Monday, September 21, 2026
Home Blog Page 338

ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ – ಗಾನಕೋಗಿಲೆ ಶ್ರೀ ಕೇಶವ ಹೆಗಡೆ ಕೊಳಗಿ 

ಸೂಕ್ತ ತರಬೇತಿಯನ್ನು ಹೊಂದಿಯೇ ಒಳ್ಳೆಯ ಹೆಸರನ್ನು ಗಳಿಸಿ ಬಹು ಬೇಡಿಕೆಯ ಭಾಗವತರಾಗಿ ಪ್ರಸ್ತುತ ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಕೊಳಗಿ ಶ್ರೀ ಕೇಶವ ಹೆಗಡೆಯವರೂ ಒಬ್ಬರು. ಶ್ರೀಯುತರು ಪ್ರಾಚಾರ್ಯ ಶ್ರೀ ಎಂ. ನಾರ್ಣಪ್ಪ ಉಪ್ಪೂರರ ಶಿಷ್ಯ. ಬಡಗು ತಿಟ್ಟಿನ ಹಿರಿಯ ಖ್ಯಾತ ವೇಷಧಾರಿ ಕೊಳಗಿ ಶ್ರೀ ಅನಂತ ಹೆಗಡೆಯವರ ಪುತ್ರ. 

ಗಾನಕೋಗಿಲೆ ಶ್ರೀ ಕೊಳಗಿ ಕೇಶವ ಹೆಗಡೆಯವರು ಉತ್ತರ ಕನ್ನಡ ಆಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊಳಗಿ ಎಂಬಲ್ಲಿ ಶ್ರೀ ಅನಂತ ಹೆಗಡೆ ಮತ್ತು ಅರುಂಧತೀ ದಂಪತಿಗಳಿಗೆ ಪುತ್ರನಾಗಿ 1964 ಮಾರ್ಚ್ 29ರಂದು ಜನಿಸಿದರು. ಕೊಳಗಿ ಶಾಲೆ ಮತ್ತು ಸಿದ್ಧಾಪುರದ ಶ್ರೀ ಸಿದ್ಧಿವಿನಾಯಕ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವರೆಗೆ ವಿದ್ಯಾಭ್ಯಾಸ. ಎಳವೆಯಲ್ಲೇ ಯಕ್ಷಗಾನ ನೋಡುವ ಹವ್ಯಾಸವಿತ್ತು.

ತಂದೆ ಕೊಳಗಿ ಶ್ರೀ ಅನಂತ ಹೆಗಡೆಯವರು ಆ ಕಾಲದ ಖ್ಯಾತ ಕಲಾವಿದ. ಇಡಗುಂಜಿ ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದರು. ಹಾಗಾಗಿ ಕೊಳಗಿ ಕೇಶವ ಹೆಗಡೆಯವರಿಗೆ ಯಕ್ಷಗಾನವು ರಕ್ತಗತವಾಗಿಯೇ ಇತ್ತು. ಕೊಳಗಿ, ಬಿಳಗಿ, ಹಾರ್ಸಿಕಟ್ಟಾ, ಕ್ಯಾದಗಿ, ಹೆಗ್ಗರಣೆ, ಹೇರೂರು, ಒಂದಾನೆ ಮೊದಲಾದ ಕಡೆಗಳಲ್ಲಿ ನಡೆಯುತ್ತಿದ್ದ ಇಡಗುಂಜಿ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ನೆಬ್ಬೂರರ ಭಾಗವತಿಕೆಯನ್ನೂ ತಂದೆ ಕೊಳಗಿ ಅನಂತ ಹೆಗಡೆಯವರ ಮತ್ತು ಗೋಡೆ ನಾರಾಯಣ ಹೆಗಡೆ ಮೊದಲಾದವರ ವೇಷಗಳನ್ನು ನೋಡುತ್ತಾ ಬೆಳೆದವರು.

ಬಾಲಕನಾಗಿದ್ದಾಗ ಕೊಳಗಿ ಕೇಶವ ಹೆಗಡೆಯವರಿಗೆ ವೇಷಧಾರಿಯಾಗಬೇಕೆಂಬ ಆಸೆಯಿತ್ತು. ಏಳನೆಯ ತರಗತಿಯ ವಿದ್ಯಾರ್ಥಿಯಾಗಿದ್ದಾಗ ನಾಟ್ಯವನ್ನು ಕಲಿತಿದ್ದರು. ಬಾಲಗೋಪಾಲನಾಗಿ ರಂಗಪ್ರವೇಶ ಮಾಡುವ ಅವಕಾಶವೂ ಆಗಿತ್ತು. ವಿಂದಾನುವಿಂದ ಕಾಳಗ ಪ್ರಸಂಗದಲ್ಲಿ ಅನುವಿಂದ, ವಿಶ್ವಾಮಿತ್ರ ಮೇನಕೆ ಪ್ರಸಂಗದಲ್ಲಿ ರತಿ ಮೊದಲಾದ ವೇಷಗಳನ್ನು ಮಾಡಿದ್ದರು. ನೆಬ್ಬೂರು ನಾರಾಯಣ ಭಾಗವತರ ಹಾಡುಗಳನ್ನು ಕೇಳಿಯೇ ತಾನೂ ಭಾಗವತನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು. ಎಸ್.ಎಸ್.ಎಲ್.ಸಿ ಆದ ಬಳಿಕ ಯಕ್ಷಗಾನ ಹಾಡುಗಾರಿಕೆಯನ್ನು ಕಲಿಯುವುದೆಂದು ನಿರ್ಧರಿಸಿಯೂ ಆಗಿತ್ತು.

ತಂದೆ ಶ್ರೀ ಕೊಳಗಿ ಅನಂತ ಹೆಗಡೆಯವರಿಗೆ ಮನಸ್ಸಿಲ್ಲದಿದ್ದರೂ ಮಗನ ಆಸೆಗೆ ತಣ್ಣೀರೆರಚದೆ ಕಳುಹಿಸಿಕೊಟ್ಟಿದ್ದರು. ಯಕ್ಷಗಾನ ಭಾಗವತಿಕೆಯನ್ನು ಅಭ್ಯಸಿಸುವ ಉದ್ದೇಶದಿಂದ 1984ರಲ್ಲಿ ಕೊಳಗಿ ಕೇಶವ ಹೆಗಡೆಯವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರವನ್ನು ಸೇರಿದ್ದರು. ಅಲ್ಲಿ ಪ್ರಾಚಾರ್ಯ ಭಾಗವತ ಶ್ರೀ ಎಂ. ನಾರ್ಣಪ್ಪ ಉಪ್ಪೂರರು ಗುರುಗಳಾಗಿ ಕಲಿಕಾಸಕ್ತರಿಗೆ ಪಾಠ ಹೇಳಿಕೊಡುತ್ತಿದ್ದರು. ಮಳೆಗಾಲ ಮೂರು ತಿಂಗಳು ಕಲಿಕೆ. ಹೀಗೆ ಮೂರು ವರ್ಷಗಳ ಕಾಲ ಹಂಗಾರಕಟ್ಟೆ ಕಲಿಕಾ ಕೇಂದ್ರದ ವಿದ್ಯಾರ್ಥಿಯಾಗಿ ಭಾಗವತಿಕೆಯನ್ನು ಅಭ್ಯಸಿಸಿದ್ದರು.

ಒಂದನೇ ವರ್ಷದ ತರಬೇತಿಯ ನಂತರ ಊರ ಪ್ರದರ್ಶನಗಳಲ್ಲಿ ಹಾಡುವ ಅವಕಾಶವೂ ಆಗಿತ್ತು. ಹಂಗಾರಕಟ್ಟೆ ಕೇಂದ್ರಕ್ಕೆ 1984ರಲ್ಲಿ ಕಲಿಕಾಸಕ್ತರಾಗಿ ಸಂದರ್ಶನಕ್ಕೆ ಸುಮಾರು ನೂರು ಜನ ಬಂದಿದ್ದರು. 12 ಮಂದಿ ಮಾತ್ರ ಆಯ್ಕೆಯಾಗಿದ್ದರು. ಹಾಡು ಹೇಳುವುದಕ್ಕೆ ರಂಗವೇರುವ ಮೊದಲೇ ನೇಪಥ್ಯದಲ್ಲೇ ಗುರು ಉಪ್ಪೂರರ ಸಂದೇಶಗಳನ್ನು ನೆನಪಿಸುತ್ತಿದ್ದರು. ಶಿಸ್ತಿನ ಸಿಪಾಯಿಯಾಗಿದ್ದ ಅವರು ಅದಕ್ಕೆ ಕೊರತೆಯಾದರೆ ಸಹಿಸಿಕೊಳ್ಳುತ್ತಿರಲಿಲ್ಲವಂತೆ. ಸರಿಯಾಗಿ ಅಭ್ಯಾಸ ಮಾಡದೆ, ಪೂರ್ವಸಿದ್ಧತೆಯಿಲ್ಲದೆ ರಂಗವೇರಬಾರದು, ಸಮಯದ ಬಗ್ಗೆ ಗಮನಹರಿಸಬೇಕು ಎಂದು ಆಗಾಗ ಎಚ್ಚರಿಸುತ್ತಿದ್ದರಂತೆ.

“ತಪ್ಪಿದರೆ ತಿದ್ದಿ ತೀಡುತ್ತಿದ್ದರು. ರಂಗದಲ್ಲಿ ಕುಳಿಯುಕೊಳ್ಳುವ ಕ್ರಮದಿಂದ ತೊಡಗಿ ಎಲ್ಲವನ್ನೂ ಸೊಗಸಾಗಿ ಹೇಳಿಕೊಡುತ್ತಿದ್ದರು. ಸಂತೋಷವಾದರೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು”. ಎಂದು ಹೇಳುವ ಮೂಲಕ ಕೊಳಗಿ ಕೇಶವ ಹೆಗಡೆಯವರು ಗುರು ಶ್ರೀ ಎಂ. ನಾರ್ಣಪ್ಪ ಉಪ್ಪೂರರನ್ನು ಗೌರವಿಸುತ್ತಾರೆ. ಊರ ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುವ ಸಂದರ್ಭ ಕೊಳಗಿಯವರಿಗೆ ಕಡತೋಕಾ ಮಂಜುನಾಥ ಭಾಗವತರ ಭಾಗವತಿಕೆಯನ್ನು ಕೇಳುವ ಅವಕಾಶವೂ ಸಿಕ್ಕಿತ್ತು. 

ಹಂಗಾರಕಟ್ಟೆ ಕೇಂದ್ರದಲ್ಲಿ ಮೂರು ವರ್ಷಗಳ ತರಬೇತಿಯನ್ನು ಪಡೆದು ಗುಂಡಬಾಳ ಮೇಳದಲ್ಲಿ ಸಂಗೀತ ಭಾಗವತನಾಗಿ ಒಂದು ವರ್ಷ ತಿರುಗಾಟ. ಬಳಿಕ ಮುಲ್ಕಿ ಮೇಳದಲ್ಲಿ ಒಂದು ವರ್ಷ ಕಲಾಸೇವೆ. ಆಗ ಮುಲ್ಕಿ ಮೇಳದಲ್ಲಿ ನೆಲ್ಲೂರು ಮರಿಯಪ್ಪಾಚಾರ್ ಮತ್ತು ಕೆ.ಪಿ.ಹೆಗಡೆಯವರು ಭಾಗವತರಾಗಿದ್ದರು. ಕಟ್ಟೆ ಶ್ರೀನಿವಾಸ ಆಚಾರ್ ಮದ್ದಳೆಗಾರರಾಗಿದ್ದರು. ತಂದೆ ಕೊಳಗಿ ಅನಂತ ಹೆಗಡೆ, ಐರೋಡಿ ಗೋವಿಂದಪ್ಪ, ನಗರ ಜಗನ್ನಾಥ ಶೆಟ್ಟಿ, ಹಳ್ಳಾಡಿ ಜಯರಾಮ ಶೆಟ್ಟಿ, ಅರಾಟೆ ಮಂಜುನಾಥ, ಮೊದಲಾದವರು ಆಗ ಮುಲ್ಕಿ ಮೇಳದ ಕಲಾವಿದರಾಗಿದ್ದರು. ಬಳಿಕ ಒಂದು ವರ್ಷ ಕಮಲಶಿಲೆ ಮೇಳದ ಮುಖ್ಯ ಭಾಗವತನಾಗಿ ತಿರುಗಾಟ ನಡೆಸಿದ್ದರು.

ಆಮೇಲೆ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ಎರಡು ವರ್ಷ ಎರಡನೇ ಭಾಗವತನಾಗಿ ಕಲಾಸೇವೆ. ಬಳಿಕ ಶಿರಸಿ ಮಾರಿಕಾಂಬಾ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಈ ಸಂದರ್ಭ ಅನೇಕ ಹಿರಿಯ ಕಲಾವಿದರ ಒಡನಾಟವು ಸಿಕ್ಕಿತ್ತು. ಬಳಿಕ ಏಳು ವರ್ಷಗಳ ಕಾಲ ಬಚ್ಚಗಾರು ಮೇಳದಲ್ಲಿ ಕಲಾಸೇವೆ. ಈ ಮೇಳದಲ್ಲಿ ಅಪಾರ ಅನುಭವವನ್ನು ಕೊಳಗಿ ಕೇಶವ ಹೆಗಡೆಯವರು ಪಡೆದಿದ್ದರು. ಪೌರಾಣಿಕ ಪ್ರಸಂಗಗಳು, ಅವುಗಳ ನಡೆ, ಪ್ರಸಂಗವನ್ನು ಮುನ್ನಡೆಸುವ ರೀತಿ, ರಂಗತಂತ್ರ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದರು. ಶ್ರೀ ಪಿ.ವಿ.ಹಾಸ್ಯಗಾರ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಮಹಾಬಲ ಹೆಗಡೆ, ಮಂಟಪ ಪ್ರಭಾಕರ ಉಪಾಧ್ಯ, ಕೊಳಗಿ ಅನಂತ ಹೆಗಡೆ ಮೊದಲಾದ ಖ್ಯಾತ ಕಲಾವಿದರನ್ನು ಕುಣಿಸುವ ಅವಕಾಶವೂ ಒದಗಿತ್ತು.

ತಂದೆ ಮತ್ತು ಮಗ (ಕೊಳಗಿ ಅನಂತ ಹೆಗಡೆ ಮತ್ತು ಕೊಳಗಿ ಕೇಶವ ಹೆಗಡೆ) ಒಟ್ಟಾಗಿ ತಿರುಗಾಟ ಮಾಡಿದ ಮೇಳಗಳು ಮುಲ್ಕಿ ಮೇಳ ಮತ್ತು ಬಚ್ಚಗಾರು ಮೇಳ. ರಂಗದಲ್ಲಿ ತಂದೆಯನ್ನು ಕುಣಿಸಿದ ಭಾಗವತರು ಕೊಳಗಿ ಕೇಶವ ಹೆಗಡೆಯವರು. ಬಳಿಕ ಸಾಲಿಗ್ರಾಮ ಮೇಳದಲ್ಲಿ ಒಂದು ವರ್ಷ. ಶ್ರೀ ನಾರಾಯಣ ಶಬರಾಯರ ನಂತರ ಕಲಾಸೇವೆಯನ್ನು ಮಾಡಿದ್ದರು. ಕೆರೆಮನೆ ಶ್ರೀ ಶಂಭು ಹೆಗಡೆಯವರ ವೇಷಕ್ಕೆ ಹಾಡು ಹೇಳುವ ಅವಕಾಶ ಸೀಗಲಿಲ್ಲ ಎಂಬ ನೋವು ಕೊಳಗಿ ಕೇಶವ ಹೆಗಡೆಯವರಿಗಿದೆ. ಆದರೂ ತಾಳಮದ್ದಳೆಗಳಲ್ಲಿ  ಅರ್ಥಗಾರಿಕೆಯಲ್ಲಿ ಪದ್ಯ ಹೇಳಿದ್ದೇನೆ ಎಂಬ ಸಂತೋಷವನ್ನೂ ಹೊಂದಿದ್ದಾರೆ. ಶಂಭು ಹೆಗಡೆಯವರು ರಂಗದಲ್ಲಿ ಮೆರೆಯುತ್ತಿರುವ ಕಾಲಕ್ಕೆ ನಾನು ಕಿರಿಯವನಾಗಿದ್ದೆ. ಅನನುಭವಿಯಾಗಿದ್ದೆ. ಹಾಗಾಗಿ ಅವಕಾಶ ಸಿಕ್ಕಿರಲಿಲ್ಲ ಎಂದು ಕೊಳಗಿಯವರು ನೋವಿನ ಜೊತೆ ಸಮಾಧಾನವನ್ನೂ ಹೊಂದುತ್ತಾರೆ.

