ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಪುನರಾಯ್ಕೆ
ಉಡುಪಿ : ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 48ನೆಯ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಜುಲೈ 10, 2023ರಂದು ಸಭೆ ನಡೆಸಿ ಎಂ. ಗಂಗಾಧರ ರಾವ್ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.
2023-24ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು. ಉಪಾಧ್ಯಕ್ಷರು : ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ,
ಕಾರ್ಯದರ್ಶಿ: ಮುರಲಿ ಕಡೆಕಾರ್, ಜೊತೆಕಾರ್ಯದರ್ಶಿಗಳು : ನಾರಾಯಣ ಎಂ.ಹೆಗಡೆ, ಎಚ್.ಎನ್. ಶೃಂಗೇಶ್ವರ, ಕೋಶಾಧಿಕಾರಿ : ಪ್ರೊ. ಕೆ. ಸದಾಶಿವ ರಾವ್,
ಸದಸ್ಯರು : ಕೆ. ಗಣೇಶ್ ರಾವ್, ಡಾ. ತಲ್ಲೂರು ಶಿವರಾಮ ಶೆಟ್ಟಿ, ಪ್ರೊ. ಎಂ. ಎಲ್. ಸಾಮಗ, ಎಸ್. ಗಣರಾಜ್ ಭಟ್, ಬಿ. ಭುವನಪ್ರಸಾದ್ ಹೆಗ್ಡೆ, ಶ್ರೀಧರ ರಾವ್, ಅನಂತರಾಜ ಉಪಾಧ್ಯ, ಎಚ್. ಎನ್. ವೆಂಕಟೇಶ್, ವಿಜಯ್ ಕುಮಾರ್ ಮುದ್ರಾಡಿ, ಎ. ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ವಿದ್ಯಾಪ್ರಸಾದ್, ಅಶೋಕ್ ಎಂ, ದಿನೇಶ್ ಪಿ. ಪೂಜಾರಿ, ಡಾ. ರಾಜೇಶ್ ನಾವಡ, ಮಂಜುನಾಥ ಹೆಬ್ಬಾರ್, ಸಂತೋಷ್ ಕುಮಾರ್ ಶೆಟ್ಟಿ.
ಆಹ್ವಾನಿತರು : ಕೆ. ಆನಂದ ಶೆಟ್ಟಿ, ಶಿವರಾಮ ಭಟ್, ಗಣೇಶ್ ಬ್ರಹ್ಮಾವರ, ಕೃಷ್ಣಮೂರ್ತಿ ಭಟ್, ಡಾ. ಶೈಲಜಾ, ಕಿಶೋರ್ ಸಿ. ಉದ್ಯಾವರ, ರಮೇಶ್ ರಾವ್, ಡಾ. ಪ್ರಥ್ವಿರಾಜ್ ಕವತ್ತಾರ್, ಗಣೇಶ ರಾವ್ ಎಲ್ಲೂರು, ರಾಜೀವಿ, ನಾಗರಾಜ ಹೆಗಡೆ, ರಮಾನಾಥ ವಿ. ಶಾನ್ಭಾಗ್, ಸುದರ್ಶನ ಬಾಯರಿ, ಪ್ರಸಾದ್ ರಾವ್, ವಿಶ್ವನಾಥ.
” ಸ್ವಸ್ತಿಶ್ರೀ ” ಕಲಾ ಪ್ರತಿಷ್ಟಾನ ಎಡನಾಡು – ಕುಂಬಳೆ : 671 321, ಇವರು ದಿನಾಂಕ 15-06-2023 ಗುರುವಾರ ರಾತ್ರಿ ಘ೦ಟೆ 8 ರಿಂದ ಶ್ರೀ ಶಂಕರ ರೈ ಮಾಸ್ಟರ್ ನೇತೃತ್ವದಲ್ಲಿ ಯಕ್ಷಗಾನ ಕಲಾವಿದ, ಯಕ್ಷಗುರು ಶ್ರೀ ಶಿವಶಂಕರ ಭಟ್ ದಿವಾಣ ನಿರ್ಧೇಶನದಲ್ಲಿ ಕೇರಳದ ಸಾಂಸ್ಕೃತಿಕ ರಾಜದಾನಿ ತ್ರಿಶೂರ್ ನ ಭಾರತ್ ಭವನದಲ್ಲಿ ನಡೆಯಲಿದೆ.
