Saturday, May 16, 2026
Home Blog Page 231

ಇಂದು ಲಾಯಿಲ ಉಜಿರೆಯಲ್ಲಿ ಅಗ್ರಪೂಜೆ

ಉಜಿರೆಯಲ್ಲಿ ನಡೆಯುತ್ತಿರುವ ಯಕ್ಷ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.

ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.

ಇಂದು ‘ಅಗ್ರಪೂಜೆ ಎಂಬ ಪ್ರಸಂಗದ ತಾಳಮದ್ದಳೆ  ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ. 

ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ವಿವರಗಳಿಗೆ ಚಿತ್ರ ನೋಡಿ. 

ಯಕ್ಷಾವತರಣ – ಭಾಗ- 3

ಇಂದು ಜುಲೈ 23 ರಂದು ಸಂಜೆ 5.45 ಗಂಟೆಗೆ

ಪ್ರಸಂಗ – ಅಗ್ರಪೂಜೆ

ಹಿಮ್ಮೇಳ: ಹೊಸಮೂಲೆ ಗಣೇಶ ಭಟ್, ಬಿ.ಸೀತಾರಾಮ ತೋಳ್ಪಾಡಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ನಂದಕುಮಾರ ಉಜಿರೆ


ಮುಮ್ಮೇಳ : ವಿ.ಹಿರಣ್ಯ ವೆಂಕಟೇಶ್ವರ ಭಟ್, ವಿಷ್ಣು ಶರ್ಮ ವಾಟೆಪಡ್ಪು, ಡಾ.ಗಾಳಿಮನೆ ವಿನಾಯಕ ಭಟ್, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಶ್ರೀರಮಣ ಆಚಾರ್ಯ, ಕೆ.ಸುರೇಶ ಕುದ್ರೆಂತ್ತಾಯ

ನೇರಪ್ರಸಾರ ಲಿಂಕ್

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಧನ್ವಿತ್.ಕೆ, ಪ್ರತೀಕ್ಷ ಆಳ್ವ ಮತ್ತು ಮಹಿನ್.ಪಿ.ಆರ್‌ ರಾಜ್ಯಮಟ್ಟಕ್ಕೆ ಆಯ್ಕೆ

ದ.ಕ.ಜಿ.ಪಂ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ  ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಈಜು ಸ್ಪರ್ಧೆಯು ದಿನಾಂಕ 15.07.2022ನೇ ಶುಕ್ರವಾರ ಪುತ್ತೂರು ಬಾಲವನ ಈಜುಕೊಳದಲ್ಲಿ ನಡೆಯಿತು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳಾದ ಧನ್ವಿತ್.ಕೆ(ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ದರ್ಬೆಯ ಮ್ಯಾನೇಜರ್ ಶ್ರೀ ಕೇಶವ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರ), ಪ್ರತೀಕ್ಷ ಆಳ್ವ (ಇಂಜಿನಿಯರ್ ಪಡುಮಲೆ ಶ್ರೀ ಚಂದ್ರಶೇಖರ್ ಆಳ್ವ ಮತ್ತು ಉಷಾ.ಸಿ.ಆಳ್ವರ ಪುತ್ರಿ)

ಮತ್ತು ಮಹಿನ್.ಪಿ.ಆರ್(ಶ್ರೀ ರಾಕೇಶ್‌ ಕುಮಾರ್ ಮತ್ತು ಜ್ಯೋತಿ.ಎನ್‌ ದಂಪತಿ ಪುತ್ರಿ) ಇವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಹಾಗೂ ನಮನ್ ನಾಯಕ್ (ಸಂದೀಪ್ ನಾಯಕ್.ಬಿ ಮತ್ತು ನಮಿತಾನಾಯಕ್ .ಬಿ ಇವರ ಸುಪುತ್ರ) ತೃತೀಯ ಸ್ಥಾನ ಪಡೆದಿರುತ್ತಾನೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ. 