ಉಪ್ಪೂರರನ್ನು ಬಿಟ್ಟರೆ ಚಿಟ್ಟಾಣಿಯವರನ್ನು ಅತ್ಯಂತ ಹೆಚ್ಚು ಕುಣಿಸಿದ ಭಾಗವತರು ಕೊಳಗಿ ಕೇಶವ ಹೆಗಡೆಯವರೇ ಆಗಿರಬಹುದೆಂದು ನನ್ನ ಊಹೆ. ಅದ್ಭುತವಾದ ಲಯಸಿದ್ಧಿಯನ್ನು ಹೊಂದಿ, ಹೊಂದಾಣಿಕೆಯ ಸ್ವಭಾವದಿಂದ ಹಿಮ್ಮೇಳದವರನ್ನು ಚಿಟ್ಟಾಣಿಯವರು ಪ್ರೋತ್ಸಾಹಿಸುತ್ತಿದ್ದರೆಂದು ಕೊಳಗಿಯವರು ಅವರೊಂದಿಗಿನ ಒಡನಾಟವನ್ನು ಸದಾ ನೆನಪಿಸುತ್ತಾರೆ. ಕೆರೆಮನೆ ಮಹಾಬಲ ಹೆಗಡೆಯವರು ಲಯ, ರಾಗ, ತಾಳ, ಕುಣಿತ, ಮಾತುಗಾರಿಕೆ, ಸಾಹಿತ್ಯದ ಬಗೆಗೆ ತಿಳಿದಿರುವ ಕಲಾವಿದ. ಅವರ ಒಡನಾಟವೂ ಬೆಳವಣಿಗೆಗೆ ಸಹಕಾರವಾಗಿತ್ತು ಎಂದು ಹೇಳುವ ಮೂಲಕ ಆ ಖ್ಯಾತ ಕಲಾವಿದರನ್ನು ಕೊಳಗಿಯವರು ಗೌರವಿಸುತ್ತಾರೆ. 

ಸಾಲಿಗ್ರಾಮ ಮೇಳದ ತಿರುಗಾಟ, ರಂಗನಾಯಕಿ, ಸತ್ಯಹರಿಶ್ಚಂದ್ರ, ಕಾರ್ತವೀರ್ಯಾರ್ಜುನ, ಕೀಚಕ ವಧೆ, ಗದಾಯುದ್ಧ ಮೊದಲಾದ ಪ್ರಸಂಗಗಳ ಹಾಡುಗಳು ಕೊಳಗಿಯವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಈ ಸಮಯದಲ್ಲಿ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ ಒಡನಾಟವೂ ದೊರೆತಿತ್ತು. ಸಾಲಿಗ್ರಾಮ ಮೇಳ ಬಿಟ್ಟ ಬಳಿಕ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ನೇತೃತ್ವದ ಪೂರ್ಣಚಂದ್ರ ಕಲಾ ಮಂಡಳಿ ತಂಡದ ಪೂರ್ಣಕಾಲಿಕ ಭಾಗವತನಾಗಿ ಸೇವೆ ಅಲ್ಲದೆ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ನಾಯಕತ್ವದ ‘ವೀರಾಂಜನೇಯ ಯಕ್ಷಮಿತ್ರ ಮಂಡಳಿ’ ಯಲ್ಲಿಯೂ ಭಾಗವತನಾಗಿ ವ್ಯವಸಾಯ. ಈ ಸಂದರ್ಭದಲ್ಲಿ ಒಂದೇ ಮನೆಯ ಮೂರು ಮಂದಿಗಳ ವೇಷಕ್ಕೆ ಪದ್ಯ ಹೇಳುವ ಅವಕಾಶವಾಗಿತ್ತು. (ತಂದೆ, ಮಗ, ಮೊಮ್ಮಗ- ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತಿಕ್ ಚಿಟ್ಟಾಣಿ)

ಸಾಲಿಗ್ರಾಮ ಮೇಳದ ಮಳೆಗಾಲದ ಮುಂಬೈ ಪ್ರದರ್ಶನಗಳಲ್ಲಿಯೂ ಭಾಗಿಯಾಗಿದ್ದರು. ಪ್ರಸ್ತುತ ಅತಿಥಿ ಕಲಾವಿದರಾಗಿ ಕೊಳಗಿ ಶ್ರೀ ಕೇಶವ ಹೆಗಡೆಯವರು ಯಕ್ಷಗಾನ ಕ್ಷೇತ್ರದ ಭಾಗವತರಾಗಿ ವ್ಯವಸಾಯ ಮಾಡುತ್ತಿದ್ದಾರೆ. 2009ರಲ್ಲಿ ಕೊಳಗಿ ಶ್ರೀ ಕೇಶವ ಹೆಗಡೆಯವರು ತಮ್ಮ ತೀರ್ಥರೂಪರಾದ ಕೊಳಗಿ ಶ್ರೀ ಅನಂತ ಹೆಗಡೆಯವರ ಹೆಸರಿನಲ್ಲಿ ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನ (ರಿ) ಸಿದ್ಧಾಪುರ ಎಂಬ ಸಂಸ್ಥೆಯನ್ನೂ ಆರಂಭಿಸಿದ್ದಾರೆ. ಶ್ರೀ ಅನಂತ ಪ್ರಶಸ್ತಿ ಪ್ರದಾನವೂ ನಡೆಯುತ್ತಿದೆ. ಶ್ರೀ ಎಂ.ಎಂ.ಹೆಗಡೆ ಮತ್ತು ನೆಬ್ಬೂರು ನಾರಾಯಣ ಭಾಗವತರು ಈ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುತ್ತಾರೆ. ಕೊಳಗಿ ಕೇಶವ ಹೆಗಡೆಯವರು ವಿದೇಶಗಳಲ್ಲೂ ತಮ್ಮ ಗಾನಸುಧೆಯನ್ನು ಹರಿಸಿದವರು. ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ ತಂಡದ ಭಾಗವತನಾಗಿ ಎರಡು ಬಾರಿ ಸಿಂಗಾಪುರ, ಅಲ್ಲದೆ ಅಮೆರಿಕಾ, ದುಬೈಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಕೊಳಗಿ ಕೇಶವ ಹೆಗಡೆಯವರ ಪತ್ನಿ ಶ್ರೀಮತಿ ಮಂಜುಳಾ ಅವರು ಚೆನ್ನಕಂಡ ಶ್ರೀ ವೆಂಕಟೇಶ ಹೆಗಡೆ ಮತ್ತು ಸುಮತಿ ಹೆಗಡೆ ದಂಪತಿಗಳ ಪುತ್ರಿ. ಶ್ರೀ ವೆಂಕಟೇಶ ಹೆಗಡೆ ಅವರು ವಿದ್ವಾಂಸರಾಗಿದ್ದು ಯಕ್ಷಗಾನ ವೇಷಧಾರಿಯೂ ತಾಳಮದ್ದಳೆ ಅರ್ಥಧಾರಿಯೂ ಆಗಿ ಪ್ರಸಿದ್ಧರು. ಭಾವನಾತ್ಮಕ ಪಾತ್ರಗಳಲ್ಲಿ ಒಳ್ಳೆಯ ಹೆಸರು ಪಡೆದವರು. ಕೊಳಗಿ ಶ್ರೀ ಕೇಶವ ಹೆಗಡೆ ಮತ್ತು ಮಂಜುಳಾ ದಂಪತಿಗಳ ಪುತ್ರಿ ಕು| ಹರ್ಷಿತಾ ಆರನೆಯ ತರಗತಿ ವಿದ್ಯಾರ್ಥಿನಿ. ಯಶಸ್ವೀ ಪ್ರದರ್ಶನಕ್ಕೆ ಯಾವ ಮಾರ್ಗವನ್ನು ಅನುಸರಿಸಬೇಕು? ಭಾಗವತರು, ವೇಷಧಾರಿಗಳು ಹೇಗಿರಬೇಕು? ಎಂಬುದನ್ನು ಕೊಳಗಿ ಕೇಶವ ಹೆಗಡೆಯವರು ಮನ ಮುಟ್ಟುವಂತೆ ಹೇಳುತ್ತಾರೆ. ಅವರ ಮಾತುಗಳಲ್ಲಿ ಸಂತಸದ ಜತೆ ನೋವಿನ ಧ್ವನಿಯನ್ನೂ ಗುರುತಿಸಬಹುದು.

“ಪ್ರದರ್ಶನವು ಯಶಸ್ವಿಯಾಗಬೇಕಾದರೆ ಹಿಮ್ಮೇಳ ಮತ್ತು ಮುಮ್ಮೇಳಗಳ ಸಾಂಗತ್ಯ ಅಗತ್ಯ. ಪರಸ್ಪರ ಅರಿತು ಸಹಕರಿಸಬೇಕಾದುದು ಉಭಯರಿಗೂ ಕರ್ತವ್ಯ. ಭಾಗವತಿಕೆ ಭಾವಪೂರ್ಣವಾಗಿರಬೇಕು. ಅವನು ವೇಷಧಾರಿಯಾಗಲೇಬೇಕು. ಕಲಾವಿದರ ಜತೆ ಸಮಾಲೋಚನೆ ಮಾಡಲೇಬೇಕು ಇಂತಹಾ ಪದ್ಯ ಹೀಗೆ ಹೇಳುತ್ತೇನೆ ಎಂದು ಸೂಚಿಸಬೇಕು. ಭಾಗವತನಿಗೂ ನಿರ್ದೇಶನದ ಅಗತ್ಯವಿದೆ. ಯಾರೂ ಪರಿಪೂರ್ಣರಲ್ಲ. ಹಿರಿಯ ಮುಮ್ಮೇಳ ಕಲಾವಿದರ ಅನುಭವಗಳನ್ನು ಪಡೆಯಬೇಕು. ನಾನು ಭಾಗವತ ಎಂಬ ಅಹಂಕಾರ ಸಲ್ಲದು. ಹಿರಿತನ, ಅನುಭವಗಳಿಂದ ಮಾಗಿದ ಮುಮ್ಮೇಳ ಕಲಾವಿದರನ್ನು ಗೌರವಿಸಿ ಮಾಹಿತಿ ಪಡೆಯಬೇಕು. ಪ್ರೇಕ್ಷಕರಿಗೆ ಇನ್ನೂ ಬೇಕು ಎನಿಸಿದಾಗ ಭಾಗವತನೂ ವೇಷಧಾರಿಯೂ ಮುಗಿಸಬೇಕು. ಕುಣಿತವೂ ಅಭಿನಯವೂ ಜತೆಯಾಗಿರಬೇಕು. (ಅದು ಕಷ್ಟ. ಆದರೂ ಜತೆಯಾಗಿರಬೇಕು) ಉದಾಹರಣೆಗೆ ಭೀಷ್ಮ ವಿಜಯ ಪ್ರಸಂಗದ ಸಾಲ್ವನಿಗಿರುವ ಪದ್ಯ. ‘ಅರರೇ ಶಾಭಾಸು ದ್ರವ್ಯವನೀವೆ ಎನುತಲೀ ಕರೆತಂದಳೀ ವಿಪ್ರನ …” ಇದು ಶೃಂಗಾರ ಅಲ್ಲ. ಹಲವು ಬಾರಿ ಅಭಿನಯ ಸಲ್ಲದು. ಹಾಗೆ ಪದ್ಯ ಹೇಳದಿದ್ದರೆ ಭಾಗವತಿಕೆ ಗೊತ್ತಿಲ್ಲ ಎಂಬ ಆರೋಪ ಬರುತ್ತದೆ. ಕಲಾವಿದರಿಗೆ ಬೇಕಾದಂತೆ ಪದ್ಯ ಹೇಳಬೇಕಾದ ಕಾಲ ಇದು. ಪ್ರಸಂಗಕ್ಕೆ ಬೇಕಾದಂತೆ ಪದ್ಯ ಹೇಳಿದರೆ ಬೇಡಿಕೆ ಇಲ್ಲ. ಕಲಾವಿದರೂ ಪ್ರೇಕ್ಷಕರೂ ಇದನ್ನು ತಿಳಿದುಕೊಳ್ಳಬೇಕು. ಕನಕಾಂಗೀ ಕಲ್ಯಾಣ ಪ್ರಸಂಗದ ‘ತಾಯೆ ಚಿಂತಿಪುದೇನು ಪೇಳೆನ್ನೊಳು ಮಾಯವಿದರೊಳಿನ್ನು ತೋಯಜ ಮುಖಿ ಸುಪ್ರೀಯದೊಳೇಳು ಆಯಾಸಗಳುಳಿದು….” ಚಿಂತೆ ಏನೆಂದು ಕೇಳುವ ಪದ್ಯ ಇದು. ಹಲವು ತಾಳಗಳಲ್ಲಿ ಹೇಳಿ ಕುಣಿಸುತ್ತಾರೆ! ಇಂತಹ ಉದಾಹರಣೆಗಳು, ಸಂದರ್ಭಗಳು ಹಲವಾರು ಇವೆ. ಕುಶಲವರ ಕಾಳಗ ಪ್ರಸಂಗದ ಹಾಡು. ‘ಚೆಲುವರನು ನೋಡಿದರೆ ನಲಿವುದೆನ್ನಯ ಮನವು..’ ಇದಕ್ಕೂ ಭಾವ ಇಲ್ಲದ ಹಾಡು! ರಾಮನ ಪಾತ್ರಧಾರಿಯೂ ಕುಣಿಯುತ್ತಾನೆ. ಭಾವನಾತ್ಮಕ ಹಾಡು ಯಕ್ಷಗಾನದಲ್ಲಿ ಸತ್ತು ಹೋದಾಗ ಬೇಸರವಾಗುತ್ತದೆ. ವೇಗದ ಹಾಡುಗಾರಿಕೆಗೆ ಅಭಿನಯ ಮತ್ತು ಕುಣಿತ ಎರಡೂ ಕಷ್ಟ. ಅಭಿನಯ ಮತ್ತು ಕುಣಿತ ಜತೆಯಾಗಿರಬೇಕಾದುದು ಅಗತ್ಯ. ಹಾಗಾಗಿ ಯಕ್ಷಗಾನಕ್ಕೆ ವೇಗವು ಸಲ್ಲದು”

ಇದು ಕೊಳಗಿ ಕೇಶವ ಹೆಗಡೆ ಅವರ ಮನದ ಮಾತುಗಳು. ಗಾನಕೋಗಿಲೆ ಬಡಗುತಿಟ್ಟಿನ ಹೆಸರಾಂತ ಭಾಗವತರಾದ ಕೊಳಗಿ ಶ್ರೀ ಕೇಶವ ಹೆಗಡೆಯವರಿಗೆ ಇನ್ನೂ ಹೆಚ್ಚಿನ ಕಲಾಸೇವೆ ಮಾಡುವ ಭಾಗ್ಯವು ದೊರೆಯಲಿ. ಅವರ ಗಾನಾಮೃತವನ್ನು ಕಲಾಭಿಮಾನಿಗಳು ದೀರ್ಘಕಾಲ ಸವಿಯುವಂತಾಗಲಿ. 

ಲೇಖನ: ರವಿಶಂಕರ್ ವಳಕ್ಕುಂಜ 

 

ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು (ಭಾಗ – 2)

ಕಲಾತಪಸ್ವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತು ಬರೆಯುವ ಅರ್ಹತೆಯನ್ನು ನಾನು ಹೊಂದಿಲ್ಲ. ಆದರೆ ಅವರ ಬಗೆಗೆ ಕೇಳಿ ತಿಳಿದ, ಪುಸ್ತಕಗಳಿಂದ ಓದಿ ತಿಳಿದ, ಅವರು ಬರೆದ ಪ್ರಸಂಗಗಳಲ್ಲಿ ವೇಷ ಮಾಡಿದ ಅನುಭವಗಳಿಂದ ಬರೆಯಲು ಅನುಕೂಲವಾದುದು ಭಾಗ್ಯವೆಂದು ಭಾವಿಸುತ್ತೇನೆ. ಯಕ್ಷಗಾನದ ಭೀಷ್ಮನೆಂದೇ ಕರೆಸಿಕೊಂಡ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರೂ ‘ಗುರುಗಳೇ ..” ಎಂದು ಸಂಬೋಧಿಸಿ ಗೌರವಿಸುತ್ತಿದ್ದರೆಂದರೆ ಕೀರಿಕ್ಕಾಡು ಮಾಸ್ತರ್  ವಿಷ್ಣು ಭಟ್ಟರ ವ್ಯಕ್ತಿತ್ವವೇನು, ಅವರೆಷ್ಟು ವರ್ಚಸ್ವಿಯಾಗಿದ್ದರು ಎಂಬುದನ್ನು ನಮಗೆ ಊಹಿಸಬಹುದು. 

