Monday, August 31, 2026
Home Blog Page 228

ಅಪ್ಪನ ಜೊತೆಯಲ್ಲಿರುವ ಫೋಟೋ ಹಂಚಿಕೊಂಡ, ಗಾಯಗೊಂಡು ಈಗ ವಿಶ್ರಾಂತಿ ಪಡೆಯುತ್ತಿರುವ ನಟಿ ಸಂಯುಕ್ತಾ ಹೆಗ್ಡೆ 

ಸೋಷಿಯಲ್ ಥ್ರಿಲ್ಲರ್ ಸಿನಿಮಾ ‘ಕ್ರೀಮ್‌’ನ ಸೆಟ್‌ನಲ್ಲಿ ಟ್ರಿಕಿ ಫೈಟ್ ದೃಶ್ಯದಲ್ಲಿ ಮಾಡುವಾಗ ನಟಿ ಸಂಯುಕ್ತ ಹೆಗ್ಡೆ ನಾಲ್ಕು ದಿನಗಳ ಹಿಂದೆ ಗಾಯಗೊಂಡಿದ್ದಾರೆ.

ಆಕೆ ಪಾದದ ಟ್ವಿಸ್ಟ್ ಮತ್ತು ಮೊಣಕಾಲಿನ ಗಾಯವನ್ನು ಅನುಭವಿಸಿದಳು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು. ಈಗ ಅವರು ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ.

ಈಗ ವಿಶ್ರಾಂತಿಯನ್ನು ಪಡೆಯುತ್ತಿರುವ ಅವರು ಅಪ್ಪನ ಜೊತೆ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Latest News… ಎಲ್ ಇ ಟಿ ಯ ಇಬ್ಬರು ಕುಖ್ಯಾತ ಭಯೋತ್ಪಾದಕರ ಬಂಧನ 

ಜಮ್ಮು ಕಾಶ್ಮೀರದಲ್ಲಿ ಇಂದು  ಎಲ್ ಇ ಟಿ ಯ ಇಬ್ಬರು ಕುಖ್ಯಾತ ಭಯೋತ್ಪಾದಕರನ್ನು ಬಂಧಿಸಲಾಗಿದೆ. 

ಎಲ್ಇಟಿಯ ಇಬ್ಬರು ಹೈಬ್ರಿಡ್ ಭಯೋತ್ಪಾದಕರು, ತಾರಿಕ್ ಅಹ್ ವಾನಿ ಮತ್ತು ಇಶ್ಫಾಕ್ ಅಹ್ ವಾನಿ, ಹಡಿಪೋರಾ ರಫಿಯಾಬಾದ್‌ನಲ್ಲಿನ ಚೆಕ್ ಪಾಯಿಂಟ್‌ನಿಂದ ಓಡಿಹೋದ ನಂತರ ಸೋಪೋರ್ ಪೊಲೀಸರು ಬೆನ್ನಟ್ಟಿ ಬಂಧಿಸಿದರು.

ಎರಡು ಪಿಸ್ತೂಲ್‌ಗಳು, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು ಮತ್ತು 11 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ;

ಈ ಎರಡೂ ಉಗ್ರವಾದಿಗಳನ್ನು ತೀವ್ರವಾಗಿ ತನಿಖೆಗೆ ಒಳಪಡಿಸಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ 2022 –  ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮೂಲಕ ಭಾರತಕ್ಕೆ ಮೊದಲ ಚಿನ್ನ

ಕಾಮನ್‌ವೆಲ್ತ್ ಗೇಮ್ಸ್2022 | ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 201 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದು,

ಈ ವಿಭಾಗದಲ್ಲಿ ಆಟದ ದಾಖಲೆ ನಿರ್ಮಿಸಿದ್ದಾರೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ 3 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ರಾಜರಾಜೇಶ್ವರಿ ಪ್ರೌಢ ಶಾಲೆ, ಪೊಳಲಿ ಇಲ್ಲಿ ದಿನಾಂಕ 30-07-2022ರಂದು ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಈ ಕೆಳಗಿನ 3 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಅದರಲ್ಲಿ ಪ್ರೌಢ ಶಾಲಾ ವಿಭಾಗದ ಹುಡುಗರು- ಪ್ರಣೀಲ್ ರೈ, 10ನೇ ತರಗತಿ( ಪ್ರಕಾಶ್ ಕುಮಾರ್ ರೈ ಮನವಳಿಕೆ ಗುತ್ತು ಮತ್ತು ಸತ್ಯಲತ ಪ್ರಕಾಶ್ ಇವರ ಪುತ್ರ)-ಪ್ರಥಮ ಸ್ಥಾನ,

ಧನುಷ್‌ರಾಮ್, 10ನೇ ತರಗತಿ (ಕಿಯೋನಿಕ್ಸ್ ನ ಮಾಲಕ ದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನ ಇವರ ಪುತ್ರ) – ದ್ವಿತೀಯ ಸ್ಥಾನ