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಕರ್ನಾಟಕ  ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಜುಲೈ 19ರಂದು ದರ್ಬೆಯ ಆಫೀಸರ್ ಕ್ಲಬ್ ಪುತ್ತೂರು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ 14 ವಯೋಮಾನದ ಬಾಲಕಿಯರ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಸಮನ್ವಿತಾ ಕೆ ವಿನ್ಯಾಸ್ ಕನ್ಸ್ಟ್ರಕ್ಷನ್ ಮಾಲಕ ಬಪ್ಪಳಿಗೆಯ ಕಿಶೋರ್ ಕುಮಾರ್ ಮತ್ತು ರೂಪಶ್ರೀ ಕೆ ರವರ ಪುತ್ರಿ), ಡಿ. ಹರ್ಷ  (ಚಿಕ್ಕಪುತ್ತೂರಿನ  ಎಸ್ ಶಿವಕುಮಾರ್ ಪುತ್ರಿ) ಆಯ್ಕೆಯಾಗಿರುತ್ತಾರೆ.

ಇವರು ಜುಲೈ 23ರಂದು ಸರಕಾರೀ  ಪ್ರೌಢಶಾಲೆ ನ್ಯೂಪಡ್ಪು ಇಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಲಿರುವರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ  ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಎಸ್‌ಎಸ್‌ಸಿ ನೇಮಕಾತಿ ಹಗರಣ – ಜಾರಿ ನಿರ್ದೇಶನಾಲಯ (ED) ತಂಡದಿಂದ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಬಂಧನ

ಜಾರಿ ನಿರ್ದೇಶನಾಲಯ (ED) ತಂಡವು ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಕೋಲ್ಕತ್ತಾದ ಅವರ ನಿವಾಸದಿಂದ ಬಂಧಿಸಿದೆ. ಎಸ್‌ಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಂಡ ನಿನ್ನೆಯಿಂದ ಇಲ್ಲಿಗೆ ಬಂದಿತ್ತು.

ಶನಿವಾರ ಟಿಎಂಸಿಗೆ ಭಾರಿ ಹೊಡೆತವಾಗಿ, ಎಸ್‌ಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಅವರ ನಿವಾಸದಿಂದ ಬಂಧಿಸಿದೆ. ಎಸ್‌ಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಟಿಎಂಸಿಗೆ ಭಾರಿ ಹೊಡೆತದಲ್ಲಿ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ.

2021 ರ ಅಸೆಂಬ್ಲಿ ಚುನಾವಣೆಯಲ್ಲಿ ಬೆಹಾಲಾ ಪಶ್ಚಿಮ್ ಸ್ಥಾನದಿಂದ ಮರು ಚುನಾಯಿತರಾದರು. ಅವರು ಪ್ರಸ್ತುತ ಮಮತಾ ಬ್ಯಾನರ್ಜಿ ನೇತೃತ್ವದ ಕ್ಯಾಬಿನೆಟ್‌ನಲ್ಲಿ ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಂಸದೀಯ ವ್ಯವಹಾರಗಳ ಖಾತೆಗಳನ್ನು ಹೊಂದಿದ್ದಾರೆ.

ಕೇಂದ್ರ ಏಜೆನ್ಸಿಯ ಅಧಿಕಾರಿಗಳು 26 ಗಂಟೆಗಳ ಕಾಲ ಅವರ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಾರೆ. ಒಂದು ದಿನ ಮುಂಚಿತವಾಗಿ, ಇಡಿ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ವಸತಿ ಆವರಣದಲ್ಲಿ ರೂ.20 ಕೋಟಿ ನಗದು ವಶಪಡಿಸಿಕೊಂಡರು. ಆಕೆಯನ್ನು ಕೂಡ ಇಡಿ ವಶಕ್ಕೆ ಪಡೆದಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಎಸ್‌ಎಸ್‌ಸಿ ನೇಮಕಾತಿ ಹಗರಣದ ತನಿಖೆ : ಬೋಧಕೇತರ ಸಿಬ್ಬಂದಿ (ಗುಂಪು ಸಿ & ಡಿ), ಸಹಾಯಕ ಶಿಕ್ಷಕರು (9ನೇ ತರಗತಿ-12ನೇ ತರಗತಿ) ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದರೂ, ಜಾರಿ ನಿರ್ದೇಶನಾಲಯ (ED) ಅಕ್ರಮ ಹಣ ವರ್ಗಾವಣೆಯ ಅಂಶವನ್ನು ತನಿಖೆ ನಡೆಸುತ್ತಿದೆ.

ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ಈ ಹಗರಣ ಹೊರಬಿದ್ದಿದೆ. ಅವರನ್ನು ಈಗಾಗಲೇ ಏಪ್ರಿಲ್ 26 ಮತ್ತು ಮೇ 18 ರಂದು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಒಂದು ದಿನದ ಹಿಂದೆ, ಎಸ್‌ಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಇಡಿ ಏಕಕಾಲದಲ್ಲಿ ದಾಳಿ ನಡೆಸಿತು. ಹೇಳಿಕೆಯಲ್ಲಿ, ಅರ್ಪಿತಾ ಮುಖರ್ಜಿ ಅವರ ಮನೆಯಿಂದ ವಸೂಲಿ ಮಾಡಿದ ಮೊತ್ತವು ಅಪರಾಧದ ಆದಾಯವಾಗಿರಬಹುದು ಎಂದು ಅದು ಆರೋಪಿಸಿದೆ.

ಇಂದು ಪುತ್ತೂರಿನಲ್ಲಿ ‘ಕೆಸರ್ ಡ್ ಒಂಜಿ ದಿನ’

ಇಂದು ಪುತ್ತೂರಿನಲ್ಲಿ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ನಡೆಯಲಿದೆ.

ಕಟ್ಟೆ ಫ್ರೆಂಡ್ಸ್, ಬಲ್ನಾಡು ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಹಿಂದೂ ಬಾಂಧವರ  ಪುತ್ತೂರಿನ ಬಲ್ನಾಡಿನಲ್ಲಿ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಇಂದು ದಿನಾಂಕ 24.07.2022ರಂದು ಬೆಳಿಗ್ಗೆ 8 ಘಂಟೆಗೆ ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಎಲ್ಲಾ ಆಟೋಟ ಸ್ಪರ್ಧೆಗಳೂ ಗದ್ದೆಯ ಕೆಸರಿನಲ್ಲಿಯೇ ನಡೆಯುತ್ತದೆ. ವಿವಿಧ ವಯೋಮಾನದ ಹೆಣ್ಣುಮಕ್ಕಳು ಹಾಗೂ ಗಂಡಸರಿಗೆ ಬೇರೆ ಬೇರೆ ಸ್ಪರ್ಧೆ ನಡೆಯಲಿದೆ.

ನಿಧಿ ಶೋಧನೆಯ (ಚಿನ್ನದ ನಾಣ್ಯ) ಆಟವೂ ನಡೆಯಲಿರುವುದು. ವಿವರಗಳಿಗೆ ಕರಪತ್ರದ ಚಿತ್ರ ನೋಡಿ 

ಮೂಡಬಿದಿರೆಯಲ್ಲಿ ಇಂದು ದಮಯಂತಿ ಪುನಃ ಸ್ವಯಂವರ, ರಾವಣ ವಧೆ

ಮೂಡಬಿದಿರೆಯಲ್ಲಿ ಇಂದು ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಮಳೆಗಾಲದ ಅಮೋಘ ತಾಳಮದ್ದಳೆ ಪ್ರದರ್ಶನ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ. ತಾಳಮದ್ದಳೆ ಕ್ಷೇತ್ರದ ಪ್ರಸಿದ್ಧ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಯಕ್ಷಸಂಗಮ ಮೂಡಿಬಿದಿರೆ ಇವರು ಸಮಾಜ ಮಂದಿರ ಸಭಾ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇಂದು ದಿನಾಂಕ 23.07.2022ನೇ ಶನಿವಾರ ರಾತ್ರಿ ಘಂಟೆ 9ಕ್ಕೆ ಸರಿಯಾಗಿ ತಾಳಮದ್ದಳೆ ಆರಂಭವಾಗಲಿದೆ. 