ಕೀರಿಕ್ಕಾಡು ಎಂಬುದು ಕೇರಳ ರಾಜ್ಯದ ಕಾಸರಗೋಡು ತಾಲೂಕು ಕುಂಬಡಾಜೆ ಗ್ರಾಮದ ಒಂದು ಊರು. ತೀರಾ ಹಿಂದುಳಿದ ಹಳ್ಳಿಯ ಪ್ರದೇಶ. ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿತ್ತು. ಆಗ ಕನ್ನಡಿಗರಿಂದಲೇ ತುಂಬಿದ ಪ್ರದೇಶವಾದರೂ ಕೇರಳ ರಾಜ್ಯಕ್ಕೆ ಸೇರಿದ್ದು ವಿಶೇಷವೆನ್ನೋಣವೇ? ಕನ್ನಡಿಗರ ದೌರ್ಭಾಗ್ಯವೆನ್ನೋಣವೇ? ಕೀರಿಕ್ಕಾಡು ಸಮೀಪದ ವಳಕ್ಕುಂಜ ನನ್ನ ಹುಟ್ಟೂರು. ವಳಕ್ಕುಂಜದಿಂದ ಕೀರಿಕ್ಕಾಡಿಗೆ ಕೇವಲ ಒಂದು ಮೈಲಿ ದೂರವಷ್ಟೇ ಅಂತರ. ಹಾಗಾಗಿ ಕೀರಿಕ್ಕಾಡು ಎಂಬ ಊರನ್ನು ನಾನು ತಿಳಿದಿರುವೆ.

ಏತಡ್ಕದ ಸಮೀಪದಿಂದ ತೊಡಗಿ ನೇರಪ್ಪಾಡಿ, ವಳಕ್ಕುಂಜ, ಪಳ್ಳತ್ತಡ್ಕ ದಾರಿಯಾಗಿ ಹರಿದು ಕುಂಬಳೆಯ ಸಿರಿಯಾ ಎಂಬಲ್ಲಿ ಪಡುಗಡಲನ್ನು ಸೇರುವ ಹೊಳೆಯ ಬದಿಯಲ್ಲಿದೆ ಕೀರಿಕ್ಕಾಡು ಎಂಬ ಹಳ್ಳಿ. ನೇರಪ್ಪಾಡಿ ಮತ್ತು ವಳಕ್ಕುಂಜದ ಮಧ್ಯೆ ಇರುವ ಭೂಮಿ. ಸಾಧಾರಣ 2010ನೇ ಇಸವಿಯ ವರೆಗೂ ನಾನು ತಿಳಿದಂತೆ ಮಳೆಗಾಲದಲ್ಲಿ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಕೇವಲ ತೂಗು ಸೇತುವೆ ಮಾತ್ರ ಇದ್ದುದು.

ಇತ್ತೀಚಿಗೆ ಏತಡ್ಕದಿಂದ ಕೀರಿಕ್ಕಾಡಿಗೆ ಹಳ್ಳಿ ರಸ್ತೆಯೊಂದು ನಿರ್ಮಾಣವಾಗಿತ್ತು. ಜೀಪುಗಳು ಭಾರೀ ಕಷ್ಟದಲ್ಲಿ ಓಡಾಡುವಂತಾಗಿತ್ತು. ಕಳೆದ ವರ್ಷ ಕೀರಿಕ್ಕಾಡಿನಲ್ಲಿ ಕಟೀಲು ಮೇಳದ ಸೇವಾ ಬಯಲಾಟ ನಡೆದಿತ್ತು. 1 ಕಿ. ಮೀ. ದೂರ ಮೇಳದ ಬಸ್ ನಿಲ್ಲಿಸಿ ವೇಷಭೂಷಣಗಳನ್ನು ಅನ್ಲೋಡ್ ಮಾಡಿ ಜೀಪಿನಲ್ಲಿ ಕೊಂಡು ಹೋಗಬೇಕಾಗಿ ಬಂದಿತ್ತು. ಈ ವಿಚಾರ ಹೇಳಲು ಕಾರಣವಿಷ್ಟೇ. ಈಗಲೂ ಇಂತಹ ಸ್ಥಿತಿಯಾದರೆ ಮಾಸ್ತರರು ಜನಿಸಿ ಬೆಳೆದ ಆ ದಿನಗಳಲ್ಲಿ ಕೀರಿಕ್ಕಾಡು ಎಂಬ ಊರಿನ ಸ್ಥಿತಿ ಹೇಗಿದ್ದಿರಬಹುದು?!

ಕೇವಲ ನಾಲ್ಕೈದು ಮನೆಗಳಿದ್ದ ಕುಗ್ರಾಮವಾಗಿತ್ತು. ಸುತ್ತಲೂ ದಟ್ಟವಾದ ಕಾಡು. ಕ್ರೂರ ಮೃಗಗಳ ಸಂಚಾರ, ಉಪಟಳವೂ ಜೋರಾಗಿತ್ತು. ಭತ್ತ, ಕಂಗು, ತೆಂಗು ಕೃಷಿ ಪ್ರದೇಶ. ಹುಲಿಗಳು ಹಟ್ಟಿಗೆ ದಾಳಿ ಮಾಡಿ ಹಸುಗಳನ್ನು ತಿಂದು ಹಾಕುವ ಪ್ರಕರಣಗಳೂ ನಡೆಯುತ್ತಿದ್ದ ಕಾಲ ಅದು. ಗುಡ್ಡೆಗೆ ಮೇಯಲು ಬಿಟ್ಟ ಹಸುಗಳು ಬರದೇ ಹುಲಿಗೆ ಆಹಾರವಾಗುತ್ತಿದ್ದುವು. ಬೆಳೆಗೂ ಸಾಕುಪ್ರಾಣಿಗಳಿಗೂ ಕೊಬ್ಬಿದ ಪ್ರಾಣಿಗಳ ಕಾಟ. ದೂರದೂರುಗಳ ಸಂಪರ್ಕದಿಂದ ವಂಚಿತವಾಗಿದ್ದ ಕೀರಿಕ್ಕಾಡು ಯಕ್ಷಗಾನದ ಕುಲಪತಿ ಸದೃಶ್ಯರಾದ ಮಾಸ್ತರ್ ವಿಷ್ಣು ಭಟ್ಟರ ಹುಟ್ಟೂರು. 1913ನೇ ಇಸವಿ  ಆಗಸ್ಟ್ 4ರಂದು ಕೀರಿಕ್ಕಾಡು ಕೇಶವ ಭಟ್ಟರು ಮತ್ತು ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಕೃಷಿ ಕುಟುಂಬದ ಸಂಪ್ರದಾಯಸ್ಥ ಮನೆತನ.

ಓದಬೇಕೆಂಬ ಹಂಬಲವಿದ್ದರೂ ಕೀರಿಕ್ಕಾಡು ಪರಿಸರದವರಿಗೆ ಅದಕ್ಕೆ ಅವಕಾಶಗಳಿರಲಿಲ್ಲ. ಹತ್ತಿರದಲ್ಲಿ ಶಾಲೆ ಇರಲಿಲ್ಲ. ಮಳೆಗಾಲದಲ್ಲಿ ಹೊಳೆ ದಾಟಿ ಹೋಗಲೂ ಆಗುತ್ತಿರಲಿಲ್ಲ. ಹಾಗಾಗಿ ಈ ಪ್ರದೇಶದ ಜನರು ವಿದ್ಯೆಯಿಂದ ವಂಚಿತರಾಗಿದ್ದರು. ಹಾಗಿದ್ದರೂ ಹೊಳೆಯಾಚೆಯ ಬದಿಯ ಮೂರು ಕಿ. ಮೀ. ದೂರದ ಕರ್ವಲ್ತಡ್ಕ ಶಾಲೆಯಲ್ಲಿ 4ನೇ ತರಗತಿ ವರೆಗೆ ಓದಿದ್ದರು. ಮತ್ತೆ ಏತಡ್ಕ ಶಾಲೆಯಲ್ಲಿ 5ನೇ ತರಗತಿಯನ್ನು ಪೂರೈಸಿದ್ದರು. ಉಣ್ಣಬೇಕಾದರೆ ದುಡಿಯಲೇ ಬೇಕಾದ ಕಾಲ ಅದು. ಹಣ ಸಂಪಾದನೆಗೆ  ಈಗಿನಂತೆ ದಾರಿಗಳೇ ಇರಲಿಲ್ಲ. ಕೆಲಸಗಾರರಿಗೆ ವಸ್ತು ರೂಪದಲ್ಲೇ ಸಂಬಳ. ಬೆಲೆ ಬೆಳೆಸಿದರೆ ಮಾತ್ರ ಹೊಟ್ಟೆಗೆ ಅನ್ನ.

ಮಾಸ್ತರರ ತಾಯಿ ಲಕ್ಷ್ಮಿ ಅಮ್ಮ ಪರಮ ಸಾಧ್ವಿಯಾಗಿದ್ದರು. ಮನೆಕೆಲಸಗಳಲ್ಲಿ ಶ್ರದ್ಧೆ. ದೇವರಲ್ಲಿ ಭಕ್ತಿ ಉಳ್ಳವರಾಗಿ ಮನೆಯನ್ನೇ ವಿದ್ಯಾಲಯದಂತೆ, ದೇವಾಲಯದಂತೆ ಇರಿಸಿದ ಸಂತುಷ್ಟ ಗೃಹಣಿಯಾಗಿದ್ದರು. ಮನೆಯ ಗೃಹಣಿಯಾಗಿ ಕರ್ತವ್ಯಗಳನ್ನು ಮಾಡುತ್ತಿರುವಾಗ ಸದಾ ದೇವರನಾಮ ಸ್ಮರಣೆಯ ಜೊತೆ ಕೀರ್ತನೆಗಳನ್ನೂ ಹಾಡುತ್ತಿದ್ದರು. ಅಲ್ಲದೆ ಆಷಾಡ ಮಾಸದಲ್ಲಿ ದಿನವೂ ಶಿವಪುರಾಣದ ಬ್ರಹ್ಮೋತ್ತರ ಖಂಡವನ್ನು ಕ್ರಮವತ್ತಾಗಿ ಓದುತ್ತಿದ್ದರು. ಸಾಯಂ ಸಂಧ್ಯೆಯಲ್ಲಿ ಪ್ರತಿ ದಿನವೂ ಮಕ್ಕಳಿಗೆ ಪುರಾಣ ಪುಣ್ಯ ಪುರುಷರು, ದೇವಾಧಿದೇವತೆಗಳು, ಪ್ರಾತಃಸ್ಮರಣೀಯ ಪತಿವ್ರತಾ ನಾರಿಯರು ಬಾಳಿ ಬದುಕಿದ ರೀತಿಯನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು.

ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಸಂಸ್ಕಾರವೆಂಬ ಅಮೃತವನ್ನು ಉಣಿಸಿದವರು ಲಕ್ಷ್ಮಿ ಅಮ್ಮ. ಇದರ ಪರಿಣಾಮವನ್ನು ಅನುಭವಿಸಿದವರು ವಿಷ್ಣು ಭಟ್ಟರು. ಅವರಿಗೆ ಎಳವೆಯಲ್ಲೇ ಗೋಪಾಲಕೃಷ್ಣನು ಪ್ರಿಯನಾದ ದೇವರಾಗಿದ್ದ. ಮಾಸ್ತರರೊಳಗೆ ಅವ್ಯಕ್ತನಾಗಿ ಕುಳಿತಿದ್ದ ಕಲಾವಿದನು ಪ್ರಕಟವಾಗಿ ಬೆಳೆಯಲು ಇದೂ ಕಾರಣವಾಗಿತ್ತು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು.

ಪ್ರದರ್ಶನ ಆರಂಭವಾಗುವುದಕ್ಕೆ ಮೊದಲೇ ಅಲ್ಲಿದ್ದು ಬೆಳಗಿನ ತನಕವೂ ನೋಡುತ್ತಿದ್ದರು. ಚೌಕಿಯೊಳಗೆ ಕಲಾವಿದರು ಸಿದ್ಧರಾಗುವ ರೀತಿಯನ್ನೂ ಗಮನಿಸುತ್ತಿದ್ದರು. ಬಳಿಕ ಕೀರಿಕ್ಕಾಡು ಗುಡ್ಡವೇ ಗೆಳೆಯರ ಸಹಿತ ಇವರಿಗೆ ರಂಗಸ್ಥಳವಾಗುತ್ತಿತ್ತು. ಬಣ್ಣ ಬಣ್ಣದ ಮಣ್ಣನ್ನು ತಂದು ಮುಖಕ್ಕೆ ಮೆತ್ತಿ ವೇಷಗಳು ಸಿದ್ಧವಾಗುತ್ತಿತ್ತು. ಅಡಿಕೆ ಹಾಳೆಯಿಂದ ಕಿರೀಟ ತಯಾರಾಗುತ್ತಿತ್ತು. ಮಕ್ಕಳಾಟವು ಬಹು ಚಂದವಲ್ಲವೇ? ಪುಟ್ಟ ಮಕ್ಕಳು ನಾಟ್ಯ ಗೊತ್ತಿಲ್ಲದಿದ್ದರೂ ವೇಷ ಧರಿಸಿ ರಂಗವೇರಿ ತಪ್ಪಾಗಿ ಕುಣಿದರೂ ಅದೆಷ್ಟು ಸೊಗಸು! ನಾವದನ್ನು ಆಸ್ವಾದಿಸುತ್ತೇವೆ.

ಮೊಟ್ಟಮೊದಲು ಇವರ ಕೈಗೆ ಸಿಕ್ಕಿದ್ದು ಪಂಚವಟಿ, ವಾಲಿ ಸುಗ್ರೀವರ ಕಾಳಗದ ಪ್ರಸಂಗ ಪುಸ್ತಕ. ಅದನ್ನು ಓದಿ ಅರಗಿಸಿಕೊಂಡಿದ್ದರು. ಏತಡ್ಕ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಕುಶಲವ ಎಂಬ ಪೌರಾಣಿಕ ನಾಟಕದಲ್ಲಿ ಮೊತ್ತ ಮೊದಲು ವಾಲ್ಮೀಕಿಯ ಪಾತ್ರದಲ್ಲಿ ರಂಗವೇರಿದ್ದರು. ಇವರ ಅಭಿನಯ ಸಾಮರ್ಥ್ಯವನ್ನು ಕಂಡ ಯಕ್ಷಗಾನ ವಿದ್ವಾಂಸ, ಸಂಸ್ಕೃತ ಶಿರೋಮಣಿ ಪಡ್ರೆ ಶ್ರೀಪತಿ ಶಾಸ್ತ್ರಿಗಳು ಮೆಚ್ಚಿ ಮೊದಲ ಬಹುಮಾನವನ್ನೇ ನೀಡಿದ್ದರು. ವಿಷ್ಣು ಭಟ್ಟರೊಳಗೆ ಅಡಗಿ ಕುಳಿತಿದ್ದ ಮಹಾನ್ ಕಲಾವಿದನೊಬ್ಬನನ್ನು ಪಡ್ರೆ ಶ್ರೀಪತಿ ಶಾಸ್ತ್ರಿಗಳು ಅಂದೇ ಗುರುತಿಸಿದ್ದರು.  – (ಮುಂದುವರಿಯುವುದು)

ಲೇಖನ: ರವಿಶಂಕರ್ ವಳಕ್ಕುಂಜ

ಕೆ. ಹೆಮ್ಮನಹಳ್ಳಿಯಲ್ಲಿ ಮೂಡಲಪಾಯ ಯಕ್ಷಗಾನ, ನಾಟಕ

ಮೈಸೂರು ತಾ. ಕೆ. ಹೆಮ್ಮನಹಳ್ಳಿ, ಭೋಗಾದಿ ರಸ್ತೆಯಲ್ಲಿ , 10ನೇ ಕಿಮೀಗೆ ಬರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರೆ ಪ್ರಯುಕ್ತ ಸೀಗಳ್ಳಿ ಗ್ರಾಮದವರು 11-3-2021 ಗುರುವಾರ ಶ್ರೀ ರಾಮ ಪಟ್ಟಾಭೀಷೇಕ ನಾಟಕ ಪ್ರದರ್ಶಿಸುವರು. ಮೈಸೂರು ಪೇಟೆಯಿಂದ ಭೋಗಾದಿ ರಸ್ತೆಯಲ್ಲಿ ಕೇವಲ 10 ಕಮೀ ದೂರ.  

ಇದೇ ವೇದಿಕೆಯಲ್ಲಿ ನಾಟಕ ಆರಂಭವಾಗುವ ಮೊದಲು, ರಾತ್ರಿ 7 ರಿಂದ 9 ರವರೆಗೆ ‘ಕರಿಬಂಟನ ಕಥೆ’ ಎಂಬ ಪ್ರಸಂಗವನ್ನು  ಕೆ.ಆರ್.ನಗರದ ಅಂಕನಳ್ಳಿಯ ಕಲಾವಿದರು ಮೂಡಲಪಾಯ ಯಕ್ಷಗಾನ ರೂಪದಲ್ಲಿ ಪ್ರದರ್ಶಿಸುವರು. ಪ್ರವೇಶ ಉಚಿತ.