ಯಕ್ಷಗಾನ ವಾಲ್ಮೀಕಿ, ಕುಂಬಳೆ ಪಾರ್ತಿಸುಬ್ಬ ವಿರಚತ ʼಪಂಚವಟಿʼ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ
ಸ್ಥಳ – ಕೇರಳದ ಸಾಂಸ್ಕೃತಿಕ ರಾಜದಾನಿ ತ್ರಿಶೂರ್ ನ ಭಾರತ್ ಭವನ: ರಿಮೆಂಬರ್ರೆನ್ಸ್ ತಿಯೇಟರ್ ಗ್ರೂಪ್ ‘ ಜೊಸ್ ಚಿರಮ್ಮಲ್ ನಾಟಕ ದ್ವೀಪ್ ‘ಮೋಸ್ಕೋ ನಗರ್, ತೈಕಾಟು ಷೇರಿ, ವಲ್ಲಾಚಿರ (ತ್ರಿಶೂರ್ )
ಹಿಮ್ಮೇಳ : ಭಾಗವತರು: ಶ್ರೀ ಸಚಿನ್ ಶೆಟ್ಟಿ ಕುದುರೆಪ್ಪಾಡಿ, ಚೆಂಡೆ ಮತ್ತು ಮದ್ದಳೆ ವಾದಕರಾಗಿ: ಶ್ರೀ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಮತ್ತುಶ್ರೀ ಶ್ರೀ ಸ್ಕಂದ ದಿವಾಣ ಪಾತ್ರ ಪರಿಚಯ : ಶ್ರೀರಾಮ – ಶ್ರೀ ನವೀನಚಂದ್ರಶರ್ಮ ಕುಂಬಳೆ, ಲಕ್ಷ್ಮಣ: ಶ್ರೀ ಯತೀಶ್ ಕುಲಾಲ್ ಕುಂಬಳೆ, ಸೀತೆ: ಕುಮಾರಿ ಚೈತ್ರ ಪಿ ಜಿ ಬೆದ್ರಡ್ಕ , ಘೋರ ಶೂರ್ಪನಖಿ : ಶ್ರೀ ರಂಜಿತ್ ಮಲ್ಲ, : ಮಾಯಾ ಶೂರ್ಪನಖಿ: ಕುಮಾರಿ ಶ್ರಾವ್ಯ ಬೆದ್ರಡ್ಕ , ಖರಾಸುರ: ಶ್ರೀ ಶಿವಶಂಕರ ಭಟ್ ದಿವಾಣ, ತ್ರಿಶಿರಾಸುರ: ಶ್ರೀ ಶೇಖರ ಜಯನಗರ : ವೇಷ ಭೂಷಣ ಸಹಕಾರ: ಶ್ರೀ ರಾಕೇಶ್ ಗೋಳಿಯಡ್ಕ, ಶ್ರೀ ದುರ್ಗಾ ವೇಷ ಭೂಷಣ ಮಲ್ಲ ಮೊದಲಾದವರು ಭಾಗವಹಿಸಲಿದ್ದಾರೆ.
ಉಡುಪಿ : ಉಡುಪಿ ವಿಧಾನಸಭಾ ವ್ಯಾಪ್ತಿಯ 45 ಪ್ರೌಢ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳ ಸಮಾಲೋಚನಾ ಸಭೆ ಇಂದು 10-06-2023ರಂದು ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಜರಗಿತು.
ಉಡುಪಿಯ ನಿಕಟಪೂರ್ವ ಶಾಸಕರೂ, ಟ್ರಸ್ಟ್ ಅಧ್ಯಕ್ಷರಾದ ಕೆ. ರಘುಪತಿ ಭಟ್ ಟ್ರಸ್ಟ್ ನಿಯಮಾವಳಿಯಂತೆ ಉಡುಪಿ ಶಾಸಕರಾಗಿ ಆಯ್ಕೆಯಾದ ಯಶಪಾಲ್ ಸುವರ್ಣರಿಗೆ ಟ್ರಸ್ಟ್ ನ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಿ ಗೌರವಿಸಿದರು.
ಅಧಿಕಾರ ವಹಿಸಿಕೊಂಡ ಯಶಪಾಲ್ ಸುವರ್ಣರು ರಾಜ್ಯದಲ್ಲೇ ಅಪೂರ್ವವಾದ ಈ ಯೋಜನೆಯನ್ನು ಯಶಸ್ವಿಯಾಗಿ ಮುಂದುವರಿಯಲು ಎಲ್ಲರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ. ರಘುಪತಿ ಭಟ್ ಶಾಲೆಗಳ ಯಕ್ಷಶಿಕ್ಷಣದಿಂದ ಯಕ್ಷಗಾನಕ್ಕೂ, ಮಕ್ಕಳಿಗೂ ಸಿಗುತ್ತಿರುವ ಪ್ರಯೋಜನವನ್ನು ತಿಳಿಸಿ ಯಕ್ಷಗಾನ ಕಲಾರಂಗದ ಕಾರ್ಯಕರ್ತರು ಮತ್ತು ಗುರುಗಳು ಈ ಯಸಸ್ಸಿಗೆ ಕಾರಣರಾಗಿದ್ದಾರೆ ಎಂದು ಅಭಿನಂದಿಸಿದರು.