ದಮಯಂತಿ ಪುನಃ ಸ್ವಯಂವರ, ರಾವಣ ವಧೆ ಎಂಬ ಪ್ರಸಂಗದಲ್ಲಿ ಪ್ರಸಿದ್ಧ ಕಲಾವಿದರೇ ಅರ್ಥಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ತಾರಾನಾಥ ವರ್ಕಾಡಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಪ್ರದರ್ಶನದ ಮೊದಲು ಗಣ್ಯ ಅತಿಥಿಗಳ ಭಾಗವಹಿಸುವಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.  ಕಾರ್ಯಕ್ರಮದ ವಿವರಗಳಿಗೆ ಚಿತ್ರ ನೋಡಿ. 

ಸುದರ್ಶನ ವಿಜಯ, ಸುಧನ್ವ ಮೋಕ್ಷ – ಇಂದು ಅಮೋಘ ಯಕ್ಷಗಾನ ಪ್ರದರ್ಶನ

ಇಂದು ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪರಮಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಯಕ್ಷಗಾನ ಪ್ರದರ್ಶನವು ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ನಡೆಯಲಿದೆ. ಇಂದು ಅಂದರೆ ದಿನಾಂಕ 23.07.2022ನೇ ಶನಿವಾರ ಸಂಜೆ ಘಂಟೆ 6ಕ್ಕೆ ಸರಿಯಾಗಿ ಯಕ್ಷಗಾನ ಪ್ರದರ್ಶನ ಆರಂಭವಾಗಲಿದೆ.

ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ  “ಸುದರ್ಶನ ವಿಜಯ, ಸುಧನ್ವ ಮೋಕ್ಷ” ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ. ವಿವರಗಳಿವೆ ಚಿತ್ರವನ್ನು ನೋಡಿ. 

ಸುಧನ್ವ ಮೋಕ್ಷ – ಇಂದು ಎಡನೀರು ಮಠದಲ್ಲಿ ಯಕ್ಷಗಾನ ಪ್ರದರ್ಶನ

ಇಂದು ಎಡನೀರು ಮಠದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.

ಇಂದು ದಿನಾಂಕ 23.07.2022ರ ಶನಿವಾರ ಘಂಟೆ 6ಕ್ಕೆ ಸರಿಯಾಗಿ ಪ್ರದರ್ಶನ ಆರಂಭವಾಗಲಿದೆ.

ಸುಧನ್ವ ಮೋಕ್ಷ ಎಂಬ ಪ್ರಸಂಗವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳು ಆಡಿ ತೋರಿಸಲಿದ್ದಾರೆ. ವಿವರಗಳಿಗೆ ಚಿತ್ರ ನೋಡಿ.

ಗುಜರಾತ್ ಭೀಕರ ಮಳೆ, ಪ್ರವಾಹ – ನದಿಯಲ್ಲಿದ್ದ ಮೊಸಳೆಗಳು ಮನೆಯೊಳಕ್ಕೆ

ಗುಜರಾತಿನ ವಡೋದರಾದಲ್ಲಿ ಮಳೆಯಿಂದಾಗಿ ನದಿಗಳಿಂದ ಮೊಸಳೆಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸಿದ ಘಟನೆಗಳು ವರದಿಯಾಗುತ್ತಿವೆ. ಅವರನ್ನು ಹಿಡಿಯಲು ನಿಯೋಜಿಸಲಾದ ತಂಡಗಳು ಕಾರ್ಯಪ್ರವೃತ್ತವಾಗಿವೆ.

