Wednesday, March 11, 2026
Home Blog Page 343

ಸುದರ್ಶನ ಗರ್ವಭಂಗ (Disgraced Sudarshana) – ಇಂದು (21.02.2021) ಸುಳ್ಯದಲ್ಲಿ ಇಂಗ್ಲಿಷ್ ಯಕ್ಷಗಾನ ಬಯಲಾಟ

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಸುಳ್ಯ ಇವರ ಸಹಯೋಗದಲ್ಲಿ ಯಕ್ಷಗಾನ ಪಠ್ಯಪುಸ್ತಕಾಧಾರಿತ ‘ಹೆಜ್ಜೆ’ ವೀಡಿಯೊ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ನಂತರ ಇಂಗ್ಲಿಷ್ ಯಕ್ಷಗಾನ ಬಯಲಾಟವೂ ನಡೆಯಲಿದೆ. ಈ ಸಂದರ್ಭದಲ್ಲಿ ‘ಪ್ರಜ್ಞಾ ಯಕ್ಷಗಾನ ಕಲಾಶಾಲೆ’ಯ  ಉದ್ಘಾಟನಾ ಕಾರ್ಯಕ್ರಮವೂ ಜರಗಲಿರುವುದು. 

ಇಂದು ದಿನಾಂಕ 21.02.2021ರ ಆದಿತ್ಯವಾರ ಸಂಜೆ ಘಂಟೆ 4.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವರಾದ ಎಸ್. ಅಂಗಾರ ಅವರು ನೆರವೇರಿಸಲಿದ್ದಾರೆ.

ಯಕ್ಷಗಾನ ರಂಗದ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಮತ್ತು ಬಿಡುಗಡೆ  ಕಾರ್ಯಕ್ರಮಗಳ ನಂತರ Disgraced Sudarshana ಎಂಬ  ಇಂಗ್ಲಿಷ್ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಪ್ರಸಂಗದ ಪದ್ಯಗಳೂ ಇಂಗ್ಲಿಷ್ ಭಾಷೆಯಲ್ಲಿಯೇ ಇರುತ್ತವೆ. ಹಾಡುಗಾರಿಕೆ ಮತ್ತು ಅರ್ಥಗಾರಿಕೆಯೆರಡೂ ಇಂಗ್ಲಿಷ್ ಭಾಷೆಯಲ್ಲಿರುವುದು ವಿಶೇಷ. ಕಾರ್ಯಕ್ರಮದ ವಿವರವನ್ನು ಕೆಳಗಡೆ ನೀಡಲಾಗಿದೆ. 

ಇಂದು ಮತ್ತು ನಾಳೆ (ಫೆಬ್ರವರಿ 21 ಮತ್ತು 22) ತುಳುನಾಡ ಜಾತ್ರೆ ಶ್ರೀ ಒಡಿಯೂರು ರಥೋತ್ಸವ, ಯಕ್ಷಗಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 

ಇಂದು ಮತ್ತು ನಾಳೆ (ಫೆಬ್ರವರಿ 21 ಮತ್ತು 22) ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ತುಳುನಾಡ ಜಾತ್ರೆ ಶ್ರೀ ಒಡಿಯೂರು ರಥೋತ್ಸವ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಈ ಸಂದರ್ಭದಲ್ಲಿ ಇಪ್ಪತ್ತೊಂದನೇ ತುಳು ಸಾಹಿತ್ಯ ಸಮ್ಮೇಳನವೂ ಜರಗಲಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. 

ಫೆಬ್ರವರಿ 21ರಂದು ಬೆಳಿಗ್ಗೆ 9.30ಕ್ಕೆ ತುಳು ಸಾಹಿತ್ಯ ಸಮ್ಮೇಳನದ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ ಪಾವಂಜೆ ಮೇಳದವರಿಂದ ‘ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಫೆಬ್ರವರಿ 22ರಂದು ಬೆಳಿಗ್ಗೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6 ಘಂಟೆಯಿಂದ ಶ್ರೀ ದತ್ತಾಂಜನೇಯ ದೇವರ ವೈಭವದ ರಥಯಾತ್ರೆ ನಡೆಯಲಿದೆ.

ಸಂಜೆ 6 ಘಂಟೆಯಿಂದ ಕನ್ಯಾನ ಸದ್ಗುರು ನಿತ್ಯಾನಂದ ಮಂದಿರದ ಬಳಿ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ. ಕಾರ್ಯಕ್ರಮದ ವಿವರ ಕೆಳಗೆ ಕೊಡಲಾಗಿದೆ 

ಮೇಳಗಳ ಇಂದಿನ ( 21.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 21.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಾಳೆಹೊಳೆ, ರಥಬೀದಿ – ಶ್ರೀಶನೀಶ್ವರ ಮಹಾತ್ಮೆ 

ಕಟೀಲು ಒಂದನೇ ಮೇಳ = ಬಿಸಿನೆಸ್ ಸೆಂಟರ್, ಸುರತ್ಕಲ್ 

ಕಟೀಲು ಎರಡನೇ ಮೇಳ ==   ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ, ವಾಮದಪದವು 

ಕಟೀಲು ಮೂರನೇ ಮೇಳ= ಕುಂಗೂರು ಹೌಸ್, ಪುತ್ತಿಗೆ ವಯಾ ಮೂಡಬಿದ್ರಿ 

ಕಟೀಲು ನಾಲ್ಕನೇ ಮೇಳ  == ಅಕ್ಷಯನಿವಾಸ, ದೂಜಲಗುರಿ, ಪೊಂಪೈ ಕಾಲೇಜು ಹಿಂದುಗಡೆ, ಐಕಳ 

ಕಟೀಲು ಐದನೇ ಮೇಳ == ನವಶಕ್ತಿ ಸೇವಾ ಸಂಘ, ಮಳವೂರು ಮಂಗಳೂರು 

ಕಟೀಲು ಆರನೇ ಮೇಳ == ಯಕ್ಷಗಾನ ಕಲಾಸಂಘ ಬೆಳ್ಳೂರು, ಬಾಳಿಕೆ, ಬಡಗಬೆಳ್ಳೂರು ಬಂಟ್ವಾಳ  

ಮಂದಾರ್ತಿ ಒಂದನೇ ಮೇಳ  ==  ಆವಿಷ್ಕಾರ್ ಆಟೋಮಿಷನ್ ಶೇಡ್ಗಾರ್ 

ಮಂದಾರ್ತಿ ಎರಡನೇ ಮೇಳ   ==   ಬ್ರಾಹ್ಮೀ ನಿಲಯ ಮಾವಿನಮನೆ ಹೊಸಂಗಡಿ   

ಮಂದಾರ್ತಿ ಮೂರನೇ ಮೇಳ  ==   ಮೂಡುವಾಲ್ತೂರು ನೆಲ್ಲಿಕಟ್ಟೆ 

ಮಂದಾರ್ತಿ ನಾಲ್ಕನೇ ಮೇಳ   ==  ಬಂಡ್ಸಾಲೆಮನೆ ಮಾಂಬಳ್ಳಿ ಮಧುವನ 

ಮಂದಾರ್ತಿ    ಐದನೇ ಮೇಳ  ==  ಕೋಟೆಮನೆ ಅರಳ , ಬಂಟ್ವಾಳ,  ದ. ಕ. 