18 ಜನ ಯಕ್ಷಶಿಕ್ಷಣ ಗುರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
ಪುತ್ತೂರು, ಜೂ 09: ಸ್ಕೂಲ್ಗೇಮ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ ನಡೆಸುವ 66ನೇ ರಾಷ್ಟ್ರ ಮಟ್ಟದ ಯೋಗ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ.ಜೆ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಈತನು ಪುತ್ತೂರಿನ ನೆಹರೂ ನಗರದ ಪಿಎಮ್ಜಿಎಸ್ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ. ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತುಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ನಿಶ್ಚಲ್ ಕೆ.ಜಿ ಇವರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ರವಿಶಂಕರ್, ಜ್ಯೋತಿ ಹಾಗೂ ಯತೀಶ್ ಬಾರ್ತಿಕುಮೆರ್ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವರು.
ಪುತ್ತೂರು, ಜೂ 09: ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ ನಡೆಸುವ 66ನೇ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ವಿದ್ಯಾಭಾರತಿ ತಂಡವನ್ನು ಪ್ರತಿನಿಧಿಸಲಿರುತ್ತಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಬಾರ್ತಿಕುಮೆರ್ ಇವರ ನೇತೃತ್ವದಲ್ಲಿ ಈ ತಂಡವು ತರಬೇತಿಯನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ಭೇಲ್ ಪುರಿ ಭಾರತದ ಜನಪ್ರಿಯ ಖಾದ್ಯಗಳಲ್ಲಿ ಒಂದು. ಬೀದಿಬದಿಯ ವ್ಯಾಪಾರಸ್ತರಿಂದ ತೊಡಗಿ ಫೈವ್ ಸ್ಟಾರ್ ಹೋಟೆಲುಗಳ ವರೆಗೆ ಇದು ಖ್ಯಾತಿಯನ್ನು ಪಡೆದಿದೆ.
ಭೇಲ್ ಪುರಿ ಭಾರತದ ಅಚ್ಚುಮೆಚ್ಚಿನ ಬೀದಿ ಆಹಾರ ತಿಂಡಿಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿದೆ. ದೇಶದ ಪ್ರತಿಯೊಂದು ಮೂಲೆ ಮತ್ತು ಮೂಲೆಗಳಲ್ಲಿ ಇದನ್ನು ಇಷ್ಟಪಟ್ಟು ಸೇವಿಸಲಾಗುತ್ತದೆ.
ಭೇಲ್ ಪುರಿಯಲ್ಲಿ ವಿಧವಿಧದ ಪ್ರಕಾರಗಳಿದ್ದು ಪ್ರತಿಯೊಂದು ಪ್ರದೇಶವು ತನ್ನದೇ ಆದ ವಿಶಿಷ್ಟ ವ್ಯತ್ಯಾಸಗಳನ್ನು ಈ ಭಕ್ಷ್ಯಕ್ಕೆ ಒದಗಿಸುತ್ತದೆ. ಆದರೆ ನೀವು ಎಂದಾದರೂ ನ್ಸಿಂಗ್ ಭೇಲ್ ಪುರಿ ಕೇಳಿದ್ದೀರಾ? ಕೇಳದಿದ್ದರೆ ನೀವು ಈ ಕೆಳಗಿನ ವೀಡಿಯೊ ನೋಡಲೇಬೇಕು.
ಇಂಟರ್ನೆಟ್ನಲ್ಲಿ ಪ್ರಭಾವ ಬೀರಿದ ಡ್ಯಾನ್ಸಿಂಗ್ ಭೇಲ್ ಪುರಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಇತ್ತೀಚಿನ ಭಕ್ಷ್ಯವಾಗಿದೆ. ಇತ್ತೀಚೆಗೆ, ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊ ವೈರಲ್ ಆಗಿದ್ದು, ಆಹಾರ ಪ್ರಿಯರ ಗಮನವನ್ನು ಸೆಳೆದಿದೆ.
“ಡ್ಯಾನ್ಸಿಂಗ್ ಭೇಲ್ ಪುರಿ” ಎಂದು ಕರೆಯಲ್ಪಡುವ ಭೇಲ್ ಪುರಿಯ ಗಮನಾರ್ಹ ಆವೃತ್ತಿಯನ್ನು ವೀಡಿಯೊ ಒಳಗೊಂಡಿತ್ತು. ಈ ನಿರ್ದಿಷ್ಟ ಭೇಲ್ ಪುರಿ ಎದ್ದು ಕಾಣುವಂತೆ ಮಾಡಿದ್ದು ಕೇವಲ 60 ವಿಭಿನ್ನ ಪದಾರ್ಥಗಳ ಸಂಯೋಜನೆ ಮಾತ್ರವಲ್ಲದೆ ಅದರ ರಚನೆಯ ವಿಶಿಷ್ಟ ಪ್ರಕ್ರಿಯೆಯಾಗಿದೆ.
