Wednesday, March 11, 2026
Home Blog Page 346

ಪುತ್ತೂರು ಸಮೀಪದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂದು (15.01.2021) ದೈವಗಳ ಕೋಲ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 

ಸಾಂದರ್ಭಿಕ ಚಿತ್ರ 

ಪುತ್ತೂರು ಸಮೀಪದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂದು (15.01.2021) ದೈವಗಳ ಕೋಲ ಜರಗಲಿರುವುದು.

ಸಂಧ್ಯಾ ಕಾಲಕ್ಕೆ ದೈವಗಳ ಭಂಡಾರ  ತೆಗೆಯುವ ವಿಧಿವಿಧಾನಗಳನ್ನು ಪೂರೈಸಿದ ನಂತರ ದೈವಗಳ ಕೋಲಕ್ಕೆ ಚಾಲನೆ ಸಿಗಲಿದೆ.

ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಭಜನಾ ಕಾರ್ಯಕ್ರಮದ ನಂತರ  ‘ಏಳು ಸತ್ಯೊಲು’  ಎಂಬ ತುಳು ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.

ರಾತ್ರಿ ದರ್ಶನ ಬಲಿ, ಬಟ್ಟಲು ಕಾಣಿಕೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಆ ಬಳಿಕ ಉಳ್ಳಾಕುಲು, ಹುಲಿಭೂತ, ಕೊಡಮಣಿತ್ತಾಯ, ಪಂಜುರ್ಲಿ ದೈವಗಳ ನೇಮ ನಡೆಯಲಿದೆ. 

ಇಂದು ಪುತ್ತೂರಿನ ಪಾಂಗ್ಲಾಯದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 25ನೆಯ ಪ್ರತಿಷ್ಠಾಪನಾ ವರ್ಧಂತ್ಯುತ್ಸವ – ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ

ಸಾಂದರ್ಭಿಕ ಚಿತ್ರ 

ಪುತ್ತೂರಿನ ಪಾಂಗ್ಲಾಯದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 25ನೆಯ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಇಂದು ನಡೆಯುತ್ತಿದೆ.

ಈ ವರ್ಧಂತ್ಯುತ್ಸವದ ಪ್ರಯುಕ್ತ ಇಂದು 15.02.2021ನೇ ಸೋಮವಾರ ಸಂಜೆ 6 ಘಂಟೆಯಿಂದ ದೀಪಾರಾಧನೆ, ರಂಗಪೂಜೆ ಮತ್ತು ಅಮ್ಮನವರ ದರ್ಶನ ಸೇವೆ ನಡೆಯಲಿದೆ.

ಇಂದು ರಾತ್ರಿ 7 ಘಂಟೆಗೆ ಭಂಡಾರ ತೆಗೆಯುವ ಕಾರ್ಯಕ್ರಮ ಜರಗಲಿರುವುದು. ರಾತ್ರಿ 10 ಘಂಟೆಗೆ ವರ್ಷಾವಧಿ ನಡೆಯುವ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. 

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ, ಭಜನೆ ಮತ್ತು ಯಕ್ಷಗಾನ ಬಯಲಾಟ 

ಇತಿಹಾಸ ಪ್ರಸಿದ್ಧ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇಂದು 15. 02. 2021ರಂದು ಶ್ರೀ ದೇವಳದ ಭಗವದ್ಭಕ್ತ ಸಮೂಹದ ಸಹಕಾರದೊಂದಿಗೆ ರಾತ್ರಿ 9 ಘಂಟೆಗೆ ‘ಮೂಡಪ್ಪ ಸೇವೆ’ಯು ಜರಗಲಿರುವುದು.

ಕೋವಿಡ್ ನಿಯಮಾವಳಿಗಳಂತೆ ದೇವತಾರಾಧನೆ ಮತ್ತು ಉತ್ಸವವನ್ನು ಆಚರಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಅದರಂತೆ ಭಕ್ತಾದಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ಸಂಜೆ 7 ಘಂಟೆಯಿಂದ ದಾಸ ಸಂಕೀರ್ತನಕಾರರಾದ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ‘ದಾಸ ಭಕ್ತಿಗಾನಾಮೃತ’ ನಡೆಯಲಿದೆ. ಆಮೇಲೆ ರಾತ್ರಿ 9 ಘಂಟೆಯಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಲಿದೆ.

ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡ ನೇರಳಕಟ್ಟೆ ಇವರಿಂದ ‘ಭೃಗು ಲಾಂಛನ’ ಮತ್ತು ‘ರತಿ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಶ್ರೀ ಧರ್ಮಸ್ಥಳ ಮೇಳ ==  ಮತ್ತಿಮನೆ – ಹನುಮೋದ್ಭವ, ಚೂಡಾಮಣಿ, ಲಂಕಾದಹನ 

ಕಟೀಲು ಒಂದನೇ ಮೇಳ = ಚಾವಡಿಮನೆ, ಅಶೋಕನಗರ, ಉರ್ವ ಮಾರಿಗುಡಿ ಬಳಿ, ಮಂಗಳೂರು  

ಕಟೀಲು ಎರಡನೇ ಮೇಳ ==   ಕಟೀಲು ಕ್ಷೇತ್ರ (1)

ಕಟೀಲು ಮೂರನೇ ಮೇಳ= ಇರ್ದೆ ಉಪ್ಪಳಿಗೆ, ಪುತ್ತೂರು 

ಕಟೀಲು ನಾಲ್ಕನೇ ಮೇಳ  == ಲಲಿತ ನಿಲಯ ಕುಚ್ಚಿಮನೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ, ಕುಳಾಯಿ  

ಕಟೀಲು ಐದನೇ ಮೇಳ == ದೇವಿಕೃಪಾ, ವಿದ್ಯಾನಗರ, ಪಂಜಿಮೊಗರು, ಕೂಳೂರು 

ಕಟೀಲು ಆರನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ, ಹಿರಿಯಂಗಡಿ, ಕಾರ್ಕಳ 

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಮಂದಾರ್ತಿ ಒಂದನೇ ಮೇಳ  ==  ಮೇಲ್ಕೋಡಿಮನೆ, ನೆಲ್ಲಿಕಟ್ಟೆ ಅಂಪಾರು 

ಮಂದಾರ್ತಿ ಎರಡನೇ ಮೇಳ   ==   ಶ್ರೀ ಗುರುಕೃಪಾ ನಿಲಯ, ಬಾರ್ಕೂರು ರಸ್ತೆ, ಹಂದಾಡಿ ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  ==  ಶ್ರೀ ದುರ್ಗಾನಿಲಯ, ಅರ್ಬಿ ನಾಲ್ಕೂರು, ಮದ್ದೂರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   ==  ಶ್ರೀ ದುರ್ಗಾನಿಲಯ, ಅರ್ಬಿ ನಾಲ್ಕೂರು, ಮದ್ದೂರು – ಕೂಡಾಟ 

ಮಂದಾರ್ತಿ    ಐದನೇ ಮೇಳ  ==  ದೊಡ್ಮನೆ, ಹೆಗ್ಗುಂಜೆ 

ಶ್ರೀ ಹನುಮಗಿರಿ ಮೇಳ  ==  ಶ್ರೀ ಯಕ್ಷೆಬ್ರಹ್ಮನಂದಿಕೇಶ್ವರ ದೈವಸ್ಥಾನ, ಸುಳ್ಸೆ (ಕಟ್ ಬೆಲ್ತೂರು)- ವಿರೋಚನ, ಶ್ರೀನಿವಾಸ  (ರಾತ್ರಿ 8ರಿಂದ)

ಶ್ರೀ ಸಾಲಿಗ್ರಾಮ ಮೇಳ == ನಾವುಂದ ಬೊಬ್ಬರ್ಯನ ಹಿತ್ಲು ಪದ್ಮಾವತಿ ದೇವಸ್ಥಾನ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಪೆರ್ಡೂರು ಮೇಳ == ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಅಬ್ಬಿಹಿತ್ಲು ಬೆಳಕ್ಕೆ – ಶಿವಾನಿ ಭವಾನಿ 

ಶ್ರೀ ದೇಂತಡ್ಕ ಮೇಳ == ಮಾಣಿ (ಕಾರ್ಣಿಕದ ಸ್ವಾಮಿ ಕೊರಗಜ್ಜ)

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮಾವಿನಮನೆ ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಕ್ಕನಬೈಲು, ಹೆನ್ನಾಬೈಲು, ಸಿದ್ಧಾಪುರ ಹೊಸಂಗಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಟ್ಟೆಮಕ್ಕಿ ಶಂಕರನಾರಾಯಣ 

ಶ್ರೀ ಪಾವಂಜೆ ಮೇಳ  ==  ಶ್ರೀ ಕಿರಾತೇಶ್ವರಸ್ವಾಮಿ ಮುಡಿಪಿನ್ನಾರ್ ದೈವಸ್ಥಾನ, ಮುಡಿಪು – ದಶಾವತಾರ (ಸಂಜೆ 5.30ರಿಂದ)

ಕಮಲಶಿಲೆ ಮೇಳ ‘ಎ‘ = ಮೇಲ ಹೊಸೂರು, ಕದೊಳ್ಳಿ 

ಕಮಲಶಿಲೆ ಮೇಳ ‘ಬಿ‘ == ಬಿಜೂರು, ಹೊಳೆಕೋಣು ಗರೋಡಿ ವಠಾರ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರ ಬಪ್ಪನಾಡು – ಅಜ್ಜ ಅಜ್ಜ ಕೊರಗಜ್ಜ (ರಾತ್ರಿ 7ರಿಂದ)

