Monday, March 16, 2026
Home Blog Page 126

ಕಾರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ – ಬಂಧಿತ ಡಿಂಪಲ್ ಲಾಂಬಾಗೆ ಸೆಕ್ಸ್ ರಾಕೆಟ್‌ಗಳ ಸಂಪರ್ಕ – ಮಾಡೆಲಿಂಗ್ ನೆಪದಲ್ಲಿ ಹುಡುಗಿಯರ ಕಳ್ಳಸಾಗಣೆ

0

ಕೊಚ್ಚಿ: ಕೊಚ್ಚಿ ಸೆಕ್ಸ್ ರಾಕೆಟಿಂಗ್‌ನ ಕೇಂದ್ರವಾಗುತ್ತಿದೆ. ಡ್ರಗ್ಸ್, ಡಿಜೆ ಪಾರ್ಟಿಗಳು ಮತ್ತು ಫ್ಯಾಶನ್ ಶೋಗಳ ನೆಪದಲ್ಲಿ ಕೊಚ್ಚಿಯಲ್ಲಿ ಲೈಂಗಿಕ ದಂಧೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಹುಡುಗಿಯರನ್ನು ಮಾಡೆಲ್‌ಗಳಾಗಿ ಸೆಕ್ಸ್‌ ರಾಕೆಟ್‌ಗಳು ಮಾರಾಟ ಮಾಡುತ್ತಿವೆ. ಕೊಚ್ಚಿಯಲ್ಲಿ 19 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆಯ ತನಿಖೆ ವೇಳೆ ಪೊಲೀಸರಿಗೆ ಇಂತಹ ಗ್ಯಾಂಗ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಬಂಧಿತರು ಅಂತಹ ಗ್ಯಾಂಗ್‌ಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ನಂಬಲಾಗಿದೆ.

ಬಂಧಿತರ ಮೊಬೈಲ್ ಫೋನ್‌ಗಳಿಂದ ಈ ಬಗ್ಗೆ ಮಹತ್ವದ ಮಾಹಿತಿ ಲಭಿಸಿದೆ ಎಂದು ವರದಿಯಾಗಿದೆ. ಆದರೆ, ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ಸಿದ್ಧರಿಲ್ಲ. ಸೆಕ್ಸ್ ರಾಕೆಟ್ ಗ್ಯಾಂಗ್‌ಗಳು ಮುಖ್ಯವಾಗಿ ಇತರ ರಾಜ್ಯಗಳ ಹುಡುಗಿಯರನ್ನು ಸಾಗಿಸುತ್ತವೆ. ಅಲ್ಲದೇ ಹೆಚ್ಚಿನ ಮಹಿಳೆಯರನ್ನು ವಂಚಿಸುತ್ತಿದ್ದಾರೆ.

ಮಾಡೆಲಿಂಗ್‌ನಲ್ಲಿ ಹುಡುಗಿಯರಿಗೆ ದೊಡ್ಡ ಅವಕಾಶಗಳ ಭರವಸೆ ಇದೆ ಎಂದು ನಂಬಿಸುತ್ತಾರೆ. ಅದಕ್ಕೆ ಆಕರ್ಷಿತರಾಗಿ ಬರುವ ಹುಡುಗಿಯರನ್ನು ಡ್ರಗ್ಸ್, ಡಿಜೆ ಪಾರ್ಟಿಗಳಿಗೆ ಕರೆದೊಯ್ದು ನಂತರ ಕಂಠಮಟ್ಟ ಕುಡಿಸಿ ಲೈಂಗಿಕ ದಂಧೆಗೆ ಒಪ್ಪಿಸುತ್ತಾರೆ.