ಶ್ರೀ ಹನುಮಗಿರಿ ಮೇಳ  ==  ನೂಜಿ ಶ್ರೀ ಗೋಪಾಲಕೃಷ್ಣ ಮಠದ ವಠಾರ – ತರಣಿಸೇನ ಕಾಳಗ, ಹಿಡಿಂಬಾ ವಿವಾಹ, ರತಿ ಕಲ್ಯಾಣ 

ಶ್ರೀ ಸಾಲಿಗ್ರಾಮ ಮೇಳ == ಕಾನೂರಗದ್ದೆಮನೆ (ಯಲ್ಲಾಪುರ) – ಬಹ್ಮಕಪಾಲ, ಮಾರುತಿ ಪ್ರತಾಪ 

ಶ್ರೀ ಪೆರ್ಡೂರು ಮೇಳ == ಬಿ.ಸಿ. ರೋಡ್ ನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ – ಶಪ್ತ ಭಾಮಿನಿ 

ಶ್ರೀ ಸುಂಕದಕಟ್ಟೆ ಮೇಳ  ==  ಶಿರ್ಲಾಲ್ ಮಂಜಲಪಲ್ಕೆ (ಅಳದಂಗಡಿ)- ಸರ್ಪ ಸಂಬಂಧ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ದುರ್ಗಾ, ಚಿತ್ರಪಾಡಿ, ಸಾಲಿಗ್ರಾಮ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಗೋರಗದ್ದೆ ಅರೆಶಿರೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಶ್ರೀ ಕ್ಷೇತ್ರ ಒಡಿಯೂರು – ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಮೇಲ್ ಕಡ್ರಿ, ಸಿದ್ಧಾಪುರ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ ‘ಬಿ‘ == ಚಿತ್ರಕೂಟ, ಕಳಿ ಆಲೂರು 

ಶ್ರೀ ಬಪ್ಪನಾಡು ಮೇಳ == ವಿಶ್ವ ಹಿಂದೂ ಪರಿಷತ್, ಭಜರಂಗದಳ,ದುರ್ಗಾವಾಹಿನಿ ವಾಸುಖೀ ಶಾಖೆ,ಮಂಗಳನಗರ – ನಾಗನಂದಿನಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ನೋರ್ನಡ್ಕ ಪಡುಕುರಿಯಾಳ (ಬಂಟ್ವಾಳ) – ಮುಕುಂದ ಮುರಾರಿ 

ಶ್ರೀ ಅಮೃತೇಶ್ವರೀ ಮೇಳ == ಸತ್ಯವತಿ ರಕ್ತೇಶ್ವರಿ ದೇವಸ್ಥಾನ, ಮಂಡಜಡ್ದು ಚಿತ್ರಪಾಡಿ 

ಶ್ರೀ ಸೌಕೂರು ಮೇಳ == ಸೌಕೂರು ವಿಶ್ವಜ್ಯೋತಿ ವಠಾರ – ಚಕ್ರ ಚಂಡಿಕಾ, ಕನಕಾಂಗಿ ಕಲ್ಯಾಣ 

ಶ್ರೀ ಹಾಲಾಡಿ ಮೇಳ == ಸಾಗರ ನೆಹರೂ ಮೈದಾನ – ವಿದ್ಯುಜ್ಜಿಹ, ನಾಗಶ್ರೀ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಿಲೆಂಜೂರು ಧೂಮಾವತಿ ಮಿತ್ರ ಮಂಡಳಿ – ಗೆಜ್ಜೆದ ಪೂಜೆ  

ಶ್ರೀ ಮಡಾಮಕ್ಕಿ ಮೇಳ == ಕುಂದರ್ ಕೆರೆಬೆಟ್ಟು – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೈಕಾಡಿ ಗಾಂಧಿನಗರ – ಧರ್ಮದೈವ ಜುಮಾದಿ 

ಶ್ರೀ ಹಿರಿಯಡಕ ಮೇಳ == ಓಂತಿಬೆಟ್ಟು ಪೇಟೆ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಶ್ರೀ ಚೆನ್ನಕೇಶವ ದೇವಸ್ಥಾನ ಮಾಣಿಕೊಳಲು 

ಶ್ರೀ ಸಿಗಂದೂರು ಮೇಳ == ನಗರ ಮೂಡುಕೊಪ್ಪ ಗ್ರಾಮದ ಬಾರತಟ್ಟಿ – 

ಶ್ರೀ ನೀಲಾವರ ಮೇಳ  == ಹೇರೂರು – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಬಾಚಕೆರೆ ಮೇಳ == ಉಜಿರೆ ರಥಬೀದಿ – ಸೂರ್ಯಕಾಂತಿ  

ಶ್ರೀ ಮಂಗಳಾದೇವಿ ಮೇಳ == ಮೂಡುಶೆಡ್ಡೆ – ತುಳು ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಕುಕ್ಕೆನೇರಳೆ 

ಶ್ರೀ ಮೇಗರವಳ್ಳಿ ಮೇಳ ==  ಬಗ್ವಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನ – ಮಧುರ ಮನಸ್ವಿ  

ದಿಶಾ ರವಿ ಜಾಮೀನು ಮನವಿ: ಮಂಗಳವಾರ ತನಕ ಆದೇಶ ಕಾಯ್ದಿರಿಸಿದ ನ್ಯಾಯಾಲಯ; ದಿಶಾ ರವಿಗೆ ‘ಖಾಲಿಸ್ತಾನಿ’ ಲಿಂಕ್ ಎಂದು ಪ್ರತಿಪಾದಿಸಿದ ಪೊಲೀಸರು

ದೆಹಲಿ ಪೊಲೀಸರು ನಡೆಸುತ್ತಿರುವ ‘ಟೂಲ್‌ಕಿಟ್’ ತನಿಖೆಯ ಮಧ್ಯೆ, ಪಟಿಯಾಲ ಹೌಸ್ ನ್ಯಾಯಾಲಯವು ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರ ಜಾಮೀನು ಅರ್ಜಿಯ ಕುರಿತು ಮಂಗಳವಾರ ತನಕ ತನ್ನ ಆದೇಶವನ್ನು ಕಾಯ್ದಿರಿಸಿದೆ.

ದೆಹಲಿ ಪೊಲೀಸರು ಹೇಳಿಕೊಂಡಂತೆ ಗಣರಾಜ್ಯೋತ್ಸವದ ಹಿಂಸಾಚಾರಕ್ಕೆ ಕಾರಣವಾದ ಟೂಲ್‌ಕಿಟ್ ದಾಖಲೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧಿಸಿರುವ 21 ವರ್ಷದ ಬೆಂಗಳೂರು ಹವಾಮಾನ ಕಾರ್ಯಕರ್ತೆ ದಿಶಾ ರವಿ ಪ್ರಸ್ತುತ ಸೋಮವಾರದವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಂಗಳವಾರ ಅವರ ವಿಚಾರಣೆಯನ್ನು ನ್ಯಾಯಾಲಯ ಮುಂದುವರಿಸಲಿದೆ. ಖಲಿಸ್ತಾನಿ ಪರ ವ್ಯಾಂಕೋವರ್ ಮೂಲದ ಗುಂಪು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಎಫ್‌ಜೆ) ಮತ್ತು ‘ಟೂಲ್‌ಕಿಟ್’ ರಚಿಸುವಲ್ಲಿ ಅದರ ಪಾಲ್ಗೊಳ್ಳುವಿಕೆ ಕುರಿತು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ.ರಾಜು ಅವರು ನ್ಯಾಯಾಲಯಕ್ಕೆ ವಿವರಿಸಿದರು.