ಶ್ರೀ ಸಸಿಹಿತ್ಲು ಭಗವತೀ ಮೇಳ == ಕೊಯಿಕುಡೆ ಹರಿಪಾದೆ ಶ್ರೀ ಜಾರಂದಾಯ ದೈವಸ್ಥಾನದ ಬಳಿ – ಬ್ರಹ್ಮ ಬೈದೆರ್ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ದೇವಿ ದೇವಸ್ಥಾನ ಹಾಗೂ ಶ್ರೀ ಕಟ್ಟೆಚಿಕ್ಕು ಪರಿವಾರ ದೈವಸ್ಥಾನ ಬಸ್ರೂರು – ಸಂಪೂರ್ಣ ದೇವಿ ಮಹಾತ್ಮೆ 

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಶ್ರೀ ಸೌಕೂರು ಮೇಳ == ಆಲ್ತಾರು ಶ್ರೀ ಗಣಪತಿ ದೇವಸ್ಥಾನ – ಪುಷ್ಪ ಚಂದನ 

ಶ್ರೀ ಹಾಲಾಡಿ ಮೇಳ == ಅಲ್ಬಾಡಿ, ಹಬರಗುಡ್ಡಿ – ಚಂದ್ರಾವಳಿ, ನಾಗಶ್ರೀ 

ಶ್ರೀ ಬೆಂಕಿನಾಥೇಶ್ವರ ಮೇಳ  == ದೇವಣಗುಡ್ಡೆ ಕುತ್ತೆತ್ತೂರು – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ   

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೆಮ್ಮಾಡಿ ಕೆಳಮನೆ ಶ್ರೀ ಮರ್ಲುಚಿಕ್ಕು ಸಪರಿವಾರ ದೈವಸ್ಥಾನ ವಠಾರ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ನಲ್ಲೂರು ಘಂಧಿನಗರ – ಪವಿತ್ರ ಫಲ್ಗುಣಿ (ತೆಂಕು, ತುಳು ಕಾಲಮಿತಿ)

ಶ್ರೀ ಶನೀಶ್ವರ ಮೇಳ == ಕಮಲಮ್ಮ ಕಾಂಪ್ಲೆಕ್ಸ್, ಸಾಲಿಗ್ರಾಮ 

ಶ್ರೀ ಸಿಗಂದೂರು ಮೇಳ == ನಾಯ್ಕನಕಟ್ಟೆ ಕುರುವಾಲ್ 

ಶ್ರೀ ನೀಲಾವರ ಮೇಳ  == ಕಾಲ್ತೋಡು ಕುರಕುಂಡಿ ಮೂಡ ಹಾಯ್ಗುಳಿ ಮನೆ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಾನ್  ಗೋಡ್ 

ಶ್ರೀ ಮೇಗರವಳ್ಳಿ ಮೇಳ ==  ಬಿದ್ರಗೋಡು – ಮಧುರ ಮನಸ್ವಿ  

‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನ ವೀಡಿಯೊದ ಭಾಗ – 4 (ಹನುಮಗಿರಿ ಮೇಳ)

ಬಿ.ಸಿ. ರೋಡ್  ಹೋಟೆಲ್ ರಂಗೋಲಿ ಆವರಣದಲ್ಲಿ  ಹನುಮಗಿರಿ ಮೇಳದವರಿಂದ ಪ್ರದರ್ಶಿತವಾದ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನದ ಭಾಗ – 4, (ಹೋಟೆಲ್ ರಂಗೋಲಿಯ ಹೊರಾಂಗಣ, ಬಿ.ಸಿ. ರೋಡ್ – ಶ್ರೀಕೃಷ್ಣ ತುಲಾಭಾರ, ಶೂರ್ಪನಖ ವಿವಾಹ, ಅಹಿರಾವಣ ಮಹಿರಾವಣ)

ಭಾಗವತರು:ಶ್ರೀ ಚಿನ್ಮಯ ಕಲ್ಲಡ್ಕ ಚೆಂಡೆ:ಶ್ರೀ ಚೈತನ್ಯಕೃಷ್ಣ ಪದ್ಯಾಣ ಮದ್ದಳೆ:ಶ್ರೀ ಶ್ರೀಧರ ವಿಟ್ಲ,

ಚಕ್ರತಾಳ:ಶ್ರೀ ವಸಂತ ಪ್ರಸಂಗ:ಶ್ರೀಕೃಷ್ಣ ತುಲಾಭಾರ – ಶೂರ್ಪನಖ ವಿವಾಹ – ಅಹಿರಾವಣ, ಮಹಿರಾವಣ

ಶ್ರೀಕೃಷ್ಣ : ಶ್ರೀ ವಾಸುದೇವ ರಂಗಾ ಭಟ್ ಸತ್ಯಭಾಮೆ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ ದೇವೇಂದ್ರ: ಶ್ರೀ ಪ್ರಸಾದ್ ಸವಣೂರು.

