Friday, March 13, 2026
Home Blog Page 328

ಯಕ್ಷಗಾನ ಕೃತಿ ಸಂಪುಟ – ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಐದು ಪ್ರಸಂಗಗಳ ಸಂಪುಟ

ಕರ್ನಾಟಕ ಯಕ್ಷಗಾನ ಅಕಾಡೆಮಿ  ಇತ್ತೀಚೆಗೆ  ಪ್ರಕಟಿಸಿದ ಕೃತಿ ಕೀರ್ತಿಶೇಷ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಐದು ಪ್ರಸಂಗಗಳ ಸಂಪುಟ ಇದು. ಯಕ್ಷಗಾನದ ಮಟ್ಟುಗಳ ಅದ್ಭತ ಸಿದ್ಧಿಯನ್ನು ಎಳವೆಯಲ್ಲೇ ಸಾಧಿಸಿದ ಮಹಾಕವಿಯೊಬ್ಬರ ಕೃತಿಸಂಪುಟವನ್ನು ಪ್ರಕಟಿಸುವುದರ ಮೂಲಕ ಅಕಾಡೆಮಿ ಸ್ತುತ್ಯಕಾರ್ಯವನ್ನೇ ಮಾಡಿದೆ.

ಉಪಾಧ್ಯಾಯರ ಗುರುದ್ರೋಣ, ಬಾಘಟೋತ್ಕಚ ಪ್ರಕಟವಾಗಿ ದಶಕಗಳೇ ಕಳೆದು ಹೋಗಿ ಈಗ ಉಪಲಬ್ಧವೇ ಇರಲಿಲ್ಲ. ಅವರಿನ್ನೂ ಹದಿನೆಂಟನೆಯ ವರ್ಷದವರಿದ್ದಾಗ ಬರೆದ ಧರಣಿಮೋಹಿನಿ ಕಲ್ಯಾಣ ಛಂದೋವಿದ ಡಾ. ನಾರಾಯಣ ಶೆಟ್ಟರಿಗೆ ಅನೇಕ ಮಟ್ಟುಗಳನ್ನು ಸೂಚಿಸಲು ಸಹಕಾರಿಯಾಗದ್ದವು. ಈ ಸಂಪುಟದಲ್ಲಿ ಧರಣಿ ಮೋಹಿನಿ ಕಲ್ಯಾಣ,(1928) ಬಾಲಘಟೋತ್ಕಚ,(1942) ಗುರುದ್ರೋಣ, (ಇದು ಅವರು ರಚಿಸುವಾಗ ಅಪೂರ್ಣವಾಗಿದ್ದು 1980 ರ ಸಮಯಕ್ಕೆ ಅವರ ಪುತ್ರರುಗಳಿಂದ ಪೂರ್ಣವಾಗಿದೆ) ಅಶೋಕಸುಂದರೀ ಕಲ್ಯಾಣ,(1952)ಮೋಹಿನೀ ಕಲಾವಿಲಾಸ (1930) ಹೀಗೆ ದಿ.ಉಪಾಧ್ಯಾಯರ ಎಲ್ಲಾ ಐದು ಪ್ರಸಂಗಗಳು  ಇವೆ.

ಕೊನೆಯ  ಪ್ರಸಂಗ ತಂಬಾಕು, ನಸ್ಯ, ಮದ್ಯ ಮುಂತಾದ ಅಮಲು ಪದಾರ್ಥಗಳ ಕುರಿತ ಕಾಲ್ಪನಿಕ ಪ್ರಸಂಗ. ಎಲ್ಲವೂ ಪೌರಾಣಿಕ ಪಾತ್ರಗಳೇ ಇರುವ ಈ ಪ್ರಸಂಗದಲ್ಲಿ 442 ಪದ್ಯಗಳಿವೆ!.  ಪ್ರಖ್ಯಾತ ರಂಗ ಕರ್ಮಿ, ವಿದ್ವಾಂಸ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಈ ಕೃತಿಯನ್ನು ಸಂಪಾದಿಸಿ ಯಕ್ಷಲೋಕದ ಮುಂದಿಟ್ಟಿದ್ದಾರೆ.

ಯಕ್ಷಗಾನಕ್ಕೊಂದು ಅಪೂರ್ವ ಕೃತಿ ಸಂಪುಟವನ್ನು ನೀಡಿದ ಅಕಾಡೆಮಿಯ ಅಧ್ಯಕ್ಷರಾದ ಪ್ರೊ|ಎಂ ಎ ಹೆಗಡೆಯವರು ಕೃತಿಯನ್ನು ಕುರಿತು ಬರೆದಿದ್ದಾರೆ. ನಾನು ಕೃತಿಗಳ ಕಿರುಪರಿಚಯದ ಮುನ್ನುಡಿಯ ಸೇವೆ ಮಾಡಿದ್ದೇನೆ. ಕನ್ನಡಕ್ಕೊಂದು ಹೊಸ ಶಬ್ದ “ಇನ್ನುಡಿ” ಯನ್ನು ಸಂಪಾದಕ ಕೆ ಎಸ್ ಉಪಾಧ್ಯಾಯ ನೀಡಿದ್ದಾರೆ. ಪ್ರಖ್ಯಾತ ಅರ್ಥವಾದಿ ಕೀರ್ತಿಶೇಷ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು ಈ ಕವಿಯ ಸುಪುತ್ರರು. ಯಕ್ಷಗಾನಾಸಕ್ತರೆಲ್ಲ ತಮ್ಮ ಸಂಗ್ರಹದಲ್ಲಿಟ್ಟುಕೊಳ್ಳಬೇಕಾದ ಕೃತಿ.