ದಿಶಾ ರವಿ, ಸಹ-ಆರೋಪಿಗಳಾದ ನಿಕಿತಾ ಜಾಕೋಬ್, ಶಾಂತನು ಮುಲುಕ್ ಮತ್ತು ಪಿಎಫ್‌ಜೆ ಸಂಸ್ಥಾಪಕರಾದ ಮೊ ಧಲಿವಾಲ್ ಮತ್ತು ಅನಿತಾ ಲಾಲ್ ನಡುವೆ ಸಂಪರ್ಕವಿದೆ ಎಂದು ಆರೋಪಿಸಿದ ಕೇಂದ್ರ, ‘ಟೂಲ್‌ಕಿಟ್’ ಪ್ರಕಾರ ಯೋಜನೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಮುಲುಕ್ ಜನವರಿ 26 ರಂದು ದೆಹಲಿಯಲ್ಲಿದ್ದರು ಎಂದು ಹೇಳಿದ್ದಾರೆ. 

ಆರೋಪಿಗಳು ಮತ್ತು ಹಿಂಸಾಚಾರವನ್ನು ನಡೆಸಿದ ಜನರ ನಡುವೆ ನೇರ ಸಂಬಂಧವಿದೆಯೇ ಎಂದು ನ್ಯಾಯಾಧೀಶರು ಕೇಳಿದಾಗ, ಕೇಂದ್ರವು ‘ಇದು ತನಿಖೆಯಲ್ಲಿದೆ. ‘ಭಾರತವನ್ನು ದೂಷಿಸುವ’ ಗುರಿಯನ್ನು ಹೊಂದಿರುವ ‘ಟೂಲ್‌ಕಿಟ್’, “ಈ ಡಾಕ್ಯುಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಯಿತು ಮತ್ತು ನಂತರ ಅವರು ಅನೇಕ ಭಾಗಗಳನ್ನು ಅಳಿಸಿದ್ದಾರೆ.

ಯಾವುದೇ ತಪ್ಪಿಲ್ಲದಿದ್ದರೆ, ಅವರು ಟೂಲ್‌ಕಿಟ್, ವಾಟ್ಸಾಪ್ ಚಾಟ್‌ಗಳ ಭಾಗಗಳನ್ನು ಅಳಿಸುತ್ತಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತು. ಮೂವರು ಆರೋಪಿಗಳು ಲಾಲ್ ಮತ್ತು ಧಲಿವಾಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದರು. 

ಕೇಂದ್ರವನ್ನು ವಾದವನ್ನು ಎದುರಿಸಿ, ದಿಶಾ ರವಿ ಪರ ಹಾಜರಾದ ವಕೀಲ ಸಿದ್ಧಾರ್ಥ್ ಅಗರ್ವಾಲ್ ‘ರವಿ ಅವರಿಗೆ ಪಿಎಫ್‌ಜೆ ಜೊತೆ ಯಾವುದೇ ಸಂಬಂಧವಿಲ್ಲ – ಇದು ನಿಷೇಧಿತ ಸಂಘಟನೆಯಲ್ಲ’ ಇದು ಎಸ್‌ಎಫ್‌ಜೆ ಎಂದು ವಾದಿಸಿದರು.   ನ್ಯಾಯಾಧೀಶರು  ಫೆಬ್ರವರಿ 23 – ಸೋಮವಾರದವರೆಗೆ ಆದೇಶವನ್ನು ಕಾಯ್ದಿರಿಸಿದ್ದಾರೆ.

  

ಒತ್ತಡ ಅಥವಾ Stress ಕಡಿಮೆ ಮಾಡಿಕೊಳ್ಳುವುದು ಹೇಗೆ? ಮಾನಸಿಕ ತಜ್ಞೆ ಡಾ. ಸ್ನೇಹಾ ಮಾತುಗಳನ್ನು ಈ ವೀಡಿಯೋದಲ್ಲಿ ಕೇಳಿ 

ಒತ್ತಡವು ಒಂದು ನೈಸರ್ಗಿಕ ಕ್ರಿಯೆ. ‘ತಲೆ ಇರುವವರಿಗೆಲ್ಲಾ ತಲೆನೋವು ತಪ್ಪಿದ್ದಲ್ಲ’ ಎಂಬ ಮಾತಿನಂತೆ  ಮನಸ್ಸು ಎಂಬುದು ಇರುವವರೆಗೆ ಒತ್ತಡವೂ ಇದ್ದೇ ಇರುತ್ತದೆ. 

ನಿಮ್ಮ ಕಾರ್ಯಕ್ಷೇತ್ರದಲ್ಲಿ ಆರಂಭದಲ್ಲಿ ನಿಮ್ಮ ಮೇಲೆ ಒತ್ತಡವು ಹೆಚ್ಚಾದಂತೆ ನಿಮ್ಮ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ.

ಆದರೆ ಆ ಕಾರ್ಯಕ್ಷಮತೆಯ ಉತ್ತಮ ಫಲಿತಾಂಶವನ್ನು ಕೊಟ್ಟು ಸಾಧನೆಯ ನಿರೀಕ್ಷೆ ಮತ್ತು ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದಾಗ. ಒತ್ತಡವು ದೇಹ ಮತ್ತು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಹಾಗಾದರೆ ಈ ಒತ್ತಡ ಅಥವಾ Stress ನ ಲಕ್ಷಣಗಳೇನು? ದೈನಂದಿನ ಜೀವನದಲ್ಲಿ ಎದುರಾಗುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಅದರಿಂದ ಮನುಷ್ಯನ ದೇಹದಲ್ಲಿ ಉಂಟಾಗುವ ಬದಲಾವಣೆಗಳೇನು ಎಂಬುದನ್ನು ತಿಳಿದುಕೊಳ್ಳಬೇಕೇ?

ಈ ವೀಡಿಯೋ ನೋಡಿ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ವಿ.ಜಿ  ಮನಮುಟ್ಟುವಂತೆ ಒತ್ತಡ ಅಥವಾ  Stress ಬಗ್ಗೆ ವಿವರಿಸಿದ್ದಾರೆ. 

ಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ, ವಿಶ್ವವಿನೋದ ಬನಾರಿಯವರಿಂದ ಶ್ರದ್ಧಾಂಜಲಿ ಗೀತೆ

ಶ್ರದ್ಧಾಂಜಲಿ ಗೀತೆ ದಿ| ಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ

ಪುಂಡು ವೇಷದಿ ಪ್ರಮುಖ | ಪಂಡಿತನೆ ಕೋಲ್ಮಿಂಚು | ಗಂಡುಗಲಿ ಘನರಂಗ ರಾಜನಾಗಿ || ಚೆಂಡಿನಂತೆಸೆದ ಸಿರಿ | ಮಂಡಲದ ಸಿಡಿಲ ಮರಿ | ಕೊಂಡಿ ಕಳಚಿತು ಯಕ್ಷ ಭಂಡಾರದಿಂದ || ೧ ||

ಹರಿಯ ಪದದೊಳಗೈಕ್ಯ | ನಿರತ ಪೆಸರಾದಿತ್ಯ | ವರ ಕಿರಣದಂತೆ ಸು | ಸ್ಥಿರವು ಜನಮನದಿ || ಪರಮ ಮಂಗಲಮೂರ್ತಿ | ಕರುಣಮಯ ಸತ್ಕೀರ್ತಿ | ಕರುಣಿಸಲಿ ಸದ್ಗತಿಯ ಮುನಿಪುರದ ಕೃಷ್ಣ || ೨ ||

ಓಂ ಶಾಂತಿ

ಲೇಖಕ: ವಿಶ್ವವಿನೋದ ಬನಾರಿ 

ವಿಶ್ವವಿನೋದ ಬನಾರಿ, ‘ಬನಸಿರಿ’

‘ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ’ಯ ಸಮಾಜಮುಖಿ ಕಾರ್ಯಕ್ರಮಗಳು 

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು 2004 ನವಂಬರ್ ತಿಂಗಳಿನಲ್ಲಿ ಆರಂಭವಾಯಿತು. ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ತಮ್ಮ ಜೀವನ ಶೈಲಿಯಿಂದ, ಸಾಮಾಜಿಕ ಚಿಂತನೆಗಳಿಂದ, ಸಮಕಾಲೀನ ವ್ಯಾವಹಾರಿಕ, ಧಾರ್ಮಿಕ,ಸಾಂಸ್ಕೃತಿಕ ಮತ್ತು ಆರ್ಥಿಕ  ಪ್ರಜ್ಞೆಗಳನ್ನು ಇರಿಸಿಕೊಂಡು ಬಾಳಿ ಬದುಕಿದವರು.

ಕೀಲಾರು ಮನೆತನದ ಶ್ರೀ ರಾಮಚಂದ್ರಯ್ಯ ಗಂಗಮ್ಮ ದಂಪತಿಗಳಿಗೆ ಪುತ್ರನಾಗಿ ಫೆಬ್ರವರಿ 24, 1934ರಲ್ಲಿ ಈ  ಲೋಕದ ಬೆಳಕನ್ನು ಕಂಡ ಶ್ರೀಯುತರು ವೈದ್ಯಕೀಯ ವಿದ್ಯೆಯನ್ನು ಅಭ್ಯಸಿಸಿ, ಅದನ್ನು ವೃತ್ತಿಯಾಗಿ  ಸ್ವೀಕರಿಸದೆ ಸಮಾಜ  ಸೇವೆಯನ್ನೇ ಗುರಿಯಾಗಿ  ಸ್ವೀಕರಿಸಿ ನಿಶ್ಯುಲ್ಕವಾಗಿ ಔಷಧೋಪಚಾರಗಳನ್ನು ಮಾಡುತ್ತಿದ್ದರು. ತಮ್ಮ ಭೂಮಿಯ ಹಲವು ಭಾಗಗಳನ್ನು ಅಲ್ಲಿಯೇ ವಾಸಿಸುತ್ತಿದ್ದವರಿಗೆ ಕರುಣಾ ದೃಷ್ಟಿಯಿಂದ ಕಾಯಿದೆಯನ್ನೂ, ಸರಕಾರವನ್ನೂ ಗೌರವಿಸಿ ಬಿಟ್ಟುಕೊಟ್ಟರು.


ಶ್ರೀಯುತರು ಮಂಗಳೂರು ಹೋಬಳಿಯ ಪಂಜ ಸೀಮೆಯ  ಹವ್ಯಕ ಮುಖಂಡರೂ, ಧಾರ್ಮಿಕ ಮುಂದಾಳುವೂ ಆಗಿದ್ದರು. ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಪರಮ ಭಕ್ತರಾಗಿದ್ದ ಡಾ| ಕೀಲಾರು ಗೋಪಾಲ ಕೃಷ್ಣಯ್ಯನವರು ದೇವಳದ ಜೀರ್ಣೋದ್ಧಾರಾದಿ  ಸಕಲಕಾರ್ಯಗಳಲ್ಲೂ  ಸಕ್ರಿಯರಾಗಿದ್ದರು. ಶ್ರೀ

ಕ್ಷೇತ್ರದಲ್ಲಿ “ಕೀಲಾರು ಉಗ್ರಾಣ” ಎಂಬ ಉಗ್ರಾಣವೇ ಇದಕ್ಕೆ ಸಾಕ್ಷಿ. ಕಲ್ಲುಗುಂಡಿ ಮತ್ತು ಸಂಪಾಜೆ ಗ್ರಾಮಗಳ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದ  ಶ್ರೀಯುತರು ಸಮಾಜಮುಖಿಯಾಗಿಯೇ ಚಿಂತಿಸುತ್ತಾ ಸಮಾಜಮುಖಿಯಾಗಿಯೇ ಬಾಳುತ್ತಿದ್ದರು. ತೋಡಿಕಾನ ಕಲ್ಲುಗುಂಡಿ ಪರಿಸರದಲ್ಲಿ ಇರುವ ದೇವಾಲಯ, ಶಾಲೆಗಳಲ್ಲಿ ವಿವಿಧ ಉದ್ದೇಶಗಳನ್ನಿರಿಸಿ ಕೊಂಡು ವಾರ್ಷಿಕ ವಿನಿಯೋಗಕ್ಕಾಗಿ ಅನೇಕ ಶಾಶ್ವತ ನಿಧಿಗಳನ್ನು ಸ್ಥಾಪಿಸಿದರು.

ಸಾಂಸಾರಿಕವಾಗಿಯೂ ಸಂತೃಪ್ತ ಜೀವನ ನಡೆಸಿ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಇವರೊಂದಿಗೆ ಆದರ್ಶ ಗೃಹಸ್ಥ ಜೀವನವನ್ನು ನಡೆಸಿ, ಶ್ರೀ ರಾಜಾರಾಮ ಮತ್ತು ಸುಮನಾ ಗೌರಿ ಎಂಬ ಇಬ್ಬರು ಮಕ್ಕಳನ್ನು ಪಡೆದರು. ಜುಲೈ  3, 2004ರಂದು ಜೀವನವನ್ನು ಪರಿಸಮಾಪ್ತಿಗೊಳಿಸಿ ಅನಂತದಲ್ಲಿ ಲೀನವಾದರು. ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಅವರಿಗಾಗಿ ಬದುಕದೆ ಪರರಿಗಾಗಿ ಬದುಕಿದರು.

ಡಾ. ಕೀಲಾರು ಗೋಪಾಲ ಕೃಷ್ಣಯ್ಯನವರ ಜೀವನಾದರ್ಶಗಳನ್ನು, ಸಮಾಜಸೇವೆಯನ್ನು  ಮುಖ್ಯ ಉದ್ದೇಶವಾಗಿರಿಸಿಕೊಂಡು ಶ್ರೀಯುತರ ಉತ್ತರಾಧಿಕಾರಿಗಳು, ಬಂಧುಗಳು, ಅಭಿಮಾನಿಗಳು ಸೇರಿ ಚಿಂತನೆಯನ್ನು ನಡೆಸಿ  ರೂಪಿಸಿದ  ಸಂಸ್ಥೆಯೇ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ. ಜಾತಿ, ಪಂಥ, ಮತರಹಿತವಾಗಿ ಸಮಾಜಸೇವೆಯನ್ನು ಮಾಡುವುದೇ ಈ ಪ್ರತಿಷ್ಠಾನದ ಮುಖ್ಯ ಉದ್ದೇಶವಾಗಿದೆ. 

