೂಜಿನಲ್ಲಿ ನೀವು ಸೋತಿರಬಹುದು. ಸುಯೋಧನ ಗೆದ್ದಿರಬಹುದು. ಆ ಸೋಲಾಗಲೀ ಈ ಗೆಲುವಾಗಲೀ ನಿರ್ಣಾಯಕವಲ್ಲ. ಕ್ಷತ್ರಿಯನಾಗಿ ಹುಟ್ಟಿದವನು ಅವನಿಯನ್ನಾಳುವ ಅಧಿಕಾರವನ್ನು ಆಶಿಸ್ತಾನೆ ಅಂತಾದ್ರೆ ಅನವರದಲ್ಲಿ ವಿರೋಧಿಯನ್ನು ಸೋಲಿಸಿ ತಾನು ಗೆದ್ದು ಆಳಬೇಕಾದದ್ದು ಕ್ಷತ್ರಿಯಕ್ಕೆ ಭೂಷಣ. ಕ್ಷತ್ರಿಯನ ಧರ್ಮ.

ಹಾಗಾದ್ದರಿಂದ ನೀವಾಸೆಪಟ್ಟಿರುವ ರಾಜ್ಯವನ್ನು ಅಂದರೆ ನಿಮ್ಮ ಅರ್ಧರಾಜ್ಯವನ್ನಲ್ಲ, ಅಧಿಕಾರಕ್ಕೆ ಸಂಬಂಧಪಟ್ಟ ಚಂದ್ರವಂಶದ ರತ್ನಸಿಂಹಾಸನವನ್ನು ಆಯುಧದ ಮೊನೆಯಲ್ಲಿಟ್ಟಿದ್ದೇನೆ. ಶಕ್ತರಾದರೆ ಪಾಂಡವರು ಪಡೆಯಲಿ. ಅಶಕ್ತರಾದರೆ ಅಂಬೋಣ ಏನು ಅಂತ ತಿಳಿಯಿಸಲಿ. ಇದನ್ನು ಹೇಳುವುದಕ್ಕಾಗಿ, ಇದಕ್ಕೆ ಉತ್ತರ ಕೇಳುವುದಕ್ಕಾಗಿ ಬಂದವನು ನಾನು. ಅರಸನಾಗಿ, ಈ ಪಕ್ಷದ ಪ್ರಮುಖನಾಗಿ ಏನು ಹೇಳ್ತೀಯ? 

ಬಣ್ಣದ ವೇಷದ ದೈತ್ಯ ಪ್ರತಿಭೆ – ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್

ಬಣ್ಣದ ವೇಷಗಳು ರೌದ್ರ, ಭಯಾನಕ, ಬೀಭತ್ಸ ಮೊದಲಾದ ರಸಗಳನ್ನು ಸೃಷ್ಠಿಸುತ್ತವೆ. ರಾಜಬಣ್ಣ, ಹೆಣ್ಣುಬಣ್ಣ, ಕಾಟುಬಣ್ಣ ಹೀಗೆ ಈ ವಿಭಾಗದಲ್ಲಿ ವೈವಿಧ್ಯತೆಗಳು. ಹಿಂದಿನ ತಲೆಮಾರಿನ ಅನೇಕ ಕಲಾವಿದರು ನೇಪಥ್ಯದಲ್ಲಿ ಮತ್ತು ರಂಗಸ್ಥಳದಲ್ಲಿ ಅರ್ಪಣಾಭಾವದಿಂದ ದುಡಿದು ಪ್ರಸಿದ್ಧರಾದರು. ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ ಜೀವ ತುಂಬಿದರು. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಅವರ ಶ್ರಮ, ಸಾಧನೆಯು ಹಿರಿದಾದುದು ಮತ್ತು ಪ್ರಶಂಸನೀಯವಾದುದು. ಪ್ರಸ್ತುತ ಅನೇಕ ಹಿರಿಯ ಮತ್ತು ಯುವ ಕಲಾವಿದರು ಬಣ್ಣದ ವೇಷಧಾರಿಗಳಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಅಂತವರಲ್ಲೊಬ್ಬರು ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್. ಇವರು ಹನುಮಗಿರಿ ಮೇಳದಲ್ಲಿ ಪ್ರಸ್ತುತ ತಿರುಗಾಟ ನಡೆಸುತ್ತಿದ್ದಾರೆ.

`ಯಕ್ಷಗಾನ’ ದಲ್ಲಿ “ಬಣ್ಣದ ವೇಷಗಳು’’ ಎಂಬ ವಿಭಾಗಕ್ಕೆ ವಿಶೇಷ ಸ್ಥಾನವಿದೆ. ತೆಂಕುತಿಟ್ಟಿನಲ್ಲಂತೂ ಮುಖವರ್ಣಿಕೆ, ಅಟ್ಟಹಾಸ, ರಂಗಪ್ರವೇಶಿಸುವ ರೀತಿ, ಒಡ್ಡೋಲಗ ವೈಭವ, ಕುಣಿತಗಳಿಂದ ಈ ಪಾತ್ರಗಳು ವಿಜೃಂಭಿಸುತ್ತವೆ. ನೇಪಥ್ಯದಲ್ಲಿ (ಚೌಕಿಯಲ್ಲಿ) ಇವರಿಗೆ ದುಡಿಮೆ ಹೆಚ್ಚು. ಹಾಗೆಂದು ರಂಗದಲ್ಲಿ ದುಡಿಮೆ ಕಡಿಮೆಯೇನಲ್ಲ. ಪಾತ್ರಕ್ಕನುಗುಣವಾಗಿ ಮೆರೆಯುವ ಅವಕಾಶಗಳು ಇದ್ದೇ ಇದೆ. ಕೆಲವೊಂದು ಪಾತ್ರಗಳಿಗೆ ರಂಗದಲ್ಲಿ ಕೆಲಸ ಕಡಿಮೆಯಾದರೂ ಪ್ರೇಕ್ಷಕರ ಮನಸೂರೆಗೊಳ್ಳುವ ಸಾಮರ್ಥ್ಯವಿದೆ.

ನಾಟ್ಯ ಕಲಿತದ್ದು ಖ್ಯಾತ ಕಲಾವಿದರಾದ ರೆಂಜಾಳ ರಾಮಕೃಷ್ಣ ರಾಯರಿಂದ. ಬಣ್ಣಗಾರಿಕೆ ಮತ್ತು ರಂಗದ ನಡೆಗಳನ್ನು ಅಭ್ಯಸಿಸಿದ್ದು ಪ್ರಸಿದ್ಧ ಬಣ್ಣದ ವೇಷಧಾರಿಯಾಗಿ ಮೆರೆದ ಬಣ್ಣದ ಮಹಾಲಿಂಗ ಅವರಿಂದ.
ಶ್ರೀ ಸದಾಶಿವ ಶೆಟ್ಟಿಗಾರರ ಹುಟ್ಟೂರು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ. ಇವರು 1965 ಡಿಸೆಂಬರ್ 17ರಂದು ಶ್ರೀ ಬಾಬು ಶೆಟ್ಟಿಗಾರ್ ಮತ್ತು ಗಿರಿಯಮ್ಮ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 6ನೇ ತರಗತಿಯ ವರೇಗೆ. ಶಾಲಾ ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ತಂದೆ ತಾಯಿಯವರ ಜತೆ ಆಟ ನೋಡಲು ಹೋಗುತ್ತಿದ್ದರು.

