ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಯೋಗಾಸನ ಸ್ಪರ್ಧೆಯು ದಿನಾಂಕ 20-08-2022ರಂದು ಶ್ರೀರಾಮ ವಿದ್ಯಾಲಯ ಪಟ್ಟೂರು ಇಲ್ಲಿ ನಡೆಯಿತು.
ಈ ಸ್ಪರ್ಧೆಯ ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಆತ್ಮಿಕಾರೈ, 9ನೇ ತರಗತಿ(ಶ್ರೀ ವಿನೋದ್ರೈ ಮತ್ತು ಲಕ್ಷ್ಮಿ ಇವರ ಪುತ್ರಿ) ಪ್ರಕೃತಿ, 9ನೇ ತರಗತಿ (ಶ್ರೀ ಪ್ರಮೋದ್ ರೈ ಮತ್ತು ಪ್ರಭಾವತಿ ಇವರ ಪುತ್ರಿ), ಧೃತಿ.ಪಿ.ಡಿ, 9ನೇ ತರಗತಿ (ಶ್ರೀ ದೊಯೈರಾಜ್.ಪಿ.ಎಸ್ ಮತ್ತು ದಿವ್ಯಾ ಇವರ ಪುತ್ರಿ), ಅನೀಷ್ಕಾ, 9ನೇ ತರಗತಿ ( ಶ್ರೀ ಗೋವಿಂದ.ಪಿ ಮತ್ತು ಮಮತಾ ಇವರ ಪುತ್ರಿ) ಮತ್ತು ಅನುಶಿಕಾ, 9ನೇ ತರಗತಿ (ಶ್ರೀ ಚಂದ್ರಶೇಖರ ಮತ್ತು ಗಾಯತ್ರಿಇವರ ಪುತ್ರಿ), ಗುಂಪು ಸ್ಪರ್ಧೆಯಲ್ಲಿ ಹಾಗೂ ರಿದಮಿಕ್ ಸ್ಪರ್ಧೆಯಲ್ಲಿ ತನ್ಮಯಿ ವಾಗ್ಲೆ, 9ನೇ ತರಗತಿ(ಶ್ರೀ ಸತೀಶ್ ವಾಗ್ಲೆ ಮತ್ತು ಪೂರ್ಣಿಮ.ಎಸ್ ಇವರ ಪುತ್ರಿ) ಭಾಗವಹಿಸಿರುತ್ತಾರೆ.
ಬಾಲವರ್ಗ ಬಾಲಕರ ವಿಭಾಗದಲ್ಲಿ ಅಭಿಷೇಕ್, 7ನೇ ತರಗತಿ (ಶ್ರೀ ರಾಧಾಕೃಷ್ಣ ಮತ್ತು ಗೀತಾ ಇವರ ಪುತ್ರ), ಮನ್ವಿತ್,7ನೇ ತರಗತಿ (ಶ್ರೀ ಹೇಮಂತ್ ಕುಮಾರ್ ಮತ್ತು ಸೌಮ್ಯ ಇವರ ಪುತ್ರ), ಪೃಥ್ವಿರಾಜ್,7ನೇ ತರಗತಿ (ಶ್ರೀ ಗಣೇಶ್ ಭಂಡಾರಿ ಮತ್ತು ಲತಾ ಇವರ ಪುತ್ರ), ಸೃಜನ್, 7ನೇ ತರಗತಿ (ಶ್ರೀ ರಾಮಕೃಷ್ಣ ಮತ್ತು ರವಿಕಲಾ ಇವರ ಪುತ್ರ) ಹಾಗೂ ಸ್ಮರಣ್, 6ನೇ ತರಗತಿ(ಶ್ರೀ ರಾಮಕೃಷ್ಣ ಮತ್ತು ರವಿಕಲಾ ಇವರ ಪುತ್ರ), ಧೃತಿಕ್, 8ನೇ ತರಗತಿ ( ಶ್ರೀ ಪ್ರದೀಪ್ ಪೂಜಾರಿ ಮತ್ತು ಸವಿತ ಇವರ ಪುತ್ರ) ಪ್ರಣೀತ್ ಕೃಷ್ಣ, 8ನೇ ತರಗತಿ ( ಶ್ರೀ ಮುರಳೀಧರ ಮತ್ತು ಪ್ರಿಯದರ್ಶಿನಿ ಇವರ ಪುತ್ರ)
ಹಾಗೂ ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಧನ್ಯಶ್ರೀ, 6ನೇ ತರಗತಿ (ಶ್ರೀ ಪ್ರಸಾದ್ ರೈ ಮತ್ತು ನಳಿನಾಕ್ಷಿ ಇವರ ಪುತ್ರಿ), ಅನ್ವಿ.ಎಂ, 6ನೇ ತರಗತಿ (ಶ್ರೀ ವಿಜಯಕುಮಾರ್ ಮತ್ತು ನವ್ಯ ಇವರ ಪುತ್ರಿ), ಹಿತಾ.ಬಿ, 6ನೇ ತರಗತಿ (ಶ್ರೀ ಹರಿಪ್ರಸಾದ್.ಬಿ ಮತ್ತು ಅಮೃತಾಲಕ್ಷ್ಮಿ ಇವರ ಪುತ್ರಿ), ಕೃತಿ.ಪಿ.ಎಸ್, 6ನೇ ತರಗತಿ (ಶ್ರೀ ಪಿ.ಬಿ.ಸತೀಶ್ ಮತ್ತು ರಂಜನಿ ಇವರ ಪುತ್ರಿ), ಸೃಷ್ಟಿ.ವೈ, 6ನೇ ತರಗತಿ(ಶ್ರೀ ಯೋಗೀಶ್ ಮತ್ತು ದಿವ್ಯಾ ಇವರ ಪುತ್ರಿ) ಭಾಗವಹಿಸಿರುತ್ತಾರೆ.