ಪ್ರತಿ ವರ್ಷ ಮಾನ್ಸೂನ್ ಸಮಯದಲ್ಲಿ, ಗುಜರಾತ್‌ನ ವಡೋದರಾದ ವಿಶ್ವಾಮಿತ್ರಿ ನದಿಯ ಸಮೀಪವಿರುವ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಬೀದಿಗಳಲ್ಲಿ ಜಲಾವೃತವಾಗಿದ್ದರೆ ತೀವ್ರ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾರೆ.

ಏಕೆಂದರೆ ನಿರಂತರ ಭಾರೀ ಮಳೆಯ ನಂತರ ಉಕ್ಕಿ ಹರಿಯುವ ನದಿಯಲ್ಲಿ 300 ಕ್ಕೂ ಹೆಚ್ಚು ಮೊಸಳೆಗಳಿವೆ.ಸಮೀಪದ ಪ್ರದೇಶಗಳು ಜಲಾವೃತವಾಗುತ್ತಿದ್ದಂತೆ, ಮೊಸಳೆಗಳು ನದಿಯಿಂದ ಹೊರಬರಲು ಮತ್ತು ಕಟ್ಟಡಗಳ ಬಳಿ ಈಜಲು ಪ್ರಾರಂಭಿಸುತ್ತವೆ.

ಕೆಲವು ಸಂದರ್ಭಗಳಲ್ಲಿ, ಈ ಮೊಸಳೆಗಳು ಸ್ಥಳೀಯರ ಬಾಗಿಲುಗಳನ್ನು ತಲುಪುತ್ತವೆ ಮತ್ತು ಅವುಗಳನ್ನು ಕಚ್ಚುವ ಅಥವಾ ಎಳೆಯುವ ಮೂಲಕ ಜನರಲ್ಲಿ ಭೀತಿ ಉಂಟುಮಾಡುತ್ತವೆ.

ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ,  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಸಂತ ವಿಕ್ಟರ್ಸ್  ಬಾಲಿಕಾ ಪ್ರೌಢಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಜುಲೈ 22ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ  ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ  ಶಾಲೆಯ  ವಿದ್ಯಾರ್ಥಿಗಳು ಭಾಗವಹಿಸಿ ಒಟ್ಟು 9 ವಿದ್ಯಾರ್ಥಿಗಳು  ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

14 ವಯೋಮಾನದ  ಬಾಲಕರ ವಿಭಾಗದಲ್ಲಿ ಪ್ರಾಪ್ತ್ ಆರ್.ಎನ್ (8ನೇ ತರಗತಿ) ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿವಂಶಿ ರೈ (6ನೇ ತರಗತಿ) ತೃತೀಯ ಸ್ಥಾನ, 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಶಿವ ಕುಮಾರ್ (10ನೇ ತರಗತಿ) ಪ್ರಥಮ, 

ಪೃಥ್ವಿರಾಜ್ ಪ್ರಭು (10ನೇ ತರಗತಿ) ಪ್ರಥಮ ಸ್ಥಾನ, ಲಿಖಿತ್ ಪಿ (10ನೇ ತರಗತಿ) ಪ್ರಥಮ ಸ್ಥಾನ, ಪ್ರಮತ್.ಎಂ. ಭಟ್(9 ನೇ ತರಗತಿ) ಪ್ರಥಮ ಸ್ಥಾನ,  ಮಹಮ್ಮದ್ ರಿಹಾನ್ (9 ನೇ ತರಗತಿ) ಅದ್ದೈತ್ ಶರ್ಮ (10ನೇ ತರಗತಿ) ಪ್ರಥಮ ಸ್ಥಾನ,  ವಿಶಾಲ್ ಪಿ (9ನೇ ತರಗತಿ) ಪ್ರಥಮ ಸ್ಥಾನ,

ಬಾಲಕಿಯರ ವಿಭಾಗದಲ್ಲಿ ತೃಪ್ತಿ ಎ.ಕೆ (10 ನೇತರಗತಿ) ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ಜುಲೈ 27ರಂದು  ಬೆಳ್ತಂಗಡಿ ತಾಲೂಕಿನ ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ  ಇಲ್ಲಿ ನಡೆಯುವ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.