ಪರಿಸರದಲ್ಲಿ ಸುರತ್ಕಲ್, ಕರ್ನಾಟಕ, ಆದಿಸುಬ್ರಹ್ಮಣ್ಯ, ಪುತ್ತೂರು ಮೇಳಗಳ ಕಲಾಪ್ರದರ್ಶನಗಳು ನಡೆಯುತ್ತಿತ್ತು. ಟೆಂಟ್ ಮೇಳಗಳ ಪ್ರದರ್ಶನ. ಬಡತನದ ಕಾರಣ ಟಿಕೇಟು ಖರೀದಿಸಲು ಕಷ್ಟವಿತ್ತು. ಹಾಗೆಂದು ಆಟ ನೋಡಲು ಮನಸ್ಸು ಹಾತೊರೆಯುತ್ತಿತ್ತು. ಯಾರಿಗೂ ತಿಳಿಯದಂತೆ ಟೆಂಟ್‍ನ ಪರದೆಯೊಳಗೆ ನುಸುಳಿ ಕುಳಿತು ಆಟ ನೋಡುತ್ತಿದ್ದರಂತೆ! 7ನೇ ತರಗತಿಗೆ ಸೇರಿ ಕೆಲವಾರು ದಿನಗಳ ನಂತರ ಬಡತನದ ಮತ್ತು ಮನೆಯ ಸಮಸ್ಯೆಗಳ ಕಾರಣದಿಂದ ಶಾಲೆ ಬಿಡಬೇಕಾಗಿ ಬಂದಿತ್ತು. ಮನೆಯವರ ಒಪ್ಪಿಗೆ ಪಡೆದು ಸದಾಶಿವ ಶೆಟ್ಟಿಗಾರರು ಭಾವೀ ಬದುಕಿನ ಹೊಂಗನಸುಗಳನ್ನು ಹೊತ್ತು ಮುಂಬಯಿಗೆ ತೆರಳಿದರು. ಮುಂಬಯಿಯಲ್ಲಿ 3 ವರ್ಷ ಹೋಟೆಲ್ ಕೆಲಸ. ನಂತರ ಮರಳಿ ಊರಿಗೆ. ಮತ್ತೆ ಹುಬ್ಬಳ್ಳಿಯ ಹೋಟೆಲ್‍ನಲ್ಲಿ 1 ವರ್ಷ ಕೆಲಸ. ಅಲ್ಲಿಂದಲೇ ಪುನಃ ಮುಂಬಯಿಗೆ. ಹೋಟೆಲ್‍ನಲ್ಲಿ 2 ವರ್ಷ ದುಡಿಮೆ. ಮರಳಿ ಊರಿಗೆ. ಉಜಿರೆಯ ಹೋಟೆಲೊಂದರಲ್ಲಿ 6 ತಿಂಗಳು ಕೆಲಸ. ಹೋಟೆಲುಗಳಲ್ಲಿ ದುಡಿಯುತ್ತಿರುವಾಗಲೂ ಯಕ್ಷಗಾನದ ಹುಚ್ಚು ತೀವ್ರವಾಗಿತ್ತು. ಯಕ್ಷಗಾನದ ಹಾಡುಗಳನ್ನು ಹೇಳುವುದು, ಚೆಂಡೆಯ ಬಾಯಿತಾಳಗಳನ್ನು ಹೇಳುತ್ತಾ ಕುಪ್ಪಿಯ ಗ್ಲಾಸುಗಳನ್ನೂ, ಪ್ಲೇಟ್‍ಗಳನ್ನೂ ಬಡಿಯುತ್ತಿದ್ದರು. ಇವರ ತಾಳಕ್ಕೆ ಕುಪ್ಪಿಯ ಗ್ಲಾಸುಗಳನೇಕ ಪುಡಿಯಾಗಿದ್ದವು! ಹೋಟೆಲ್ ಸಾಹುಕಾರರಿಂದ ಬೈಗುಳದ ಸುರಿಮಳೆಯಾಗುತ್ತಿತ್ತು. ಅವಕಾಶ ಸಿಕ್ಕಿದಾಗಲೆಲ್ಲಾ ಆಟಗಳನ್ನು ಬಿಡದೆ ನೋಡುತ್ತಿದ್ದರು.

ಕೆಲಸ ಮಾಡುತ್ತಿರುವಾಗಲೇ ತಾನೂ ವೇಷ ಮಾಡಬೇಕು, ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು. ನಾಟ್ಯ ಕಲಿತು ವೇಷ ಮಾಡಲು ನಿರ್ಧರಿಸಿಯೇ ಬಿಟ್ಟರು. ಆಗ ಪತ್ತನಾಜೆಯ ಸಮಯ. ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನ ನಡೆಯುತ್ತಿತ್ತು. ಆ ಸಂದರ್ಭದಲ್ಲೇ ಕಲಿಕಾಸಕ್ತರಿಗೆ ಲಲಿತಕಲಾ ಕೇಂದ್ರದಲ್ಲಿ ಸಂದರ್ಶನ ನಡೆಯುತ್ತಿತ್ತು. ಕಲಾವಿದನಾಗುವ ಬಯಕೆಯು ಸಾಕಾರಗೊಳ್ಳುತ್ತದೆ ಎಂಬ ಸಂತಸದಿಂದ ತೆರಳಿದರು. (18ನೇ ವರ್ಷ) ಆಗಲೇ ದೃಢಕಾಯರಾಗಿದ್ದ ಶೆಟ್ಟಿಗಾರರು ಸಂದರ್ಶನದಲ್ಲಿ ಆಯ್ಕೆಯಾಗಿರಲಿಲ್ಲ. ಹೋಟೆಲ್ ಕೆಲಸದ ಸಂದರ್ಭ ದಿನವೂ ವ್ಯಾಯಾಮ ಮಾಡಿ ಗಟ್ಟಿಮುಟ್ಟಾಗಿ ಬೆಳೆದಿದ್ದರು ಶೆಟ್ಟಿಗಾರರು. ಇವರ ದೇಹವೇ ಆಯ್ಕೆಯಾಗುವುದಕ್ಕೆ ತೊಡಕಾಗಿತ್ತು. 

ರೆಂಜಾಳದವರು ಕಲ್ಲಾಡಿ ಶ್ರೀ ವಿಠಲ ಶೆಟ್ಟರಲ್ಲಿ ಮಾತನಾಡಿ ಕಟೀಲು ಮೇಳಕ್ಕೆ ಸೇರಿಸಿದರು. (ನೇಪಥ್ಯ ಕಲಾವಿದನಾಗಿ) ಆಗ ಮೂರು ಮೇಳಗಳು ಕಾರ್ಯಾಚರಿಸುತ್ತಿತ್ತು. ಇವರು ಸೇರಿದ್ದು 2ನೇ ಮೇಳಕ್ಕೆ. ಪ್ರಥಮ ವರ್ಷವೇ ಬಣ್ಣದ ಮಹಾಲಿಂಗ ಅವರಿಗೆ ವೇಷಕಟ್ಟುವ ಭಾಗ್ಯ ಒದಗಿತ್ತು. ಮೇಕಪ್ ಮಾಡುವಾಗ ದೂರದಿಂದಲೇ ಗಮನಿಸಿ ಗ್ರಹಿಸುತ್ತಿದ್ದರು. ನಂತರ ಅವರಿಗೆ ವೇಷ ಕಟ್ಟುತ್ತಿದ್ದರು. ತಿರುಗಾಟ ಮುಗಿಸಿ ಮಳೆಗಾಲ ಕಟೀಲಿನಲ್ಲಿ ನಡೆಯುವ ಯಕ್ಷಗಾನ ಸಪ್ತಾಹಕ್ಕೆ ನೇಪಥ್ಯ ಕಲಾವಿದನಾಗಿ ಬಂದ ಸಂದರ್ಭ. ಅಲ್ಲಿ ನಾಟ್ಯ ಕಲಿಯಲು ತೀರ್ಮಾನ. ಅಲ್ಲಿಯೇ ಇದ್ದ ರೆಂಜಾಳ ರಾಮಕೃಷ್ಣ ರಾಯರಿಂದ ನಾಟ್ಯಾಭ್ಯಾಸ. ಕಟೀಲು ಗೋಪಾಲಕೃಷ್ಣ ಆಸ್ರಣ್ಣರು ಆ ಕಾಲದಲ್ಲಿ ಯಕ್ಷಗಾನವನ್ನೂ ಕಲಾವಿದರನ್ನೂ ಪ್ರೀತಿಸಿ ಪ್ರೋತ್ಸಾಹಿಸುತ್ತಿದ್ದರಂತೆ. ಅವರ ನಿರ್ದೇಶನದಲ್ಲಿ ಆಗ ಆಟಕೂಟಗಳು  ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದುವು. ಸಪ್ತಾಹದ ಸಮಯದಲ್ಲಿ ರೆಂಜಾಳದವರಿಂದ ನಾಟ್ಯ ಕಲಿತರು. ಶೆಟ್ಟಿಗಾರರು ನಾಟ್ಯ ಕಲಿತುದು 7 ದಿನಗಳು ಮಾತ್ರ. ಆದರೂ ಕಲಾವಿದನಾಗುವ ಛಲ ಇರುವವರಿಗೆ ಅಷ್ಟು ಸಾಕು. ಮೇಳದ ತಿರುಗಾಟದಲ್ಲಿ ಮತ್ತಷ್ಟು ಕಲಿಯಲು ಇದು ಭದ್ರ ವೇದಿಕೆಯಾಗಿ ಪರಿಣಮಿಸಿತ್ತು. “ಕಟೀಲಿನಲ್ಲಿ ನಡೆಯುವ ಯಕ್ಷಗಾನ ಸಪ್ತಾಹವು ನಾಟ್ಯ, ಮುಖವರ್ಣಿಕೆ, ನೇಪಥ್ಯ ಕೆಲಸ ಮಾಡಲು ಅಭ್ಯಾಸಿಗಳಿಗೆ ಅನುಕೂಲವಾಗಿತ್ತು. ಒಂದರ್ಥದಲ್ಲಿ ‘ಕಟೀಲು ಸಪ್ತಾಹ’ವು `ಕಲಿಕಾಕೇಂದ್ರ’ವೇ ಆಗಿತ್ತು.’’ ಇದು ಸದಾಶಿವ ಶೆಟ್ಟಿಗಾರರು ಅನುಭವಿಸಿ ಆಡಿದ ಮಾತುಗಳು.