ಪ್ರಕಾಶಕರು: ಯಕ್ಷಗಾನ ಅಕಾಡೆಮಿ, ಬೆಂಗಳೂರು. ಬೆಲೆ: 130/  ಪುಟಗಳು 270.

ಶ್ರೀಧರ್ ಡಿ. ಎಸ್.

ಯಕ್ಷಗಾನ ಪ್ರಪಂಚದ ಸವ್ಯಸಾಚಿಯಾಗಿ ಮೆರೆದ ಗಡಿನಾಡ ಕನ್ನಡಿಗ ಮಧೂರು ಗಣಪತಿ ರಾವ್

ಮಧೂರು ಗಣಪತಿ ರಾವ್ ಅವರ ಹೆಸರನ್ನು ಕೇಳದವರು ಅಪರೂಪ. ಹಳೆಯ ಯಕ್ಷಗಾನ ಪ್ರೇಕ್ಷಕರೆಲ್ಲರಿಗೂ ಚಿರಪರಿಚಿತರಾಗಿದ್ದ ಹೆಸರು. ಇತ್ತೀಚೆಗಿನ ಯಕ್ಷಗಾನ ಪ್ರೇಕ್ಷಕರಿಗೆ ಅವರ ಹಾಗೂ ಅವರು ನಿರ್ವಹಿಸಿದ ಪಾತ್ರಗಳ ಪರಿಚಯ ಅಷ್ಟಾಗಿ ಇರದಿದ್ದರೂ ಹಳೆಯ ತಲೆಮಾರಿನ ಹಿರಿಯ ಪ್ರೇಕ್ಷಕರು ಅವರ ಬಗ್ಗೆ ಆಡಿಕೊಳ್ಳುವುದನ್ನು ಕೇಳಿ ಗೊತ್ತಿರಬಹುದು. 

ಯಕ್ಷಗಾನದ ವಿವಿಧ ಅಂಗಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಕಲಾವಿದ ಮಧೂರು ಗಣಪತಿ ರಾವ್. ಸುಬ್ಬರಾವ್ ಮತ್ತು ರುಕ್ಮಿಣಿ ದಂಪತಿಗಳ ಪುತ್ರನಾಗಿ 1924ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದ ಪರಿಸರದಲ್ಲಿಯೇ ಬೆಳೆದವರಾದ ಕಾರಣ ಸಹಜವಾಗಿಯೇ ಯಕ್ಷಗಾನ ಕಲೆಯತ್ತ ಸೆಳೆಯಲ್ಪಟ್ಟಿದ್ದರು. 

ಇವರ ಸಹೋದರರಾಗಿದ್ದ ಮಧೂರು ನಾರಾಯಣ ಹಾಸ್ಯಗಾರರು ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದರು. ಗಣಪತಿ ರಾವ್ ಅವರಿಗೆ ಸಹೋದರನ ನಿರಂತರ ಪ್ರೋತ್ಸಾಹವಿತ್ತು. ಯಕ್ಷಗಾನ ಕಲಿತ ಮೊದಲಿಗೆ ಧರ್ಮಸ್ಥಳ ಮೇಳದಲ್ಲಿ ವೇಷಧಾರಿಯಾಗಿ ಸೇರ್ಪಡೆಗೊಂಡರು. ಆಮೇಲೆ ಹಲವಾರು ಮೇಳಗಳಲ್ಲಿ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು.

ಕೂಡ್ಲು ಮೇಳ, ಕುಂಡಾವು ಮೇಳ, ಕುಂಡಾಪು, ಕುದ್ರೋಳಿ, ಮೂಲ್ಕಿ. ಸುರತ್ಕಲ್ ಮೇಳ, ಮಲ್ಲ ಮೇಳ, ಮಧೂರು ಮೇಳ, ಉಪ್ಪಳ ಭಗವತೀ ಮೇಳವೇ ಮೊದಲಾದ ಮೇಳಗಳಲ್ಲಿ ಪ್ರಬುದ್ಧ ಜನಪ್ರಿಯ ವೇಷಧಾರಿಯಾಗಿ ಜನಮನ್ನಣೆ ಗಳಿಸಿದ್ದರು.  ಮಧೂರು ಗಣಪತಿ ರಾವ್ ಅವರದು ಯಕ್ಷಗಾನ ಕ್ಷೇತ್ರದಲ್ಲಿ ಐದು ದಶಕಗಳಿಗೂ ಮಿಕ್ಕಿದ ಕಲಾಸೇವೆ. ಅಷ್ಟು ದೀರ್ಘಾವದಿಯಲ್ಲಿಯೂ ಕಲಾವಿದನಾಗಿ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದ್ದರು.

ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳೆರಡನ್ನೂ ಬಲ್ಲ ಇವರು ಯಕ್ಷಗಾನಕ್ಕೊಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದವರು. ಮುಮ್ಮೇಳ ವೇಷಧಾರಿಯಾಗಿ ಪ್ರಸಿದ್ಧಿಯನ್ನು ಪಡೆದುದು ಮಾತ್ರವಲ್ಲದೆ ತಾಳಮದ್ದಳೆಯ ಜನಮೆಚ್ಚಿದ ಅರ್ಥಧಾರಿಯೂ ಆಗಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರೊಂದಿಗೆ ಹಿಮ್ಮೇಳಕ್ಕೆ ಸಹಕಲಾವಿದರಾಗಿದ್ದುಕೊಂಡು ಆಮೇಲೆ ವೇಷಧಾರಿಯಾಗಿ ಗುರುತಿಸಲ್ಪಟ್ಟು ಕರ್ಣ, ಅರ್ಜುನ, ಸುದರ್ಶನ, ಬಬ್ರುವಾಹನ, ಧರ್ಮಾಂಗದ, ಚಂದ್ರಸೇನ, ಇಂದ್ರಜಿತು, ರಕ್ತಬೀಜ, ತಾಮ್ರಧ್ವಜ, ದೇವೇಂದ್ರ, ಋತುಪರ್ಣ ಮೊದಲಾದ ವೇಷಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದವರು. 

ಗಣಪತಿ ರಾಯರು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿದ್ದುದು ಮಾತ್ರವಲ್ಲದೆ ಆ ಸಂಸ್ಥೆಯ ಉನ್ನತಿಗಾಗಿ ದುಡಿದ ಮಾರ್ಗದರ್ಶಕರೂ ಆಗಿದ್ದರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿಯ ಗುರುಪೂಜಾ ಗೌರವವನ್ನು ಪಡೆದಿರುವ ಮಧೂರು ಗಣಪತಿ ರಾಯರನ್ನು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘ, ಸುರತ್ಕಲ್ ಮೇಳ, ಎಡನೀರು ತರುಣ  ಕಲಾವೃಂದ, ಕೊಲ್ಯದ ಶಿವಾಜಿ ಸಂಘ ಮತ್ತು ಎಡನೀರು ಮಠ, ಮಧೂರಿನ ಮಿತ್ರ ಕಲಾವೃಂದ, ಉಳಿಯತ್ತಡ್ಕದ ಆದರ್ಶ ಕಲಾ ಸಂಘ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕೂಡ್ಲು ಶ್ರೀ ಗೋಪಾಲಕೃಷ್ಣ ಶಾನುಭೋಗ್ ಪ್ರತಿಷ್ಠಾನ ಮೊದಲಾದೆಡೆಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

ಇನ್ನೂ ಹಲವಾರು ಪ್ರಶಸ್ತಿ ಸನ್ಮಾನಗಳು ಅವರಿಗೆ ಬಂದಿವೆ. ಯಕ್ಷಗಾನದ ಸವ್ಯಸಾಚಿ ಎಂದು ಗುರುತಿಸಿಕೊಂಡಿದ್ದ ಮಧೂರು ಗಣಪತಿ ರಾವ್ ಅವರು ಆಟ, ಕೂಟಗಳೆರಡರಲ್ಲಿಯೂ ಸಮಾನ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಮಾತ್ರವಲ್ಲ, ಅವೆರಡರಲ್ಲಿಯೂ ಪ್ರಸಿದ್ಧಿಯನ್ನೂ ಪಡೆದವರು. ಪಾತ್ರದ ಔಚಿತ್ಯ, ಸ್ವಭಾವ ಮತ್ತು ಘನತೆಗಳನ್ನು ಅರಿತು ಪಾತ್ರ ನಿರ್ವಹಿಸಿ ಅಭಿನಯಿಸುವವರು.

ಅವರ ಹುಟ್ಟೂರು ಅಡೂರು ಆಗಿದ್ದರೂ ಕ್ರಮೇಣ ಮಧೂರಿಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ ನಂತರ ಮಧೂರು ಗಣಪತಿ ರಾವ್ ಎಂದೇ ಕರೆಸಿಕೊಂಡರು.  ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಮೂಲಕ ಹಲವಾರು ಕಲಾವಿದರನ್ನು ತರಬೇತಿಗೊಳಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಮಧೂರಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ  ದೇವಸ್ಥಾನದಲ್ಲಿ ಪ್ರತಿವರ್ಷವೂ ಇವರ ನೇತೃತ್ವದಲ್ಲಿ ಯಕ್ಷಗಾನ ಆಟ, ಕೂಟ ಮತ್ತು ಪ್ರದರ್ಶನಗಳು ನಡೆಯುತ್ತಿದ್ದುವು. 