ಮೊನ್ನೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಲ್ಲಿ ಒಬ್ಬ ಮಹಿಳೆ ಡಿಂಪಲ್ ಲಾಂಬಾ ಅಲಿಯಾಸ್ ಡಾಲಿ ಎಂದು ಪೊಲೀಸರಿಗೆ ಈ ಹಿಂದೆ ಮಾಹಿತಿ ಸಿಕ್ಕಿತ್ತು. ಡಿಂಪಲ್ ಕೊಚ್ಚಿಯ ವಿವಿಧೆಡೆ ಡ್ರಗ್ ಪಾರ್ಟಿ ನಡೆಸುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಕೊಚ್ಚಿಯಲ್ಲಿ ನಡೆದ ಫ್ಯಾಷನ್ ಶೋಗಳಲ್ಲೂ ಭಾಗವಹಿಸಿದ್ದರು. ಕೆಲವು ಫ್ಯಾಶನ್ ಶೋಗಳಲ್ಲಿ ಡಿಂಪಲ್ ಚಿತ್ರದೊಂದಿಗೆ ಜಾಹೀರಾತು ನೀಡಲಾಯಿತು. ಜನರನ್ನು ಒಟ್ಟುಗೂಡಿಸಲು ಇದನ್ನು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಕೊಡುಂಗಲ್ಲೂರು ಮೂಲದ ವಿವೇಕ್ (26), ನಿತಿನ್ (25) ಮತ್ತು ಸುಧೀಪ್ (27) ರನ್ನು ಡಿಂಪಲ್‌ಗೆ ಈಗಾಗಲೇ ತಿಳಿದಿತ್ತು. ವಿವೇಕ್ ಮತ್ತು ಡಿಂಪಲ್ ಒಟ್ಟಿಗೆ ಪ್ರಯಾಣಿಸಿದ್ದಕ್ಕೆ ಸಾಕ್ಷಿಯೂ ಸಿಕ್ಕಿದೆ.

ಪಾರ್ಟಿ ವೇಳೆ ಡಿಂಪಲ್ ತನ್ನನ್ನು ಬಲವಂತವಾಗಿ ಪಾರ್ಟಿಗೆ ಕರೆದೊಯ್ದು ಬಿಯರ್ ನಲ್ಲಿ ಪೌಡರ್ ಬೆರೆಸಿದ್ದಳು ಎಂದು ರೂಪದರ್ಶಿ ಹೇಳಿಕೆ ನೀಡಿದ್ದರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಮಾತ್ರ ಸ್ಪಷ್ಟತೆ ಸಿಗಲಿದೆ. ನಾಲ್ವರು ಆರೋಪಿಗಳನ್ನು ಕನಿಷ್ಠ ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿವರವಾಗಿ ವಿಚಾರಣೆ ನಡೆಸಲಾಗುವುದು ಎಂದು ತನಿಖಾ ತಂಡ ಈಗಾಗಲೇ ನಿರ್ಧರಿಸಿದೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳಿಗೆ  ಜಿಲ್ಲಾ ಮಟ್ಟದಲ್ಲಿ ಬಹುಮಾನ 

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಕಾರ್ಮೆಲ್ ಕಾನ್ವೆಂಟ್ ಮಾಡಂಕಾಪು, ಬಂಟ್ವಾಳ ತಾಲೂಕು ಇಲ್ಲಿ  10 ನವೆಂಬರ್ 2022ರಂದು ನಡೆದ  ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಗುಂಪು ಸ್ಪರ್ಧೆಯಲ್ಲಿ,

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ  ಅನ್ವಿತ್ ಯನ್ (ಶ್ರೀ ಶ್ರೀಪತಿ ಎನ್ ಮತ್ತು   ವಿದ್ಯಾಲಕ್ಷ್ಮಿ ದಂಪತಿ ಪುತ್ರ) ಹಾಗೂ ಸಮರ್ಥ ರಾಮ ರೈ (ಶ್ರೀ ಸತೀಶ್ ಕುಮಾರ್ ರೈ ಮತ್ತು ಪ್ರಗತಿ ರೈ ದಂಪತಿ ಪುತ್ರ)

ಇವರ ತಂಡ ಭಾಗವಹಿಸಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ರನ್ನರ್-ಅಪ್ ಪ್ರಶಸ್ತಿ

0

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಅತಿಥೇಯ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ತಂಡವು ರನ್ನರ್-ಅಪ್ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.


ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ 18 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ತಂಡದ ವಿರುದ್ದ ಹೋರಾಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವಿಜೇತರಿಗೆ ಬಹುಮಾನ ವಿತರಿಸಿದರು.


ವಿಜೇತ ತಂಡಗಳು ನವೆಂಬರ್ 21 ಮತ್ತು 22 ರಂದು ಎಐಟಿ ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸುವುದಕ್ಕೆ ಅರ್ಹತೆಯನ್ನು ಗಳಿಸಿಕೊಂಡಿವೆ.


ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ತರಬೇತಿಯನ್ನು ನೀಡಿದ್ದಾರೆ ಎಂದು ಪ್ರಂಶುಪಾಲರು ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಜತ್‌ ಆರ್‌.ಭಟ್ ಗೆ ಕಂಚಿನ ಪದಕ

0


ಪುತ್ತೂರು, ನ. 21: ಹರಿಯಾಣದ ಕುರುಕ್ಷೇತ್ರದಲ್ಲಿ ನವೆಂಬರ್ 19 ರಿಂದ 23ರವರೆಗೆ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್‌ ಆರ್‌.ಭಟ್‌ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಈತನು ವಿಟ್ಲದ ರಾಜೇಶ್ ಭಟ್ ಮತ್ತು ರಾಧಿಕಾ ಭಟ್‌ ದಂಪತಿ ಪುತ್ರ.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್‌ಇವರ ನೇತೃತ್ವದಲ್ಲಿ ಈತನು ತರಬೇತಿಯನ್ನು ಪಡೆದಿರುತ್ತಾನೆ.

ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಮಂಗಳೂರಿನ ಆಟೋರಿಕ್ಷಾ ಸ್ಫೋಟದ ಆರೋಪಿ ಶಾರಿಕ್ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ – ಗುರುತು ಪತ್ತೆ ಹಚ್ಚಲು ಆಗಮಿಸಿದ ಆತನ ಕುಟುಂಬ

0

ಮಂಗಳೂರಿನ ಆಟೋರಿಕ್ಷಾ ಸ್ಫೋಟದ ಆರೋಪಿ ಶಾರಿಕ್ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಗುರುತು ಪತ್ತೆ ಹಚ್ಚಲು ಮತ್ತು ಭೇಟಿಗಾಗಿ ಆತನ ಕುಟುಂಬದವರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳ ಗುರುತು ಪತ್ತೆ ಹಚ್ಚಲು ಭೇಟಿಗೆ ಅವರು ಬಂದಿದ್ದಾರೆ. ಭಯೋತ್ಪಾದನೆಯಂತಹಾ ಕೃತ್ಯಗಳ ಆರೋಪಿಗಳ ಪರಿಚಯ ಮತ್ತು ಮಾಧ್ಯಮದವರಿಗೆ ಮತ್ತು ಜನರಿಗೆ ಆಗಬೇಕಾದದ್ದು ಅತೀ ಅವಶ್ಯ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.

ಅಂತಹಾ ಕ್ರಿಮನಲ್ ಗಳ ಜೊತೆ ಜೀವಿಸುತ್ತಿರುವ ಅವರಿಗೆ ಆರೋಪಿಯ ಕೃತ್ಯಗಳ ಬಗ್ಗೆ ಸ್ವಲ್ಪವಾದರೂ ಅರಿವಿಲ್ಲದೆ ಇರುತ್ತದೆಯೇ?

ಆದುದರಿಂದ ಭವಿಷ್ಯದಲ್ಲಿ ಆಗಬಹುದಾದ ಸಂಭಾವ್ಯ ಅಪಾಯಗಳನ್ನು ತಪ್ಪಿಸಲು ಅವರನ್ನು ಮತ್ತು ಅವರ ಕೆಲವೊಂದು ಮಾಹಿತಿಗಳು ಜನರಿಗೆ ತಿಳಿಯಬೇಕಾದುದು ಅವಶ್ಯ ಎಂದು ಜನರು ಹೇಳಿಕೊಳ್ಳುವುತ್ತಿರುವುದು ಕೇಳಿಬರುತ್ತದೆ. 

ಪುತ್ತೂರಿನಲ್ಲಿ ಬ್ರಹ್ಮೈಕ್ಯ ಎಡನೀರು ಶ್ರೀಗಳ ಸಂಸ್ಮರಣೆ ಮತ್ತು ತಾಳಮದ್ದಳೆ ‘ಸುಭದ್ರಾ ಕಲ್ಯಾಣ’

ಇಂದು ಅಪರಾಹ್ನ 1.30 ಘಂಟೆಗೆ ಪುತ್ತೂರಿನ ಕಲ್ಲೇಗದ ಭಾರತ್ ಮಾತಾ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಪ್ರತಿಷ್ಠಾನದ ಪುತ್ತೂರು ಘಟಕದ ಪದಗ್ರಹಣ ಸಮಾರಂಭದ ಪ್ರಯುಕ್ತ ಕೀರ್ತಿಶೇಷ ಬ್ರಹ್ಮೈಕ್ಯ ಶ್ರೀ ಶ್ರೀ ಎಡನೀರು ಕೇಶವಾನಂದ ಸ್ವಾಮೀಜಿಯವರ ಸಂಸ್ಮರಣೆ ನಡೆಯಲಿದೆ.