(ಫೋಟೋ ಕೃಪೆ: ಎಸ್. ಎನ್. ಶರ್ಮ ನೀರ್ಚಾಲ್ )

2ನೇ ವರ್ಷವೂ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ. ಶೆಟ್ಟಿಗಾರರು ತನ್ನ ಕರ್ತವ್ಯ ಮುಗಿದ ನಂತರದಲ್ಲಿ ನಿದ್ರಿಸುತ್ತಿರಲಿಲ್ಲ. ಪ್ರದರ್ಶನಗಳನ್ನು ನೋಡುತ್ತಿದ್ದರು. ಚೌಕಿಯ ಹಿಂದೆ, ರಂಗಸ್ಥಳದ ಹಿಂದೆ ಕುಣಿಯುತ್ತಿದ್ದರು. ಹಗಲು ಬಿಡಾರದಲ್ಲೂ ಕೂಡಾ ಈ ಅಭ್ಯಾಸ ಮುಂದುವರಿದಿತ್ತು. ಅಣಕು ಪ್ರದರ್ಶನ ನಿರಂತರ ನಡೆಯುತ್ತಿತ್ತು. ಇದನ್ನು ಬಣ್ಣದ ಮಹಾಲಿಂಗನವರು ಗಮನಿಸುತ್ತಿದ್ದರು. ಶೆಟ್ಟಿಗಾರರಲ್ಲಿ ಅಡಗಿದ್ದ ಪ್ರತಿಭೆಯನ್ನು ಅವರು ಗುರುತಿಸಿಯೂ ಇದ್ದರು. ಕಲಿಯುತ್ತಿಯಾ? ಎಂದು ಕೇಳಿ ಹೇಳಿಕೊಡಲಾರಂಭಿಸಿದರಂತೆ. ಮುಖವರ್ಣಿಕೆ, ಬಣ್ಣದ ವೇಷಗಳ ಸ್ವಭಾವ, ನಡೆ, ಸಂಭಾಷಣೆಗಳ ಬಗೆಗೆ ಪಾಠ ಆರಂಭವಾಯಿತು. ಅಲ್ಲದೆ ಹುಡುಗನಿಗೆ ವೇಷ ಮಾಡುವ ಆಸಕ್ತಿ ಇದೆ. ಮಾಡಿಸಿ ಎಂಬ ಸೂಚನೆಯನ್ನೂ ಬಲಿಪ ಭಾಗವತರಿಗೆ ನೀಡಿದ್ದರು. ಬಲಿಪರು ಕೇಳಿದಾಗ ಶೆಟ್ಟಿಗಾರರ ಸಂತಸಕ್ಕೆ ಪಾರವೇ ಇರಲಿಲ್ಲ. ಸಿದ್ಧಕಟ್ಟೆಯಲ್ಲಿ ನಡೆದ ಕಟೀಲು ಮೇಳದ ಪ್ರದರ್ಶನ. ಪ್ರಸಂಗ ಶ್ರೀ ಮಹಾದೇವೀ ಲಲಿತೋಪಾಖ್ಯಾನ. ಊರಲ್ಲೇ ಮೊದಲ ವೇಷ ಮಾಡುವ ಅವಕಾಶ. `ಕಾಮೇಶ್ವರ’ನಾಗಿ ಶೆಟ್ಟಿಗಾರರು ರಂಗವೇರಿದರು. ಸದಾಶಿವನಿಗೆ ಸದಾಶಿವನಾಗಿಯೇ ಅಭಿನಯಿಸುವ ಭಾಗ್ಯ. ನಂತರ ದೇವೀ ಮಹಾತ್ಮ್ಯೆ ಪ್ರಸಂಗದಲ್ಲಿ ಶಂಖದುರ್ಗರು ಉಳಿದ ಪ್ರಸಂಗಗಳಲ್ಲಿ ರಾಕ್ಷಸ ಬಲಗಳಾಗಿ ವೇಷ ನಿರ್ವಹಣೆ.

2ನೇ ಮೇಳದಲ್ಲಿ ಬಲಿಪರು, ಪೆರುವಾಯಿ ನಾರಾಯಣ ಭಟ್, ಸಂಪಾಜೆ ಶೀನಪ್ಪ ರೈ, ರೆಂಜಾಳ, ಪೆರುವಾಯಿ ನಾರಾಯಣ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಬೆಳ್ಳಾರೆ ಸುಬ್ಬಯ್ಯ ಶೆಟ್ಟಿ, ಬಣ್ಣದ ಮಹಾಲಿಂಗ, ಸುಬ್ರಾಯ ಸಂಪಾಜೆ, ಗುಂಡಿಮಜಲು ಗೋಪಾಲ ಭಟ್, ಪಡ್ರೆ ಕುಮಾರ ಮೊದಲಾದ ಕಲಾವಿದರ ಒಡನಾಟ ಸಿಕ್ಕಿತ್ತು. ಬೆಳ್ಳಾರೆ ಮಂಜುನಾಥ ಭಟ್ಟರೂ ಮುಖವರ್ಣಿಕೆ ಬಗೆಗೆ ಮಾಹಿತಿಯನ್ನು ನೀಡಿದ್ದರು. ವೇಷ ಕಟ್ಟಿದ ಮೇಲೆ ಸದಾಶಿವ ಶೆಟ್ಟಿಗಾರರು ಚಕ್ರತಾಳ ಬಾರಿಸಲು ಓಡುತ್ತಿದ್ದರು. ಮದ್ಲೆಗಾರರಾದ ಪೆರುವಾಯಿ ನಾರಾಯಣ ಭಟ್ಟರು ಅವಕಾಶವಿತ್ತು ಪ್ರೋತ್ಸಾಹಿಸುತ್ತಿದ್ದರು. ನಾಟ್ಯದಲ್ಲಿ ಹಿಡಿತ ಸಾಧಿಸಲು ಇದರಿಂದ ಅವಕಾಶವಾಗಿತ್ತು. ಈ ತಿರುಗಾಟದ ಎಪ್ರಿಲ್ ತಿಂಗಳಲ್ಲಿ ಮೇಳ ಬಿಡಬೇಕಾದ ಸಂದರ್ಭ ಬಂದಿತ್ತು. ರಾತ್ರೆ ಬಡಕಬೈಲಿನಿಂದ ಸಿದ್ಧಕಟ್ಟೆಗೆ ನಡೆದೇ ಬಂದಿದ್ದರು. ಆದರೂ ಕಲಾವಿದನಾಗುವ ಭಾಗ್ಯ ಅಳಿಯದೆ ಉಳಿದಿತ್ತು.
ಮುಂದಿನ ಮಳೆಗಾಲ ಕಟೀಲು ಸಪ್ತಾಹದ ಸಂದರ್ಭ- ಕಿನ್ನಿಗೋಳಿ ಮೋಹಿನೀ ಕಲಾಸಂಪದದ ಯಜಮಾನರ ನೇತೃತ್ವದಲ್ಲಿ ಪದ್ಮಶಾಲೀ ಬಳಗದ ವತಿಯಿಂದ ನಡೆದ ಆಟ- ಶಶಿಪ್ರಭಾ ಪರಿಣಯ ಪ್ರಸಂಗದ ಘೋರರೂಪಿಯಾಗಿ ಅಭಿನಯ. ಪಾತ್ರನಿರ್ವಹಣೆಯನ್ನು ನೋಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಮೇಳಕ್ಕೆ ಬರುವೆಯಾ ಎಂದು ಕೇಳಿದ್ದರು. ಶೆಟ್ಟಿಗಾರರಿಗೆ ಸಂತಸವಾಗಿತ್ತು. ಕಟೀಲು 1ನೇ ಮೇಳಕ್ಕೆ 3ನೇ ಬಣ್ಣದ ವೇಷಧಾರಿಯಾಗಿ ಸೇರಿದರು.