ಯಕ್ಷಗಾನದಲ್ಲಿ ಮಹೋನ್ನತ ಸಾಧನೆಯನ್ನು ಮಾಡಿ, ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟ ಮಧೂರು ಗಣಪತಿ ರಾವ್ ತನ್ನ 89ನೆಯ ವಯಸ್ಸಿನಲ್ಲಿ ಈ ಲೋಕದ ಯಾತ್ರೆಯನ್ನು ಮುಗಿಸಿದ್ದರೂ ಯಕ್ಷಗಾನ ಪ್ರೇಮಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. 

ಭವಾನಿ ಬಾಬು ಶೆಟ್ಟಿಗಾರ್ ನಿಧನ

ಅಂಬಲಪಾಡಿ ಯಕ್ಷಗಾನ ಮಂಡಳಿಯ ಸ್ಥಾಪಕ ಸದಸ್ಯರಾದ ಕಪ್ಪೆಟ್ಟು ಬಾಬು ಶೆಟ್ಟಿಗಾರರ ಪತ್ನಿ ಭವಾನಿ ಬಿ. ಶೆಟ್ಟಿಗಾರ (86 ವರ್ಷ) 26-03-2021 ರಂದು ನಿಧನರಾದರು.

ನೇಕಾರ ವೃತ್ತಿಯ ಮನೆತನದ ಇವರು ಪ್ರಸಿದ್ಧ ಹವ್ಯಾಸಿ ಯಕ್ಷಗಾನ ಕಲಾವಿದ ಅಜಿತ್‍ಕುಮಾರ್ ಸಹಿತ ನಾಲ್ವರು ಪುತ್ರರು ಹಾಗು ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಅಂಬಲಪಾಡಿಯಕ್ಷಗಾನ ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‍ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

‘ಕುತ್ಯಾಳ ಸಂಪದ’  ಆಕರ ಗ್ರಂಥದ ಎರಡನೇ ಸಂಪುಟ ಬಿಡುಗಡೆ

‘ಕುತ್ಯಾಳ ಸಂಪದ ಎಂಬ  ಕೃತಿಯು ಯಕ್ಷಗಾನ ಸಂಗೀತ, ಚಿತ್ರಕಲೆಗಳಿಗೆ ಕೊಡುಗೆಗಳನ್ನು ನೀಡಿದ ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥವಾಗಿ 1997ರಲ್ಲಿ  ಪ್ರಕಟವಾಗಿತ್ತು. ಇದೀಗ ಅದರ ಎರಡನೆಯ ಭಾಗ ಪ್ರಕಟವಾಗಿದೆ.

ಇತ್ತೀಚಿಗೆ ‘ಕುತ್ಯಾಳ ಸಂಪದ’ ಆಕರ ಗ್ರಂಥದ ಎರಡನೇ ಸಂಪುಟವನ್ನು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.   ಧರ್ಮದರ್ಶಿ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಮೊದಲ ಪ್ರತಿಯನ್ನು ಸ್ವಾಮೀಜಿಯವರು ಹಿರಿಯ ಸಂಗೀತ ವಿದ್ವಾನ್ ಬಾಬು ರೈಯವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಾಧಾಕೃಷ್ಣ ಬೆಳ್ಳೂರು ಅವರು ಕೃತಿಯ ಸ್ಥೂಲ ಪರಿಚಯ ಮಾಡಿಕೊಟ್ಟರು. ಸಾಹಿತಿ ಮಲಾರ್ ಜಯರಾಮ ರೈ, ಕುತ್ಯಾಳ  ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಿ ಶ್ಯಾನುಭೋಗ್ ಮುಖ್ಯ ಅತಿಥಿಗಳಾಗಿದ್ದರು.

ಕುತ್ಯಾಳ ಸಂಪದ ಪ್ರಥಮ ಸಂಪುಟದ ಸಂಪಾದಕ ರಾಧಾಕೃಷ್ಣ ಉಳಿಯತ್ತಡ್ಕ ಪ್ರಸ್ತಾವನಾ ಭಾಷಣ ಮಾಡಿದರು. ಪ್ರಾರಂಭದಲ್ಲಿ ಸ್ವಾಮೀಜಿಯವರನ್ನು ಪ್ರಸನ್ನ ಶಾನುಭೋಗ್ ಮತ್ತು ಶ್ರೀಮತಿ ವೀಣಾ ಪ್ರಸನ್ನ ಹೂ ಹಾರ ಹಾಕಿ ಫಲ ಪುಷ್ಪ ನೀಡಿ ಸ್ವಾಗತಿಸಿದರು. ಹಿರಿಯ ಸಂಗೀತ ವಿದ್ವಾಂಸ, ಮೃದಂಗ ವಿದ್ವಾನ್ ಬಾಬು ರೈ ಅವರನ್ನು ಸ್ವಾಮೀಜಿಗಳು ಆಶೀರ್ವದಿಸಿ ಸನ್ಮಾನಿಸಿದರು.