ಬಾಲವರ್ಗದ ಬಾಲಕರು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು, ವೈಯಕ್ತಿಕ ವಿಭಾಗದಲ್ಲಿ ಆತ್ಮಿಕಾ ರೈ- 5ನೇ ಸ್ಥಾನ ಮತ್ತು ರಿದಮಿಕ್ ವಿಭಾಗದಲ್ಲಿ ತನ್ಮಯಿ ವಾಗ್ಲೆ(9ನೇ ತರಗತಿ) ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮುಂಬೈನ ಜುಹು ಬೀಚ್ನಲ್ಲಿ ಗಣೇಶ ವಿಸರ್ಜನೆಯ ಮೊದಲು ಥೈಲ್ಯಾಂಡ್ನ ಜನರು ಗಣೇಶನ ವಿಗ್ರಹವನ್ನು ಪೂಜಿಸಿದರು.
ಮುಂಬೈನ ಜುಹು ಬೀಚ್ನಲ್ಲಿ ಸಮುದ್ರದಲ್ಲಿ ಮುಳುಗಿಸುವ ಮೊದಲು ಥೈಲ್ಯಾಂಡ್ನ ಜನರು ಗಣೇಶನ ವಿಗ್ರಹವನ್ನು ಪೂಜಿಸುತ್ತಾರೆ (ಚಿತ್ರಗಳನ್ನು ನೋಡಿ).
ನಗರದ ಜುಹು ಬೀಚ್ ಪ್ರದೇಶದಿಂದ ಒಂದು ಕುತೂಹಲಕಾರಿ ಘಟನೆ ವರದಿಯಾಗಿದೆ, ಅಲ್ಲಿ ಥಾಯ್ಲೆಂಡ್ನ ಜನರು ಗಣೇಶನ ವಿಗ್ರಹವನ್ನು ಸಮುದ್ರದಲ್ಲಿ ಮುಳುಗಿಸುವ ಮೊದಲು ಪೂಜಿಸುವುದನ್ನು ಕಾಣಬಹುದು.
ಈ ವರ್ಷ ಗಣಪತಿಯ ವಿಸರ್ಜನೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ.
Maharashtra | People from Thailand worship the idol of Lord Ganesh before immersing it in the sea at Juhu beach in Mumbai pic.twitter.com/Km9Jh2v7fO
ದೆಹಲಿ ವಿಮಾನ ನಿಲ್ದಾಣದಲ್ಲಿ ಚಿನ್ನದ 1699 ಗ್ರಾಮ್ ಚಿನ್ನದ ಬಳೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸೆಪ್ಟೆಂಬರ್ 7 ರಂದು ಚಿನ್ನದ ಕಳ್ಳಸಾಗಣೆ ಪ್ರಕರಣದ ಅಡಿಯಲ್ಲಿ ಇಂಡೋನೇಷ್ಯಾ ಗಣರಾಜ್ಯ ಪಾಸ್ಪೋರ್ಟ್ಗಳನ್ನು ಹೊಂದಿರುವ 2 ಪ್ರಯಾಣಿಕರನ್ನು ಅರೆಸ್ಟ್ ಮಾಡಿದ್ದಾರೆ.
ಸುಮಾರು ಒಂದೂವರೆ ಕೇಜಿಗೂ ಹೆಚ್ಚಿನ ತೂಕದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕರು ಬಚ್ಚಿಟ್ಟಿದ್ದ 17 ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 1699 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು ಅದರ ಒಟ್ಟು ಮೌಲ್ಯ ರೂಪಾಯಿ 76 ಲಕ್ಷ ಎಂದು ತಿಳಿದುಬಂದಿದೆ.
Delhi | Customs officers at IGI airport booked 2 passengers, holding republic of Indonesia passports, under a case of gold smuggling on 7th September. 17 gold bangles, concealed in the bicep area of passengers, collectively weighing 1699 grams worth Rs 76 lakh were seized. pic.twitter.com/05z4ILlIWF
ಹನಿ ಸಿಂಗ್ ಮತ್ತು ಪತ್ನಿ ಶಾಲಿನಿ ತಲ್ವಾರ್ ಕೊನೆಗೂ ವಿಚ್ಛೇದನ ಪಡೆದಿದ್ದಾರೆ. ವರದಿಗಳ ಪ್ರಕಾರ, ವಿಚ್ಛೇದನದ ಪರಿಹಾರಕ್ಕಾಗಿ ಗಾಯಕ ದೊಡ್ಡ ಜೀವನಾಂಶವನ್ನು ಪಾವತಿಸಿದರು.