ಸಮಾಜದ ಸ್ವಾಸ್ಥ್ಯವನ್ನು ಕಾಪಿಡುವಲ್ಲಿ ಆರೋಗ್ಯವು ಪ್ರಮುಖ ಪಾತ್ರವನ್ನು ವಹಿಸುವುದರಿಂದ ಈ ಪ್ರತಿಷ್ಟಿತ ಪ್ರತಿಷ್ಠಾನವು ಅಶಕ್ತರಿಗೆ ನೆರವನ್ನೀಯುವುದರ   ಜೊತೆಗೆ ಸಾಧಕರನ್ನೂ  ವಿದ್ಯಾರ್ಥಿಗಳನ್ನೂ ಕಲಾವಿದರನ್ನೂ ಪ್ರೋತ್ಸಾಹಿಸುತ್ತಿರುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಸಂಪಾಜೆ ಯಕ್ಷೋತ್ಸವ, ವೈದಿಕರಿಗೆ ಅಭಿನಂದನೆ, ಕಲಾವಿದರಿಗೆ ಸನ್ಮಾನ, ಶೇಣಿ ಪ್ರಶಸ್ತಿ ಪ್ರಧಾನ, ಡಾ. ಕೀಲಾರು ಗೋಪಾಲಕೃಷ್ಣಯ್ಯ ಮತ್ತು ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮಗಳನ್ನು 2004ರಿಂದ ಈ ಸಂಸ್ಥೆಯು ಪ್ರತಿ ವರುಷ ನಡೆಸಿಕೊಂಡು ಬರುತ್ತಿದೆ.

ಯಕ್ಷಗಾನ  ಸಂಬಂಧೀ  ಕೃತಿ ಗಳಾದ ‘ಪಾರ್ತಿಸುಬ್ಬನ ಯಕ್ಷಗಾನ ಕೃತಿಗಳು’ (ಎರಡನೆಯ ಮುದ್ರಣ), ಯಕ್ಷೋಪಾಸನೆ (ಶ್ರೀ ಕೆ. ಗೋವಿಂದ ಭಟ್ಟರ ಆತ್ಮವೃತ್ತಾಂತ), ಯಕ್ಷಪಾತ್ರ ದೀಪಿಕಾ ಮೊದಲಾದ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಹಿರಿಮೆ ಈ ಪ್ರತಿಷ್ಠಾನಕ್ಕೆ ಸಲ್ಲುತ್ತದೆ. ಡಾ| ಕೀಲಾರು ಗೋಪಾಲಕೃಷ್ಣಯ್ಯನವರ ಸಮಾಜ ಸೇವೆಯನ್ನು ಪ್ರತಿಷ್ಠಾನವು ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿನಂದನಾರ್ಹವಾದುದು.

ಕಳೆದ ವರ್ಷ ಸಂಪಾಜೆ ಯಕ್ಷೋತ್ಸವ ತನ್ನ ರಜತ ಸಂಭ್ರಮವನ್ನು ವೈಭವದಿಂದ ಆಚರಿಸಿತು. ಮೂರು ರಂಗಸ್ಥಳಗಳು  ಏಕಕಾಲಕ್ಕೆ ‘ದೇವೀಮಹಾತ್ಮೆ’ ಯಕ್ಷಗಾನ ಪ್ರದರ್ಶನ, ಕೃತಿಗಳ ಬಿಡುಗಡೆ,  ಸಾಧಕರಿಗೆ ಸನ್ಮಾನ, ಕಲಾವಿದರಿಗೆ ಸನ್ಮಾನ  ನಡೆಯಿತು. ಯಕ್ಷೋತ್ಸವವನ್ನು ಆಸ್ವಾದಿಸಲು ಬಂದ ಜನರಿಗೂ ಉಚಿತ ಊಟ ಉಪಚಾರಗಳ ವ್ಯವಸ್ಥೆ ಅಭಿನಂದನಾರ್ಹ.

ಶ್ರೀ ಟಿ. ಶ್ಯಾಮ ಭಟ್


ಈ ಸಂಪಾಜೆ ಯಕ್ಷೋತ್ಸವದ ರೂವಾರಿ ಯಕ್ಷಗಾನವನ್ನೂ, ಕಲಾವಿದರನ್ನೂ ಅತಿಯಾಗಿ ಪ್ರೀತಿಸಿ ಗೌರವಿಸುವ ಶ್ರೀ ಟಿ. ಶ್ಯಾಮ ಭಟ್ಟರು. ಇಂತಹಾ ಅದ್ದೂರಿಯ ಗೊಂದಲಗಳಿಲ್ಲದ, ಯಾರ ಮನಸ್ಸಿಗೂ ನೋವನ್ನುಂಟುಮಾಡದೆ, ಶಿಸ್ತುಬದ್ಧವಾದ, ಒಮ್ಮೆ ನೊಡಿದರೆ ಮತ್ತೆ ಬಂದು ನೋಡಬೇಕೆನಿಸುವ ಮಹಾನ್ ಪ್ರದರ್ಶನವನ್ನು(ಸಂಪಾಜೆ ಯಕ್ಷೋತ್ಸವ) ನಡೆಸುವುದು ಸುಲಭದ ಕೆಲಸವಲ್ಲ. ಯಕ್ಷಗಾನ ಕಲೆಯ ಮೇಲೆ ಅಭಿಮಾನ ಪ್ರೀತಿ ಆಳವಾಗಿರಬೇಕು.

ಸಾಹಸ ಬೇರೆ, ಸಾಮರ್ಥ್ಯ ಬೇರೆ. ಸಾಹಸಕ್ಕೂ ಸಾಮರ್ಥ್ಯಕ್ಕೂ ಅಂತರವಿದೆ. ಸಾಹಸವು ಸಾಮರ್ಥ್ಯವನ್ನು ಹೊರಗೆಡಹುವುದಕ್ಕೆ  ಸಾಧನ. ಶ್ರೀ ಟಿ. ಶ್ಯಾಮ ಭಟ್ಟರು ಸಾಹಸಿಗರು. ಅವರು ಸಾಹಸ ಪಟ್ಟಷ್ಟೂ ಸಾಮರ್ಥ್ಯವನ್ನು ಹೊರಗೆಡಹಬಲ್ಲರು. ಲೌಕಿಕವಾಗಿ ಒಬ್ಬನೇ ಆಗಿ ಕಂಡರೂ ಅವರ ಮನದೊಳಗೆ ಅನೇಕ ಯೋಚನೆ ಹಾಗೂ ಯೋಜನೆಗಳಿವೆ. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲೆಯನ್ನೂ ಕಲಾವಿದರನ್ನೂ, ಪ್ರೇಕ್ಷಕರನ್ನೂ ಪ್ರೀತಿಸಿ ಗೌರವಿಸುವ ಶ್ರೀ ಟಿ. ಶ್ಯಾಮ ಭಟ್ ಅವರು ಅಭಿನಂದನಾರ್ಹರು