ಕುತ್ಯಾಳ ಸಂಪದ ಕೃತಿಯ ಸಂಪಾದಕ ವಿಷ್ಣು ಶಾನಭೋಗ್ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ವೀಣಾ ಪ್ರಸನ್ನ ವಂದಿಸಿದರು. 

ಈ ಕೃತಿಯ ಮಾರಾಟದಿಂದ ಸಂಗ್ರಹವಾದ ಮೊತ್ತವನ್ನು ಮನೆಯಿಲ್ಲದ ಬಡವರೊಬ್ಬರಿಗೆ ಮನೆ ನಿರ್ಮಿಸಲು ನೀಡಲಾಗುವುದು ಎಂದು ಪುಸ್ತಕದ ಸಂಪಾದಕ ವಿಷ್ಣು ಶಾನಭೋಗ್ ಈ ಸಂದರ್ಭದಲ್ಲಿ ತಿಳಿಸಿದರು. ಈ ಪುಸ್ತಕದ ಮುಖಬೆಲೆ ರೂ. 500/- 

ಪುಸ್ತಕದ ಸಂಪಾದಕರ ವಿವರ: ವಿಷ್ಣು ಶಾನುಭೋಗ್, ಫೋನ್: 9446772355

ಮೇಳಗಳ ಇಂದಿನ ( 26.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 26.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಪಡುಕೋಣೆ ಕೋಟೆ ಶಾಲಾ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಹೊಸ್ಮಾರು ಮನೆ. ಬಂಟ್ವಾಳ ಬೈಪಾಸ್ ಬಳಿ 

ಕಟೀಲು ಎರಡನೇ ಮೇಳ ==   ಕಟೀಲು ಕ್ಷೇತ್ರ ‘ಸರಸ್ವತಿ ಸದನ’     

ಕಟೀಲು ಮೂರನೇ ಮೇಳ= ಕೊಡೆತ್ತೂರು ಮುಕ್ಕ ರೋಡ್, ಕಿನ್ನಿಗೋಳಿ 

ಕಟೀಲು ನಾಲ್ಕನೇ ಮೇಳ  ==  ಗರುಡ ಮಹಾಕಾಳಿ ದೇವಸ್ಥಾನ ಬಳಿ, ಅರಳ ಬಂಟ್ವಾಳ  

ಕಟೀಲು ಐದನೇ ಮೇಳ ==  ನೆಕ್ಕರೆ ಹೌಸ್, ಕಬಕ ಪುತ್ತೂರು 

ಕಟೀಲು ಆರನೇ ಮೇಳ == ಪಂಜಿಕಲ್ಲು ಮನೆ, ಬುಡೋಳಿ ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  == ನೆಲ್ಲಿಕಟ್ಟೆ ಅರಳಸುರುಳಿ  

ಮಂದಾರ್ತಿ ಎರಡನೇ ಮೇಳ   ==  ಶಿವಗಿರಿ ಐರೋಡಿ – ಕೂಡಾಟ  

ಮಂದಾರ್ತಿ ಮೂರನೇ ಮೇಳ  ==  ಬಿ.ಎಚ್ ಕೈಮರ, ಎನ್. ಆರ್.ಪುರ 

ಮಂದಾರ್ತಿ ನಾಲ್ಕನೇ ಮೇಳ   ==  ಕೋಲ್ ಗಾರ್ ದೇವಂಗಿ ರಸ್ತೆ ಮಕ್ಕಿಮನೆ   

ಮಂದಾರ್ತಿ    ಐದನೇ ಮೇಳ  ==  ಶಿವಗಿರಿ ಐರೋಡಿ – ಕೂಡಾಟ  

ಶ್ರೀ ಹನುಮಗಿರಿ ಮೇಳ  ==  ಮೂಡುಪೆರಾರ ಅಳಿಕೆ ಬಾಕಿಮಾರು ಗದ್ದೆ – ಶಿವಪ್ರಭಾ ಪರಿಣಯ, ಲವಕುಶ (ಸಂಜೆ 6.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಮಾಸೂರು (ಕುಮಟಾ) – ಚಂದ್ರಮುಖಿ ಸೂರ್ಯಸಖಿ 

ಶ್ರೀ ಸುಂಕದಕಟ್ಟೆ ಮೇಳ  ==   ಇರ್ವತ್ತೂರು ಅಗಲ್ದೋಡಿ ಮನೆ (ವಾಮದಪದವು) – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸೋಲಿನಮನೆ, ಉಪ್ಪಿನಕುದ್ರು ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ನುಗ್ಗಿಬೆಟ್ಟು, ಕಾಕ್ತೋಟ, ಉಲ್ಲೂರು- 11

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಶ್ರೀ ಕ್ಷೇತ್ರ ಪಾವಂಜೆ  – ಶಶಿಪ್ರಭಾ ಪರಿಣಯ, ಗದಾಯುದ್ಧ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸಾಲಿಕೇರಿ ದುರ್ಗಾಪರಮೇಶ್ವರಿ ದೇವಸ್ಥಾನ – ದಿವ್ಯ ಸನ್ನಿಧಿ (ಕಾಲಮಿತಿ ರಾತ್ರಿ 8.30ರಿಂದ)