ಬಳಿಕ ನುರಿತ ಕಲಾವಿದರ ಕೂಡುವಿಕೆಯಿಂದ ‘ಸುಭದ್ರಾ ಕಲ್ಯಾಣ ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಮೇಲಿನ ಚಿತ್ರ ಚಿತ್ರವನ್ನು ನೋಡಿ.

ಕಣ್ಣೀರ ಧಾರೆಯೊಂದಿಗೆ ತನ್ನ ಜೀವದ ಗೆಳತಿಯ ಮೃತದೇಹವನ್ನು ಮದುವೆಯಾದ ಯುವಕ – ಜೀವನಪರ್ಯಂತ ಬೇರೆ ಮದುವೆಯಾಗುವುದಿಲ್ಲವೆಂಬ ಪ್ರತಿಜ್ಞೆ, ಅಸ್ಸಾಮಿನಲ್ಲಿ ಹೃದಯವಿದ್ರಾವಕ ಸನ್ನಿವೇಶ 

0

ಜೀವನದಲ್ಲಿ ನಮಗೆ ಅಳು ತರಿಸುವ ಎಷ್ಟೋ ಘಟನೆಗಳಿರಬಹುದು. ಎಲ್ಲವೂ ಒಂದೊಕ್ಕೊಂದು ಭಿನ್ನವಾಗಿರುತ್ತದೆ. ಅಂತಹುದೇ ಕಣ್ಣೀರು ತರಿಸುವ ಘಟನೆಯೊಂದು ಇಲ್ಲಿ ನಡೆದಿದೆ. ಅಸ್ಸಾಂನಲ್ಲಿ ಮೃತ ಗೆಳತಿಯನ್ನು ಮದುವೆಯಾದ ಆಕೆಯ ಪ್ರಿಯತಮ ಯುವಕ ತನ್ನ ಜೀವನದುದ್ದಕ್ಕೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾನೆ.

ಆ ವ್ಯಕ್ತಿ ತನ್ನ ಮೃತ ಗೆಳತಿಯನ್ನು ಆಕೆಯ ಅಂತ್ಯಕ್ರಿಯೆಯಲ್ಲಿ ಮದುವೆಯಾದನು ಮತ್ತು ತನ್ನ ಜೀವನದುದ್ದಕ್ಕೂ ಒಬ್ಬಂಟಿಯಾಗಿರುತ್ತೇನೆ ಎಂದು ಆಕೆಗೆ ವಾಗ್ದಾನ ಮಾಡಿದನು. ಈ ಮೂಲಕ ಪ್ರೀತಿಗೆ ಯಾವುದೇ ಪರಿಮಿತಿಗಳಿಲ್ಲ ಎಂದು ತೋರಿಸಿಕೊಡುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಯುವಕನ ಹೃದಯ ವಿದ್ರಾವಕ ವಿವಾಹವನ್ನು ಚಿತ್ರಿಸಿದೆ.

ಅಸ್ಸಾಂನ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಶುಕ್ರವಾರ ನಿಧನರಾದ ತನ್ನ ಬಹುಕಾಲದ ಗೆಳತಿಯನ್ನು ಯುವಕನೊಬ್ಬನು ಮದುವೆಯಾಗಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಮೃತದೇಹದ ಮುಂದೆ ಮತ್ತೆ ಮದುವೆಯಾಗುವುದಿಲ್ಲ ಎಂದು ಭರವಸೆಯನ್ನೂ ನೀಡಿದ್ದರು.