ಹನುಮಗಿರಿ ಮೇಳದವರ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನದ ಭಾಗ – 3 ವೀಡಿಯೊ 

ಬಿ.ಸಿ. ರೋಡ್  ಹೋಟೆಲ್ ರಂಗೋಲಿ ಆವರಣದಲ್ಲಿ  ಹನುಮಗಿರಿ ಮೇಳದವರಿಂದ ಪ್ರದರ್ಶಿತವಾದ ‘ಶ್ರೀಕೃಷ್ಣ ತುಲಾಭಾರ’ ಯಕ್ಷಗಾನದ ಭಾಗ – 3, (ಹೋಟೆಲ್ ರಂಗೋಲಿಯ ಹೊರಾಂಗಣ, ಬಿ.ಸಿ. ರೋಡ್ – ಶ್ರೀಕೃಷ್ಣ ತುಲಾಭಾರ, ಶೂರ್ಪನಖ ವಿವಾಹ, ಅಹಿರಾವಣ ಮಹಿರಾವಣ)

ಭಾಗವತರು:ಶ್ರೀ ಚಿನ್ಮಯ ಕಲ್ಲಡ್ಕ ಚೆಂಡೆ:ಶ್ರೀ ಚೈತನ್ಯಕೃಷ್ಣ ಪದ್ಯಾಣ ಮದ್ದಳೆ:ಶ್ರೀ ಶ್ರೀಧರ ವಿಟ್ಲ,

ಚಕ್ರತಾಳ:ಶ್ರೀ ವಸಂತ ಪ್ರಸಂಗ:ಶ್ರೀಕೃಷ್ಣ ತುಲಾಭಾರ – ಶೂರ್ಪನಖ ವಿವಾಹ – ಅಹಿರಾವಣ, ಮಹಿರಾವಣ

ಶ್ರೀಕೃಷ್ಣ : ಶ್ರೀ ವಾಸುದೇವ ರಂಗಾ ಭಟ್ ಸತ್ಯಭಾಮೆ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ   ದೇವೇಂದ್ರ: ಶ್ರೀ ಪ್ರಸಾದ್ ಸವಣೂರು.

ಮೇಳಗಳ ಇಂದಿನ (14.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (14.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಸಂಪೆಕಟ್ಟೆ ಶಾಲಾ ಮೈದಾನ  – ಮಾನಿಷಾದ, ಕುಶಲವ 

ಕಟೀಲು ಒಂದನೇ ಮೇಳ = ಕೊಳತ್ತಮಜಲು, ಬಡಗಬೆಳ್ಳೂರು, ಬಂಟ್ವಾಳ  

ಕಟೀಲು ಎರಡನೇ ಮೇಳ == ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರ  

ಕಟೀಲು ಮೂರನೇ ಮೇಳ= ನೇರಳಕಟ್ಟೆ ವಯಾ ಮಾಣಿ, ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  == ತೋಟಮನೆ, ಪಾವಂಜೆ, ಹಳೆಯಂಗಡಿ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ (1)

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ (2)

ಮಂದಾರ್ತಿ ಒಂದನೇ ಮೇಳ  ==  ದೀಪೋತ್ಸವ 

ಮಂದಾರ್ತಿ ಎರಡನೇ ಮೇಳ   ==   ದೀಪೋತ್ಸವ   

ಮಂದಾರ್ತಿ ಮೂರನೇ ಮೇಳ  ==  ದೀಪೋತ್ಸವ

ಮಂದಾರ್ತಿ ನಾಲ್ಕನೇ ಮೇಳ   ==  ದೀಪೋತ್ಸವ

ಮಂದಾರ್ತಿ    ಐದನೇ ಮೇಳ  ==  ದೀಪೋತ್ಸವ

ಶ್ರೀ ಹನುಮಗಿರಿ ಮೇಳ  ==  ಶ್ರೀ ಕಿರಾತೇಶ್ವರಸ್ವಾಮಿ ಮುಡಿಪಿನ್ನಾರ್ ದೈವಸ್ಥಾನ, ಮುಡಿಪು – ಶುಕ್ರನಂದನೆ (ಸಂಜೆ 5.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಪೌರಾಣಿಕ ಪ್ರಸಂಗ 

ಶ್ರೀ ಪೆರ್ಡೂರು ಮೇಳ == ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಳ್ತೂರು – ಅಹಂ ಬ್ರಹ್ಮಾಸ್ಮಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಾಯಿರಿಬೆಟ್ಟು ನಾಗೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಆಶ್ರಿತ ಕೇಟರರ್ಸ್, ಹೊಯಿಗೆಗುಡ್ಡೆ ಪಡುಪಣಂಬೂರು -ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ ==  ಬಲರಾಮ ದೇವಸ್ಥಾನ, ವಡಭಾಂಡೇಶ್ವರ – ದಿವ್ಯ ಸನ್ನಿಧಿ (ರಾತ್ರಿ 8ರಿಂದ)