ಯೋ ಯೋ ಹನಿ ಸಿಂಗ್ ಎಂಬ ಹೆಸರಿನ ಪಂಜಾಬಿ ಗಾಯಕ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನ ಪರಿಹಾರಕ್ಕಾಗಿ ಹನಿ 1 ಕೋಟಿ ರೂಪಾಯಿ ಜೀವನಾಂಶ ಪಾವತಿಸಿದ್ದಾರೆ.
2021 ರಲ್ಲಿ, ಶಾಲಿನಿ ಅವರು ಹನಿ ಸಿಂಗ್ ಅವರನ್ನು ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು. ಗುರುವಾರ, ಸೆಪ್ಟೆಂಬರ್ 8 ರಂದು, ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಅವರು ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಜೀವನಾಂಶ ಮತ್ತು ಜೀವನಾಂಶಕ್ಕಾಗಿ ಇತ್ಯರ್ಥಕ್ಕೆ ಬಂದರು. ಹನಿ ಸಿಂಗ್ ವಿಚ್ಛೇದನ ಇತ್ಯರ್ಥಕ್ಕಾಗಿ Rs 1 ಕೋಟಿ ಜೀವನಾಂಶವನ್ನು ಪಾವತಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ವಿನೋದ್ ಕುಮಾರ್ ಅವರ ಸಮ್ಮುಖದಲ್ಲಿ, ಹನಿ ಸಿಂಗ್ ಅವರು ಶಾಲಿನಿ ತಲ್ವಾರ್ ಅವರಿಗೆ ಮುಚ್ಚಿದ ಲಕೋಟೆಯಲ್ಲಿ 1 ಕೋಟಿ ರೂ.ಗಳ ಜೀವನಾಂಶವನ್ನು ನೀಡಿದರು. ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ನಡುವಿನ ಆರೋಪ-ಪ್ರತ್ಯಾರೋಪಗಳ ನಂತರ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥವಾಯಿತು.
ಆ ಬಳಿಕ ಇಬ್ಬರ ನಡುವೆ 1 ಕೋಟಿ ರೂಪಾಯಿ ಜೀವನಾಂಶ ವಿಚಾರವಾಗಿ ಸೆಟಲ್ ಮೆಂಟ್ ಆಗಿತ್ತು. ಪ್ರಕರಣದ ಮುಂದಿನ ವಿಚಾರಣೆಯು ಮಾರ್ಚ್ 20, 2023 ರಂದು ನಡೆಯಲಿದ್ದು, ಇದರಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
ಇದಕ್ಕೂ ಮುನ್ನ ಹನಿ ಸಿಂಗ್ ಕೌಟುಂಬಿಕ ದೌರ್ಜನ್ಯ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು. ಎಲ್ಲಾ ಆರೋಪಗಳನ್ನು ನಿರಾಕರಿಸಿದ ಅವರು, ಆರೋಪಗಳನ್ನು ‘ಸುಳ್ಳು ಮತ್ತು ದುರುದ್ದೇಶಪೂರಿತ’ ಎಂದು ಕರೆದರು.
ಹನಿ ಸಿಂಗ್ ವಿರುದ್ಧ ಶಾಲಿನಿ ತಲ್ವಾರ್ ಅವರು ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ, ವಂಚನೆ ಮತ್ತು ಆರ್ಥಿಕ ವಂಚನೆ ಆರೋಪ ಮಾಡಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ 23ನೇ ಮೇಯರ್ ಆಗಿ ಬಿಜೆಪಿಯ ಜಯಾನಂದ ಅಂಚನ್ ಮತ್ತು ಉಪಮೇಯರ್ ಆಗಿ ಬಿಜೆಪಿಯ ಪೂರ್ಣಿಮಾ ಆಯ್ಕೆಯಾಗಿದ್ದಾರೆ.
23ನೇ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಗೆ ಮೇಯರ್ ಆಗಿ ಹಿರಿಯ ಕೌನ್ಸಿಲರ್ ಜಯಾನಂದ ಅಂಚನ್ ಮತ್ತು ಉಪಮೇಯರ್ ಆಗಿ ಪೂರ್ಣಿಮಾ ಶುಕ್ರವಾರ ಆಯ್ಕೆಯಾದರು.
14 ಮತಗಳನ್ನು ಪಡೆದ ಕಾಂಗ್ರೆಸ್ನ ಶಶಿಧರ ಹೆಗಡೆ ವಿರುದ್ಧ ಜಯಾನಂದ ಅಂಚನ್ 46 ಮತಗಳನ್ನು ಪಡೆದು ವಿಜಯಶಾಲಿಯಾದರು. ಪೂರ್ಣಿಮಾ 46 ಮತಗಳನ್ನು ಪಡೆದರೆ, 14 ಮತಗಳನ್ನು ಕಾಂಗ್ರೆಸ್ನ ಜೀನತ್ ಶಂಶುದ್ದೀನ್ ಪಡೆದರು.
ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
60 ಕೌನ್ಸಿಲರ್ಗಳಲ್ಲದೆ, ಮಂಗಳೂರು ನಗರದ ಇಬ್ಬರು ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಮತ್ತು ವೈ.ಭರತ್ ಶೆಟ್ಟಿ ಮತ ಚಲಾಯಿಸಿದರು. ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್ ಚುನಾವಣೆ ನಿರ್ವಹಿಸಿದರು.
ಪುತ್ತೂರು, ಸೆ 9: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಕುಂಬ್ರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಈ ಪಂದ್ಯಾಟದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪೂಜಾಶ್ರೀ ಎ ಅತ್ಯುತ್ತಮ ಆಲ್ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪವಿತ್ರ ಭಟ್ ಕೆ, ನತಾಶಾ ಎನ್ ಭಂಡಾರಿ, ಪೂಜಾಶ್ರೀ ಎ, ವಾಣಿಜ್ಯ ವಿಭಾಗದ ಶ್ರಾವ್ಯ, ಹಿತಶ್ರೀ ಎ, ತನುಷಾ ಸಿ ಕೆ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಹಿತಶ್ರೀ ಎಚ್ ಎಚ್ , ಶ್ರೀಲಕ್ಷ್ಮಿ ಉಮಾಪತಿ, ವಾಣಿಜ್ಯ ವಿಭಾಗದ ಪ್ರಿಯಾಂಕ ಎಸ್ ಭಾಗವಹಿಸಿದ್ದರು.
ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ಕೈಗಾರಿಕಾ ಭೇಟಿ’ ಕಾರ್ಯಕ್ರಮ ನಡೆಯಿತು.
ಬಿ.ಕಾಂ ಪದವಿ ಓದುತ್ತಿರುವ ವಿದ್ಯಾರ್ಥಿಗಳನ್ನು ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಉತ್ಪಾದನಾ ಘಟಕಕ್ಕೆ ಕರೆದೊಯ್ದು ಮಾಹಿತಿ ನೀಡಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ. ವಿದ್ಯಾರ್ಥಿಗಳನ್ನು ಕ್ಯಾಂಪ್ಕೋ ಘಟಕಕ್ಕೆ ಕರೆದೊಯ್ದು ಪ್ರಾತ್ಯಕ್ಷಿಕೆ ದೊರಕುವಲ್ಲಿ ಸಹಕರಿಸಿದರು.
ಇಂಗ್ಲೆಂಡ್ ರಾಣಿ ಎಲಿಜಬೆತ್ II ನಿಧನ – ಪ್ರಧಾನಿ ಮೋದಿ ಸೇರಿದಂತೆ ವಿಶ್ವನಾಯಕರ ಸಂತಾಪ
ಇಂಗ್ಲೆಂಡ್ ರಾಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್ II ನಿನ್ನೆ ತನ್ನ 96 ನೇ ವಯಸ್ಸಿನಲ್ಲಿ ನಿಧನರಾದರು.
ಬ್ರಿಟನ್ನ ರಾಣಿ ಎಲಿಜಬೆತ್ 96 ನೇ ವಯಸ್ಸಿನಲ್ಲಿ ಸ್ಕಾಟ್ಲೆಂಡ್ನ ಬಾಲ್ಮೋರಲ್ ಕೋಟೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸೇರಿದಂತೆ ವಿಶ್ವದಾದ್ಯಂತ ಸಂತಾಪ ಸಂದೇಶಗಳು ವ್ಯಕ್ತವಾಗುತ್ತಿವೆ.
“ರಾಣಿ ಎಲಿಜಬೆತ್ II ನಮಗೆ ಅಗತ್ಯವಿರುವ ಸ್ಥಿರತೆ ಮತ್ತು ಶಕ್ತಿಯನ್ನು ಒದಗಿಸಿದರು. ಅವರು ನಮ್ಮ ದೀರ್ಘಾವಧಿಯ ರಾಣಿಯಾಗಿದ್ದರು. ರಾಣಿ ಎಲಿಜಬೆತ್ II ಆಧುನಿಕ ಬ್ರಿಟನ್ ಅನ್ನು ನಿರ್ಮಿಸಿದ ಸ್ಥಿರತೆಯ ವ್ಯಕ್ತಿ.
ಬಾಲ್ಮೋರಲ್ ಕೋಟೆಯಿಂದ ನಾವು ಕೇಳಿದ ಸುದ್ದಿಯಿಂದ ನಾವೆಲ್ಲರೂ ಆಘಾತಗೊಂಡಿದ್ದೇವೆ. ರಾಣಿಯ ಸಾವು ದೇಶ ಮತ್ತು ಜಗತ್ತಿಗೆ ದೊಡ್ಡ ಆಘಾತವಾಗಿದೆ” ಎಂದು ಇಂಗ್ಲೆಂಡ್ ಪ್ರಧಾನಮಂತ್ರಿ ಲಿಜ್ ಟ್ರಸ್ ಹೇಳಿದ್ದಾರೆ.