ಕಮಲಶಿಲೆ ಮೇಳ ‘ಎ‘ = ವಡುವಿನ ದೈವಸ್ಥಾನ ಮಣೂರು   

ಕಮಲಶಿಲೆ ಮೇಳ ‘ಬಿ‘ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಬಪ್ಪನಾಡು ಮೇಳ == ಪಾಲಡ್ಕ, ಬಳ್ಳಮಂಜ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಂಗೆಬೆಟ್ಟು ಅಶ್ವತ್ಥಕಟ್ಟೆ ಬಳಿ (ಮುಚ್ಚೂರು) – ಶ್ರೀ ಭಗವತಿ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ ==  ಹಕ್ಲಾಡಿ ಭಜನಾ ಮಂದಿರದ ಹತ್ತಿರ 

ಶ್ರೀ ಸೌಕೂರು ಮೇಳ ==  ಅಂಪಾರು ಪೇಟೆ – ರಕ್ತಸಂಬಂಧ 

ಶ್ರೀ ಹಾಲಾಡಿ ಮೇಳ == ನಣಬೂರು ಹೈಸ್ಕೂಲ್ ಮೈದಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಸೂರಿಂಜೆ ಕೋಟೆ ನಾಯರ್ ಕೋಡಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹಳೆಯಂಗಡಿ – ಪೌರಾಣಿಕ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಚೌಕಳಮಕ್ಕಿ ಶಾಲಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಕೋಟ್ನಾಕಟ್ಟೆ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಬಳ್ಳೂರು ಬೊಬ್ಬರ್ಯ ದೇವಸ್ಥಾನ 

ಶ್ರೀ ಸಿಗಂದೂರು ಮೇಳ == ಬೈಂದೂರು ಶಿರೂರು, ಕರಾವಳಿ ದೊಂಬೆ ಕೇಳಾಮನೆ  

ಶ್ರೀ ನೀಲಾವರ ಮೇಳ  == ಶ್ರೀ ಮಲಸಾವರಿ ಶ್ರೀ ಮಹಾಕಾಳಿ ದೈವಸ್ಥಾನದ ಹತ್ತಿರ ಕೊರವಡಿ ಕುಂಭಾಶಿ 

ಶ್ರೀ ಮಂಗಳಾದೇವಿ ಮೇಳ == ವಾಮದಪದವು ರಾಮೊಟ್ಟು ಮೈದಾನ – ಬಾಲೆಮಾನಿ ಮಾಯಂದಾಲ್ (ತುಳು)

ಶ್ರೀ ಮೇಗರವಳ್ಳಿ ಮೇಳ == ಸಸಿಗೊಳ್ಳಿ – ಕುಲದೈವ ಪಂಜುರ್ಲಿ  

ಯಕ್ಷಗಾನ ಪ್ರಾತ್ಯಕ್ಷಿಕೆಯ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ


ಯಾವುದೇ ಕಲಾಪ್ರಕಾರವಾದರೂ ಅದು ತನ್ನ ಪ್ರಾದೇಶಿಕ ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತದೆ. ಶ್ರೀಮಂತ ಕಲೆಯಾಗಿರುವ ಯಕ್ಷಗಾನದ ಒಂದು ಭಾಗವಾಗಿರುವ ಹೂವಿನ ಕೋಲು ನವರಾತ್ರಿಯ ಸಂದರ್ಭದಲ್ಲಿ ಹಿಮ್ಮೇಳ ಕಲಾವಿದರೊಂದಿಗೆ ಬಾಲಕಲಾವಿದರು ಅರ್ಥಧಾರಿಗಳಾಗಿ ಪುರಾಣ ಪ್ರಸಂಗಗಳ ಸನ್ನಿವೇಷಗಳನ್ನು ರಸವತ್ತಾಗಿ ಪ್ರದರ್ಶಿಸುವ ಕಲೆ. ಬೇರೆ ಸಂದರ್ಭದಲ್ಲಿಯಾದರೆ ಪ್ರೇಕ್ಷಕರು ಕಲೆ ಇರುವಲ್ಲಿ ತೆರಬೇಕು.