                         ಇರಾ ಗೋಪಾಲಕೃಷ್ಣರು 1ನೇ ಮೇಳದ ಭಾಗವತರಾಗಿದ್ದ ಕಾಲ. ಮುಖವರ್ಣಿಕೆಯಲ್ಲಿ ಶೆಟ್ಟಿಗಾರರು ಆಗಲೇ ಪಳಗಿದ್ದರು. ಬಣ್ಣದ ಮಹಾಲಿಂಗನವರ ಗರಡಿಯಲ್ಲಿ ಅಭ್ಯಸಿಸಿದ್ದು ಸಾರ್ಥಕವಾಗಿತ್ತು. ಆಗಲೇ ತುಂಬಾ ಉದ್ದ ಚಿಟ್ಟಿ ಇಡುವ ಕಲೆಯು ಕರಗತವಾಗಿತ್ತು. ಮೊದಲ ಮೂರು ತಿಂಗಳು ಮಾತ್ರ 3ನೇ ಬಣ್ಣದ ವೇಷ ನಿರ್ವಹಿಸಿದ್ದರು. ತಿರುಗಾಟದ 4ನೇ ತಿಂಗಳಿನಲ್ಲಿ 1ನೇ ಬಣ್ಣ ಮಾಡುವ ಅವಕಾಶ ಸಿಕ್ಕಿತ್ತು. ಶುಂಭಾಸುರನ ಪಾತ್ರ ಮಾಡಿ ಅದು ಶೆಟ್ಟಿಗಾರರೇ ತಿರುಗಾಟದುದ್ದಕ್ಕೂ ನಿರ್ವಹಿಸುವಂತಾಗಿತ್ತು. 2ನೇ ವರ್ಷದಲ್ಲಿ ಶುಂಭಾಸುರ ಅಲ್ಲದೆ, 1ನೇ ಮತ್ತು 2ನೇ ಬಣ್ಣಕ್ಕೆ ಸಂಬಂಧಿಸಿದ ಹೆಚ್ಚಿನ ಎಲ್ಲಾ ವೇಷಗಳನ್ನೂ ನಿರ್ವಹಿಸಿದ್ದರು. ಇರಾ ಭಾಗವತರ ಮತ್ತು ಸುಣ್ಣಂಬಳ ವಿಶ್ವೇಶ್ವರ ಭಟ್ಟರ ನಿರ್ದೇಶನದಲ್ಲಿ ಶೆಟ್ಟಿಗಾರರು ಕಲಾವಿದರಾಗಿ ಮಿಂಚತೊಡಗಿದರು- “ಎಲ್ಲಾ ವೇಷಗಳ ನಡೆ ಮತ್ತು ಸಂಭಾಷಣೆಗಳನ್ನೂ ಸುಣ್ಣಂಬಳದವರು ಹೇಳಿಕೊಡುತ್ತಿದ್ದರು. ಅವರಲ್ಲಿ ಕೇಳಿಯೇ ನಾನು ರಂಗಪ್ರವೇಶ ಮಾಡುತ್ತಿದ್ದೆ. ಇರಾ ಭಾಗವತರ ನಿರ್ದೇಶನದಲ್ಲೇ ನಾನು ಮೊತ್ತಮೊದಲು ಮಹಿಷಾಸುರ, ರುದ್ರಭೀಮ, ಗದಾಯುದ್ಧದ ಭೀಮ, ಅಜಮುಖಿ, ಶೂರ್ಪನಖಿ ಮೊದಲಾದ ವೇಷಗಳನ್ನು ನಿರ್ವಹಿಸಿದೆ. ಸರಳ, ಸಜ್ಜನರಾದ ಇವರುಗಳು ಕೇಳಿದಾಗ ಪ್ರೀತಿಯಿಂದ ಹೇಳಿಕೊಟ್ಟಿದ್ದಾರೆ. ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದಾರೆ. ಹಾಗಾಗಿ ಇರಾ ಭಾಗವತರು ಮತ್ತು ಸುಣ್ಣಂಬಳದವರು ನನಗೆ ಗುರುಸಮಾನರು ಎಂದು ಹೇಳುವ ಮೂಲಕ ಶೆಟ್ಟಿಗಾರರು ಅವರೀರ್ವರನ್ನೂ ಗೌರವಿಸುತ್ತಾರೆ.

1ನೇ ಮೇಳದ 3ನೇ ತಿರುಗಾಟದಲ್ಲಿ ಮಹಿಷಾಸುರ ಪಾತ್ರವನ್ನು ನಿರ್ವಹಿಸುವ ಅವಕಾಶವೂ ಒದಗಿತ್ತು. ಅದೂ ತನ್ನ 23ನೇ ವಯಸ್ಸಿನಲ್ಲಿ. ರಾಮಕುಂಜದಲ್ಲಿ ನಡೆದ ಪ್ರದರ್ಶನ- ಅನಿವಾರ್ಯವಾಗಿ ಮಹಿಷಾಸುರ ಮಾಡುವ ಅವಕಾಶ. ಮೊದಲ ಪ್ರಯೋಗದಲ್ಲೇ ಗೆದ್ದಿದ್ದರು. ಮರುದಿನ ತಲಪಾಡಿಯಲ್ಲಿ ಮತ್ತೆ 2ನೇ ಅವಕಾಶ. ಅಂದು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ವಿಠಲ ಶೆಟ್ಟರು ಬಂದಿದ್ದರು. ಮೇಕಪ್, ವೇಷ ಕಟ್ಟುವಲ್ಲಿಂದ ತೊಡಗಿ ಪ್ರದರ್ಶನದ ಕೊನೆತನಕವೂ ನೋಡಿ ಹೋಗಿದ್ದರು. ಮಹಿಷಾಸುರನ ವೇಷವು ಶೆಟ್ಟಿಗಾರರೇ ಮಾಡಬೇಕೆಂದು ಹೇಳಿಯೂ ಇದ್ದರು. “ಕಲ್ಲಾಡಿ ವಿಠಲ ಶೆಟ್ಟರು ಸಹಕರಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಅಲ್ಲದೆ ವೇಷಗಳನ್ನು ನಿರ್ವಹಿಸುವಲ್ಲಿ ನಿರ್ದೇಶನವನ್ನೂ ನೀಡಿದ್ದಾರೆ’’. ಇದು ಶೆಟ್ಟಿಗಾರರು ಅವರ ಬಗೆಗೆ ಆಡುವ ಮಾತುಗಳು. ಕಟೀಲು ಮೇಳದ ತಿರುಗಾಟವು ಮರೆಯಲಾಗದ ಅನುಭವ. ನನಗೆ ಪ್ರಸಿದ್ಧಿಯನ್ನು ನೀಡಿತು. ಕಲಾವಿದನಾಗಿ ನಾನು ಕಾಣಿಸಿಕೊಂಡದ್ದು ಕಟೀಲು ಮೇಳದಲ್ಲಿ. ಕಟೀಲು ಮೇಳಗಳು ಕಲಿಕಾಸಕ್ತರಿಗೆ ಪಾಠಶಾಲೆ ಇದ್ದಂತೆ. ಅಲ್ಲಿ ಕಲಾವಿದರು ತಯಾರಾಗುತ್ತಾರೆ ಎಂಬ ಅಭಿಪ್ರಾಯವನ್ನು ಸದಾಶಿವ ಶೆಟ್ಟಿಗಾರರು ಹೊಂದಿರುತ್ತಾರೆ.