ತೆಂಕುತಿಟ್ಟಿನ ಪುಂಡುವೇಷಧಾರಿ ಶ್ರೀ ವೆಂಕಟೇಶ ಆಚಾರ್ಯ ಕಲ್ಲುಗುಂಡಿ ಅವರು ಕಟೀಲು ಮೇಳದ ಕಲಾವಿದ. ಇವರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ಮೂವತ್ತು ವರ್ಷಗಳ ಅನುಭವಿ. ಪುಂಡು ವೇಷಗಳ ಜತೆ ಕಿರೀಟ ವೇಷಗಳನ್ನೂ ಮಾಡಬಲ್ಲರು. ಇವರ ನಾಟ್ಯ ಮತ್ತು ಗಿರಕಿ ಹಾರುವ ರೀತಿಯು ಬಲು ಚಂದ. ಚಂಡ ಮುಂಡರು, ಚಂಡ ಪ್ರಚಂಡರು, ಹುಂಡ ಪುಂಡರು, ಲಕ್ಷ್ಮಣ, ಅಭಿಮನ್ಯು, ಷಣ್ಮುಖ, ಸಿತಕೇತ, ಪ್ರಹ್ಲಾದ, ಶ್ರೀಕೃಷ್ಣ, ಬಬ್ರುವಾಹನ, ಹನುಮಂತ ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಶ್ರೀ ವೆಂಕಟೇಶ ಆಚಾರ್ಯರು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವರ ದೊಡ್ಡಪ್ಪ ಶ್ರೀ ಕೃಷ್ಣಪ್ಪ ಆಚಾರ್ಯ ಮತ್ತು ಅಣ್ಣ ಶ್ರೀ ಶಿವಪ್ಪ ಆಚಾರ್ಯರೇ (ದೊಡ್ಡಪ್ಪನ ಮಗ ಅಣ್ಣ) ಕಾರಣರು ಮತ್ತು ಪ್ರೇರಕರು. ಕಲ್ಲುಗುಂಡಿಯವರಾದರೂ ಪ್ರಸ್ತುತ ಇವರು ಬಂಟ್ವಾಳ ತಾಲೂಕಿನ ಮಿತ್ತೂರು ಸಮೀಪ ಸ್ವಂತ ಮನೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಯಕ್ಷಗಾನ ಕಲಾವಿದನಾಗಿ ಮೇಳದ ವ್ಯವಸಾಯದ ಜತೆಗೆ ತಮ್ಮ ಕುಲವೃತ್ತಿಯನ್ನೂ ಮಾಡುತ್ತಿದ್ದಾರೆ. (ಕಬ್ಬಿಣದ ಕೆಲಸ)
ಶ್ರೀ ವೆಂಕಟೇಶ ಆಚಾರ್ಯರ ಹುಟ್ಟೂರು ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಕಲ್ಲುಗುಂಡಿ. ಶ್ರೀ ಲಿಂಗಪ್ಪ ಆಚಾರ್ಯ ಮತ್ತು ಶ್ರೀಮತಿ ಭವಾನಿ ದಂಪತಿಗಳ ಪುತ್ರನಾಗಿ ಜನನ. ಶ್ರೀ ಲಿಂಗಪ್ಪ ಆಚಾರ್ಯರು ಕುಲವೃತ್ತಿಯನ್ನು ತಿಳಿದವರಲ್ಲ. ಬದುಕಿಗಾಗಿ ಕೂಲಿ ಕೆಲಸವನ್ನು ಮಾಡುತ್ತಿದ್ದರು. ಶ್ರೀ ವೆಂಕಟೇಶ ಆಚಾರ್ಯರು ಓದಿದ್ದು 4ನೇ ತರಗತಿ ವರೆಗೆ. ಕಲ್ಲುಗುಂಡಿ ಶಾಲೆಯಲ್ಲಿ. ಬಡತನದ ಕಾರಣದಿಂದ ಹೆಚ್ಚಿನ ಕಲಿಕೆಯು ಸಾಧ್ಯವಾಗಿರಲಿಲ್ಲ. 4ನೇ ತರಗತಿಯ ವರೆಗೆ ಓದಿದ ಬಳಿಕ ತಮ್ಮ ದೊಡ್ಡಪ್ಪ ಶ್ರೀ ಕೃಷ್ಣಪ್ಪ ಆಚಾರ್ಯರಿಂದ ಕುಲವೃತ್ತಿಯ ತರಬೇತಿಯನ್ನು ಹೊಂದಿದರು. (ಕಬ್ಬಿಣದ ಕೆಲಸ) ಅವರು ಯಕ್ಷಗಾನಾಸಕ್ತರಾಗಿದ್ದರು.