ವೀಡಿಯೋದಲ್ಲಿರುವ ಯುವಕನನ್ನು ಬಿಟುಪನ್ ತಮುಲಿ ಎಂದು ಗುರುತಿಸಲಾಗಿದೆ, ಒಬ್ಬ ವ್ಯಕ್ತಿ ತನ್ನ ನವವಿವಾಹಿತ ವಧುವಿಗೆ ಅದೇ ವಾಟ್‌ನಲ್ಲಿ ಹುಡುಗಿಯ ಕೆನ್ನೆ ಮತ್ತು ಹಣೆಯ ಮೇಲೆ ಸಿಂಧೂರವನ್ನು ಹಚ್ಚುತ್ತಿರುವುದನ್ನು ಕಾಣಬಹುದು. 27ರ ಹರೆಯದ ಯುವಕ ಕೊರಳಿಗೆ ಬಿಳಿ ಮಾಲೆ ಹಾಕಿದಾಗ ಬಾಲಕಿ ನೆಲದ ಮೇಲೆ ಮಲಗಿದ್ದಳು. ನಂತರ ಯುವಕನು ಮತ್ತೊಂದು ಹಾರವನ್ನು ತೆಗೆದುಕೊಂಡನು. ಅವಳ ಹಲವಾರು ಭಾಗಗಳನ್ನು ಮುಟ್ಟಿದನು ಮತ್ತು ಮದುವೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಆಚರಣೆ ನಂತರ ಅದನ್ನು ಧರಿಸಿದನು.

ಮೋರಿಗಾಂವ್ ನಿವಾಸಿ ಬಿಟುಪನ್ ಮತ್ತು ಚಪರ್ಮುಖ್ ಕೊಸುವಾ ಗ್ರಾಮದ ಪ್ರಾರ್ಥನಾ ಬೋರಾ ಬಹುಕಾಲದಿಂದ ಪ್ರೇಮಿಗಳಾಗಿದ್ದರು ಎಂದು ಕುಟುಂಬ ತಿಳಿಸಿದೆ. ಈ ಸಂಬಂಧ ಮತ್ತು ಮದುವೆಯ ಯೋಜನೆ ಎರಡೂ ಕುಟುಂಬಗಳಿಗೆ ತಿಳಿದಿತ್ತು.

“ಕೆಲವು ದಿನಗಳ ಹಿಂದೆ ಪಾರ್ಥನಾ ಹಠಾತ್ತನೆ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಗುವಾಹಟಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾವು ಎಷ್ಟೇ ಪ್ರಯತ್ನಿಸಿದರೂ, ನಾವು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರು ಶುಕ್ರವಾರ ರಾತ್ರಿ ನಿಧನರಾದರು” ಎಂದು ಆಕೆಯ ಸಂಬಂಧಿಕರಲ್ಲಿ ಒಬ್ಬರಾದ ಸುಭೋನ್ ಬೋರಾ ಹೇಳಿದ್ದಾರೆ.

ಆಘಾತಕ್ಕೊಳಗಾಗಿದ್ದರೂ ಆಕೆಯ ಪ್ರೇಮಿ ಬಿಪುಟಾನ್ ಮದುವೆಯ ಸಾಮಗ್ರಿಗಳನ್ನು ಅಂತ್ಯಕ್ರಿಯೆಗೆ ಕೊಂಡೊಯ್ದರು. “ಬಿಪುತಾನ್ ಬಂದಾಗ, ಅವನು ಅವಳನ್ನು ಮದುವೆಯಾಗುವುದಾಗಿ ಹೇಳಿದನು. ಇದು ನಮ್ಮ ಕಲ್ಪನೆಗೂ ಮೀರಿದ್ದರಿಂದ ನಾವು ಮೂಕರಾಗಿದ್ದೇವೆ. ಯಾರಾದರೂ ನನ್ನ ಸಹೋದರಿಯನ್ನು ಇಷ್ಟು ಆಳವಾಗಿ ಪ್ರೀತಿಸುತ್ತಾರೆ ಎಂದು ನಾವು ಕನಸು ಕಾಣಲಿಲ್ಲ. ನಾವು ಅವನನ್ನು ತಡೆಯಲು ಪ್ರಯತ್ನಿಸಲು ಸಹ ಸಾಧ್ಯವಾಗಲಿಲ್ಲ. ” ಎಂದು ಪ್ರಾರ್ಥನಾ ಅವರ ಸೋದರ ಸಂಬಂಧಿ ಸುಭೋನ್ ಹೇಳಿದ್ದಾರೆ.