ಕಮಲಶಿಲೆ ಮೇಳ ‘ಎ‘ = ಗಾಣದಜೆಡ್ಡು, ಉಳ್ಳೂರು – 74

ಕಮಲಶಿಲೆ ಮೇಳ ‘ಬಿ‘ == ಬಾಸ್ ಬೈಲು, ಬಿದ್ಕಲ್ ಕಟ್ಟೆ 

ಶ್ರೀ ಬಪ್ಪನಾಡು ಮೇಳ == ಕಮಲ ನಿವಾಸ, ಹರಿಯಪ್ಪ ಸಾಲ್ಯಾನ್ ಮನೆ ವಠಾರ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಧ್ವ (ಕಾರಿಂಜ) – ರಂಗಸ್ಥಳ (ರಾತ್ರಿ 9ರಿಂದ)

ಶ್ರೀ ಅಮೃತೇಶ್ವರೀ ಮೇಳ == ಚರ್ಚ್ ರೋಡ್, ಗಂಗೊಳ್ಳಿ 

ಶ್ರೀ ಬೋಳಂಬಳ್ಳಿ ಮೇಳ== ನೀರ್ಗದ್ದೆ, ಬೈಂದೂರು – ನಾಗ ಸುನೇತ್ರೆ (ರಾತ್ರಿ 8 ಘಂಟೆಗೆ 

ಶ್ರೀ ಸೌಕೂರು ಮೇಳ == ಕೆಂಚನೂರು ಸ್ವಾಮಿ ಮನೆ ವಠಾರ – ಸೌಕೂರು ಶ್ರೀ ದುರ್ಗಾಪರಮೇಶ್ವರಿ ಮಹಾತ್ಮೆ  

ಶ್ರೀ ಹಾಲಾಡಿ ಮೇಳ == ಹೊಸಮಕ್ಕಿ ಕಕ್ಕುಂಜೆ – ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ತ್ರಾಸಿ ಮೂವಾಡಿ ಚೌಡೇಶ್ವರಿ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಆರ್ಡಿ ಬೆಣಗಲ್ ಬ್ರಹ್ಮಸ್ಥಾನ – ಶ್ರೀ ಮಹಾಶಕ್ತಿ ಮಂತ್ರದೇವತೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ – ನಾಗಮಂಡಲ (ಕಾಲಮಿತಿ ರಾತ್ರಿ 7ರಿಂದ)

ಶ್ರೀ ಹಿರಿಯಡಕ ಮೇಳ == ಕೊಕ್ರಾಡಿ ಶಾಲಾ ಬಳಿ (ಪೊನ್ನೆಜಾಲು) – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಕೆಳಸಂಕ, ಕೆರೆಗದ್ದೆ, ಅಮಾಸೆಬೈಲ್ 

ಶ್ರೀ ಸಿಗಂದೂರು ಮೇಳ == ಇಡೂರು ಮೇಲ್ ಬೆಣ್ಕಲ್ 

ಶ್ರೀ ನೀಲಾವರ ಮೇಳ  == ಮೊಳಹಳ್ಳಿ ಪಂಚಾಯತ್ ವಠಾರ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಗರ್ತಿಕೆರೆ 

ಶ್ರೀ ಮೇಗರವಳ್ಳಿ ಮೇಳ ==  ಗುಡ್ಡೆಕೊಪ್ಪ – ನಾಗಶ್ರೀ 

“ಪುರಂದರದಾಸರ ಕೃತಿಗಳಿಗೆ ಸಾರ್ವಕಾಲಿಕ ಮೌಲ್ಯವಿದೆ” – 13ನೇ ವರ್ಷದ ಶ್ರೀ ಪುರಂದರದಾಸರ ಆರಾಧನೋತ್ಸವದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ 

ದಾಸವರೇಣ್ಯ ಶ್ರೀ ಪುರಂದರದಾಸರ ಕೀರ್ತನೆಗಳು ಧಾರ್ಮಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಕಾಲಿಕ ಮೌಲ್ಯ ಪಡೆದಿವೆ ಎಂದು ಎಡನೀರು ಶ್ರೀ ಮಠದ  ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ನುಡಿದರು.

ಪೂಜ್ಯ ಶ್ರೀಗಳವರು ದಿನಾಂಕ 11-02-2021 ನೇ ಗುರುವಾರದಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 13ನೇ ವರ್ಷದ ಶ್ರೀ ಪುರಂದರದಾಸರ ಆರಾಧನೋತ್ಸವದಲ್ಲಿ ಆಶೀರ್ವಚನ ನೀಡಿದರು. ಶ್ರೀ ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಧುಸೂದನ ಪುಣಿಂಚಿತ್ತಾಯ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಪುರಂದರದಾಸರ ಆರಾಧನೆಯನ್ನು ಆಸ್ತಿಕ ಶ್ರದ್ಧಾಳುಗಳ ಉಪಸ್ಥಿತಿಯಲ್ಲಿ ಕಳೆದ ಸುಮಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಭಜನಾ ಗುರು, ಸಂಕೀರ್ತನಾ ಸಾಧಕರೂ ಆದ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಅವರ ಕೆಲಸ ಕಾರ್ಯಗಳನ್ನು ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದರು.