ಭಕ್ಷ್ಯವನ್ನು ತಯಾರಿಸಿದ ಮಾರಾಟಗಾರರು ಅದನ್ನು ತಯಾರಿಸುವಾಗ ನೃತ್ಯ ಮಾಡುವ ಮೂಲಕ ಗಮನ ಸೆಳೆಯುತ್ತಾರೆ. ತಯಾರಿಸುತ್ತಿರುವಾಗ ಅವರ ಲಯಬದ್ಧ ಚಲನೆಯಿಂದಾಗಿ ಇದಕ್ಕೆ ಡ್ಯಾನ್ಸಿಂಗ್ ಭೇಲ್ ಪುರಿ ಎಂದು ಹೆಸರುಬಂದಿದೆ.
ವಿಟ್ಲ: ವಿಟ್ಲ – ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡಕ್ಕೆ ಸ್ಥಳಾಂತರಗೊಂಡ ಸಪ್ತ ಜ್ಯುವೆಲ್ಸ್ ಸಂಪೂರ್ಣ ಹವಾನಿಯಂತ್ರಿತ ವಿಶಾಲವಾದ ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭ ನಾಳೆ ಜೂ.5ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಬೆಳಗ್ಗೆ 7.30ರಿಂದ ಗಣಪತಿ ಹೋಮ, ಲಕ್ಷ್ಮೀ ಪೂಜೆ ನಡೆದು, 9.30ಕ್ಕೆ ವಿಟ್ಲ ಅರಮನೆಯ ಬಂಗಾರು ಅರಸರು ದೀಪಪ್ರಜ್ವಲನೆಯನ್ನು ಮಾಡಲಿದ್ದು, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟನೆ ಮಾಡಲಿದ್ದಾರೆ. ವಿಟ್ಲ ಪೊಲೀಸ್ ನಿರೀಕ್ಷಕ ಎಚ್. ಇ. ನಾಗರಾಜ, ಶ್ರೀ ಚಂದ್ರನಾಥ ದೇವರ ಬಸದಿ ಆಡಳಿತದಾರ ವಿನಯ ಕುಮಾರ್ ಡಿ., ಬಾವಾ ಬ್ಯುಲ್ಡರ್ ಪ್ರೊಮೊಟರ್ ಅಬ್ದುಲ್ ಖಾದರ್ ಬಾವಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಾಲ ನಾಯಕ್ ಭಾಗವಹಿಸಲಿದ್ದಾರೆ.
2017ರಲ್ಲಿ ವಿಟ್ಲದ ಎಂಪಾಯರ್ ಮಾಲ್ ನಲ್ಲಿ ಸಪ್ತ ಜ್ಯುವೆಲ್ಸ್ ಆಭರಣ ಮಳಿಗೆ ಪ್ರಾರಂಭವಾಗಿದ್ದು, ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್ ಸಿಟಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಗ್ರಾಹಕರ ಕಲ್ಪನೆಯ ವಿನ್ಯಾಸದ ಆಭರಣಗಳ ಆಯ್ಕೆಗೆ ಅನುಭವೀ ತಂಡ, ಸ್ಥಳದಲ್ಲೇ ಚಿನ್ನದ ಶುದ್ಧತೆ ಪರಿಶೀಲಿಸುವ ಯಂತ್ರದ ವ್ಯವಸ್ಥೆಯನ್ನು ಮಳಿಗೆಯಲ್ಲಿ ಕಲ್ಪಿಸಲಾಗಿದೆ.
ಮಳಿಗೆ ಉದ್ಘಾಟನೆಯ ನಿಟ್ಟಿನಲ್ಲಿ ಚಿನ್ನಾಭರಣ ಖರೀದಿಗೆ 1 ಪವನ್ ನೆಕ್ಲೆಸ್ ಗೆಲ್ಲುವ ಸುವರ್ಣಾವಕಾಶ, ಚಿನ್ನಾಭರಣ ಪ್ರತಿ ಗ್ರಾಂ ಗೆ 100ರೂ ಹಾಗೂ ಬೆಳ್ಳಿ ಆಭರಣಕ್ಕೆ ಶೇ.5ರ ರಿಯಾಯಿತಿಯನ್ನು ನೀಡಲಾಗಿದೆ. ಜೂ 5ರಿಂದ 30ರವರೆಗೆ ಸಪ್ತ ಅಕ್ಷಯ ಸೇರ್ಪಡೆಗೊಳ್ಳುವ ಎಲ್ಲರಿಗೂ ವಿಶೇಷ ಉಡುಗೊರೆ, ಚಿನ್ನಾಭರಣಗಳ ಶುದ್ಧತೆಯನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಡಲಾಗುತ್ತದೆ.