ಕಟೀಲು ಮೇಳದ ತಿರುಗಾಟದ ಸಂದರ್ಭ- ಮಳೆಗಾಲದಲ್ಲಿ ಬೆಳ್ಳಾರೆಯಲ್ಲೊಂದು ಪ್ರದರ್ಶನ. ದುಶ್ಶಾಸನ ವಧೆ ಪ್ರಸಂಗ. ಬಣ್ಣದ ಮಹಾಲಿಂಗನವರ ರುದ್ರಭೀಮ. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರ ದುಶ್ಶಾಸನ. ಆಗ ಶೆಟ್ಟಿಗಾರರ ವಯಸ್ಸು 23. ಗುರುಶಿಷ್ಯರೊಂದಾಗಿ ಅಭಿನಯಿಸಿದ್ದರು. ಸಂತೋಷಗೊಂಡ ಬಣ್ಣದ ಮಹಾಲಿಂಗನವರು ನೀನು ಒಳ್ಳೆಯ ಪ್ರಸಿದ್ಧ ವೇಷಧಾರಿಯಾಗುವೆ ಎಂದು ಆಲಿಂಗಿಸಿ ಆಶೀರ್ವದಿ ಸಿದ್ದರು. ಅದುವೇ ನನಗೆ ರಕ್ಷಾಕವಚವಾಗಿರಲಿ ಎಂದು ಶೆಟ್ಟಿಗಾರರು ಆತ್ಮೀಯರಲ್ಲಿ ಹೇಳುವುದನ್ನು ನಾವು ಗಮನಿಸಬಹುದು. ಬದುಕಿನಲ್ಲಿ ಮರೆಯಲಾರದ ಘಟನೆಯಾಗಿ ಅದನ್ನು ಶೆಟ್ಟಿಗಾರರು ಆಗಾಗ ನೆನಪಿಸುತ್ತಾರೆ. ಕಟೀಲು 1ನೇ ಮೇಳದಲ್ಲಿ 8 ವರ್ಷಗಳ ತಿರುಗಾಟ. ನಂತರ 13 ವರ್ಷಗಳ ಕಾಲ ತಿರುಗಾಟ ಧರ್ಮಸ್ಥಳ ಮೇಳದಲ್ಲಿ. ಖಾವಂದರ, ಹರ್ಷೇಂದ್ರ ಕುಮಾರರ ಸಹಕಾರ ಆಶೀರ್ವಾದಗಳಿತ್ತು.                                             

(ಫೋಟೋ ಕೃಪೆ: ಎಸ್. ಎನ್. ಶರ್ಮ ನೀರ್ಚಾಲ್ )

ಸಹಕಲಾವಿದರೆಲ್ಲರು ಸಹಕಾರ ನೀಡಿದ್ದರು. ಭಾಗವತರು ಮತ್ತು ಚಿಪ್ಪಾರು ಅವರ ಚೆಂಡೆಗೆ ವೇಷಗಳು ರಂಜಿಸುತ್ತಿತ್ತು. ಗೋವಿಂದ ಭಟ್ ನಯನಕುಮಾರರ ಜತೆ ವೇಷ ಮಾಡಿ ಪ್ರೌಢ ಸಂಭಾಷಣೆಗಳ ಕ್ರಮವೂ ಸಿದ್ಧಿಸಿತ್ತು. ಪುತ್ತಿಗೆ ರಘುರಾಮ ಹೊಳ್ಳರ ಮತ್ತು ರಾಮಕೃಷ್ಣ ಮಯ್ಯರ ಹಾಡುಗಳಲ್ಲಿ ಮತ್ತು ಸಹಕಲಾವಿದರೆಲ್ಲರ ಸಹಕಾರದಲ್ಲಿ ವೇಷಗಳನ್ನು ನಿರ್ವಹಿಸಿದ್ದೆ. ನಯನಕುಮಾರರ ಜತೆಗಿನ ಸಂಭಾಷಣೆಗಳಲ್ಲಿ ಪ್ರೌಢ ರಾಜಹಾಸ್ಯವು ಹೊರಹೊಮ್ಮುತ್ತಿತ್ತು. ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ ಪ್ರಸಂಗದ ಕುಕ್ಕಿತ್ತಾಯ, ಕಾಳರಾಹು, ಗಣಮಣಿ ಪಾತ್ರಗಳನ್ನು, ಅನೇಕ ಪ್ರಸಂಗದ ಬಣ್ಣದ ವೇಷಗಳನ್ನು ನಿರ್ವಹಿಸುವ ಅವಕಾಶವೂ ಸಿಕ್ಕಿತ್ತು.’’ ಧರ್ಮಸ್ಥಳ ಮೇಳದ ತಿರುಗಾಟದ ಬಗೆಗೆ ಸದಾಶಿವ ಶೆಟ್ಟಿಗಾರರ ಅನಿಸಿಕೆಗಳು ಹೀಗೆ ಸಾಗುತ್ತದೆ.

ನಂತರ ಹೊಸನಗರ ಮೇಳದಲ್ಲಿ 10 ತಿರುಗಾಟ. ಮತ್ತೆ 1 ವರ್ಷ ಎಡನೀರು. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ. ಈ ಸಂದರ್ಭದಲ್ಲಿ ಶೆಟ್ಟಿಗಾರರು ಕಲಾಪೋಷಕರಾದ ಡಾ. ಟಿ. ಶ್ಯಾಮ ಭಟ್ಟರ ಸಹಕಾರವನ್ನು ನೆನಪಿಸುತ್ತಾರೆ. ಕಲೆಯನ್ನೂ, ಕಲಾವಿದರನ್ನೂ ಪ್ರೀತಿಸಿ ಗೌರವಿಸುವ ಶ್ಯಾಮ್ ಭಟ್ಟರನ್ನು ಕಲಾವಿದರ ರಕ್ಷಕರೆಂದೂ ಅನ್ನದಾತರೆಂದೂ ಗೌರವಿಸುತ್ತಾರೆ. ಹನುಮಗಿರಿ ಮೇಳದ ಹಿಮ್ಮೇಳ ಮುಮ್ಮೇಳದ ಸರ್ವ ಕಲಾವಿದರಿಂದಲೂ ನನಗೆ ಸಹಕಾರ, ಉತ್ತೇಜನ ಸಿಕ್ಕಿದೆ ಎನ್ನುವ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಬಯಕೆಯಿದೆ. ಅಲ್ಲದೆ ಕುಂಭಕರ್ಣ ಕಾಳಗ ಪ್ರಸಂಗ ಕುಂಭಕರ್ಣನ ವೇಷ ಅಲ್ಲದೆ ಇನ್ನಿತರ ಕೆಲವು ವೇಷಗಳನ್ನು ನನ್ನಿಂದ ಮೊದಲು ಮಾಡಿಸಿದ್ದು ಅಗರಿ ಶ್ರೀನಿವಾಸ ಭಾಗವತರು. ಅವರೊಬ್ಬ ಸಮರ್ಥ ನಿರ್ದೇಶಕನೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ.

ಬಣ್ಣಕ್ಕೆ ಸಂಬಂಧಿಸಿದ ಪಾತ್ರಗಳು ಮುಖವರ್ಣಿಕೆ, ವೇಷಭೂಷಣಗಳು, ಅಟ್ಟಹಾಸ, ಒಡ್ಡೋಲಗ ವೈಭವಗಳಿಂದ ಪ್ರೇಕ್ಷಕರನ್ನು ಬಹುಬೇಗನೆ ತಲುಪಿ ಆಕರ್ಷಿಸುತ್ತವೆ. ಬೆಳಗ್ಗಿನ ನಿದ್ದೆ ಆವರಿಸುವ ಹೊತ್ತಲ್ಲೂ ಪ್ರೇಕ್ಷಕರನ್ನು ಬಡಿದೆಬ್ಬಿಸುತ್ತವೆ. ಸಹಜವಾಗಿ ನಾನು ಬಾಲ್ಯದಲ್ಲೇ ಅದರತ್ತ ಆಕರ್ಷಿತನಾದೆ. ಅದಕ್ಕೆ ಸರಿಯಾಗಿ ಬಣ್ಣದ ಮಹಾಲಿಂಗನವರಿಂದ ಕಲಿಯುವ ಅವಕಾಶವೂ ಸಿಕ್ಕಿತು ಎನ್ನುವ ಸಿದ್ಧಕಟ್ಟೆ ಸದಾಶಿವ ಶೆಟ್ಟರು ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಇವರಿಂದ ಕಲಿತವರಲ್ಲಿ ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರು ಪ್ರಮುಖರು. ಮಾಹಿತಿಗಳನ್ನು ಕೇಳಿದ ಹಲವರಿಗೆ ಹೇಳಿಕೊಟ್ಟಿರುತ್ತಾರೆ. ಪುರಾಣ ಪ್ರಸಂಗಗಳನ್ನೇ ಮೆಚ್ಚುವ ಶೆಟ್ಟಿಗಾರರು ಅವುಗಳನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಪುರಾಣ ಪ್ರಸಂಗಗಳಲ್ಲಿ ಹೆಚ್ಚಿನ ವಿಚಾರಧಾರೆಗಳು ಮತ್ತು ಸಂದೇಶಗಳು ಇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ-
                     