ಅಣ್ಣ ಶ್ರೀ ಶಿವಪ್ಪ ಆಚಾರ್ಯರು ಉತ್ತಮ ಹವ್ಯಾಸಿ ವೇಷಧಾರಿಯಾಗಿದ್ದರು. ಮೂರು ವರ್ಷಗಳ ಕಾಲ ದೊಡ್ಡಪ್ಪ ಮತ್ತು ಅಣ್ಣನ ಜತೆ ಕುಲವೃತ್ತಿಯಲ್ಲಿ ತೊಡಗಿಸಿಕೊಂಡರು. ದೊಡ್ಡಪ್ಪ ಮತ್ತು ಅಣ್ಣನ ಒಡನಾಟವೇ ಶ್ರೀ ವೆಂಕಟೇಶ ಆಚಾರ್ಯರಿಗೆ ಯಕ್ಷಗಾನಾಸಕ್ತಿ ಹುಟ್ಟಲು ಕಾರಣವಾಗಿತ್ತು. ಮೇಳಕ್ಕೆ ಸೇರಲು ಸಲಹೆ ನೀಡಿದವರೂ ಇವರೇ. ಶ್ರೀ ಕೃಷ್ಣಪ್ಪ ಆಚಾರ್ಯರು (ದೊಡ್ಡಪ್ಪ) ತಮ್ಮ ಆತ್ಮೀಯರಾದ ಕೇದಗಡಿ ಗುಡ್ಡಪ್ಪ ಗೌಡರಿಗೆ ಈ ವಿಚಾರ ತಿಳಿಸಿದ್ದರು. ಸೇವೆಯಾಟದ ದಿನದಂದು ಸಂಪಾಜೆ ಶೀನಪ್ಪ ರೈಗಳ ಜತೆ ಕಟೀಲಿಗೆ ಬರಲು ಅವರು ಸೂಚಿಸಿದ್ದರು.
ಸಂಪಾಜೆಯವರೇ ಆದ ಖ್ಯಾತ ಕಲಾವಿದ ಶ್ರೀ ಶೀನಪ್ಪ ರೈಗಳ ಜತೆ ಮೇಳ ಹೊರಡುವ ದಿನದಂದು ವೆಂಕಟೇಶ ಆಚಾರ್ಯರು ಕಟೀಲಿಗೆ ತೆರಳಿದ್ದರು. 1986-87ರ ಸಾಲಿನಲ್ಲಿ ಕಟೀಲು ಮೂರನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ ನಡೆಸಿದ್ದರು. ಕೋಡಂಗಿ, ವನಪಾಲಕರು, ಕಿರಾತ ಪಡೆ ಮೊದಲಾದ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ನಾಟ್ಯ ಕಲಿತು ಕಲಾವಿದನಾಗಲು ನಿರ್ಧಾರ. 1987ರ ಜೂನ್ ತಿಂಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರ ಸೇರಿ ಶ್ರೀ ಕೆ.ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ.
ಕೇಂದ್ರದಲ್ಲಿ ಕೆದಿಲ ಜಯರಾಮ ಭಟ್, ದಿವಾಕರ ದಾಸ್, ಪದ್ಮನಾಭ ಉಪಾಧ್ಯಾಯ, ಜಗದಾಭಿರಾಮ ಪಡುಬಿದ್ರಿ, ಸುರೇಶ್ ಹೆಗ್ಡೆ, ದಿನೇಶ ಆಚಾರ್ಯ ಮೊದಲಾದವರು ಸಹಪಾಠಿಗಳಾಗಿದ್ದರು. ಆಗ ನೆಡ್ಲೆ ಶ್ರೀ ನರಸಿಂಹ ಭಟ್ ಅವರು ತರಬೇತಿ ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿ ಕೇಂದ್ರದ ಪ್ರದರ್ಶನ. ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತ ಮತ್ತು ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ಷಣ್ಮುಖನಾಗಿ ಅಭಿನಯಿಸಲು ಅವಕಾಶವಾಗಿತ್ತು.
ಶ್ರೀ ವೆಂಕಟೇಶ ಆಚಾರ್ಯರ ಮೊದಲ ತಿರುಗಾಟ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ. 1987-88ರಲ್ಲಿ. ಕಟೀಲು ಮೂರನೇ ಮೇಳದಲ್ಲಿ. ಬಾಲಗೋಪಾಲರಾಗಿ ರಂಗಪ್ರವೇಶ. ಎರಡು ವರ್ಷಗಳ ಪೀಠಿಕಾ ಸ್ತ್ರೀವೇಷ ಮತ್ತು ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಮಾಡಿದ್ದರು. ಭಾಗವತ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ನಿರ್ದೇಶನ ಮತ್ತು ಖ್ಯಾತ ಕಲಾವಿದರ ಒಡನಾಟವು ದೊರೆತಿತ್ತು. ಬಾಲಗೋಪಾಲ ಪಾತ್ರದಿಂದ ತೊಡಗಿ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ ಕಲಾವಿದರಿವರು.