ಮೇಳಗಳ ಇಂದಿನ (10. 03. 2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (10. 03. 2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಯಡೂರು ತೀರ್ಥಹಳ್ಳಿ – ಕಾಯಕಲ್ಪ 

ಕಟೀಲು ಒಂದನೇ ಮೇಳ =  ಅಂಬಿಕಾನಗರ, ಕತ್ತಲ್ಸಾರ್ ಬಜಪೆ 

ಕಟೀಲು ಎರಡನೇ ಮೇಳ ==  ಪುತ್ತಿಲಕಜೆ, ಮೂಡುಕೋಡಿ, ವೇಣೂರು 

ಕಟೀಲು ಮೂರನೇ ಮೇಳ= ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿ, ಉಳಾಯಿಬೆಟ್ಟು ಗುರುಪುರ 

ಕಟೀಲು ನಾಲ್ಕನೇ ಮೇಳ  == ಕುಂಜತ್ತಬೈಲು ಕಾಮಣ್ಣಮನೆ ವಯಾ ಮರಕಡ ಕಾವೂರು 

ಕಟೀಲು ಐದನೇ ಮೇಳ ==  ಇನೋಳಿ ಶ್ರೀ ಸೋಮನಾಥೇಶ್ವರ ಕ್ಷೇತ್ರ ದೇವಂದಬೆಟ್ಟು 

ಕಟೀಲು ಆರನೇ ಮೇಳ == ‘ ಇಂದಬೆಟ್ಟು ಬಂಗಾಡಿ ಬೆಳ್ತಂಗಡಿ 

ಮಂದಾರ್ತಿ ಒಂದನೇ ಮೇಳ  ==  ಕರಾಣಿಮನೆ ಅಸೋಡು ಕುಂದಾಪುರ 

ಮಂದಾರ್ತಿ ಎರಡನೇ ಮೇಳ   ==   ಕೂಡಿಗೆ ಹಾರಂಬಳ್ಳಿ ಹಾಲ್ಮುತ್ತೂರು 

ಮಂದಾರ್ತಿ ಮೂರನೇ ಮೇಳ  ==   ಮಿಜಾರುದಡ್ಡಿ ರಸ್ತೆ, ಬಡಗ ಯಡಪದವು, ಮಂಗಳೂರು. ದ.ಕ  

ಮಂದಾರ್ತಿ ನಾಲ್ಕನೇ ಮೇಳ   ==  ಕುದ್ರೆಗುಂಡಿ 

ಮಂದಾರ್ತಿ    ಐದನೇ ಮೇಳ  ==  ನೀರ್ಮಣ್ಣು ಹುಯ್ಯಾರು ಹೈಕಾಡಿ  

ಶ್ರೀ ಹನುಮಗಿರಿ ಮೇಳ  ==  ಚೇಳಾಯಿರು ಖಂಡಿಗೆ ನಂದಿನಿ ನದಿಯ ತಟ – ರಾವಣೋ ಲೋಕ ರಾವಣ 

ಶ್ರೀ ಸಾಲಿಗ್ರಾಮ ಮೇಳ == ಶಿವಪುರ ನಾಯರ್ ಕೋಡು ಹಿ.ಪ್ರಾ.ಶಾಲಾ ಮೈದಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಶ್ರೀ ಜಟ್ಟೆಗೇಶ್ವರ ದೇವಸ್ಥಾನ ಕೆದೂರು – ನೂತನ ಪ್ರಸಂಗ 

ಶ್ರೀ ಸುಂಕದಕಟ್ಟೆ ಮೇಳ  ==  ಮಲ್ಲೂರು ಕುಟ್ಟಿಕಲ ಕುಲತ್ತಡಿ – ಸರ್ಪಸಂಬಂಧ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನೀರ್ಕೆರೆ ಉಳ್ಳೂರು – 11

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾನ್ಕಿ, ಬಡ್ಗುಳಿ

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶೆಟ್ರಹಿತ್ಲು ಮಸ್ಕಿ ನಾವುಂದ 

ಶ್ರೀ ಪಾವಂಜೆ ಮೇಳ  ==  ಗಂಜಿಮಠ – ಶ್ರೀ ದೇವಿ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಭೀಮೇಶ್ವರ ದೇವಸ್ಥಾನ ಬಿಲ್ಗೋಡಿ ಹೆಗ್ಗೋಡು 

ಕಮಲಶಿಲೆ ಮೇಳ ‘ಎ‘ = ತೀರ್ಥಹಳ್ಳಿ 

ಕಮಲಶಿಲೆ ಮೇಳ ‘ಬಿ‘ ==   ಹೊಸಿಮನೆ 

ಶ್ರೀ ಬಪ್ಪನಾಡು ಮೇಳ == ಭಾಗ್ಯನಗರ ಮೊಡಂಕಾಪು – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ತೊಕ್ಕೊಟ್ಟು ಸೇವಂತಿಗೆಗುಡ್ಡೆ – ಕಂಚೀಲ್ದ ಪರಕೆ 

ಶ್ರೀ ಅಮೃತೇಶ್ವರೀ ಮೇಳ == ಕೋಟ ಪೆಟ್ರೋಲ್ ಬಂಕ್ ಬಳಿ     

ಶ್ರೀ ಬೋಳಂಬಳ್ಳಿ ಮೇಳ==  ನಿಟ್ಟೂರು – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ ==   ಕೊಡಪಾಡಿ ಶ್ರೀ ಮಾರಿಕಾಂಬಾ ದೇವಸ್ಥಾನ – ತಾಮ್ರಧ್ವಜ, ದ್ರೌಪದಿ ಪ್ರತಾಪ, ಭಾರ್ಗವ ರಾಮ 

ಶ್ರೀ ಹಾಲಾಡಿ ಮೇಳ == ಜಡ್ಡಿನಗದ್ದೆ ಶಾಲಾ ವಠಾರ – ಚಿತ್ರಾಕ್ಷಿ ಕಲ್ಯಾಣ  

ಶ್ರೀ ಬೆಂಕಿನಾಥೇಶ್ವರ ಮೇಳ  == ಕಳತ್ರಪಾದೆ ಶಾಲಾ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಎಕ್ಕಾರು ಕುಂಭಕಂಠಿನಿ ದೇವಸ್ಥಾನ – ಪಾಪಣ್ಣ ವಿಜಯ ಗುಣಸುಂದರಿ

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆನಗಲ್ – ಸರ್ಪ ಶಪಥ  

ಶ್ರೀ ಹಿರಿಯಡಕ ಮೇಳ == ಮಿಜಾರು ಕಾಂಬೆಟ್ಟು ಶ್ರೀ ಸೋಮನಾಥೇಶ್ವರ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ಶ್ರೀ ಕಪಿಲೇಶ್ವರ ಮಹಾಗಣಪತಿ ದೇವಸ್ಥಾನ, ಸಾಲಿಕೇರಿ ಬ್ರಹ್ಮಾವರ 

ಶ್ರೀ ಸಿಗಂದೂರು ಮೇಳ == ದೊಡ್ಮನೆ, ಬಿರ್ಲಮಕ್ಕಿ (ಉ.ಕ)

ಶ್ರೀ ನೀಲಾವರ ಮೇಳ  == ಚಿತ್ರಾಪುರ ಶಿರಾಲಿ ಭಟ್ಕಳ  – ದೈವ ಮಂಟಪ  

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==   ಈರೇಗೋಡ್ 

ಶ್ರೀ ಮೇಗರವಳ್ಳಿ ಮೇಳ == ಚಿಟ್ಟೆಬೈಲು ತೀರ್ಥಹಳ್ಳಿ – ಕುಲದೈವ ಪಂಜುರ್ಲಿ 

ಬೆಂಗಳೂರಿನಲ್ಲಿ ಪುಣ್ಯಕೋಟಿ ಯಕ್ಷನೃತ್ಯ ರೂಪಕ

ಬೆಂಗಳೂರಿನ ಹೆಚ್ ಎಮ್ ವಿ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಚೇತನ ರವರು ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಬೆಂಗಳೂರಿನ ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಯ 4 ನೇ ಹಂತದಲ್ಲಿ ಇರುವ ಕಲಾಗುಡಿಯ ಕಲಾವೇದಿಕೆಯಲ್ಲಿ ದಿನಾಂಕ 08-03-2021 ರ ಸಂಜೆ ಹಮ್ಮಿಕೊಂಡ ಮಹಿಳಾ ದಿನಾಚರಣೆಯ ಸಂದರ್ಭ ಪ್ರದರ್ಶಿಸಿದ ಪುಣ್ಯಕೋಟಿ ಯಕ್ಷನೃತ್ಯ ರೂಪಕದ ಪ್ರಸ್ತುತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಮತ್ತೊಬ್ಬ ಅತಿಥಿಯಾಗಿದ್ದ ಖ್ಯಾತ ರಂಗ ನಿರ್ದೇಶಕಿ ಹಾಗೂ ಚಲನಚಿತ್ರ ನಿರ್ದೇಶಕಿಯಾದ ಚಂಪಾಶೆಟ್ಟಿಯವರು ಪುಣ್ಯಕೋಟಿ ಕಥೆಯ ಮಹತ್ವವನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಅನುರಾಧ ಕರಬ, ಮಮತ ಉರಾಳ ಹಾಗೂ ರಮಾದೇವಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರು ಆದ ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಪುಣ್ಯಕೋಟಿ ಯಕ್ಷ ನೃತ್ಯ ರೂಪಕವು ಅತಿಥಿಗಳ ಹಾಗೂ ನೆರೆದ ಪ್ರೇಕ್ಷಕರ ಪ್ರಶಂಸೆಗೆ ಪ್ರಾಪ್ತವಾಯಿತು.

ಪುಣ್ಯಕೋಟಿಯಾಗಿ ಅಧಿತಿ ಉರಾಳ, ಕರುವಾಗಿ ಪ್ರಶಸ್ತಿ, ಹುಲಿಯಾಗಿ ಮಧುಮಿತ ಹಾಗೂ ಗೊಲ್ಲರಾಗಿ ನಿತ್ಯಾ ಹಾಗೂ ನಿಶ್ಚಿತ ತಮ್ಮ ಕುಣಿತ ಹಾಗೂ ಅಭಿನಯದ ಮೂಲಕ ಎಲ್ಲರ ಮನಸೂರೆಗೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ರಿಷಿ ಕುಮಾರ್ ನಿರ್ವಹಿಸಿದನು. ಸುಹಾಸ್, ಚಿರಾಗ್, ತೇಜಸ್ ತಮ್ಮ ಸಹಕಾರದ ಮೂಲಕ ಈ ಒಂದು ಮಹಿಳಾ ದಿನಾಚರಣೆಯ ಕಾರ್ಯಕ್ರಮ ಯಶಸ್ವೀಯಾಗಲು ಕಾರಣರಾದರು.

ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು – ಭಾಗ – 1

ಇಪ್ಪತ್ತನೆಯ ಶತಮಾನದ ಆರಂಭದ ಕಾಲ. ಯಕ್ಷಗಾನ ಕಲಾವಿದರ ಬದುಕು ಹೇಗಿದ್ದಿರಬಹುದು? ಹೀಗೆಯೇ ಇದ್ದಿರಬಹದು ಎಂದು ಹೇಳಲು ನಾವು ಶಕ್ಯರಲ್ಲ. ಆದರೂ ಕಲ್ಪಿಸಿಕೊಳ್ಳಬಹುದು. ಹಿರಿಯರಿಂದ ಕೇಳಿ ತಿಳಿದುಕೊಳ್ಳಲೂ ಬಹುದು. ಕಾಲ್ನಡಿಗೆಯಿಂದಲೇ ಸಾಗುತ್ತಿದ್ದ ಕಾಲ ಅದು.

ಸರಕುಗಳನ್ನು ತಲೆಯ ಮೇಲೆ ಹೊತ್ತೇ ಸಾಗಿಸಬೇಕಾಗುತ್ತಿತ್ತು. ಯಂತ್ರಯುಗವು ಇನ್ನೂ ಆರಂಭವಾಗಿರಲಿಲ್ಲ. ವಾಹನ, ಟೆಲಿಫೋನ್, ಟಿವಿ , ರೇಡಿಯೋ ಯಾವುದೂ ಇದ್ದಿರಲಿಲ್ಲ. ಸಂಪರ್ಕಕ್ಕೆ ಪತ್ರ ವ್ಯವಹಾರ ಎಂಬ ಒಂದೇ ಒಂದು ವ್ಯವಸ್ಥೆ ಇದ್ದುದು. ಇಲ್ಲವಾದರೆ ನಡೆದೇ ಸಾಗಿ ಮುಖತಃ ಭೇಟಿಯಾಗಬೇಕಿತ್ತು. ನಾಡಿಗರು ಕಾಡದಾರಿಯನ್ನು ಕ್ರಮಿಸಿಯೇ ಮತ್ತೊಂದು ಊರಿಗೆ ಸಾಗುತ್ತಿದ್ದರು.

ಕಲಾವಿದರು ಅದೆಷ್ಟು ಕಷ್ಟದ ದಿನಗಳನ್ನು ಕಳೆದು ಬದುಕಿರಬಹುದು? ಕಷ್ಟ ನಷ್ಟಗಳ ಕಡೆಗೆ ಅವರ ಗಮನವಿರಲಿಲ್ಲ. ಗುರಿಯತ್ತ ಮಾತ್ರ ಅವರು ಲಕ್ಷ್ಯವಿರಿಸಿದ್ದರು. ಕಲ್ಲು ಮಣ್ಣು, ಕೊಳೆಗಳನ್ನೆಲ್ಲಾ ಕೊರೆದು ಬಾವಿಯನ್ನು ತೋಡಿದಾಗ ಮಾತ್ರ ಸಿಹಿನೀರು ಸಿಗುತ್ತದೆ ಎಂಬ ವಿಚಾರವನ್ನು ಅವರು ತಿಳಿದಿದ್ದರು. ಹೌದು. ಕಷ್ಟ ನಷ್ಟಗಳಿಲ್ಲದೆ ಗೆದ್ದರೆ ಅದು ಕೇವಲ ಗೆಲುವು ಎನಿಸುತ್ತದೆ. ಕಷ್ಟ ನಷ್ಟಗಳನ್ನೂ ಸಮಸ್ಯೆಗಳನ್ನೂ ಎದುರಿಸಿ ಗೆದ್ದರೆ ಅದು ಇತಿಹಾಸ’ ಎನಿಸಲ್ಪಡುತ್ತದೆ.

ಬದುಕಿನಲ್ಲಿ ಬಾಯಿತೆರೆದ  ಬವಣೆಗಳಿಂದ ಬೆಂದು ನೊಂದರೂ ವಿಚಲಿತರಾಗದೆ ಗುರಿಯನ್ನು ಸೇರಿದ ವ್ಯಕ್ತಿಗಳು ಇತಿಹಾಸ ಎಂಬ ಪುಸ್ತಕದ ಪುಟಗಳಲ್ಲಿ ಶಾಶ್ವತರಾಗಿ ಉಳಿಯುತ್ತಾರೆ. ಸಂಧರ್ಭಗಳು ಅನುಕೂಲವಾಗಿದ್ದಾಗ ವ್ಯವಹರಿಸುವುದು ಬಹು ಸುಲಭ. ಪ್ರತಿಕೂಲ ಸಂಧರ್ಭಗಳನ್ನು ಎದುರಿಸಿ ಗೆಲ್ಲುವುದೆಂದರೆ ಅದೊಂದು ಸಾಹಸ. ಅವಿರತ ಸಾಧನೆಯಿಂದ ಯಕ್ಷಗಾನಕ್ಕೆ ಅನನ್ಯ ಕೊಡುಗೆಗಳನ್ನು ನೀಡಿ ನಮ್ಮನ್ನಗಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರೂ ಅವರು ಜನಮಾನಸದಲ್ಲಿ ಶಾಸ್ವತರಾಗಿ ಉಳಿಯುತ್ತಾರೆ.

ಅಳಿದರೂ ಕಾಯ ಉಳಿಯಿತು ಕೀರ್ತಿ ಎಂಬಂತೆ ಕಲಾಮಾತೆಯು ಅವರ ಕೀರ್ತಿಯನ್ನು ಬೆಳಗಿಸುತ್ತಾಳೆ. ಕಲಾಭಿಮಾನಿಗಳು ಅಂತಹ ಸಾಧಕರನ್ನು ಮರೆಯದೆ ಸದಾ ನೆನಪಿಸಿಕೊಳ್ಳುತ್ತಾರೆ. ಅವರ ತ್ಯಾಗ ಕೊಡುಗೆಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ಅನುಭವಿಸಬಹುದು. ಇದರಿಂದ ಅಲೌಕಿಕವಾಗಿರುವ ಆ ಚೇತನಗಳು ಸಂತೋಷಮಾನಸರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ ಎಂಬುದು ಖರೆ.