“ರಂಗದ್ರೋಹ ಸಲ್ಲದು. ಆತ್ಮವಿಶ್ವಾಸ ಅತ್ಯಗತ್ಯ. ಸಹನಾಶೀಲರಾಗಿರಬೇಕು. ಮುಖವರ್ಣಿಕೆ ಮತ್ತು ವೇಷ ಕಟ್ಟಿ ರಂಗವೇರಿ ಅಭಿನಯಿಸುವಲ್ಲಿ ಶ್ರದ್ಧೆ ಮತ್ತು ಭಕ್ತಿಯು ಬೇಕು. ಬಣ್ಣಗಾರಿಕೆ ಮಾಡುವಾಗ ಇನ್ನು ಸಾಕಪ್ಪ ಎಂದು ಎಣಿಸಬಾರದು. ವೇಷಕ್ಕೆ ಬೇಕಾದಂತೆ ಮುಖವರ್ಣಿಕೆ ಮಾಡಲೇ ಬೇಕು. ಔದಾಸೀನ್ಯ ಮಾಡಲೇಬಾರದು. ವೇಷದ ಸ್ವಭಾವ ತಿಳಿದು ಸಂಭಾಷಣೆಗಳನ್ನು ಸಿದ್ಧಗೊಳಿಸಿಯೇ ರಂಗವೇರಬೇಕು’’. ಅಭ್ಯಾಸಿಗಳಿಗೆ ಶೆಟ್ಟಿಗಾರರ ಸಂದೇಶವಿದು. ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಅಯೋಧ್ಯೆ, ಕಾಶಿ, ಕೋಲ್ಕತ್ತಾ, ಕೇರಳ, ಹರಿದ್ವಾರ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಪ್ರಶಸ್ತಿಗಳನ್ನು ಪಡೆದುದಲ್ಲದೆ ಹರೇಕಳ ಪಾವೂರು, ಬಿ. ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಕಡೆ ಸನ್ಮಾನಿತರಾಗಿದ್ದಾರೆ. ಪತ್ನಿ ಶ್ರೀಮತಿ ಕಲಾವತಿ ಮತ್ತು ಪುತ್ರರೊಂದಿಗೆ ಪ್ರಸ್ತುತ ಸಿದ್ಧಕಟ್ಟೆಯಲ್ಲಿ ವಾಸವಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 36ಕ್ಕೂ ಹೆಚ್ಚಿನ ವರ್ಷಗಳ ಕಾಲ ವ್ಯವಸಾಯವನ್ನು ಮಾಡಿರುತ್ತಾರೆ.

ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರೂ ಸಾಂಸಾರಿಕವಾಗಿಯೂ ತೃಪ್ತರು. ಸದಾಶಿವ ಶೆಟ್ಟಿಗಾರ್ ದಂಪತಿಗಳಿಗೆ ಮೂವರು ಮಕ್ಕಳು (ಎರಡು ಗಂಡು ಮತ್ತು 1 ಹೆಣ್ಣು).ಹಿರಿಯ ಪುತ್ರ ದಿಲೀಪ್ ಕುಮಾರ್ ಮತ್ತು ಕಿರಿಯ ಪುತ್ರ ಪದ್ಮನಾಭ ಇಬ್ಬರೂ ಉದ್ಯೋಗಿಗಳು. ಪುತ್ರಿ ಕವಿತಾ ವಿವಾಹಿತೆ. ಅಳಿಯ ಶ್ರೀ ಯಶವಂತ ಉದ್ಯೋಗಿ- ಮೊಮ್ಮಗ ಹರ್ಧಿಕ್‍ಗೆ ಒಂದುವರೆ ವರ್ಷ ಪ್ರಾಯ. ಇವರು ಕೊಣಾಜೆ ನಿವಾಸಿಗಳು. ಕಲಾಬದುಕಿನುದ್ದಕ್ಕೂ ಪತ್ನಿ ಮತ್ತು ಮಕ್ಕಳ ಸಹಕಾರ ಪ್ರೋತ್ಸಾಹವಿತ್ತು ಎನ್ನುವ ಸದಾಶಿವ ಶೆಟ್ಟಿಗಾರರಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶ ಒದಗಲಿ.

ಲೇಖಕ: ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ (17.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (17.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಹಳ್ಳಾಡಿ ಹೆಗ್ಡೆಕೆರೆ ಶ್ರೀ ನಂದಿಕೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಎಕ್ಕಾರು ಪೆಟ್ರೋಲ್ ಪಂಪ್ ಬಳಿ 
ಕಟೀಲು ಎರಡನೇ ಮೇಳ ಏಳಿಂಜೆ ಭಂಡಸಾಲೆ ದೈವಸ್ಥಾನದ ಬಳಿ 
ಕಟೀಲು ಮೂರನೇ ಮೇಳಇಡ್ಯಾ ಸುರತ್ಕಲ್ 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಐದನೇ ಮೇಳ ಸುಂಕದಕಟ್ಟೆ, ಕೊಳಂಬೆ ವಯಾ ಬಜಪೆ 
ಕಟೀಲು ಆರನೇ ಮೇಳಕಾಪಿಕಾಡು ಶಾಲೆ ಬಳಿ, ಮಂಗಳೂರು 
ಮಂದಾರ್ತಿ ಒಂದನೇ ಮೇಳ ಗುಡ್ಡೆಯಂಗಡಿ, ಸುರ್ಗೋಳಿ, ಬೆಳ್ವೆ 
ಮಂದಾರ್ತಿ ಎರಡನೇ ಮೇಳ ಶಿರೂರು, ಮುದ್ದುಮನೆ 
ಮಂದಾರ್ತಿ ಮೂರನೇ ಮೇಳ ಬಾಳೆಕೊಪ್ಪ, ದೇವಂಗಿ 
ಮಂದಾರ್ತಿ ನಾಲ್ಕನೇ ಮೇಳ ಕಂಬಳಗದ್ದೆಮನೆ, ಕುಮ್ರಿ, ಕೋಟೇಶ್ವರ 
ಮಂದಾರ್ತಿ ಐದನೇ ಮೇಳ ಕುಣಿಗದ್ದೆ, ಮಿಟ್ಲಗೋಡು, ಅರಗ 
ಶ್ರೀ ಹನುಮಗಿರಿ ಮೇಳ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ, ನೇತ್ರಾವತಿ ನದಿ ತೀರದ  ವಟವೃಕ್ಷದ ಬಳಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಸಾಲಿಗ್ರಾಮ ಮೇಳಸಾಲಿಗ್ರಾಮ ಜಾತ್ರೆ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳಅಜೆಕಾರು ಎಣ್ಣೆಹೊಳೆ ಬಟ್ಟಿಕಂಬಳ – ಚಂದ್ರಹಾಸ, ಚಿತ್ರಾಕ್ಷಿ ಪರಿಣಯ  
ಶ್ರೀ ಮಾರಣಕಟ್ಟೆ ಮೇಳ ‘ಎ’ಕದೋಳಿ, ಮದ್ಲೆಕಂಬ, ಹೊಸೂರು – ಎರಡೂ ಮೇಳಗಳ ಕೂಡಾಟ – ಶ್ರೀ ಕ್ಷೇತ್ರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕದೋಳಿ, ಮದ್ಲೆಕಂಬ, ಹೊಸೂರು – ಎರಡೂ ಮೇಳಗಳ ಕೂಡಾಟ – ಶ್ರೀ ಕ್ಷೇತ್ರ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ – ಶ್ರೀ ಕ್ಷೇತ್ರ ಮಹಾತ್ಮೆ   
ಶ್ರೀ ಪಾವಂಜೆ ಮೇಳ ಮಾಣಿ ಗಾಂಧಿ ಮೈದಾನ – ಗಜೇಂದ್ರ ಮೋಕ್ಷ, ಸುದರ್ಶನ ಗರ್ವಭಂಗ, ಭಾರ್ಗವ ವಿಜಯ 
ಶ್ರೀ ಹಟ್ಟಿಯಂಗಡಿ ಮೇಳನಿಡಿಗಲ್, ಕಲ್ಮಂಜ, ಉಜಿರೆ – ಪಟ್ಟಾಭಿಷೇಕ, ಮೀನಾಕ್ಷಿ 
ಕಮಲಶಿಲೆ ಮೇಳ ‘ಎ’ಕಾಲ್ತೋಡು 
ಕಮಲಶಿಲೆ ಮೇಳ ‘ಬಿ’ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸುರ್ಗೇಹಾಡಿ, ದೈವದಮನೆ 
ಶ್ರೀ ಬಪ್ಪನಾಡು ಮೇಳತೆಂಕ ಎರ್ಮಾಳ್ ಕಡಲ ತೀರದಲ್ಲಿ  – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಪೊಳಲಿ, ವರಕೋಡಿ – ಮುಕುಂದ ಮುರಾರಿ (ತುಳು)
ಶ್ರೀ ಅಮೃತೇಶ್ವರೀ ಮೇಳಕೊತ್ತೂರು, ಬೊಮ್ಮಾಡಿ, ಹೆಗ್ಗುಂಜೆ 
ಶ್ರೀ ಬೋಳಂಬಳ್ಳಿ ಮೇಳ ಮಂದಾರಜೆಡ್ಡು – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಸೌಕೂರು ಕೆತ್ತೆಮಕ್ಕಿ – ಶ್ರೀ ಸೌಕೂರು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳಭದ್ರ ಮಹಾಕಾಳಿ ದೇವಸ್ಥಾನ, ಕಟ್ ಬೆಳ್ತೂರು 
ಶ್ರೀ ಬೆಂಕಿನಾಥೇಶ್ವರ ಮೇಳ  ಕಿರಿಮಂಜೇಶ್ವರ ಕಾನವೀರ ಮಾಸ್ತಿ ನಾಯಿರಿ ಮಿತ್ರ ಬಳಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಬೆಳ್ವೆ ಯಳಂತೂರು  – ರಾಜವಂಶ ಗುಳಿಗ  
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಅಂಪಾರು – ಪಂಚದೈವ ಪ್ರತಾಪ 
ಶ್ರೀ ಹಿರಿಯಡಕ ಮೇಳಹಿರೇಬೆಟ್ಟು, ಅಂಗಡಿಬೆಟ್ಟು – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ವಸ್ರೆ – ತಾಟಕ ಮೋಕ್ಷ 
ಶ್ರೀ ಸಿಗಂದೂರು ಮೇಳಮರತ್ತೂರು ಶಾಲಾ ವಠಾರ 
ಶ್ರೀ ನೀಲಾವರ ಮೇಳ ಕಾವಡಿ ಹೈಸ್ಕೂಲ್ ಬಳಿ 