ನೆಕ್ಲೇಸ್ ಗಳಲ್ಲಿ ವಿಶೇಷ ಸಂಗ್ರಹ:
ಪಾರಂಪರಿಕ ಮಲ್ಲಿಗೆ ಮೊಗ್ಗು ನೆಕ್ಲೇಸ್, ಮೊಹನ ಮಾಲಾ, ಕೊತ್ತಂಬರಿ ಸರ, ರುದ್ರಾಕ್ಷಮಾಲಾ, ತುಳಸಿಮಣಿಸರ, ನವರತ್ನ ಸರ, ಕಠಾಣಿ ಸರ, ಗಿಳಿ ಓಲೆ ನೆಕ್ ಲೇಸ್ ಸೆಟ್ ವಿಶೇಷವಾಗಿದೆ. ಟೆಂಪಲ್ ಕಲೆಕ್ಷನ್ ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ರಿಚ್ ಲುಕ್ ನೀಡುವ ರುಬಿ, ಎಮರಾಲ್ಡ್, ಸಿ೨, ಸ್ಟೋನ್ ನೆಕ್ಲೇಸ್, ಲೈಟ್ ವೈಟ್ ಕೋಲ್ಕತ್ತ ವೆಡ್ಡಿಂಗ್ ಸೆಟ್, ನೆಕ್ಲೇಸ್, ಪೆಂಡೆಂಟ್ಸ್ ಗಳು, ಬ್ಯಾಂಗ್, ರಿಂಗ್, ಮಾಟೆ, ಮುಂದಲೆ,
ವಿಶೇಷ ಸಂಗ್ರಹಗಳು:
ಡಿಫೆರೆಂಟ್ ಆಂಡ್ ಸ್ಪೆಷಲ್ ಕಲೆಕ್ಷನ್ ಇನ್ ಕೋಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲಾ, ವೆರೈಟಿ ಆಫ್ ಬೆಂಗಾಲಿ ಹ್ಯಾಂಡ್ ಮೇಡ್ ಚೈನ್ಸ್, ಕೊಯಂಬುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಮುಸ್ಟಿ ಚೈನ್, ರೇಡಿಯೋ ಚೈನ್, ಕೇರಳ ಗ್ಯಾಂಡ್ ಮೇಡ್ ವೈನ್ಸ್, ಇಂಡೋ ಇಟಲಿಯನ್ ಚೈನ್ಸ್
ವಿವಾಹ ಸಂಗ್ರಹ:
ಬೆಂಗಾಲಿ ಲೈಟ್ ವೈಟ್ ವೆಡ್ಡಿಂಗ್ ಸೆಟ್, ಫ್ಯೂಷನ್ ಕಲೆಕ್ಷನ್, ಚೆಟ್ಟಿನಾಡ್ ಕಲೆಕ್ಷನ್, ನಕ್ಷಿ ಆರ್ನಮೆಂಟರಿ ವೆಡ್ಡಿಂಗ್ ಸೆಟ್ ಗಳು ಹಾಗೂ ಡಿವೈನ್ ಸೆಟ್ ಗಳು
ಲೈಟ್ ವೈಟ್ ರಿಂಗ್, ಕಾಸ್ಟಿಂಗ್ ರಿಂಗ್, ಬೇಬಿ ಡೈ ರಿಂಗ್, ಪವಿತ್ರ ರಿಂಗ್, ಪಯ್ಯನ್ನೂರು ಪವಿತ್ರ ರಿಂಗ್, ನವರತ್ನ ರಿಂಗ್, ಪ್ರೀಕಾಯಿನ್ಸ್, ಸ್ಟೋನ್ ರಿಂಗ್ ಆನ್ ಆರ್ಡರ್, ಕಪಲ್ ರಿಂಗ್, ಕ್ಲೋಸ್ ಸೆಟ್ಟಿಂಗ್ ರಿಂಗ್
ನಿತ್ಯ ಬಳಕೆಯ ಮಾಂಗಲ್ಯ ಸರ, ನವೀನ ಮಾದರಿಯ ಮುಷ್ಠಿ ಮಾಂಗಲ್ಯ ಸರ, ನುಗ್ಗೆ ಚೈನ್ ಮಾಂಗಲ್ಯ ಸರ, ಕಲ್ಟಿಂಗ್ ಬಾಲ್ಸ್ ಕಂಠಿ, ಪಿರಿ ಕಂಠಿ, ಗಾಂಚು ಕಂಠಿ, ಜೋಮಾಲ ಕಂಠಿ, ಕಟ್ಸ್ ಗೋಲು ಕಂಠಿ, ಗುಂಡು ಕಂಠಿ
ಗಿಫ್ಟ್ ಆರ್ಟಿಕಲ್ಸ್:
ಪ್ರೈಮಾ ಹಾಗೂ ಆರ್ಯಾ ಬ್ರಾಂಡ್ ನ ಗೋಲ್ಡನ್ ಫಾಯಿಲ್ ಕಲೆಕ್ಷನ್, ಸಿಲ್ವರ್ ಪಾಯಿಲ್ ಪ್ರೇಮ್ ಕಲೆಕ್ಷನ್
ಬೆಳ್ಳಿಯ ವಿಶೇಷತೆಗಳು:
ಆರ್ನಮೆಂಟ್ಸ್, ಸ್ಟಡ್ಸ್, ರಿಂಗ್ಸ್, ಚೈನ್, ಹ್ಯಾಂಡ್ ಮೇಡ್ ದೈವ ದೇವರ ಪರಿಕರಗಳು, ಆಭರಣಗಳು, ದೇವರ ವಿಗ್ರಹಗಳು, ಕರ್ಪೂರಾರತಿ, ಏಕಾರತಿ, ಶಂಕಾರತಿ, ಸರ್ಪಾರತಿ, ಕೂರ್ಮಾರತಿ, ಕಾಮಾಕ್ಷಿ ದೀಪ ಸೇರಿ ವಿವಿಧ ವಿನ್ಯಾಸದ ಬೆಳ್ಳಿಯ ಆರತಿಗಳು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಜೂನ್ 3 ಶನಿವಾರ ಹಾಗು 4 ಆದಿತ್ಯವಾರ ‘ಗಡಿನಾಡ ಕಲಾ ಸಾಂಸ್ಕೃತಿಕ ವೈಭವ’ ನಡೆಯಲಿದೆ.
ಬೆಳಗ್ಗೆ 10 ರಿಂದ ಸಂಜಯ ವರೇಗೆ ನಡೆಯುವ ಈ ಕಾರ್ಯಕ್ರಮವನ್ನು ಶನಿವಾರ ಬೆಳಿಗ್ಗೆ 10 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು, ಶ್ರೀ ಶಂಕರಾಚಾರ್ಯ ಸಂಸ್ಥಾನಂ,ಶ್ರೀ ಮದ್ ಎಡನೀರು ಮಠ ಇವರು ದೀಪ ಬೆಳಗಿಸಿ ಉಧ್ಘಾಟಿಸಲಿರುವರು.
ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಮಠ ಇವರು ಆಶೀರ್ವಚನ ನೀಡಲಿದ್ದಾರೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪ್ರಕಾಶ್ ಮತ್ತೀಹಳ್ಳಿ ಯವರು ಅಧ್ಯಕ್ಷತೆ ವಹಿಸಲಿದ್ದಾರೆ..
11 ಗಂಟೆಗೆ ಪುತ್ತಿಗೆ ರಾಮಕೃಷ್ಣ ಜೋಯಿಸ ವಿರಚಿತ ಶ್ರೀ ರಾಮ ನಿಜಪಟ್ಟಾಭಿಷೇಕ ಪ್ರಸಂಗದ ಅಗ್ನಿ ಪರೀಕ್ಷೆಯ ಭಾಗ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಗೊಳ್ಳಲಿದೆ. ಹಿಮ್ಮೇಳದಲ್ಲಿ ಪುತ್ತಿಗೆ ರಘರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ವರುಣ್ ಹೆಬ್ಬಾರ್, ಅರ್ಥಧಾರಿಗಳಾಗಿ ವೇದಮೂರ್ತಿ ವಿ ಬಿ ಹಿರಣ್ಯ, ಹರೀಶ್ ಬಳಂತಿಮೊಗರು, ಸುಬ್ರಾಯ ಹೊಳ್ಳ, ಶ್ರುತಕೀರ್ತಿರಾಜ್, ವಿಷ್ಣು ಪ್ರಕಾಶ್ ಪೆರ್ವ, ಬಾಲಕೃಷ್ಣ ಆಚಾರ್ಯ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2-30ರಿಂದ ಗಮಕ ವಾಚನ ಶ್ರೀಹರಿ ಭಟ್ ಹಾಗು ಕೊಚ್ಚಿ ಗೋಪಾಲಕೃಷ್ಣ ಭಟ್ ಅವರಿಂದ, 4 ರಿಂದ ಕಲಾರತ್ನ ಶಂ.ನಾ. ಅಡಿಗ ಕುಂಬ್ಳೆ ಇವರಿಂದ ಹರಿಕಥೆ, ತದನಂತರ ನೃತ್ಯೋಪಾಸನಾ ಕಲಾಕೇಂದ್ರ(ರಿ.) ಪುತ್ತೂರು ಪ್ರಸ್ತುತ ಪಡಿಸುವ “ನೃತ್ಯೋಹಂ” ನಡೆಯಲಿದೆ. ಶ್ರೀಮತಿ ಶಾಲಿನಿ ಆತ್ಮಭೂಷಣ ಪುತ್ತೂರು ಇವರ ಶಿಷ್ಯರಿಂದ.