ಧಾರ್ಮಿಕ ಕ್ಷೇತ್ರದ ಗಣ್ಯರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಬಳಿಕ ವೇದಿಕೆಯಲ್ಲಿ ಪೂಜ್ಯ ಶ್ರೀಗಳು ಬಂದ  ಭಜಕರಿಗೆ ಭಗವದ್ಭಕ್ತ ಸಮೂಹಕ್ಕೆ ಮಂತ್ರಾಕ್ಷತೆ ನೀಡಿ  ಹರಸಿ ಆಶೀರ್ವಚನವನ್ನಿತ್ತರು.
13ನೇ ವರ್ಷದ ‘ಶ್ರೀ ಪುರಂದರದಾಸರ ಆರಾಧನಾ ಉತ್ಸವ’ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಡೆದ ‘ಶ್ರೀ ಮದ್ಭಾಗವತ ಸಪ್ತಾಹ’ದ ಶುಭ ಸಮಯದಲ್ಲಿ ಮೊದಲಿಗೆ ಕಾರ್ಯಕ್ರಮದ ಯಶಸ್ಸಿಗೆ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಲಾಯಿತು.

ತದನಂತರ  ಶ್ರೀ ಪುರಂದರ ದಾಸರ ವೇದಿಕೆಯ ಮುಂಭಾಗ  ಪ್ರಧಾನ ಅರ್ಚಕರು, ವೇದಮೂರ್ತಿ ಬ್ರಹ್ಮ ಶ್ರೀ ರಾಮಭಟ್ ನೀರ್ಚಾಲು – ಕಾಟುಕುಕ್ಕೆ , ಭಜನಾ ಗುರುಗಳು, ಹಾಗೂ ಪ್ರಮುಖರಿಂದ  ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದಾಸ ವೇದಿಕೆಯಲ್ಲಿ  ನೂತನ ಭಜನಾ ಮಂಡಳಿ ಅವರಿಗೆ ದಾಸರ ಕೀರ್ತನೆಗಳನ್ನು  ಹಾಡುವ ಅವಕಾಶ ಕಲ್ಪಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳಿಂದ ನೃತ್ಯ ಗುರು ಭಜನಾಕರ ಶ್ರೀ ರಮೇಶ್ ಕಲ್ಮಾಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. 

ವೇದಿಕೆಯಲ್ಲಿದ್ದ ಗಣ್ಯರು ದಾಸರ ಆರಾದನೆ ಹಾಗೂ ಶ್ರೀ ಮದ್ಭಾಗವತ  ಪ್ರವಚನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ನಂತರ ಭಜನಾ ಗುರುಗಳಿಂದ ದಾಸ ಶ್ರೇಷ್ಠರ ಸಮೂಹ ಗಾಯನವೂ ನಡೆಯಿತು.

ಆ ನಂತರ ರಾಜ್ಯ ಮಟ್ಟದ ವಿಜೇತ ತಂಡ, ಕುಂದಾಪುರದ ಕುಣಿತ ಭಜನಾ ತಂಡದವರಿಂದ ಹೊಸಬಗೆಯ ಕುಣಿತ  ಭಜನೆಯ ಪ್ರಾತ್ಯಕ್ಷಿಕೆಯನ್ನು  ಕಣ್ತುಂಬಿಕೊಂಡೆವು.  ಭೋಜನದ ವಿರಾಮದ ನಂತರ  ವೇದಮೂರ್ತಿ ಬ್ರಹ್ಮ ಶ್ರೀ ರಾಮ ಭಟ್ಟ ಅವರಿಂದ ಭಾಗವತ  ಪಾರಾಯಣ ಪ್ರವಚನದ ಕೊನೆಯ ದಿನದ ಪ್ರವಚನ ನಡೆಯಿತು. 

ಮೇಳಗಳ ಇಂದಿನ (13.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಾರಣಕಟ್ಟೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ = ಕೋಡಿಕಲ್ಲು, ಮಂಗಳೂರು 