ಮೇಳಗಳ ಇಂದಿನ (16.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (16.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಪೆರ್ಮುದೆ, ಬಜಪೆ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳನಿಡ್ಡೋಡಿ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ ಎನ್.ಐ.ಟಿ.ಕೆ,  ಶ್ರೀನಿವಾಸನಗರ, ಸುರತ್ಕಲ್ – ಪಂಚಕಲ್ಯಾಣ
ಕಟೀಲು ಮೂರನೇ ಮೇಳಉಳ್ಳೂರು ಶ್ರೀ ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ, ಮೂಡ್ಲಕಟ್ಟೆ ಕುಂದಾಪುರ – ದಶಾವತಾರ 
ಕಟೀಲು ನಾಲ್ಕನೇ ಮೇಳ ಅಡ್ಯಾರು ಗುತ್ತು, ಅಡ್ಯಾರು ಮಂಗಳೂರು – ಶ್ರೀ ದೇವಿ ಮಹಾತ್ಮೆ 
ಕಟೀಲು ಐದನೇ ಮೇಳ ಮಳಲಿ, ಮಟ್ಟಿಬಡಗ, ಉಳಿಪಾಡಿ – ಸಮುದ್ರ ಮಥನ 
ಕಟೀಲು ಆರನೇ ಮೇಳಹೊಯ್ಗೆಗದ್ದೆಪುದು, ವಯಾ ಮಾರಿಪಳ್ಳ – ಸಮುದ್ರ ಮಥನ 
ಮಂದಾರ್ತಿ ಒಂದನೇ ಮೇಳ ಕುಕುಂಜೆಬೈಲು, ಕೆಂಜೂರು 
ಮಂದಾರ್ತಿ ಎರಡನೇ ಮೇಳ ಮಹಾಗಣಪತಿ ದೇವಸ್ಥಾನ ಬಾರಾಳಿ, ಹೆಗ್ಗುಂಜೆ 
ಮಂದಾರ್ತಿ ಮೂರನೇ ಮೇಳ ಅರಮನೆ ತೋಟ, ಕಮ್ಮರಡಿ 
ಮಂದಾರ್ತಿ ನಾಲ್ಕನೇ ಮೇಳ ಮುಂಡಾಡಿಮನೆ, ಗೋಕುಲ, ಚಾರ ಹೆಬ್ರಿ 
ಮಂದಾರ್ತಿ ಐದನೇ ಮೇಳ ಖಂಡಕ, ನೊಣಬೂರು 
ಶ್ರೀ ಹನುಮಗಿರಿ ಮೇಳ ದಾಮಸ್ ಕಟ್ಟೆ – ಬೇಡರ ಕಣ್ಣಪ್ಪ, ಅಭಿಮನ್ಯು 
ಶ್ರೀ ಸಾಲಿಗ್ರಾಮ ಮೇಳಕಾರ್ಕಳ ಬೊಂಬೆತಡ್ಕ – ರಾಜಾ ಉಗ್ರಸೇನ, ದಮಯಂತಿ, ವೀರಮಣಿ ಕಾಳಗ 
ಶ್ರೀ ಪೆರ್ಡೂರು ಮೇಳರಾಗಿಹಕ್ಲು – ಮಾಗಧ ವಧೆ, ರಾಣಿ ಶಶಿಪ್ರಭೆ 
ಶ್ರೀ ಸುಂಕದಕಟ್ಟೆ ಮೇಳ ಅರ್ಚನಾ ಕೃಪ, ಕೊಳಂಬೆ, ತಲ್ಲದಬೈಲು – ಶ್ರೀ ದೇವಿ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ ಜಾತ್ರೆ ಸೇವೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಜನ್ನಾಲ್ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಹಕ್ಲುಮನೆ, ಹೆಮ್ಮುಂಜೆ, ನಾಡ 
ಶ್ರೀ ಪಾವಂಜೆ ಮೇಳ ಹಳೆ ಬಸ್ ನಿಲ್ದಾಣ, ಮಂಗಳೂರು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಅಜೆಕಾರು 8-1  – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ನಂಚಾರು 
ಕಮಲಶಿಲೆ ಮೇಳ ‘ಬಿ’ಶ್ರೀ ಮೂಡಾಡಮ್ಮ ದೇವಸ್ಥಾನ, ನುಕ್ಸಾಲ್, ಕೊಲ್ಲೂರು 
ಶ್ರೀ ಬಪ್ಪನಾಡು ಮೇಳಪೊರ್ಕೋಡಿ ಕಾಂಜಗೋಳಿ  ಮಹಮ್ಮಾಯಿ ಮೈದಾನ – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ತೋಕೂರು ಶೇಡಿಗುರಿ ಮೈದಾನ ಪಿಲಿಚಾಮುಂಡಿ ದೈವಸ್ಥಾನ ವಠಾರದಲ್ಲಿ – ಶ್ರೀ ಭದ್ರಕಾಳಿ ಮಹಾತ್ಮೆ  
ಶ್ರೀ ಅಮೃತೇಶ್ವರೀ ಮೇಳಸಾಲಿಗ್ರಾಮದಲ್ಲಿ  ಗುರುನರಸಿಂಹ ಜಾತ್ರೆ ಪ್ರಯುಕ್ತ ಕಾಲಮಿತಿ ಮತ್ತು ನಂತರ ಮಕ್ಕಿಮನೆ ಬೆಳ್ವೆಯಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ಮುದ್ರಾಡಿ, ಭೀಮನಗರ, ಕೆಲಕಿಲ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಸೌಕೂರು ದೇವಸ್ಥಾನದ ವಠಾರ – ಶ್ವೇತಕುಮಾರ, ರತಿ ಕಲ್ಯಾಣ
ಶ್ರೀ ಹಾಲಾಡಿ ಮೇಳಬೆಳಂಜೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ   
ಶ್ರೀ ಬೆಂಕಿನಾಥೇಶ್ವರ ಮೇಳ  ಕಾರ್ಕಳ ಕಾಬೆರಡ್ಕ ಅಯೋಧ್ಯ ನಗರ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಕೋಟೇಶ್ವರ ಹಳೆ ಅಳಿವೆ ಚಿಕ್ಕಮ್ಮ ಸಪರಿವಾರ ದೇವಸ್ಥಾನ – ರಾಜವಂಶ ಗುಳಿಗ  
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಳ್ಳೂರು – II,  ಶ್ರೀ ಕೋಟಿ ಚೆನ್ನಯ್ಯ ಗರಡಿ ವಠಾರ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಹಿರಿಯಡಕ ಬೊಮ್ಮರಬೆಟ್ಟು ಮುಂಡುಜೆ ಶಾಲಾ ವಠಾರ – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಚಾತ್ರಬೆಟ್ಟು, ಬೀಜಾಡಿ – ಶನೀಶ್ವರ ಮಹಾತ್ಮೆ 
ಶ್ರೀ ಸಿಗಂದೂರು ಮೇಳಶಿರೂರು ಜೈನ ಶೇಡಿವೀರ ದೇವಸ್ಥಾನ 
ಶ್ರೀ ನೀಲಾವರ ಮೇಳ ಬಸ್ರೂರು ಪೇಟೆ – ಕುಲದೈವ ಪಂಜುರ್ಲಿ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಕೋಣಂದೂರು 

ಪಡುಪೆರಾರ ಲಕ್ಷ್ಮಣ ಕೋಟ್ಯಾನ್ – ಯಾವುದೇ ವೇಷಗಳನ್ನು ನಿರ್ವಹಿಸಬಲ್ಲ ಬಣ್ಣದ ವೇಷಧಾರಿ 

ಶ್ರೀ ಲಕ್ಷ್ಮಣ ಕೋಟ್ಯಾನ್ ಅವರು ಪ್ರಸ್ತುತ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಈಗ ಅವರಿಗೆ ವಯಸ್ಸು ಎಪ್ಪತ್ತು ಆದರೂ ಯುವಕರಂತೆ ಉತ್ಸಾಹದಿಂದ ರಂಗವೇರುತ್ತಾರೆ.

ಇವರು ಬಣ್ಣದ ವೇಷಧಾರಿ. ಮಹಿಷಾಸುರ, ವರಾಹ, ಮತ್ಸ್ಯ, ಕುಂಭಕರ್ಣ, ಕಿರಾತ, ತಾರಕಾಸುರ, ಶೂರಪದ್ಮ, ಅಲ್ಲದೆ ಹೆಣ್ಣು ಬಣ್ಣಗಳನ್ನು ನಿರ್ವಹಿಸಬಲ್ಲರು. ಇವರ ಕಿರೀಟ ವೇಷಗಳೂ ಆಕರ್ಷಕ. ನಾಟಕೀಯ ಪಾತ್ರಗಳನ್ನು ಕೂಡಾ ಮಾಡುತ್ತಾರೆ. ಇವರು 1949ನೇ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಮಂಗಳೂರು ತಾಲ್ಲೂಕು ಪಡುಪೆರಾರದ ಚಿನ್ನಯ್ಯ ಪೂಜಾರಿ ಮತ್ತು ಮುತ್ತು ಪೂಜಾರಿ ದಂಪತಿಗಳ ಮಗನಾಗಿ ಜನಿಸಿದರು. ಕಿನ್ನಿಕಂಬಳ ಶಾಲೆಯಲ್ಲಿ ಐದನೇ ತರಗತಿವರೇಗೆ ಓದಿದರು. ಆ ಸಂದರ್ಭದಲ್ಲಿ ಖ್ಯಾತ ಪುಂಡು ವೇಷಧಾರಿ ಕ್ರಿಶ್ಚನ್ ಬಾಬು ಅವರಿಂದ ನಾಟ್ಯ ಕಲಿತು ವೇಷ ಮಾಡಲು ಪ್ರಾರಂಭಿಸಿದರು.

ನಂತರ ಜೀವನೋಪಾಯಕ್ಕಾಗಿ ಮುಂಬೈ ನಗರವನ್ನು ಸೇರಿಕೊಂಡ ಲಕ್ಷ್ಮಣ ಕೋಟ್ಯಾನ್ ಹದಿನೆಂಟು ವರ್ಷಗಳ ಕಾಲ ಸಿಐಡಿ ಕ್ಯಾಂಟೀನ್‍ನಲ್ಲಿ ಕೆಲಸ ಮಾಡಿದ್ದರು. ಮುಂಬೈಯಲ್ಲಿ ಕಲಾಸೇವೆಯನ್ನು ಮುಂದುವರಿಸಲು ಅವಕಾಶಗಳು ಇದ್ದು, ಅನೇಕ ಮಂಡಳಿಗಳು ಕಾರ್ಯಾಚರಿಸುತ್ತಿದ್ದು, ಅವುಗಳಲ್ಲೊಂದು ಶ್ರೀ ಗುರು ನಾರಾಯಣ ಮಂಡಳಿ. ವೇಷ ಮಾಡುವುದರ ಜತೆಗೆ ನಾಟ್ಯದ ತರಬೇತಿಯನ್ನು ನೀಡಿದರು. ಇವರು ಕ್ರೀಡೆಯಲ್ಲೂ ಆಸಕ್ತರು. ಫುಟ್ಬಾಲ್ ಕ್ರೀಡೆಯ ತರಬೇತಿಯನ್ನು ಹೊಂದಿ, ಆಟಗಾರನಾಗಿಯೂ, ತರಬೇತುದಾರನಾಗಿಯೂ ಕಾಣಿಸಿಕೊಂಡರು. ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಇವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಆದರೆ ಮನೆ ಸಮಸ್ಯೆಯಿಂದಾಗಿ ಊರಿಗೆ ಬರಬೇಕಾಯಿತು. ಜೀವನೋಪಾಯಕ್ಕಾಗಿ ತಾನು ಮೊದಲು ಕಲಿತ ಯಕ್ಷಗಾನವನ್ನೇ ಅವಲಂಬಿಸಬೇಕಾಯಿತು.
                         

ತಲಕಳ ಮತ್ತು ಕದ್ರಿ ಮೇಳಗಳಲ್ಲಿ ತಲಾ ಒಂದು ವರ್ಷ ತಿರುಗಾಟ ನಡೆಸಿ ಕಳೆದ ಮೂವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಹುಟ್ಟಿಕೊಂಡ ಫುಟ್ಬಾಲ್ ನಂಟು ಊರಿಗೆ ಬಂದರೂ ಕೋಟ್ಯಾನ್‍ರನ್ನು ಬಿಡಲಿಲ್ಲ. ಸರಕಾರಿ ಕಾಲೇಜು ಮಂಗಳೂರು, ಕೆಎಂಸಿ ಫುಟ್ಬಾಲ್ ತಂಡ ಮತ್ತು ಸ್ಪೋರ್ಟಿಂಗ್ ಕ್ಲಬ್‍ನಲ್ಲಿ ಕೋಚ್ ಆಗಿ ತರಬೇತಿ ನೀಡಿದರು. ಅನೇಕ ಸನ್ಮಾನ ಗೌರವಗಳನ್ನು ಪಡೆದುಕೊಂಡರು. ಸದಾ ನಗುನಗುತ್ತಾ ಎಲ್ಲರನ್ನೂ ಮಾತನಾಡಿಸುವ ಶ್ರೀ ಲಕ್ಷ್ಮಣ ಕೋಟ್ಯಾನ್ ಸರಳ, ಸಜ್ಜನ, ನಿಗರ್ವಿ ಕಲಾವಿದ. ಯಾವ ವೇಷವನ್ನೂ ನಿರ್ವಹಿಸಬಲ್ಲರು.

ವರ್ಷವಿಡಿ ಒಂದೇ ಸೆಟ್ಟಿನಲ್ಲೇ ತಿರುಗಾಟ ಮಾಡುತ್ತೇನೆ ಎಂಬ ಹಟಕ್ಕೆ ಬೀಳುವವರಲ್ಲ. ಅನಿವಾರ್ಯವಾದರೆ ಸಂಚಾಲಕರ ಅಪ್ಪಣೆಯಂತೆ ಆರು ಮೇಳಗಳಲ್ಲಿ ಯಾವ ಮೇಳದಲ್ಲೂ ವೇಷ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಶ್ರೀ ಲಕ್ಷ್ಮಣ ಕೋಟ್ಯಾನ್ ಸಾಂಸಾರಿಕವಾಗಿಯೂ ಕಲಾವಿದನಾಗಿಯೂ ತೃಪ್ತರು. ಮಡದಿ ಶ್ರೀಮತಿ ಚಂದ್ರಾವತಿ ಗೃಹಣಿ. ಮಗಳು ಮಂಜುಳಾ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುತ್ತಾರೆ. ಪ್ರಸ್ತುತ ಪಾಂಪೈ ಕಾಲೇಜಿನಲ್ಲಿ ಉಪನ್ಯಾಸಕಿ. 

ಲೇಖಕ: ರವಿಶಂಕರ್ ವಳಕ್ಕುಂಜ