4 ನೇ ತಾರೀಕು ಆದಿತ್ಯವಾರ ಬೆಳಗ್ಗೆ ಗಡಿನಾಡ ಕವಿ ರಾಧಾಕೃಷ್ಣ ಕೆ, ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ, ಕವನ ಗೋಷ್ಠಿ, ಅವಲೋಕನ ನಡೆಯಲಿದೆ. ಈ ಗೋಷ್ಠಿಯನ್ನು ಶ್ರೀಮತಿ ಸೀತಾಲಕ್ಷ್ಮಿ ವರ್ಮ, ವಿಟ್ಲ ಇವರು ಉಧ್ಘಾಟಿಸಲಿದ್ದಾರೆ, ಗಡಿನಾಡ ಸಾಹಿತ್ಯಘಟಕದ ಅಧ್ಯಕ್ಷರಾದ ಯಸ್.ವಿ.ಭಟ್, ಹಿರಿಯ ಪತ್ರೀಕೋದ್ಯಮಿ ಮಲಾರು ಜಯರಾಮ ರೈ, ಶಿವರಾಮ ಕಾಸರಗೋಡು ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.
ಕವನ ವಾಚನ– ಗಾಯನ, ಗಡಿನಾಡಿನಲ್ಲಿ ಕಲೆ- ಸಾಹಿತ್ಯ ಕ್ಕೆ ನೀಡಿದ ಕೀರ್ತಿಶೇಷ ರ ಕೊಡುಗೆಗಳು- ಗಡಿನಾಡ ಸಮಸ್ಯೆಗಳು ವಿಚಾರ ಗೋಷ್ಠಿ ನಡೆಯಲಿದೆ.
5 ಗಂಟೆಗೆ ಸಮಾರೋಪ – ಪ್ರಶಸ್ತಿ ಪ್ರಧಾನ ನಡೆಯಲಿದೆ. 7 ರಿಂದ ವಿಧ್ವಾನ್ ಡಿ.ವಿ.ಹೊಳ್ಳ ವಿರಚಿತ ಗಡಿನಾಡು ಕಾಸರಗೋಡಿನ ಪವಿತ್ರ ಮಧೂರು ಕ್ಷೇತ್ರದ ಕುರಿತಾದ ಚಾರಿತ್ರಿಕ ಕಥೆ, ʼಮಧುಪುರ ಮಹಾತ್ಮೆʼ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಧ್ಯಕ್ಷರು ಮತ್ತು ಸದಸ್ಯರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರು ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.
ಪುತ್ತೂರು: ನಿಸರ್ಗದಲ್ಲಿ ಸಹಜವಾಗಿ ಬದುಕಿ ಬಾಳುವ ಕಲೆಯನ್ನು ಪ್ರಾಣಿ ಪಕ್ಷಿಗಳು ತಮ್ಮ ಮರಿಗಳಿಗೆ ಕಲಿಸುತ್ತವೆ. ಇದು ಪ್ರಕೃತಿ ನಿಯಮ. ಹಾಗೆಯೇ ಮನುಷ್ಯರೂ ಮಕ್ಕಳು ತಮಗೆ ಒದಗಿಸಿದ ಆನಂದವನ್ನು ಮರೆಯದೆ ಅವರ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಸಂಸ್ಥೆಗಳ ಹುಡುಕಾಟ ನಡೆಸುತ್ತೇವೆ ಇದು ಪ್ರಜ್ಞಾವಂತ ಹೆತ್ತವರ ಜವಾಬ್ದಾರಿಯೂ ಹೌದು ಎಂದು ಆಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಎರಡು ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪುನರಾರಂಭದ ಸಂದರ್ಭದಲ್ಲಿ ನೂತನ ಶೈಕ್ಷಣಿಕ ವರ್ಷದ ಪ್ರಥಮ ಪಿಯು ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾ ಸಂಸ್ಥೆಗಳಲ್ಲಿ ಪಠ್ಯದ ಜತೆಗೆ ಸಂಸ್ಕಾರವನ್ನು ಆಧರಿಸಿದ ಕಾರ್ಯಕ್ರಮಗಳು, ಸರಸ್ವತಿ ಪೂಜೆ, ಯೋಗ, ಭಗವದ್ಗೀತೆ, ಮುಂತಾದವುಗಳನ್ನು ಕಲಿಸುವ ಪರಿಪಾಠ ಅಗತ್ಯ. ಈ ವಿಚಾರಗಳು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಿಸುವುದಕ್ಕೂ ಸಹಕಾರಿ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೊಂದಿಗೆ ಅವರನ್ನು ಸತ್ಪ್ರಜೆಯಾಗಿ ರೂಪಿಸುವಲ್ಲಿ ಹೆತ್ತವರ, ಪೋಷಕರ, ಗುರುಗಳ, ಆಡಳಿತ ಮಂಡಳಿಯ ಸಹಕಾರ ಅಗತ್ಯ. ಆದ್ದರಿಂದ ಕೇವಲ ಅಂಕಗಳಿಗಾಗಿ ಒತ್ತಡ ಹೇರಬಾರದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಶದ ಅವಾಂತರ, ಅವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಶಿಕ್ಷಣ ಸಂಸ್ಥೆಗಳಿಗಿವೆ. ಧರ್ಮ ಜಾಗೃತಿ, ದೇಶ ಪ್ರೇಮ, ನೈತಿಕತೆ ಮುಂತಾದವುಗಳಲ್ಲಿ ಅಂಬಿಕಾ ಛಾಪನ್ನೊತ್ತಿದೆ. ಶೈಕ್ಷಣಿಕವಾಗಿಯೂ ತುಂಬಾ ಮುಂದಿದೆ. ಪೋಷಕ ಬಂಧುಗಳು ಸಂಸ್ಥೆಯ ಜತೆಗೆ ನಿರಂತರ ಸಂಪರ್ಕವಿಟ್ಟುಕೊಳ್ಳಬೇಕು ಎಂದು ನುಡಿದರು.
ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನೇಶಕುಮಾರ್ ವೈ.ಎ ಮಾತನಾಡಿ ಪೋಷಕರು ಸಂಸ್ಥೆಗೆ ಕೊಂಡಿಯಾಗಿ ನಡೆದುಕೊಂಡಾಗ ಯಶಸ್ಸು ನಿಶ್ಚಿತ ಎಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ನೀಟ್. ಜೆಇಇ, ಸಿಇಟಿ, ಎನ್ಡಿಎ ಮುಂತಾದ ವಿವಿಧ ಪ್ರವೇಶ ಪರೀಕ್ಷೆಗಳ ಬಗ್ಗೆ, ಕಾಲೇಜಿನ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.
ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು ಎನ್ಡಿಎ, ಜೆಇಇ ಪ್ರವೇಶ ಪರೀಕ್ಷೆಯ ಸಾಧಕರನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ಹೆತ್ತವರ ಹಾಗೂ ಪೋಷಕರ ಪಾದ ಪೂಜೆಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯವನ್ನು ನಡೆಸಲಾಯಿತು. ಸಂಸ್ಕಾರವನ್ನು ಅರ್ಥೈಸುವ, ಭರವಸೆಯ ಸಂಕಲ್ಪ ಮೂಡಿಸುವ ಈ ಕಾರ್ಯಕ್ರಮದ ಮಹತ್ವವನ್ನು ವಾಗ್ಮಿ ಶ್ರೀ ಕೃಷ್ಣ ಉಪಾಧ್ಯಾಯರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಉಪಾಧ್ಯಾಯರ ಸತ್ಯಾನ್ವೇಷಣೆ ಎಂಬ ವೀಡಿಯೋವನ್ನು ಸುಬ್ರಹ್ಮಣ್ಯ ನಟ್ಟೋಜರು ಬಿಡುಗಡೆಗೊಳಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಶ್ರೀಕಾಂತ ಶೆಣೈ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಕೇಶವ ಕಿಶೋರ್, ತಿಲೋಶ್, ಶೈನಿ.ಕೆ.ಜೆ, ಅಕ್ಷತಾ.ಆರ್ ಸಾಧಕರ ಹೆಸರನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ ಶ್ರಾವ್ಯ ಮತ್ತು ಹರ್ಷಿತಾ ಪ್ರಾರ್ಥಿಸಿದರು. ಉಪನ್ಯಾಸಕರಾದ ವಿಷ್ಣು ಪ್ರದೀಪ, ಗೀತಾ.ಸಿ.ಕೆ ಹಾಗೂ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.