ಹಾಗೂ ಪ್ರೌಢ ಶಾಲಾ ವಿಭಾಗದ ಹುಡುಗಿಯರ ವಿಭಾಗದಲ್ಲಿ ಸುಶ್ಮಿತ.ಟಿ.ರಾವ್, 9ನೇ ತರಗತಿ, (ತ್ರಿವಿಕ್ರಮ ರಾವ್ ಮತ್ತು ಶಾರದಾ ಇವರ ಪುತ್ರಿ) – ಪಂಚಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ರುದ್ರಪ್ರಯಾಗ ಮತ್ತು ಗೌರಿಕುಂಡ್ ಹೆದ್ದಾರಿಯಲ್ಲಿ ಭಾರೀ ಭೂ ಕುಸಿತ – ವೀಡಿಯೊ 

ಇಂದು  ರುದ್ರಪ್ರಯಾಗ ಮತ್ತು ಗೌರಿಕುಂಡ್ ಹೆದ್ದಾರಿಯಲ್ಲಿ ಭಾರೀ ಭೂ ಕುಸಿತ ಉಂಟಾಗಿದೆ. 

ರುದ್ರಪ್ರಯಾಗ ಗೌರಿಕುಂಡ್ ಹೆದ್ದಾರಿ 109 ರಲ್ಲಿ ಬನ್ಸ್ಬಾರಾ ಬಳಿ ಭಾರೀ ಭೂಕುಸಿತ, ಉಂಟಾದ ನಂತರ ಹೆದ್ದಾರಿಯನ್ನು ಮುಚ್ಚಲಾಗಿದೆ.

ಈ ಕುರಿತಾದ ವೀಡಿಯೊ ಹಾಗೂ ವರದಿಯನ್ನು ANI ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

ತಾಲೂಕು ಮಟ್ಟದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ – ಪುತ್ತೂರು ವಿವೇಕಾನಂದ ಶಾಲೆಯ ಸಮನ್ವಿತಾ ಮತ್ತು ಹರ್ಷ ವಿಶೇಷ ಸಾಧನೆ 

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ,  ದ.ಕ.ಜಿ.ಪಂ.ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಮತ್ತು ದ.ಕ.ಜಿ.ಪಂ.ಸರಕಾರಿ ಪ್ರೌಢ ಶಾಲೆ ನ್ಯೂಪಡ್ಪು, ಹರೇಕಳ ಇದರ ಆಶ್ರಯದಲ್ಲಿ ಜುಲೈ23ರಂದು ಮಂಗಳೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣ, ಕೊಣಾಜೆ ಇಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ U-14 ವಯೋಮಾನ ವರ್ಗದ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್  ಪಂದ್ಯಾಟದಲ್ಲಿ ಪುತ್ತೂರು ತಾಲೂಕು ದ್ವಿತೀಯ ಸ್ಥಾನ ಗಳಿಸಿರುತ್ತದೆ.


ಈ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಸಮನ್ವಿತಾ. ಕೆ(ವಿನ್ಯಾಸ್ ಕನ್ಸ್ಟ್ರ ಕ್ಷಷನ್ ಮಾಲಕ ಬಪ್ಪಳಿಗೆಯ ಕಿಶೋರ್ ಕುಮಾರ್ ಮತ್ತು ರೂಪಶ್ರೀ. ಕೆ. ರವರ ಪುತ್ರಿ), ಡಿ. ಹರ್ಷ  (ಚಿಕ್ಕಪುತ್ತೂರಿನ  ಶಿವಕುಮಾರ್ ಮತ್ತು ಎಸ್. ಪೋನ್ನಿ  ಅವರ ಪುತ್ರಿ) ಇವರುಗಳು ಪುತ್ತೂರು ತಾಲೂಕನ್ನು ಪ್ರತಿನಿಧಿಸಿರುತ್ತಾರೆ.

ಇದರಲ್ಲಿ 8ನೇ ತರಗತಿಯ ಸಮನ್ವಿತಾ. ಕೆ ಇವರು ಅಕ್ಟೋಬರ್ ದಲ್ಲಿ ಚಾಮರಾಜನಗರ, ಮೈಸೂರು ಜಿಲ್ಲೆ ಇಲ್ಲಿ  ನಡೆಯುವ ವಿಭಾಗಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಜಿಲ್ಲೆಯನ್ನು ಪ್ರತಿನಿಧಿಸಿ, ಭಾಗವಹಿಸಲಿದ್ದಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ  ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಆಂಧ್ರ ಬೀಚ್ ದುರಂತ – ಪುಡಿಮಾಡಕ ಕಡಲತೀರ ದುರಂತದಲ್ಲಿ ಮಡಿದವರ ಸಂಖ್ಯೆ 3ಕ್ಕೆ ಏರಿಕೆ, ಇನ್ನೂ ಮೂವರಿಗಾಗಿ ಶೋಧ