ಲೇಖಕ: ರವಿಶಂಕರ್ ವಳಕ್ಕುಂಜ

ಬಣ್ಣದ ವೇಷಗಳೊಂದಿಗೆ ಎದುರು ವೇಷಗಳಲ್ಲೂ ಪ್ರಾವೀಣ್ಯತೆ – ಜಗದಾಭಿರಾಮ ಸ್ವಾಮಿ ಪಡುಬಿದ್ರಿ 

ಇವರು ಸ್ತ್ರೀವೇಷ, ಪುಂಡುವೇಷ, ರಾಜವೇಷ, ಬಣ್ಣದ ವೇಷ ಹೀಗೆ ಯಾವ ವೇಷಗಳನ್ನಾದರೂ ಮಾಡಬಲ್ಲ ಸಮರ್ಥರು. ಕಲಾಭಿಮಾನಿಗಳಿಂದ, ಸಹಕಲಾವಿದರಿಂದ, ಮಿತ್ರರಿಂದ ಜಗತ್, ಜಗದಾಭಿ, ಹಿರಿಯ ಕಲಾವಿದರಿಂದ ‘ಮಾಣಿ’ ಎಂದೇ ಕರೆಸಿಕೊಳ್ಳುತ್ತಿದ್ದ ಇವರ ಪೂರ್ಣ ಹೆಸರು ಜಗದಾಭಿರಾಮಸ್ವಾಮಿ ಪಡುಬಿದ್ರೆ.

ಹುಟ್ಟೂರು ಪಡುಬಿದ್ರೆ ಉದಯಾದ್ರಿ ಮಠ. 11-11-1973 ರಂದು ಜನನ. ಜ್ಯೋತಿಷಿಯೂ, ಪಡುಬಿದಿರೆ ಬಾಲಗಣಪತಿ, ಪ್ರಸನ್ನ ಪಾರ್ವತೀ ದೇವಸ್ಥಾನದ ಅರ್ಚಕರೂ ಆಗಿದ್ದ ಶ್ರೀ ಪಟ್ಟಾಭಿರಾಮ ಸ್ವಾಮಿ, ವಸಂತಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಹಿರಿಯವರೇ ಜಗದಾಭಿರಾಮಸ್ವಾಮಿ.

ಪ್ರಾಥಮಿಕ ವಿದ್ಯಾಭ್ಯಾಸ ಪಡುಬಿದಿರೆಯಲ್ಲಿ ಪೂರೈಸಿ (7ನೇ ತರಗತಿ) ಮನೆಯಲ್ಲಿ ತಂದೆಗೆ ಸಹಾಯಕನಾಗಿ ದೇವಸ್ಥಾನದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. 1986ರಲ್ಲಿ ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯವನ್ನು ಅಭ್ಯಸಿಸಿದರು.

ಅದೇ ವರುಷವೇ ಜಗದಾಭಿ ಶ್ರೀ ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾಗಿದ್ದರು. ಮೇಳಕ್ಕೆ ಆಯ್ಕೆಯಾಗುವೆ, ಸೇರುವೆ ಎಂಬ ಕಲ್ಪನೆಯೂ ಮೊದಲು ಅವರಿಗಿರಲಿಲ್ಲವಂತೆ. ಅಯೋಚಿತವಾಗಿ ಅನಿರೀಕ್ಷಿತವಾಗಿ ಅವಕಾಶ ಒದಗಿ ಬಂತು. ಹಿರಿಯ, ಶ್ರೇಷ್ಠ ಕಲಾವಿದರುಗಳಿರುವ ಶ್ರೀ ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾದುದು ಜಗದಾಭಿಯವರಿಗೂ, ಮನೆಯವರಿಗೂ, ಓರಗೆಯವರಿಗೂ ಸಂತೋಷವನ್ನೇ ತಂದು ಕೊಟ್ಟಿತಂತೆ.

ಫೋಟೋ ಕೃಪೆ: ರಾಮ್ ನರೇಶ್ ಮಂಚಿ 

ಶ್ರೀ ಧರ್ಮಸ್ಥಳ ಮೇಳದಲ್ಲಿ ಸತತ 7 ವರ್ಷ ಕಲಾಸೇವೆಯನ್ನು ಮಾಡಿ ನಂತರ ಒಂದು ವರ್ಷ ಬಪ್ಪನಾಡು ಮೇಳದಲ್ಲಿ ತಿರುಗಾಟ ನಡೆಸಿದರು ಜಗದಾಭಿ. ನಂತರ ಮಧೂರು ಮೇಳದಲ್ಲಿ ರಾಮಕೃಷ್ಣ ಮಯ್ಯ, ನಾವಡರು, ಹೊಳ್ಳರ ಒಡನಾಟ ನಾನು ಕಲಾವಿದನಾಗಿ ಕಾಣಿಸಿಕೊಳ್ಳಲು ಸಹಕಾರಿಯಾಯಿತು ಎಂದು ಜಗದಾಭಿಯವರು ಹೇಳುತ್ತಾರೆ.

ನಂತರ ಕಟೀಲು ಮೇಳದಲ್ಲಿ 6 ವರ್ಷಗಳ ಕಾಲ ತಿರುಗಾಟ. ಕುರಿಯ ಗಣಪತಿ ಶಾಸ್ತ್ರಿಗಳು, ಪದ್ಯಾಣ ಶಂಕರನಾರಾಯಣ ಭಟ್ಟರು, ಗುಡ್ಡಪ್ಪ ಗೌಡ, ಗೇರುಕಟ್ಟೆ ಇವರ ಒಡನಾಟ ಸಿಕ್ಕಿದ್ದು ಭಾಗ್ಯ. ನನ್ನನ್ನು ತಿದ್ದಿತೀಡಿದರು, ಪ್ರೋತ್ಸಾಹಿಸಿದರು. ಗುಂಡಿಮಜಲು ಮತ್ತು ಮಂಜುನಾಥ ಭಟ್ಟರ ಒಡನಾಟವೂ ಸಿಕ್ಕಿತು. ಹಾಗಾಗಿಯೇ ನಾನು ಕಲಾವಿದನಾಗಿ ರೂಪುಗೊಂಡೆ ಎಂದು ವಿನೀತರಾಗಿ, ಕೃತಜ್ಞತಾಪೂರ್ವಕ ಅಂದಿನ ದಿನಗಳನ್ನು ನೆನಪಿಸುತ್ತಾರೆ ಶ್ರೀ ಜಗದಾಭಿಯವರು.