20 ನೇ ಶತಮಾನದಲ್ಲಿ ಲೋಕದ ಬೆಳಕನ್ನು ಕಂಡು ಯಕ್ಷಗಾನವನ್ನೇ ತನ್ನ ಉಸಿರಾಗಿ ಸ್ವೀಕರಿಸಿ, ಅಪೂರ್ವ ಸಾಧಕನಾಗಿ, ಕಲಾವಿದನಾಗಿ, ಗುರುಶ್ರೇಷ್ಠನಾಗಿ, ಪ್ರಸಂಗಕರ್ತನಾಗಿ ಕಲೆಗೆ ಅನುಪಮವಾದ ಕೊಡುಗೆಗಳನ್ನು ನೀಡಿ ಕೀರ್ತಿಶೇಷರಾದವರು ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು. ಅಳಿದರೂ ಇಂದು ಬದುಕಿಯೇ ನಮ್ಮ ಜತೆಗಿದ್ದಾರೆ. ಅವರ ಬದುಕು ಕಲಾವಿದರಿಗೆಲ್ಲಾ ಅನುಸರಣೀಯವಾದುದು. 

ಯಕ್ಷಗಾನ ಗುರುಕುಲದ ರೂವಾರಿ ಎಂದೇ ಖ್ಯಾತರಾಗಿದ್ದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರನ್ನು ನಾನು ನೋಡಿದ್ದಿಲ್ಲ. ನನ್ನ ತೀರ್ಥರೂಪರು ವಳಕ್ಕುಂಜ ಸುಬ್ರಹ್ಮಣ್ಯ ಭಟ್ಟರಿಂದ ಅವರ ಬಗೆಗೆ ಕೇಳಿ ತಿಳಿದುಕೊಂಡಿದ್ದೆ. ನನ್ನ ತಂದೆಯವರು ಕೀರಿಕ್ಕಾಡು ಮಾಸ್ತರರ ಸಮಕಾಲೀನರಲ್ಲ. ಕಿರಿಯ ಒಡನಾಡಿಯೂ ಅರ್ಥಗಾರಿಕೆಯಲ್ಲಿ ಅವರ ಶಿಷ್ಯನೂ ಆಗಿದ್ದರು. ಮಾಸ್ತರರ ಅರ್ಥಗಾರಿಕೆಯನ್ನು ಕೇಳಿಯೇ ಬೆಳೆದವರು.

ಕೀರಿಕ್ಕಾಡು ವಿಷ್ಣು ಭಟ್ಟರು ಭಾಗವಹಿಸಿದ ತಾಳಮದ್ದಳೆಗಳಲ್ಲಿ ಅವರ ಸಂಭಾಷಣೆಗಳಲ್ಲಿ ಹುಟ್ಟಿದ ರೋಚಕ ಸನ್ನಿವೇಶಗಳನ್ನು ಮಕ್ಕಳಾದ ನಮಗೆ ತೀರ್ಥರೂಪರು ಹೇಳುತ್ತಿದ್ದರು. ಈಗಲೂ ನೆನಪಿದೆ. “ಅವರ ಸಂಭಾಷಣೆಗಳು ಸರಳ ಸುಂದರವಾಗಿ ಸಾಮಾನ್ಯರಿಗೂ ಅರ್ಥವಾಗುವಂತಿರುತ್ತಿತ್ತು . ಯಕ್ಷಗಾನ ಕಲಿಕಾಸಕ್ತರಿಗೆ ಅವಕಾಶಗಳನ್ನು ನೀಡಿ ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಿದ್ದರು. ಕೆಣಕಿದರೆ ಎದುರಾಳಿ ಎಂತಹಾ ಬಲಿಷ್ಠನಾದರೂ ಗಣನೆಗೆ ತಾರದೆ ಕುಟುಕುತ್ತಿದ್ದರು.

ಕೋಪವೆಂದಿಗೂ ಬಾರದು. ಸಹನೆಗಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ ಎಂದು ತಿಳಿದು ವ್ಯವಹರಿಸುವವರು. ಸರಳವಾದ ಬದುಕು. ಯಕ್ಷಗಾನವನ್ನು ತನ್ನ ಪ್ರಾಣವೆಂದು ತಿಳಿದು ಪ್ರೀತಿಸುತ್ತಿದ್ದರು” ಇದು ಕೀರಿಕ್ಕಾಡು ಮಾಸ್ತರರ ಬಗ್ಗೆ ನನ್ನ ತೀರ್ಥರೂಪರು ಆಡುತ್ತಿದ್ದ ಮಾತುಗಳು. ಉತ್ತಮ ವಿಚಾರಗಳನ್ನು ಹಿರಿಯ ಕಿರಿಯರೆಂಬ ಭೇದವಿಲ್ಲದೆ ಮಾಸ್ತರರು ಕೊಟ್ಟು ಕೊಂಡುಕೊಳ್ಳುತ್ತಿದ್ದರೆಂದು ಹಿರಿಯರಿಂದ ನಾನು ಕೇಳಿ ತಿಳಿದಿರುವೆ.

ಸದ್ವಿಚಾರಗಳಲ್ಲಿರುವ ಚಮತ್ಕಾರವನ್ನು ನಾವು ಗಮನಿಸೋಣ. ಒಂದು ನಾಣ್ಯವನ್ನು ಇಬ್ಬರು ಪರಸ್ಪರ ಬದಲಿಸಿಕೊಂಡರೆ ಇಬ್ಬರ ಕೈಯಲ್ಲಿಯೂ ಒಂದೊಂದೇ ನಾಣ್ಯವು ಉಳಿಯುತ್ತದೆ. ಆದರೆ ಒಳ್ಳೆಯ ವಿಚಾರವನ್ನು ಇಬ್ಬರು ಕೊಟ್ಟುಕೊಂಡರೆ (ವಿನಿಮಯ ) ಇಬ್ಬರಲ್ಲೂ ಎರೆಡೆರಡು ಒಳ್ಳೆಯ ವಿಚಾರಗಳು ತುಂಬಿಕೊಳ್ಳುತ್ತವೆ!  – (ಮುಂದುವರಿಯುವುದು)

ಲೇಖನ: ರವಿಶಂಕರ್ ವಳಕ್ಕುಂಜ

5 ಮಿಲಿಯನ್ ಯು ಟ್ಯೂಬ್ ವೀಕ್ಷಕರು ನೋಡಿದ ನಂದಿನಿ ಗುಜಾರ್ ‘ಸ್ವಾಗತಂ ಕೃಷ್ಣಾ’ ಹಾಡು

ನಂದಿನಿ ರಾವ್ ಗುಜಾರ್ ಗಾಯನ ಲೋಕದಲ್ಲಿ ಒಂದು ಅಪೂರ್ವ  ಪ್ರತಿಭೆ. ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬಹಳಷ್ಟು ಹೆಸರು ಮಾಡಿದ ಸಂಗೀತಗಾರ್ತಿಯರಲ್ಲಿ ನಂದಿನಿ ಕೂಡಾ ಒಬ್ಬರು.

ತನ್ನ 12ನೆಯ ವಯಸ್ಸಿನಲ್ಲಿಯೇ ಹಾಡಲು ಪ್ರಾರಂಭಿಸಿದ ನಂದಿನಿ ಇಂದು ವಿಶ್ವಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ವರೆಗೆ ಸುಮಾರು 1500 ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಅಮೆರಿಕಾ, ಕೆನೆಡಾ,  ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿ ಅಲ್ಲಿಯೂ ಜನಪ್ರಿಯತೆಯನ್ನು ಪಡೆದಿದ್ದಾರೆ.

ಹಲವಾರು ಕನ್ನಡ ಚಾನೆಲ್ ಗಳಲ್ಲಿಯೂ ಪ್ರದರ್ಶನ ಮತ್ತು ಲೈವ್ ಷೋಗಳನ್ನೂ ನೀಡಿರುವ ನಂದಿನಿ ರಾವ್ ಅವರ ಸುಮಾರು 100ಕ್ಕೂ ಹೆಚ್ಚು ಸಿಡಿ ಗಳು ಧ್ವನಿಮುದ್ರಣಗೊಂಡಿವೆ. ತುಂಬಾ ಬೇಡಿಕೆಯಿರುವ ಹೊಸ ತಲೆಮಾರಿನ ಕಲಾವಿದೆ. ಸಾಕಷ್ಟು ಕನ್ನಡ ಹಾಡುಗಳನ್ನು ಹಾಡಿದ್ದಾರೆ. 

ನಂದಿನಿ ಗುಜಾರ್ ‘ಸ್ವಾಗತಂ ಕೃಷ್ಣಾ’ ಹಾಡನ್ನು ಸುಮಾರು 50 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಪಡೆದಿದೆ. ಈ ಗಾಯನವನ್ನು  ಅವರದೇ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಿ. ಲಿಂಕ್ ಕೊಡಲಾಗಿದೆ. 

ಇಂದಿನ ರಾಶಿ ಭವಿಷ್ಯ – ದ್ವಾದಶ ರಾಶಿಗಳ ಇಂದಿನ ಫಲ (09.03.2021)

ಮೇಷ: ಉತ್ತಮ ಲಾಭವನ್ನು ಪಡೆಯಲು ಹಿರಿಯರು ತಮ್ಮ ಹೆಚ್ಚುವರಿ ಶಕ್ತಿಯ ಬಳಕೆ. ಜಂಟಿ ಉದ್ಯಮಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಮಕ್ಕಳು ಸಂತೋಷವನ್ನು ತರುತ್ತಾರೆ. ಪ್ರಣಯದಿಂದ ಕೂಡಿದ ಈ ದಿನ ರೋಮಾಂಚನಕಾರಿ. ಮಾಡುತ್ತಿರುವ ಕೆಲಸವು ಮುಂಬರುವ ಸಮಯದಲ್ಲಿ ಪ್ರಯೋಜನವನ್ನು ನೀಡುತ್ತದೆ. ಇತರರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೀರಿ.

ವೃಷಭ: ಜೀವನವನ್ನು ಆನಂದಿಸಿ. ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯಕರವಾಗಿ ಬದುಕುವ ಕಲೆಯನ್ನು ಕಲಿಸುವ ಯೋಗದ ಸಹಾಯವನ್ನು ತೆಗೆದುಕೊಳ್ಳಿ. ನೀವು ವಿರಳವಾಗಿ ಭೇಟಿಯಾಗುವ ಜನರೊಂದಿಗೆ ಸಂವಹನ ನಡೆಸಲು ಒಳ್ಳೆಯ ದಿನ. ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಹೊಸ ತಂತ್ರಗಳಿಗೆ ಹೊಂದಿಕೊಳ್ಳಿ. ನಿಮ್ಮ ಶೈಲಿ ಜನರಿಗೆ ಆಸಕ್ತಿಯನ್ನುಂಟುಮಾಡುತ್ತವೆ. ಇಂದು ಗೊಂದಲ ಮತ್ತು ದಣಿದ ದಿನ.

ಮಿಥುನ: ನಿಮ್ಮ ಆರೋಗ್ಯವನ್ನು ಸುಧಾರಿಸುವ ವಿಷಯಗಳಲ್ಲಿ ಕೆಲಸ ಮಾಡಲು ಅನುಕೂಲಕರ ದಿನ. ಹೊಸ ಹಣಕಾಸಿನ ಒಪ್ಪಂದವು ಅಂತಿಮಗೊಳ್ಳುತ್ತದೆ ಹೆತ್ತವರ ಆರೋಗ್ಯಕ್ಕೆ ಕಾಳಜಿಯ ಅಗತ್ಯವಿದೆ. ಪ್ರಮುಖ ವ್ಯವಹಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುವಾಗ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಹೊರಗಿನವರ ಹಸ್ತಕ್ಷೇಪವು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆಗಳಿಗೆ ಕಾರಣವಾಗುತ್ತದೆ.

ಕರ್ಕಾಟಕ: ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಆರೋಗ್ಯವು ಅರಳಬಹುದು. ಮನರಂಜನೆ ಅಥವಾ ಸೌಂದರ್ಯವರ್ಧಕ ಸುಧಾರಣೆಗೆ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಅಮೂಲ್ಯ ಉಡುಗೊರೆಗಳನ್ನು ಪ್ರೇಮಿಯು ತಿರಸ್ಕರಿಸಬಹುದು. ಕಲಾವಿದರು ಮತ್ತು ದುಡಿಯುವ ಮಹಿಳೆಯರಿಗೆ ಉತ್ತಮ ದಿನ. ಸಂಗಾತಿಯು ಇಂದು ನಿಮ್ಮ ಆರೋಗ್ಯದ ಬಗ್ಗೆ ಸಂವೇದನಾಶೀಲರಾಗಬಹುದು.

ಸಿಂಹ: ಇಂದು, ದೋಷಯುಕ್ತ ಎಲೆಕ್ಟ್ರಾನಿಕ್ ವಸ್ತುವನ್ನು ಸರಿಪಡಿಸಲು ನಿಮ್ಮ ಹಣವನ್ನು ನೀವು ಖರ್ಚು ಮಾಡಬಹುದು. ಹೊಸ ಕುಟುಂಬ ಉದ್ಯಮವನ್ನು ಪ್ರಾರಂಭಿಸಲು ಶುಭ ದಿನ. ಯಶಸ್ಸನ್ನು ಪಡೆಯಲು ಇತರ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಿ. ಪ್ರೀತಿಯಲ್ಲಿ ಬಿದ್ದವರು ಪ್ರಣಯ ಮನಸ್ಥಿತಿಯಲ್ಲಿರುತ್ತಾರೆ. ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯವು ಮೆಚ್ಚುಗೆಯನ್ನು ಸೆಳೆಯುತ್ತದೆ ಮತ್ತು ಪ್ರತಿಫಲವನ್ನು ತರುತ್ತದೆ. ನಿಮ್ಮನ್ನು ಸಂತೋಷವಾಗಿ ಮಾಡಲು ನಿಮ್ಮ ಜೀವನ ಸಂಗಾತಿ ಇಂದು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ.

ಕನ್ಯಾ: ಹೊರಾಂಗಣ ಚಟುವಟಿಕೆಗಳು ನಿಮಗೆ ಪ್ರಯೋಜನವನ್ನು ನೀಡುತ್ತವೆ. ನಿಮ್ಮ ಸ್ನೇಹಿತರೊಬ್ಬರು ಇಂದು ದೊಡ್ಡ ಮೊತ್ತವನ್ನು ಸಾಲವಾಗಿ ಕೇಳಬಹುದು. ನೀವು ಅವನಿಗೆ ಸಹಾಯ ಮಾಡುವುದರಿಂದ ಆರ್ಥಿಕವಾಗಿ ದುರ್ಬಲರಾಗಬಹುದು. ನಿಮ್ಮ ಕುಟುಂಬ ಸದಸ್ಯರ ಅಗತ್ಯತೆಯ ಮೇಲೆ ಕೇಂದ್ರೀಕರಿಸುವುದು ಇಂದು ನಿಮ್ಮ ಆದ್ಯತೆಯಾಗಿರಬೇಕು. ಸಹೋದ್ಯೋಗಿಗಳು ಮತ್ತು ಹಿರಿಯರು ಸಂಪೂರ್ಣ ಸಹಕಾರವನ್ನು ನೀಡುವುದರಿಂದ ಕಚೇರಿಯಲ್ಲಿ ಕೆಲಸವು ವೇಗವನ್ನು ಪಡೆಯುತ್ತದೆ. ಸ್ವತಃ ಸಹಾಯ ಮಾಡುವವರಿಗೆ ದೇವರು ಸಹಾಯ ಮಾಡುತ್ತಾನೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ನಿಮ್ಮ ಸಂಗಾತಿಯ ಗಮನದ ಕೊರತೆಯನ್ನು ನೀವು ಅನುಭವಿಸಬಹುದು.

ತುಲಾ: ಆಧ್ಯಾತ್ಮಿಕ ಜೊತೆಗೆ ದೈಹಿಕ ಲಾಭಕ್ಕಾಗಿ ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡಬೇಕು. ಹಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಇಂದು ನಿಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಕುಟುಂಬ ಸದಸ್ಯರು ಬೆಂಬಲ ನೀಡುತ್ತಾರೆ. ನಿಮ್ಮ ಗುರಿಗಳ ಕಡೆಗೆ ಸದ್ದಿಲ್ಲದೆ ಕೆಲಸ ಮಾಡಿ ಮತ್ತು ನೀವು ಯಶಸ್ಸನ್ನು ತಲುಪುವ ಮೊದಲು ನಿಮ್ಮ ಉದ್ದೇಶಗಳನ್ನು ಬಹಿರಂಗಪಡಿಸಬೇಡಿ. ನಿಮ್ಮ ಹಿಂದಿನ ಯಾರಾದರೂ ನಿಮ್ಮನ್ನು ಸಂಪರ್ಕಿಸಿ ಅದನ್ನು ಸ್ಮರಣೀಯ ದಿನವನ್ನಾಗಿ ಮಾಡುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯು ಸ್ವರ್ಗವು ಭೂಮಿಯಲ್ಲಿದೆ ಎಂದು ಇಂದು ನಿಮಗೆ ತೋರಿಸಿಕೊಡುತ್ತಾರೆ.