ಶ್ರೀ ಕೇದಗಡಿ ಗುಡ್ಡಪ್ಪ ಗೌಡ ಮತ್ತು ಗೇರುಕಟ್ಟೆ ಗಂಗಯ್ಯ ಶೆಟ್ಟರ ಹಿರಣ್ಯಕಶ್ಯಪ ಪಾತ್ರಕ್ಕೆ ಪ್ರಹ್ಲಾದನಾಗಿ ಅಭಿನಯಿಸುವ ಅವಕಾಶವೂ ಸಿಕ್ಕಿತ್ತು. ಷಣ್ಮುಖ, ಲಕ್ಶ್ಮಣ, ಸಿತಕೇತ, ಅಭಿಮನ್ಯು, ಬಾಲಕೃಷ್ಣ, ಬಾಲಹನುಮ ಮೊದಲಾದ ಪಾತ್ರಗಳನ್ನು ಮಾಡುತ್ತಾ ಬೆಳೆಯಲು ಅವಕಾಶವಾಗಿತ್ತು. ಕೆಲವು ವರ್ಷಗಳ ಬಳಿಕ ತಿರುಗಾಟವನ್ನು ನಿಲ್ಲಿಸಿ ಮೂರು ವರ್ಷ ಮನೆಯಲ್ಲಿದ್ದು ತಮ್ಮ ಕುಲವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಒಂದು ವರ್ಷ ಕಟೀಲು ಮೇಳದಲ್ಲಿ ವ್ಯವಸಾಯ. ಬಳಿಕ 4 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ ತಿರುಗಾಟ.
ಬಳಿಕ ಕಟೀಲು 2ನೇ ಮೇಳದಲ್ಲಿ ಬಲಿಪ ಪ್ರಸಾದ ಭಟ್ಟರ ಭಾಗವತಿಕೆಯಡಿ 2 ವರ್ಷ ವ್ಯವಸಾಯ. ಬಳಿಕ ಕಟೀಲು ಆರನೇ ಮೇಳದಲ್ಲಿ ಎಂಟು ವರ್ಷ ವ್ಯವಸಾಯ.(ಪದ್ಯಾಣ ಗೋವಿಂದ ಭಟ್ ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಭಾಗವತಿಕೆಯಡಿ) ಕಳೆದ ವರ್ಷ ವ್ಯವಸಾಯ ಮಾಡಿದ್ದು ಅಂಡಾಲ ಶ್ರೀ ದೇವಿಪ್ರಸಾದ ಶೆಟ್ರ ಭಾಗವತಿಕೆಯಡಿ ಒಂದನೇ ಮೇಳದಲ್ಲಿ. “ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಗೆ, ಕೇದಗಡಿ ಗುಡ್ಡಪ್ಪ ಗೌಡ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಮೊದಲಾದ ಹಿರಿಯರ ಜತೆ ಸಹಕಲಾವಿದನಾಗಿ ಅಭಿನಯಿಸಿದ್ದು, ಗುಂಡಿಮಜಲು ಶ್ರೀ ಗೋಪಾಲ ಭಟ್ಟರ ಜತೆ ಚಂಡಮುಂಡರು ಮೊದಲಾದ ಜತೆಪಾತ್ರಗಳಲ್ಲಿ ಕಾಣಿಸಿಕೊಂಡದ್ದು ನನ್ನ ಭಾಗ್ಯ. ಅದು ಮರೆಯಲಾಗದ ಅನುಭವ” ಎಂಬುದು ವೆಂಕಟೇಶ ಆಚಾರ್ಯರ ಮನದಾಳದ ಮಾತುಗಳು.
ಕಟೀಲು ಮೂರನೇ ಮೇಳದಲ್ಲಿರುವಾಗ ಶ್ರೀ ವಿನೋದ್ ರೈ ಸೊರಕೆ ಇವರ ನಿರ್ದೇಶನವೂ ಸಿಕ್ಕಿತ್ತು. ಯಕ್ಷಗಾನ ನಾಟ್ಯದ ಬಗೆಗೆ ಮತ್ತು ರಂಗದಲ್ಲಿ ಪಾತ್ರ ನಿರ್ವಹಣೆಯ ಬಗೆಗೆ ಅವರಿಂದ ಸಲಹೆಗಳನ್ನು ಪಡೆದಿದ್ದರು. ಹನುಮಂತ, ಲಕ್ಷ್ಮಣ, ಅಭಿಮನ್ಯು, ಜಯಂತ, ಸಿತಕೇತ, ಶ್ರೀಕೃಷ್ಣ, ಷಣ್ಮುಖ, ಬಬ್ರುವಾಹನ ಮೊದಲಾದುವು ವೆಂಕಟೇಶ ಆಚಾರ್ಯರ ಪ್ರೀತಿಯ ಪಾತ್ರಗಳು. “ವೃತ್ತಿ ಜೀವನದುದ್ದಕ್ಕೂ ಸಹ ಕಲಾವಿದರ ಸಹಕಾರವು ದೊರಕಿದೆ. ಅನೇಕ ಹಿರಿಯ ಕಲಾವಿದರ ಜತೆಗೆ ವ್ಯವಸಾಯ ಮಾಡುವ ಭಾಗ್ಯವು ಸಿಕ್ಕಿದೆ” ಎನ್ನುವ ವೆಂಕಟೇಶ ಆಚಾರ್ಯರು ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ತೃಪ್ತರು.