ಆಂಧ್ರ ಬೀಚ್ ದುರಂತ – ಪುಡಿಮಾಡಕ ಕಡಲತೀರ ದುರಂತದಲ್ಲಿ ಮಡಿದವರ ಸಂಖ್ಯೆ 3ಕ್ಕೆ ಏರಿಕೆ, ಇನ್ನೂ ಮೂವರಿಗಾಗಿ ಶೋಧ

 ಅಮರಾವತಿ: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಬೀಚ್ ದುರಂತದಲ್ಲಿ ಶನಿವಾರ ಬೆಳಗ್ಗೆ ಮತ್ತಿಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಇನ್ನೂ ಮೂವರು ವಿದ್ಯಾರ್ಥಿಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶುಕ್ರವಾರ ಬೀಚ್‌ನಲ್ಲಿ ರಕ್ಷಿಸಲ್ಪಟ್ಟ ಮತ್ತೊಬ್ಬ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶುಕ್ರವಾರ ಅನಕಾಪಲ್ಲಿಯ ಡಯಟ್ ಕಾಲೇಜಿಗೆ ಸೇರಿದ ಸುಮಾರು 13 ವಿದ್ಯಾರ್ಥಿಗಳು ಪುಡಿಮಾಡಕ ಕಡಲತೀರಕ್ಕೆ ತೆರಳಿದ್ದರು. ಆರು ವಿದ್ಯಾರ್ಥಿಗಳು ದಡದಲ್ಲಿ ಉಳಿದುಕೊಂಡಿದ್ದರೆ, ಏಳು ಮಂದಿ ಸಮುದ್ರದ ನೀರಿನಲ್ಲಿ ಉಬ್ಬರವಿಳಿತಕ್ಕೆ ಸಿಲುಕಿದರು ಮತ್ತು ಅವರು ಕೊಚ್ಚಿಹೋಗುವ ಭಯದಲ್ಲಿ ಸಿಲುಕಿದರು.

ತಕ್ಷಣ ಓರ್ವ ವಿದ್ಯಾರ್ಥಿಯನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಐವರು ನಾಪತ್ತೆಯಾಗಿದ್ದಾರೆ.

ನಾಲ್ಕು ಬೋಟ್‌ಗಳು ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಬಳಸಿ ನಾಪತ್ತೆಯಾಗಿರುವ ವಿದ್ಯಾರ್ಥಿಗಳಿಗಾಗಿ ಅಧಿಕಾರಿಗಳು ಭಾರಿ ಶೋಧ ನಡೆಸಿದರು. ಶನಿವಾರ, ಅವರು ಇನ್ನೂ ಎರಡು ಶವಗಳನ್ನು ಪತ್ತೆಹಚ್ಚಿದರು.

ಉಳಿದ ಮೂವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ವಿದ್ಯಾರ್ಥಿ ಸಂಘಟನೆ ಎಬಿವಿಪಿ ವಿದ್ಯಾರ್ಥಿಗಳು ಮುತ್ತಿಗೆ

0

ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಬಿವಿಪಿ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ.

ಇತ್ತೀಚಿನ ಬೆಳವಣಿಗೆಯಲ್ಲಿ ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಬಿವಿಪಿ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ.

SDPI (ಎಸ್ ಡಿ ಪಿ ಐ) ಸಂಘಟನೆಯನ್ನು ನಿಷೇಧಿಸುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಬಿವಿಪಿ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ ಎಂದು ತೀಳಿದುಬಂದಿದೆ. ಪೋಲೀಸರು ಸುಮಾರು 40 ಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಮೂಡಬಿದಿರೆಯಲ್ಲಿ ನಡೆಯಬೇಕಾಗಿದ್ದ ಜೋಡಾಟ ಮುಂದೂಡಲಾಗಿದೆ

ಇಂದು ಮೂಡಬಿದಿರೆಯಲ್ಲಿ ಜೋಡಾಟ – ಶ್ರೀ ದೇವಿ ಮಹಾತ್ಮೆ: (30.07.2022) ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪುತ್ತೂರು ತಾಲೂಕಿನಲ್ಲಿ ಮಳೆ ಕಾರಣದಿಂದ ಇಂದು ಶಾಲೆಗಳಿಗೆ ರಜೆ – ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕುಗಳಲ್ಲೂ ರಜೆ 

ಮಳೆಯ ಮುನ್ನಚ್ಚರಿಕೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪುತ್ತೂರು ತಾಲೂಕಿನಲ್ಲಿ ಎಲ್ಲಾ ಅಂಗನವಾಡಿ ಮತ್ತು  ಪ್ರಾಥಮಿಕ,ಪ್ರೌಢ ಶಾಲೆಗಳಿಗೆ ಇಂದು (ಜುಲೈ 30) ರಜೆ ಘೋಷಣೆ ಮಾಡಲಾಗಿದೆ.

ಪುತ್ತೂರು ತಾಲೂಕು ಉಪವಿಭಾಗಾಧಿಕಾರಿಯವರು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕುಗಳಲ್ಲೂ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇತರ ತಾಲೂಕುಗಳಲ್ಲಿ ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.