ವೃಶ್ಚಿಕ: ನೀವು ಜೀವನವನ್ನು ಪೂರ್ಣವಾಗಿ ಆನಂದಿಸಲು ಹೊರಟಿದ್ದೀರಿ. ಅನುಭವಿ ವ್ಯಕ್ತಿಯ ಸಲಹೆಯಿಲ್ಲದೆ ಇಂದು ಆರ್ಥಿಕ ನಷ್ಟವನ್ನು ಉಂಟುಮಾಡುವ ರೀತಿಯಲ್ಲಿ ಯಾವುದೇ ಹೆಜ್ಜೆ ಇಡಬೇಡಿ ಅಥವಾ ವರ್ತಿಸಬೇಡಿ. ಇಡೀ ಕುಟುಂಬ ಒಳಗೊಂಡ ಮನರಂಜನೆಯು ವಿನೋದಮಯವಾಗಿರುತ್ತದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ಆದರೆ ಸಣ್ಣ ಸಂಗತಿಗಳ ಬಗ್ಗೆ ನಿಮ್ಮ ಸಂಗಾತಿಯನ್ನು ಟೀಕಿಸುವುದನ್ನು ತಪ್ಪಿಸಿ. ಇಂದು ನಿಮ್ಮೆಲ್ಲರಿಗೂ ತುಂಬಾ ಸಕ್ರಿಯ ಮತ್ತು ಹೆಚ್ಚು ಸಾಮಾಜಿಕ ದಿನವಾಗಿರುತ್ತದೆ- ಜನರು ಸಲಹೆಗಾಗಿ ನಿಮ್ಮನ್ನು ನೋಡುತ್ತಾರೆ. ಇಂದು, ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸುವಾಗ ಬುದ್ಧಿವಂತರಾಗಿರಿ, ಏಕೆಂದರೆ ಅನಗತ್ಯ ಜಗಳಗಳು ಮತ್ತು ವಾದಗಳು ಉದ್ಭವಿಸಬಹುದು.

ಧನು: ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಮನಸ್ಸು ಅರಳಬಹುದು. ಹಣದ ಕೊರತೆಯು ಇಂದು ಕುಟುಂಬದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಕುಟುಂಬದ ಇತರ ಸದಸ್ಯರೊಂದಿಗೆ ಮಾತನಾಡುವ ಮೊದಲು ಚೆನ್ನಾಗಿ ಯೋಚಿಸಿ ಮತ್ತು ಅವರಿಂದ ಸಲಹೆ ಪಡೆಯಿರಿ. ನಿಮ್ಮ ಆಕರ್ಷಕ ಸ್ವಭಾವ ಮತ್ತು ಆಹ್ಲಾದಕರ ವ್ಯಕ್ತಿತ್ವವು ಹೊಸ ಸ್ನೇಹಿತರನ್ನು ಮಾಡಲು ಮತ್ತು ಸಂಪರ್ಕಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಮಾನಸಿಕವಾಗಿ ಶಾಂತವಾಗಿರುತ್ತೀರಿ, ಅದು ದಿನವಿಡೀ ನಿಮಗೆ ಪ್ರಯೋಜನವನ್ನು ನೀಡುತ್ತದೆ.

ಮಕರ: ಸ್ನೇಹಿತನ ವರ್ತನೆ ನಿಮ್ಮನ್ನು ಕೆರಳಿಸಬಹುದು. ಆದರೆ ನೀವು ಶಾಂತವಾಗಿರಲು ಪ್ರಯತ್ನಿಸಿ. ದಿನದ ಅಂತ್ಯದ ನಂತರ, ನೀವು ಸಾಕಷ್ಟು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ನೀವು ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಾಕಷ್ಟು ಸಮಯವನ್ನು ಪಡೆಯುತ್ತೀರಿ. ಇಂದು ನೀವು ಜನಮನದಲ್ಲಿರುತ್ತೀರಿ- ಮತ್ತು ಯಶಸ್ಸು ನಿಮ್ಮ ವ್ಯಾಪ್ತಿಯಲ್ಲಿದೆ. ನಿಮ್ಮ ಸಮಯವನ್ನು ನಿಮ್ಮ ಪ್ರೇಮಿಗೆ ವಿನಿಯೋಗಿಸಲು ನೀವು ಪ್ರಯತ್ನಿಸುತ್ತೀರಿ, ಆದರೆ ಕೆಲವು ಪ್ರಮುಖ ಕೆಲಸಗಳಿಂದಾಗಿ, ನಿಮಗೆ ಅಗತ್ಯವಿರುವದನ್ನು ಮಾಡಲು ಸಾಧ್ಯವಾಗುವುದಿಲ್ಲ.

ಕುಂಭ: ನೀವು ಅತ್ಯಾಕರ್ಷಕ ಹೊಸ ಸನ್ನಿವೇಶದಲ್ಲಿ ನಿಮ್ಮನ್ನು ಕಂಡುಕೊಳ್ಳಬಹುದು-ಅದು ನಿಮಗೆ ಆರ್ಥಿಕ ಲಾಭವನ್ನು ತರುತ್ತದೆ. ನಿಮ್ಮ ಸಮಯೋಚಿತ ಸಹಾಯವು ಯಾರನ್ನಾದರೂ ಉಳಿಸುತ್ತದೆ. ನಿಮ್ಮ ಪ್ರೇಮಿ ನಿಮ್ಮ ಒಂದು ಅಭ್ಯಾಸದ ಬಗ್ಗೆ ಕೆಟ್ಟ ಭಾವನೆ ಹೊಂದಬಹುದು ಮತ್ತು ನಿಮ್ಮೊಂದಿಗೆ ಸಿಟ್ಟಾಗಬಹುದು. ಕೆಲಸದಲ್ಲಿ ವಿಷಯಗಳನ್ನು ವಿಂಗಡಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಭಾವವನ್ನು ನೀವು ಹಾಕಬೇಕು. ಇಂದು, ನೀವು ಕುಟುಂಬದ ಯುವ ಸದಸ್ಯರೊಂದಿಗೆ ಉದ್ಯಾನವನ ಅಥವಾ ಶಾಪಿಂಗ್ ಮಾಲ್‌ಗೆ ಹೋಗಬಹುದು. ನಿಮ್ಮ ಪ್ರಿಯತಮೆಯ ಪ್ರಾಮಾಣಿಕತೆಯನ್ನು ನೀವು ಅನುಮಾನಿಸಬಹುದು, ಅದು ಮುಂದಿನ ದಿನಗಳಲ್ಲಿ ನಿಮ್ಮ ವೈವಾಹಿಕ ಜೀವನದ ವೈಭವವನ್ನು ಹಾಳು ಮಾಡುತ್ತದೆ.

ಮೀನ: ನೀವು ಇಂದು ವಿಶ್ರಾಂತಿಯ ಅಗತ್ಯವಿದೆ. ಹವ್ಯಾಸಗಳು ಮತ್ತು ನೀವು ಹೆಚ್ಚು ಆನಂದಿಸುವ ವಿಷಯಗಳಲ್ಲಿ ತೊಡಗಿಸಿಕೊಳ್ಳಿ. ಹಣ-ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು, ಮತ್ತು ನಿಮ್ಮ ತಂದೆ ಅಥವಾ ನೀವು ಇಷ್ಟಪಡುವ ವ್ಯಕ್ತಿಯನ್ನು ಸಲಹೆಗಳಿಗಾಗಿ ಕೇಳಿ. ಕುಟುಂಬ ಸದಸ್ಯರೊಂದಿಗೆ ಕೆಲವು ಶಾಂತ ಕ್ಷಣಗಳನ್ನು ಕಳೆಯಿರಿ. ನಿಮ್ಮ ಪ್ರೇಮಿಯನ್ನು ಮದುವೆಯಾಗಲು ನೀವು ಬಯಸಿದರೆ, ನೀವು ಇಂದು ಅವರೊಂದಿಗೆ ಮಾತನಾಡಬೇಕು. ಯೋಜನೆಗಳನ್ನು ಕಾರ್ಯಗತಗೊಳಿಸಲು ಮತ್ತು ಹೊಸ ಉದ್ಯಮಗಳಿಗೆ ಸಹಿ ಹಾಕಲು ಉತ್ತಮ ದಿನ. ನಿಮ್ಮ ಕುಟುಂಬದ ಸದಸ್ಯರು ಇಂದು ನಿಮ್ಮೊಂದಿಗೆ ಸ್ವಲ್ಪ ಸಮಯ ಕಳೆಯಲು ಒತ್ತಾಯಿಸಬಹುದು.

ಮೇಳಗಳ ಇಂದಿನ (09.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==     ಕೊಡ್ಲಾಡಿ ಬಾಂಡ್ಯ – ಹಿರಣ್ಯಾಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ =  ಕಾಜಿಲ ಶ್ರೀ ಕೋರ್ದಬ್ಬು ದೇವಸ್ಥಾನದ ಬಳಿ 

ಕಟೀಲು ಎರಡನೇ ಮೇಳ ==   ಅರಸಿನಮಕ್ಕಿ 

ಕಟೀಲು ಮೂರನೇ ಮೇಳ= ಕೆಯ್ಯೂರು ಕೆರೆಮನೆ ದೇಲಂತಬೆಟ್ಟು 

ಕಟೀಲು ನಾಲ್ಕನೇ ಮೇಳ  == ಪಂಜ ವಯಾ ಹಳೆಯಂಗಡಿ 

ಕಟೀಲು ಐದನೇ ಮೇಳ ==  ಕಜೆ ಹೌಸ್ ಮಲ್ಲೂರು ವಯಾ ನೀರುಮಾರ್ಗ 

ಕಟೀಲು ಆರನೇ ಮೇಳ == ‘ ಮುಂಡ್ರೊಟ್ಟು ಬೆಳಾಲು ವಯಾ ಬೆಳ್ತಂಗಡಿ 

ಮಂದಾರ್ತಿ ಒಂದನೇ ಮೇಳ  ==  ಗೊಡ್ಡುಮಕ್ಕಿ ತೊಂಭಟ್ಟು ಮಚ್ಚಟ್ಟು 

ಮಂದಾರ್ತಿ ಎರಡನೇ ಮೇಳ   ==   ಹುಲಿಮಂಡೆ ಇಂಗ್ಲಾದಿ ದೇವಂಗಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  ==   ಹಾನಾಡಿ ಮೇಲ್ ಮಕ್ಕಿಮನೆ ಬೇಳಂಜೆ 

ಮಂದಾರ್ತಿ ನಾಲ್ಕನೇ ಮೇಳ   ==  ಹುಲಿಮಂಡೆ ಇಂಗ್ಲಾದಿ ದೇವಂಗಿ – ಕೂಡಾಟ

ಮಂದಾರ್ತಿ    ಐದನೇ ಮೇಳ  ==  ದೊಡ್ಮನೆಬೆಟ್ಟು ಬಳ್ಕೂರು 

ಶ್ರೀ ಹನುಮಗಿರಿ ಮೇಳ  ==  ಕಿದೂರು – ದಮಯಂತಿ ಪುನಃ ಸ್ವಯಂವರ, ಕಂಸ ವಿವಾಹ, ಗದಾಯುದ್ಧ (ಸಂಜೆ 6ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನರಿಗುಡಿ ನಾಯ್ಕನಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಉಪ್ಳಾರಿಮನೆ  ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಬೀಜಮಕ್ಕಿ ಹಿತ್ಲುಮನೆ ಕಾಲ್ತೋಡು 

ಶ್ರೀ ಪಾವಂಜೆ ಮೇಳ  ==  ನಾಳ ಗೇರುಕಟ್ಟೆ – ಮಾನಿಷಾದ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಮೂಕಾಂಬಿಕಾ ಹೋಟೆಲ್ ಬಳಿ, ಶಂಕರನಾರಾಯಣ – ದಿವ್ಯ ಸನ್ನಿಧಿ 

ಕಮಲಶಿಲೆ ಮೇಳ ‘ಎ‘ = ಲಿಂಗಿ ಶಾಂತಾವರ ಗೇರುಸೊಪ್ಪ 

ಕಮಲಶಿಲೆ ಮೇಳ ‘ಬಿ‘ ==   ಶ್ರೀ ಮಹಾಗಣಪತಿ ದೇವಸ್ಥಾನ ಕೊಳನಕಲ್ಲು 

ಶ್ರೀ ಬಪ್ಪನಾಡು ಮೇಳ ==  ಪಿಲ್ಲಂಬುಗೋಳಿ ಶಾಲಾ ವಠಾರ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೊಳಲಿ ಪಳ್ಳಿಪ್ಪಾಡಿ ದೈವಸ್ಥಾನದ ವಠಾರ ಬಾಕಿಮಾರು ಗದ್ದೆ – ರಂಗಸ್ಥಳ (ಕಾಲಮಿತಿ)

ಶ್ರೀ ಅಮೃತೇಶ್ವರೀ ಮೇಳ ==   ಶ್ರೀ ರಾವುತೇಶ್ವರ ಹಾಗೂ ಪರಿವಾರ ದೈವಸ್ಥಾನ ಗುಳ್ಳಾಡಿ 

ಶ್ರೀ ಬೋಳಂಬಳ್ಳಿ ಮೇಳ==  ಅರೆಶಿರೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ ==   ಕೋಟೇಶ್ವರ ಹೊದ್ರೊಳ್ಳಿ ಬಂಡಿಕಡು ಬೊಬ್ಬರ್ಯ ದೇವಸ್ಥಾನದ ವಠಾರ – ಕರ್ಜೆ ಮಹಾಲಿಂಗೇಶ್ವರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಕಾರಬೈಲು ಫ್ರೆಂಡ್ಸ್ ಬೆಳ್ಳಾಳ – ನಾಗಶ್ರೀ (ಕಾಲಮಿತಿ)

ಶ್ರೀ ಬೆಂಕಿನಾಥೇಶ್ವರ ಮೇಳ  == ಅತ್ತೂರು ಭಾರತ್ ಬೀಡಿ ಕಾಲನಿ – ಸತ್ಯೊದ ಸ್ವಾಮಿ ಕೊರಗಜ್ಜ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಆಲೂರು ಕ್ರಾಸ್ ಬ್ರಹ್ಮಶ್ರೀ ಹೋಟೆಲ್ ಬಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉದ್ಯಾವರ ಅಂಕುದ್ರು – ಶಿವಬಂಟ ಬೊಬ್ಬರ್ಯ 

ಶ್ರೀ ಹಿರಿಯಡಕ ಮೇಳ == ಮೂಡುಕಾಡೂರು (ಕೊಕ್ಕರ್ಣೆ)-  ಕೃಷ್ಣ ಲೀಲೆ, ಗರುಡೋದ್ಭವ 

ಶ್ರೀ ಶನೀಶ್ವರ ಮೇಳ ==  ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ 

ಶ್ರೀ ಸಿಗಂದೂರು ಮೇಳ == ಬಗ್ವಾಡಿ 

ಶ್ರೀ ನೀಲಾವರ ಮೇಳ  == ನಾಗಬನ ವಠಾರ ಬಸ್ತಿ ಕಾಯ್ಕಿಣಿ, ಮುರ್ಡೇಶ್ವರ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಬಿಸಿಲುಮನೆ  

ಶ್ರೀ ಮೇಗರವಳ್ಳಿ ಮೇಳ == ಉಂಟೂರುಕಟ್ಟೆ ಕೈಮರ – ಮಧುರ ಮನಸ್ವಿ 

ವಾರ ಭವಿಷ್ಯ ಮಾರ್ಚ್ 8ರಿಂದ ಮಾರ್ಚ್ 14ರ ವರೆಗೆ (2021) – Weekly Horoscope from March 8 to March 14, 2021

ವಾರ ಭವಿಷ್ಯ ಮಾರ್ಚ್ 8ರಿಂದ ಮಾರ್ಚ್ 14ರ ವರೆಗೆ (2021) – Pisces – Weekly Horoscope from March 8 to March 14, 2021