ಇವರ ಪತ್ನಿ ಶ್ರೀಮತಿ ಸುಧಾ. ಇವರು ಗೃಹಣಿ. (2004ರಲ್ಲಿ ವಿವಾಹ) ಶ್ರೀ ವೆಂಕಟೇಶ್ ಆಚಾರ್ಯ, ಸುಧಾ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಪುನೀತ್ ಆಚಾರ್ಯ. ಪಿಯುಸಿ ವಿದ್ಯಾರ್ಜನೆ ಮಾಡಿ ಪ್ರಸ್ತುತ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ನಲ್ಲಿ ತರಬೇತಿಯನ್ನು ಪಡೆಯುತ್ತಾ ದುಡಿಯುತ್ತಿದ್ದಾರೆ. ಕಿರಿಯ ಪುತ್ರ ಮಾ| ಪ್ರಣೀತ್ ಆಚಾರ್ಯ. ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿ. ಆರನೇ ತರಗತಿಯಲ್ಲಿ ಓದುತ್ತಿದ್ದಾನೆ.
ಮಕ್ಕಳಿಬ್ಬರಿಗೂ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ವೆಂಕಟೇಶ ಆಚಾರ್ಯರು ಮೇಳದ ತಿರುಗಾಟದ ಜತೆಗೆ ಮಿತ್ತೂರು ಎಂಬಲ್ಲಿ ತಮ್ಮ ಕುಲವೃತ್ತಿಯನ್ನೂ ಮಾಡುತ್ತಿದ್ದಾರೆ. (ಕಬ್ಬಿಣದ ಕೆಲಸ) ಮಿತ್ತೂರು ಸಮೀಪದ ಸ್ಥಳದಲ್ಲಿ ಹೊಸ ಮನೆಯನ್ನೂ ನಿರ್ಮಿಸಿದ್ದಾರೆ. ಗೃಹಪ್ರವೇಶದ ಸುದಿನದಂದು ಕಟೀಲು ಮೇಳದ ಬಯಲಾಟವನ್ನು ಸೇವಾರೂಪವಾಗಿ ನಡೆಸಿ ಕೃತಾರ್ಥರಾಗಿದ್ದಾರೆ. ಕಲ್ಲುಗುಂಡಿ ಶ್ರೀ ವೆಂಕಟೇಶ ಆಚಾರ್ಯರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಪುತ್ತೂರು, ಸೆ 8: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2022ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮನ್ವಿತ ಎನ್. ಪಿ (ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾ ದಂಪತಿ ಪುತ್ರಿ) ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 553 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 46928ನೇ ರ್ಯಾಂಕ್, ಕೆಟಗರಿ ವಿಭಾಗದಲ್ಲಿ 18052 ನೇ ರ್ಯಾಂಕ್ ಗಳಿಸಿದ್ದಾರೆ.ಈಕೆ 2021-22 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದರು.
ವಿನೀತ್ ಜೆ (ಪುತ್ತೂರಿನ ಜಯಂತ ಮತ್ತು ಸರೋಜಿನಿ ಎನ್ ದಂಪತಿ ಪುತ್ರ) 548 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 50369ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 22407 ನೇ ರ್ಯಾಂಕ್, ಸಾತ್ವಿಕ್ ಶಿವಾನಂದ್ (ಸುಳ್ಯದ ಶ್ರೀರಾಮ ಪಿ ಸಿ ಮತ್ತು ಶಿಲ್ಪಾ ಪಿ. ಎಸ್ ದಂಪತಿ ಪುತ್ರ) 528 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 63498ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 23754 ನೇ ರ್ಯಾಂಕ್,
ಶ್ರೀನಿಧಿ ಐ (ಕಾಸರಗೊಡಿನ ಪೆರ್ಲದ ಹರೀಶ್ ಐ ಮತ್ತು ಜಯಪ್ರದ ಕೆ ದಂಪತಿ ಪುತ್ರ) 509 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 77394ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 28466 ನೇ ರ್ಯಾಂಕ್, ಸ್ತುತಿ ಎಂ. ಎಸ್ (ಪುತ್ತೂರಿನ ನೆಹರೂ ನಗರದ ಶ್ರೀಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಎಂ ದಂಪತಿ ಪುತ್ರಿ) 488 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 93373ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 33632 ನೇ ರ್ಯಾಂಕ್,
ಶ್ರೇಯಸ್ ಕಮಲ್ 454 ಅಂಕಗಳನ್ನು ಪಡೆದು ಕೆಟಗರಿ ವಿಭಾಗದಲ್ಲಿ 40040 ನೇ ರ್ಯಾಂಕ್, ಕೆ. ಎ. ಅನನ್ಯ 430 ಅಂಕಗಳನ್ನು ಪಡೆದು ಕೆಟಗರಿ ವಿಭಾಗದಲ್ಲಿ 50078 ನೇ ರ್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಮನ್ವಿತ ಎನ್. ಪಿ, ವಿನೀತ್ ಜೆ, ಸಾತ್ವಿಕ್ ಶಿವಾನಂದ್, ಶ್ರೀನಿಧಿ ಐ, ಸ್ತುತಿ ಎಂ. ಎಸ್, ಶ್ರೇಯಸ್ ಕಮಲ್, ಕೆ. ಎ. ಅನನ್ಯ