ಗೇರುಕಟ್ಟೆಯವರ ಎಲ್ಲಾ ವೇಷಗಳನ್ನೂ, ಕುರಿಯ ಭಾಗವತರು ಪ್ರಸಂಗಗಳನ್ನು ನಿರ್ದೇಶಿಸುವ ರೀತಿಯನ್ನೂ ನೋಡುತ್ತಾ ಬೆಳೆದ ಕಲಾವಿದ ಜಗದಾಭಿ. ಗೇರುಕಟ್ಟೆ ಗಂಗಯ್ಯ ಶೆಟ್ಟರು ಮಹಿಷಾಸುರನಾಗಿ ವಿಜೃಂಭಿಸುತ್ತಿದ್ದ ಕಾಲವದು. ಅನಿವಾರ್ಯವಾಗಿ ಮಹಿಷಾಸುರ ಪಾತ್ರವನ್ನು ಮಾಡುವ ಅನಿವಾರ್ಯತೆ ಬಂದಾಗ ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ ಜಗದಾಭಿಯವರು ಮಹಿಷಾಸುರನಾಗಿ ಯಶಸ್ವಿಯಾದುದು ಇತಿಹಾಸ. ಕುರಿಯ ಮತ್ತು ಪದ್ಯಾಣರ, ಸಹಕಲಾವಿದರ ಸಹಾಯದಿಂದ ಆಗ ಎಲ್ಲಾ ವೇಷಗಳನ್ನೂ ಮಾಡುವಂತಾಯಿತು.
                         

ಯಕ್ಷಗಾನ ಕಲಾವಿದನಾಗಿ ನಾನು ಅತ್ಯಂತ ತೃಪ್ತ. ಮಹಿಷಾಸುರ ಮತ್ತು ಪುರಾಣ ಪ್ರಸಂಗದ ಅನೇಕ ಬಣ್ಣದ ವೇಷಗಳು ನನಗೆ ಪ್ರಸಿದ್ಧಿಯನ್ನು ನೀಡಿದವು. ಪ್ರೇಕ್ಷಕರು ಮೆಚ್ಚುವಂತಾಯಿತು ಎಂದು ಹೇಳುವ ಜಗದಾಭಿಯವರು 1999ರಲ್ಲಿ ತೀರ್ಥರೂಪರನ್ನು ಕಳೆದುಕೊಂಡು ಮೇಳ ಬಿಡುವ ಅನಿವಾರ್ಯತೆಗೆ ಸಿಲುಕಿದರು.

ಮತ್ತೆ ಐದು ವರ್ಷಗಳ ಕಾಲ ದೇವಳದ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅತಿಥಿ ಕಲಾವಿದನಾಗಿ ಕಾಣಿಸಿಕೊಂಡ ಶ್ರೀ ಜಗದಾಭಿರಾಮಸ್ವಾಮಿ ಪಡುಬಿದ್ರಿ ಪ್ರಸ್ತುತ ಎರಡು ವರ್ಷಗಳಿಂದ ಎಡನೀರು ಮೇಳ(2) ದಲ್ಲಿ, ಈಗ ಹನುಮಗಿರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಗದಾಭಿರಾಮಸ್ವಾಮಿಯವರ ಮಡದಿ ನಾಗರತ್ನ ಮತ್ತು ಅವರಿಗೆ ಮೂರು ಮಂದಿ ಮಕ್ಕಳು (ಅಮರಾಭಿರಾಮಸ್ವಾಮಿ, ಅಪರ್ಣಾ, ಅಮೃತ). ಸಹೋದರನಾದ ನಯನಾಭಿರಾಮಸ್ವಾಮಿ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದಾರೆ. (Catering and Sweet)

ಜಗದಾಭಿಯವರು ‘ಯಕ್ಷಮಂಜೂಷ’ ಕುಳಾಯಿ ತಂಡದ ಸದಸ್ಯನಾಗಿ ದೇಶದ ವಿವಿಧೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಅಲ್ಲದೆ ನಿಟ್ಟೆ ಕಾಲೇಜಿನಲ್ಲಿ ನಾಟ್ಯ ತರಗತಿಯನ್ನೂ, ಕಾಲೇಜು ಮಕ್ಕಳ ಯಕ್ಷಗಾನ ಸ್ಪರ್ಧೆಗೆ ತರಬೇತಿ ಮತ್ತು ನಿರ್ದೇಶನವನ್ನೂ ನೀಡಿರುತ್ತಾರೆ.

ಲೇಖಕ: ರವಿಶಂಕರ್ ವಳಕ್ಕುಂಜ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ  6 ನೇ ಎನ್ಐಟಿಐ ಆಯೋಗ ಸಭೆ (ನೀತಿ ಆಯೋಗ) – ಕ್ಯಾಪ್ಟನ್ ಅಮರಿಂದರ್ ಸಿಂಗ್, ಮಮತಾ ಬ್ಯಾನರ್ಜಿ ಗೈರು? 

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎನ್‌ಐಟಿಐ ಆಯೋಗ್‌ನ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಇದರಲ್ಲಿ ಕೃಷಿ, ಮೂಲಸೌಕರ್ಯ, ಉತ್ಪಾದನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ತಳಮಟ್ಟದಲ್ಲಿ ಸೇವೆ ವಿತರಣೆ, ಮತ್ತು ಆರೋಗ್ಯ ಮತ್ತು ಪೋಷಣೆ ಕುರಿತು ಚರ್ಚೆಗಳು ನಡೆಯಲಿವೆ.  

ಈ ಸಭೆಯು  ಲಡಾಖ್ ನ  ಪ್ರಥಮ ಬಾರಿಯ ಭಾಗವಹಿಸುವಿಕೆಗೂ ಸಾಕ್ಷಿಯಾಗಲಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರ  ಕೇಂದ್ರಾಡಳಿತ ಪ್ರದೇಶವಾಗಿ ಭಾಗವಹಿಸುತ್ತಿದೆ. ಇದು  ಸರ್ಕಾರದ ನೀತಿ ಆಯೋಗ ಅಥವಾ ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆ (NITI=National Institution for Transforming India)ಯ ಆರನೇ ಸಭೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಮಮತಾ ಬ್ಯಾನರ್ಜಿ ಈ ಸಭೆಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.  ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರ ಪ್ರಾಂತ್ಯಗಳ ಮುಖ್ಯಮಂತ್ರಿಗಳು ( ಕೇಂದ್ರಾಡಳಿತ ಪ್ರದೇಶಗಳು), ಶಾಸಕರು ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳೂ ಸೇರಿದ್ದಾರೆ.

ಆದರೆ, ಈ ವರ್ಷ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರೊಂದಿಗಿನ ಸಭೆಯನ್ನು ಬಹಿಷ್ಕರಿಸುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.  ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪರವಾಗಿ ಈ ಸಭೆಯಲ್ಲಿ ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಭಾಗವಹಿಸಲಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಟಿಎಂಸಿ ಮುಖ್ಯಸ್ಥರು ಈ ಹಿಂದೆ ಎನ್‌ಐಟಿಐ ಆಯೋಗ್ ಸಭೆಗಳನ್ನು ಬಹಿಷ್ಕರಿಸಿದ್ದರು. ಇದನ್ನು “ಫಲಪ್ರದವಲ್ಲದ ವ್ಯಾಯಾಮ” ಎಂದು ಹೇಳಿದ್ದರು, ದೇಶಕ್ಕೆ ಆರ್ಥಿಕ ಶಕ್ತಿ ಇಲ್ಲ ಆದುದರಿಂದ ಇದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಟಿಎಂಸಿ ಆರೋಪಿಸಿತ್ತು. 