ಆದರೆ ಹೂವಿನ ಕೋಲು, ಚಿಕ್ಕ ಮೇಳದಂತಹ ಕಲೆಗಳು ಪ್ರೇಕ್ಷಕರಿರುವ ಮನೆ ಮನೆಗಳಿಗೆ ತೆರಳಿ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದ್ದುದು ನಮ್ಮ ಕಲಾ ಸಂಪನ್ನತೆ ಯನ್ನು ತೋರಿಸಿಕೊಡುತ್ತದೆ ಎಂದು ಯಕ್ಷಗಾನ ವಿದ್ವಾಂಸ ಸುಜಯೀಂದ್ರ ಹಂದೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಯಕ್ಷದೇಗುಲ (ರಿ.), ಬೆಂಗಳೂರು ಇವರು ದಿನಾಂಕ 24-03-2021 ರಂದು ಸರಕಾರಿ ಪ್ರೌಢಶಾಲೆ ವಡ್ಡರ್ಸೆ, ಉಡುಪಿ ಇಲ್ಲಿ ಆಯೋಜಿಸಿರುವ ಯಕ್ಷಗಾನ ಪ್ರಾತ್ಯಕ್ಷಿಕೆಯ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಹೂವಿನ ಕೋಲು, ಪದಾಭಿನಯ, ಹಸ್ತಾಭಿನಯ ಮುದ್ರೆಗಳ ಪರಿಚಯನ್ನೊಳಗೊಂಡ ಪ್ರಾತ್ಯಕ್ಷಿಕೆಯನ್ನು ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಪ್ರಕಾಶ್ ಆಚಾರ್ಯ ಉದ್ಘಾಟಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆನಂದ ಶೆಟ್ಟಿ ಶುಭಸಂಶನೆಗೈದರು. ಜೆಸಿ. ಇಂಡಿಯಾದ ವಲಯಾಧಿಕಾರಿ ಸಚ್ಚಿದಾನಂದ ಅಡಿಗ, ಶಿಕ್ಷಕ ಹೆರಿಯ ಕೊಮೆ, ಯಕ್ಷದೇಗುಲದ ಸಂಚಾಲಕ ಸುದರ್ಶನ ಉರಾಳ, ಮಲ್ಯಾಡಿ ಲೈವ್‍ನ ಪ್ರಶಾಂತ್ ಮಲ್ಯಾಡಿ, ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ ಉಪಸ್ಥಿತರಿದ್ದರು.

ಲಂಬೋದರ ಹೆಗಡೆ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ನಂತರ ಯಕ್ಷದೇಗುಲ ಬೆಂಗಳೂರು ಇವರಿಂದ ಹೂವಿನ ಕೋಲು, ಪದಾಭಿನಯ, ಹಸ್ತಾಭಿನಯ ಮುದ್ರೆಗಳ ಪರಿಚಯನ್ನೊಳಗೊಂಡ ಪ್ರಾತ್ಯಕ್ಷಿಕೆ ನಡೆಯಿತು.

ಮೇಳಗಳ ಇಂದಿನ ( 25.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 25.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಗೋಳಿಹೊಳೆ ಹೊಲಾರ, ಅರೆ ಶೀರೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಕಟೀಲು ಕ್ಷೇತ್ರ ‘ಸರಸ್ವತಿ ಸದನ’

ಕಟೀಲು ಎರಡನೇ ಮೇಳ ==  ಶ್ರೀ ಅರಸು ಕೂರಿಯಾಡಿತ್ತಾಯ ಸೇವಾ ಟ್ರಸ್ಟ್ ಬೋಳಂತೂರು   

ಕಟೀಲು ಮೂರನೇ ಮೇಳ= ಮುಲ್ಲಕಾಡು ಶಾಲಾ ಮೈದಾನ ಕಾವೂರು 

ಕಟೀಲು ನಾಲ್ಕನೇ ಮೇಳ  ==  ಬರೆಬೇಲುಮನೆ ಉಜಿರೆ ಬೆಳ್ತಂಗಡಿ 

ಕಟೀಲು ಐದನೇ ಮೇಳ ==  ಶ್ರೀ ದೇವಿ ಸದನ, ಅಂಬಿಕಾನಗರ ಪಡುಪೆರಾರ 

ಕಟೀಲು ಆರನೇ ಮೇಳ == ಕುಂಜಾರ ಬಾಳಿಕೆ, ಶ್ರೀ ಖಡ್ಗೇಶ್ವರಿ ದೇವಸ್ಥಾನದ ಬಳಿ, ಕಾಟಿಪಳ್ಳ 

ಮಂದಾರ್ತಿ ಒಂದನೇ ಮೇಳ  == ಕಂಪಗೋಡು ಮಳಲೂರು ಬಾಗೋಡು ತೀರ್ಥಳ್ಳಿ  

ಮಂದಾರ್ತಿ ಎರಡನೇ ಮೇಳ   ==  ಜೀರ್ತಮಕ್ಕಿ ಕೆಳಮನೆ ಹಾಲಾಡಿ 

ಮಂದಾರ್ತಿ ಮೂರನೇ ಮೇಳ  ==  ಗೊರಕೋಡು ಚಾವಲಮನೆ ಹಾಲ್ಮುತ್ತೂರು  

ಮಂದಾರ್ತಿ ನಾಲ್ಕನೇ ಮೇಳ   ==  ಹಂಗಾರತಳ ಹೊಳೆಕೊಪ್ಪ ಕಟ್ಟೇಹಕ್ಕಲು  

ಮಂದಾರ್ತಿ    ಐದನೇ ಮೇಳ  ==  ಸೂರಾಲು ಸಳ್ಳೆಕಟ್ಟು ಪೆಜಮಂಗೂರು ಕೊಕ್ಕರ್ಣೆ  

ಶ್ರೀ ಹನುಮಗಿರಿ ಮೇಳ  ==  ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಿಜಾರು ಬಡಗ ಎಡಪದವು – ಸುದರ್ಶನ ವಿಜಯ, ಭಾರ್ಗವ ವಿಜಯ (ಸಂಜೆ 6.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕವಲಕ್ಕಿ ಹುಲಿಯಪ್ಪನಕಟ್ಟೆ – ಕನಕಾಂಗಿ ಕಲ್ಯಾಣ, ಬಿಚ್ಚುಗತ್ತಿ ಭರಮಣ್ಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೊಸಹಕ್ಲುಮನೆ, ಹಳೆ ಕಾಲ್ತೋಡು   