ಮೇಷ: ಮಾನಸಿಕ ಶಾಂತಿಗಾಗಿ ಒತ್ತಡವನ್ನು ನಿವಾರಿಸಲು ನೀವು ಮಾರ್ಗಗಳನ್ನು ಕಂಡುಹಿಡಿಯಬೇಕು ಮತ್ತು ಹೀಗಾಗಿ, ನೀವು ಆರೋಗ್ಯಕರ ಮತ್ತು ಶಕ್ತಿಯುತವಾಗಿರಲು ಸಾಧ್ಯವಾಗುತ್ತದೆ. ಈ ವಾರ ಈ ಶಕ್ತಿಯು ನಿಮಗೆ ಬಹಳ ಮುಖ್ಯವಾಗಲಿದೆ. ಈ ವಾರ, ಈ ರಾಶಿಚಕ್ರದವರು ಹಲವಾರು ಮೂಲಗಳಿಂದ ಹಣಕಾಸಿನ ಲಾಭಗಳನ್ನು ಪಡೆಯುವ ಸಂಯೋಗಗಳಿದ್ದರೂ, ಯಾವುದೇ ಹೂಡಿಕೆ ಮಾಡುವ ಮೊದಲು ಹಲವಾರು ಬಾರಿ ಯೋಚಿಸಿ ಮುಂದಡಿ ಇಡಬೇಕು. ಈ ವಾರ, ನೀವು ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಚರ್ಚೆಗೆ ಬರುವುದನ್ನು ತಪ್ಪಿಸಬೇಕಾಗುತ್ತದೆ. ಆದ್ದರಿಂದ, ಯಾರೊಂದಿಗೂ ಏನಾದರೂ ಸಮಸ್ಯೆ ಇದ್ದರೆ, ಅದನ್ನು ಸಂಭಾಷಣೆಯ ಮೂಲಕ ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಿ. ಕೆಲಸದ ಸ್ಥಳದಲ್ಲಿ ನೀವು ಮಾಡುವ ಕೆಲವು ತಪ್ಪಿನಿಂದಾಗಿ ನೀವು ಕಚೇರಿ ಸಭೆಯಲ್ಲಿ ಎಲ್ಲರ ಮುಂದೆ ಮುಜುಗರಕ್ಕೊಳಗಾಗುವ ಸಾಧ್ಯತೆಯಿದೆ. ಆದಾಗ್ಯೂ, ಪ್ರತಿಯೊಂದು ಕಾರ್ಯವನ್ನು ಉತ್ತಮವಾಗಿ ಮತ್ತು ಸರಿಯಾಗಿ ಪೂರ್ಣಗೊಳಿಸುವ ಮೂಲಕ ನೀವು ಈ ಎಲ್ಲಾ ಸಂದರ್ಭಗಳನ್ನು ತೊಡೆದುಹಾಕಬಹುದು. ಈ ವಾರ ಗುರಿಗಳನ್ನು ಸಾಧಿಸಲು, ಪ್ರತಿಯೊಬ್ಬ ವಿದ್ಯಾರ್ಥಿಯು ಸರಿಯಾಗಿ ಯೋಜಿತ ರೀತಿಯಲ್ಲಿ ಮುಂದುವರಿಯಬೇಕು ಮತ್ತು ಅವರ ಗುರಿಗಳನ್ನು ಸಾಧಿಸಲು ಅಗತ್ಯವಾದ ಚಟುವಟಿಕೆಗಳು ಮತ್ತು ಕಾರ್ಯಗಳ ಪಟ್ಟಿಯನ್ನು ಮಾಡಬೇಕಾಗುತ್ತದೆ. ಏಕೆಂದರೆ ಇದನ್ನು ಮಾಡುವುದರಿಂದ, ನಿಷ್ಪ್ರಯೋಜಕ ಕಾರ್ಯಗಳಿಗಾಗಿ ನಿಮ್ಮ ಶಕ್ತಿ ಮತ್ತು ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬಹುದು.

ವೃಷಭ: ನಿಮ್ಮ ಆರೋಗ್ಯವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ, ಇದರಿಂದಾಗಿ ನೀವು ಉಲ್ಲಾಸವನ್ನು ಅನುಭವಿಸುವಿರಿ. ಹರ್ಷಚಿತ್ತದಿಂದ ವರ್ತಿಸುವ, ಇತರರೊಂದಿಗೆ ಬಹಿರಂಗವಾಗಿ ತಮಾಷೆ ಮಾಡುವ ಸಮಯ ಇದು. ಈ ವಾರದಲ್ಲಿ, ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಇತರರ ಮುಂದೆ ಖರ್ಚು ಮಾಡುವುದು ಸಾಕಷ್ಟು ಮೂರ್ಖ ನಿರ್ಧಾರ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಅಂತಹ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ, ಆಗ ಮಾತ್ರ ನಿಮ್ಮ ಭವಿಷ್ಯಕ್ಕಾಗಿ ಸಾಕಷ್ಟು ಉಳಿತಾಯ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಈ ವಾರ, ನಿಮ್ಮ ಕುಟುಂಬದ ಸದಸ್ಯರನ್ನು ಕುರುಡಾಗಿ ನಂಬುವುದು ಮತ್ತು ನಿಮ್ಮ ರಹಸ್ಯಗಳನ್ನು ಬಹಿರಂಗಪಡಿಸುವುದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ಎಲ್ಲರಿಗೂ ಅಗತ್ಯವಿರುವಷ್ಟು ಹೇಳಿ. ಇಲ್ಲದಿದ್ದರೆ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯುಂಟಾಗಬಹುದು. . ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ಈ ವಾರ ನಿಮಗಾಗಿ ಸಮಯವನ್ನು ಮೀಸಲಿಡಲು ಸಾಧ್ಯವಾಗುತ್ತದೆ. ರಚನಾತ್ಮಕವಾಗಿ ಏನನ್ನಾದರೂ ಮಾಡಲು ನಿಮಗೆ ಸೂಚಿಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳು ತುಂಬಿರುತ್ತವೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಹೆಚ್ಚುವರಿ ಶ್ರಮ ವಹಿಸಬೇಕಾಗುತ್ತದೆ. ಆದ್ದರಿಂದ, ಯಾವುದೇ ಕಾರಣಕ್ಕೂ ನಿಮ್ಮ ಅಧ್ಯಯನದಿಂದ ನಿಮ್ಮನ್ನು ಬೇರೆಡೆಗೆ ತಿರುಗಿಸಬೇಡಿ ಮತ್ತು ಬಿಡುವಿನ ವೇಳೆಯಲ್ಲಿ ನಿಮ್ಮ ಪುಸ್ತಕಗಳನ್ನು ಓದುವುದನ್ನು ಮುಂದುವರಿಸಿ.

ಮಿಥುನ: ಹೆಚ್ಚುವರಿ ಕೆಲಸದ ಹೊರೆ ನಿಮ್ಮ ಆರೋಗ್ಯವನ್ನು ಅಡ್ಡಿಪಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕಾರ್ಯನಿರತ ಜೀವನದಿಂದ ಸ್ವಲ್ಪ ಸಮಯವನ್ನು ಬಿಡುವಾಗಿರಿಸಿ, ನಿಮ್ಮ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಿ. ಸಂಬಂಧಿಕರಿಂದ ಹಣವನ್ನು ಎರವಲು ಪಡೆದವರು ಈ ವಾರ ಯಾವುದೇ ಸ್ಥಿತಿಯಲ್ಲಿ ಆ ಸಾಲವನ್ನು ಹಿಂದಿರುಗಿಸಬೇಕಾಗಬಹುದು. ಈ ಕಾರಣದಿಂದಾಗಿ, ನಿಮ್ಮ ಹಣಕಾಸಿನ ಬಜೆಟ್ ಸ್ಥಗಿತಗೊಳ್ಳುತ್ತದೆ ಮತ್ತು ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಸಂತೋಷದ ಮತ್ತು ಅದ್ಭುತ ವಾರ, ನಿಮ್ಮ ಮನೆ ಅತಿಥಿಗಳಿಂದ ತುಂಬಿರುತ್ತದೆ. ಇದರೊಂದಿಗೆ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆಗಳು ಸಹ ಕುಟುಂಬ ಸದಸ್ಯರನ್ನು ಸಂತೋಷವಾಗಿಡಲು ಸಹಾಯ ಮಾಡುತ್ತದೆ. ಈ ವಾರ, ನೀವು ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತೀರಿ ಮತ್ತು ಈ ಸಾಮರ್ಥ್ಯವು ಇತರರನ್ನು ಆಕರ್ಷಿಸುತ್ತದೆ. ನೀವು ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದರೆ, ನಿಮಗೆ ಹೆಚ್ಚು ಲಾಭವಾಗುತ್ತದೆ ಮತ್ತು ಹೊಸ ಹೂಡಿಕೆದಾರರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಇದು ಭವಿಷ್ಯದಲ್ಲಿ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಮನೆಯಿಂದ ದೂರದಲ್ಲಿ ವಾಸಿಸುವವರು ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಅವಕಾಶವನ್ನು ಪಡೆಯಬಹುದು. ಈ ಸಮಯದಲ್ಲಿ, ನೀವು ಭಾವನಾತ್ಮಕವಾಗಿ ಬಲಶಾಲಿಯಾಗಿರುತ್ತೀರಿ ಮತ್ತು ಮನೆಯ ಆಹಾರವನ್ನು ಸಹ ಆನಂದಿಸುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಂದು ಸನ್ನಿವೇಶದಲ್ಲೂ ದೃಢವಾಗಿರಿ ಮತ್ತು ಯಶಸ್ವಿಯಾಗಲು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಾಕಷ್ಟು ಶ್ರಮ ವಹಿಸುತ್ತಿದ್ದೀರಿ ಎಂಬುದನ್ನು ಮರೆಯಬೇಡಿ.

ಕರ್ಕಾಟಕ: ಹೆಚ್ಚು ಮದ್ಯಪಾನ ಮಾಡುವುದು ಮತ್ತು ವೇಗವಾಗಿ ವಾಹನ ಚಲಾಯಿಸುವುದು ನಿಮಗೆ ಮಾರಕವಾಗಬಹುದು. ಈ ನಿರ್ಲಕ್ಷ್ಯದಿಂದಾಗಿ, ಅನೇಕರು ಹಣದ ನಷ್ಟ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಯಿದೆ. ಈ ವಾರ ಪೂರ್ತಿ ನಿಮ್ಮ ಆರ್ಥಿಕ ಜೀವನ ಉತ್ತಮವಾಗಲಿದೆ. ವಿಶೇಷವಾಗಿ ಈ ಸಮಯದಲ್ಲಿ ಗ್ರಹಗಳ ಪ್ರಭಾವದಿಂದ, ನೀವು ಹಣ ಸಂಪಾದಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ನಿಮ್ಮ ಗೌರವವೂ ಹೆಚ್ಚಾಗುತ್ತದೆ. ‘ಸಮಯವು ಹಣ’ ಎಂಬ ಮಾತನ್ನು ನೀವು ಒಪ್ಪಿದರೆ, ನಿಮ್ಮ ಸಾಮರ್ಥ್ಯಗಳೊಂದಿಗೆ ಉನ್ನತ ಸ್ಥಾನವನ್ನು ತಲುಪಲು ನೀವು ಯಾವುದೇ ವಿಳಂಬವಿಲ್ಲದೆ ಈ ವಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಬೇರೊಬ್ಬರು ನಿಮ್ಮನ್ನು ಹಿಂದಿಕ್ಕುವಾಗ ನೀವು ಆಲೋಚನೆ ಮಾಡಬೇಕಾಗುತ್ತದೆ. ನೀವು ಶಿಕ್ಷಣದ ಸಂದರ್ಭದಲ್ಲಿ ವಿದೇಶಕ್ಕೆ ಹೋಗಬಹುದು. ಅಲ್ಲದೆ, ಈ ಅವಧಿಯು ಕಷ್ಟಪಟ್ಟು ಕೆಲಸ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ, ನಿಮ್ಮ ಅಧ್ಯಯನದತ್ತ ಗಮನಹರಿಸಲು, ನಿಮ್ಮ ಅತ್ಯುತ್ತಮವಾದದನ್ನು ನೀಡಲು ಮತ್ತು ಹೆತ್ತವರು ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ ಮಾಡಲು ಸಾಧ್ಯವಿದೆ.

ಸಿಂಹ: ನಿಮ್ಮನ್ನು ಆರೋಗ್ಯವಾಗಿಡಲು ನೀವು ಬೆಳಿಗ್ಗೆ ವ್ಯಾಯಾಮ ಮಾಡಬೇಕಾಗುತ್ತದೆ ಮತ್ತು ಹೆಚ್ಚಿನ ಒಳ್ಳೆಯ ವಿಚಾರಗಳನ್ನು ಬೆಳೆಸಲು ಇದು ಸರಿಯಾದ ಸಮಯ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ದಿನಚರಿಗೆ ಅಂಟಿಕೊಳ್ಳುವಂತೆ ನಿಮಗೆ ಸೂಚಿಸಲಾಗುತ್ತದೆ ಮತ್ತು ಅದನ್ನು ನಿಯಮಿತವಾಗಿ ಅನುಸರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ನೀವು ಸಂಗ್ರಹಿಸಿದ ಹಣಕ್ಕಿಂತ ಹೆಚ್ಚಿನದನ್ನು ನೀವು ಖರ್ಚು ಮಾಡಬೇಕಾಗುತ್ತದೆ, ಈ ಕಾರಣದಿಂದಾಗಿ ಎಲ್ಲದರ ನಡುವೆ ಸ್ವಲ್ಪ ಆರ್ಥಿಕ ಅಪಾಯವಿರಬಹುದು. ಹೆಚ್ಚಿನ ಕೆಲಸಡಾ ಒತ್ತಡದಿಂದ ನೀವು ಕುಟುಂಬದ ಸಂತೋಷವನ್ನು ಕಳೆದುಕೊಳ್ಳಬಹುದು. ಹೇಗಾದರೂ, ನಿಮ್ಮ ಮಾನಸಿಕ ಒತ್ತಡವನ್ನು ತೊಡೆದುಹಾಕಲು ನೀವು ಬಯಸಿದರೆ, ನಂತರ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆಯಬೇಕಾಗುತ್ತದೆ. ನಿಮ್ಮ ಮೇಲೆ ಒಂದಕ್ಕಿಂತ ಹೆಚ್ಚು ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು, ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ, ಹಾಗೆಯೇ ಸಮಯಕ್ಕೆ ಯಾವುದೇ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ವಿಫಲರಾಗುತ್ತೀರಿ. ಈ ವಾರ ಅನೇಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಉತ್ತಮವಾಗಿ ಪ್ರದರ್ಶಿಸಬೇಕಾಗುತ್ತದೆ. ಆದ್ದರಿಂದ ಎಲ್ಲದರಲ್ಲೂ ಭಾಗವಹಿಸುವ ಮೂಲಕ ನಿಮ್ಮ ಉತ್ತಮ ಕಾರ್ಯಕ್ಷಮತೆಯನ್ನು ನೀಡಿ.

ಕನ್ಯಾ: ಅನೇಕ ವಿತ್ತೀಯ ಸಮಸ್ಯೆಗಳು ನಿಮ್ಮ ಆರೋಗ್ಯದಲ್ಲೂ ಸಮಸ್ಯೆಗಳನ್ನು ಉಂಟುಮಾಡಬಹುದು. ಏಕೆಂದರೆ ಈ ಸಮಯದಲ್ಲಿ, ಒತ್ತಡದ ಪರಿಸ್ಥಿತಿಗಳು ನಿಮ್ಮ ಮನಸ್ಸನ್ನು ತೆಗೆದುಕೊಳ್ಳುವುದರಿಂದ, ನಿಮಗೆ ಆರೋಗ್ಯಕರ ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ, ಇದು ಆರೋಗ್ಯದ ಕುಸಿತಕ್ಕೆ ಕಾರಣವಾಗುತ್ತದೆ. ಈ ವಾರ ನಿಮ್ಮ ಹೆಚ್ಚಿನ ಹಣವನ್ನು ನೀವು ಉಳಿಸಬೇಕಾಗುತ್ತದೆ, ಏಕೆಂದರೆ ಈ ವಾರ ಸಾಲಗಾರನು ನಿಮ್ಮ ಮನೆ ಬಾಗಿಲಿಗೆ ಬಂದು ಸ್ವಲ್ಪ ಹಣವನ್ನು ಕೇಳುವ ಸಾಧ್ಯತೆಗಳಿವೆ. ಮೊತ್ತವನ್ನು ಪಾವತಿಸದಿರುವುದು ನಿಮ್ಮ ಖ್ಯಾತಿಗೆ ಧಕ್ಕೆ ತರುತ್ತದೆ. ಈ ವಾರ ಕುಟುಂಬ ಸದಸ್ಯರಿಗೆ ಮೋಜಿನ ಸಮಯವಾಗಲಿದ್ದು, ಮೋಜಿನ ಸಹಾಯದಿಂದ ನೀವು ಮನೆಯ ವಾತಾವರಣವನ್ನು ಆಹ್ಲಾದಕರವಾಗಿಸುತ್ತೀರಿ. ಇದರೊಂದಿಗೆ, ವಾರದ ಉತ್ತರಾರ್ಧದಲ್ಲಿ, ಇದ್ದಕ್ಕಿದ್ದಂತೆ ದೂರದ ಸಂಬಂಧಿಯೊಬ್ಬರಿಂದ ಯಾವುದೇ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷವನ್ನು ನೀಡುತ್ತದೆ. ಈ ವಾರ ನಿಮಗೆ ಬರುವ ಅನೇಕ ಹೊಸ ಪ್ರಸ್ತಾಪಗಳು ನಿಮ್ಮ ಗಮನವನ್ನು ಸೆಳೆಯುತ್ತವೆ. ಆದರೆ ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಸಂವೇದನಾಶೀಲ ಕ್ರಿಯೆಯಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ವಾರ, ಅವರ ವೈಯಕ್ತಿಕ ಸಮಸ್ಯೆಗಳಿಂದಾಗಿ, ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ, ಇದು ಅವರ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಂದು ಸನ್ನಿವೇಶದಲ್ಲೂ ನಿಮ್ಮನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ಯೋಗ ಮತ್ತು ಧ್ಯಾನವನ್ನು ಮಾಡಿ.