ಮೇಳಗಳ ಇಂದಿನ ( 20.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 20.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಾಳೆಹೊಳೆ, ರಥಬೀದಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ = ಶ್ರೀ ರಾಘವೇಂದ್ರ ನಿಲಯ ನೆಕ್ಕಿಲ ದೇರೆಬೈಲು ಅಶೋಕನಗರ ಮಂಗಳೂರು 

ಕಟೀಲು ಎರಡನೇ ಮೇಳ ==   ನಾಗನವಳಚ್ಚಿಲ್, ಮಾರ್ನಬೈಲು, ಸಜಿಪ ಮುನ್ನೂರು, ಬಂಟ್ವಾಳ 

ಕಟೀಲು ಮೂರನೇ ಮೇಳ= ಧರ್ಮಕ್ಕಿ, ಕೈರಂಗಳ ವಯಾ ಕುರ್ನಾಡು 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಭಜನಾ ಮಂಡಳಿ ಮೂಡುಶೆಡ್ಡೆ , ವಯಾ ವಾಮಂಜೂರು ಮಂಗಳೂರು 

ಕಟೀಲು ಐದನೇ ಮೇಳ == ಮಲ್ಲಿಗೆ ಅಂಗಡಿ ಕಟೀಲು 

ಕಟೀಲು ಆರನೇ ಮೇಳ == ಹೊಸಂಗಡಿ ವಯಾ ಮೂಡಬಿದ್ರಿ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಗಜಾನನ ಭವನ ಬಿಲ್ಡಿಂಗ್, ಬಸ್ಸ್ಟ್ಯಾಂಡ್, ಕೊಪ್ಪ 

ಮಂದಾರ್ತಿ ಎರಡನೇ ಮೇಳ   ==   ಶ್ರೀ ದುರ್ಗಾ, ಅಲೆಯ, ನಡೂರು 

ಮಂದಾರ್ತಿ ಮೂರನೇ ಮೇಳ  ==   ಕೋಣಿಮನೆ ಕೊರ್ಗಿ 

ಮಂದಾರ್ತಿ ನಾಲ್ಕನೇ ಮೇಳ   ==  ದಬ್ಬೆಕಟ್ಟೆ, ಸುಳ್ವಾಡಿ ಕಾಳಾವರ 

ಮಂದಾರ್ತಿ    ಐದನೇ ಮೇಳ  ==  ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಮಂಗಳೂರು 

ಶ್ರೀ ಹನುಮಗಿರಿ ಮೇಳ  ==  ಶ್ರೀ ಮಹಾಗಣಪತಿ ದೇವಸ್ಥಾನ ಮೊಗರ್ನಾಡು, ನರಿಕೊಂಬು, ಪಾಣೆಮಂಗಳೂರು – ಶ್ರೀ ದೇವಿ ಲಲಿತೋಪಾಖ್ಯಾನ 

ಶ್ರೀ ಸಾಲಿಗ್ರಾಮ ಮೇಳ == ಉಪ್ಪುಂದ ಮಡಿಕಲ್ ಆರಮಕೋಡಿ ಈಶ್ವರ ದೇವಸ್ಥಾನ – ದಕ್ಷಯಜ್ಞ, ವೀರಮಣಿ, ಮೀನಾಕ್ಷಿ ಕಲ್ಯಾಣ  

ಶ್ರೀ ಪೆರ್ಡೂರು ಮೇಳ == ಹೇರಂಜೆ “ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್” ಆವರಣ – ವೀರ ಬರ್ಬರಿಕ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹನೇಡಿಮನೆ, ಹಯ್ಯಂಗಾರ್, ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಸುಚಿತ್ರಾ’ ಚಿತ್ತೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ‘ಮಂಜುನಾಥ ನಿಲಯ’ ಶಂಕರನಾರಾಯಣ 

ಶ್ರೀ ಪಾವಂಜೆ ಮೇಳ  ==  ಶ್ರೀ ಭಗವತಿ ದೇವಸ್ಥಾನ ವಿಟ್ಲ – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಚೌಕುಳಮಕ್ಕಿ, ಆಜ್ರಿ 

ಕಮಲಶಿಲೆ ಮೇಳ ‘ಬಿ‘ == ಮತ್ತಿಕೈ ಸಂಪಿಕಟ್ಟೆ 

ಶ್ರೀ ಬಪ್ಪನಾಡು ಮೇಳ ==ಬೃಂಡೇಲ್ ಪದವು – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಡುಂಬೂರು ಮೈದಾನ (ಬೈಕಂಪಾಡಿ) – ಮುಕುಂದ ಮುರಾರಿ 

ಶ್ರೀ ಅಮೃತೇಶ್ವರೀ ಮೇಳ == ಕಳ್ಳಿಗುಡ್ಡೆ ಬಳ್ಕೂರು 

ಶ್ರೀ ಸೌಕೂರು ಮೇಳ == ಸೌಕೂರು ಬೋಳುಕಟ್ಟೆ ದುರ್ಗಾನಗರ – ವೀರಮಣಿ, ರತ್ನಾವತಿ ಕಲ್ಯಾಣ 

ಶ್ರೀ ಹಾಲಾಡಿ ಮೇಳ == ಚಿಕ್ಕಬಿಳಗುಂಜಿ ಭೂತೇಶ್ವರ ದೇವರ ಸನ್ನಿಧಿ – ಚಕ್ರ ಚಂಡಿಕಾ, ಕನಕಾಂಗಿ  

ಶ್ರೀ ಬೆಂಕಿನಾಥೇಶ್ವರ ಮೇಳ  == ಸಾಣೂರು ಶುಂಠಿಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಚೆಗ್ರಿಬೆಟ್ಟು ನ್ಯೂ ಸ್ಟಾರ್ ಫ್ರೆಂಡ್ಸ್ ದೂಮದಹಾಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾಳ್ಕುದ್ರು ಐರೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ಮೂಡುತಾರಿಬೇರು ಆದಿಶಕ್ತಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಕಾರ್ಕಳ ಸಾಂತ್ರಬೆಟ್ಟು ನಾಗಬ್ರಹ್ಮ ಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ  

ಶ್ರೀ ಶನೀಶ್ವರ ಮೇಳ == ಮೇಲ್ ಹೊಸೂರು 

ಶ್ರೀ ಸಿಗಂದೂರು ಮೇಳ == ಸೂರ್ಯಕೊಪ್ಪ ಸೂರ್ಯ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಚೇರ್ಕಾಡಿ ಗದ್ದುಗೆಮನೆ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಬಾಚಕೆರೆ ಮೇಳ == ಪಡ್ದಂದಡ್ಕ – ಅಮರಶಿಲ್ಪಿ ವೀರ ಶಂಭು ಕಲ್ಕುಡ  

ಶ್ರೀ ಮಂಗಳಾದೇವಿ ಮೇಳ == ಮೂಡುಶೆಡ್ಡೆ – ತುಳು ಪ್ರಸಂಗ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ತೀರ್ಥಹಳ್ಳಿ ಬೆಟ್ಟಮಕ್ಕಿ 

ಶ್ರೀ ಮೇಗರವಳ್ಳಿ ಮೇಳ ==  ಹುಣಸೆಮಕ್ಕಿ- ಕುಲದೈವ ಪಂಜುರ್ಲಿ