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ನೀರ್ಕೊಡ್ಲು, ಕರ್ಕುಂಜೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಬೆಣ್ಗೇರಿ ಗುಜ್ಜಾಡಿ 

ಶ್ರೀ ಪಾವಂಜೆ ಮೇಳ  ==  ಪೆರ್ಮಂಕಿ ಪಾಲಿಕಟ್ಟೆ ಶ್ರೀ ವೈದ್ಯನಾಥ ದೈವಸ್ಥಾನ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಮಧುವನ – ದಿವ್ಯ ಸನ್ನಿಧಿ (ಕಾಲಮಿತಿ ರಾತ್ರಿ 8ರಿಂದ)

ಕಮಲಶಿಲೆ ಮೇಳ ‘ಎ‘ = ಶ್ರೀ ನಾಗಾಂಬಿಕಾ ದೇವಸ್ಥಾನ, ಜಾಂಬ್ಳಿ ಚಿತ್ತೇರಿ ಸಿದ್ಧಾಪುರ  

ಕಮಲಶಿಲೆ ಮೇಳ ‘ಬಿ‘ ==  ಮಂಜುನಾಥ ರೈಸ್ ಮಿಲ್, ಕೆಂದಾಳಬೈಲು 

ಶ್ರೀ ಬಪ್ಪನಾಡು ಮೇಳ == ಹಿಂದೂ ಜಾಗರಣ ವೇದಿಕೆ ಪಕ್ಕಾಲ್ ಪೆರ್ಡೂರು – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಗಂಗೊಳ್ಳಿ – ಶ್ರೀ ಭಗವತಿ ಮಹಾತ್ಮೆ, ಭಾರ್ಗವ ವಿಜಯ 

ಶ್ರೀ ಅಮೃತೇಶ್ವರೀ ಮೇಳ ==  ಅಲ್ಸೇಕೆರೆ ಗಿಳಿಯಾರು 

ಶ್ರೀ ಬೋಳಂಬಳ್ಳಿ ಮೇಳ==  ಆಜ್ರಿ ಪೇಟೆ (ಕಾಲಮಿತಿ ರಾತ್ರಿ 8ರಿಂದ)

ಶ್ರೀ ಸೌಕೂರು ಮೇಳ ==  ಬಿ.ಎಚ್ ರಸ್ತೆ ಫ್ರೆಂಡ್ಸ್  – ಹಳನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಕನಕಿ ಬೈಲೂರು – ಮಹೇಂದ್ರ ನೀಲಮಣಿ 

ಶ್ರೀ ಮಡಾಮಕ್ಕಿ ಮೇಳ == ಗುಡ್ಡೆಯಂಗಡಿಕಟ್ಟೆ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಚೇಂಪಿ ಹದ್ದಿನಬೆಟ್ಟು – ವಿದ್ಯುನ್ಮಾಲಿ, ಸಿಂಹವಾಹಿನಿ, ನಾಗದೇವತಾ 

ಶ್ರೀ ಹಿರಿಯಡಕ ಮೇಳ == ಬೋರುಗುಡ್ಡೆ ಶಾಲಾ ಬಳಿ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಕಂಚಗೋಡು ಭರತ್ ನಗರ 

ಶ್ರೀ ಸಿಗಂದೂರು ಮೇಳ == ನಾವುಂದ ಸದ್ಗುರು ಹೋಟೆಲ್ ಮುಂಭಾಗ  

ಶ್ರೀ ನೀಲಾವರ ಮೇಳ  == ಶ್ರೀ ದೇವಿ ಮಾರಿಕಾಂಬಾ ನಾಲ್ಕು ಹಾಯಿಗುಳಿ ಹಾಗೂ ಕೋಳಿಯಾರ ಮಾಮನ ದೇವಸ್ಥಾನ ಕೋಡಿಕನ್ಯಾಣ 

ಶ್ರೀ ಮೇಗರವಳ್ಳಿ ಮೇಳ == ಮೇಳಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ – ಕುಲದೈವ ಪಂಜುರ್ಲಿ  

ಮಹಿಷಾಸುರ ವಧೆ –  2012ರಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ವೀಡಿಯೋ 

2012ರಲ್ಲಿ ಪ್ರದರ್ಶನಗೊಂಡ ಯಕ್ಷಗಾನ ‘ಮಹಿಷ ವಧೆ’ಯ  ಭಾಗ – 5ರ ವೀಡಿಯೋ ನೋಡಿ