ತುಲಾ : ನಿಮ್ಮನ್ನು ಸದೃಢವಾಗಿಡಲು, ಈ ವಾರದಲ್ಲಿ ನೀವು ಸಾಕಷ್ಟು ಕಷ್ಟಪಡಬೇಕಾಗಿಲ್ಲ. ಏಕೆಂದರೆ ಈ ಬಾರಿ ನೀವು ಅದೃಷ್ಟವಂತರು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಲ್ಪ ಪ್ರಯತ್ನಗಳನ್ನು ಮಾಡಿದರೂ ಸಹ, ನಿಮ್ಮನ್ನು ಆರೋಗ್ಯವಾಗಿಡಲು ನಿಮಗೆ ಸಾಧ್ಯವಾಗುತ್ತದೆ. ಈ ವಾರ ವಿದೇಶಿ ಸಂಬಂಧಿತ ವ್ಯವಹಾರವನ್ನು ನಿರ್ವಹಿಸುತ್ತಿದ್ದರೆ, ಅನೇಕ ಹೊಸ ಮೂಲಗಳೊಂದಿಗೆ ಸಂಪರ್ಕವನ್ನು ರೂಪಿಸುವಲ್ಲಿ ಮತ್ತು ಅವುಗಳಿಂದ ಆರ್ಥಿಕ ಲಾಭಗಳನ್ನು ಗಳಿಸುವಲ್ಲಿ ಅಪಾರ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇದಕ್ಕಾಗಿ, ನೀವು ಸರಿಯಾದ ತಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ವಾರ, ನೀವು ಎಲ್ಲವನ್ನೂ ಬಹಳ ಶಕ್ತಿಯಿಂದ ಮಾಡುತ್ತಿರುವಿರಿ, ಆದರೆ ಅನಗತ್ಯವಾದ ಕಾರಣದಿಂದಾಗಿ, ನಿಮ್ಮ ಮನಸ್ಥಿತಿ ಕ್ಷೀಣಿಸುವ ಸಾಧ್ಯತೆಯಿದೆ. ಪರಿಣಾಮವಾಗಿ, ಕುಟುಂಬ ಜೀವನದಲ್ಲಿ ನಿಮ್ಮ ಸ್ವಭಾವವು ಸ್ವಲ್ಪ ಅಸಭ್ಯವಾಗಿ ಕಾಣುತ್ತದೆ. ಈ ವಾರ ಕೆಲಸದ ಕ್ಷೇತ್ರದಲ್ಲಿ ನಿಮ್ಮ ವೃತ್ತಿಪರ ಕೌಶಲ್ಯಗಳನ್ನು ಪರೀಕ್ಷಿಸಲಾಗುತ್ತದೆ. ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು, ನಿಮ್ಮ ಪ್ರಯತ್ನಗಳಲ್ಲಿ ನೀವು ಗಮನ ಹರಿಸಬೇಕಾಗುತ್ತದೆ. ಇದಕ್ಕಾಗಿ, ನಿಮ್ಮ ಹಿರಿಯರ ಅನುಭವವನ್ನು ಸಹ ನೀವು ಬಳಸಿಕೊಳ್ಳಬಹುದು. ಈ ವಾರ, ನಿಮ್ಮನ್ನು ಇಲ್ಲಿಯವರೆಗೆ ಅನರ್ಹರೆಂದು ಪರಿಗಣಿಸಿದ ಎಲ್ಲರ ಮುಂದೆ ನಿಮ್ಮ ಕಠಿಣ ಪರಿಶ್ರಮದಿಂದ ಯಶಸ್ಸು ಸಂಪಾದಿಸಲು ನಿಮಗೆ ಸಾಧ್ಯವಾಗುತ್ತದೆ. ಅದರ ನಂತರ ನಿಮ್ಮನ್ನು ಎಲ್ಲರೂ ಮೆಚ್ಚುವ ಮತ್ತು ಮಾತನಾಡಲು ಬಯಸುವ ವಿದ್ವತ್ಪೂರ್ಣ ವಿದ್ಯಾರ್ಥಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆದರೆ ಈ ಸಮಯದಲ್ಲಿ ನಿಮ್ಮೊಳಗಿನ ಅಹಂಕಾರವನ್ನು ನಿರ್ಮಿಸಲು ಬಿಡಬೇಡಿ, ಇಲ್ಲದಿದ್ದರೆ ಈ ಯಶಸ್ಸು ನಿಮ್ಮ ಇಮೇಜ್ ಅನ್ನು ಹಾಳು ಮಾಡುತ್ತದೆ.

ವೃಶ್ಚಿಕ: ಈ ವಾರ, ನೀವು ಮುಖ ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಹೇಗಾದರೂ, ತಣ್ಣೀರು ಸೇವಿಸಬಾರದು ಮತ್ತು ಆಹಾರವನ್ನು ಹೊಂದಿರುವಾಗ ಹಣ್ಣುಗಳನ್ನು ಸೇವಿಸಬಾರದು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಲು ನೀವು ಸಾಕಷ್ಟು ನೀರನ್ನು ಸೇವಿಸಬಹುದು. ಈ ವಾರ ನೀವು ಆರ್ಥಿಕ ಜೀವನದಲ್ಲಿ ಅದೃಷ್ಟವನ್ನು ಪಡೆಯುತ್ತೀರಿ, ಆದರೆ ಈ ಸಮಯದಲ್ಲಿ ನೀವು ಯಾವುದೇ ಹೂಡಿಕೆ ಮಾಡಲು ಬಯಸಿದರೆ, ಮೊದಲು ವಾಸ್ತವಗಳನ್ನು ನಿರ್ಣಯಿಸಿ ಮತ್ತು ನಂತರ ಮಾತ್ರ ಹೂಡಿಕೆ ಮಾಡಿ. ಇಲ್ಲದಿದ್ದರೆ ನಿಮ್ಮ ಹಣವು ನಷ್ಟವಾಗಬಹುದು. ಬಿಡುವಿಲ್ಲದ ದಿನಗಳಲ್ಲಿ ಕೆಲಸದ ವೇಳಾಪಟ್ಟಿಯೊಂದಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ ಎಂಬುದನ್ನು ಮರೆಯಬೇಡಿ. ಈ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದು ಅವರು ಭಾವಿಸಲಿ. ಇದಕ್ಕಾಗಿ, ಅವರೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ ಮತ್ತು ಅವರು ಯಾವುದರ ಬಗ್ಗೆಯೂ ದೂರು ನೀಡಲು ಬಿಡಬೇಡಿ. ಈ ವಾರದಲ್ಲಿ, ಉದ್ಯಮಿಗಳು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಿಂತ ಉತ್ತಮವಾದ ಕೆಲಸವನ್ನು ನೀವು ಮಾಡಬೇಕಾಗಿತ್ತು ಎಂಬ ಭಾವನೆಯನ್ನು ಇದು ನಿಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ.

ಧನು: ನಿಮ್ಮ ಆರೋಗ್ಯವನ್ನು ಸುಧಾರಿಸಲು, ಈ ವಾರ ನಿಮ್ಮ ಆಹಾರವನ್ನು ನೀವು ಸುಧಾರಿಸಬೇಕಾಗುತ್ತದೆ. ಇಲ್ಲದಿದ್ದರೆ ಹಲವಾರು ಗಂಭೀರ ಕಾಯಿಲೆಗಳು ನಿಮಗೆ ತೊಂದರೆ ಉಂಟುಮಾಡಬಹುದು. ನಿಮಗೆ ತಿಳಿದಿರುವ ಅಥವಾ ನಿಮಗೆ ಹತ್ತಿರವಿರುವ ಯಾರಾದರೂ ದೊಡ್ಡ ಹೂಡಿಕೆ ಯೋಜನೆ ಮತ್ತು ಇತರ ಕೆಲವು ಆಲೋಚನೆಗಳ ಸಹಾಯದಿಂದ ನಿಮ್ಮ ಗಮನವನ್ನು ಸೆಳೆಯುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ವ್ಯಕ್ತಿಯನ್ನು ಕೂಲಂಕಷವಾಗಿ ತನಿಖೆ ಮಾಡುವುದು ನಿಮಗೆ ಉತ್ತಮ. ನೀವು ಮಾನಸಿಕ ಉದ್ವೇಗಕ್ಕೆ ಬಲಿಯಾಗುವ ನಿರೀಕ್ಷೆಯಿದೆ. ತಮ್ಮ ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸಲು ತಮ್ಮನ್ನು ತಾವು ಸಮಯವನ್ನು ನೀಡಲು ಬಯಸುವವರು, ಈ ವಾರ ಕೆಲಸದ ಸ್ಥಳದಲ್ಲಿ ಸ್ವಲ್ಪ ಉಚಿತ ಸಮಯವನ್ನು ಪಡೆಯಬಹುದು. ಈ ಸಮಯದಲ್ಲಿ, ತಂತ್ರಜ್ಞಾನ ಅಥವಾ ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಸಹಾಯದಿಂದ ನಿಮ್ಮ ಯೋಜನೆಗಳನ್ನು ನೀವು ಸುಧಾರಿಸಬಹುದು. ಈ ವಾರ, ವಿದ್ಯಾರ್ಥಿಗಳು ಪಾರ್ಟಿ ಮಾಡುವುದನ್ನು ತೀವ್ರವಾಗಿ ಕಾಣಬಹುದು, ಅದು ಅವರ ಶಿಕ್ಷಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದಕ್ಕೂ ಹೆಚ್ಚಿನದನ್ನು ಯಾವಾಗಲೂ ತಪ್ಪಿಸಬೇಕು ಎಂದು ನೀವು ಅರ್ಥಮಾಡಿಕೊಳ್ಳಬೇಕು.

ಮಕರ: ಈ ವಾರ ಉತ್ತಮ ಜೀವನವನ್ನು ನಡೆಸಲು, ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಏಕೆಂದರೆ ಇದನ್ನು ಮಾಡುವುದರಿಂದ, ನೀವು ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳುವುದರ ಜೊತೆಗೆ ನಿಮ್ಮ ಎಲ್ಲಾ ಮಾನಸಿಕ ಒತ್ತಡವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಮಾಡುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ಈ ವಾರ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಈ ಹೂಡಿಕೆ ನಿಮಗೆ ಪ್ರಯೋಜನಕಾರಿಯಾಗಲಿದೆ, ಹಾಗೆಯೇ ನಿಮ್ಮ ಮನೆಯ ಯಾವುದೇ ಭಾಗದಿಂದ ಬಾಡಿಗೆ ಇತ್ಯಾದಿಗಳ ಮೂಲಕ ಹೆಚ್ಚುವರಿ ಹಣವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ. ಈ ವಾರ, ನಿಮ್ಮ ಕಠಿಣ ಪರಿಶ್ರಮವು ನಿಮ್ಮ ವೃತ್ತಿಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುವ ಮೂಲಕ ನಿಮಗೆ ಅಮೂಲ್ಯವಾದುದು. ಈ ನೆಪದಲ್ಲಿ, ಈ ಸಮಯದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವ ಮೂಲಕ ಮತ್ತು ನಿಮ್ಮ ಸೌಕರ್ಯಗಳನ್ನು ತ್ಯಾಗ ಮಾಡುವ ಮೂಲಕ ನೀವು ಕೆಲಸದ ಸ್ಥಳದಲ್ಲಿ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ವಾರ, ಕೆಲವು ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಾಧ್ಯತೆಗಳಿವೆ. ಇದು ಅವರ ಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಕುಂಭ: ಈ ವಾರ, ಕುಟುಂಬದ ಸದಸ್ಯರ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ನೀವು ಸ್ವೀಕರಿಸುತ್ತೀರಿ. ಈ ಕಾರಣದಿಂದಾಗಿ, ನೀವು ಮಾನಸಿಕ ಒತ್ತಡಕ್ಕೆ ಬಲಿಯಾಗಬಹುದು. ದೀರ್ಘಕಾಲದವರೆಗೆ ನಿರುದ್ಯೋಗಿಗಳಾಗಿರುವವರು ತಮ್ಮ ಆಯ್ಕೆಯ ಕೆಲಸವನ್ನು ಪಡೆಯುವ ಸಾಧ್ಯತೆಯಿದೆ. ಇದು ಅವರಿಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರು ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಈ ವಾರ, ಕುಟುಂಬ ಸದಸ್ಯರು ನಿಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ ನೀವು ಅವರ ಜೀವನದ ಹಲವು ಪ್ರಮುಖ ನಿರ್ಧಾರಗಳಲ್ಲಿ ಭಾಗಿಯಾಗುತ್ತೀರಿ, ಏಕೆಂದರೆ ಈ ಸಮಯದಲ್ಲಿ, ನೀವು ಕೆಲವು ಹೊಸ ಉತ್ಪನ್ನಗಳನ್ನು ಪರಿಚಯಿಸಬಹುದು. ಇದು ಈ ಸಮಯದಲ್ಲಿ ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಈ ರಾಶಿಚಕ್ರ ಚಿಹ್ನೆಯ ವಿದ್ಯಾರ್ಥಿಗಳು ಈ ವಾರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಬಯಸಿದರೆ, ನಂತರ ಅವರು ತಮ್ಮ ಅತ್ಯುತ್ತಮವಾದದ್ದನ್ನು ನೀಡುವುದು ಬಹಳ ಮುಖ್ಯ. ಮತ್ತೊಂದೆಡೆ, ನೀವು ಉನ್ನತ ಶಿಕ್ಷಣದ ನಂತರ ಉತ್ತಮ ಉದ್ಯೋಗವನ್ನು ಬಯಸುತ್ತಿದ್ದರೆ, ಉತ್ತಮ ಆಯ್ಕೆಗಳನ್ನು ಆರಿಸುವುದರಲ್ಲಿ ಅಪಾರ ಯಶಸ್ಸನ್ನು ಪಡೆಯುವ ಸಂಯೋಗಗಳು ಕಂಡುಬರುತ್ತವೆ.

ಮೀನ: ಈ ವಾರ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಮತ್ತು ಸಾಧ್ಯವಾದಷ್ಟು ಮದ್ಯಪಾನ ಮಾಡುವುದನ್ನು ತಪ್ಪಿಸಿ. ಯಾಕೆಂದರೆ ಕೆಲವರು ನಿಕಟ ಪರಿಚಯಸ್ಥರಿಗಾಗಿ ಅಥವಾ ಸ್ನೇಹಿತರಿಗೆ ನಿಮ್ಮನ್ನು ಇದ್ದಕ್ಕಿದ್ದಂತೆ ಪಾರ್ಟಿಗೆ ಕರೆದೊಯ್ಯಲು ಸಿದ್ಧರಾಗಬಹುದು. ನಿಮ್ಮ ಆರೋಗ್ಯವನ್ನು ನೀವು ಹಾಳುಮಾಡಬಹುದು. ಈ ವಾರ ನಿಮ್ಮ ವಸ್ತುಗಳ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಸಂತೋಷದ ಮತ್ತು ಅದ್ಭುತ ವಾರ, ನಿಮ್ಮ ಮನೆ ಅತಿಥಿಗಳಿಂದ ತುಂಬಿರುತ್ತದೆ. ಇದರೊಂದಿಗೆ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆಗಳು ಸಹ ಕುಟುಂಬ ಸದಸ್ಯರನ್ನು ಸಂತೋಷವಾಗಿಡಲು ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಈ ವಾರ ಎಲ್ಲವೂ ನಿಮ್ಮ ವಿರುದ್ಧ ಹೋಗುತ್ತದೆ, ಈ ಕಾರಣದಿಂದಾಗಿ ನಿಮ್ಮ ಮೇಲಧಿಕಾರಿಗಳು ಮತ್ತು ಮುಖ್ಯಸ್ಥರು ಸಹ ನಿಮ್ಮೊಂದಿಗೆ ಅಸಮಾಧಾನಗೊಳ್ಳಬಹುದು. ಇದು ನಿಮ್ಮ ಸ್ಥೈರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ನಿಮ್ಮ ವೃತ್ತಿಜೀವನದಲ್ಲಿ ನೀವು ಭ್ರಮನಿರಸನ ಮತ್ತು ಗೊಂದಲಕ್ಕೊಳಗಾಗಬಹುದು. ನಿಮ್ಮ ರಾಶಿಚಕ್ರ ಚಿಹ್ನೆಯ ಅನೇಕ ವಿದ್ಯಾರ್ಥಿಗಳು ಈ ವಾರ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಏಕೆಂದರೆ ಅನೇಕ ಬಾರಿ ನಾವು ವೈಫಲ್ಯದಿಂದ ಜೀವನದಲ್ಲಿ ಬಹಳಷ್ಟು ಕಲಿಯುತ್ತೇವೆ.