“ನಾವು ಅವನು ಅಳುತ್ತಾ ಎಲ್ಲಾ ಸಮಾರಂಭಗಳಲ್ಲಿ ತೊಡಗಿರುವುದನ್ನು ನೋಡಿದೆವು. ನನ್ನ ಸಹೋದರಿ ನಿಜವಾಗಿಯೂ ಅದೃಷ್ಟಶಾಲಿ. ಅವಳು ಬಿಪುತಾನನ್ನು ಮದುವೆಯಾಗಲು ಬಯಸಿದ್ದಳು, ಮತ್ತು ಆ ವ್ಯಕ್ತಿ ಅವಳ ಅಂತಿಮ ಆಸೆಯನ್ನು ಪೂರೈಸಿದನು. ಇನ್ನೇನು ಹೇಳಬೇಕು?” ಪ್ರೀತಿಯ ಭಾವವು ಇಡೀ ಕುಟುಂಬದ ಮನಸ್ಸನ್ನು ಆಳವಾಗಿ ತಟ್ಟಿದೆ ಎಂದು ಸುಭೋನ್ ಹೇಳಿದರು.

56 ವರ್ಷದ ಮಹಿಳೆ ಸೀರೆ ಧರಿಸಿ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವ ದೃಶ್ಯ, ಸಾರ್ವಜನಿಕರ ವ್ಯಾಪಕ ಪ್ರಶಂಸೆ – ವೀಡಿಯೊ ವೈರಲ್

0

56 ವರ್ಷದ ಮಹಿಳೆ ಸೀರೆ ಧರಿಸಿ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಆರೋಗ್ಯದ ಸವಾಲುಗಳ ನಡುವೆಯೂ ತನ್ನನ್ನು ತಾನು ಹೇಗೆ ಫಿಟ್ ಆಗಿಟ್ಟುಕೊಳ್ಳುತ್ತಾಳೆ ಎಂಬುದರ ಕುರಿತು ತನ್ನ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ.

ಹ್ಯೂಮನ್ಸ್ ಆಫ್ ಮದ್ರಾಸ್ ಮತ್ತು ಮದ್ರಾಸ್ ಬಾರ್ಬೆಲ್ ಜಂಟಿಯಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, 56 ವರ್ಷದ ಮಹಿಳೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಅವಳು ಭಾರವಾದ ತೂಕ ಮತ್ತು ಡಂಬ್ಬೆಲ್ಸ್ ಮತ್ತು ಇತರ ಹಲವಾರು ಜಿಮ್ ಯಂತ್ರಗಳು ಮತ್ತು ಸಲಕರಣೆಗಳನ್ನು ಎತ್ತುವುದನ್ನು ಸಹ ಕಾಣಬಹುದು,

ಇವೆಲ್ಲವನ್ನೂ ಆಕೆ ಮಾಡುತ್ತಿರುವುದು ಸೀರೆಯನ್ನು ಧರಿಸಿದಾಗ ಎಂಬುದು ಇಲ್ಲಿ ಪ್ರಮುಖವಾದ ಅಂಶ. ಮಹಿಳೆ ತನ್ನ ಸೊಸೆಯೊಂದಿಗೆ ವ್ಯಾಯಾಮ ಮಾಡುತ್ತಿದ್ದಾಳೆ. ವೀಡಿಯೊದ ಕೊನೆಯಲ್ಲಿ, ಜಿಮ್‌ನಲ್ಲಿರುವ ಇತರ ಮಹಿಳೆಯರೊಂದಿಗೆ ಸಿಬ್ಬಂದಿ ಸದಸ್ಯರು ಅವಳನ್ನು ಗೌರವಿಸುತ್ತಾರೆ.

“ನನಗೆ ಈಗ 56 ವರ್ಷ ಮತ್ತು ಇನ್ನೂ ವರ್ಕ್‌ಔಟ್ ಮಾಡುವುದನ್ನು ಮುಂದುವರಿಸಿದೆ. ನಿಮ್ಮ ಉಡುಗೆಯು ಸಹ ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡುವುದನ್ನು ತಡೆಯಬಾರದು! ನನ್ನ ಸೊಸೆ ಮತ್ತು ನಾನು ನಿಯಮಿತವಾಗಿ ವ್ಯಾಯಾಮ ಮಾಡುತ್ತೇವೆ. ನಾನು ಮೊದಲ ಬಾರಿಗೆ ಜಿಮ್‌ಗೆ ಬಂದಾಗ ನನಗೆ 52 ವರ್ಷ. ನಾನು ತೀವ್ರವಾದ ಮೊಣಕಾಲು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದೆ,

“ನನ್ನ ಮಗ ಚಿಕಿತ್ಸೆಯ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದನು ಮತ್ತು ವ್ಯಾಯಾಮವನ್ನು ಪ್ರಾರಂಭಿಸಲು ನನಗೆ ಸೂಚಿಸಿದನು. ಅವನು ಮದ್ರಾಸ್ ಬಾರ್ಬೆಲ್ ಜಿಮ್ ಅನ್ನು ಹೊಂದಿದ್ದಾನೆ. ನಾನು ನನ್ನ ಸೊಸೆಯೊಂದಿಗೆ ಪವರ್ಲಿಫ್ಟಿಂಗ್, ಸ್ಕ್ವಾಟ್ಗಳು ಇತ್ಯಾದಿಗಳನ್ನು ಮಾಡುತ್ತೇನೆ. ಹೌದು, ಅದು ನನ್ನ ನೋವನ್ನು ಗುಣಪಡಿಸಿತು. ನಾವು, ಕುಟುಂಬವಾಗಿ, ನಮ್ಮ ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇರಿಸಿತು ಎಂದು ಅವರು ಹೇಳಿದ್ದಾರೆ.

ಹಂಚಿಕೊಂಡ ನಂತರ, ವೀಡಿಯೊವನ್ನು 1.1 ಮಿಲಿಯನ್ ವೀಕ್ಷಣೆಗಳು ಮತ್ತು 72,000 ಲೈಕ್‌ಗಳನ್ನು ಸ್ವೀಕರಿಸಲಾಗಿದೆ.

ನಾಳೆ ಪಾವಂಜೆ ಮೇಳದವರಿಂದ ‘ನಾಗ ಸಂಜೀವನ’ – ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಯಕ್ಷಗಾನ 

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ನಾಳೆ ಪಾವಂಜೆ ಮೇಳದವರಿಂದ ‘ನಾಗ ಸಂಜೀವನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ನಾಳೆ ದಿನಾಂಕ 20.11.2022 ರ ಆದಿತ್ಯವಾರ ಸಂಜೆ 6 ಘಂಟೆಯಿಂದ ಈ ಪ್ರದರ್ಶನ ನಡೆಯಲಿದೆ. ಅದಕ್ಕೂ ಮೊದಲು ಅಪರಾಹ್ನ ಘಂಟೆ 3ರಿಂದ ಯಕ್ಷಧ್ರುವ ಮಕ್ಕಳ ಕಲಾತಂಡ ಪುಂಜಾಲಕಟ್ಟೆ ಇವರಿಂದ ಶ್ರೀರಾಮಾಶ್ವಮೇಧ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ ಘಂಟೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ವಿವರಗಳಿಗೆ ಆಮಂತ್ರಣ ಪತ್ರಿಕೆಯನ್ನು ನೋಡಿ. 

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ ಒಟ್ಟು 13 ಮಂದಿ  ಕ್ರೀಡಾಪಟುಗಳು 6 ಪ್ರಥಮ ಸ್ಥಾನಗಳೊಂದಿಗೆ  ರಾಜ್ಯಮಟ್ಟಕ್ಕೆ ಆಯ್ಕೆ

0

ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು, ಸರಕಾರಿ ಪ್ರೌಢಶಾಲೆ ಅತ್ತಾವರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನವಂಬರ್ 15 ಮತ್ತು 16 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ

ತೆಂಕಿಲ ವಿವೇಕಾನಂದ ಆಂಗ್ಲ  ಮಾಧ್ಯಮ ಶಾಲೆಯ 7ನೇ ತರಗತಿಯ ದಿವಿಜ್ಞಾ (ಕಲ್ಲರ್ಪೆ ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿ ಪುತ್ರಿ) 100ಮೀ ಪ್ರಥಮ, 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಕೃತಿ.ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ.ಎ ದಂಪತಿ ಪುತ್ರಿ) 400 ಮೀ ಪ್ರಥಮ, 600ಮೀ ಪ್ರಥಮ, 200ಮೀ ತೃತೀಯ, 4×100 ಮೀ ರಿಲೇ ಪ್ರಥಮ,