ಕಟೀಲು ಎರಡನೇ ಮೇಳ == ವಾಮಂಜೂರು, ಪರಾರಿ 

ಕಟೀಲು ಮೂರನೇ ಮೇಳ= ಬಡಕ್ ಬೈಲು, ವಯಾ ಪೊಳಲಿ 

ಕಟೀಲು ನಾಲ್ಕನೇ ಮೇಳ  == ಕುಂಜತ್ ಬೈಲು, ಮಂಗಳೂರು 

ಕಟೀಲು ಐದನೇ ಮೇಳ == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರದಲ್ಲಿ 

ಮಂದಾರ್ತಿ ಒಂದನೇ ಮೇಳ  ==  ರಥೋತ್ಸವ 

ಮಂದಾರ್ತಿ ಎರಡನೇ ಮೇಳ   ==  ರಥೋತ್ಸವ 

ಮಂದಾರ್ತಿ ಮೂರನೇ ಮೇಳ  ==  ರಥೋತ್ಸವ 

ಮಂದಾರ್ತಿ ನಾಲ್ಕನೇ ಮೇಳ   ==  ರಥೋತ್ಸವ 

ಮಂದಾರ್ತಿ ಐದನೇ ಮೇಳ  ==  ರಥೋತ್ಸವ 

ಶ್ರೀ ಹನುಮಗಿರಿ ಮೇಳ  ==  ಕಟ್ಟಣಿಗೆ ಶ್ರೀ ಅಶ್ವಥನಾರಾಯಣಕಟ್ಟೆ, ಇರುವೈಲು – ಶ್ರೀ ಶನೀಶ್ವರ ಮಹಾತ್ಮೆ (ರಾತ್ರಿ 8ರಿಂದ)

ಶ್ರೀ ಸಾಲಿಗ್ರಾಮ ಮೇಳ == ಹಿರೇಬಂಡಾಡಿ ಶಾಖೆಪುರ ಮೈದಾನ – ಭೀಷ್ಮ ವಿಜಯ, ಶ್ರೀನಿವಾಸ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಗಜಾನನ ಕ್ಯಾಶ್ಯೂಸ್ ಇಂಡಸ್ಟ್ರೀಸ್ ಮುಂಭಾಗ, ಬೆಳ್ವೆ – ರಾಮ ರಾಘವ ರಘುರಾಮ 

ಶ್ರೀ ದೇಂತಡ್ಕ ಮೇಳ == ಮಾಡತ್ತಡ್ಕ – ಚತುರ್ಜನ್ಮ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಯಡೇರಿ, ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮಂಡಕಟ್ಟು, ತೊಪ್ಲು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕೊಡೆಪಾಲ್, ಹಾಡಿಮನೆ, ಜಡ್ಕಲ್ 

ಶ್ರೀ ಪಾವಂಜೆ ಮೇಳ  ==  ಜಪ್ಪು ಮಜಿಲ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ, ಇಂದಿರಾನಗರ, ವಾರಂಬಳ್ಳಿ – ಬ್ರಹ್ಮಕಪಾಲ ಮತ್ತು ಚಂದ್ರಾವಳಿ ವಿಲಾಸ (ಕಾಲಮಿತಿ ರಾತ್ರಿ 7.30ರಿಂದ)

ಕಮಲಶಿಲೆ ಮೇಳ ‘ಎ‘ = ಎಳೇರಿ 

ಕಮಲಶಿಲೆ ಮೇಳ ‘ಬಿ‘ == ಜಂಪದ ಕುವೇರಿ, ಕೊಳಗೀರಿ 

ಶ್ರೀ ಬಪ್ಪನಾಡು ಮೇಳ == ಕೋಡಿಕೆರೆ ಮೈದಾನ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕಿನ್ನಿಬೆಟ್ಟು – ಕಂಚೀಲ್ದ ಪರಕೆ 

ಶ್ರೀ ಅಮೃತೇಶ್ವರೀ ಮೇಳ == ಕುಂಜಿಗುಡಿ, ಕಾರ್ಕಡ 

ಶ್ರೀ ಬೋಳಂಬಳ್ಳಿ ಮೇಳ== ಜೈನ ಜಟ್ಟಿಗೇಶ್ವರ, ಅಡಿಗದ್ದೆ, ಬಾಡ, ಬೈಂದೂರು 

ಶ್ರೀ ಸೌಕೂರು ಮೇಳ == ಜಪ್ತಿ ಕೈಲ್ ಕೆರೆ ವಜ್ರವರ್ಣ ನಿಲಯ – ಅಭಿಮನ್ಯು, ರುದ್ರಕೋಪ  

ಶ್ರೀ ಹಾಲಾಡಿ ಮೇಳ == ಶ್ರೀ ಮಾರಿಕಾಂಬಾ ಮತ್ತು ನಂದಿಕೇಶ್ವರ ಸಹಪರಿವಾರ ದೇವಸ್ಥಾನ ಸಬ್ಲಾಡಿ – ಅಬ್ಬರದ ಬೊಬ್ಬರ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಓಂತಿಬೆಟ್ಟು ಬಸ್ ಸ್ಟಾಂಡ್ ಬಳಿ – ಮಹಿಮೆದ ಮಂತ್ರದೇವತೆ

ಶ್ರೀ ಮಡಾಮಕ್ಕಿ ಮೇಳ == ಕುಕ್ಕುಡೆ, ಕೀರ್ತಿನಗರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ಆನಗಳ್ಳಿ ರಸ್ತೆ, ರೈಲ್ವೆ ಬ್ರಿಜ್ ಬಳಿ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಮಂಗಳತೇರು ಶ್ರೀ ದೇವಿ ಮಹಾಮಾಯಿ ಕ್ಷೇತ್ರ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಮೂಡುವಾಯಿನ ಮನೆ, ಹಡವು, ಪಡುಕೋಣೆ – ಶ್ರೀ ಶನೀಶ್ವರ ಕ್ಷೇತ್ರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ == ಕೋಡಿ (ಕುಂದಾಪುರ)