8ನೇ ತರಗತಿಯ ಡಿಂಪಲ್ ಶೆಟ್ಟಿ(ಮೇರ್ಲ ಉದಯ ಶೆಟ್ಟಿ ಹಾಗೂ ಸುನೀತಾ ಶೆಟ್ಟಿ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ,  100ಮೀ ದ್ವಿತೀಯ, 8ನೇ ತರಗತಿಯ ಅಮೃತಾ. ಬಿ.ಎ (ಶಿಕ್ಷಕ ಬನ್ನೂರು ಪಟ್ಟೆ ಅಮರನಾಥ್ ಹಾಗೂ ಶಿಕ್ಷಕಿ ಲತಾ ಕುಮಾರಿ ದಂಪತಿ ಪುತ್ರಿ) 4×100ಮೀ ರಿಲೇ ಪ್ರಥಮ,  8ನೇ ತರಗತಿಯ ಶ್ರೀವರ್ಣಾ (ಪಾಲೆತ್ತಡಿ ಧರ್ಣಪ್ಪ ಗೌಡ ಮತ್ತು ಮಮತಾ.ಪಿ ದಂಪತಿ ಪುತ್ರಿ) 4×100ಮೀ ರಿಲೇ ಪ್ರಥಮ,

17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ ಹಾಗೂ ಜಯಲತಾ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ,100ಮೀ ತೃತೀಯ,  10ನೇ ತರಗತಿಯ ಬಿ.ಲಿಖಿತಾ ರೈ (ಬಿ.ಜಗನ್ನಾಥ ರೈ ಮತ್ತು ಗೀತಾ.ಜೆ.ರೈ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ, 9ನೇ ತರಗತಿಯ ಸಾನ್ವಿ ಎಸ್.ಪಿ (ಸೇನಾ ಯೋಧ ಪಳಂಬೆ ಸುಂದರ ಪೂಜಾರಿ ಹಾಗೂ ಶಿಕ್ಷಕಿ ಭವಿತಾ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ, 9ನೇ ತರಗತಿಯ ರಿದ್ಧಿ ಶೆಟ್ಟಿ (ಚಿದಾನಂದ ಹಾಗೂ ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ,

14ರ ವಯೋಮಾನದ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಮನ್ವಿತ್ ನೆಕ್ಕರೆ (ಉಮೇಶ್ ನೆಕ್ಕರೆ ಮತ್ತು ಕವಿತಾ ನೆಕ್ಕರೆ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 80 ಮೀ ಹರ್ಡಲ್ಸ್ ತೃತೀಯ, 8ನೇ ತರಗತಿಯ ಕೃಪಾಲ್.ಪಿ.ಕೆ (ಕೆಮ್ಮಾಯಿ ಪ್ರಕಾಶ್ ಮತ್ತು ಸುನೀತಾ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 8ನೇ ತರಗತಿಯ ಮನ್ವಿತ್ ರೈ (ಮಂಜುನಾಥ್ ರೈ ಹಾಗೂ ಶಿಕ್ಷಕಿ ಪ್ರವೀಣಾ ರೈ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 8ನೇ ತರಗತಿಯ ಮನೋಹರ್ (ಪರ್ಲಡ್ಕ ಮಿಶ್ರಾ ರಾಮ್ ಹಾಗೂ ಲಕ್ಷ್ಮೀ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ ಬಹುಮಾನ ಪಡೆದಿರುತ್ತಾರೆ.

ಅದೇ ರೀತಿ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೃತಿ. ಕೆ ಪುತ್ತೂರು ತಾಲೂಕಿನಲ್ಲಿ ಏಕೈಕ  ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ. ಅಲ್ಲದೇ 14ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನೂ ಕೂಡ ಗೆದ್ದುಕೊಂಡ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 13 ಮಂದಿ  ಕ್ರೀಡಾಪಟುಗಳು 6 ಪ್ರಥಮ ಸ್ಥಾನಗಳೊಂದಿಗೆ  ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ, ಶ್ರೀಮತಿ ನಮಿತಾ, ಶ್ರೀ ದೀಪಕ್, ಶ್ರೀಮತಿ ರಶ್ಮಿ, ಶ್ರೀ ಪವನ್ ಕುಮಾರ್ ಇವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ಇವರುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.