ಶ್ರೀ ನೀಲಾವರ ಮೇಳ  == ನೀಲಾವರ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಸಾಗರ ತಾಲೂಕು ಅಡ್ದೇರಿ 

ಶ್ರೀ ಮೇಗರವಳ್ಳಿ ಮೇಳ ==  ತೀರ್ಥಹಳ್ಳಿ ಚಿತ್ರನಗದ್ದೆ – ಮಧುರ ಮನಸ್ವಿ 

ಯಕ್ಷಗಾನದ ಮಹತ್ ಗ್ರಂಥಗಳಲ್ಲಿ ಸ್ವಾರಸ್ಯಕರವಾದ ವಿಚಾರಗಳು – ತಾಳಮದ್ದಳೆ ಮೊದಲೋ ಬಯಲಾಟ ಮೊದಲೋ? (ಡಾ. ಪಾದೇಕಲ್ಲು ವಿಷ್ಣು ಭಟ್ಟರ ‘ಯಕ್ಷಗಾನಾಧ್ಯಯನ’ದಿಂದ)

“ತಾಳಮದ್ದಳೆಯೆಂಬುದು ಬಯಲಾಟದ ಇನ್ನೊಂದು ರೂಪ. ಬಯಲಾಟದಿಂದ ಆಹಾರ್ಯವನ್ನೂ ನೃತ್ಯವನ್ನೂ ಕಳೆದುಳಿದ ಸ್ವರೂಪವೇ ತಾಳಮದ್ದಳೆ. ತಾಳಮದ್ದಳೆ ಮೊದಲು ಹುಟ್ಟಿಕೊಂಡಿತೋ ಬಯಲಾಟ ಮೊದಲು ಹುಟ್ಟಿಕೊಂಡಿತೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.

ಈಗ ನಮಗೆ ಯಾವುದೋ ಒಂದು ರೂಪದಲ್ಲಿ ಕಾಣಸಿಕ್ಕುವ ಜನಪದ ಕಲೆಗಳ ಆದಿರೂಪ ಮತ್ತು ಉಗಮಕಾಲವನ್ನು ಖಚಿತವಾಗಿ ಕಂಡುಕೊಳ್ಳುವುದು ಸಾಧ್ಯವಾಗದ ಸಂಗತಿ. ಒಂದು ಕಲಾರೂಪದಿಂದ ಇನ್ನೊಂದು ಕಲಾರೂಪವು ಹುಟ್ಟಿಕೊಂಡಿತೆಂದು ಭಾವಿಸುವುದು ಅಸಾಧ್ಯವಲ್ಲವಾದರೂ ಯಕ್ಷಗಾನದ ಸಂದರ್ಭದಲ್ಲಿ ಬಯಲಾಟ ಮತ್ತು ತಾಳಮದ್ದಳೆ ಎರಡೂ ಪರಂಪರಾಗತವಾಗಿ ಉಳಿದುಕೊಂಡು ಬಂದಿವೆಯೆಂಬುದರಿಂದ ಎರಡೂ ಬೇರೆಬೇರೆಯಾಗಿಯೇ ಗೌರವಿಸಲ್ಪಡುವ ಅಥವಾ ಗುರುತಿಸಲ್ಪಡುವ ಖಚಿತ ಕಲಾರೂಪಗಳೆಂಬುದನ್ನು ಹೇಳಲೇಬೇಕಾಗುತ್ತದೆ.

ಇವೆರಡರಲ್ಲಿ ಒಂದರಿಂದ ಇನ್ನೊಂದು ಹುಟ್ಟಿರಬಹುದಾದರೂ ಒಂದು ಇನ್ನೊಂದನ್ನು ಬದಿಗೆ ತಳ್ಳಿಲ್ಲ. ಹೇಗಿದ್ದರೂ ಬಯಲಾಟವು ಈ ಕಲೆಯ ಪರಿಪೂರ್ಣರೂಪ. ತಾಳಮದ್ದಳೆಯು ಆಂಶಿಕರೂಪವೇ ಆದರೂ ಬಯಲಾಟದಂತೆಯೇ ಇದೂ ಪರಿಣಾಮಕಾರಿಯಾದ ಕಲೆಯೇ ಆಗಿದೆ. ತನ್ನದೇ ಆದ ಒಂದು ಸ್ವಸಂಪೂರ್ಣಸ್ವರೂಪ ಇದಕ್ಕಿದೆ. (ಡಾ. ಪಾದೇಕಲ್ಲು ವಿಷ್ಣು ಭಟ್ಟರ ‘ಯಕ್ಷಗಾನಾಧ್ಯಯನ’ ಗ್ರಂಥದ ೭೯ನೇ ಪುಟದಲ್ಲಿ)